Author: roovari

10 ಏಪ್ರಿಲ್ 2023, ಸುರತ್ಕಲ್: ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಮತ್ತು ಗೋವಿಂದ ದಾಸ ಕಾಲೇಜು ಸಹಯೋಗದೊಂದಿಗೆ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ “ಅಗರಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ”ವು ದಿನಾಂಕ 08-04-2023ರಂದು ಶನಿವಾರ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನಲ್ಲಿ ಜರಗಿತು. 2023ನೇ ಸಾಲಿನ “ಅಗರಿ ಪ್ರಶಸ್ತಿ” ಸ್ವೀಕರಿಸಿದ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, “ಅಗರಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ಧರ್ಮಸ್ಥಳ ಮೇಳದ ಸಾರಥ್ಯವನ್ನು ವಹಿಸಿಕೊಂಡು ಯಕ್ಷಗಾನದ ಮೂಲ ಪರಂಪರೆ ಉಳಿಸಲು ಆದಷ್ಟು ಶ್ರಮವಹಿಸುತ್ತಿದ್ದೇನೆ. ಅಗರಿ ಭಾಗವತರ ಬಳಿಕ ಕಡತೋಕ ಶೈಲಿ, ಮಯ್ಯ ಶೈಲಿ, ಹೆಬ್ಬಾರ್ ಶೈಲಿ ಬಂದಿವೆ. ಕಾಳಿಂಗ ನಾವಡರಂಥವರು ಬಡಗು ಶೈಲಿಗೆ ಜೀವಕಳೆ ನೀಡಿದ್ದರು. ಇದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಶೈಲಿ ಯಕ್ಷಗಾನಕ್ಕೆ ಬರುವುದು ಬೇಡ. ಕಲಾ ತಪಸ್ಸಿನ ಮೂಲಕ ಯಕ್ಷರಂಗಕ್ಕೆ ಬರುವ ಭಾಗವತರು, ಯಕ್ಷಗಾನ ಕಲಾವಿದರು ಪ್ರೇಕ್ಷಕರನ್ನು ತಮ್ಮ ಪ್ರತಿಭೆಯ ಮೂಲಕ ಶ್ರೇಷ್ಠಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಗಳು. ಇಂತಹವರ ನೆನಪಿನಲ್ಲಿ ಪ್ರಶಸ್ತಿ,…

Read More

10 ಏಪ್ರಿಲ್ 2023,ಉಡುಪಿ: ದಿನಾಂಕ 9-04-20230 ರಂದು ಬೈಂದೂರಿನ ಶ್ರೀ ಸೇನೇಶ್ವರ ದೇವಳದ ಆವರಣದಲ್ಲಿ ಬೈಂದೂರಿನ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ `ಸುರಭಿ ‘ಯ 23ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ `ಸುರಭಿ ಜೈಸಿರಿ ಸಾಂಸ್ಕೃತಿಕ ವರ್ಷಧಾರೆ ‘ ಮೂರು ದಿನಗಳ ಕಾರ್ಯಕ್ರಮದ ಕೊನೆಯ ದಿನದಂದು ಸಂಸ್ಥೆ ಕೊಡ ಮಾಡುವ 9ನೇ ವರ್ಷದ ಪ್ರತಿಷ್ಠಿತ `ಬಿಂದುಶ್ರೀ ‘ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಗೊಂಬೆಯಾಟ ಕಲಾವಿದ ಭಾಸ್ಕರ ಕೊಗ್ಗ ಕಾಮತ್ ಅವರಿಗೆ ಪ್ರದಾನ ಮಾಡಲಾಯಿತು ಪ್ರಶಸ್ತಿ ಪ್ರಧಾನ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಪ್ರಪಂಚದಾದ್ಯಂತ ಯಕ್ಷಗಾನ ಗೊಂಬೆಯಾಟದ ಸೊಗಡನ್ನು ಪಸರಿಸಿದ ಕೊಗ್ಗ ಕಾಮತ್ ಅವರ ದಾರಿಯಲ್ಲಿಯೇ ಅವರ ಮಗ ಭಾಸ್ಕರ ಕೊಗ್ಗ ಕಾಮತ್ ಅವರು ಹೆಜ್ಜೆ ಹಾಕಿರುವುದು ಕಲೆಯ ಉಳಿವಿನ ದೃಷ್ಟಿಯಿಂದ ಶ್ಲಾಘನೀಯ. ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಮಾಜದ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು. ಗೊಂಬೆಯಾಟ ಕಲೆ ಮಾತ್ರವಲ್ಲದೆ, ಅದರಲ್ಲಿ ತೊಡಗಿಸಿಕೊಂಡಿರುವ…

Read More

10 ಏಪ್ರಿಲ್ 2023, ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ‘ನೂರಾರು ಲೇಖಕರ ನೂರಾರು ಕತೆಗಳು’ ಕಥಾ ಸಂಕಲನವನ್ನು ದಿನಾಂಕ 08-04-2023 ಶನಿವಾರದಂದು ಉಡುಪಿಯ ಪವನ್ ರೂಫ್ ಟಾಪ್ ಕಿದಿಯೂರು ಹೋಟೆಲ್ ನಲ್ಲಿ ಬಿಡುಗಡೆಗೊಂಡಿತು. ಪುಸ್ತಕ ಬಿಡುಗಡೆಗೊಳಿಸಿದ ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ, ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ)ರವರು “ಕತೆಗಳು ಸಂಕಷ್ಟ ಕಾಲದಲ್ಲಿ ಔಷಧಿಯಂತೆ ಸಾಂತ್ವನ ನೀಡುತ್ತವೆ. ಅಹಂಕಾರದಲ್ಲಿ ಕತೆ ಹುಟ್ಟುವುದಿಲ್ಲ. ಅನುನಯದಿಂದ ಕತೆಗಳನ್ನು ಬರೆಯಬೇಕಾಗುತ್ತದೆ. ಕತೆಗಳು ಮನುಷ್ಯನ ಅಂತರಂಗದ ಮಾತನ್ನು ಹೇಳುತ್ತವೆ. ಕಟ್ಟಿದ ಕತೆಗಳಿಗಿಂತ ಅಂತರಂಗದಲ್ಲಿ ಹುಟ್ಟಿದ ಕತೆಗಳೇ ಶ್ರೇಷ್ಠ” ಎಂದು ಹೇಳಿದರು. ಪತ್ರಕರ್ತ ವಸಂತ ಗಿಳಿಯಾರ್ ಕಥಾಸಂಕಲನವನ್ನು ಪರಿಚಯಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಪ್ರೊ. ಶಂಕರ್ ವೇದಿಕೆಯಲ್ಲಿದ್ದರು. ಸಂಕಲನದ ಸಂಪಾದಕರಾದ ನಾಗರಾಜ್ ಹೆಬ್ಬಾರ್ ಪ್ರಸಾವಿಕ ಮಾತುಗಳನ್ನಾಡಿದರು. ರಾಜೇಶ್ ಭಟ್ ಫಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. 117 ಕತೆಗಳ ಸಂಕಲನ : ಪ್ರತಿಷ್ಠಾನ ಕೊರೋನಾ ಕಾಲದಲ್ಲಿ ಲೇಖಕರಿಗೆ ಕತೆಗಳನ್ನು…

Read More

10 ಏಪ್ರಿಲ್ 2023, ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ಉಡುಪಿ ಜಂಟಿಯಾಗಿ ಏರ್ಪಡಿಸಿದ್ದ “ಕನ್ನಡ ಮಾತನಾಡು” ಕಾರ್ಯಕ್ರಮವು ದಿನಾಂಕ 09-04-2023ರಂದು ಉಡುಪಿಯ ಕೇರಳ ಕಲ್ಚರಲ್ ಅಂಡ್ ಸೋಷಿಯಲ್ ಸೆಂಟರ್ ನಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಹಿರಿಯ ಕಥೆಗಾರರು, ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಅವರು ಮಾತನಾಡುತ್ತಾ ಭಾಷೆ ಇರುವುದು ಸಂಹನಕ್ಕೆ, ಯಾವ ಭಾಷೆಯು ಇನ್ನೊಂದು ಭಾಷೆಯನ್ನು ದ್ವೇಷಿಸು ಎನ್ನುವುದಿಲ್ಲ. ಭಾಷೆ ಮತ್ತು ಮನುಷ್ಯ ಬೆಳೆಯುವುದು ಕೊಳು-ಕೊಡುವುದರಿಂದ, ಕೂಪಮಂಡೂಕರಾಗಬೇಡಿ. ಭಾಷೆಯ ವಿಷಯದಲ್ಲಿ ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ ಎನ್ನುವ ಕಿವಿ ಮಾತನ್ನು ಹೇಳಿದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ತಾಲೂಕು ಘಟಕ ಬಹಳ ಒಳ್ಳೆಯ ಕೆಲಸಗಳನ್ನು ಸಮಾಜಕ್ಕೆ ನೀಡುತ್ತಿದೆ ಎಂದರು. “ಕನ್ನಡ ಮಾತನಾಡು” ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ 30 ತರಗತಿಗಳು ನಡೆದಿದ್ದು 25ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ಪ್ರಮಾಣಪತ್ರವನ್ನು ವಿತರಿಸಲಾಯಿತು. ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು…

Read More

10 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ ಹರಿಕಥೆ ಉಚ್ಚಯ-2023ರ ಎರಡನೇ ದಿನದ ಉದ್ಘಾಟನೆಯನ್ನು ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ಅದ್ಯಕ್ಷರಾದ ಶ್ರೀ ಪುರುಷೋತ್ತಮ ಅಂಚನ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ ತುಳುವ ಸಿರಿ ಟ್ರಸ್ಟ್(ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿವೇಕಾನಂದ ಸನಿಲ್, ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಕೆ.ರವೀಂದ್ರ ರೈ ಕಲ್ಲಿಮಾರ್, ತುಳುವ ಸಿರಿ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ ಮತ್ತು ಸಂಚಾಲಕರಾದ ಅನಂತಕೃಷ್ಣ ಯಾದವ್ ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್ ಡಾ. ಎಸ್.ಪಿ. ಗುರುದಾಸ್…

Read More

10 ಎಪ್ರಿಲ್ 2023, ಬಾಗಲಕೋಟೆ: ನಟರಾಜ ಸಂಗೀತ ನೃತ್ಯ ನಿಕೇತನ (ರಿ) ಬಾಗಲಕೋಟೆ,ನೃತ್ಯ ಸಂಸ್ಥೆಯ ನಿರ್ದೇಶಕರಾದ ವಿದುಷಿ ಶುಭದ ದೇಶಪಾಂಡೆ ಅವರ ಆಯೋಜನೆಯಲ್ಲಿ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರಿಂದ ಎರಡು ದಿನಗಳ “ತಾಳ ಪ್ರಕ್ರಿಯಾ” ಕಾರ್ಯಗಾರವು ಅಚ್ಚುಕಟ್ಟಾಗಿ ಮೂಡಿ ಬಂತು.15 ವಿದ್ಯಾರ್ಥಿನಿಯರು 2 ದಿನದ ಈ ಕಾರ್ಯಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ನಟರಾಜ ಸಂಗೀತ ನೃತ್ಯ ನಿಕೇತನ (ರಿ) ಬಾಗಲಕೋಟೆ : ನಟರಾಜ ಸಂಗೀತ ನೃತ್ಯ ನಿಕೇತನವು ಇಂದು ಇಪ್ಪತ್ತು ವರ್ಷಗಳನ್ನು ಪೂರೈಸಿ ಅಮೋಘ ಸೇವೆಯನ್ನು ನಾಡಿಗೆ ಸಲ್ಲಿಸಿದೆ.ಚಾಲುಕ್ಯ ಉತ್ಸವ ಬಾಗಲಕೋಟ ಉತ್ಸವ, ರನ್ನ ಉತ್ಸವ , ಮೈಸೂರು ದಸರಾ ಉತ್ಸವಗಳಲ್ಲಿ ಸಭೆಯನ್ನು ವ್ಯಕ್ತಪಡಿಸುತ್ತಿರುವುದಲ್ಲದೆ, ಪುಣೆ, ಚೆನ್ನೈ,ಬೆಂಗಳೂರು ಅಲ್ಲದೆ, ಸಿಂಗಾಪುರ, ಥೈಲ್ಯಾಂಡ್, ಫ್ರಾನ್ಸ್ ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕೀರ್ತಿಭಾಜನರಾಗಿದ್ದರೆ ಕಲಾ ಸೇವೆಗೆ ಮುಡುಪಾಗಿಟ್ಟ ನಮ್ಮ ದೇವರ ಭವ್ಯ ಸಾಲಸ್ಕೃತಿಕ ಪರಂಪರೆಯ ಗಂಧವನ್ನು ದೇಶ-ವಿದೇಶಗಳಲ್ಲಿ ಹರಿಯುವಂತೆ ಮಾಡಿದ್ದಾರೆ. ಇದರ ರೂವಾರಿ ವಿದುಷಿ ಶುಭದ ದೇಶಪಾಂಡೆ ಅವರು ಸಂಗೀತ ನಾಟ್ಯ ಕಲಾ ಸಾಮ್ರಾಜ್ನಿ,…

Read More

ಎಪ್ರಿಲ್ 10, ಮುಂಬಯಿ: “ವಿಶ್ವ ರಂಗ ದಿನವನ್ನು ಕನ್ನಡ ಕಲಾ ಕೇಂದ್ರದ ಕಚೇರಿಯಲ್ಲಿ ಯಾಕೆ ಆಚರಿಸಬಾರದು ಎಂಬ ನಮ್ಮ ಮನದಿಚ್ಚೆಗೆ ಇಂತಹ ಅಭೂತಪೂರ್ವ ಸ್ಪಂದನೆ ಸಿಗುತ್ತದೆ ಎನ್ನುವ ಕಲ್ಪನೆ ಇದ್ದಿರಲಿಲ್ಲ. ವಿಶ್ವ ರಂಗಭೂಮಿ ದಿನವನ್ನು ವಿಶ್ವಾದ್ಯಂತ ಮಾರ್ಚ್ 27ರಂದು ಆಚರಿಸಲಾಗುತ್ತದೆ. ರಂಗಭೂಮಿಯ ವೈವಿಧ್ಯಮಯ ಕೊಡುಗೆಗಳನ್ನು ಆಚರಿಸಲು ಇದು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಕನ್ನಡಕಲಾ ಕೇಂದ್ರವು ಕಳೆದ ಆಗಸ್ಟ್ ತಿಂಗಳಲ್ಲಿ ಆಚರಿಸಿದ ನಾಟಕೋತ್ಸವದಲ್ಲಿ ಒಂದು ಕನ್ನಡ ನಾಟಕ, ಒಂದು ತುಳು ನಾಟಕ,  ಒಂದು ರೂಪಕ ಮತ್ತು ಒಂದು ತಾಳಮದ್ದಲೆ ನಡೆಸಿ ವೈವಿಧ್ಯಮಯ ಕಾರ್ಯಕ್ರಮ ನೀಡಿದೆ ಎನ್ನುವುದಕ್ಕೆ ಸಂತೋಷವಾಗುತ್ತದೆ . ಮುಂಬಯಿ ಯ ನಾಟಕ ನಿರ್ದೇಶಕರು ಪ್ರಭುದ್ಧರಾಗಿದ್ದು ಕನ್ನಡಕಲಾ ಕೇಂದ್ರದ ನಾಟಕೋತ್ಸವಕ್ಕೆ ವರ್ಷಕ್ಕೆ ಒಂದಾದರೂ ನಾಟಕ ನೀಡುವ ಮೂಲಕ ನಮ್ಮ ನಾಟಕೋತ್ಸವದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕು” ಎಂದು ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ ಆರ್ ಹೇಳಿದರು. ಏಪ್ರಿಲ್ 8ರಂದು ಸಂಜೆ ಕನ್ನಡ ಕಲಾ ಕೇಂದ್ರದ ಸಾಯನ್ ನಲ್ಲಿರುವ ಕಚೇರಿಯಲ್ಲಿ ವಿಶ್ವರಂಗ ದಿನಾಚರಣೆ…

Read More

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಯಿಲದ ಜನಾರ್ಧನ ಹಾಗೂ ಜಾನಕಿ ಇವರ ಮಗನಾಗಿ 11.10.1988ರಂದು ಪ್ರೇಮ್ ರಾಜ್‌ ಕೊಯಿಲ ಅವರ ಜನನ. ಕಂಪ್ಯೂಟರ್‌ ಡಿಪ್ಲೊಮಾ ಇವರ ವಿದ್ಯಾಭ್ಯಾಸ. ಹರಿಪ್ರಸಾದ್‌ ರಾವ್‌ ರಾಯಿ ಮತ್ತು ಅಕ್ಕ- ಅಣ್ಣಂದಿರು ಪ್ರೇಮ್ ರಾಜ್‌ ಕೊಯಿಲ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ದಿನೇಶ್‌ ಶೆಟ್ಟಿ ಕಾವಳಕಟ್ಟೆ, ದಿವಾಣ ಶಿವಶಂಕರ್‌ ಭಟ್‌ ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಪ್ರಸಂಗದ ಎಲ್ಲಾ ಪದ್ಯಗಳನ್ನು ಓದಿ ಅರ್ಥ ಮಾಡಿಕೊಂಡು ಹಿರಿಯರಲ್ಲಿ, ರಂಗದಲ್ಲಿ ಜತೆಯಾಗುವ ವೇಷದವರಲ್ಲಿ, ಭಾಗವತರಲ್ಲಿ ರಂಗ ನಡೆಯ ಬಗ್ಗೆ ಕೇಳಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಪ್ರೇಮ್ ರಾಜ್ ಅವರು ಹೇಳುತ್ತಾರೆ. ಅತಿಕಾಯ ಮೋಕ್ಷ, ತಾಮ್ರಧ್ವಜ ಕಾಳಗ, ಬಬ್ರುವಾಹನ ಕಾಳಗ, ಲಲಿತೋಪಖ್ಯಾನ, ರಕ್ತರಾತ್ರಿ, ಗುರುದಕ್ಷಿಣೆ, ಲವ ಕುಶ ನೆಚ್ಚಿನ ಪ್ರಸಂಗಗಳು. ಬಬ್ರುವಾಹನ, ಕೃಷ್ಣ, ವಿಷ್ಣು, ಅಭಿಮನ್ಯು, ಅಶ್ವತ್ಥಾಮ, ಚಂಡ ಮುಂಡರು, ಲವ – ಕುಶ, ರುಕ್ಮಾಂಗ – ಶುಭಾಂಗ‌…

Read More

08 ಏಪ್ರಿಲ್ 2023, ಪಡುಬಿದ್ರಿ: ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮೂಲ ಮಠದ ಶ್ರೀ ಪ್ರಾಣ ದೇವರ ಸನ್ನಿಧಿಯಲ್ಲಿ ಗುರುವಾರ ದಿನಾಂಕ 06-04-2023ರಂದು ಹನುಮಜ್ಜಯಂತಿ ಮತ್ತು ಶ್ರೀ ರಾಜರಾಜೇಶ್ವರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಸಂದರ್ಭ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಶ್ರೀ ರೆಂಜಾಳ ಹರಿನಾರಾಯಣ ಬೈಪಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ದಂಪತಿಗೆ ಶತಮಾನದ ಶಕಪುರುಷ, ಜ್ಞಾನವೃದ್ಧರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಸಂಸ್ಮರಣಾರ್ಥ ನೀಡಲಾಗುವ “ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ”ವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯಪಟ್ಟ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರದಾನ ಮಾಡಿ ದಂಪತಿಗಳನ್ನು ಹರಸಿದರು. ಪುರಸ್ಕಾರವು ಸನ್ಮಾನ ಪತ್ರದೊಂದಿಗೆ ರೂ.50,000 ನಿಧಿಯನ್ನು ಒಳಗೊಂಡಿದೆ. ಪಲಿಮಾರು ಮಠದ ದಿವಾನರಾದ ವಿದ್ವಾನ್ ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಬೈಪಾಡಿತ್ತಾಯ ದಂಪತಿಗಳನ್ನು…

Read More

08 ಏಪ್ರಿಲ್ 2023, ಉಡುಪಿ: ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ದಂಪತಿಗಳ ಸುಪುತ್ರಿಯಾದ ತನುಶ್ರೀ ಪಿತ್ರೋಡಿ ಉಡುಪಿಯ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ. ಯೋಗ ಗುರುಗಳಾದ ಶ್ರೀ ಹರಿರಾಜ್ ಕಿನ್ನಿಗೋಳಿ ಇವರಲ್ಲಿ ಯೋಗ ಅಭ್ಯಾಸ ಮತ್ತು ನಾಟ್ಯಾಚಾರ್ಯ ಶ್ರೀ ರಾಮಕೃಷ್ಣ ಕೊಡಂಚ ಇವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡಿ ಗುರುಗಳಿಬ್ಬರಿಗೂ ಖ್ಯಾತಿಯನ್ನು ತಂದು ಕೊಟ್ಟ ಧೀಮಂತ ಶಿಷ್ಯೆ. ಯೋಗಾಸನದ ಮೂಲಕ 1 ಗಿನ್ನಿಸ್ ವರ್ಲ್ಡ್ ರೆಕಾರ್ಡ್, 6 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಪ್ರಸ್ತುತ ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿರುವುದು ಈಕೆಯ ಸಾಧನೆಗೆ ಸಂದ ಗೌರವ. ತನ್ನ ಎಳವೆಯಲ್ಲಿಯೇ 5ನೇ ಯೋಗ ದಿನಾಚರಣೆಯ ಸಂದರ್ಭದಲ್ಲಿ “ಯೋಗ ರತ್ನ ಪ್ರಶಸ್ತಿ” ಮತ್ತು 27-05-2018ರಂದು ಅಭಿನಯ ಕಲಾವಿದರು ಉಡುಪಿ ಇವರಿಂದ “ನಾಟ್ಯ ಮಯೂರಿ” ಬಿರುದು ಮತ್ತು 14-11-2018ರಂದು ಇಟಲಿಯ ರೋಮ್ ನಗರದಲ್ಲಿ ನಡೆದ ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿಕೊಂಡು ಯೋಗ…

Read More