Author: roovari

08 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ “ತುಳು ಹರಿಕಥೆ ಉಚ್ಚಯ-2023”ರ ಉದ್ಘಾಟನೆಯನ್ನು ದಿನಾಂಕ 07-04-2023ರಂದು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳದ ನಿವೃತ್ತ ಮುಖ್ಯೋಪಾಧ್ಯಯರಾದ ಕೆ. ರವೀಂದ್ರ ರೈ ಕಲ್ಲಿಮಾರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮೂಕಾಂಬಿಕಾ ಕನ್ ಸ್ಟ್ರಕ್ಷನ್ ನ ಮಾಲೀಕರಾದ ಹರಿದಾಸ್ ಮಾಡೂರು ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸೌಮ್ಯ ಆರ್ ಶೆಟ್ಟಿ, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿವೇಕಾನಂದ ಸನಿಲ್, ತುಳುವ ಸಿರಿ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ, ಸಂಚಾಲಕರಾದ ಅನಂತಕ್ರಷ್ಣ ಯಾದವ್, ಸುರೇಶ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.…

Read More

08 ಏಪ್ರಿಲ್ 2023, ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ನಾಲ್ಕು ದಿವಸಗಳ ಅಂತರ ಕಾಲೇಜು ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಯಾನ -2023’ನ್ನು ದಿನಾಂಕ 07-04-2023ರಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಉದ್ಘಾಟಿಸಿ, “ದೈವೀ ಕಲೆಯಾದ ಯಕ್ಷಗಾನದ ಮೂಲಕ ಮಾನವೀಯ ಮೌಲ್ಯಗಳ ಪ್ರಸಾರವಾಗುತ್ತಿದೆ. ವಿದ್ಯಾರ್ಥಿಗಳು ಯಕ್ಷಗಾನ ಕಲೆಯ ಕುರಿತು ಆಸಕ್ತರಾಗುತ್ತಿರುವುದು ಶ್ಲಾಘನೀಯ” ಎಂದರು. ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾ‌ರ್ ಎಚ್. ಮಾತನಾಡಿ “ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆ ಯಕ್ಷಗಾನದ ಶ್ರೇಷ್ಠ ಪರಂಪರೆ ಹೊಂದಿದ್ದು ಮೌಲ್ಯಾಧಾರಿತ ಶಿಕ್ಷಣವನ್ನು ಸದಾ ಪ್ರೋತ್ಸಾಹಿಸುತ್ತದೆ” ಎಂದರು. ಅಗರಿ ಎಂಟ‌ರ್ ಪ್ರೈಸಸ್‌ನ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಪರಿಪೂರ್ಣ ಕಲೆಯಾದ ಯಕ್ಷಗಾನವನ್ನು ಯುವ ತಲೆಮಾರಿಗೆ ಪರಿಚಯಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ” ಎಂದರು. ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ವೈ.ವಿ.ರತ್ನಾಕರ ರಾವ್,…

Read More

08 ಏಪ್ರಿಲ್ 2023, ಪುತ್ತೂರು: ಪುತ್ತೂರಿನ ಸಮೀಪದಲ್ಲಿರುವ ಸೌಗಂಧಿಕಾದಲ್ಲಿ ಈ ವರ್ಷದ ವಸಂತ ಕಾಲದ ಚಿತ್ರಕಲಾ ಪ್ರದರ್ಶನವು ಏಪ್ರಿಲ್ ಎಂಟರಂದು ಶನಿವಾರ ಸಂಜೆ ಅನಾವರಣಗೊಳ್ಳಲಿದೆ. ಬೆಂಗಳೂರಿನ ಯುವ ಕಲಾವಿದರಾದ ಆದಿತ್ಯ ಸದಾಶಿವ ಮೂರ್ತಿಯವರು ಜಲ ವರ್ಣದಿಂದ “ವಾಷಿಂಗ್ ಮೆಥಡ್” ತಂತ್ರಜ್ಞಾನದಲ್ಲಿ ರಚಿಸಿರುವ ಕಲಾಕೃತಿಗಳು “ಮುಖಗಳು” ಎನ್ನುವ ಶೀರ್ಷಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಲಾಕೃತಿಗಳು ಭಾರತೀಯ ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗದ ಜನಪದ ಶೈಲಿಯ ಮುಖಗಳ ಅಧ್ಯಯನದ ಬಳಿಕ ರಚಿಸಿರುವ ಕಲಾಕೃತಿಗಳಾಗಿರುತ್ತವೆ. ವಿಶ್ವ ರಂಗಭೂಮಿಯ ಸಂಭ್ರಮ ಆಚರಣೆಯ ಪ್ರಯುಕ್ತ ನಡೆಯಲಿರುವ ಈ ಕಲಾ ಪ್ರದರ್ಶನವು ಮುಖಗಳ ಭಾವನೆಗಳ ಬಣ್ಣದೊಂದಿಗೆ ನಮ್ಮ ರಂಗ ಬಾಂಧವ್ಯದ ಸೊಗಸನ್ನು ಹೆಚ್ಚಿಸುವಂಥದ್ದು. 1996ರಲ್ಲಿ ಬೆಂಗಳೂರು ಮಹಾನಗರಿಯಲ್ಲಿ ಜನಿಸಿರುವ ಆದಿತ್ಯ ಬಾಲ್ಯದಲ್ಲಿ ತನ್ನ ತಂದೆ ಹಿರಿಯ ಕಲಾವಿದರಾದ ಎಂ. ಎಸ್.ಮೂರ್ತಿಯವರು ಸ್ಟುಡಿಯೋದಲ್ಲಿ ರಚಿಸುತ್ತಿದ್ದ ರೇಖೆಗಳನ್ನು, ತೈಲ ವರ್ಣ, ಜಲ ವರ್ಣ ಕಲಾಕೃತಿಗಳನ್ನು ಬಿತ್ತಿ ರೂಹುಗಳನ್ನು ನೋಡುತ್ತಾ ಗೆರೆಗಳನ್ನು ಎಳೆಯುತ್ತಾ ಚಿತ್ರಕಲೆ ಕಲಿಯಲಾರಂಭಿಸಿದವರು. ತದನಂತರ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಿಂದ “ದೃಶ್ಯ ಮತ್ತು…

Read More

07 ಏಪ್ರಿಲ್ 2023, ಉಡುಪಿ: ರಥಬೀದಿ ಗೆಳೆಯರು (ರಿ.) ಉಡುಪಿ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಹಿರಿಯ ಅಂಕಣಕಾರ ಡಾ. ಬಿ. ಭಾಸ್ಕರ ರಾವ್ ಇವರ “ಸಾರ್ವಕಾಲಿಕ” ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 09-04-2023 ಭಾನುವಾರ ಸಂಜೆ 4-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜು, ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪುಸ್ತಕದ ಲೋಕರ್ಪಣೆಯನ್ನು ಹಿರಿಯ ಸಾಹಿತಿಗಳಾದ ಡಾ. ನಾ.ಮೊಗಶಾಲೆಯವರು ನೆರವೇರಿಸಲಿದ್ದು, ಶಿಕ್ಷಣ ತಜ್ಞರು, ಲೇಖಕರು ಡಾ. ಮಹಾಬಲೇಶ್ವರ ರಾವ್ ಇವರು ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ಪುಸ್ತಕದ ಲೇಖಕರಾದ ಡಾ. ಬಿ. ಭಾಸ್ಕರ ರಾವ್ ಇವರ ಉಪಸ್ಥಿತಿಯಲ್ಲಿ ಶ್ರೀ. ಜಿ.ಪಿ. ಪ್ರಭಾಕರ ತುಮರಿಯವರು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ. ಲೇಖಕರ ಕುರಿತು : ಕನ್ನಡದ ಸುಪ್ರಸಿದ್ದ ಅಂಕಣಕಾರರು ಹಾಗೂ ಸಂಸ್ಕೃತಿ ವಿಮರ್ಶಕರಾಗಿರುವ ಡಾ. ಬಿ. ಭಾಸ್ಕರ ರಾವ್ ಹೈದರಾಬಾದ್ ನ ಇಂಗ್ಲೀಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿ ಮತ್ತು ಇಂಗ್ಲೆಂಡ್ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದು ಮೂರು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ನಲ್ವತ್ತು ವರ್ಷಗಳ…

Read More

07 ಏಪ್ರಿಲ್ 2023, ಮಂಗಳೂರು: ಮಂಗಳೂರು ಗಮಕ ಪರಿಷತ್ತಿನ ವತಿಯಿಂದ ತಲಪಾಡಿಯ ದೇವಿನಗರದ ಶ್ರೀಮತಿ ಮತ್ತು ಶ್ರೀ ಮಂಜುನಾಥ ಭಟ್ ಇವರ ಮನೆಯಂಗಳದಲ್ಲಿ ಚೊಚ್ಚಲ ಕಾರ್ಯಕ್ರಮ ನಡೆಯಿತು. ಗಮಕ ಕಾರ್ಯಕ್ರಮಕ್ಕೆ ಜನರು ಬರುವುದಲ್ಲ, ಜನರಿದ್ದಲ್ಲಿಗೆ ನಾವೇ ಹೋಗಿ ಕಾರ್ಯಕ್ರಮ ನೀಡಿ ಜನರಲ್ಲಿ ಗಮಕದ ಬಗ್ಗೆ ಆಸಕ್ತಿ ಕೆರಳಿಸಿ ಅಭಿರುಚಿ ಉಂಟು ಮಾಡುವುದೇ ಮನೆ ಮನೆ ಗಮಕ ಕಾರ್ಯಕ್ರಮದ ಉದ್ದೇಶ. ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀಯುತ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಮೃತ ಹಸ್ತದಿಂದ ದೀಪ ಬೆಳಗುವುದರೊಂದಿಗೆ ಮನೆ ಮನೆ ಗಮಕದ ಮೊದಲ ಪಲ್ಲವ ಚಿಗುರೊಡೆಯಿತು. ಕಾರ್ಯಕ್ರಮದ ಅನಿವಾರ್ಯತೆ, ಉದ್ದೇಶ, ಇತಿಹಾಸ ಮತ್ತು ಮಹತ್ವ ತಿಳಿಸಿದ ಕಲ್ಕೂರರು ಈ ಗಮಕ ಪಲ್ಲವ ಚಿಗುರಿ, ರೆಂಬೆ ಕೊಂಬೆಗಳಿಂದ ಸಮೃದ್ಧವಾಗಿ ಹೂತು, ಕಾಯಾಗಿ ಹೊಸ ಹೊಸ ಮರಗಳು ಹುಟ್ಟಿ ನಂದನವನವಾಗಲಿ ಎಂದು ಹಾರೈಸಿದರು. ಕುಮಾರವ್ಯಾಸ ಭಾರತದ ದೂರ್ವಾಸ ಆತಿಥ್ಯ ಭಾಗವನ್ನು ಗಮಕಿ ಸುರೇಶ್ ರಾವ್ ಅತ್ತೂರು ವಾಚಿಸಿದರು. ವಿದ್ವಾಂಸರಾದ ಸರ್ಪಂಗಳ ಈಶ್ವರ ಭಟ್ ಅವರು ಮನೋಜ್ಞವಾಗಿ ವ್ಯಾಖ್ಯಾನ ಮಾಡಿದರು.…

Read More

07 ಏಪ್ರಿಲ್ 2023, ಮಂಗಳೂರು: ಉರ್ವಸ್ಟೋರ್‌ನಲ್ಲಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಭಾಷಾ ಸಂಘದ ಸಹಯೋಗದಲ್ಲಿ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 40ನೇ ಕೃತಿ “ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ” ಹಾಗೂ 41ನೇ ಕೃತಿ “ಎಲ್ಲಿಗೋ ಪಯಣ ಯಾವುದೋ ದಾರಿ” ಲೋಕಾರ್ಪಣೆಗೊಂಡಿತು. ಇವೆರಡೂ ಲೇಖನಗಳ ಸಂಕಲನವಾಗಿದೆ. ”ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ” ಕೃತಿಯನ್ನು ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್‌ ಬಿಡುಗಡೆಗೊಳಿಸಿದರು. ”ಎಲ್ಲಿಗೋ ಪಯಣ ಯಾವುದೋ ದಾರಿ” ಕೃತಿಯನ್ನು ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಬಿಡುಗಡೆಗೊಳಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ.ಮಾಲಿನಿ ಎನ್. ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಭಾಷಾ ಸಂಘದ ಸಂಯೋಜಕಿ ಪೂರ್ಣಿಮಾ ಕುಮಾರಿ ಬಿ., ಉಪನ್ಯಾಸಕಿ ಡಾ. ನಾಗವೇಣಿ ಮಂಚಿ, ಮಂಗಳಾ ಪತ್ರಿಕೆಯ ಟಿ.ಕೆ. ಸುನಿಲ್, ವಿದ್ಯಾರ್ಥಿ ಸಂಯೋಜಕಿ ಕವಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಕೃತಿ ಸ್ವರಚಿತ ಕವನ ವಾಚಿಸಿದರು. ಕೃತಿಕಾರ ಶ್ರೀನಿವಾಸ ಜೋಕಟ್ಟೆ ಪ್ರಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಕಾವೇರಿ ಸ್ವಾಗತಿಸಿ, ಸಾವಿತ್ರಿ ವಂದಿಸಿದರು. ಭುವನ್ ಶೆಟ್ಟಿ ನಿರ್ವಹಿಸಿದರು.

Read More

07 ಎಪ್ರಿಲ್ 2023, ಬಾಗಲಕೋಟೆ: ನಟರಾಜ ಸಂಗೀತ ನೃತ್ಯ ನಿಕೇತನ (ರಿ) ವಿದ್ಯಾಗಿರಿ, ಬಾಗಲಕೋಟೆ, ನೃತ್ಯ ಸಂಸ್ಥೆಯ ನಿರ್ದೇಶಕರಾದ, ಹಿರಿಯ ನೃತ್ಯಗುರುಗಳಾದ ವಿದುಷಿ ಶುಭದಾ ದೇಶಪಾಂಡೆ ಅವರು ತಮ್ಮ ವಿದ್ಯಾರ್ಥಿಗಳಿಗಾಗಿ, ಮಂಗಳೂರಿನ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿ,  ಎರಡು ದಿನಗಳ  “ತಾಳ ಪ್ರಕ್ರಿಯಾ” ಕಾರ್ಯಗಾರವನ್ನು ಆಯೋಜಿಸಿದ್ದಾರೆ.ಈ ಕಾರ್ಯಗಾರವು ಇದೇ ಎಪ್ರಿಲ್ 8,  ಶನಿವಾರ ಮತ್ತು ಎಪ್ರಿಲ್ 9, ಭಾನುವಾರದಂದು ನಟರಾಜ ನೃತ್ಯ ಸಂಸ್ಥೆ,ಬಾಗಲಕೋಟೆ ಇಲ್ಲಿ ಜರುಗಲಿದೆ. ಇದು ಮಂಜುನಾಥ್ ಅವರ 67 ನೇ ಕಾರ್ಯಾಗಾರವಾಗಿದೆ.

Read More

07 ಏಪ್ರಿಲ್ 2023, ಪುತ್ತೂರು: ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ಒಡಿಯೂರು‌ ಶ್ರೀ‌ ಸಂಸ್ಥಾನದಲ್ಲಿ ನಡೆದ “ಹನೂಮ ಜಯಂತಿ‌”ಯ ಅಂಗವಾಗಿ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀ ಶ್ರೀ ಮಾತಾನಂದ‌ಮಯಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದಿನಾಂಕ 06-04-2023ನೇ ಗುರುವಾರ ಸಂಜೆ “ಹನೂಮ ವಿಜಯ” (ವೀರಮಣಿ ಕಾಳಗ) ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಮುರಳೀಕೃಷ್ಣ ಶಾಸ್ತ್ರೀ ತೆಂಕಬೈಲು, ಉಷಾ ಒಡಿಯೂರು, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಹನೂಮಂತ (ಶುಭಾ ಜೆ.ಸಿ. ಅಡಿಗ‌) ಈಶ್ವರ (ಕಿಶೋರಿ ದುಗ್ಗಪ್ಪ ನಡುಗಲ್ಲು) ವೀರಮಣಿ (ಹರಿಣಾಕ್ಷೀ ಜೆ. ಶೆಟ್ಟಿ) ಶತ್ರುಘ್ನ (ಮನೋರಮಾ ಜಿ. ಭಟ್) ಶ್ರೀ ರಾಮ (ಶಾರದಾ ಅರಸ್) ಸಹಕರಿಸಿದರು. ಪೂಜ್ಯ ಶ್ರೀಗಳು ಕಲಾವಿದರನ್ನು ಗೌರವಿಸಿ ಆಶೀರ್ವದಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ವಂದಿಸಿದರು.

Read More

ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಅವಿರತವಾದ ಸಾಧನೆ, ಸತತ ಅಭ್ಯಾಸ, ಅರ್ಪಣಾಭಾವಗಳಿಂದ ಮಾತ್ರ ಸಾಧ್ಯ. ಕಲಾವಿದನು ಪಾತ್ರವಾಗಬೇಕಾದರೆ ಅದರ ಸ್ವಭಾವವೇನೆಂದು ಅರಿತು ಅಭ್ಯಸಿಸಬೇಕು. ಆಳವಾದ ಅಧ್ಯಯನ ಅತ್ಯಗತ್ಯ. ಒಂದರ್ಥದಲ್ಲಿ ‘ಪರಕಾಯ ಪ್ರವೇಶ’. ಇಲ್ಲವಾದರೆ ಪಾತ್ರವು ಪೇಲವವಾಗುವುದನ್ನು ನಾವು ಕಾಣಬಹುದು. ಹೀಗೆ ಸತತ ಪರಿಶ್ರಮದಿಂದ, ಅಧ್ಯಯನದಿಂದ ಉತ್ತಮ ವೇಷಧಾರಿಯಾಗಿ ಹೆಸರನ್ನು ಗಳಿಸಿಕೊಂಡವರು ವೈ ಎಲ್ ವಿಶ್ವರೂಪ ಮಧ್ಯಸ್ಥ. 07.04.1989ರಂದು ಶ್ರೀಯುತ ವೈ ಲಕ್ಷ್ನೀನಾರಾಯಣ ಮಧ್ಯಸ್ಥ ಹಾಗೂ ಶ್ರೀಮತಿ ಮಂಜುಳ ಇವರ ಮಗನಾಗಿ ಜನನ. ಬಿ ಕಾಂ ಇವರ ವಿದ್ಯಾಭ್ಯಾಸ. ತಂದೆ ವೈ ಲಕ್ಷ್ನೀನಾರಾಯಣ ಮಧ್ಯಸ್ಥ ಅವರ ಪ್ರೇರಣೆಯಿಂದ ವಿಶ್ವರೂಪ ಅವರು ಯಕ್ಷಗಾನ ರಂಗಕ್ಕೆ ಬಂದರು. ಶ್ರೀಯುತ ರಾಧಾಕೃಷ್ಣ ನಾಯ್ಕ ಚೇರ್ಕಾಡಿ, ಶ್ರೀಯುತ ಗಣೇಶ ನಾಯ್ಕ ಚೇರ್ಕಾಡಿ, ಶ್ರೀಯುತ ಹಿರಿಯಣ್ಣ ಶೆಟ್ಟಿಗಾರ್, ಮಂದಾರ್ತಿ ಇವರ ಬಡಗುತಿಟ್ಟು ಯಕ್ಷಗಾನ ಗುರುಗಳು. ಶ್ರೀಯುತ ಮಹೇಶ್ ಕುಮಾರ್…

Read More

06 ಏಪ್ರಿಲ್ 2023, ಮೈಸೂರು: ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಏಪ್ರಿಲ್ 08 ಮತ್ತು 09ರಂದು ಸಂಜೆ 06.3೦ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ 2022-23ನೇ ಸಾಲಿನ ರಂಗಾಭ್ಯಾಸಿಗಳ ಎರಡನೇ ಅಭ್ಯಾಸಿ ಪ್ರಯೋಗ ಆಂಟನ್ ಚೆಕಾವ್ ಅವರ ರಚನೆಯ ‘ಚೆರ್ರಿ ತೋಟ’ ಎಂಬ ನಾಟಕವು ಎನ್.ಎಸ್.ಡಿ. ಪದವೀಧರೆ ಯಶಸ್ವಿನಿ ರಾವ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಅನುವಾದ ಶ್ರೀ ವೆಂಕಟೇಶ್ ಪ್ರಸಾದ್ ಹಾಗೂ ವಿನ್ಯಾಸ ಶ್ರೀ ಅರುಣ್ ಮೂರ್ತಿ…

Read More