Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ (ರಿ). ಮೈಸೂರು. ಆಯೋಜಿಸುವ ಜಾನಪದ ಸಂಭ್ರಮ ಮತ್ತು ನಾಟಕೋತ್ಸವದಲ್ಲಿ ಜಿ. ಪಿ. ಐ. ಇ. ಆರ್ ರಂಗ ತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ ‘ಮಂಟೇಸ್ವಾಮಿ ಕಥಾಪ್ರಸಂಗ’ ಪ್ರದರ್ಶನವು ದಿನಾಂಕ 09 ಮಾರ್ಚ್ 2025 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ನಡೆಯಲಿದೆ. ಡಾ .ಹೆಚ್. ಎಸ್. ಶಿವಪ್ರಕಾಶ್ ರಚಿಸಿರುವ ಈ ನಾಟಕವನ್ನು ಮೈಮ್ ರಮೇಶ್ ರಂಗಾಯಣ ನೃತ್ಯ ಸಂಯೋಜನೆ, ವಿನ್ಯಾಸ ಮತ್ತು ನಿರ್ದೇಶಿಸಿದ್ದು, ದೇವಾನಂದ, ವರಪ್ರಸಾದ್ ಹಾಗೂ ಅರುಣ್ ಎಂ. ಸಿ.ಸಂಗೀತದಲ್ಲಿ ಸಹಕರಿಸಲಿದ್ದಾರೆ. ವಸ್ತ್ರವಿನ್ಯಾಸ ಹಾಗೂ ಪ್ರಸಾದನದಲ್ಲಿ ದಿವ್ಯಾ ಮಹೇಶ್ ಕಲ್ಲತ್ತಿ ಸಹಕರಿಸಲಿದ್ದು, ರಂಗ ಸಜ್ಜಿಕೆಯಲ್ಲಿ ಶರತ್ ಕುಮಾರ್ ಕೆ. ವಿ ಹಾಗೂ ಬೆಳಕಿನ ಸಂಯೋಜನೆಯಲ್ಲಿ ಅಚ್ಚಪ್ಪ ಸಹಕರಿಸಲಿದ್ದಾರೆ. ‘ಮಂಟೇಸ್ವಾಮಿ ಕಥಾಪ್ರಸಂಗ’ : ಕರ್ನಾಟಕದ ಮಹತ್ವದ ಮೌಖಿಕ ಮಹಾಕಾವ್ಯಗಳಲ್ಲೊಂದಾದ ಮಂಟೇಸ್ವಾಮಿ ಕಾವ್ಯವನ್ನು ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಹಾಗೂ ಬೆಂಗಳೂರು ಪ್ರದೇಶಗಳಲ್ಲಿ ಜೀವಂತವಾಗಿರಿಸಿರುವುದು ವೃತ್ತಿಪರ…
ನಾಪೋಕ್ಲು : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಕನ್ನಡ ವಿಭಾಗದ ವತಿಯಿಂದ ಜನಪದೋತ್ಸವ ಕಾರ್ಯಕ್ರಮವು ದಿನಾಂಕ 07 ಮಾರ್ಚ್ 2025 ರಂದು ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಉಪನ್ಯಾಸಕರಾದ ಕೆ.ಹರಣಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜನಪದದ ಮಹತ್ವ ಮತ್ತು ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಸಂಚಾಲಕರಾದ ಡಾ. ಸಹನಾ ದಿನೇಶ್ ಹಾಗೂ ಬೋಧಕ ಬೋಧಕೇತರ ವರ್ಗದವರಿಂದ ಆಯೋಜಿಸಿದ ವಿವಿಧ ಜಾನಪದ ನೃತ್ಯ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಜನಪದದ ಸಗಡನ್ನು ಸವಿದರು. ಈ ಸಂದರ್ಭ ಪ್ರಾಂಶುಪಾಲರಾದ ಮನೋಜ್ ಕುಮಾರ್, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿ ಹಾಗೂ ಶ್ರೀಮತಿ ಸುಲೋಚನಾ ಹಾಗೂ ಡಾ. ಎಂ. ಜಿ. ನಾಗರಾಜ್ ದಂಪತಿ ದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಸಾಹಿತ್ಯ, ಕಲೆ, ಜಾನಪದ, ಪರಿಸರ ಮತ್ತು ಪುರಾತತ್ವ ಕುರಿತ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 11 ಮಾರ್ಚ್ 2025ರ ಮಂಗಳವಾರ ಬೆಳಿಗ್ಗೆ ಘಂಟೆ 10.00ರಿಂದ ಮಡಿಕೇರಿಯ ಎಫ್. ಎಂ. ಸಿ. ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯ ಇಲ್ಲಿನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ಕೋಡಿರ ಲೋಕೇಶ್ ಉದ್ಘಾಟಿಸಲಿದ್ದು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್ ಪ್ರಾಸ್ತಾವಿಕ ನುಡಿಯನ್ನು ಆಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ…
ಕಥೆಗಾರ ರಘುನಾಥ್ ಚ.ಹ. ಇವರ ಇತ್ತೀಚಿನ ಕಥಾಸಂಕಲನ ‘ಇಲ್ಲಿಂದ ಮುಂದೆಲ್ಲ ಕಥೆ’ ಕನ್ನಡ ಕಥಾಲೋಕದಲ್ಲಿ ಒಂದು ಭಿನ್ನ ದಾರಿಯನ್ನು ಹಿಡಿದು ಸಾಗುವ ಕೃತಿ. ಭಿನ್ನ ತಂತ್ರಗಳೊಂದಿಗೆ ಓದುಗನನ್ನು ಬಿಗಿ ಹಿಡಿಯುತ್ತ, ಪ್ರತಿಯೊಂದು ಕಥೆಯೂ ಕೊನೆಯಲ್ಲಿ ನೀಡುವ ಒಂದು ಅನಿರಿಕ್ಷಿತ ತಿರುವು ಕುತೂಹಲವನ್ನು ಬೆಳೆಸುತ್ತ ಹೋಗುತ್ತದೆ. ಯಾವುದೇ ಹಿಂಜರಿಕೆಯಿಲ್ಲದೆ ಮನುಷ್ಯ ಜೀವನದ ವಾಸ್ತವಗಳನ್ನು ಮುಖಕ್ಕೆ ರಾಚುವಂತೆ ಹೇಳುವ ಈ ಕಥೆಗಳು ಒಂದು ಹೊಸ ಅರಿವನ್ನೂ ಮೂಡಿಸುತ್ತವೆ. ಮೊದಲ ಕಥೆ ‘ಬಣ್ಣ’ ನಿರೂಪಕ ಮತ್ತು ಅವನ ಮನೆಗೆ ಬಣ್ಣ ಬಳಿಯುವ ಬಾಬು ಎಂಬವರ ನಡುವೆ ನಡೆಯುತ್ತದೆ. ಇದನ್ನು ಕೊರೋನಾ ಕಾಲದ ಕಥೆಗಳ ಸಾಲಿಗೂ ಸೇರಿಸಬಹುದು. ಕೊರೋನಾ ಮಾರಿ ಎಬ್ಬಿಸಿದ ಬಿರುಗಾಳಿಗೆ ತತ್ತರಿಸಿದ ನಾಲ್ಕು ವರ್ಷದ ಪುಟ್ಟ ಮಗಳನ್ನು ಕಳೆದುಕೊಂಡ ಬಾಬು ಇತರ ಮಕ್ಕಳ ಸುಖದಲ್ಲಿ ಸಮಾಧಾನ ಕಂಡುಕೊಳ್ಳುವ ವೇದಾಂತಿಯಾಗಿದ್ದಾನೆ. ಬಣ್ಣ ಬಳಿದು ಮುಗಿಸುವ ಕೊನೆಯ ದಿವಸ ನಿರೂಪಕನಿಗೆ ತನ್ನ ಮಗಳ ಫೋಟೋ ತೋರಿಸುವಷ್ಟರ ಮಟ್ಟಿಗೆ ಹತ್ತಿರವಾಗಿದ್ದಾನೆ. ನಿರೂಪಕನ ಮನಸ್ಸು ಬಾಬುವಿನ ದುಃಖದೊಂದಿಗೆ – ಅದು…
ಬೆಂಗಳೂರು : ಬೇವಿನಹಳ್ಳಿಯ ‘ಜಿಗುರು’ ತಂಡದ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 9ನೇ ಮಾರ್ಚ್ 2025ರಂದು ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ‘ರುಮುರುಮುರುಮು’ ಪೂರ್ವಿಕರ ನಾದ ‘ಜಂಗಮ ಕಲೆಕ್ಟಿವ್’ ತಂಡ ತನ್ನ ಮೊದಲ ಪ್ರದರ್ಶನ ನೀಡುತ್ತಿದೆ. ಶಿರಾ ಸೀಮೆಯ ‘ಬೇವಿನಹಳ್ಳಿ’ಯ ಅಪ್ರತಿಮ ಅರೆ ಮತ್ತು ನಾದಸ್ವರದ ಕಲಾವಿದರು ತಮ್ಮ ಕಲೆ ಮತ್ತು ಬದುಕಿನ ಅನುಭವಗಳನ್ನು ಬೆಸದುಕೊಂಡು ಕಟ್ಟಿರುವ ವಿಶೇಷ ಪ್ರಯೋಗ. ಹೊಸ ತಲೆಮಾರಿನ ಅನನ್ಯ ನಟಿ, ಬರಹಗಾರ್ತಿ, ಸಿನಿಮಾ ನಿರ್ದೇಶಕಿ ‘ ಶ್ರದ್ದಾ ರಾಜ್’ ಇವರು ತಿಂಗಳ ಕಾಲ ಬೇವಿನಹಳ್ಳಿಯಲ್ಲಿ ಇದ್ದು ವಿಭಿನ್ನ ಪ್ರಕ್ರಿಯೆಯಲ್ಲಿ ಈ ನಾಟಕವನ್ನು ಕಟ್ಟಿದ್ದಾರೆ. ತಳ ಸಮುದಾಯಗಳ ಕಲೆ ಮತ್ತು ಕಲಾವಿದರ ಜೊತೆಗಿನ ಒಡನಾಟವನ್ನು ಒಂದು ಸಾಂಸ್ಕೃತಿಕ ಚಳುವಳಿಯೆಂದು ಭಾವಿಸಿ ಜಂಗಮ ತಂಡ ಹಿಂದೆ ‘ಕೇರಿ ಹಾಡು’ ಪ್ರಯೋಗವನ್ನು ಮಾಡಿತ್ತು. ಚಂದ್ರಶೇಕರ್ ಇವರು ದಿಂಡಗೂರಿನ ‘ಸಾವಿತ್ರಿ ಬಾಫುಲೆ ಮಹಿಳಾ ಸ್ವಸಹಾಯ ತಂಡ’ಕ್ಕೆ ಅದನ್ನು ನಿರ್ದೇಶಿಸಿದ್ದರು. ಪ್ರಸ್ತುತ ಅರೆಯ ನಾದ ಮತ್ತು ಬದುಕಿನ ‘ರುಮುರುಮುರುಮು’ ಜಂಗಮ…
ನೋಯ್ಡ : ಉತ್ತರ ಭಾರತದ ಅಮಿಟಿ ವಿಶ್ವವಿದ್ಯಾನಿಲಯ ನೋಯ್ಡದಲ್ಲಿ ದಿನಾಂಕ 03 ಮಾರ್ಚ್ 2025ರಿಂದ 07 ಮಾರ್ಚ್ 2025ರವರೆಗೆ ನಡೆದ 38ನೇ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಅಂತರ್ ವಿ.ವಿ. ರಾಷ್ಟ್ರೀಯ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಹಿಂದು ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಮಂಗಳೂರು ವಿ.ವಿ.ಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಹಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು, ನಿರ್ಮಿಕಾ ಎನ್. ಸುವರ್ಣ, ಭರತ್, ಜಿತಿನ್ ಜೆ. ಶೆಟ್ಟಿ, ಚಿರಾಗ್, ಜ್ಞಾನೇಶ್ ಎಲ್. ಶೆಟ್ಟಿ, ವೈಭವಿ, ಹಿತಾ ಉಮೇಶ್ ಇವರು ಭಾಗವಹಿಸಿದ್ದರು. ಹಿಮಾಂಗಿ ಡಿ. ಉಳ್ಳಾಲ್ ತಬ್ಲಾ ಸೋಲೋ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತಗಳಲ್ಲಿ ನಿರಂತರವಾಗಿ ಅಭೂತ ಪೂರ್ವ ದಾಖಲೆಗಳನ್ನು ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸುತ್ತಿದ್ದು, ಅನೇಕ ಪ್ರತಿಷ್ಠಿತ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರು : ಕ್ರಾನಿಕಲ್ಸ್ ಆಫ್ ಇಂಡಿಯಾ ಅಭಿನಯಿಸುವ ಗಣೇಶ್ ಮಂದಾರ್ತಿ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನವನ್ನು ದಿನಾಂಕ 11 ಮಾರ್ಚ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರು ಜೆ.ಪಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8867419347, 9845384528 ಮತ್ತು 9740145042 ಸಂಖ್ಯೆಯನ್ನು ಸಂಪರ್ಕಿಸಿರಿ. ನಾಟಕದ ಬಗ್ಗೆ : ಏಕ ಕಾಲಕ್ಕೆ ಇದೊಂದು ಪೌರಾಣಿಕ ಮತ್ತು ಸಾಮಾಜಿಕ ನಾಟಕ. ಇಲ್ಲಿ ಎರಡು ಕಥಾಹಂದರವಿದೆ. ಒಂದು ಶಿವನ ಪುರಾಣ ಕತೆಗಳದ್ದು ; ಇನ್ನೊಂದು – ಶಿವನ ಪಾತ್ರಧಾರಿಯ, ಊರಿನ ಕತೆ. ಶಿವ ನಮ್ಮ ನಾಡಿನ ಪುರಾತನ ಪ್ರತಿಮೆ, ಆತ ತಳಸಮುದಾಯದವರ ದೇವರು. ಶಿವನಿಗೆ ನಟಶೇಖರನೆಂಬ ಹೆಸರಿದೆ ಹಾಗೂ ಕಾಮನನ್ನೇ ಸುಡುವ ಯೋಗಿ – ಶಿವ ದಾಕ್ಷಾಯಿಣಿಯ ಹೆಣ ಹೊತ್ತು ತಿರುಗುವ ಕಡುಮೋಹಿ ಕೂಡ. ಆತ ಎರಡು extreme ( ಭವ-ಪರ )ಗಳಲ್ಲಿ ತೀವ್ರವಾಗಿ ಬದುಕುವವ. ಅವನ ಭವದ ಪರಿಪಾಟಲುಗಳ, ಪ್ರೇಮದ, ಕುಟುಂಬದ ಕತೆಗಳನ್ನಷ್ಟೇ ನಾವಿಲ್ಲಿ ಆರಿಸಿದ್ದೇವೆ. ಇಲ್ಲಿ…
ಪಣಜಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತಾಶ್ರಯದಲ್ಲಿ ‘ಯಕ್ಷಶರಧಿ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಪಣಜಿಯ ಮೆನೆಝೆಸ್ ಭ್ರಗಾಂಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಗೋವಾ ಬಂಟ್ಸ್ ಸಂಘದ ಕಾರ್ಯದರ್ಶಿ ಸುನಿಲ್ ಶೆಟ್ಟಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ‘ಯಕ್ಷಸಾಹಿತ್ಯ-ಸಾಂಗತ್ಯ’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಪುರೋಹಿತರು ಮತ್ತು ಅರ್ಥದಾರಿಗಳಾದ ಅಜಿತ ಕಾರಂತ ಟಿ.ವಿ. ಇವರಿಂದ ವಿಚಾರ ಸಂಕಿರಣ ನಡೆಯಲಿದೆ. ಹೊನ್ನವಳ್ಳಿಯ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಇವರಿಂದ ‘ಶರಸೇತು ಬಂಧನ’ ತಾಳಮದ್ದಲೆ ಹಾಗೂ ಹಳುವಳ್ಳಿ ಕಳಸದ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ (ರಿ.) ಇವರಿಂದ ‘ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ವಿಟ್ಲ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಸೂರಿಕುಮೇರು ಸಮೀಪದ ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಕದಂಬ ಕೌಶಿಕೆ’ ತಾಳಮದ್ದಳೆಯು ದಿನಾಂಕ 07 ಮಾರ್ಚ್ 2025ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ಪದ್ಯಾಣ ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭಾಸುರ), ಶುಭಾ ಅಡಿಗ (ರಕ್ತಬೀಜಾಸುರ), ಶುಭಾ ಗಣೇಶ್ ಮತ್ತು ಭಾರತಿ ರೈ ಅರಿಯಡ್ಕ (ಚಂಡ ಮುಂಡರು) ಸಹಕರಿಸಿದರು. ಸತತ ಇಪ್ಪತ್ತು ವರ್ಷಗಳಿಂದ ತಾಳಮದ್ದಳೆಯ ಪ್ರಾಯೋಜಕರಾಗಿ ಸಹಕರಿಸಿದ ಬೊಳುವಾರು ಬಾಬುರಾಯ್ ಹೋಟೇಲಿನ ಮಾಲಕರಾದ ಶ್ರೀಮತಿ ಮತ್ತು ಶ್ರೀ ಶಿವಾನಂದ ಪ್ರಭು ಹಾಗೂ ಶ್ರೀ ದೇವಳದ ಧರ್ಮದರ್ಶಿಗಳಾದ ಶ್ರೀ ರಾಖೇಶ್ ಪ್ರಭು ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು.
ಕನ್ನಡ ಲೇಖಕಿಯಾಗಿ ಸಮಾಜ ಸೇವಕಿಯಾಗಿ ಖ್ಯಾತಿ ಗಳಿಸಿರುವ ಸಿ. ಎನ್. ಜಯಲಕ್ಷ್ಮೀಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಗೈದ ಖ್ಯಾತ ಬರಹಗಾರ್ತಿ. ಇವರ ಮೂರು ಕಾದಂಬರಿಗಳು ಮೂರು ಕಥಾ ಸಂಕಲನಗಳು, ಎರಡು ನಾಟಕಗಳು, ಏಳು ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ ಸೇರಿದಂತೆ ಒಟ್ಟು ಹದಿನೇಳು ಕೃತಿಗಳನ್ನು ರಚಿಸಿ ಹೆಸರು ಪಡೆದಿದ್ದಾರೆ. ಅವರ ಕೃತಿಗಳು ಹೀಗಿವೆ – ಕಾದಂಬರಿಗಳು – ಗ್ರಾಮಲೀಲೆ (ಸಾಮಾಜಿಕ), ಶಪ್ತವಾಪಿ, ಗಂಗರಸರ ದುರ್ವಿನೀತ (ಐತಿಹಾಸಿಕ) ಕಥಾ ಸಂಕಲನಗಳು – ಶುಭದೃಷ್ಠಿ, ನಾರಿಯರ ಹಲವು ಮುಖಗಳು, ಅನಾಮಿಕ ಮತ್ತು ಇವರ ಕಥೆಗಳು ಮಕ್ಕಳ ಸಾಹಿತ್ಯ – ಸ್ನೇಹ ಸಾಮ್ರಾಜ್ಯ, ಚೋರನಲ್ಲ ದಂಗೆಕೋರ, ಕೋಳೂರು ಕೊಡಗೂಸು, ಸಮುದ್ರ ಮತ್ತು ಸಾಗರ ಸಂಗಮ, ಅಭಯಾರಣ್ಯದಲ್ಲಿ ಒಂದು ಅನುಭವ, ಮಹಾಭಾರತದಲ್ಲಿ ಪ್ರಾಣಿಗಳು ಜೀವನ ಚರಿತ್ರೆ – ರಾಜಾರಾಮ್ ಮೋಹನ ರಾಮ್ ಜನಪ್ರಿಯ ಜೈಮಿನಿ ಭಾರತದ ಗದ್ಯ ಕೃತಿ ಮತ್ತು ‘ದಶರಥ’ ಮತ್ತು ‘ದೇವಯನಿ’ ಎರಡು ನಾಟಕಗಳು ಜಯಲಕ್ಷ್ಮೀದೇವಿಯವರು ಅವರ ಎರಡೂ ನಾಟಕಗಳಲ್ಲಿ ನಟಿಯಾಗಿಯೂ ಗಣನೀಯ ಅಭಿನಯ…