Author: roovari

ಹುಬ್ಬಳ್ಳಿ : ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ 2024ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಕನ್ನಡದ ಕವಿ ಮತ್ತು ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಮತ್ತು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು, ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ.10,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಇ-ಮೇಲ್ ಮೂಲಕ ಕಳಿಸುವುದಕ್ಕಿಂತ ಡಿಟಿಪಿ ಮಾಡಿದ ಅಥವಾ ಕೈಯಲ್ಲಿ ಬರೆದ ಹಸ್ತಪ್ರತಿ ಕಳಿಸಿಕೊಡಬೇಕು. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ 30-06-2024 ಆಗಿರುತ್ತದೆ. ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ : ಸುನಂದಾ ಪ್ರಕಾಶ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2024, ನಂ.90, ‘ನಾಗಸುಧೆ ಜಗಲಿ’, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- 580031, ದೂರವಾಣಿ ಸಂಖ್ಯೆ : 9380613683 ಅಥವಾ 9845779387.

Read More

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಗುರಿಕ್ಕಾನದ ಸುಂದರ ರೈ ಹಾಗೂ ಗುಲಾಬಿ ರೈ ಇವರ ಮಗನಾಗಿ 1.06.1984ರಂದು ಮನೋಹರ್ ರೈ ಬೆಳ್ಳಾರೆ ಅವರ ಜನನ. ಪದ್ಮನಾಭ ಪೂಜಾರಿ ಇವರ ನಾಟ್ಯ ಗುರುಗಳು, ಸುಣ್ಣoಬಳ ವಿಶ್ವೇಶ್ವರ ಭಟ್ ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇವರ ಅರ್ಥಗಾರಿಕೆ ಗುರುಗಳು. ತಂದೆ ಹಾಗೂ ತಾಯಿ ಬೆಳ್ಳಾರೆಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಕಥೆಯ ಸಾರಾಂಶ ಕೇಳಿಕೊಂಡು ಪದ್ಯ ನೋಡಿಕೊಂಡು ಅರ್ಥಗಾರಿಕೆ ತಿಳಿದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬೆಳ್ಳಾರೆ. ನಳ ದಮಯಂತಿ, ಸತ್ಯ ಹರಿಶ್ಚಂದ್ರ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ದಮಯಂತಿ, ಮಾನಿಷಾದದ ಸೀತೆ, ಅಂಬೆ, ಯಶೋಮತಿ, ವಸ್ತ್ರಾಪಹಾರ ದ್ರೌಪದಿ, ದೇವಿ ಇತ್ಯಾದಿ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ:- ಯಕ್ಷಗಾನದ ಇಂದಿನ ಸ್ಥಿತಿ ಒಳ್ಳೆಯ ರೀತಿಯಲ್ಲಿ ಇದೆ. ಕಾಲಮಿತಿ ಆದ ಕಾರಣ ಕಲಾವಿದರು ಸಿಗುತ್ತಾರೆ. ಯಾಕಂದ್ರೆ ತಂದೆ ತಾಯಂದಿರು ಮಕ್ಕಳಿಗೆ ಒಳ್ಳೆ…

Read More

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿ, ಮತ್ಯಾಡಿ ಗ್ರಾಮದ ಶ್ರೀಮತಿ ಚೆನ್ನು ಹಾಗೂ ದೇವ ದಂಪತಿಯರ ಮಗನಾಗಿ 01.06.1975ರಂದು ವೆಂಕಟೇಶ್ ಗುಡ್ಡೆಯಂಗಡಿ ಅವರ ಜನನ. ಸುಬ್ರಾಯ ಮಲ್ಯ ಹಳ್ಳಾಡಿ (1 ವರ್ಷ 1992), ಪ್ರಸಾದ್ ಕುಮಾರ್ ಮೊಗೆಬೆಟ್ಟು (2016 ರಿಂದ) ಇವರ ಯಕ್ಷಗಾನ ಗುರುಗಳು. ಬಾಲ್ಯದಿಂದಲೂ ಯಕ್ಷಗಾನದ ಮೇಲೆ ಪ್ರೀತಿ. ಗಣಪತಿ ಪೂಜೆಗೂ ಮುನ್ನ ಯಕ್ಷಗಾನಕ್ಕೆ ಹಾಜರಿ. ಯಕ್ಷಗಾನದಲ್ಲಿ ವೇಷ ಮಾಡಬೇಕು ಎನ್ನುವುದಕ್ಕೆ ನನಗೆ ನಾನೇ ಪ್ರೇರಣೆ; ಕಾರಣ ಬಡತನ. ನಾನು ಚೆಂದವಾಗಿ ಯಕ್ಷಗಾನ ಪದ ಹೇಳುವುದನ್ನು ಕೇಳಿ ನನ್ನ ಪ್ರೀತಿಯ ಗುರುಗಳಾದ ಸರ್ವೋತ್ತಮ ಹೆಗ್ಡೆ ಕೊಳ್ಕೆಬೈಲ್ ಇವರು ದ್ರೌಪದಿ ಪ್ರತಾಪದ ಬಲರಾಮನ ವೇಷ ಕೊಟ್ಟರು. ಅದರಲ್ಲಿನ ಯಶಸ್ಸಿನಿಂದ ಸುಬ್ರಾಯ ಮಲ್ಯರು ನನ್ನನ್ನು ಬಲರಾಮ ಎಂದೇ ಕರೆಯುತ್ತಿದ್ದರು. ಈಗ ದಕ್ಷ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ತುಂಬಾ ಪ್ರೇರಣೆ ಕೊಡುತ್ತಿದ್ದಾರೆ, ಅಲ್ಲದೇ ಮಕ್ಕಳಾದ ಹರ್ಷಿತ್ ಹಾಗೂ ಸುಮಂತ್ ಇಬ್ಬರೂ ನನ್ನಂತೆ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದಾರೆ. ನಾವೆಲ್ಲರೂ ಹವ್ಯಾಸಿ ಯಕ್ಷಗಾನ ಕಲಾವಿದರು. ಮಕ್ಕಳೂ ಉತ್ತಮ…

Read More

ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಆರನೇ ದಿನದ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷ ಹಾಗೂ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಮಾತನಾಡಿ “ನಮ್ಮ ದೇಶೀಯ ಕಲೆಗಳೆಲ್ಲವೂ ವಿಶ್ವಖ್ಯಾತಿಯನ್ನು ಪಡೆದಿವೆ. ಯಕ್ಷಗಾನ, ಭಾರತನಾಟ್ಯ ಯಾವುದೇ ಇರಲಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ ಎಂಬುದರಲ್ಲಿ ನಮಗೆ ಹೆಮ್ಮೆ ಇದೆ. ಯಾರನ್ನೂ ಕಲೆ ಬಿಟ್ಟಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬನೂ ಪ್ರತಿಭಾನ್ವಿತನಾಗಿರುತ್ತಾನೆ. ಅವಕಾಶ ಹಾಗೂ ಸಂದರ್ಭ ಒದಗಿದಾಗ ಆತನಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುತ್ತದೆ. ಇಂತಹಾ ಕಲಾರಾಧನೆಯನ್ನು ಯಾರು ಮಾಡುತ್ತಾರೋ ಅವರನ್ನು ಬೆಂಬಲಿಸಿ ಆಧರಿಸುವುದರ ಅಗತ್ಯ ಇದೆ.” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವೇಷಧಾರಿ ಹಾಗೂ ಪ್ರಸಾದನ ಕಲಾವಿದರಾದ ಕೋಳ್ಯೂರು ಪ್ರಶಾಂತ್ ಇವರನ್ನು ಗೌರವಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ…

Read More

ಮಂಗಳೂರು : ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಕವಿತಾ ಟ್ರಸ್ಟ್ ವತಿಯಿಂದ ಇಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕವಿಸಂಧಿ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವು ದಿನಾಂಕ 26-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ಕೊಂಕಣಿ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೀಲ್ಬಾ ಖಂಡೇಕರ್ “ನನ್ನಲ್ಲಿ ಬರವಣಿಗೆಯ ಪ್ರತಿಭೆ ಇತ್ತು. ಈ ಪ್ರತಿಭೆಯ ಜೊತೆಗೆ ನಾನು ಜೀವನದ ಸತ್ಯಗಳನ್ನು ಅರಿತು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಾಗ ನನ್ನ ಬರವಣಿಗೆಯನ್ನು ಸಾಹಿತ್ಯಾಸಕ್ತರು ಗುರುತಿಸಲು ಆರಂಭಿಸಿದರು. ನನ್ನಲ್ಲಿದ್ದ ಓದುವಿಕೆಯ ಅಭ್ಯಾಸವು ನನಗೆ ಪ್ರಪಂಚದ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ನೀಡಿತು. ಇದರ ಫಲವಾಗಿ ನನ್ನ ಕೃತಿಗಳಲ್ಲಿ ಚಾರಿತ್ರಿಕ ಘಟನೆಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಪ್ರತಿಬಿಂಬಿಸಲು ಸಾಧ್ಯವಾಯಿತು. ಈ ಪ್ರಕಾರ ನಾನು ಸಮಾಜದ ಆಗುಹೋಗುಗಳ ಒಳಿತು ಮತ್ತು ದೋಷಗಳನ್ನು ಓದುಗರ ಮುಂದೆ ತಲುಪಿಸಲು ಮುಂದಾದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಪ್ರಗತಿಪರ ಚಿಂತನೆ ಮತ್ತು…

Read More

ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮದ ಐದನೇ ದಿನದ ಕಾರ್ಯಕ್ರಮವು ದಿನಾಂಕ 29-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ “ಯಕ್ಷಗಾನವು ಒಂದು ಆರಾಧನಾ ಕಲೆ. ಕಟೀಲು ತಾಯಿ ಯಕ್ಷ ಕಲಾರಾಧಕಿ. ಹಾಗಾಗಿಯೋ ಏನೋ ಎಷ್ಟೋ ಮಂದಿಗೆ ಸೇವೆಯಾಟ ದೊರಕಲು ವಿಳಂಬವಾಗುತ್ತದೆ. ಅಂತಹಾ ಆರಾಧನಾ ಕಲೆಯನ್ನು ಕಲಾವಿದರು ಆರಾಧಿಸುವುದು ಮಾತ್ರವಲ್ಲ: ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ಇದನ್ನು ಯುವ ಪೀಳಿಗೆ ರೂಢಿಸಿಕೊಂಡರೆ ಈ ಕಲೆಗೆ ನಿರಂತರ ಬೆಳವಣಿಗೆ ಇರುತ್ತದೆ” ಎಂದರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಹಾಸ್ಯಗಾರರಾದ ಮಹಾಬಲೇಶ್ವರ ಭಟ್ ಭಾಗಮಂಡಲ ಇವರಿಗೆ ‘ಯಕ್ಷಸರಯೂ’ ಬಿರುದುನೀಡಿ ಸನ್ಮಾನಿಸಲಾಯಿತು. ವೇದ ಮೂರ್ತಿ ಕೆ. ನರಸಿಂಹ ತಂತ್ರಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೌಮ್ಯ ಪುರುಷೋತ್ತಮ್ ಸನ್ಮಾನ ಪತ್ರ ವಾಚಿಸಿದರು. ಯಕ್ಷ ಗುರುಗಳಾದ ಪಿ. ವಿ.…

Read More

ಮುಡಿಪು : ಬೆಂಗಳೂರಿನ ಕಥಾಬಿಂದು ಪ್ರಕಾಶನದ ‘ಸಾಹಿತ್ಯ ಸಂಭ್ರಮ 2024’ ಕಾರ್ಯಕ್ರಮವು ಮಂಗಳೂರಿನ ಶ್ರೀ ಭಾರತೀ ಶಾಲೆ ಮುಡಿಪು ಇದರ ಸಭಾಂಗಣದಲ್ಲಿ ದಿನಾಂಕ 26-05-2024ರಂದು ನಡೆಯಿತು. ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಯುಗಪುರುಷ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಹಿರಿಯ ಸಾಹಿತಿ ಶ್ರೀಮತಿ ಬಿ. ಸತ್ಯವತಿ ಎಸ್. ಭಟ್ ಐದು ಪುಸ್ತಕಗಳ ಲೋಕಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿನ ಪ್ರಾಂಶುಪಾಲರಾದ ಪ್ರೊಫೆಸರ್ ಪಿ. ಕೃಷ್ಣಮೂರ್ತಿ, ಲೆಕ್ಕಪತ್ರ ಪರಿಶೋಧಕ ಎನ್. ಸುಬ್ರಾಯ ಭಟ್ ಮಂಗಳೂರು, ಪತ್ರಕರ್ತ ಶ್ರೀ ಜಯಾನಂದ ಪೆರಾಜೆ, ಶ್ರೀ ಭಾರತಿ ಶಾಲೆಯ ಸಂಚಾಲಕ ಕೊಡಕ್ಕಲ್ಲು ಸುಬ್ರಮಣ್ಯ ಭಟ್, ಸಿಂಡಿಕೇಟ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕರಾದ ಮೈಸೂರಿನ ಅನಂತ ಎಂ. ತಮ್ಮಣ್ಕರ್, ಸಾಹಿತ್ಯ ಪ್ರವರ್ತಕ ಡಾ. ಕೊಳ್ಚಪ್ಪೆ ಗೋವಿಂದ ಭಟ್,…

Read More

ಮಂಗಳೂರು : ವಿಪ್ರ ಸಮಾಗಮ ವೇದಿಕೆಯು ಆಯೋಜಿಸಿದ ‘ಕರ್ನಾಟಕ ಶಾಸ್ತ್ರೀಯ ಕಲೋತ್ಸವ’ ಕಾರ್ಯಕ್ರಮವು ದಿನಾಂಕ 19-05-2024 ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಗಾನ ಮಾಧುರ್ಯ ಕಾರ್ಯಕ್ರಮ ನೀಡಿದ ಸಾನ್ವಿ ರಾವ್ ಪಿ. ಮತ್ತು ಭರತನಾಟ್ಯ ಕಾರ್ಯಕ್ರಮ ನೀಡಿದ ದೀಪಾ ಪ್ರವೀಣ್ ಭಟ್‌ ಅವರನ್ನು ಸಮ್ಮಾನಿಸಲಾಯಿತು. ಇವರಿಗೆ ವಯಲಿನ್‌ನಲ್ಲಿ ಧನಶ್ರೀ ಶಬರಾಯ ಮತ್ತು ಮೃದಂಗದಲ್ಲಿ ಟಿ. ಆರ್. ಹರಿಕೃಷ್ಣ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ, ಸಿ. ಇ. ಓ. ಸಮೀರ್ ಪುರಾಣಿಕ್, ಟ್ರಸ್ಟೀ ಸುಧಾಕರ ರಾವ್ ಪೇಜಾವರ, ಎ. ಡಿ. ಬಿ. ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ರಾವ್ ಪಿ., ಶ್ರುತಿ ಸುಬ್ರಹ್ಮಣ್ಯ ರಾವ್, ಜನಾರ್ದನ ರಾವ್ ಪಿ., ಮಾಲತಿ ಜನಾರ್ದನ್, ರಮಾನಾಥ ಮಾರ್ಕೆಟಿಂಗ್ ನ ಪ್ರವೀಣ್ ಭಟ್, ರಂಜನಿ ಭಟ್, ಕಾತ್ಯಾಯಿನಿ ರಾವ್, ವಾಣಿ…

Read More

ಪುತ್ತೂರು : ಪುತ್ತೂರಿನ ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ಹಾಗೂ ಸಾಹಿತಿ ಜನಾರ್ದನ ದುರ್ಗ ಇವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 27-05-2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್ ಝೇವಿಯರ್ ಡಿ’ಸೋಜ ಮಾತನಾಡಿ ‘ಕಾಲೇಜು ಹಂತದಲ್ಲಿಯೆ ನಾಯಕತ್ವದ ಛಾಪು ಮೂಡಿಸಿದ್ದ ಜನಾರ್ದನರು ಅಹಂ ಇಲ್ಲದ ವಿನಯವುಳ್ಳ ವ್ಯಕ್ತಿತ್ವ, ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ’ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕೃತಿಯನ್ನು ಪರಿಚಯಿಸಿ ಮಾತನಾಡಿದ ಡಾ. ವರದರಾಜ್ ಚಂದ್ರಗಿರಿ “ಶಾಂತೇಶ್ವರನ ವಚನಗಳು ಸಮಾಜದ ಓರೆಕೋರೆಗಳನ್ನು ತಿದ್ದುವ, ಆತ್ಮವಿಮರ್ಶೆಗೆ ಹಚ್ಚುವ ಮೂಲಕ ಮನುಜ ಈ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಂತೆ ಸಹಜ ಜೀವನ ನಡೆಸದೆ ಪ್ರಕೃತಿಯನ್ನು ತನ್ನಂಕೆಗೆ ಇಡುವ ದುಷ್ಪ್ರವೃತ್ತಿಯ ಪರಿಣಾಮಗಳನ್ನು ತೆರೆದಿಡುತ್ತವೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೃತ ಆಯ್ಕೆಯಾದಾಗಲೇ ಅದು ಗೆದ್ದಾಗಿದೆ’ ಎಂದರು. ಅಂತಿಮವಾಗಿ ಈ ಕೃತಿಯು, ಗುರಿಯೇ ಇಲ್ಲದೆ ಬದುಕುವ ಯುವ ಜನಾಂಗ, ಪ್ರಚಾರ ಪ್ರಸಿದ್ಧಿಗಳೇ ಯಶಸ್ಸೆಂಬ…

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಮತ್ತು ಇನ್ ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್ (ಐ.ವೈ.ಸಿ.) ಇದರ ವತಿಯಿಂದ ‘ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ 2024’ವು ದಿನಾಂಕ 31-05-2024ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಇವರಿಂದ ಸಮಾವೇಶ ಉದ್ಘಾಟನೆಗೊಳ್ಳಲಿದೆ. ತುಮಕೂರು ಜಿಲ್ಲೆಯ ತಿಪಟೂರು ಇಲ್ಲಿರುವ ಶ್ರೀ ಕಲ್ಲೇಶ್ವರ ಯಕ್ಷಗಾನ ಮಂಡಳಿಯವರಿಂದ ‘ಶ್ರೀದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪೂರ್ವಾಹ್ನ 12-00 ಗಂಟೆಗೆ ‘ಯುಟ್ಯೂಬ್ ದಾಖಲೀಕರಣ/ನೇರಪ್ರಸಾರ : ಪೂರಕವೆ? ಮಾರಕವೆ?’ ಎಂಬ ವಿಷಯದ ಬಗ್ಗೆ ಕಲಾವಿದರ ಅನುಭವ ಅಭಿವ್ಯಕ್ತಿ ಸಂವಾದ ಹಾಗೂ ಅಪರಾಹ್ನ 2-30 ಗಂಟೆಗೆ ಸಮಾವೇಶ ಸಮಾರೋಪ ನಡೆಯಲಿದೆ.

Read More