Author: roovari

ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಇವರು ಸುರತ್ಕಲ್‌ನ ಮೇಲು ಸೇತುವೆಯ ತಳಭಾಗದ ಎಂ.ಸಿ.ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸುತ್ತಿರುವ ಉದಯರಾಗ ಸರಣಿ ಕಾರ್ಯಕ್ರಮದ 56ನೇ ಕಾರ್ಯಕ್ರಮವು ದಿನಾಂಕ 06 ಅಕ್ಟೋಬರ್ 2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್ ಮಾತನಾಡಿ “ಪ್ರಸಕ್ತ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಯುವ ಕಲಾವಿದರು ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ. ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಅವರ ಪ್ರತಿಭೆಯ ಪ್ರಕಾಶನಕ್ಕೆ ಸಾಮಾಜಿಕ ಸಂಸ್ಥೆಗಳು ಸಹಕಾರಿಗಳಾಗಬೇಕು.” ಎಂದು ನುಡಿದರು. ಚೆನ್ನೈ ಇಲ್ಲಿನ ನಮೃತಾ ಎಸ್. ಅವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು.ಇವರಿಗೆ ವಯಲಿನ್‌ನಲ್ಲಿ ಅನನ್ಯ ಪಿ.ಎಸ್. ಪುತ್ತೂರು ಹಾಗು ಮೃದಂಗದಲ್ಲಿ ಆಚಿಂತ್ಯ ಕೃಷ್ಣ ಪುತ್ತೂರು ಸಹಕರಿಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಇದರ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಮಾತನಾಡಿ “ಕನ್ನಡ ಕೃತಿಗಳನ್ನು ಆಧಾರಿಸಿ ಪೂರ್ಣ ಪ್ರಮಾಣದಲ್ಲಿ ಸಂಗೀತ…

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿದೆ. ಮೊದಲ ಐದು ಅತ್ಯುತ್ತಮ ಕವಿತೆಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಎರಡು ಮೆಚ್ಚುಗೆ ಬಹುಮಾನ ನೀಡಲಾಗುವುದು. ಬಹುಮಾನ ವಿಜೇತರಿಗೆ ಡಿಜಿಟಲ್ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ನೀಡಲಾಗುವುದು. ನಿಯಮಗಳು : * ಈ ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಈ ಸ್ಪರ್ಧೆಗೆ ಅರವತ್ತು ವರ್ಷದೊಳಗಿನವರು ಮಾತ್ರ ಕವನ ಕಳುಹಿಸಬಹುದು. * ಒಬ್ಬರು ಒಂದು ಸ್ವತಂತ್ರ ಕವನವನ್ನು ಮಾತ್ರ ಕಳುಹಿಸಬಹುದು. * ಅನುವಾದ, ಅನುಸೃಷ್ಟಿ, ರೂಪಾಂತರಿತ ಮತ್ತು ಪ್ರೇರಿತ ಕವನಗಳಿಗೆ ಅವಕಾಶವಿಲ್ಲ. * ಯಾವುದೇ ವಿಷಯದ ಕುರಿತು ಕವನ ಬರೆದು ಕಳುಹಿಸಬಹುದು. * ಕವನವನ್ನು docx ಮತ್ತು pdf ರೂಪದಲ್ಲಿ ಕಳುಹಿಸಬೇಕು. ಸ್ಪರ್ಧಿಗಳ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋ ಪ್ರತ್ಯೇಕವಾಗಿ ಕಳುಹಿಸಬೇಕು. * ಕವನ ಕಳುಹಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2024.…

Read More

ಮಂಗಳೂರು : ಮಂಗಳೂರಿನ ಯಕ್ಷಧಾಮದ ಜನಾರ್ದನ ಹಂದೆಯವರ ನೇತೃತ್ವದಲ್ಲಿ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಹೂವಿನಕೋಲು ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಕಾರದೊಂದಿಗೆ ದಿನಾಂಕ 7 ಅಕ್ಟೋಬರ್ 2024ರಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ ಇವರ ಸ್ವಗೃಹ ಕದ್ರಿ ಮಲ್ಲಿಕಾ ಬಡಾವಣೆಯಲ್ಲಿರುವ ‘ಪ್ರಾಸಾದ’ ಇಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಪ್ರಸಿದ್ಧ ತಾಳಮದ್ದಳೆಯ ಅರ್ಥದಾರಿ, ವಿದ್ವಾಂಸ ಪ್ರಭಾಕರ ಜೋಷಿ ಇವರು ಮಾತನಾಡಿ “ನವರಾತ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೆಚ್ಚು ವಿಶೇಷ. ಮಂಗಳೂರು ವಿಭಾಗದಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡು, ಸಾವಿರಕ್ಕೂ ಹೆಚ್ಚು ಸಮ್ಮಾನಗಳನ್ನು ಪೂರೈಸುವ ಏಕೈಕ ದೊಡ್ಡ ಸಂಸ್ಥೆ ಕಲ್ಕೂರ ಪ್ರತಿಷ್ಠಾನ. ಕಲಾ ತಂಡಗಳನ್ನು, ಕಲಾವಿದರನ್ನು ಸ್ವಾಗತಿಸಿಕೊಂಡು ಗೌರವಿಸುತ್ತಾ ಬೆಳೆದ ಸಂಸ್ಥೆಯನ್ನು ಶ್ಲಾಘಿಸೋಣ” ಎಂದು ಹೇಳಿದರು. “ಸನಾತನ ಸಂಸ್ಕೃತಿಯ ಮೂಲ ಸ್ವರೂಪ ಹೂವಿನಕೋಲು. ಮಕ್ಕಳ ಮೂಲಕ ಮನೆ ಮನೆಗಳಲ್ಲಿ ಅರಳುವ ಅದ್ಭುತ ಕಲೆ ಹೂವಿನಕೋಲು. ಈ ಹೂವಿನಕೋಲಿಗೆ ಅವಕಾಶ ನೀಡುವುದರ ಮೂಲಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಸಹಕಾರಿಯಾಗುತ್ತದೆ” ಎಂದು ಪ್ರದೀಪ…

Read More

ಸುರತ್ಕಲ್ : ಹಿಂದು ವಿದ್ಯಾದಾಯಿನೀ ಸಂಘ (ರಿ.) ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನ ಸಂಸ್ಕೃತ ವಿಭಾಗವು ಆಯೋಜಿಸಿದ ‘ಸಂಸ್ಕೃತೋತ್ಸವ’ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಸಂಸ್ಕೃತ ಭಾಷೆಯ ಮಹತ್ವ ಹಾಗೂ ಭಾಷೆಯ ರಕ್ಷಣೆ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಸಂಸ್ಕೃತ ಮಹಾ ವಿದ್ಯಾಲಯದ ವೇದಾಂತ ವಿಭಾಗದ ಪ್ರಾಧ್ಯಾಪಕ ಪ್ರೊ. ಷಣ್ಮುಖ ಹೆಬ್ಬಾರ್ ಮಾತನಾಡಿ “ಪ್ರಾಚೀನವಾದ ಸಂಸ್ಕೃತ ಭಾಷೆಯನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಸಂಸ್ಕೃತ ಭಾಷೆಯನ್ನು ದಿನ ನಿತ್ಯದ ಸಂವಹನದಲ್ಲಿ ಅಳವಡಿಸಿಕೊಂಡರೆ ಭಾಷೆಯ ರಕ್ಷಣೆಯಾಗುತ್ತದೆ.” ಎಂದು ನುಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ವೆಂಕಟರಮಣ ಭಟ್ ಮಾತನಾಡಿ “ಬಹಿರಂಗದ ಆಚರಣೆಗಳಿಗಿಂತ ಅಂತರಂಗದ ಚಿಂತನೆಗಳಿಂದ ಸುಂಸ್ಕೃತರಾಗಬೇಕು.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಸಂಸ್ಕೃತ ಭಾಷೆಗೆ ವಿಶ್ವದಲ್ಲೇ ಉನ್ನತ ಸ್ಥಾನಮಾನವಿದ್ದು ಭಾರತೀಯ ಪುರಾಣ,…

Read More

ಶಕ್ತಿನಗರ : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 274ನೇ ಕಾರ್ಯಕ್ರಮ ಅಂತರಾಷ್ಟ್ರೀಯ ಸಂಗೀತ ದಿವಸದ ಬಾಬ್ತು ಸಂಗೀತ ಸಂಧಿ ಕಾರ್ಯಕ್ರಮವು ದಿನಾಂಕ 6 ಅಕ್ಟೋಬರ್ 2024ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಸಂಗೀತಗಾರ ರೋಶನ್ ಬೇಳ ಗಂಟೆ ಬಾರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಯೊಲಿನ್ ವಾದಕ ಹಾಗೂ ತರಬೇತುದಾರ ನಿರಂಜನ್ ಸುನಿಲ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಮಾಂಡ್ ಸೊಭಾಣ್ ಖಜಾಂಚಿ ಎಲ್ರೊನ್ ರಾಡ್ರಿಗಸ್ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಸುಮೇಳ್ ಕೋಶಾಧಿಕಾರಿ ಕ್ಲಾರಾ ಪಿಂಟೊ ಉಪಸ್ಥಿತರಿದ್ದರು. ನಂತರ ಕೊಂಕಣಿ, ತುಳು, ಇಂಗ್ಲೀಷ್, ಹಿಂದಿ, ಮಲಯಾಳಮ್, ಮಣಿಪುರಿ, ಸಿಂಹಳೀ, ಸ್ಪಾನಿಶ್ ಹೀಗೆ ಎಂಟು ಭಾಷೆಗಳ ಸುಮಧುರ ಹಾಡುಗಳನ್ನು 46 ಜನ ಗಾಯಕರು ಹಾಡಿ ಮನ ರಂಜಿಸಿದರು. ರೋಶನ್ ಕ್ರಾಸ್ತಾ, ಸಂಜಯ್ ರಾಡ್ರಿಗಸ್, ಸಂಜೀತ್ ರಾಡ್ರಿಗಸ್ ಮತ್ತು ಸ್ಟಾಲಿನ್ ಡಿಸೋಜ ಸಂಗೀತದಲ್ಲಿ ಸಹಕರಿಸಿದರು. ಸುಮೇಳ್ ಸಂಯೋಜಿಕಿ ರೈನಾ ಸಿಕ್ವೇರಾ ಸ್ವಾಗತಿಸಿ, ಅನಿಲ್ ಡಿಕುನ್ಹಾ, ಅಜಯ್ ಡಿಸೋಜ ತಾಕೊಡೆ,…

Read More

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಶ್ರೀಮತಿ ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಬಂಟ್ವಾಳದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸ್ಥಾಪಕರಾದ ಇತಿಹಾಸ ಪ್ರಾಧ್ಯಾಪಕ ಪ್ರೊ. ತುಕರಾಂ ಪೂಜಾರಿಯವರಿಗೆ, ಹಿರಿಯ ಭಾಷಾತಜ್ಞ ಡಾ. ಯು.ಪಿ. ಉಪಾಧ್ಯಾಯ ಅವರ ಹೆಸರಿನ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಪ್ರಮುಖ ಸಂಪನ್ಮೂಲ ವ್ಯಕ್ತಿ ಆಗಿರುವ ಪ್ರೊ. ವರದರಾಜ ಚಂದ್ರಗಿರಿ ಇವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಕಾಸರಗೋಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಯು. ಮಹೇಶ್ವರಿಯವರಿಗೆ ಮತ್ತು ಹಿರಿಯ ರಂಗಕರ್ಮಿ ಶ್ರೀಪತಿ…

Read More

ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಮಗೆ ಅನೇಕ ಮಹಿಳಾ ಕಲಾವಿದೆಯರು ಕಾಣಲು ಸಿಗುತ್ತಾರೆ. ಇಂತಹ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಮಹಿಳಾ ಕಲಾವಿದೆ ಪ್ರೀತಿ ವಿನಾಯಕ ಹೆಗಡೆ ಜಾಲೀಮನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ವಸುಧಾ ವಿ. ಹೆಗಡೆ ಹಾಗೂ ವಿನಾಯಕ ಮ. ಹೆಗಡೆ ಇವರ ಸುಪುತ್ರಿ ಪ್ರೀತಿ ವಿನಾಯಕ ಹೆಗಡೆ ಜಾಲೀಮನೆ. ಶ್ರೀ ಉಮೇಶ ಹೆಗಡೆ ಹೊಂಕಣಕೇರಿ ಹಾಗೂ ಶ್ರೀ ವೆಂಕಟರಮಣ ಭಟ್ ಗುಡ್ಡೆ ಇವರುಗಳು ಯಕ್ಷಗಾನ ಕಲಿಕೆಯಲ್ಲಿ ಈಕೆಯನ್ನು ತಿದ್ದಿ ತೀಡಿದ ಗುರುಗಳು. ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:- “ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರ ಯಕ್ಷಗಾನದ ಶಿಸ್ತು, ನಡೆ, ಪಾತ್ರ ನಿರ್ವಹಣೆ, ವೇದಿಕೆ ಉಪಸ್ಥಿತಿ ಎಲ್ಲರನ್ನೂ ಸೂರೆಗೊಳ್ಳುವ ಹಾಗೆ ನನ್ನ ಮೇಲೆಯೂ ಪರಿಣಾಮ ಬೀರಿತು ಹಾಗೂ ಶ್ರೀ ಕಾರ್ತಿಕ ಚಿಟ್ಟಾಣಿ ಅವರ ನೃತ್ಯ, ಹೆಜ್ಜೆ ಮತ್ತು ಅಭಿನಯಕ್ಕೆ ಆಕರ್ಷಿತಳಾಗಿ, ಯಕ್ಷಗಾನವನ್ನು ಕಲಿಯಬೇಕು ಎನ್ನುವ ಇನ್ನಷ್ಟು ನನ್ನಲ್ಲಿ ಹಂಬಲ ಹೆಚ್ಚಾಯಿತು”…

Read More

ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನಾಚರಣೆ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರ ಗುರುವಾರದಂದು ಮಧ್ಯಾಹ್ನ 3-00 ಗಂಟೆಗೆ ಕುಂಜಿಬೆಟ್ಟಿನ ಐ.ವೈ.ಸಿ, ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ವಹಿಸಲಿದ್ದು, ಮಾಹೆಯ ಕುಲಪತಿಗಳಾದ ಡಾ. ಲೆ.ಜ.ಡಾ.ಎಂ.ಡಿ. ವೆಂಕಟೇಶ್, ಡಾ. ನಾರಾಯಣ ಸಭಾಹಿತ್, ವನ್ಯಜೀವಿ ತಜ್ಞರಾದ ಡಾ. ಕೆ. ಉಲ್ಲಾಸ್ ಕಾರಂತ ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರು ಕಾರಂತ ಸಂಸ್ಮರಣೆಯನ್ನು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಅಂಬಾಶಪಥ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರು – ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮತ್ತು ಶ್ರೀ ಸೃಜನ್ ಗಣೇಶ್ ಹೆಗಡೆ, ಮದ್ದಲೆ – ಎನ್.ಜಿ.…

Read More

ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಹಾಗೂ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು – ಜೊತೆಯಾಗಿ ಕನ್ನಡದ ಮಹತ್ವದ ಅನುವಾದಕಿ ಕೆ.ಎನ್. ವಿಜಯಲಕ್ಷ್ಮೀ ನೆನಪಿನ ಕಾವ್ಯ ಪ್ರಕಾರದ ಅನುವಾದ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಹ್ವಾನಿಸಲಾಗಿದೆ. ಮೊದಲು ನೋಂದಣಿ ಮಾಡಿದ 25 ಆಸಕ್ತ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಗ್ರೀಕ್ ಕವಯತ್ರಿ ಸ್ಯಾಪೋ ಒಳಗೊಂಡಂತೆ ಹಲವು ಮಹತ್ವದ ಕಾವ್ಯ ಮತ್ತು ನಾಟಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೆ.ಎನ್. ವಿಜಯಲಕ್ಷ್ಮಿ ಅವರ ನೆನಪಿನಲ್ಲಿ ಬೆಂಗಳೂರಿನ ಕನ್ನಡ ಭವನದ ‘ವರ್ಣ ಆರ್ಟ್ ಗ್ಯಾಲರಿ’ಯಲ್ಲಿ ದಿನಾಂಕ 25 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಮೂರು ದಿನಗಳ ಕಾಲ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ವಿಜೇತೆ ಡಾ. ಶಾಕೀರಾ ಖಾನುಂ ಇವರ ನಿರ್ದೇಶನದಲ್ಲಿ ಅನುವಾದ ಕಮ್ಮಟ ನಡೆಯಲಿದೆ. ಈ ಅನುವಾದ ಕಮ್ಮಟದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಅನುವಾದ ಕ್ಷೇತ್ರದಲ್ಲಿ ನುರಿತ ತಜ್ಞರು ಮೂರು ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಶಿಬಿರದ ನಿರ್ದೇಶಕರು : ಡಾ.…

Read More

ಜರ್ಮನಿ : ಜರ್ಮನಿಯು ಏಕೀಕರಣವಾದ ದಿನದಂದು ಮ್ಯೂನಿಕ್ ನಗರದ ಒಂದು ರಂಗ ಮಂದಿರದಲ್ಲಿ ದಿನಾಂಕ 3 ಅಕ್ಟೋಬರ್ 2024ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಯುರೋಪ್ ಘಟಕ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಅಧಿಕಾರಿಗಳಾಗಿರುವ ರಾಜೀವ್ ಚಿತ್ಕಾರ, ಮ್ಯೂನಿಕ್ ನಗರದ ಎಲ್‌.ಎಂ.ಯೂ. ವಿಶ್ವವಿದ್ಯಾಲಯ ಇಂಡಾಲಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ ಜೈಡನ್ಬೊಸ್ ಹಾಗೂ ಸನಾತನ ಅಕಾಡಮಿಯ ಅನೂಷಾ ಶಾಸ್ತ್ರಿ, ಸಿರಿಗನ್ನಡ ಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀಧರ ಲಕ್ಷ್ಮಾಪುರ ಹಾಗೂ ಫ್ರಾಂಕ್ಫರ್ಟ್ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷ ವೇದಮೂರ್ತಿ ಇವರುಗಳು ಆಗಮಿಸಿದ್ದರು. ಮುಖ್ಯ ಅತಿಥಿಗಳು ದೀಪ ಹಚ್ಚಿ ಸಾಂಕೇತಿಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕದ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಚಿತ್ಕಾರರು “ಯಕ್ಷಗಾನ ಈ ಮೊದಲು ನೋಡಿರಲಿಲ್ಲ. ಇದು ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ. ಇಂತಹ ಪ್ರಾಚೀನ ಕಲೆಯನ್ನು ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ ಈ ಯಕ್ಷಧ್ರುವ…

Read More