Author: roovari

05 ಏಪ್ರಿಲ್ 2023, ಮುಡಿಪು: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜನೆಯಲ್ಲಿ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪಾವಂಜೆ ನಿನಾದ ರಂಗಮಂದಿರದಲ್ಲಿ ನಡೆದ ‘ಭಾರತದ ಸಂತ ಸತ್ವ ಶೋಧ-ನಿನಾದ ನಂದಿನಿಗೊಂದು ಸುತ್ತು-ನಿನಾದ ನೆನಪು” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ “ನಾರಾಯಣ ಗುರುಗಳು ಕಂಡ ಮನುಷ್ಯ ಧರ್ಮದ ತತ್ವ ತುಳುನಾಡಿನ ಮಣ್ಣಿನಲ್ಲಿದೆ. ಅದರೊಳಗೆ ಭಾರತದ ಸಂತ ಸತ್ವ ಅಡಗಿದೆ. ಕರಾವಳಿ ಕರ್ನಾಟಕ ದೈವ ದೇವರುಗಳ ನೆಲೆ. ಇಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೊಡುವ ಆಯುರ್ವೇದ ಸತ್ವ ಋಷಿ ಪರಂಪರೆ ಮತ್ತು ಕೃಷಿ ಪರಂಪರೆಯಿಂದ ಪಕ್ವಗೊಂಡಿದೆ” ಎಂದರು. ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ‘ಶಾಂತಿಯ ಕ್ರಾಂತಿ-ನಾರಾಯಣ ಗುರು’ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಓರಿಯಂಟಲ್ ವಿಮಾ ಕಂಪನಿಯ ಪ್ರಬಂಧಕ ಯಾದವ…

Read More

05 ಏಪ್ರಿಲ್ 2023, ಮಂಗಳೂರು: ಸನಾತನ ನಾಟ್ಯಾಲಯ, ಮಂಗಳೂರು ಇದರ 40ನೇ ವರ್ಷಾಚರಣೆ ಪ್ರಯುಕ್ತ ದಿನಾಂಕ 09-04-2023 ಭಾನುವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಈ ಕೆಳಗಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಜೆ 5-30ಕ್ಕೆ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ ಇವರಿಂದ “ಕುಣಿತ ಭಜನೆ”, 6-15ಕ್ಕೆ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರಿಂದ “ರಾಷ್ಟ್ರ-ಧರ್ಮ ಜಾಗೃತಿ ಸಂದೇಶ” ಹಾಗೂ 7-00ಕ್ಕೆ ನಲ್ವತ್ತರ ಸಂಭ್ರಮದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭಾರತನಾಟ್ಯ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಕಲಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಕೆ. ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಇವರು ಪ್ರೀತಿಪೂರ್ವಕ ಸ್ವಾಗತವನ್ನು ಕೋರಿದ್ದಾರೆ.

Read More

05 ಏಪ್ರಿಲ್ 2023, ಬಂಟ್ವಾಳ: ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ. ಬಿ.ಎ.ವಿವೇಕ ರೈ ಅವರು ದಿನಾಂಕ 02-04-2023ರಂದು ರವಿವಾರ ಬಿ.ಸಿ.ರೋಡು ಬಳಿಯ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್ ಆಶ್ರಯದಲ್ಲಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ”ವನ್ನು ಉದ್ಘಾಟಿಸಿ, “ಜನಪದ, ಸಾಹಿತ್ಯ, ಸಂಘಟನೆ ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಕೊಂಡ ಸಾಹಿತಿ ಏರ್ಯ ಅವರು ಮಾನವತಾವಾದದ ಇಡೀ ರೂಪವಾಗಿದ್ದು, ಸಾಹಿತ್ಯ ಕೃಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು” ಎಂದು ಹೇಳಿದರು. ಭೋಜನ ಪೂರ್ವದಲ್ಲಿ ಹಿರಿಯರಾದ ಡಾ. ತಾಳ್ತಜೆ ವಸಂತ ಕುಮಾರ್ ಇವರಿಂದ ಕೃತಿ “ಸ್ನೇಹ ತಂತು”, “ರಾಮಶ್ವಮೇಧದ ರಸತರಂಗಗಳು” ಕೃತಿ ಡಾ. ನಾ. ದಾಮೋದರ ಶೆಟ್ಟಿಯವರಿಂದ, “ಮುಳಿಯ ತಿಮ್ಮಪ್ಪಯ್ಯ ಹಾಗೂ ಪಾತ್ರಗಳು ಚಿತ್ರಿಸಿದ ಸೇಡಿಯಾಪು”…

Read More

05 ಏಪ್ರಿಲ್ 2023, ಬೆಂಗಳೂರು: ಟಿ. ಸುನಂದಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಎಂ. ನರಸಿಂಹಮೂರ್ತಿ ಅವರು “50/60ರ ದಶಕದಲ್ಲಿ ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೆ ಮುನ್ನುಡಿ ಬರೆದವರು ಟಿ. ಸುನಂದಮ್ಮನವರು. ಅವರ ಕುರಿತಾದ ಈ ಎರಡು ಪುಸ್ತಕಗಳನ್ನು ಯುವ ಪೀಳಿಗೆಯವರು ಓದಿ ಅವರ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗಲಿ ಎಂಬ ಆಶಯ ಈ ಕೃತಿಗಳ ಪ್ರಕಟಣೆಗೆ ಮುಖ್ಯ ಉದ್ದೇಶವಾಗಿದೆ. ಟಿ. ಸುನಂದಮ್ಮ ಅವರ ಮನೆ ಇರುವ ಪ್ರದೇಶಕ್ಕೆ “ಟಿ. ಸುನಂದಮ್ಮ ಹಾಸ್ಯ ಸಾಹಿತಿ ರಸ್ತೆ” ಎಂದು ನಾಮಕರಣ ಮಾಡಬೇಕು ಹಾಗೂ ಇದಕ್ಕೆ ಎಲ್ಲರೂ ಒಟ್ಟಾಗಿ ಆಗ್ರಹಿಸಬೇಕು. ಇದಕ್ಕೆ ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಬ್ರಾಹ್ಮಣರ ಮಹಾ ಸಂಘ ಹಾಗೂ ಟಿ. ಸುನಂದಮ್ಮ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಸರ್ಕಾರದ ಮುಂದೆ ಈ ಪ್ರಸ್ತಾವನೆಯನ್ನು ಇಡಲಾಗುವುದು ಹಾಗೂ ಪಂಪ ಮಹಾಕವಿ ರಸ್ತೆಯ ಮುಂಭಾಗದಲ್ಲಿ ಪಂಪನ ಪುತ್ಥಳಿ ನಿರ್ಮಿಸುವ ಜವಾಬ್ದಾರಿಯನ್ನು ಸ್ಮಾರಕ ಪ್ರತಿಷ್ಠಾನ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು. ನಂತರ ಡಾಕ್ಟರ್ ವಸುಂಧರ ಭೂಪತಿ ಅವರು ಮಾತನಾಡುತ್ತಾ “ಇಂದು ಪ್ರಶಸ್ತಿ ಸ್ವೀಕರಿಸಲಿರುವ…

Read More

05 ಏಪ್ರಿಲ್ 2023, ಕೊಡಗು: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಗೌರಮ್ಮ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಮಹಿಳಾ ಲೇಖಕಿಯರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2022-23ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕಿಯರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ :94483 46276. ಇಲ್ಲಿಗೆ ದಿನಾಂಕ 20.04.2023ರ ಒಳಗಾಗಿ ತಲುಪಿಸಬೇಕೆಂದು  ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

05 ಏಪ್ರಿಲ್ 2023, ಕುಶಾಲನಗರ: ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ (ರಿ) ಕುಶಾಲನಗರ ಇವರು ಶ್ರೀ ರಾಮನವಮಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಮತ್ತು ವಿದುಷಿ ಅಯನಾ ವಿ ರಮಣ್ ಅವರು ” ನಾಟ್ಯಾಯನ” ಎನ್ನುವ ವಿಭಿನ್ನ ಪರಿಕಲ್ಪನೆಯ ನೃತ್ಯ ಕಾರ್ಯಕ್ರಮ ಜನಮನ ಸೆಳೆಯಿತು.ಶ್ರೀ ಕೆ.ವಿ.ರಮಣ್ ಅವರು ಕಾರ್ಯಕ್ರಮದ ಪರಿಕಲ್ಪನೆಯನ್ನು ರೂಪಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಮೂಕಾಂಬಿಕಾ ಜಿ.ಎಸ್ ಅವರು ಕಾರ್ಯಕ್ರಮದ ನಿರ್ವಹಿಸಿದರು.

Read More

04 ಏಪ್ರಿಲ್ 2023 ಬೆಂಗಳೂರು: “ಆಜೀವಿಕ” ಅರ್ಪಿಸುವ ಬಾದಲ್ ಸರ್ಕಾರ್ ಅವರ ‘ಭೂಲ್ ರಾಸ್ತ” ಟಿಪ್ಪಣಿಯನ್ನು ಆಧರಿಸಿ ಲಕ್ಷ್ಮೀಪತಿ ಕೋಲಾರ ಅವರು ರಚಿಸಿದ ಕೃತಿ “ಮರೆತ ದಾರಿ”. ಈ ಕೃತಿ ಡಾ. ಉದಯ್ ಸೋಸಲೆಯವರ ನಿರ್ದೇಶನದಲ್ಲಿ ದಿನಾಂಕ 08-04-2023ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಹನುಮಂತ್ ಮಂಡ್ಯ ಮತ್ತು ದುರ್ಗಬುಡ್ಡಿ ದೀಪರವರ ಸಂಗೀತದಲ್ಲಿ ಮೂಡಿ ಬರುವ ಈ ನಾಟಕಕ್ಕೆ ವಾಸವಿಯವರು ಸಹಾಯಕ ನಿರ್ದೇಶಕರಾಗಿದ್ದಾರೆ. ನಾಟಕದ ಬಗ್ಗೆ: ಭ್ರಮಾ ಬಿತ್ತಿಯ ವಾಸ್ತವ ನಿರೂಪಣೆ : ‘ಮರೆತ ದಾರಿ’ ಮರೆತ ದಾರಿ ನಾಟಕವು ದಿವಂಗತ ಬಾದಲ್ ಸರ್ಕಾರ್ ಅವರು ಬರೆಯ ಬಹುದಾಗಿದ್ದ ತಾವೇ ನಟಿಸಬೇಕೆಂದು ಆಶಿಸಿದ್ದ ಅವರ ಕೊನೆಯ ನಾಟಕ ‘ಭೂಲ್ ರಾಸ್ತಾ’ ಗೆ ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಆಧರಿಸಿದ್ದು. ಅದು ನಾಟಕವಾಗುವ ಮುನ್ನವೇ ಅವರು ಕಾಲಾತೀತರಾದರು. ಸರ್ವಾಧಿಕಾರ ಮತ್ತು ಗೆದ್ದಲು ಹಿಡಿದ ವ್ಯವಸ್ಥೆಯ ಭಾಗವಾಗಿದ್ದ ರಾಜಕುಮಾರನೊಬ್ಬ ಕಾಡಲ್ಲಿ ದಾರಿ ತಪ್ಪಿ ನಿಸರ್ಗ ಸಹಜವಾದ ಸ್ವಚ್ಛಂದವೂ, ಆನಂದಮಯವೂ ಆದ ಜೀವಂತಿಕೆಯ ಭಿನ್ನ…

Read More

05 ಏಪ್ರಿಲ್ 2023, ಮಂಗಳೂರು: ಕೊರೊನಾ ಸಮಯದಲ್ಲಿ ಶ್ರೀ ಶುಭಕರ ಮತ್ತು ಅವರ ಸಹೋದ್ಯೋಗಿ ಕನ್ನಡ ಉಪನ್ಯಾಸಕರಾದ ಸುರೇಶ್ ರಾವ್ ಅತ್ತೂರು ಅವರಲ್ಲಿ ಗಮಕ ಅಭ್ಯಾಸ ಮಾಡಿ ಪ್ರಥಮ ಪರೀಕ್ಷೆ ಹಾಜರಾದರು. ಶ್ರೀ ಸುರೇಶ್ ರಾವ್ ಅವರಿಗೆ ಮಂಗಳೂರಿನಲ್ಲಿ ಗಮಕ ಪರಿಷತ್ ಆಗ ಬೇಕೆಂಬ ಇಚ್ಛೆ ಇತ್ತು. ಇದನ್ನರಿತ ಶ್ರೀ ಶುಭಕರ ಇವರು ಒಂದು ಸಂಸ್ಥೆಯ ಮೂಲಕ ಮುಂದುವರಿಯುವ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಕಡೆ ಗಮಕ ಪರಿಷತ್ತು ಇದ್ದರೂ ಮಂಗಳೂರಲ್ಲಿ ಗಮಕ ಪರಿಷತ್ತು ಇರಲಿಲ್ಲ ಎಂಬುದನ್ನು ಮನಗಂಡು ಸಮಾನ ಮನಸ್ಕರು ಜನವರಿ ತಿಂಗಳಲ್ಲಿ ಒಂದು ಕಡೆ ಸೇರಿ ವಿಚಾರ ವಿನಿಮಯ ನಡೆಸಿ, ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಪ್ರದೀಪ್ ಕುಮಾರ್ ಕಲ್ಕೂರ, ಗೌರವ ಸಲಹೆಗಾರರಾಗಿ ಪ್ರೊ. ಎಂ.ಬಿ. ಪುರಾಣಿಕ ಮತ್ತು ಎಂ.ಆರ್. ವಾಸುದೇವ, ಕಾರ್ಯಾಧ್ಯಕ್ಷರಾಗಿ ಸುರೇಶ್ ರಾವ್ ಅತ್ತೂರು, ಕಾರ್ಯದರ್ಶಿಯಾಗಿ ಶುಭಕರ ಕೆ. ಪುತ್ತೂರಾಯ ಜೊತೆ ಕಾರ್ಯದರ್ಶಿಗಳಾಗಿ ಯಶೋಧಾ ಕುಮಾರಿ ಮತ್ತು ರಮೇಶ್ ಆಚಾರ್ಯ, ಕೋಶಾಧಿಕಾರಿಯಾಗಿ ಚಂದ್ರಿಕಾ ಸುರೇಶ್ ರಾವ್,…

Read More

05 ಏಪ್ರಿಲ್ 2023, ಕೋಲಾರ: ಆದಿಮ ಸಾಂಸ್ಕೃತಿಕ ಕೇಂದ್ರ, ಶಿವಗಂಗೆ, ತೇರಹಳ್ಳಿ ಬೆಟ್ಟ, ಮಡೇರ ಹಳ್ಳಿ ಅಂಚೆ, ಕೋಲಾರ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಹುಣ್ಣಿಮೆ ಹಾಡು 191 ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 06-04-2023 ಗುರುವಾರ ಸಂಜೆ 7-00ಕ್ಕೆ ರಂಗ ಪ್ರದರ್ಶನ ಕಲಾ ಕೇಂದ್ರ, ಬೆಂಗಳೂರು ಇವರಿಂದ ವಿಲಿಯಮ್ ಶೇಕ್ಸ್ ಪಿಯರ್ ರಚನೆಯ “ಮ್ಯಾಕ್ ಬೆತ್” ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಂಗ ನಿರ್ದೇಶಕರಾದ ಮೈಕೊ ಶಿವಶಂಕರ್, ಶಿಕ್ಷಕರ ಗೆಳೆಯರ ಬಳಗ ಕೋಲಾರ ಇದರ ಅಧ್ಯಕ್ಷರಾದ ಎಸ್. ನಾರಾಯಣ ಸ್ವಾಮಿ ಹಾಗೂ ರಂಗ ಇಂಚರ ಟ್ರಸ್ಟ್, ಕೋಲಾರ ಇದರ ಅಧ್ಯಕ್ಷರಾದ ಡಾ. ಇಂಚರ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಈ ನಾಟಕವನ್ನು ರಾಮಚಂದ್ರ ದೇವ ಕನ್ನಡಕ್ಕೆ ಅನುವಾದಿಸಿದ್ದು, ಮೈಕೊ ಶಿವಶಂಕರ್ ನಿರ್ದೇಶಿಸಿ, ವೆಂಕಟೇಶ್ ಜೋಶಿ ಮತ್ತು ಸುಮುಖ್ ಭಾರದ್ವಾಜ್ ರವರ ಸಂಗೀತ ಈ ನಾಟಕಕ್ಕಿದೆ. ರಾಮಕೃಷ್ಣ ಬೆಳ್ತೂರು ವಸ್ತ್ರ ವಿನ್ಯಾಸ/ ಪ್ರಸಾಧನದಲ್ಲಿ ಸಹಕರಿಸಲಿದ್ದು, ರವಿಶಂಕರ್ ಮತ್ತು…

Read More

04 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇದರ 2ನೇ ದಿನದ ರಂಗೋತ್ಸವದಲ್ಲಿ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರಿಂದ “ಹೂವಿನಕೋಲು” ಕಲಾಪ್ರಕಾರ ಭಾನುವಾರ 02-04-2023ರಂದು ಪ್ರದರ್ಶನಗೊಂಡಿತು. ನಂತರ ಅತಿಥಿಯಾಗಿ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಜೊತೆಗಿದ್ದು, ಸಾಂಸ್ಕೃತಿಕ ಮತ್ತು ಆಧ್ಯಾತ್ಮದ ಆಯಾಮದ ಕೊರತೆಯಿದೆ. ಅದೇ ಒಂದು ದೊಡ್ಡ ಸೇವೆ. ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಎರಡನ್ನೂ ಮಾಡ್ತಾ ಇರೊ ಮಂದಾರದ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ವೇಳೆ ಮಂದಾರ (ರಿ.)ದ ತಂಡಕ್ಕೆ ಲೋಗೋವನ್ನು ರೂಪಿಸಿದ ಶ್ರೀ ಉದಯ ಗಾಂವ್ಕರ್ ಇವರಿಗೆ ಮಂದಾರದ ಪರವಾಗಿ ರಂಗ ಗೌರವ ಸಲ್ಲಿಸಲಾಯಿತು. ತದನಂತರ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪೆನಿ (ರಿ.) ಬಿಜಾಪುರ ಇವರಿಂದ ಶಕೀಲ್ ಅಹಮದ್ ನಿರ್ದೇಶನದ “ಅನಾಮಿಕನ ಸಾವು” ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Read More