Author: roovari

ಕೋಟ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ‘ಸಿನ್ಸ್ 1999 ಶ್ವೇತಯಾನ-64’ ಕಾಯಕ್ರಮದಡಿ ನವರಾತ್ರಿಯ ಸಂದರ್ಭದ ಹೂವಿನಕೋಲು ಅಭಿಯಾನಕ್ಕೆ ಮರು ಚಾಲನೆ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2024 ರಂದು ನಡೆಯಿತು. ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ “ನವರಾತ್ರಿಯಲ್ಲಿ ಮನೆಯಂಗಳಕ್ಕೆ ಹೂವಿನಕೋಲು ಹಿಡಿದು ಬರುವ ಮಕ್ಕಳನ್ನು ಗೌರವಿಸುವುದು ಸಂಸ್ಕೃತಿ. ಮನೆಗಳಲ್ಲಿ ಕಾರ್ಯಕ್ರಮ ಮಾಡಿಸುವುದು ಸಂಪ್ರದಾಯ. ಸಂಸ್ಕೃತಿ, ಸಂಪ್ರದಾಯಗಳು ನಾಶವಾಗುತ್ತಿರುವ ಈ ಹೊತ್ತಿನಲ್ಲಿ ಮನೆ ಮನೆಗಳಿಗೆ ತೆರಳಿ ಹೂವಿನಕೋಲು ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯನ್ನು ಸಮಾಜ ಗೌರವಿಸಬೇಕು. ಯಶಸ್ವೀ ಕಲಾವೃಂದ ಕೊಮೆ ಹಲವಾರು ವರ್ಷಗಳಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡು ನಡೆಸುವ ಸಾಹಸದಲ್ಲಿ ಪರಿಣತರು. ಇನ್ನಷ್ಟು ಈ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಬೆಳಗುವ ಶಕ್ತಿಯನ್ನು ಮನೆಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಇರುವ ಮಂದಿ ಅವಕಾಶ ಕೊಡುವುದರ ಮೂಲಕ ಹೆಚ್ಚಿಸಬೇಕು.” ಎಂದರು. ಉದ್ಯಮಿ ಪ್ರಶಾಂತ್ ಕುಂದರ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಹಂಗಾರಕಟ್ಟೆ ಕೇಂದ್ರದ ಗುರುಗಳು,…

Read More

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ದಸರಾ ಅಂಗವಾಗಿ ಅಮೃತ ಸೋಮೇಶ್ವರ ಇವರ ನೆನಪಿನಲ್ಲಿ ಆಯೋಜಿಸಿದ್ದ ‘ಬಹುಭಾಷಾ ಕವಿಗೋಷ್ಠಿ ಮತ್ತು ತುಳು ಕವಿಗೋಷ್ಠಿ’ಯು ದಿನಾಂಕ 4 ಅಕ್ಟೋಬರ್ 2024ರಂದು ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ಪ್ರಸ್ತುತಗೊಂಡಿತು. ಈ ದಿನ ಕವಿಗೋಷ್ಠಿಯಲ್ಲಿ ವಾಚಿಸುವ ಕವಿತೆಗಳನ್ನು ಒಳಗೊಂಡ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಡಾ. ಮೀನಾಕ್ಷಿ ರಾಮಚಂದ್ರ ಇವರು ಅಧ್ಯಕ್ಷತೆ ವಹಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಚೇತನ್ ಸೋಮೇಶ್ವರ, ಡಾ. ವಿಶ್ವನಾಥ ಬದಿಕಾನ, ಗಣೇಶ ಪ್ರಸಾದ ಪಾಂಡೇಲು, ರಘುಪತಿ ಭಟ್, ಕರುಣಾಕರ ಬಳ್ಕೂರು, ರೇಮಂಡ್ ಡಿಕುನ್ನಾ ತಾಕೊಡೆ, ಬದ್ರುದ್ದೀನ್ ಕೂಳೂರು, ಅರುಣ್ ಶೇಟ್, ಹಸನ್ ಕುಂಜತ್ತಬೈಲ್, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಅರವಿಂದ ಶ್ಯಾನಭಾಗ ಬಾಳೇರಿ ಇವರುಗಳು ಭಾಗವಹಿಸಿ ಕವಿತೆಗಳನ್ನು ವಾಚಿಸಿದರು. ಡಾ. ವಸಂತ ಕುಮಾರ್ ಪೆರ್ಲ ಇವರು ಅಧ್ಯಕ್ಷತೆ ವಹಿಸಿದ್ದ, ತುಳು ಕವಿಗೋಷ್ಠಿ’ಯಲ್ಲಿ ವಿಜಯಲಕ್ಷ್ಮೀ ಶೆಟ್ಟಿ ಸಾಲೆತ್ತೂರು ಸೂರ್ಯೋದಯವನ್ನು, ಸುಧಾ ನಾಗೇಶ್ ತುಳು ಭಾಷೆಯನ್ನು, ಅಕ್ಷಯಾ ಆರ್ವ. ಶೆಟ್ಟಿ ತಾಯಿಯ ವಾತ್ಸಲ್ಯವನ್ನು, ಅಕ್ಷತಾರಾಜ್ ಪೆರ್ಲ ತುಳು ಮಣ್ಣಿನ…

Read More

ಮಂಗಳೂರು : ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ರೋಟರ‍್ಯಾಕ್ಟ್ ಕ್ಲಬ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ (ಫಿಶರೀಸ್) ಚಿತ್ರಾಪುರ, ಕುಳಾಯಿ ಇವುಗಳ ಜಂಟಿ ಆಶ್ರಯದಲ್ಲಿ ಗಾಂಧೀಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಜನ್ಮ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ಕಲಾಚಿಗುರು ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಾಗಾರ’ ದಿನಾಂಕ 02 ಅಕ್ಟೋಬರ್ 2024ರಂದು ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿದ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಾಧವ ಸುವರ್ಣ ಮಾತನಾಡಿ “ಕಾಲೇಜು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಕಿರಿಯ ವಿದ್ಯಾರ್ಥಿಗಳಿಗೆ ಪರಿಚಯಿಸುವುದರಿಂದ ಕಿರಿಯರು ಪ್ರಭಾವಿತರಾಗಲು ಸಾಧ್ಯವಿದೆ.” ಎಂದರು. ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಸರಕಾರಿ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ.” ಎಂದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಭರತ್ ಕುಮಾರ್,…

Read More

ಮಂಗಳೂರು : ದಸರಾ ಬಹುಭಾಷಾ ಕವಿಗೋಷ್ಠಿಯು 8 ಅಕ್ಟೋಬರ್ 2024ರಂದು ಸಂಜೆ 3-00 ಗಂಟೆಗೆ ನಗರದ ಉರ್ವಾಸ್ಟೋರಿನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಇವರ ಸಹಯೋಗದೊಂದಿಗೆ 3ನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 12 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ. ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ. ನಿಕೇತನ ಉಡುಪಿ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೀತಾ ಜೈನ್ (ತುಳು), ಪ್ರಮೀಳಾ ರಾಜ್ ಸುಳ್ಯ (ಕನ್ನಡ), ಚಂದ್ರಾವತಿ ಬಡ್ಡಡ್ಕ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗ ಭಾಷೆ) ಮಂಜುನಾಥ್ ಗುಂಡ್ಮಿ (ಕುಂದಾಪುರ ಕನ್ನಡ), ಜ್ಯೋತಿ ರವಿ ರಾಜ್…

Read More

ಕಾಸರಗೋಡು : ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪಮೇಶ್ವರಿ ಸಾಂಸ್ಕೃತಿಕ ಘಟಕ, ವಿಜ್ಡಮ್ ಇನ್‌ಸ್ಟಿಟ್ಯೂಟ್ ನೆಟ್ವರ್ಕ್, ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ನಡೆಯುವ ಕಾಸರಗೋಡು ದಸರಾ ಸಂಸ್ಕೃತಿಕೋತ್ಸವದಲ್ಲಿ ದಿನಾಂಕ 6 ಅಕ್ಟೋಬರ್ 2024ರಂದು ‘ಕಾಸರಗೋಡು ದಸರಾ ಕವಿಶ್ರೇಷ್ಠ ಪ್ರಶಸ್ತಿ- 2024’ ಮತ್ತು ‘ಕಾಸರಗೋಡು ದಸರಾ ಕವಿ ರತ್ನ ಪ್ರಶಸ್ತಿ- 2024’ ಪ್ರದಾನ ಸಮಾರಂಭವು ನಡೆಯಲಿದೆ. ‘ಕಾಸರಗೋಡು ದಸರಾ ಕವಿಶ್ರೇಷ್ಠ ಪ್ರಶಸ್ತಿ- 2024’ಗೆ ಡಾ. ಕೆ.ಜಿ. ವೆಂಕಟೇಶ್ (ಶಿಕ್ಷಣ), ರಾಧಾಕೃಷ್ಣ ಕೆ ಉಳಿಯತ್ತಡ್ಕ (ಕನ್ನಡ ಹೋರಾಟಗಾರರು), ಪಿ.ವಿ. ಪ್ರದೀಪ್ ಕುಮಾರ್, ಮಂಗಳೂರು (ಪುಸ್ತಕ ಪ್ರಕಾಶನ), ಡಾ. ಕೊಳ್ಚಪ್ಪೆ ಗೋವಿಂದ ಭಟ್ (ಕಥಾ ಸಾಹಿತ್ಯ), ಲಕ್ಷ್ಮೀ ವಿ. ಭಟ್ ಮಂಜೇಶ್ವರ (ಮಕ್ಕಳ ಸಾಹಿತ್ಯ), ಜಯಾನಂದ ಪೆರಾಜೆ (ಸಂಘಟನೆ), ನಾಟಕ ಭಾರ್ಗವ ಕೆಂಪರಾಜು (ರಂಗಭೂಮಿ), ವಿರಾಜ್ ಅಡೂರು (ಅಂಕಣ ಬರಹಗಾರರು), ಸೀತಾಲಕ್ಷ್ಮಿ ವರ್ಮ ವಿಟ್ಲ (ನಿರೂಪಣೆ), ಶಾಂತಾ ಪುತ್ತೂರು (ಶಿಬಿರ ಸಂಘಟಕಿ), ರತ್ನಾ ಕೆ ಭಟ್ ತಲಂಜೇರಿ (ಯಕ್ಷಗಾನ)…

Read More

ಮಂಗಳೂರು : ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಚಾಲನೆ ದೊರೆತಿದ್ದ ಕರ್ನಾಟಕ ಸುವರ್ಣ ಸಂಭ್ರಮ – 50 ರಥಯಾತ್ರೆಯು ದಿನಾಂಕ 3 ಅಕ್ಟೋಬರ್ 2024ರ ಗುರುವಾರದಂದು ಮಂಗಳೂರು ನಗರಕ್ಕೆ ಆಗಮಿಸಿತು. ಚಿಕ್ಕಮಗಳೂರಿನಿಂದ ಬೆಳ್ತಂಗಡಿ ತಾಲೂಕಿನ ಮೂಲಕ ಜಿಲ್ಲೆಗೆ ಆಗಮಿಸಿದ ರಥ ಕಡಬ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ಮೂಲಕ ಮಂಗಳೂರು ತಾಲೂಕು ಪ್ರವೇಶಿಸಿದ್ದು, ಶುಕ್ರವಾರ ಮೂಡುಬಿದಿರೆ ತಾಲೂಕಿನ ಮೂಲಕ ಕಾರ್ಕಳ ತಾಲೂಕಿನ ಮೂಲಕ ಉಡುಪಿ ಜಿಲ್ಲೆಯ ಪ್ರವೇಶಿಸಲಿದೆ. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಥಕ್ಕೆ ಪುರಭವನದ ಆವರಣದಲ್ಲಿ ಸರಳವಾಗಿ ಸ್ವಾಗತ ಕೋರಲಾಯಿತು. ನೀತಿಸಂಹಿತೆ ಹಿನ್ನೆಲೆಯಲ್ಲಿ ರಥದ ತಾಲೂಕು ಸಂಚಾರ ಮೆರವಣಿಗೆಗೆ ಅವಕಾಶ ಇರಲಿಲ್ಲ. ರಥವನ್ನು ಕದ್ರಿಯ ಸರಕಾರಿ ಅಧಿತಿಗೃಹದಲ್ಲಿ ನಿಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ರಥದಲ್ಲಿರುವ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 07-10-2024ರಂದು ಸಂಜೆ ಗಂಟೆ 6.25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಮೂಲತಃ ಶಿವಪುರ, ಹೆಬ್ರಿಯವರಾದ ಸುಧನ್ವಾ ಎಸ್. ಆಚಾರ್ಯರವರು ಶ್ರೀ ಸುಬ್ರಹ್ಮಣ್ಯ ಎಸ್.ಜಿ. ಹಾಗೂ ಶ್ರೀಮತಿ ದೀಪಾ ಎಸ್. ಆಚಾರ್ಯರವರ ಜ್ಯೇಷ್ಠ ಪುತ್ರ. ತಮ್ಮ 3ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಪಾಶ್ಚಾತ್ಯ ನೃತ್ಯಕ್ಕೆ ವೇದಿಕೆ ಹತ್ತಿದ ಇವರು ತಮ್ಮ 12ನೇ ವಯಸ್ಸಿನಲ್ಲಿ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ಕಲಿಯಲು ಪ್ರಾರಂಭಿಸಿದರು. ಗೌರಿಬಿದನೂರಿನ ಶ್ರೀ ಶಾರದಾ ಕಿನ್ನರ ಕಲಾ ಮಂದಿರದ ಶ್ರೀಮತಿ ತಾರಿಣಿ ಶ್ರೀನಿವಾಸ್ ಇವರ ಮೊದಲ ಗುರು. ನಂತರ ಶ್ರೀಮತಿ ಚೈತ್ರ ಮೋಕ್ಷಗುಂಡಂ, ಯಲಹಂಕದಲ್ಲಿ ಶ್ರೀಮತಿ ಸಂತೋಷಿ ಪ್ರಶಾಂತ್ ಹಾಗೂ…

Read More

ಕಾಸರಗೋಡು : ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ (ರಿ) ಇದರ ಸಾರಥ್ಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಕಾರದೊಂದಿಗೆ ಅಂತರ್ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಲು ವಿಜೃಂಭಣೆಯಿಂದ ಜರಗಿದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪವು ದಿನಾಂಕ 29 ಸೆಪ್ಟೆಂಬರ್ 2024 ರಂದು ವಿಜೃಂಭಣೆಯಿಂದ ಜರಗಿ, ಕಾರ್ಯಾಗಾರ ಅಭೂತಪೂರ್ವ ಯಶಸ್ವಿಯಲ್ಲಿ ಪರಿಸಮಾಪ್ತಿಗೊಂಡಿತು. ಸಭೆಯಲ್ಲಿ ಸಮಾರೋಪ ಭಾಷಣಗೈದ ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾದ ಶ್ರೀ ರವೀಂದ್ರ ಜೋಶಿ ಮೈಸೂರು ಇವರು ರಂಗಚಿನ್ನಾರಿ ಹಾಗೂ ಭಕ್ತಿರಸ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರಲ್ಲದೇ, ಇಂತಹ ಕಾರ್ಯಕ್ರಮಗಳು ದೇಶದ ನಾನಾ ಮೂಲೆಯಲ್ಲಿ ಜರಗಬೇಕು ಎಂಬುದಾಗಿ ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷರಾದ ಕಲಾರತ್ನ ಶಂನಾಡಿಗ ಕುಂಬ್ಳೆ ವಹಿಸಿದ್ದರು. ಅತಿಥಿಗಳಾಗಿ ಖ್ಯಾತ ಜಲತರಂಗ ವಾದಕಿ ಶ್ರೀಮತಿ ವಿಜಯಲಕ್ಷ್ಮಿ ಹರಿಪ್ರಕಾಶ್ ಬೆದ್ರಡಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಂಕೀರ್ತನಕಾರರೂ, ಭಜನಾಪಟುವೂ…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಇದರ ವತಿಯಿಂದ ‘ಕಾರಂತ ಹುಟ್ಟುಹಬ್ಬ’ವನ್ನು ದಿನಾಂಕ 10 ಅಕ್ಟೋಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ಮಂಗಳೂರಿನ ಕೊಡಿಯಾಲ್ ಗುತ್ತು ರಸ್ತೆ, ಜನತಾ ಡಿಲಕ್ಸ್ ಪತ್ತುಮುಡಿ ಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ. ಜನತಾ ಡಿಲಕ್ಸ್ ಪಾಲುದಾರರಾದ ಪತ್ತುಮುಡಿ ಸೂರ್ಯ ನಾರಾಯಣ ರಾವ್ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಪುಷ್ಪ ನಮನ ಸಲ್ಲಿಸಲಿರುವರು. ಬಹುಶ್ರುತ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಇವರಿಗೆ ಉಪಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ‘ಕಾರಂತ ಪ್ರಶಸ್ತಿ’ ಪ್ರದಾನ ಮಾಡಲಿರುವರು. ನಾಡೋಜ ಪ್ರೊ. ಕೆ.ಪಿ. ರಾವ್ ಇವರು ಕಾರಂತ ಸಂಸ್ಮರಣೆ ಮಾಡಲಿದ್ದು, ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಕಾರ್ಡಿನಲ್ಲಿ ಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಗುವುದು.

Read More

ಬೆಂಗಳೂರು : ‘ಅನೇಕಾ ಬೆಂಗಳೂರು’ ಆಯೋಜಿಸುವ ‘ಆಧುನಿಕ ಅಭಿನಯ ಹಾಗೂ ರಂಗಪ್ರಸ್ತುತಿ ಕಾರ್ಯಾಗಾರ’ವು ದಿನಾಂಕ 17 ಅಕ್ಟೋಬರ್ 2024ರಿಂದ ಪ್ರತಿದಿನ ಸಂಜೆ 6-00ರಿಂದ 8-30 ಗಂಟೆ ವರೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ರವೀಂದ್ರ ಕಲಾ ಕ್ಷೇತ್ರದ ಆವರಣ, ಪದ್ದಣ್ಣ ತಾಲೀಮು ಕೊಠಡಿಯಲ್ಲಿ ಆಯೋಜಿಸಲಾಗಿದೆ. 45 ದಿನಗಳ ತನಕ ನಡೆಯುವ ಈ ಕಾರ್ಯಾಗಾರದಲ್ಲಿ ಖ್ಯಾತ ರಂಗನಿರ್ದೇಶಕರಾದ ಶ್ರೀ ಸುರೇಶ ಆನಗಳ್ಳಿ ಹಾಗೂ ಎನ್.ಎಸ್.ಡಿ./ ನೀನಾಸಂ ಪದವೀಧರರು ಮಾರ್ಗದರ್ಶನ ನೀಡಲಿದ್ದಾರೆ. ನೋಂದಾವಣೆಗೆ ಕೊನೆಯ ದಿನಾಂಕ 15 ಅಕ್ಟೋಬರ್ 2024 ಆಗಿದ್ದು, ವಯೋಮಿತಿ 17ರಿಂದ 45 ವರ್ಷದ 10 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ 9448050950 / 8792187637 ನ್ನು ಸಂಪರ್ಕಿಸಿರಿ.

Read More