Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಂಗೀತ ಸಂಭ್ರಮ ಹಾಗೂ ಶರಣ ನುಲಿಯ ಚಂದಯ್ಯ ಡಾ. ಬಿ.ಆರ್. ಅಂಬೇಡ್ಕರ್ ಬಸವ ಜಯಂತಿ ಸಂಗೀತೋತ್ಸವವು ದಿನಾಂಕ 14-04-2024ರಂದು ಮಧ್ಯಾಹ್ನ 3-00 ಗಂಟೆಗೆ ನಾದಬ್ರಹ್ಮ ಶಾರದ ಮಂದಿರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರ್ತಿಶೇಷ ವಿದ್ವಾನ್ ಗಾಮದ ಶ್ರೀ ಕೆ. ಮಂಜಪ್ಪನವರ ಸ್ಮರಣಾರ್ಥ ಕರ್ನಾಟಕ ಸಂಗೀತ ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಹೆಚ್.ಎಲ್. ಗೋಪಾಲಕೃಷ್ಣ, ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಜಿ.ಆರ್. ರಾಮಕೃಷ್ಣಯ್ಯ, ಗಾಯನ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಚಿಂತಲಪಲ್ಲಿ ವಿ. ಶ್ರೀನಿವಾಸ ಮತ್ತು ವಿದ್ವಾನ್ ಶ್ರೀ ಬಿ.ಇ. ಕಮಲ ಕುಮಾರ, ಪಿಟೀಲು ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಮೈಸೂರು ಬಿ. ಸಂಜೀವ ಕುಮಾರ, ಮೃದಂಗ ಕ್ಷೇತ್ರದ ಸಾಧನೆಗಾಗಿ ವಿದ್ವಾನ್ ಶ್ರೀ ಎಂ.ಜಿ. ನರೇಶ ಕುಮಾರ ಮತ್ತು ಪಿಟೀಲು ಕ್ಷೇತ್ರದ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.), ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಮತ್ತು ಆರ್ಟ್ ಆಫ್ ಲಿವಿಂಗ್ ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ರಾಮ ಭಕ್ತಿ ಸಾಮ್ರಾಜ್ಯ’ ರಾಮ ನವಮಿ ಪ್ರಯುಕ್ತ ‘ಸಂಗೀತ ಕಚೇರಿ, ಭರತನಾಟ್ಯ ಮತ್ತು ಉಪನ್ಯಾಸ’ ಕಾರ್ಯಕ್ರಮಗಳು ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರೋಡಿನಲ್ಲಿರುವ ‘ಅನುಪಲ್ಲವಿ’ಯಲ್ಲಿ ದಿನಾಂಕ 17-04-2024ರಂದು ಸಂಜೆ 4-00 ಗಂಟೆಗೆ ನಡೆಯಲಿದೆ.
ಧಾರವಾಡ : ವಿದ್ಯಾಕಾಶಿ – ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ನವ ಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯ ಶುಭಾರಂಭ ಹಾಗೂ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 13-04-2024ರಂದು ಬೆಳಗ್ಗೆ 10-00 ಗಂಟೆಗೆ ಧಾರವಾಡ ಮಹಾನಗರ ಪಾಲಿಕೆಯ ಬಳಿ, ಎಲ್.ಇ.ಎ. ಕ್ಯಾಂಪಸ್ ಲಿಂಗಾಯತ ಟೌನ್ ಹಾಲ್ ಇಲ್ಲಿ ನಡೆಯಲಿರುವುದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಜನಪರ ಚಿಂತಕರು ಮತ್ತು ಶಿಕ್ಷಣ ತಜ್ಞರಾದ ಡಾ. ಜಿ. ರಾಮಕೃಷ್ಣ ಇವರು ಮಳಿಗೆಯ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಉಪನಿಷತ್ತುಗಳು’, ಅಂಬೇಡ್ಕರ್ ಮತ್ತು ಮಾರ್ಕ್ಸ್’, ಸಾವಿತ್ರಿಬಾಯಿ’, ‘ಲೀಲಾವತೀ ಮತ್ತು ಇತರ ವಿಜ್ಞಾನ ನಾಟಕಗಳು’ ಮತ್ತು ‘ಭೂಮಿಕಾ’ ಎಂಬ ಕೃತಿಗಳನ್ನು ಸಾಂಸ್ಕೃತಿಕ ಚಿಂತಕರಾದ ಶ್ರೀ ರಂಜಾನ್ ದರ್ಗಾ ಮತ್ತು ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕರಾದ ಡಾ. ಎಂ. ಚಂದ್ರ ಪೂಜಾರಿ ಇವರುಗಳು ಲೋಕಾರ್ಪಣೆಗೊಳಿಸಲಿರುವರು.
ಮಂಗಳೂರು : ಕಲ್ಲಚ್ಚು ಪ್ರಕಾಶನದ 99 ಮತ್ತು 100ನೇ ಕೃತಿ ಆಗಿ ಮಹೇಶ ಆರ್. ನಾಯಕ್ ಅವರ ‘ಕೂದಲಿಗೆ ಡೈ ಮಾಡುವಾಗ’ ಕವನ ಸಂಕಲನ ಹಾಗೂ ‘ರಾವಣ ವೀಣೆ’ ಕಥಾಸಂಕಲನದ ಲೋಕಾರ್ಪಣೆ ಸಮಾರಂಭವು ದಿನಾಂಕ 09-04-2024ರ ಮಂಗಳವಾರದಂದು ಮಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಸ್ಥಾನಿಯ ಸಂಪಾದಕ ಯು. ಕೆ. ಕುಮಾರನಾಥ್ “ಪ್ರಸ್ತುತ ದಿನಗಳಲ್ಲಿ ನಾನ ರೂಪಗಳಲ್ಲಿ ಚಂಚಲವಾಗಿರುವ ಸಮಾಜದಲ್ಲಿ ಜನರ ಮಾನಸಿಕ ದೃಢತೆ ಹೆಚ್ಚಿಸುವಲ್ಲಿ ಮಾಧ್ಯಮ ಕ್ಷೇತ್ರ ಸಕಾರಾತ್ಮಕ ಸ್ಪಂದನೆ ನೀಡಿ ಅಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಅಗತ್ಯ ಇದೆ ಹಾಗೂ ಪತ್ರಿಕೆಗಳು ಸಾಹಿತ್ಯ ಸಂಬಂಧಿ ಬರಹಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಕೊಡುವ ಅಗತ್ಯವಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕವಯಿತ್ರಿಯರಾದ ಅಕ್ಷಯ ಆರ್. ಶೆಟ್ಟಿ ಮತ್ತು ಅಕ್ಷತ ರಾಜ್ ಪೆರ್ಲ ಕೃತಿ ಪರಿಚಯ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಡಿಯಾಲ್ ಬೈಲ್ ಪ್ರೆಸ್ ಇದರ ಮುಖ್ಯಸ್ಥರಾದ ವಂದನೀಯ ವಿನ್ಸೆಂಟ್ ಸಲ್ಡಾನ್ಹಾ,…
ಸುರತ್ಕಲ್ : ಪ್ರೊ. ಪಿ.ಕೆ. ಮೊಯಿಲಿಯವರ 94ರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಪಿ.ಕೆ. ಮೊಯಿಲಿ ಅಭಿನಂದನಾ ಸಮಿತಿ ಸುರತ್ಕಲ್, ಗೋವಿಂದದಾಸ ಕಾಲೇಜಿನ ಡಾ. ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ‘ಗುರುಭ್ಯೋ ನಮಃ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭವು ಗೋವಿಂದದಾಸ ಕಾಲೇಜಿನ ಸಭಾಭವನದಲ್ಲಿ ದಿನಾಂಕ 06-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿದ ಹಿರಿಯ ಶಿಕ್ಷಣ ತಜ್ಞ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಪ್ರೊ. ಪಿ.ಕೆ. ಮೊಯಿಲಿ ಮಾತನಾಡಿ “ಬದುಕಿನಲ್ಲಿ ಉನ್ನತ ಗುರಿಯಿದ್ದಾಗ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿ ಯಶಸ್ಸು ಗಳಿಸಲು ಸಾಧ್ಯವಿದೆ. ಆತ್ಮವಿಶ್ವಾಸದಿಂದ ಗುರುಗಳು ಮತ್ತು ವಿದ್ಯಾರ್ಥಿಗಳ ಅಪಾರ ಪ್ರೀತಿ ವಿಶ್ವಾಸಗಳಿಂದ ಬದುಕಿನಲ್ಲಿ ಕಾರ್ಯ ಪ್ರವೃತ್ತನಾಗಿ ಸಂತೃಪ್ತಿಯ ಜೀವನ ಕಂಡಿದ್ದೇನೆ. ಗುರು ಹಿರಿಯರ ಸತತ ಮಾರ್ಗದರ್ಶನದಿಂದ ಪ್ರೌಢಾ ಶಾಲಾ ಶಿಕ್ಷಕ ಹಂತದಿಂದ ಕಾಲೇಜು ಪ್ರಾಂಶುಪಾಲ ಹುದ್ದೆಯ ತನಕ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೇ ಗುರುಗಳ ನಿಜವಾದ ಸಂಪತ್ತಾಗಿದ್ದು…
ಉಡುಪಿ : ಮಾಹೆ, ಯಕ್ಷಗಾನ ಕೇಂದ್ರ ಇಂದ್ರಾಳಿ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ “ಬಡಗುತಿಟ್ಟು ಯಕ್ಷಗಾನ ಭಾಗವತಿಕೆಯ ವಿವಿಧ ಶೈಲಿ-ಮಟ್ಟುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ಕಾರ್ಯಕ್ರಮವು ದಿನಾಂಕ 07-04-2024ರ ರವಿವಾರದಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ “ಕಲೆಯ ಉಳಿವಿಗಾಗಿ ಯುವ ಸಮುದಾಯದ ಒಳಗೊಳ್ಳುವಿಕೆ ಪ್ರಮುಖವಾಗಿದ್ದು, ಮುಂದಿನ ಪೀಳಿಗೆಗೂ ಉತ್ತಮ ಭಾಗವತರು ರೂಪುಗೊಳ್ಳಬೇಕು. ಯಕ್ಷಗಾನಕಲಾಪ್ರಕಾರದಲ್ಲಿ ಭಾಗವತಿಕೆ ಕಲೆಯೂ ಮಹತ್ವದ ಭಾಗವಾಗಿದ್ದು, ಯುವ ಜನರಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸಿ ಭವಿಷ್ಯದಲ್ಲಿ ಉತ್ತಮ ಗಮನ ಸೆಳೆಯುವ ಶಾಸ್ತ್ರೀಯ ಭಾಗವತರನ್ನು ಸಿದ್ಧಪಡಿಸಬೇಕಿದೆ.” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ್ ಕಾರಂತ್ ಮತ್ತು ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಾನಂದ…
ಪುತ್ತೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ರಾಸಾ ಪಬ್ಲಿಕೇಷನ್ಸ್ ಆಯೋಜಿಸಿದ ಕನ್ನಡ ಸಾಹಿತ್ಯ ಕವಿಗೋಷ್ಠಿ, ‘ಕರ್ನಾಟಕ ಸೇವಾರತ್ನ ಪ್ರಶಸ್ತಿ’ 2024 ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 07-04-2024ರಂದು ಪುತ್ತೂರಿನ ನೆಹರು ನಗರದಲ್ಲಿರುವ ಸುದಾನ ವಸತಿ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಘುನಾಥ ಉಪಾಧ್ಯಾಯ ಹಾಗೂ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ರಾಸಾ ಆರ್. ಈಶ್ವರ, ಅಭಯ್ ಇವರು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿತ್ರದುರ್ಗದ ಶ್ರೀ ಅನಿತಾ ಲಕ್ಷ್ಮೀ ಆಚಾರ್ಯ, ಬಾಲ ಯೋಗಪಟು ಸುಬ್ರಹ್ಮಣ್ಯದ ಕುಮಾರಿ ಗೌರಿತಾ ಕೆ.…
ತೀರ್ಥಹಳ್ಳಿ : ಆರಗ ಸಮೀಪದ ಹೀರೆಸರ ಸರ್ಜಾ ವಸಂತರಾವ್ ಅವರ ಮನೆಯಂಗಳದಲ್ಲಿ ದಿನಾಂಕ 06-04-2024ರಂದು ಸಂಜೆ ‘ಮನೆ ಅಂಗಳದಲ್ಲಿ ಮಾತುಕತೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಸ್. ಸೋಮಶೇಖರ್ “ವಾಸ್ತು ಶಿಲ್ಪ, ವಿಜ್ಞಾನ, ಚಿಂತನ ಮಂಥನಗಳ ಪರಿಣಾಮ ಬಹುಬಗೆಯ ಚಟುವಟಿಕೆಗಳು ಸಂಸ್ಕೃತಿಯ ಚೌಕಟ್ಟಿಗೆ ಸೇರಿಸಿಕೊಳ್ಳುತ್ತದೆ. ಇದು ನಮ್ಮ ಅಂತರಂಗದ ಸೌಖ್ಯವನ್ನು ಹೆಚ್ಚಿಸುವ ಕೆಲಸ. ನಾಗರಿಕತೆ ನಮ್ಮ ಭೌತಿಕವಾದ ಅನುಕೂಲತೆಗಳನ್ನು ಹೆಚ್ಚಿಸಿಕೊಳ್ಳವ ಮುಖೇನ ಈ ಬದುಕನ್ನು ಹೆಚ್ಚು ಸುಖಕರವಾಗಿ ನಡೆಸುವುದು ಹೇಗೆ ಎಂದು ಯೋಚನೆ ಮಾಡಿಕೊಳ್ಳುವುದು ಆಗಿದೆ. ಸಾಮಾಜಿಕ ಕಳಕಳಿಯ ಚಿಂತಕರಾದ ಟಾಯಂಬಿ ಮತ್ತು ಸ್ಪೆನ್ಲರ್ ಅವರ ಕೃತಿಗಳು ನಮ್ಮ ಕಣ್ಣು ತೆರೆಸುವಂತಾಗಬೇಕು. ಹುಟ್ಟಿದ ಎಲ್ಲ ನಾಗರೀಕತೆಗಳು ವಿಕಸನವಾಗಲಿಲ್ಲ. ಅವರು ಗುರುತಿಸಿರುವ 28ರಲ್ಲಿ ಕೇವಲ 8 ಸಂಸ್ಕೃತಿಗಳು ಮಾತ್ರ ಉಳಿದಿವೆ. ಅದರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯೂ ಒಂದು. ಜನಾಂಗೀಯವಾದ ವಿಚಾರಗಳು ನಾಗರೀಕತೆಯ ಹುಟ್ಟಿಗೆ ಕಾರಣವಲ್ಲ. ಕಗ್ಗತ್ತಲ ಖಂಡ ಆಫ್ರಿಕ ಅತ್ಯಂತ ಫಲವತ್ತಾದ ಖಂಡ. ಆದರೂ ನಾಗರಿಕತೆ ಅಲ್ಲಿ…
ಸುಳ್ಯ : ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ಇಲ್ಲಿ ಕಾರ್ಯಾಚರಿಸುತ್ತಿರುವ ರಂಗ ಮಯೂರಿ ಕಲಾ ಶಾಲೆಯ ಆಯೋಜನೆಯಲ್ಲಿ 5ನೇ ವರ್ಷದ ‘ಬಣ್ಣ’ ರಾಜ್ಯ ಮಟ್ಟದ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಮಹಾವಿಷ್ಣು ಸಭಾ ಭವನದಲ್ಲಿ ದಿನಾಂಕ 09-04-2024ರಂದು ನಡೆಯಿತು. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಅಧ್ಯಕ್ಷತೆ ವಹಿಸಿದ್ದರು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಪಿ.ಕೆ.ಯವರು ದೇಸಿಯ ಗ್ರಾಮೀಣ ಸೊಗಡಿನ ಆಟ ಅಡಿಕೆ ಹಾಳೆಯಲ್ಲಿ ಮಗುವನ್ನು ಕುಳ್ಳಿರಿಸಿ ಹಾಳೆಯನ್ನು ಎಳೆಯುವುದರೊಂದಿಗೆ ಶಿಬಿರಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ದೀಪ ಪ್ರಜ್ವಲಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಕುಕ್ಕುಜಡ್ಕ, ಸುದ್ಧಿ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್, ಪೋಷಕ ಕಮಿಟಿ ಸದಸ್ಯ ಚಂದ್ರಶೇಖರ ಗುಡ್ಡೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತಿನೊಂದಿಗೆ ನಿರ್ದೇಶಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಕಲಾ…
ಬೆಂಗಳೂರು : ‘ಸಂಕಲ್ಪ ಮೈಸೂರು’ ಹುಲುಗಪ್ಪ ಕಟ್ಟಿಮನಿ ಅವರು ಕಾರಾಗೃಹ ಕೈದಿಗಳ ನಡುವೆ ರಂಗ ಚಟುವಟಿಕೆ ನಡೆಸಲು ಪ್ರಾರಂಭಿಸಿದ ರಂಗಸಂಸ್ಥೆ. ಕಾರಾಗೃಹ ವಾಸಿಗಳಿಗೆ ( ಗಮನಿಸಿ: ಖೈದಿಗಳು ಅಲ್ಲ) ಕಾರಾಗೃಹದಲ್ಲೇ ರಂಗತರಬೇತಿ ನೀಡಿ, ಸಾರ್ವಜನಿಕವಾಗಿ ರಂಗಮಂದಿರದಲ್ಲಿ ಪ್ರದರ್ಶನ ನೀಡುವ ಪ್ರಕ್ರಿಯೆ ಒಂದು ಇಪ್ಪತ್ತೈದು ವರುಷಗಳ ಹಿಂದೆ ರಂಗಭೂಮಿಯಲ್ಲೇ ವಿನೂತನ, ಆಶ್ಚರ್ಯ ಮತ್ತು ಕುತೂಹಲಗಳಿಗೆ ಕಾರಣವಾಗಿದ್ದ ರಂಗಪ್ರಕ್ರಿಯೆ; ಈ ಪ್ರಕ್ರಿಯೆ ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿತ್ತು. ನಮ್ಮ ತಲೆಮಾರಿಗೆ ಇರುವ ಮಾಹಿತಿ ಆಧಾರದಲ್ಲಿ ಹೇಳುವುದಾದರೆ, ಹಿಂದಿ ಚಿತ್ರರಂಗದ ಎಂದಿಗೂ ಅಮರ ಎನ್ನಿಸಿಕೊಳ್ಳುವ, ಕಾರಾಗೃಹ ವಾಸಿಗಳನ್ನು ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಅವರುಗಳ ಮನಪರಿವರ್ತನೆ ಮಾಡಿ, ಮತ್ತೆ ನಾಗರಿಕ ಸಮಾಜದಲ್ಲಿ ಮನುಷ್ಯರಾಗಿ ಬಾಳಲು ಸಹಾಯಕನಾಗುವ ಸಾಂಸ್ಕೃತಿಕ ಹಿನ್ನಲೆಯ ಜೇಲ್ ಸೂಪರಿಂಟೆಂಡೆಂಟ್ ನ ಕಥೆ ದೋ ಆಂಖೆ, ಬಾರಾ ಹಾತ್ ಚಿತ್ರ. ಅದರ ನಿರ್ದೇಶಕ ವಿ. ಶಾಂತರಾಮ್ ಅವರು ಈ ಮಾನವೀಯ ಜೇಲ್ ಸೂಪರಿಂಟೆಂಡೆಂಟ್ ಪಾತ್ರದಲ್ಲಿ ಅಭಿನಯಿಸಿದ್ದರೂ ಸಹ…… ನಂತರದಲ್ಲಿ ನಮಗೆ ಸಿಗುವ ಮತ್ತೊಂದು ಉದಾಹರಣೆ ಎಂದರೆ,…