Author: roovari

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಮತ್ತು ಸರೋಜಿನಿ ಮಧುಸೂದನ ಕುಶೆ ಶಾಲೆ ಅತ್ತಾವರ ಸಾರಥ್ಯದಲ್ಲಿ ‘ಸಾಹಿತ್ಯ ಅಭಿರುಚಿ’ 101ನೇ ಕಾರ್ಯಕ್ರಮವನ್ನು ದಿನಾಂಕ 01-06-2024ರಂದು 11-00 ಗಂಟೆಗೆ ಅತ್ತಾವರದ ಸರೋಜಿನಿ ಮಧುಸೂದನ ಕುಶೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಉದ್ಘಾಟಿಸಲಿದ್ದು, ಸರೋಜಿನಿ ಮಧುಸೂದನ ಕುಶೆ ಶಾಲೆಯ ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿರುವರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಉಜಿರೆ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸುರತ್ಕಲ್ಲಿನ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣ ಮೂರ್ತಿ, ಸಾಹಿತಿ ವಿಮರ್ಶಕರು ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ, ಸೈಂಟ್ ಆನ್ಸ್ ಡಿ.ಎಡ್. ಕಾಲೇಜಿನ ಗೌರವ ಉಪನ್ಯಾಸಕರಾದ ವ. ಉಮೇಶ್ ಕಾರಂತ, ನಿವೃತ್ತ ಉಪನ್ಯಾಸಕರಾದ ವಸಂತ ಶೆಟ್ಟಿ, ವೈದ್ಯನಾಥ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ರಾವ್…

Read More

ಮೋಹನ ಕುಂಟಾರ್ ಅವರ ‘ಲೋಕಾಂತದ ಕಾವು’ ಉತ್ತಮ ಕವಿತೆಗಳ ಸುಂದರ ಗುಚ್ಛ. ಇಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡಬಹುದಾದರೆ ಮತ್ತೆ ಕೆಲವನ್ನು ಭಾವಬದ್ಧವಾಗಿ ಓದಬಹುದು. ಇವುಗಳ ಹೃದ್ಯವಾದ ಭಾವ ಸಾಮರಸ್ಯದಲ್ಲಿ ನವ್ಯ-ನವೋದಯಗಳ ಕಲ್ಪನೆಯೇ ಒಮ್ಮೆ ಮರೆತುಹೋಗುತ್ತದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕವಿತೆಗಳ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಸರಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ವೈಶಿಷ್ಟ್ಯ. ‘ಕವಿ-ಕವಿತೆ’ ಎಂಬ ರಚನೆಯು ಕವಿತೆಯ ನಿರ್ವಚನದ ಕುರಿತು ಜಿಜ್ಞಾಸೆಯನ್ನು ನಡೆಸಿದರೆ ಆಟದಲ್ಲಿ ಕೂಟದಲ್ಲಿ ಬೇಟದಲ್ಲಿ ನೋಟದಲ್ಲಿ ಹೊಸೆದ ಭಾವದಾಟದಲ್ಲಿ ಮೆರೆಯುತ್ತಿತ್ತು ಕವಿತೆ ಲೋಕಾಂತದ ಕಾವಿನಲ್ಲಿ ಏಕಾಂತದ ಧ್ಯಾನದಲ್ಲಿ ಭಾವ ಭಾರದೊಜ್ಜೆಯಲ್ಲಿ ತಿಣುಕುತ್ತಿತ್ತು ಕವಿತೆ (ಕವಿತೆಯ ಹುಟ್ಟು) ಎಂಬ ಸಾಲುಗಳು ಬಿ.ಎಂ. ಶ್ರೀಯವರ ಲಯವನ್ನು ಅನುಸರಿಸಿವೆ. ಪಂಜೆಯವರ ‘ತೆಂಕಣಗಾಳಿಯಾಟ’ವನ್ನು ನೆನಪಿಸುವ ‘ಸುಂಟರಗಾಳಿ’ಯು ಪ್ರಾಕೃತಿಕ ವಿದ್ಯಮಾನದ ಒಂದು ಕ್ಷಣವನ್ನು ಸೆರೆಹಿಡಿದರೆ ‘ಕವಿಶೈಲದಲ್ಲಿ ಬೆಳಗು’ ಕುವೆಂಪು ಅವರ ಶೈಲಿಯನ್ನು ನೆನಪಿಸುತ್ತದೆ. ‘ಕೇರಳ’ವು ಸಾಕ್ಷರರ ನಾಡೊಂದರ ವಸ್ತುಸ್ಥಿತಿಯ ಇನ್ನೊಂದು ಮಗ್ಗುಲನ್ನು ವಿವರಿಸುವುದರೊಂದಿಗೆ ರಾಜ್ಯದ ಸಾಮಾಜಿಕ ವ್ಯವಸ್ಥೆಯನ್ನು ಲೇವಡಿ ಮಾಡುತ್ತದೆ. ಮಡಿಪಂಚೆಯುಟ್ಟು…

Read More

ಉಡುಪಿ : ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಇದರ ವತಿಯಿಂದ ‘ಸಾಹಿತ್ಯ ಸಹವಾಸ’ ದಿ. ಪ್ರೊ. ಯು.ಆರ್. ಅನಂತಮೂರ್ತಿಯವರ ವಿಡಿಯೊ ಸಾಹಿತ್ಯಿಕ ಉಪನ್ಯಾಸ ಸರಣಿಯ ಬಿಡುಗಡೆ ಹಾಗೂ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 01-06-2024ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ 9-30ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿಗಳು ಮತ್ತು ಚಿಂತಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ವಿಡಿಯೊ ಸರಣಿ ಬಿಡುಗಡೆ ಮಾಡಲಿದ್ದಾರೆ. ಕಾರಂತರ ಸಾಧನೆಯ ಅವಲೋಕನದಲ್ಲಿ ಪ್ರೊ. ಕೆ. ಚಿನ್ನಪ್ಪ ಗೌಡ ಇವರಿಂದ ‘ಕಾರಂತರ ಕುರಿತಾದ ಅನಂತಮೂರ್ತಿಯವರ ಉಪನ್ಯಾಸಕ್ಕೆ ಪ್ರತಿಸ್ಪಂದನೆ’, ಗಂಟೆ 11-00ರಿಂದ ಕಾರಂತಸೃಷ್ಟಿಯ ಹಲವು ಮುಖಗಳು ಎಂಬ ವಿಷಯದಲ್ಲಿ ಗೋಷ್ಠಿ, ಗಂಟೆ 12-20ಕ್ಕೆ ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ ಗಂಟೆ 2-00ರಿಂದ ‘ಕಾರಂತರು ಮತ್ತು ಅಡಿಗರ ಜೊತೆಗಿನ ಒಡನಾಟದ ನೆನಪುಗಳು’, ‘ಅಡಿಗರು ಮತ್ತು ನವ್ಯ ಕಾವ್ಯ : ಇಂದಿನ ಅನುಸಂಧಾನ’ದಲ್ಲಿ ಅಡಿಗರ ಕುರಿತಾದ ಅನಂತಮೂರ್ತಿಯವರ ಉಪನ್ಯಾಸಕ್ಕೆ ಪ್ರತಿಸ್ಪಂದನೆ…

Read More

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಸುಜಾತ ಎಲ್ ಶೆಟ್ಟಿ ಹಾಗೂ ಲೀಲಾಧರ್ ಬಿ ಶೆಟ್ಟಿ ಕಟ್ಲ ಇವರ ಮಗಳಾಗಿ 28.03.2000ರಂದು ಬಿಂದಿಯಾ ಶೆಟ್ಟಿ ಅವರ ಜನನ. ಪ್ರಸ್ತುತ CA ವ್ಯಾಸಂಗ ಮಾಡುತ್ತಿದ್ದಾರೆ. ವಿದುಷಿ ಪ್ರತಿಮಾ ಶ್ರೀಧರ್ ಇವರ ಭರತನಾಟ್ಯ ಗುರುಗಳು ಹಾಗೂ ಶ್ರೀಯುತ ರಾಕೇಶ್ ರೈ ಅಡ್ಕ ಇವರ ಯಕ್ಷಗಾನ ಗುರುಗಳು. ಗುರುಗಳ ಮಾರ್ಗದರ್ಶನ ಹಾಗೂ ಅನುಭವಿ ಕಲಾವಿದರ ಸಲಹೆ ಪಡೆದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ   ಬಿಂದಿಯಾ ಶೆಟ್ಟಿ. ಮಾನಿಷಾದ, ಶ್ರೀನಿವಾಸ ಕಲ್ಯಾಣ, ಸುದರ್ಶನ ವಿಜಯ, ಶಶಿಪ್ರಭಾ ಪರಿಣಯ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಸೀತೆ, ಶ್ರೀದೇವಿ, ಪದ್ಮಾವತಿ, ಶ್ರೀ ಕೃಷ್ಣ, ಲಕ್ಷ್ಮೀ ಇತ್ಯಾದಿ ಇವರ ನೆಚ್ಚಿನ ವೇಷಗಳು. ರಾಕೇಶ್ ರೈ ಅಡ್ಕ ಅವರ ಸನಾತನ ಯಕ್ಷಾಲಯ, ಪೂರ್ಣಿಮಾ ಯತೀಶ್ ರೈ ಅವರ ಶ್ರೀ ಮಹಾ ಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್ ಹಾಗೂ ಹಲವಾರು ಹವ್ಯಾಸಿ ಹಾಗೂ ವೃತ್ತಿ ಪರ…

Read More

ಮಣೂರು: ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ 2ನೇ ವರ್ಷದ ಪ್ರತಿಷ್ಠಾ ವರ್ದಂತಿ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ದ 30ನೆಯ ಕಾರ್ಯಕ್ರಮವಾಗಿ ಮಕ್ಕಳ ‘ಯುಗಳ ಸಂವಾದ’ವು ದಿನಾಂಕ 29-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಭಾಗವತರಾದ ಹರೀಶ್ ಕಾವಡಿ ಮಾತನಾಡಿ “ಸಾಂಸ್ಕೃತಿಕ ಲೋಕದ ಭವಿಷ್ಯದ ರೂವಾರಿಗಳು ತೆಕ್ಕಟ್ಟೆ ಸಂಸ್ಥೆಯಲ್ಲಿ ದಿನದಿನವೂ ವೃದ್ಧಿಗೊಳ್ಳುತ್ತಿದ್ದಾರೆ. ಯಕ್ಷಕಲೆಯಲ್ಲಿನ ವಿವಿಧ ಆಯಾಮಗಳಲ್ಲಿ ಕರಗತಗೊಂಡಿರುವ ಯಶಸ್ವಿ ಸಂಸ್ಥೆಯ ಪುಟಾಣಿಗಳು ಕರಾವಳಿ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತ್ತದೆ. ರಂಗ ಒದಗುತ್ತಾ ಹೋದಾಗ ಮಕ್ಕಳಲ್ಲಿನ ಕಲೆ ಪ್ರಬುದ್ಧಗೊಳ್ಳುತ್ತದೆ. ಹಲವಾರು ರಂಗದಲ್ಲಿ ಮಿಂಚುತ್ತಾ ಕಳೆಕಟ್ಟುವ ಮಕ್ಕಳು ಕಲಾ ವಲಯದಲ್ಲಿ ಸೈ ಎನಿಸಿಕೊಂಡಿರುವುದಂತೂ ನಿಜ.” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ರಘುರಾಮ ಶೆಟ್ಟಿಯವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಅತಿಥಿಗಳಾಗಿ ವಿಜಯ್ ಶೆಟ್ಟಿ, ಸುರೇಶ್, ಚಂಡೆಯ ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಲಂಕಾದಹನದ ಹನುಮಂತ-ಲಂಕಿಣಿ, ದ್ರೌಪದಿ ಪ್ರತಾಪದ ದ್ರೌಪದಿ-ಅರ್ಜುನ, ಕೃಷ್ಣಾರ್ಜುನದ…

Read More

ಬೆಂಗಳೂರು : ಬೆಂಗಳೂರಿನ ‘ಅಂತರಂಗ’ ಪ್ರಸ್ತುತಪಡಿಸುವ ನೂತನ ನಾಟಕ ‘ಕಾಯುವ ಕಾಯಕ’ವು ದಿನಾಂಕ 05-06-2024 ರಂದು ಬೆಂಗಳೂರಿನ ರಂಗ ಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವನ ಕವಿ ಹೆಚ್. ಡುಂಡಿರಾಜ್ ವಿರಚಿತ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಖ್ಯಾತ ನಿರ್ದೇಶಕಿ ಅರ್ಚನಾ ಶ್ಯಾಮ್ ನಿರ್ವಹಿಸಿದ್ದಾರೆ. ನಾಟಕವು ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವುಗಳನ್ನು ಒಳಗೊಂಡಿದೆ. ವೀಕ್ಷಕರು ‘ಬುಕ್ ಮೈ ಶೋ’ ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಕಲ್ ಶ್ಯಾಮ್- 98809 14509 ಮತ್ತು ಮುರಳೀಧರ್ – 99869 11321 ಇವರನ್ನು ಸಂಪರ್ಕಿಸಬಹುದು.

Read More

ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ರಾಗರತ್ನ ಮಾಲಿಕೆ’ -25 ಸಂಗೀತ ಕಾರ್ಯಕ್ರಮವು ದಿನಾಂಕ 02-06-2024ರಂದು ಸಂಜೆ 7-00 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ವಿದ್ವಾನ್ ಪ್ರಣವಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಇವರ ಶಿಷ್ಯ ಚಿರಂಜೀವಿ ಮೋಕ್ಷಿತ್ ಎಸ್. ಇವರ ದ್ವಂದ್ವ ವಯೊಲಿನ್ ವಾದನಕ್ಕೆ ಡಾ. ಅಕ್ಷಯ ನಾರಾಯಣ ಕಾಂಚನ ಇವರ ಮೃದಂಗದಲ್ಲಿ ಹಾಗೂ ಮೈಸೂರಿನ ವಿದ್ವಾನ್ ಮಂಜುನಾಥ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9964140601 ಇವರನ್ನು ಸಂಪರ್ಕಸಿರಿ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ತಿಳಿಸಿರುತ್ತಾರೆ.

Read More

ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜು ವತಿಯಿಂದ ಕಾಲೇಜಿನ ತುಳು ಸಂಘ ಹಾಗೂ ಉಡುಪಿ ತುಳು ಕೂಟ ಆಶ್ರಯದಲ್ಲಿ ತುಳು ಸಂಸ್ಕೃತಿ ಹಬ್ಬ, ಸಾಂಪ್ರದಾಯಿಕ ದಿನದ ಅಂಗವಾಗಿ ‘ತುಳು ಐಸಿರಿ 2024’ ಕಾರ್ಯಕ್ರಮವು ದಿನಾಂಕ 28-05-2024ರಂದು ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ನಟ ಕಾಸರಗೋಡು ಚಿನ್ನಾ “ನಾವಾಡುವ ಭಾಷೆ ಬಾಂಧವ್ಯವಾಗಿ ಗಟ್ಟಿಗೊಳ್ಳಬೇಕು. ಭಾಷೆಗಳನ್ನು ಮನೆಮನೆಗಳಲ್ಲಿ ಸಂಭ್ರಮಿಸಬೇಕು. ಈ ನಿಟ್ಟಿನಲ್ಲಿ ಫರ್-ಫರ್ ಕೊಂಕಣಿ ಕಾರ್ಯಕ್ರಮ ರೂಪಿಸಲಾಯಿತು. ಇದೇ ಮಾದರಿಯಲ್ಲಿ ಮನೆಮನೆಗಳಲ್ಲಿ ತುಳು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಸಾಕಷ್ಟು ಹೋರಾಟಗಳು, ಪ್ರಯತ್ನಗಳು ನಡೆಯುತ್ತಿದ್ದರೂ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗದ ತುಳು ಸಾಹಿತ್ಯ. ತುಳು ಲಿಪಿ ಬರವಣಿಗೆ ಮತ್ತು ಓದು ಪರಿಣಾಮಕಾರಿಯಾಗಿ ನಡೆಯಬೇಕು. ಲಿಪಿಯ ಬಳಕೆಗೆ ಒತ್ತು ನೀಡಬೇಕು. ಮಾತೃ ಭಾಷೆ ಜತೆಗೆ ಇತರ ಭಾಷೆಗಳನ್ನು ಕಲಿಯುವ, ಮಾತನಾಡುವ ಆಸಕ್ತಿ…

Read More

ಬೆಂಗಳೂರು : ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ ಕುಮಾರ ಇವರ ಮೊಮ್ಮಗಳು ಹಾಗೂ ವಿದ್ವಾನ್ ಪಿ. ಪ್ರವೀಣ ಕುಮಾರ್ ಇವರ ಶಿಷ್ಯೆ ಕುಮಾರಿ ಗೌರಿ ಮನೋಹರಿ ಎಚ್. ಇವರ ಭರತನಾಟ್ಯ ರಂಗಪ್ರವೇಶ ‘ರಂಗಾಭಿವಂದನೆ’ ಕಾರ್ಯಕ್ರಮವು ದಿನಾಂಕ 30-05-2024ರಂದು ಸಂಜೆ ಗಂಟೆ 6-15ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ. ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ್, ಶ್ರೀ ಶಂಕರ್ ಕಂದಸ್ವಾಮಿ ಹಾಗೂ ರುಕ್ಮಿಣಿ ವಿಜಯಕುಮಾರ್ ಇವರುಗಳು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಶ್ರೀಮತಿ ವಿದ್ಯಾಲಕ್ಷ್ಮಿ ಎಂ.ಎಸ್. ಮತ್ತು ಶ್ರೀ ಕಿರಣ್ ಎಚ್.ಎಸ್. ಇವರು ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ನಾಲ್ಕನೇ ದಿನದ ಕಾರ್ಯಕ್ರಮವು ದಿನಾಂಕ 28-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಿಮರ್ಶಕ ಡಾ. ಎಂ.ಪ್ರಭಾಕರ ಜೋಷಿ “ವಿಶ್ವದ ರಂಗಭೂಮಿ ಅದ್ಭುತವಾಗಿ ಬೆಳೆದಿದೆ. ಅಂತೆಯೇ ಯಕ್ಷಗಾನ ರಂಗಭೂಮಿಯೂ ತನ್ನನ್ನು ತಾನು ತೆರೆದುಕೊಂಡು ವಿಶಾಲ ಭಾವದಿಂದ ವಿಕಾಸಗೊಳ್ಳಬೇಕಾಗಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಹೀಗೆಲ್ಲಾ ಎಗ್ಗೆಗಳು ಆರಂಭವಾಗಿದೆ ಆ ದೃಷ್ಟಿಯಲ್ಲಿ ರಜತ ವರ್ಷದ ಹೊಸ್ತಿಲಲ್ಲಿರುವ ಸರಯೂ ಮಕ್ಕಳ ಮೇಳವೂ ಯೋಚಿಸಬೇಕು. ಪ್ರಬುದ್ಧ ಕಾರ್ಯಕ್ರಮಗಳ ಮೂಲಕ ಬೆಳೆಯಬೇಕು. ಹಿರಿಯರ ಮಾರ್ಗದರ್ಶನ, ಕಿರಿಯರ ಬಾಗೀದಾರಿಕೆಯಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿ ಸರಯೂ ಮನೆ ಮಾತಾಗಲಿ.” ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಪ್ರೋತ್ಸಾಹಕ ಹಾಗೂ ತೆಂಕು-ಬಡಗಿನ ಸಮನ್ವಯಕಾರ ಕೆರೆಮನೆ ಶ್ರೀಶಿವಾನಂದ ಹೆಗಡೆ…

Read More