Author: roovari

ಮಂಗಳೂರು: ಬನವಾಸಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಸಮಾವೇಶ ‘ಪ್ರಕೃತಿಯ ಮಡಿಲು ನುಡಿಯ ಒಡಲು’ ಕಾರ್ಯಕ್ರಮದ ಅಂಗವಾಗಿ ‘ಮನೆಯಂಗಳದಿ ಸಾಹಿತ್ಯ ರಸದಿನ’ ಕಾರ್ಯಕ್ರಮವು ದಿನಾಂಕ 02-06-2024ರಂದು ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ನರೂರು, ಬನವಾಸಿಯ ಶ್ರೀ ರಘುನಂದನ ಭಟ್ಟರ ಮನೆಯ ಆವರಣದಲ್ಲಿ ನಡೆಯಿತು. ವಿಶ್ವ ಪರಿಸರ ದಿನಕ್ಕೆ ಪೂರಕವಾಗಿ, ಶ್ರೀ ಜಗದೀಶ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತೀರ್ಥಹಳ್ಳಿ ಸಮಿತಿಯ ಆಧ್ಯಕ್ಷರಾದ ಅಣ್ಣಪ್ಪ ಅರಬಗಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಣಚೂರು ಹಾಗೂ ಮಂಗಳಾ ಆಸ್ಪತ್ರೆ ವೈದ್ಯ ಮತ್ತು ಕವಿಯಾದ ಡಾ. ಸುರೇಶ ನೆಗಳಗುಳಿ ಅವರನ್ನು ಮಂಗಳೂರಿನ ಮಾಜಿ ಎಸ್‌. ಪಿ. ಕುಮಾರಸ್ವಾಮಿ ಶಾಲು ತೊಡಿಸಿ, ಫಲ ಹಾಗೂ ಫಲಕ ನೀಡಿ ಗೌರವಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ನಾರಾಯಣ ಶೇವಿರೆ ಇವರ ದಿಕ್ಕೂಚಿ ಭಾಷಣದಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದ್ಯಾರ್ಥಿ ಪ್ರಮುಖ್ ತಿಮ್ಮಣ್ಣ ಭಟ್…

Read More

ಕಿನ್ನಿಗೋಳಿ : ಶಿವಪ್ರಣಂ (ರಿ.) ನೃತ್ಯ ತರಗತಿಯ ವತಿಯಿಂದ ಕಿನ್ನಿಗೋಳಿಯ ಯುಗಪುರುಷ ಮತ್ತು ನೇಕಾರ ಸೌಧ ಇವುಗಳ ಸಹಯೋಗದೊಂದಿಗೆ ‘ಶಿವಾಂಜಲಿ 2024’ ನೃತ್ಯ ಪ್ರದರ್ಶನವನ್ನು ದಿನಾಂಕ 08-06-2024, 09-06-2024 ಮತ್ತು 15-06-2024ರಂದು ಕಿನ್ನಿಗೋಳಿಯ ಯುಗಪುರುಷದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 08-06-2024ರಂದು ಸಂಜೆ ಗಂಟೆ 4-45ಕ್ಕೆ ಮಂಗಳೂರಿನ ಕೊಟ್ಟಾರದ ಭರತಾಂಜಲಿ (ರಿ.) ಇದರ ನಿರ್ದೇಶಕರಾದ ಗುರು ಶ್ರೀಧರ ಹೊಳ್ಳ ಹಾಗೂ ಶ್ರೀಮತಿ ಪ್ರತಿಮಾ ಶ್ರೀಧರ್ ಇವರ ಗೌರವ ಉಪಸ್ಥಿತಿಯಲ್ಲಿ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಯುಗಪುರುಷದ ಪ್ರಧಾನ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೃತ್ಯಾಂಗನ್ ಇದರ ಗುರು ರಾಧಿಕಾ ಶೆಟ್ಟಿ ಇವರ ಶಿಷ್ಯೆ ಅದಿತಿ ಲಕ್ಷ್ಮೀ, ನೃತ್ಯ ವಸಂತ ಇದರ ಗುರು ಪ್ರವಿತ ಅಶೋಕ್ ಇವರ ಶಿಷ್ಯೆಯರಾದ ಪೂರ್ವಿಕ ಹಾಗೂ ಗಾರ್ಗಿ ದೇವಿ, ಗಾನ ನೃತ್ಯ ಅಕಾಡೆಮಿ (ರಿ.) ಇದರ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ವಿದುಷಿ ಅಂಕಿತ…

Read More

ಬ್ರಹ್ಮಾವರ : ಯಕ್ಷಗಾನ ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಪೇತ್ರಿ ಮಾಧವ್ ನಾಯ್ಕ್ ಇವರು ದಿನಾಂಕ 05-06-2024ರ ಬುಧವಾರದಂದು ನಿಧನ ಹೊಂದಿದರು. ಇವರಿಗೆ 84 ವರ್ಷ ವಯಸ್ಸಾಗಿತ್ತು. 1940ರಲ್ಲಿ ಬ್ರಹ್ಮಾವರ ತಾಲೂಕಿನ ಪೇತ್ರಿ ಸಮೀಪದ ಹಲುವಳ್ಳಿಯ ವಾಮನ ನಾಯ್ಕ್ ಹಾಗೂ ಮೈದಾ ಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಮಾಧವ ನಾಯ್ಕರಿಗೆ ಯಕ್ಷಗಾನದ ಮದ್ದಳೆಯ ಕ್ರಾಂತಿಕಾರ ಎಂದೇ ಖ್ಯಾತಿಯ ಸೋದರ ಮಾವನಾದ ತಿಮ್ಮಪ್ಪ ನಾಯ್ಕರೇ ಮೊದಲ ಗುರು. ದಿಗ್ಗಜ ಗುರು ತಿಮ್ಮಪ್ಪ ನಾಯ್ಕರ ಮಾರ್ಗದರ್ಶನದಲ್ಲಿ ಯಕ್ಷರಂಗಕ್ಕೆ ಕಾಲಿಟ್ಟ ಮಾಧವ ನಾಯ್ಕರು ಎಲ್ಲರಿಗೂ ಪ್ರೀತಿಯ ನೆಚ್ಚಿನ ಕಲಾವಿದರಾಗಿದ್ದರು. ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಬಳಿಕ ಅಂದಿನ ಪ್ರಸಿದ್ದ ಕಲಾವಿದರಾದ ಭಾಗವತ ತೆಂಗಿನಜೆಡ್ಡು ರಾಮಚಂದ್ರ ರಾಯರು ಹಾಗೂ ಗೋರ್ಪಾಡಿ ವಿಟ್ಠಲ ಪಾಟೀಲರು ಹೆಚ್ಚಿನ ಮಾರ್ಗದರ್ಶನ ನೀಡಿದರು. ತನ್ನ 14ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ ಸುಮಾರು 30ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ಯಕ್ಷಗಾನ ಅಭಿಮಾನಿಗಳನ್ನು ರಂಜಿಸಿ ಕಲಾ…

Read More

ಶಿಲಾಬಾಲಿಕೆ ಮೈಮಾಟದ ಅನಘಾ ಅಂದು ರಂಗದ ಮೇಲೆ ಪ್ರದರ್ಶಿಸಿದ ಅದೆಷ್ಟು ಮೋಹಕ ಯೋಗದ ಭಂಗಿಗಳು ಹಾಗೆಯೇ ಮನಃಪಟಲದ ಮೇಲೆ ಅಚ್ಚೊತ್ತಿ ನಿಂತಿದ್ದವು. ಗಮನ ಸೆಳೆದ ಸರಳ ನಿರಾಡಂಬರ ಆಹಾರ್ಯ, ಭಾವಸ್ಫುರಣ ಮೊಗ-ಕಾಂತಿಯುಕ್ತ ಕಣ್ಣುಗಳು, ಲೀಲಾಜಾಲವಾಗಿ ಹರಿದಾಡಿದ ದ್ರವೀಕೃತ ಚಲನೆಗಳು, ಅಂಗಶುದ್ಧ ಅಚ್ಚುಕಟ್ಟಾದ ನರ್ತನಗಳಿಂದ ಅವಳೊಬ್ಬ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು. ‘ಕಲಾಸಿಂಧು ಅಕಾಡೆಮಿ’ಯ ಗುರು ವಿದುಷಿ ಪೂರ್ಣಿಮಾ ಗುರುರಾಜ ಅವರ ನುರಿತ ತರಬೇತಿಯಲ್ಲಿ ಮಿಂದು ಮೈದಳೆದ ಕಲಾಶಿಲ್ಪ ಅನಘಾ ತನ್ನ ‘ರಂಗಾರ್ಪಣೆ’ಯಲ್ಲಿ ವರ್ಚಸ್ಸಿನಿಂದ ನಿರಾಯಾಸವಾಗಿ ನರ್ತಿಸಿ ನೆರೆದ ಕಲಾರಸಿಕರನ್ನು ಮುದಗೊಳಿಸಿದಳು. ಸುಮನೋಹರ ನೃತ್ಯ ಸಂಯೋಜನೆಗಳಿಂದ ಕೂಡಿದ್ದ, ಮೆರುಗಿನ ನೃತ್ತಗಳು, ಸ್ಫುಟವಾದ ಮುದ್ರೆಗಳು, ಆಹ್ಲಾದಕರ ಆಂಗಿಕಾಭಿನಯ, ಹೃದ್ಯವಾದ ಸಮತೋಲನದ ಅಭಿನಯ-ಕರಾರುವಾಕ್ಕಾದ ಮುಕ್ತಾಯ ಅವಳು ಸಾಕಾರಗೊಳಿಸಿದ ಎಲ್ಲ ಕೃತಿಗಳಲ್ಲೂ ಮಿಂಚಿತ್ತು. ಮನಸೆಳೆದ ‘ಪುಷ್ಪಾಂಜಲಿ’ಯಿಂದ ಕಣ್ಸೆಳೆದ ಸರಸ್ವತೀ ಸ್ತುತಿ ಸುಮನೋಹರವಾಗಿ ಮನವನ್ನು ಆವರಿಸಿತು. ಕಾಂಚೀಪುರದ ಶಕ್ತಿಪೀಠದ ಕಾಮಾಕ್ಷಿಯ ಶೋಭಾಯಮಾನ ವ್ಯಕ್ತಿತ್ವ-ಮಹಿಮೆಗಳನ್ನು ದರ್ಶನ ಮಾಡಿಸಿದ ಶ್ಯಾಮಾಶಾಸ್ತ್ರಿಗಳ ಭೈರವಿ ‘ಸ್ವರಜತಿ’ಯಲ್ಲಿ ‘ಅಂಬಾ ಕಾಮಾಕ್ಷಿ’ ಕೃತಿಯು ಅನಘಳ ದೈವೀಕ ನರ್ತನದಲ್ಲಿ, ಪೂರ್ಣಿಮಾರ…

Read More

ಪುತ್ತೂರು : ಮಂಗಳೂರಿನ ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್( ರಿ ) ಇದರ ನಿರ್ದೇಶಕರಾದ ‘ಗುರುಕುಲಭೂಷಣ’, ‘ನಾಟ್ಯವಿಶಾರದ’, ದ. ಕ. ಜಿಲ್ಲಾ ಪ್ರಶಸ್ತಿ ವಿಜೇತ ವಿದ್ವಾನ್ ಯು. ಕೆ. ಪ್ರವೀಣ್ ಇವರು ಆಯೋಜಿಸಿದ ‘ಗಣೇಶ ಜನನ’ ನೃತ್ಯ ರೂಪಕದ ಪ್ರದರ್ಶನವು ದಿನಾಂಕ 25-06-2024 ರಂದು ಪುತ್ತೂರಿನಲ್ಲಿರುವ ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ವಸತಿ ನಿಲಯವಾದ ‘ಶಿವ ಸದನ’ದಲ್ಲಿ ನಡೆಯಿತು. ವಿದ್ವಾನ್ ಯು. ಕೆ. ಪ್ರವೀಣ್ ಇವರ ತಂದೆ ಹಾಗೂ ಸಂಸ್ಥೆಯ ಸಂಸ್ಥಾಪಕರಾದ “ಶಾಂತಲಾ” ಪ್ರಶಸ್ತಿ ವಿಜೇತ ನಾಟ್ಯಾಚಾರ್ಯ ಕೀರ್ತಿ ಶೇಷ ಶ್ರೀ ಯು.ಎಸ್. ಕೃಷ್ಣರಾವ್ ಅವರ 110 ನೇ ಜನ್ಮದಿನಾಚರಣೆಯ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸುಮಾರು 20 ಕಲಾವಿದರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನೀಡಿದ ವಿದ್ವಾನ್ ಯು. ಕೆ. ಪ್ರವೀಣ್ ಹಾಗೂ ವಿದುಷಿ ಉಷಾ ಪ್ರವೀಣ್ ದಂಪತಿಗಳನ್ನು ಅಧ್ಯಕ್ಷರಾದ ಶ್ರೀ…

Read More

ಮೈಸೂರು : ಅದಮ್ಯ ರಂಗಶಾಲೆ ವತಿಯಿಂದ ದಿನಾಂಕ 07-06-2024ರಿಂದ ಒಂದು ವರ್ಷ ಅವಧಿಯ ವಾರಾಂತ್ಯ ಅಭಿನಯ ಕಾರ್ಯಾಗಾರ ಹಾಗೂ ರಂಗ ತರಬೇತಿ ಕೋರ್ಸ್ ಆರಂಭವಾಗಲಿದ್ದು, ರಂಗಾಸಕ್ತ ಮಕ್ಕಳಿಂದ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷ ಅವಧಿಯ ವಾರಾಂತ್ಯ ಮಕ್ಕಳ ಅಭಿನಯ ಮತ್ತು ರಂಗ ತರಬೇತಿ ಕಾರ್ಯಾಗಾರವನ್ನು ಜಯಲಕ್ಷ್ಮೀಪುರಂ ವಿವೇಕಾನಂದ ಪಿ.ಯು. ಕಾಲೇಜಿನ ಕುವೆಂಪು ರಂಗ ಮಂದಿರದಲ್ಲಿ ಸಂಘಟಿಸಲಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ದಿನಾಂಕ 07-06-2024ರೊಳಗೆ ದಾಖಲಿಸಿ ಪ್ರವೇಶಾತಿಯನ್ನು ಪಡೆದಿರಬೇಕು. ಅಭಿನಯ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ ಮತ್ತು ಪರಿಷ್ಕರಣೆ, ಪ್ರಸಾದನ, ಬೆಳಕು, ರಂಗವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ನಾಟಕ ಪ್ರದರ್ಶನ ಸೇರಿದಂತೆ ರಂಗಭೂಮಿಯ ಮತ್ತು ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ರಂಗಭೂಮಿಯ ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಈ ಕಾರ್ಯಾಗಾರಕ್ಕೆ ಗರಿಷ್ಠ 25 ಮಂದಿ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಜೂನ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 10-06-2024, 17-06-2024 ಮತ್ತು 24-06-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 03-06-2024ರಂದು ನಡೆದ ಸರಣಿ 48ರಲ್ಲಿ ಕುಮಾರಿ ಪ್ರಿಯಂವದ ಇವರು ಕಾರ್ಯಕ್ರಮ ನೀಡಿದ್ದು, ದಿನಾಂಕ 10-06-2024ರಂದು ನಡೆಯಲಿರುವ ಸರಣಿ 49ರಲ್ಲಿ ಕುಮಾರಿ ಅನನ್ಯ ಸುವರ್ಣ, ದಿನಾಂಕ 17-06-2024ರಂದು ನಡೆಯಲಿರುವ ಸರಣಿ 50ರಲ್ಲಿ ತಂತ್ರಿ ಸಹೋದರಿಯರಾದ ಅನ್ವಿತ ಮತ್ತು ಅರ್ಪಿತ ಮತ್ತು ದಿನಾಂಕ 24-06-2024ರಂದು ನಡೆಯಲಿರುವ ಸರಣಿ 51ರಲ್ಲಿ ಕುಮಾರಿ ಎಸ್. ಅನಘಶ್ರೀ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣ ಮಠ ಉಡುಪಿಯಲ್ಲಿ, ರಾಗ ಧನ ಸಂಸ್ಥೆ (ರಿ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ರಾಗರತ್ನಮಾಲಿಕೆ -25’ ಸಂಗೀತ ಕಾರ್ಯಕ್ರಮವು ದಿನಾಂಕ 02-06-2024ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ವಿದ್ವಾನ್ ಪ್ರಣವಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಅವರ ಶಿಷ್ಯ ಚಿರಂಜೀವಿ ಮೋಕ್ಷಿತ್ ಯಸ್. ಬೆಂಗಳೂರು ಇವರ ದ್ವಂದ್ವ ವಯೊಲಿನ್ ವಾದನ ಕಚೇರಿ ನಡೆಯಿತು. ಮೃದಂಗದಲ್ಲಿ ಡಾ. ಅಕ್ಷಯ ನಾರಾಯಣ ಕಾಂಚನ ಮತ್ತು ಘಟಂನಲ್ಲಿ ವಿದ್ವಾನ್ ಯಸ್. ಮಂಜುನಾಥ್ ಮೈಸೂರು ಸಹಕರಿಸಿದರು.

Read More

ಮಡಿಕೇರಿ : ಲೇಖಕಿ ಪ್ರತಿಮಾ ಹರೀಶ್ ರೈ ಬರೆದಿರುವ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 09-06-2024ರಂದು ಬೆಳಗ್ಗೆ 10-30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಶ್ರೀ ಟಿ.ಪಿ. ರಮೇಶ್ ಉದ್ಘಾಟಿಸಲಿದ್ದು, ಸಾಹಿತಿ ಶ.ಗ. ನಯನ ತಾರಾ ‘ಅಂತರಗಂಗೆ’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಶ್ರೀ ಸುಬ್ರಾಯ ಸಂಪಾಜೆ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಕೊಡಗು ವಿ.ವಿ.ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಕೃತಿಯ ಕುರಿತಂತೆ ಮಾತನಾಡಲಿದ್ದು, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ಜಿ. ರಾಜೇಂದ್ರ, ಮಡಿಕೇರಿ ತಾಲೂಕು ಜಾನಪದ ಪರಿಷತ್‌ ಅಧ್ಯಕ್ಷ ಶ್ರೀ ಅನಿಲ್ ಹೆಚ್.ಟಿ., ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಡಿ. ಜಗದೀಶ್ ರೈ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Read More

ಶ್ರೀಮತಿ ಶಶಿಕಲಾ ಬಾಯಾರು ಅವರ ‘ಪತ್ರಾರ್ಜಿತ’ವು ಭಾವನಾತ್ಮಕ ಸಂವಾದಗಳ ಸುಂದರ ಗುಚ್ಛ. ಸಂಬಂಧ ಸಂವಹನಗಳು ಯಾಂತ್ರಿಕವಾಗುತ್ತಿರುವ ಹೊತ್ತಿನಲ್ಲಿ ಓಲೆಗಳ ಮೇಲೆ ಭಾವನೆಗಳು ಅರಳಿರುವುದು ವಿಶೇಷ. ಚಿತ್ತಭಿತ್ತಿಯಲ್ಲಿ ಮೂಡುವ ಭಾವಚಿತ್ರಗಳನ್ನು ಜೀವಂತಿಕೆಯಿಂದ ನೇಯಬಲ್ಲ ಇವರ ಕಸೂತಿಕಲೆಯಂತೆ ಇಲ್ಲಿನ ಪತ್ರಸಂಗ್ರಹವೂ ತನ್ನದೇ ಆದ ಕುಸುರಿತನದಿಂದ ಕಂಗೊಳಿಸುತ್ತದೆ. ಲೇಖಕಿಯು ತಮ್ಮ ಜೊತೆ ಒಡನಾಡಿದ ವ್ಯಕ್ತಿಗಳಿಗೆ ಬರೆದ ಪತ್ರಗಳು ಮತ್ತು ಅವರ ಪ್ರತ್ಯುತ್ತರಗಳು ಓದುಗನ ಪಾಲಿಗೆ ಎಂದಿಗೂ ಮರೆಯಲಾಗದ ನೆನಪಿನ ಚಿತ್ರಗಳಾಗಿವೆ. ಒಡನಾಟದ ಹಲವು ಸಂಗತಿಗಳನ್ನೂ ಸಂದರ್ಭಗಳನ್ನೂ ಲಕ್ಷ್ಯವಾಗಿಟ್ಟುಕೊಂಡು ಮೂಡಿದ ಬರಹಗಳು ಕತೆ ಕವಿತೆಗಳಂತೆ ಆಪ್ತವಾಗಿ ಓದಿಸುತ್ತಾ ಚಿಂತನೆಗೆ ತೊಡಗಿಸುತ್ತವೆ. ಪತ್ರದಲ್ಲಿ ಅವರು ಯಾರೊಂದಿಗೆ ಸಂವಾದವನ್ನು ನಡೆಸುತ್ತಾರೋ ಅವರೆಲ್ಲರೂ ಒಂದೇ ಮನೆಯ ಮಂದಿಗಳಂತೆ ಜೊತೆಯಲ್ಲಿ ಕುಳಿತು ಮಾತನಾಡುವಂತೆ ಭಾಸವಾಗುತ್ತದೆ. ಇಲ್ಲಿನ ಓಲೆಗಳು ಕೇವಲ ಕುಶಲೋಪರಿ, ಹರಟೆಗಳಿಗೆ ಎಡೆ ಕೊಡದೆ ಜನಜೀವನ, ಜಗತ್ತಿನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುತ್ತವೆ. ಲೇಖಕಿ ಬರೆದ ಪತ್ರಗಳಲ್ಲಿ ಅವರ ಆತ್ಮಕತೆಯ ಕೆಲವು ಪುಟಗಳು ಅನಾವರಣಗೊಳ್ಳುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ ಫಲವಾಗಿ ಇಲ್ಲಿನ ಪತ್ರಗಳು…

Read More