Author: roovari

1 ಏಪ್ರಿಲ್ 2023, ಮುಂಬೈ: ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ – 2022ರ ಫಲಿತಾಂಶ ಪ್ರಕಟಗೊಂಡಿದೆ. ಡಾ. ಬೇಲೂರು ರಘುನಂದನ್ ಅವರ “ಶರ್ಮಿಷ್ಟೆ” ನಾಟಕಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ. ನಾಟಕಕಾರ, ನಟ, ನಿರ್ದೇಶಕ, ಲೇಖಕ ಡಾ. ಬೇಲೂರು ರಘುನಂದನ್ ಇವರು ಶ್ರೀ ರಮೇಶ್ ಬಿ. ಆರ್. ಮತ್ತು ಶ್ರೀಮತಿ ಸುಬ್ಬಲಕ್ಷ್ಮೀ ದಂಪತಿಗಳ ಸುಪುತ್ರ. ಬೆಂಗಳೂರಿನ ವಿಜಯನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾದ ಇವರಿಗೆ ಕಾಜಾಣ ಬಳಗದ ಮೂಲಕ ಅನೇಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವವಿದೆ. 1996ರಲ್ಲಿ ರಂಗಭೂಮಿ ಪ್ರವೇಶಿಸಿದ ಇವರು ನಾಟಕ ನಿರ್ದೇಶನ ಮಾಡುವಲ್ಲಿಂದ ಬಣ್ಣ ಹಚ್ಚಿ ಅಭಿನಯ ಮಾಡುವುದರಲ್ಲೂ ಸೈ ಅನ್ನಿಸಿ ಕೊಂಡವರು. ಸುಮಾರು 27ಕ್ಕೂ ಮಿಕ್ಕಿ ನಾಟಕ ರಚನೆ ಮಾಡಿದ ಇವರು 9ಕ್ಕೂ ಹೆಚ್ಚು ನಾಟಕ ನಿರ್ದೇಶನ ಮಾಡಿದ್ದಾರೆ. ನಾಟಕ ಸಾಹಿತ್ಯ ಮತ್ತು ರಂಗಭೂಮಿಯನ್ನು ಕುರಿತ ಸಂಶೋಧನಾ ಮಹಾ…

Read More

31 ಮಾರ್ಚ್ 2023: ಸತತ ಪರಿಶ್ರಮ, ನಿರಂತರ ಅಧ್ಯಯನದ ಮೂಲಕ ಸಂಶೋಧನ ಕೃತಿಯನ್ನು ಹೊರ ತಂದಿರುವ ಡಾ. ಸುಭಾಷ್ ಪಟ್ಟಾಜೆ ಅವರು ಹೊಸತನ್ನು ಸಾಧಿಸಿದ್ದಾರೆ. ಈ ಕೃತಿ ಇನ್ನಷ್ಟು ಹೊಸತುಗಳಿಗೆ ಪ್ರೇರಣೆಯಾಗಲಿ. ಇಂಥ ಮೌಲಿಕ ಕೃತಿಗಳು ಅವರಿಂದ ಇನ್ನಷ್ಟು ಮೂಡಿ ಬರಲಿ ಎಂದು ನಿವೃತ್ತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ಡಾ. ಸುಭಾಷ್ ಪಟ್ಟಾಜೆ ಅವರ ಅಧ್ಯಯನ ಕೃತಿ ‘ಕಥನ ಕಾರಣ’ವನ್ನು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. “ಜ್ಞಾನವಾಹಿನಿಯಾದ ಭಾಷೆಗೆ ಭಾರತೀಯರು ಬಹಳ ಮಹತ್ವವನ್ನು ಕೊಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಮನುಷ್ಯನ ಮನಸ್ಸು ಮತ್ತು ಬುದ್ಧಿ ಕಾರ್ಯಪ್ರವೃತ್ತವಾಗುವುದು ಮುಖ್ಯ. ಇದರ ಹಿಂದೆ ನಾಲ್ಕು ಚಕ್ಷುಗಳ ದುಡಿಮೆ ಇರಬೇಕು. ದೇವರ ಮುಂದೆ ಹೊರಕಣ್ಣು ಮುಚ್ಚಿ ಮನಃ ಚಕ್ಷುವನ್ನು ತೆರೆಯುವುದು ಮೊದಲ ಹಂತ. ಮೂರನೆಯದು ಜ್ಞಾನಚಕ್ಷು. ಋಷಿಗಳಿಂದ ತೊಡಗಿ ಉತ್ತಮ ಸಂದೇಶಗಳನ್ನು ಕೊಡುವಲ್ಲಿ ನಾಲ್ಕನೆಯದಾದ ದಿವ್ಯಚಕ್ಷು ಕೆಲಸ ಮಾಡುತ್ತದೆ. ನಾವೆಲ್ಲರೂ ಒಳಗಣ್ಣುಗಳನ್ನು ತೆರೆದು ಅರಿವಿನ ಹಾದಿಯಲ್ಲಿ ಸಾಗೋಣ” ಎಂದರು. ಕಾಸರಗೋಡು ಜಿಲ್ಲಾ ಕನ್ನಡ…

Read More

30 ಮಾರ್ಚ್ 2023, ಮಂಗಳೂರು: ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು “ಸಮರ್ಪಣಂ” ವಿಶ್ವಕರ್ಮ ಕಲೋತ್ಸವ ಇದರ ಉದ್ಘಾಟನಾ ಸಮಾರಂಭವು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ದಿನಾಂಕ 26-03-2023 ಭಾನುವಾರದಂದು ಅದ್ದೂರಿಯಾಗಿ ನಡೆಯಿತು. ವಿಶ್ವಕರ್ಮ ಕಲಾ ಪರಿಷತ್ತನ್ನು ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಿ “ವಿಶ್ವಕರ್ಮ ಸಮಾಜದ ಕಲಾವಿದರು ಆರ್ಥಿಕವಾಗಿ ಹಿಂದುಳಿದಿದ್ದರೂ ಕಲಾವಂತಿಕೆಯಲ್ಲಿ ಶ್ರೀಮಂತರು. ನಮ್ಮ ಕಲೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ನಡೆಯಬೇಕಿದೆ. ವಿಶ್ವಕರ್ಮ ಸಮಾಜಕ್ಕೆ ಸರಕಾರದ ಪ್ರೋತ್ಸಾಹ ಮತ್ತಷ್ಟು ಬೇಕಾಗಿದೆ” ಎಂದು ಆಶೀರ್ವಚನ ನೀಡಿದರು. ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಕೇಶವ ಆಚಾರ್ಯ “ಸಮರ್ಪಣಂ” ವಿಶ್ವಕರ್ಮ ಕಲೋತ್ಸವವನ್ನು ಉದ್ಘಾಟಿಸಿ, “ನಮ್ಮ ಸಮಾಜಕ್ಕೆ ಈ ದಿನ ಸುದಿನ. ಕಲಾತಪಸ್ವಿಗಳಿಗೆ ಕಲಾಸರಸ್ವತಿಯ ಅನುಗ್ರಹ ದೊರೆಯಲಿ” ಎಂದರು. ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ಸಮಾಜದ ಉನ್ನತಿಯಾಗಬೇಕಾದರೆ ನಾವು ಸಂಘಟಿತರಾಗಬೇಕು ಮತ್ತು ಜ್ಞಾನ ಕೌಶಲಗಳ…

Read More

30 ಮಾರ್ಚ್ 2023, ಧಾರವಾಡ: ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ನೀಡುವ 2022ನೇ ಸಾಲಿನ “ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ”ಯು ಮಹಾಂತೇಶ ನವಲಕಲ್ ಅವರ ‘ಬುದ್ಧಗಂಟೆಯ ಸದ್ದು ಮತ್ತು ಇತರೆ ಕತೆಗಳು’ ಹಾಗೂ ಶ್ರೀಲೋಲ ಸೋಮಯಾಜಿಯವರ ‘ನ ಪ್ರಮದಿತವ್ಯಂ’ ಎಂಬ ಕಥಾಸಂಕಲನಗಳ ಹಸ್ತಪ್ರತಿಗಳಿಗೆ ದೊರತಿದೆ. ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಟಿ.ಪಿ. ಅಶೋಕ ಮತ್ತು ಖ್ಯಾತ ಕಥೆಗಾರ ಡಾ. ಕೆ. ಸತ್ಯನಾರಾಯಣ ಅವರು ತೀರ್ಪುಗಾರರಾಗಿದ್ದು ಸರ್ವಾನುಮತದಿಂದ ಈ ಹಸ್ತಪ್ರತಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಪ್ರಶಸ್ತಿ ರೂ.20000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ಎಪ್ರಿಲ್ 16ರಂದು ಧಾರವಾಡದ ರಂಗಾಯಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕ ವಿಕಾಸ ಹೊಸಮನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀಲೋಲ ಸೋಮಯಾಜಿ ಮಹಾಂತೇಶ ನವಲಕಲ್

Read More

30 ಮಾರ್ಚ್ 2023, ಮಂಗಳೂರು: ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್‌. ಸುವರ್ಣ ಇವರು ‘ತುಳು ಕೂಟ ಕುಡ್ಲ’ದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಸರಣಿ ಕಾರ್ಯಕ್ರಮದ ಭಾಗವಾಗಿ ದಿನಾಂಕ 26-03-2023 ರವಿವಾರದಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ‘ತುಳು ಕುಣಿತ ಭಜನ ಸ್ಪರ್ಧೆ 2023’ಕ್ಕೆ ಚಾಲನೆ ನೀಡಿ ಮಾತನಾಡುತ್ತಾ “ಭಜನೆ ಧರ್ಮದ ಆಚರಣೆಯ ಭಾಗವಾದರೆ, ತುಳು ಭಾಷೆ ನಮ್ಮ ಸಂಸ್ಕೃತಿಯ ಭಾಗ. ಧಾರ್ಮಿಕ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಒಟ್ಟು ಸೇರಿಸಿ ಆಯೋಜಿಸಿರುವ ಕುಣಿತ ಭಜನ ಕಾರ್ಯಕ್ರಮ ಅರ್ಥಪೂರ್ಣವಾದುದು. ತುಳು ಭಾಷೆಯಲ್ಲಿ ಮಾತನಾಡುವುದನ್ನು ನಾವು ನಮ್ಮ ಹಿರಿಯರಿಂದ ಕಲಿತಿದ್ದೇವೆ. ತುಳುನಾಡಿನಲ್ಲಿ ಹುಟ್ಟಿದ ನಮಗೆ ತುಳು ಭಾಷೆಯನ್ನು ಉಳಿಸುವ ಮಹತ್ವದ ಜವಾಬ್ದಾರಿಯಿದೆ. ಈ ಕೆಲಸ ಯಶಸ್ವಿಯಾಗಬೇಕಿದ್ದರೆ ನಾವು ನಮ್ಮ ಮಕ್ಕಳ ಮೂಲಕ ಮೊಮ್ಮಕ್ಕಳಿಗೆ ಭಾಷೆಯನ್ನು ಕಲಿಸಿಕೊಡಬೇಕು. ಅವರು ಕಲಿತು ಮಾತನಾಡಲು ತೊಡಗಿದರೆ ಮುಂದಿನ ತಲೆಮಾರಿಗೆ ಭಾಷೆ ಉಳಿಯಲು ಸಾಧ್ಯ” ಎಂದರು. ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತೇಸರ ಪಿ.…

Read More

29 ಮಾರ್ಚ್ 2023, ತುಮಕೂರು: ಬೆಂಗಳೂರಿನ ರಂಗಚಕ್ರ ಕಲಾತಂಡದ ಸಹಯೋಗದೊಂದಿಗೆ ಕವಿತಾಕೃಷ್ಣ ಸಾಹಿತ್ಯ ಮಂದಿರವು ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯು ದಿನಾಂಕ 27-03-2023ರಂದು ತುಮಕೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ವಿಶೇಷ ಉಪನ್ಯಾಸವನ್ನು ನೀಡುತ್ತಾ ‘ಕ’ ಎಂದರೆ ಆನಂದವನ್ನು ‘ಲಾ’ ಎಂದರೆ ತರುವುದು ಎಂದು ಅರ್ಥ. ಈ ಆನಂದವು ಲೌಕಿಕ ಆನಂದವನ್ನು ಅಷ್ಟೇ ಅಲ್ಲದೆ ಆತ್ಮಾನಂದವನ್ನೂ ಬ್ರಹ್ಮಾನಂದವನ್ನೂ ತರಬಲ್ಲದು. ವಿಶ್ವ ರಂಗಭೂಮಿಯು ಜಗತ್ತಿಗೆ ಆನಂದವನ್ನು ಕೊಟ್ಟ ಅಪೂರ್ವ ವೇದಿಕೆಯಾಗಿದೆ ಅವರು ಅಭಿಪ್ರಾಯಪಟ್ಟರು. “ಭಾರತದ ರಂಗಭೂಮಿ ಕೂಡ ಅತ್ಯಂತ ಅಗ್ಗಳವಾದ ಕಾಣಿಕೆಯನ್ನು ನೀಡಿದೆ. ಕನ್ನಡ ರಂಗಭೂಮಿಯು ಅರಮನೆ, ಗುರುಮನೆಗಳಿಂದ ಪೋಷಿಸಲ್ಪಟ್ಟು, ಶ್ರೀಸಾಮಾನ್ಯರ ಮನವನ್ನು ಗೆದ್ದು ಮುಕ್ತ ವಿಶ್ವವಿದ್ಯಾನಿಲಯದಂತೆ ಹಲವು ಶತಮಾನಗಳ ಕಾಲ ಸೇವೆಯನ್ನು ಮಾಡಿದೆ. ನಾಟಕಕಾರರು. ನಟರು, ರಂಗತಜ್ಞರು, ಲಲಿತಕಲೆಗಳ ಕಲಾವಿದರು ಕೂಡಿ ವಿಶ್ವ ರಂಗಭೂಮಿಗೆ ಅವರ್ಣೀಯ ಕಾಣಿಕೆಯನ್ನು ನೀಡಿದ್ದಾರೆ” ಎಂದು ನುಡಿದರು. ರಂಗಚಕ್ರದ ವಿದ್ಯಾರ್ಥಿಗಳು ನಡೆಸಿದ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಾಟಕಕಾರ ಡಾ. ಕವಿತಾಕೃಷ್ಣರನ್ನು ಆತ್ಮೀಯವಾಗಿ ಗೌರವಿಸಲಾಯಿತು. ರಂಗಚಕ್ರದ…

Read More

29 ಮಾರ್ಚ್ 2023, ಕಾರ್ಕಳ: ಯಕ್ಷ ರಂಗಾಯಣದ ಆಶ್ರಯದಲ್ಲಿ ದಿನಾಂಕ 27-03-2023ರಂದು ಕಾರ್ಕಳದ ಕೋಟಿಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಏರ್ಪಡಿಸಿದ “ವಿಶ್ವರಂಗಭೂಮಿ ದಿನಾಚರಣೆ”ಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾದ ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಉದ್ಘಾಟಿಸಿ, “ರಂಗಭೀಷ್ಮ ಬಿ.ವಿ.ಕಾರಂತರ ಕನಸಿನ ಕರ್ನಾಟಕದ ಆರನೇ ರಂಗಾಯಣವಾಗಿರುವ ಕಾರ್ಕಳದ ಯಕ್ಷ ರಂಗಾಯಣವು ನಾಡಿನ ಸಾಂಸ್ಕೃತಿಕ ಕಿರೀಟವಾಗಿದೆ. ರಂಗಭೂಮಿ ಅನ್ನೋದು ಭಾವನೆಗಳ ಸಮುದ್ರ. ಸಂಬಂಧಗಳನ್ನು ಕಟ್ಟುವ ಕಾರ್ಯ ಮತ್ತು ಬದುಕಿನ ಪಾಠ ಕಲಿಯಲು ರಂಗಭೂಮಿ ಪೂರಕವಾಗಿದೆ” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಮುಖ್ಯ ಅತಿಥಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಕೋಟ್ಯಾನ್ ಮಾತನಾಡಿ ‘ಯಕ್ಷ ರಂಗಾಯಣ ನಮ್ಮೂರಿಗೆ ಹೆಮ್ಮೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಅರಳಿಸುತ್ತಿರುವ ರಂಗಾಯಣಕ್ಕೆ ನಮ್ಮ ಬೆಂಬಲ ಯಾವತ್ತೂ ಇದೆ’ ಎಂದರು. ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷರಾದ ಎಸ್.ನಿತ್ಯಾನಂದ ಪೈ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಯಕ್ಷ ರಂಗಾಯಣದ ನಿರ್ದೇಶಕರದ ಡಾ. ಜೀವನ್ ರಾಂ ಸುಳ್ಯ ಮಾತನಾಡಿ ‘ಇಂದು ರಂಗಭೂಮಿಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದ…

Read More

29 ಮಾರ್ಚ್ 2023, ಬೈಂದೂರು: ಸುರಭಿ (ರಿ.) ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಹಭಾಗಿತ್ವದೊಂದಿಗೆ ನಡೆಸಿದ “ವಿಶ್ವ ರಂಗಭೂಮಿ ದಿನಾಚರಣೆ”ಯು ದಿನಾಂಕ 27-03-2023ರಂದು ರೋಟರಿ ಭವನ ಬೈಂದೂರು ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ. ಗೋವಿಂದ, ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು ಹಾಗೂ ಶ್ರೀ ಉದಯ ಆಚಾರ್ಯ ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು ಇವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದ ಆರ್.ಡಿ.ಟೈಲರ್ (ರುಕ್ಕು ಟೈಲರ್) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಗರಾಜ್ ಪಿ. ಯಡ್ತರೆ, ಅಧ್ಯಕ್ಷರು ಸುರಭಿ ಬೈಂದೂರು ಇವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಸ್ಕರ ಬಾಡ ಕಾರ್ಯದರ್ಶಿ ಸುರಭಿ ಬೈಂದೂರು ಇವರು ಸ್ವಾಗತಿಸಿದರು. ಶ್ರೀ ಆನಂದ ಮುದ್ದೋಡಿ ಇವರು ರಂಗ ಭೂಮಿ ಸಂದೇಶ ವಾಚಿಸಿದರು. ಸುಧಾಕರ್ ಪಿ. ಬೈಂದೂರು ನಿರೂಪಿಸಿ, ರಾಮಕೃಷ್ಣ ದೇವಾಡಿಗ ಧನ್ಯವಾದ ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜೇಂದ್ರ ಕಾರಂತ್ ಬೆಂಗಳೂರು ರಚಿಸಿ, ಯೋಗಿ ಬಂಕೇಶ್ವರ್ ನಿರ್ದೇಶಿಸಿದ…

Read More

29 ಮಾರ್ಚ್ 2023, ಉಡುಪಿ: ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಸಾಧಕರಿಗೆ ವಿಶ್ವ ರಂಗಭೂಮಿ ಗೌರವಾರ್ಪಣೆಯು ರಾಜ್ಯದ ಪ್ರತಿಷ್ಠಿತ ರಂಗಭೂಮಿ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ಎಂ.ಜಿ.ಎಂ. ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸೋಮವಾರ, ದಿನಾಂಕ 27-03-2023ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿಯ ಪ್ರಭಾಕರ ಸೌಂಡ್ಸ್ ಮಾಲೀಕ ಶ್ರೀ ಕೆ.ಪ್ರಭಾಕರ ಶೆಟ್ಟಿಗಾರ್ ಹಾಗೂ ಹಿರಿಯ ರಂಗನಟ ಶ್ರೀ ಯು.ಎಂ.ಅಸ್ಲಾಮ್ ಅವರಿಗೆ “ವಿಶ್ವ ರಂಗಭೂಮಿ” ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ (ರಿ.) ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ರಂಗಭೂಮಿಯಲ್ಲಿ ಏನು ಉಂಟು, ಏನಿಲ್ಲ ಎನ್ನುವುದಕ್ಕಿಂತ ಬದುಕಿನ ಪಾಠವೇ ಇಲ್ಲಡಗಿದೆ ಎಂಬುದನ್ನು ಅರಿಯಬೇಕು. ರಂಗಭೂಮಿ ಉಡುಪಿ ಸಂಸ್ಥೆ ನಿರಂತರ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಸಂಸ್ಥೆಗೆ ರಂಗಾಸಕ್ತರ ನಿರಂತರ ಪ್ರೋತ್ಸಾಹ ಅಗತ್ಯ” ಎಂದರು. ವಿಶ್ವ ರಂಗಭೂಮಿ ಗೌರವಕ್ಕೆ ಆಯ್ಕೆಯಾದ ಕೆ.ಪ್ರಭಾಕರ ಶೆಟ್ಟಿಗಾರ್ ಹಾಗೂ ಹಿರಿಯ…

Read More

29 ಮಾರ್ಚ್ 2023, ಕುಮಟಾ: ಪ್ರಸ್ತುತ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ಅಂಶಗಳು ಹಾಗೂ ಗಂಡ ಹೆಂಡತಿಯ ನಡುವೆ ಬಾಂಧವ್ಯದ ಕೊರತೆಯುಂಟುಮಾಡುವ ಅಂಶಗಳನ್ನು ಗಮನದಲ್ಲಿಟ್ಟು, ಚಿಂತನ ಮಂಥನ ಮಾಡುವ ಉದ್ದೇಶದಿಂದ ಸತ್ವಾಧಾರ ಫೌಂಡೇಶನ್ ವತಿಯಿಂದ 26 ಮಾರ್ಚ್ 2023ರಂದು ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ನಡೆಸಲಾದ “ಸಾಗುತಿರಲಿ ಬಾಳ ಬಂಡಿ” ವಿನೂತನ ಕಾರ್ಯಕ್ರಮ ಜನಮೆಚ್ಚುಗೆ ಪಡೆಯುವ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವಲ್ಲಿಯೂ ಯಶಸ್ವಿಯಾಯಿತು. ದಾಂಪತ್ಯದಲ್ಲಿ ಬಿರುಕುಮೂಡಿಸುವ ‘ಈಗೋ, ಸ್ವಪ್ರತಿಷ್ಟೆ ಹಾಗೂ ಅಪನಂಬುಗೆ’ ಅಂಶಗಳನ್ನು ಗುರ್ತಿಸಿದ ಬಲೂನುಗಳನ್ನು ಒಡೆಯುವ ಮೂಲಕ ಕಾರ್ಯಕ್ರಮವನ್ನು ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಎಲ್ಲವನ್ನೂ ಸಹಜವಾಗಿ ಒಪ್ಪಿಕೊಳ್ಳುವ ಗುಣವನ್ನು ಬೆಳೆಸುಕೊಳ್ಳಬೇಕು. ‘ಹೌದು ಮತ್ತು ಆಗಲಿ’ ಎಂಬ ಪದವನ್ನು ಬಳಸಿದರೆ ಜೀವನ ಸಾಂಗವಾಗಿ ನಡೆಯುತ್ತದೆ. ಇಂದಿನ ಯುವಜನತೆ ಪರಸ್ಪರ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನತೆಗೆ ಸಂದೇಶ ಕೊಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ…

Read More