Subscribe to Updates
Get the latest creative news from FooBar about art, design and business.
Author: roovari
13 ಏಪ್ರಿಲ್ 2023, ಮಂಗಳೂರು: ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಇದರ ದಶಮಾನೋತ್ಸವ ಕಾರ್ಯಕ್ರಮವು ಏಪ್ರಿಲ್ 10ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ “ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. ‘ಶಕ್ತಿ ಪೀಠ’ ನೃತ್ಯ ರೂಪಕ ನಿಜವಾಗಿಯೂ ಶಿವಶಕ್ತಿಯೇ ವೇದಿಕೆಯಲ್ಲಿ ನೆಲೆಸಿದಂತೆ ಭಾಸವಾಗುತ್ತಿತ್ತು.” ಎಂದು ಅಭಿಮಾನದ ಮಾತುಗಳನ್ನಾಡಿದರು. ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರು “ಸಂಸ್ಥೆಯು ಏಳಿಗೆಯನ್ನು ಕಾಣಲಿ” ಎಂದು ಶುಭ ಆಶೀರ್ವಚನ ನೀಡಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶ್ರೀ ದುರ್ಗಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಸತೀಶ್ ಶೆಟ್ಟಿಯವರು “ಅಮೃತೇಶ್ವರ ನಾಟ್ಯಾಲಯ ಬೆಳೆದು ಬಂದ ರೀತಿ, ನೃತ್ಯ ಗುರುಗಳ ಶ್ರಮ ಹಾಗೂ ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಭಕ್ತಿಯನ್ನು ನಾಟ್ಯಾಲಯದ ನಿರ್ದೇಶಕಿ ಮಾಡುವ ಕೆಲಸದಲ್ಲಿ ಕಾಣಬಹುದು” ಎಂದು ಕಾರ್ಯಕ್ರಮವನ್ನು ಪ್ರಶಂಶಿಸಿ, ‘ಶಕ್ತಿ ಪೀಠ’ ನೃತ್ಯ ರೂಪಕವನ್ನು ಶ್ಲಾಘಿಸಿದರು. ಗುರುಗಳಾದ ಶಾರದಾಮಣಿ ಶೇಖರ್ ಅವರು ನೃತ್ಯ ರೂಪಕವನ್ನು ನಿರ್ದೇಶಿಸಲು ಸಂಸ್ಥೆಯ ಗುರುಗಳಾದ ಚಿತ್ರಾಕ್ಷಿ ಅಜಿತ್ ಕುಮಾರ್…
13 ಏಪ್ರಿಲ್ 2023, ಮಂಗಳೂರು: ಮಂಗಳೂರಿನ ಉರ್ವಸ್ಟೋರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ಮತ್ತು ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ಇದರ ಸಹಯೋಗದಲ್ಲಿ ದಿನಾಂಕ 11-04-2023 ಮಂಗಳವಾರ ಸಾಹಿತ್ಯ ಸದನದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ “ಬರವುದಪ್ಪೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ” ಪ್ರದಾನ ಸಮಾರಂಭ ನಡೆಯಿತು. ಕಾಲವು ಅಳಿಸಲಾಗದ ಹೆಸರು ಶಕ್ತಿಯುತ ಬಂಡಾಯ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರದು. ಏಪ್ರಿಲ್ 11 ಜ್ಯೋತಿಬಾ ಫುಲೆ ಅವರ ಜನ್ಮ ದಿನ. ಭಾರತದಲ್ಲಿ ನೆಲದ ಮಕ್ಕಳ ಬದುಕಿಗೆ ಮೊದಲು ದನಿ ನೀಡಿದ ಹೆಸರುಗಳು ಇವು ಎಂದು ಅಧ್ಯಕ್ಷತೆ ವಹಿಸಿದ್ದ ಕಲೇವಾಸಂ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಹೇಳಿದರು. ಸಿಸ್ಟರ್ ಫ್ಲೋರಾ ಲೂವಿಸ್ ಮತ್ತು ಶ್ರೀಮತಿ ಸೌಭಾಗ್ಯ ಎನ್. ಅವರಿಗೆ ಸೇರಿದ ಸಭೆಯಲ್ಲಿ ‘ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು ಸಭೆಯಲ್ಲಿ ಸೇರಿದ ಸಾಹಿತ್ಯಾಸಕ್ತರು ಇದಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಶ್ರೀಮತಿ ಬಿ.ಎಂ. ರೋಹಿಣಿ…
13 ಏಪ್ರಿಲ್ 2023, ಮಂಗಳೂರು: ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಆಯೋಜಿಸುವ ‘ವಿಶ್ವ ಕಲಾ ದಿನ’ ಇದರ ಅಂಗವಾಗಿ ಕಲಾವಿದರಿಂದ ಆಶು ಚಿತ್ರಕಲಾ ರಚನಾ ಶಿಬಿರವು ಮಂಗಳೂರಿನ ಸುಲ್ತಾನ್ ಬತ್ತೇರಿ ರಸ್ತೆ, ಬೊಕ್ಕಪಟ್ನದ ಅಯ್ಯಪ್ಪ ದೇವಾಲಯದ ಬಳಿ, ದಿನಾಂಕ 15 ಎಪ್ರಿಲ್ 2023ರ ಶನಿವಾರದಂದು ಬೆಳಿಗ್ಗೆ ಗಂಟೆ 8.30ರಿಂದ – ಸಂಜೆ 4.00ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಪ್ರಾಧ್ಯಾಪಕರು ಹಾಗೂ ನಿಕಟಪೂರ್ವ ಪರೀಕ್ಷಾಂಗ ಕುಲಸಚಿವರಾದ ಡಾ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದು, ಶ್ರೀ ದಿವಾಕರ ಕದ್ರಿ, ಮಾಜಿ ಮೇಯರ್, ಜನರಲ್ ಮ್ಯಾನೇಜರ್ ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ ಇಂಡಿಯ ಎಲ್.ಎಲ್ ಪಿ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗಣೇಶ್ ಸೋಮಯಾಜಿಯವರು ಜಲವರ್ಣ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮನೋರಂಜನಿ ಉಪಾಧ್ಯ, ಜಾನ್ ಚಂದ್ರನ್, ಈರಣ್ಣ ತಿಪ್ಪಣ್ಣನವರ್, ಜಯಶ್ರೀ ಶರ್ಮ, ಡಾ. ಜಯಪ್ರಕಾಶ್, ಅರುಣ್ ಕಾರಂತ್, ನವೀನ್ ಬಂಗೇರ, ಡಾ. ಸಂಜೋತ ಧರ್ಮ,…
12 ಏಪ್ರಿಲ್ 2023, ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುವ ‘ಬಾಲ ಲೀಲ -2023’ ಚಿನ್ನರ ಬೇಸಿಗೆ ಶಿಬಿರವು ದಿನಾಂಕ ಏಪ್ರಿಲ್ 20ರಿಂದ 23ರ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ನಡೆಯಲಿದೆ. 2014ರಿಂದ ತೊಡಗಿ ಆಯೋಜಿಸುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಎಂಟನೇ ಆವೃತ್ತಿ ಇದಾಗಿದ್ದು, ಗ್ರಾಮೀಣ ಭಾಗದಲ್ಲಿ ಮಕ್ಕಳಿಗಾಗಿ ಕರಕುಶಲ ಕಲೆ, ವಿವಿಧ ರೀತಿಯ ಆಟೋಟಗಳು, ಚಿತ್ರಕಲೆ, ಸಂಗೀತ, ಭಾರತೀಯ ವಿವಿಧ ಕಲಾ ಪ್ರಕಾರಗಳು, ಪಕ್ಷಿ ವೀಕ್ಷಣೆ, ಮಕ್ಕಳ ಸಿನಿಮಾ, ಕಸದಿಂದ ರಸ, ಸರಿಸೃಪಗಳ ಪರಿಚಯ ಮುಂತಾಗಿ ಹಲವಾರು ಸೃಜನಾತ್ಮಕ ವಿಷಯಗಳ ಕಲಿಕೆಯನ್ನು ಈ ಶಿಬಿರವು ಒಳಗೊಂಡಿರುತ್ತದೆ. ಬೇಸಿಗೆಯ ರಜೆಯನ್ನು ಸಜೆಯಾಗಿಸುವುದನ್ನು ತಪ್ಪಿಸುವುದಕ್ಕಾಗಿ ಈ ಶಿಬಿರದ ಆಯೋಜನೆ ನಡೆಸಲಾಗುತ್ತಿದ್ದು, ಗ್ರಾಮೀಣ ಶಾಂತಪರಿಸರದಲ್ಲಿ ಬೆಳಗ್ಗೆ 9:00ರಿಂದ ಸಂಜೆ 5:00 ತನಕ ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಬಹಳಷ್ಟು ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಲದ ಶಿಬಿರದಲ್ಲಿ ಪ್ರಮುಖ ಆಕರ್ಷಣೆಯಾಗಿ ಬಿಹಾರದ ಮಧುಬನಿ ಕಲೆ, ಗೋದನ ಮತ್ತು…
12 ಏಪ್ರಿಲ್ 2023, ಮೂಡುಬಿದಿರೆ: ಅಖಿಲ ಭಾರತ ತುಳು ಒಕ್ಕೂಟ ಮತ್ತು ತುಳುಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಸೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 08-04-2023 ಶನಿವಾರದಂದು ನಡೆದ ‘ತುಳು ಮಹಾಕೂಟ-2023’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಇವರು ಉದ್ಘಾಟಿಸಿ ”ಎಲ್ಲ ಜಾತಿ, ಮತ, ಧರ್ಮದವರು ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತುಳು ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ತುಳು ಭಾಷೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯಾಗಬೇಕು. ಈ ಕುರಿತು ಯಾವುದೇ ಸರಕಾರ ಬಂದರೂ ಇದಕ್ಕೆ ಆದ್ಯತೆ ನೀಡಬೇಕು. ತುಳುವರು ಹಕ್ಕೊತ್ತಾಯ ಮಾಡಬೇಕು. ಯಾವುದೇ ಭಾಷೆಗೆ ತುಳುವರ ವಿರೋಧವಿಲ್ಲ, ಆದರೆ ತುಳು ಭಾಷೆಗೆ ಮಾನ್ಯತೆ ನೀಡಬೇಕು” ಎಂದು ಹೇಳಿದರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ “ಇಂದು ಕೇವಲ 36ರಷ್ಟಿರುವ ತುಳು ಕೂಟಗಳ ಸಂಖ್ಯೆ ನೂರಕ್ಕೆ ಏರ ಬೇಕಾಗಿದೆ, ಆಗ ತುಳುವಿಗೆ ಅಧಿಕೃತ…
12 ಏಪ್ರಿಲ್ 2023, ಕಿನ್ನಿಗೋಳಿ: ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕ ದಿನಾಂಕ 09-04-2023 ಭಾನುವಾರದಂದು ಏಳಿಂಜೆಯ ಶಾಂಭವಿ ನದಿ ತೀರದಲ್ಲಿ ನವಚೇತನ ಯುವಕ ಮಂಡಲ ಮತ್ತು ಏಳಿಂಜೆ ಶ್ರೀದೇವಿ ಮಹಿಳಾ ಮಂಡಲ ಸಹಯೋಗದಲ್ಲಿ ಆಯೋಜಿಸಿದ ‘ಕವಿ ಚೊಕ್ಕಾಡಿ ಜೊತೆಗಿನ ಮಾತುಕತೆ ಕಾರ್ಯಕ್ರಮ”ದಲ್ಲಿ ಚೊಕ್ಕಾಡಿಯವರು ಕಾವ್ಯಗಳ ಬಗ್ಗೆ ಮತ್ತು ತನ್ನ ಕಾವ್ಯಾನುಭವಗಳ ಬಗ್ಗೆ ಹೇಳಿಕೊಂಡರು. ನಮ್ಮ ಕವನಗಳ ಬಗ್ಗೆ ಮಮತೆ ಇರಬಾರದು. ಕವಿತೆ ಬರೆದಾದ ಮೇಲೆ ನಮ್ಮದ್ದಲ್ಲ. ಮುನಿಸು ತರವೆ ಹಾಡು ಪ್ರೇಮ ಗೀತೆ ಅಲ್ಲ. ದಾಂಪತ್ಯ ಗೀತೆ, ಅದನ್ನು ಯಾರ ಕುರಿತಾಗಿಯೂ ಬರೆದದ್ದಲ್ಲ. ಹೆಂಡತಿಯ ಕುರಿತಾಗಿಯೂ ಅಲ್ಲ. ಆ ಹಾಡಿಗೆ ಹಕ್ಕು ಕಾಯ್ದಿಟ್ಟುಕೊಂಡಿದ್ದರೆ ಒಮ್ಮೆ ಹಾಡಿದರೆ ಒಂದು ರೂಪಾಯಿ ಎಂದು ಲೆಕ್ಕ ಹಾಕಿದರೂ ಒಂದು ಕೋಟಿ ರೂ. ಬರುತ್ತಿತ್ತೇನೋ. ಒಬ್ಬಾಕೆ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿಯೇ ಇರುತ್ತಿದ್ದರು. ಅವರಿಗೆ ಮುನಿಸು ತರವೆ ಹಾಡನ್ನು ಪ್ರತಿದಿನ ಕೇಳುವ ಆಸೆ. ಕೊನೆಯ ದಿನದವರೆಗೂ ಆ ಹಾಡನ್ನು ಕೇಳುತ್ತ ಕೇಳುತ್ತ ತೀರಿಹೋದರು. ಇಂತಹ ವಿಶಿಷ್ಟ ಅನುಭವಗಳನ್ನು ಈ…
12-04-2023,ಮಡಿಕೇರಿ: ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಏ.15 ರಂದು ‘ವಿಶ್ವ ಚಿತ್ರಕಲಾ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ನಗರದ ರಾಜಾಸೀಟ್ನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ .ವಿಶ್ವಚಿತ್ರಕಲಾ ದಿನದ ಅಂಗವಾಗಿ ಜಿಲ್ಲೆಯ ಕಲಾವಿದರು ಕೂಡ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ‘ಮತದಾನದ ಮಹತ್’ ಎಂಬ ವಿಷಯದಲ್ಲಿ ಚಿತ್ರಗಳನ್ನು ರಚಿಸಬಹುದಾಗಿದೆ. ಚಿತ್ರಕಲೆಗೆ ಅಗತ್ಯ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಇದೇ ಸಂದರ್ಭ ‘ನಾನು ಮತದಾನ ಮಾಡುತ್ತೇನೆ’ ಎಂಬ ಬೃಹತ್ ಕ್ಯಾನ್ವಾಸ್ ಅನ್ನು ರಾಜಾಸೀಟ್ನಲ್ಲಿ ಕಲಾವಿದರು ರಚಿಸಲಿದ್ದು, ಸಾರ್ವಜವಿಕರು ಕೂಡ ಕ್ಯಾನ್ವಸ್ನಲ್ಲಿ ತಮ್ಮ ಸಂದೇಶ ಸಾರಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ – 98440 60174 ಅನಿಲ್ ಎಚ್.ಟಿ. ಅಧ್ಯಕ್ಷರು, ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ.
12 ಏಪ್ರಿಲ್ 2023, ಮಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿ ಬೆಂಗಳೂರು ನಡೆಸುವ ವಿಶೇಷ ಸಂಗೀತ ನೃತ್ಯ 22-23ನೇ ಸಾಲಿನ ಪರೀಕ್ಷೆಗಳಲ್ಲಿ ಮಂಗಳೂರಿನ ಗಾನ-ನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರು ಉತ್ತಮ ಸಾಧನೆ ತೋರಿದ್ದಾರೆ. ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಕು. ಅನೌಶ್ಕ – ಭರತನಾಟ್ಯ ಕಿರಿಯರ ವಿಭಾಗದಲ್ಲಿ (ಜೂನಿಯರ್ ಗ್ರೇಡ್) 99% ಅಂಕಗಳನ್ನು ಪಡೆದು ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ತೇರ್ಗಡೆ ಹೊಂದಿದ್ದಾರೆ. ಇವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ. ಒಳಾಂಗಣ ವಿನ್ಯಾಸಕಿ ಭಾವನಾ ಕರ್ಕೇರಾ ಅವರ ಪುತ್ರಿ. ಕು. ಮಹತಿ ಪಾವನಾಸ್ಕರ್ – ಹಿರಿಯರ ವಿಭಾಗ (ಸೀನಿಯರ್ ಗ್ರೇಡ್)ದಲ್ಲಿ 91.8% ಅಂಕಗಳನ್ನು ಪಡೆದು, ತೇರ್ಗಡೆ ಹೊಂದಿ ಕೇಂದ್ರಕ್ಕೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ 10ನೇ ತರಗತಿಯ ಅಧ್ಯಯನ ಮುಗಿಸಿಕೊಂಡಿದ್ದಾರೆ. ಶ್ರೀಮತಿ ಮಾಲಿನಿ ಹಾಗೂ ಆಟೋ ಮೊಬೈಲ್ ತಂತ್ರಜ್ಞ ಶ್ರೀ ಹರೀಶ್ ಪಾವನಾಸ್ಕರ್ ಇವರ ಪುತ್ರಿ.…
12 ಏಪ್ರಿಲ್ 2023, ಮೈಸೂರು: ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಏಪ್ರಿಲ್ 14 ಮತ್ತು 15ರಂದು ಸಂಜೆ 06-30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ ವಾರಾಂತ್ಯ ರಂಗಶಾಲೆಯ ಮಕ್ಕಳಿಂದ ಡಾ.ಸಿದ್ಧಲಿಂಗಯ್ಯ ಅವರ ‘ಏಕಲವ್ಯ’ ನಾಟಕವು ಶ್ರೀ ಚೇತನ್ ಸಿಂಗಾನಲ್ಲೂರು ಅವರ ಸಂಗೀತ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ನಿರ್ದೇಶನ ಸಹಾಯ ಶ್ರೀ ಶಶಿಕುಮಾರ್ ಮೈಸೂರು ಅವರದ್ದು. ಹಾಗೂ ಏಪ್ರಿಲ್ 16ರಂದು ಸಂಜೆ 06-30ಕ್ಕೆ ಸರಿಯಾಗಿ ಪಾಂಡಿಚೇರಿಯ ಪ್ರಖ್ಯಾತ ತಂಡ…
12 ಏಪ್ರಿಲ್ 2023, ಕಾಸರಗೋಡು: ಪೆರ್ಲದ ಶಿವಾಂಜಲಿ ಕಲಾ ಕೇಂದ್ರ (ರಿ) ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಜ್ಞಾನ ವಿಕಾಸ -2023’ ಭರತನಾಟ್ಯ ಕಾರ್ಯಗಾರ ಏಪ್ರಿಲ್ 8 ಮತ್ತು 9ರಂದು ನಡೆಯಿತು. ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಶಿಕ್ಷಕರೂ, ಭಾಗವತರೂ ಆದ ಡಾ. ಶ್ರೀ ಸತೀಶ್ ಪುಣಿಂಚತ್ತಾಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಭರತನಾಟ್ಯ ಕಲೆಯ ಸಂವರ್ಧನೆಗಾಗಿ ಇಂತಹ ಕಾರ್ಯಾಗಾರವನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹ. ಕ್ಷೇತ್ರದಲ್ಲಿ ನುರಿತವರಿಂದ ನೀಡಲ್ಪಡುವ ವಿಶೇಷ ನಿರ್ದೇಶನಗಳು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ” ಎಂದರು. ದೇವಾಲಯದ ಪ್ರಮುಖರಾದ ಶ್ರೀ ಸದಾನಂದ ಕುಡ್ವ ಇವರು ಶುಭಾಶಂಸನೆಗೈದರು. ‘ಜ್ಞಾನ ವಿಕಾಸ -2023’ ಭರತನಾಟ್ಯ ಕಾರ್ಯಗಾರದ ಜವಾಬ್ದಾರಿಯನ್ನು ಹೊತ್ತ ವಿದುಷಿ ಕಾವ್ಯಾ ಭಟ್ ಇವರು ಪುತ್ತೂರಿನ ಅಂಬಿಕಾ ಮಹಾ ವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿ ಪಸರಿಸುವುದೇ ಶಿವಾಂಜಲಿ ಕಲಾ ಕೇಂದ್ರದ ಉದ್ದೇಶವಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುವ ಇವರು…