Author: roovari

ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 89ನೇ ವಾರ್ಷಿಕೋತ್ಸವ ಮತ್ತು ಸಂಗೀತ ವಿದ್ಯಾನಿಲಯ ಕದ್ರಿ ಇದರ 31ನೇ ವಾರ್ಷಿಕೋತ್ಸವದ ಸಲುವಾಗಿ ಹಾಗೂ ನಾಟ್ಯ ಭೀಷ್ಮ ದಿ. ಯು.ಎಸ್. ಕೃಷ್ಣ ರಾವ್ ಇವರ 110ನೇ ವರ್ಷದ ಸಂಸ್ಮರಣೆಯಾಗಿ ‘ಸಂಗೀತೋತ್ಸವ ಮತ್ತು ನೃತ್ಯೋತ್ಸವ’ ಕಾರ್ಯಕ್ರಮವನ್ನು ದಿನಾಂಕ 10 ಅಕ್ಟೋಬರ್ 2024 ಮತ್ತು 11 ಅಕ್ಟೋಬರ್ 2024ರಂದು ನೃತ್ಯ ವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 10 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ವಿದುಷಿ ವಾಣಿ ಸತೀಶ್, ವಿದುಷಿ ಡಾ. ವಿಜಯಲಕ್ಷ್ಮೀ ಸುಬ್ರಮಣಿಯಂ ಮತ್ತು ವಿದುಷಿ ಉಷಾ ಪ್ರವೀಣ್ ಇವರ ಶಿಷ್ಯ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ಉಡುಪಿಯ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಪಿಟೀಲು ಮತ್ತು ಮಂಗಳೂರಿನ ಶ್ರೀ ಯು.ಪಿ. ಶರಣ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 11 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ನಿರ್ದೇಶಕಿ…

Read More

ಮನೋರಮಾ ಎಂಬ ಹೆಸರು ಅನ್ವರ್ಥಗೊಂಡಿರುವುದು ನಮ್ಮ ಹಿರಿಯ ಲೇಖಕಿ, ಚಿಂತನಶೀಲೆ ಮನೋರಮಾ ಎಂ. ಭಟ್ಟರಲ್ಲಿ, ಅವರನ್ನು ಭೇಟಿಯಾದ ಎಲ್ಲರೂ ಅವರ ವ್ಯಕ್ತಿತ್ವದಿಂದ ಮನಸೂರೆಗೊಂಡವರೇ. ಮೊನ್ನೆ ಮೊನ್ನೆಯವರೆಗೆ ಅಂದರೆ ಸೆ. 7ರ ಗಣೇಶ ಚತುರ್ಥಿಯ ದಿನದವರೆಗೆ ಸಿಹಿಯನ್ನು ಇಷ್ಟಪಡುತ್ತಾ ತಿಂದು, ಸಿಹಿಯಾದ ನಗೆಯೊಂದಿಗೆ ಇದ್ದವರು. ಒಂದಿಷ್ಟು ಸುಸ್ತು ಎಂದು ಒತ್ತಾಯಕ್ಕೆ ಆಸ್ಪತ್ರೆ ಸೇರಿದವರು ಅಲ್ಲಿಂದಲೇ ನಮಗೆ ಹೇಳದೇ ತಿರುಗಿ ಬಾರದ ಊರಿಗೆ ಪಯಣಿಸಿದರು. ಇದೇ ಜುಲೈ 15ರಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದ ಮನೋರಮಾ ಅವರು, ತಮ್ಮೆಲ್ಲ ನಿತ್ಯಕರ್ಮಗಳನ್ನು ತಾವೇ ಮಾಡಿಕೊಳ್ಳುತ್ತಾ ದೇಹ, ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಿದ್ದವರು, ಮಾತ್ರವಲ್ಲ ಜೀವನ ಪ್ರೀತಿ, ಜೀವನೋತ್ಸಾಹದ ಮಾತುಗಳಿಂದ, ನಿತ್ಯವೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಅದರ ಬಗ್ಗೆ ವಿಮರ್ಶೆ ಮಾಡುತ್ತಾ ಅಂದಿನ ಕಾರ್ಯಕ್ರಮಗಳನ್ನು ನೀಡಿದವರು ಪರಿಚಿತರಾಗಿದ್ದರೆ ಅವರಿಗೇ ಆಗಲೇ ಫೋನ್ ಮಾಡಿ ತನ್ನ ಸಂತೋಷವನ್ನು ಹಂಚಿಕೊಂಡು ಅವರಿಗೆ ಉತ್ಸಾಹ ತುಂಬುತ್ತಿದ್ದರು. ಅಪರಿಚಿತರಾದರೆ ಅವರ ಬಗ್ಗೆ ಯಾರಿಂದಲಾದರೂ ಫೋನ್ ನಂಬರ್ ಪಡೆದು ಫೋನ್ ಮಾಡಿ ಅವರಿಗೆ ಅಭಿನಂದನೆ ತಿಳಿಸುವುದು ಅವರ…

Read More

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ಕ್ಷೇತ್ರದ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ, ವಿಜ್ಡಮ್ ಇನ್‌ಸ್ಟಿಟ್ಯೂಟ್ ನೆಟ್ವರ್ಕ್ ಹಾಗೂ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ದಿನಾಂಕ 6 ಅಕ್ಟೋಬರ್ 2024ರಂದು ಪಾಂಗೋಡು ಕ್ಷೇತ್ರದ ‘ಶ್ರೀ ದುರ್ಗಾಂಬಾ ವೇದಿಕೆ’ಯಲ್ಲಿ ಕನ್ನಡ ಭವನದ ಕೆ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಸಾರಥ್ಯದಲ್ಲಿ ಕಾಸರಗೋಡು ದಸರಾ ಸಾಹಿತ್ಯ ಸಾಂಸ್ಕೃತಿಕೋತ್ಸವ-2024’ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಣಿತ ಭಜನೆ, ಭಜನೆ, ಸತ್ಸಂಗ ಹಾಗೂ ಶ್ರೀಮತಿ ಶಾಂತಾ ಕುಂಟಿನಿ ಸಾರಥ್ಯದ ಉಪ್ಪಿನಂಗಡಿಯ ಸತ್ಯಶಾಂತ ಪ್ರತಿಷ್ಠಾನದ ಸದಸ್ಯರಿಂದ ‘ಗಾನಲಹರಿ’ ನಡೆಯಿತು. ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ವತಿಯಿಂದ ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ವಿ.ಬಿ. ಕುಳಮರ್ವ, ಲಲಿತಾಲಕ್ಷ್ಮಿ ಕುಳಮರ್ವ ದಂಪತಿಯರಿಗೆ ‘ಕಾಸರಗೋಡು ದಸರಾ ಸನ್ಮಾನ’ ನಡೆಯಿತು. ಕನ್ನಡ ಭವನ ಮತ್ತು ಗ್ರಂಥಾಲಯದ ಅಧ್ಯಕ್ಷ ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್, ಕುಳಮರ್ವ ದಂಪತಿಗಳಿಗೆ ಶಾಲು ಹೊದೆಸಿ, ಸ್ಮರಣಿಕೆ…

Read More

ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರು ಅಭಿನಯಿಸುವ ಸಿದ್ದೇಶ್ವರ ನನಸುಮನೆ ಇವರ ಪರಿಕಲ್ಪನೆ, ರಚನೆ ಮತ್ತು ನಿರ್ದೇಶನದಲ್ಲಿ ‘SOME ಸಾರ’ ನಾಟಕ ಪ್ರದರ್ಶನವನ್ನು ದಿನಾಂಕ 8 ಅಕ್ಟೋಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಿಡಿ ಬಿಡಿಯಾದ ಹಾಸ್ಯ ಪ್ರಸಂಗಗಳಿಗೆ ನಾಟಕದ ರೂಪ ಕೊಟ್ಟು ಅದನ್ನು ರಂಗದ ಮೇಲೆ ತಂದಿರುವ ತಂತ್ರದ ಹಿನ್ನಲೆಯಲ್ಲಿ ‘SOME ಸಾರ’ ಎನ್ನುವ ಈ ನಾಟಕವು ಹಾಸ್ಯಕ್ಕಾಗಿ ಡಬ್ಬಲ್ ಮೀನಿಂಗ್ ಸಂಭಾಷಣೆ ಅಥವಾ ಇನ್ನಾವುದೇ ಆಂಗಿಕ ಚೇಷ್ಟೆಗಳನ್ನು ಬಳಸದೆ ಘಟನೆಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತದೆ. ಬೆಂಗಳೂರು ಪೂರ್ವ ತಾಲೂಕಿನ ದೊಡ್ಡಬನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಪ್ರೋತ್ಸಾಹದಿಂದ ‘ಜನಪದರು’ ಎಂಬ ಸಾಂಸ್ಕೃತಿಕ ವೇದಿಕೆ ಮೂಲಕ ಸಿದ್ದೇಶ್ವರ ನನಸುಮನೆ ಇವರ ನಿದೇಶನದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕ ಹಾಸ್ಯ ನಾಟಕಗಳು ಅಪರೂಪ ಎನ್ನುವ ಈ ಕಾಲಘಟ್ಟದಲ್ಲಿ ಸಂಸಾರ ಸಮೇತವಾಗಿ ನೋಡಬಹುದಾರ…

Read More

ಉಡುಪಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ’ಗೆ ಉಡುಪಿಯ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅಕ್ಕ ಕೇಳವ್ವ’ ಆಧುನಿಕ ವಚನಗಳ ಕೃತಿ ಪಾತ್ರವಾಗಿದೆ. ಪ್ರಶಸ್ತಿಯು 20,000 ನಗದು ಒಳಗೊಂಡಿದೆ. ನವೆಂಬರ್ 18ರಂದು ಬೆಂಗಳೂರಿನ ರಮಣಶ್ರೀ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ . ನಿರಂಜನ ಚೋಳಯ್ಯ ತಿಳಿಸಿದ್ದಾರೆ.

Read More

ಸುಳ್ಯ : ಶ್ರೀ ಶಾರದಾಂಬ ಸಮೂಹ ಸಮಿತಿ ಸುಳ್ಯ ಇದರ ವತಿಯಿಂದ ಮಕ್ಕಳ ದಸರಾ 2024 ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ದಿನಾಂಕ 13 ಅಕ್ಟೋಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಚೆನ್ನಕೇಶವ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸರಕಾರಿ ಬಸ್ ನಿಲ್ದಾಣದಿಂದ ಚೆನ್ನಕೇಶವ ದೇವಾಲಯದವರೆಗೆ ಸ್ಕೌಟ್ ಗೈಡ್ ವಿದ್ಯಾರ್ಥಿಗಳ ಮೆರವಣಿಗೆಯೊಂದಿಗೆ ಈ ಸ್ಪರ್ಧಾ ಕಾರ್ಯಕ್ರಮವು ಬೆಳಗ್ಗೆ 10-00 ಗಂಟೆಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಗೂಡುದೀಪ, ಚಿತ್ರಕಲೆ, ಸಮೂಹ ಜನಪದ ಗೀತಾಗಾಯನ ಮತ್ತು ಸಮೂಹ ನೃತ್ಯ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9611355496 ಮತ್ತು 9481178541 ಸಂಪರ್ಕಿಸಿರಿ.

Read More

ಮಂಗಳೂರು: ಮಂಗಳೂರಿನ ಪೋಲೀಸ್ ಲೈನ್ ಶ್ರೀದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ರಜತ ಸಂಭ್ರಮದಲ್ಲಿರುವ ಕೋಡಿಕಲ್ ಇಲ್ಲಿನ ಸರಯೂ ಯಕ್ಷ ವೃಂದ (ರಿ) ಇದರ ಕಲಾವಿದರಿಂದ ‘ಶೂರ್ಪನಖಾ ವಧೆ’ ಎಂಬ ಪ್ರಸಂಗದ ಬಯಲಾಟ ದಿನಾಂಕ 05 ಅಕ್ಟೋಬರ್ 2024 ರಂದು ನಡೆಯಿತು. ಇದೇ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳದ ಗುರು ಯಕ್ಷಗಾನ ಸವ್ಯಸಾಚಿ ವಳಕುಂಜ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಇವರಿಗ ಸನ್ಮಾನ ಹಾಗೂ ಬಾಲ ಕಲಾವಿದ ಮಾ. ದೃಶಾಲ್ ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಅಧ್ಯಕ್ಷ ಶ್ರೀ ಮಯೂರ್ ಉಳ್ಳಾಲ್, ನ್ಯಾಯವಾದಿಗಳಾದ ಕುಶಾಲಪ್ಪ, ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಡಾ. ನಂದಿನಿ ಹಾಗೂ ದೇವಿ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಆಫ್ರಿಕಾದ ಸ್ವಾಹಿಲಿ ಭಾಷೆಯಲ್ಲಿ ‘ಝವಾದಿ’ ಎಂದರೆ ಕಾಣಿಕೆ ಎಂದರ್ಥ. ದೇವರ ಕಾಣಿಕೆಯಾಗಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂಬ ದನಿಯು ಇಲ್ಲಿದೆ. ಆಫ್ರಿಕಾ ದೇಶದ ಟಾಂಜಾನಿಯಾ ರಾಜ್ಯದ ಜನರ ಪಾಲಿಗೆ ಸಿಂಬಾ (ಸಿಂಹ) ಎಂದರೆ ದೇವದೂತ. ಭಾರತೀಯರ ಪಾಲಿಗೆ ಹಾವು ಗೋವುಗಳಂತೆ ಪೂಜ್ಯ ಪ್ರಾಣಿ. ಸಿಂಬಾದ ಸಂಸಾರದ ಕತೆಯು ಶಂಕರರಾಯರ ಸಂಸಾರದ ಕತೆಯ ಪ್ರತಿಬಿಂಬವಾಗಿದೆ. ಸಿಂಬಾನಲ್ಲಿ ಅವರು ತಮ್ಮನ್ನು, ಕ್ವೀನಳಲ್ಲಿ ಸೌದಾಮಿನಿಯನ್ನು, ಮರಿಗಳಲ್ಲಿ ತನ್ನ ಮಕ್ಕಳಾದ ಅಭಿ ಮತ್ತು ಅಂಜಲಿಯರನ್ನು, ಸಿಂಬಾನ ಬದುಕಿಗೆ ಪ್ರವೇಶಿಸಿದ ಸಿಂಹಿಣಿ ಕ್ಲಿಯೋಪಾತ್ರಾಳನ್ನು ತನ್ನ ಅಬಚಿಯಾಗಿ ಕಾಣುವಲ್ಲಿ ಸಿಂಹಗಳ ಬದುಕು ಕಾದಂಬರಿಯ ಸುತ್ತ ಪ್ರತೀಕವಾಗಿ ರೂಪುಗೊಳ್ಳುತ್ತದೆ. ತನ್ನ ಅಪ್ಪನ ಎರಡನೇ ಹೆಂಡತಿಯಾದ ಅಬಚಿಯೊಂದಿಗಿನ ಸಹವಾಸವು ಶಂಕರರಾಯರ ಅರ್ಧ ಆಯುಷ್ಯವನ್ನು ವ್ಯರ್ಥಗೊಳಿಸಿದರೆ ಆಫ್ರಿಕಾದ ನೀಗ್ರೋ ಜನಾಂಗಕ್ಕೆ ಸೇರಿದ ಟೆಂಬೋನ ಮಾತುಗಳು ಅವರ ಬದುಕಿನ ದೃಷ್ಟಿಯನ್ನು ಬದಲಿಸುತ್ತದೆ. ಹೆಂಡತಿಯ ಮೇಲೆ ಸಿಟ್ಟುಗೊಂಡ ಶಂಕರರಾಯರು ಉದ್ಯೋಗ ನಿಮಿತ್ತ ಆಫ್ರಿಕಾಕ್ಕೆ ತೆರಳಿದ ಬಳಿಕ ಅಲ್ಲಿನ ಅರಣ್ಯದಲ್ಲಿ ಸಿಂಹ ಸಿಂಹಿಣಿಯರ ಸಂಸಾರವನ್ನು ಕಂಡು, ತಮ್ಮ ನಡೆನುಡಿಗಳನ್ನು…

Read More

ಕಿನ್ನಿಗೋಳಿ : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ ಇದರ ವತಿಯಿಂದ ಕಿನ್ನಿಗೋಳಿಯಲ್ಲಿನ ಕಲಾವಿದರ ಮನೆ ಉದಯಗಿರಿಯಲ್ಲಿ ದಿನಾಂಕ 4 ಅಕ್ಟೋಬರ್ 2024ರಂದು ಕಲಾವಿದರ ಯಕ್ಷ ಪಯಣದ ಸ್ವಗತ ಯಕ್ಷಾಯಣ- ದಾಖಲೀಕರಣ ಸರಣಿ – 6ರ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಇವರು “ಯಕ್ಷಗಾನದಲ್ಲಿ ಹಾಸ್ಯಗಾರನ ಸ್ಥಾನ ಮಹತ್ವಪೂರ್ಣವಾದುದು. ರಂಗಸ್ಥಳದಲ್ಲಿ ಭಾಗವತರು ಪ್ರಧಾನವಾದರೆ, ಚೌಕಿಯಲ್ಲಿ ಹಾಸ್ಯಗಾರನಿಗೇ ಜವಾಬ್ದಾರಿ. ಅದಕ್ಕೆ ಅವನಿಗೆ ಪ್ರತ್ಯೇಕ ಸ್ಥಾನ. ಆತ ಎಲ್ಲರ ಆಗುಹೋಗುಗಳಿಗೂ ಅನುಕೂಲಕರನಾಗಿ ರಂಗ ಖಾಲಿ ಬೀಳದಂತೆ ನೋಡುವ ಜವಾಬ್ದಾರಿ ಹೊಂದಿರುತ್ತಾನೆ. ಹಾಸ್ಯ ಎಂದರೆ ಜನರಿಗೆ ಬೇಕಾದ್ದನ್ನು ನೀಡುವುದಲ್ಲ. ಜನರ ಮನೋಧರ್ಮವನ್ನು ರೂಪಿಸುವ ಕೆಲಸ. ಆದ್ದರಿಂದ ಹಾಸ್ಯದ ಹೆಸರಲ್ಲಿ ಬಂಡು ಮಾತು ಬೇಡ. ಗಂಭೀರ ಹಾಸ್ಯದಲ್ಲಿಯೇ ಜನರನ್ನು ನಗಿಸಿ ರಸಾಸ್ವಾದನೆಯನ್ನು ಮಾಡಿಸಬಹುದು. ಸೀನು ಸೀನರಿಯ ಯಕ್ಷಗಾನದ…

Read More

ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ರಜತ ಸಂಭ್ರಮದ ವಿದ್ಯಾದಶಮಿ ಸಂಗೀತೋತ್ಸವವನ್ನು ದಿನಾಂಕ 12 ಅಕ್ಟೋಬರ್ 2024ರಂದು ಬೆಳಿಗ್ಗೆ 8-00 ಗಂಟೆಯಿಂದ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8-00ಕ್ಕೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಇವರು ‘ಶ್ರೀ ದುರ್ಗಾ ಮಾತೆ’ಯ ಪ್ರಾರ್ಥನೆಯ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದು, 8.45ರಿಂದ ಪಿಳ್ಳಾರಿ ಗೀತೆಗಳು, 9-00 ಮಾಸ್ಟರ್ ಅಭಿನವ್ ಎಂ. ಭಟ್ ಹಾಗೂ ಕುಮಾರಿ ತನ್ವಿ ಶಾಸ್ತ್ರಿ ಇವರಿಂದ ಹಾಡುಗಾರಿಕೆ ನಡೆಯಲಿದೆ. ಬೆಳಿಗ್ಗೆ ಗಂಟೆ 9-40ಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಉಡುಪಿಯ ಹಿರಿಯ ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ರೊ. ಮಂಜುನಾಥ ಉಪಾಧ್ಯ ಇವರುಗಳು ಭಾಗವಹಿಸುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್ ಪಟ್ಲ ಇವರನ್ನು ಅಭಿನಂದಿಸಿ ಗೌರವಿಸಲಾಗುವುದು.…

Read More