Subscribe to Updates
Get the latest creative news from FooBar about art, design and business.
Author: roovari
ಉಪ್ಪಳ : ಐಲ ದುರ್ಗಾಪರಮೇಶ್ವರಿ ಕ್ಷೇತ್ರದ ಬಿಂಬ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದಿನಾಂಕ 07-04-2024ರ ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ’ ವೈಭವ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಗುರುರಾಜ್ ಕಾಸರಗೋಡು, ಆದ್ಯಂತ್ ಅಡೂರು, ಉಷಾ ಸುಧಾಕರನ್, ಸನುಷಾ ಸುನೀಲ್, ವರ್ಷಾ ಎಂ.ಆರ್., ವೃಕ್ಷಾ ಎಂ.ಆರ್., ಅಹನಾ ಎಸ್. ರಾವ್, ಜ್ಞಾನ ರೈ ಪುತ್ತೂರು, ವರ್ಷಾ ಶೆಟ್ಟಿ, ದೃಶ್ಯ ಸಾಲ್ಯಾನ್, ವಿಶಿಕಾ ಸಾಲ್ಯಾನ್, ಸಿಯಾ ಜೆ.ಕೆ., ವೈಷ್ಣವಿ ಎಸ್. ಶೆಟ್ಟಿ, ಅಜ್ಞಾ ರೈ ಪುತ್ತೂರು, ಪೂಜಾಶ್ರೀ, ತೃಪ್ತಿ ಕೆ.ಎಸ್., ಅವನಿ ಎಂ.ಎಸ್., ಸನುಷಾ ಸುಧಾಕರನ್, ಅರ್ಪಿತಾ ವಿ. ರೈ, ಹಂಶಿತ್ ಆಳ್ವ, ಶ್ರದ್ಧಾ ಎ.ಎಸ್., ಮೇಧಾ ಎ.ಎಸ್., ಆರಾಧ್ಯ ಎನ್.ಆಳ್ಳ, ಆದ್ಯ, ಆರಾಧ್ಯ, ಇಶಾನ್, ಹೃತಿಕ, ಕೌಶಿಕ, ಮಧುಲತಾ ಪುತ್ತೂರು, ರೆಶ್ಮಿ ಪ್ರಭಾ, ಕೀರ್ತಿಪ್ರಭಾ, ಭಾನ್ವಿ ಕುಲಾಲ್, ಕೃಪೇಶ್ ಎಂ.ಆರ್. ಮೊದಲಾದವರು…
ಕಾಸರಗೋಡು : ನಾಟ್ಯರಂಗ ಪುತ್ತೂರು ಪ್ರಸ್ತುತ ಪಡಿಸುವ ‘ನೃತ್ಯಾವತರಣಂ’ ಕಲಾವಿದರಿಂದ ಕಲಾಕಸಿಕರೆಡೆಗೆ ನೃತ್ಯದ ಅವತರಣ ಕಾರ್ಯಕ್ರಮವು ದಿನಾಂಕ 14-04-2024ರಂದು ಕಾಸರಗೋಡಿನ ಶ್ರೀ ಎಡನೀರು ಮಠದ ಭಾರತೀ ಕಲಾಸದನದಲ್ಲಿ ಸಂಜೆ ಗಂಟೆ 4.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಶುಭಾಶೀರ್ವಚನ ನೀಡಲಿದ್ದಾರೆ. ವಿದುಷಿ ಮಂಜುಳಾ ಸುಬ್ರಹ್ಮಣ್ಯ, ದೇವನಂದ ಸಿ.ಎಸ್., ಮಧುಶ್ರೀ ವಿ.ಎಸ್. ಮತ್ತು ಶ್ರೀನಂದ ಇ ಇವರುಗಳು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಪುತ್ತೂರು : ವಾಹಿನಿ ಕಲಾಸಂಘ ವತಿಯಿಂದ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಮಧುರಕಾನನ ಗಣಪತಿ ಭಟ್ ನೇತೃತ್ವದಲ್ಲಿ ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರೊ. ವಿ.ಬಿ. ಆರ್ತಿಕಜೆಯವರ ಮಾರ್ಗದರ್ಶನದಲ್ಲಿ ‘ವಾಹಿನಿ ಸಾಹಿತ್ಯ ಸಂಭ್ರಮ 2024’ ದಿನಾಂಕ 11-04-2024ರಂದು ಬೆಳಿಗ್ಗೆ 9.30ಕ್ಕೆ ಪುತ್ತೂರಿನ ದರ್ಬೆ, ಮುಕ್ರಂಪಾಡಿ, ಸುಭದ್ರ ಸಭಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು, ಗಾಯಕರು, ಸಾಹಿತಿ ಮತ್ತು ಕೃಷಿಕರಾದ ಶ್ರೀ ರಾಮಪ್ರಸಾದ್ ಕಾಂಚೋಡು ಇವರ ಅಧ್ಯಕ್ಷತೆಯಲ್ಲಿ ಶ್ರೀ ಚಂದ್ರಶೇಖರ ಏತಡ್ಕ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪುತ್ತೂರಿನ ಹಿರಿಯ ಕವಯತ್ರಿ ಶ್ರೀಮತಿ ಭಾರತಿ ಕೊಲ್ಲರಮಜಲು ಇವರ ‘ಭಾವ ಭಾರತಿ’ ಭಾವಗೀತೆಗಳು, ‘ಮನೋವಾರಿಧಿ’ ಷಡ್ಪದಿಗಳು ಮತ್ತು ‘ಅಂತಃಸತ್ತ್ವ’ ಮುಕ್ತಕಗಳು, ಸಾಹಿತಿ ಶ್ರೀಮತಿ ಸಂಧ್ಯಾ ಕುಮಾರ್ ಉಬರತ್ನ ಇವರ ‘ನೀಳವೇಣಿ ನೀ ನಾಟ್ಯವಾಡು’ ಕಥಾ ಸಂಕಲನ ಮತ್ತು ವಿಶ್ರಾಂತ ಚಿತ್ರ ಕಲಾ ಶಿಕ್ಷಕರು ಮತ್ತು ಕವಿಗಳಾದ ಶ್ರೀ ಬಾಲ ಮಧುರಕಾನನ ಇವರ…
ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ತಂಡದ ಸಂಯೋಜನೆಯಲ್ಲಿ ತ್ಯಾಗರಾಜ ನಗರದಲ್ಲಿರುವ ಯಕ್ಷದೇಗುಲದಲ್ಲಿ ಒಂದು ದಿನದ ಯಕ್ಷಗಾನ ವಸ್ತ್ರಾಲಂಕಾರದ ಕಾರ್ಯಾಗಾರವು ದಿನಾಂಕ 07-04-2024ರಂದು ನಡೆಯಿತು. ಈ ಕಾರ್ಯಾಗಾರವನ್ನು ಮೇಕಪ್ ಮಾಡುವ ಮೂಲಕ ಉಪನ್ಯಾಸಕರಾದ ಡಾ. ರಾಮಮೂರ್ತಿಯವರು ಉದ್ಘಾಟಿಸಿ ಮಾತನಾಡಿ “ಯಕ್ಷಗಾನ ವೇಷ ಕಟ್ಟಿಕೊಂಡು ರಂಗಸ್ಥಳದಲ್ಲಿ ಕುಣಿಯುವುದಕ್ಕಷ್ಟೇ ಕಲಾವಿದ ಪರಿಪೂರ್ಣನಾಗುವುದಿಲ್ಲ, ಯಕ್ಷಗಾನದಲ್ಲಿ ವೇಷಗಾರಿಕೆಯೂ ಪ್ರಧಾನವಾಗಿರುತ್ತದೆ. ರಂಗದಲ್ಲಿ ಕುಣಿಯುವುದಕ್ಕೆಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಮುಖ್ಯವಾದುದು ಬಣ್ಣಗಾರಿಕೆ, ವೇಷ ಕಟ್ಟಿಕೊಳ್ಳುವುದು ಕೂಡಾ. ಕಲಾವಿದನೂ ಸ್ವಯಂ ವೇಷ ಕಟ್ಟಿಕೊಳ್ಳುವುದಕ್ಕೂ ಕಲಿತಿರಬೇಕು. ಅದೂ ಕೂಡಾ ಒಂದು ಕಲೆ. ಯಕ್ಷಗಾನ ವೇಷಭೂಷಣದಲ್ಲಿ ಕ್ಯಾದಿಗೆ ಮುಂದಲೆ, ಮುಂಡಾಸು, ಕಿರೀಟ, ಬಣ್ಣಗಾರಿಕೆ, ವಸ್ತ್ರಾಲಂಕಾರದಲ್ಲಿ ಹಿಂದೆಗಿಂತಲೂ ಈಗ ತುಂಬಾ ಬದಲಾವಣೆಯಾಗಿದೆ ಅಥವಾ ಸುಧಾರಣೆಗೊಂಡಿದೆ. ಈ ವಿಚಾರ ಇಂದಿನ ಮಕ್ಕಳು, ಯುವಕರು ತಿಳಿಯಲು ಇಂತಹ ಕಾರ್ಯಾಗಾರ ಉಪಯುಕ್ತವಾಗಿದೆ” ಎಂದು ಹೇಳಿದರು. ಹಾಗೇ ವೇದಿಕೆಯಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್ರು, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾದ ಕೋಟ ಸುದರ್ಶನ ಉರಾಳ, ಯಕ್ಷದೇಗುಲದ ಹಿಂದಿನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್,…
ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ಆಯೋಜನೆಯ ಮೂರನೇ ವರ್ಷದ ‘ರಂಗೋತ್ಸವ’ ಕಾರ್ಯಕ್ರಮವು ದಿನಾಂಕ 05-04-2024ರ ಶುಕ್ರವಾರ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಆರಂಭಗೊಂಡು ಮೂರು ದಿನಗಳ ಕಾಲ ನಡೆದು ಭಾನುವಾರ ಸಮಾಪನಗೊಂಡಿತು. ಮೊದಲ ದಿನದ ಕಾರ್ಯಕ್ರಮವು ನಾದ ಮಣಿನಾಲ್ಕೂರು ಅವರ ಸದಾಶಯದ ಹಾಡುಗಳೊಂದಿಗೆ ಉದ್ಘಾಟನೆಗೊಂಡಿತು. ಈ ವೇಳೆ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕಿಯಾದ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ರಂಗಭೂಮಿ ಒಂದು ಸಮಷ್ಟಿ ಕಲೆ, ಇಂದಿನ ಕಾಲಘಟ್ಟದಲ್ಲಿ ನೈತಿಕ ಮೌಲ್ಯ ಅನ್ನೋದು ಇಳಿಯುತ್ತಿರುವಂತ ಸಂದರ್ಭದಲ್ಲಿ ನಾಟಕ ಕಲೆ, ರಂಗಚಟುವಟಿಕೆಗಳು ಅರ್ಥಪೂರ್ಣ ಹಾಗೂ ಅತ್ಯಗತ್ಯ” ಎಂದು ಅಭಿಪ್ರಾಯ ಹಂಚಿಕೊಂಡರು. ರಂಗನಿರ್ದೇಶಕ ವಾಸುದೇವ ಗಂಗೇರ ಅವರು ಮಂದಾರದ ಕೆಲಸಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಹೋಲಿ ಫ್ಯಾಮಿಲಿ ಚರ್ಚ್ ಬ್ರಹ್ಮಾವರದ ಫಾದರ್ ಜಾನ್ ಫೆರ್ನಾಂಡಿಸ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದು…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ-ತೆಕ್ಕಟ್ಟೆ ಮತ್ತು ಧಮನಿ ಟ್ರಸ್ಟ್ ದಿಮ್ಸಾಲ್ ತಂಡದ ಸಹಯೋಗದೊಂದಿಗೆ ತೆಕ್ಕಟ್ಟೆಯಲ್ಲಿ ದಿನಾಂಕ 08-04-2024ರಂದು ಯಕ್ಷ-ಗಾನ-ವೈಭವ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇದಮೂರ್ತಿ ಲೋಹಿತಾಶ್ವ ಆಚಾರ್ಯರವರು ಮಾತನಾಡಿ “ಗಂಡು ಕಲೆಯಾದ ಯಕ್ಷಗಾನದಿಂದ ಜ್ಞಾನ ಸಂಪಾದನೆ ಸಾಧ್ಯ. ಕಲಾವಿದರೇ ಆಗಿ ರಂಗದಲ್ಲಿ ರಂಜಿಸಿದ ಕಲಾಸಕ್ತ ವಿಶ್ವನಾಥ ಆಚಾರ್ಯ ಪಾತ್ರ ಪೋಷಣೆಯಲ್ಲಿ ನಿಪುಣರು. ಕಲಾರಾಧಕರಾಗಿ ಸ್ಥಳೀಯ ಸಂಸ್ಥೆಗೆ ತನ್ನ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೇಪನ ತೊಡಿಸಿ ಕಾರ್ಯಕ್ರಮವನ್ನು ಪರಿಪೂರ್ಣವಾಗಿಸಿಕೊಂಡರು” ಎಂದು ಹೇಳಿ ಸ್ವರ್ಣಶ್ರೀ ಪುನೀತ್ ಕುಮಾರ್ ಆಚಾರ್ಯರನ್ನು ಯಶಸ್ವೀ ಕಲಾವೃಂದದ ಪರವಾಗಿ ಅಭಿನಂದಿಸಿದರು. ರಥದ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಉದ್ಯಮಿ ಗೋಪಾಲ ಪೂಜಾರಿ, ವಿಶ್ವನಾಥ ಆಚಾರ್ಯ ಕುಟುಂಬದವರು ಗೌರವ ಸಮರ್ಪಣೆಯಲ್ಲಿ ಉಪಸ್ಥಿತರಿದ್ದರು. ಗುರುಗಳಾದ ಲಂಬೋದರ ಹೆಗಡೆ ಸ್ವಾಗತಿಸಿ ನಿರೂಪಣೆಗೈದರು. ಬಳಿಕ ಯಕ್ಷ ಗಾನ ವೈಭವ ಯಶಸ್ವೀ ಕಲಾವೃಂದದ ಸಂಯೋಜನೆಯಲ್ಲಿ ಪ್ರಸ್ತುತಿಗೊಂಡಿತು.
ಮಂಗಳೂರು : ನಾಚ್ ಸೊಭಾಣ್ ವತಿಯಿಂದ ಶಕ್ತಿನಗರದ ಕಲಾಂಗಣದಲ್ಲಿ ತಿಂಗಳ ವೇದಿಕೆ ಸರಣಿಯ 268ನೇ ಕಾರ್ಯಕ್ರಮ ʻನವಿಂ ವಜ್ರಾಂʼ (ಹೊಸ ವಜ್ರಗಳು) ದಿನಾಂಕ 07-04-2024ರಂದು ನಡೆಯಿತು. ನೃತ್ಯ-ಗಾಯನ-ಸಂಗೀತ-ನಿರೂಪಣೆ ಹೀಗೆ ಸಾದರಕಲೆಯ ಸುಂದರ ಅನುಭೂತಿ ದೊರೆಯಿತು. ಮೊದಲಿಗೆ ಉದ್ಯಮಿ ಸಂತೋಷ್ ರೊಡ್ರಿಗಸ್ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು. ನೃತ್ಯಕ್ಕೆ ಪೂರಕ ಹಾಡುಗಳ ಕೊರತೆ ತುಂಬಿಸಲು ಮಾಂಡ್ ಸೊಭಾಣ್ ಲಘುತಾಳದ ಹೊಸ ಹಾಡುಗಳ ರಚನೆಗೆ ಅವಕಾಶ ಕಲ್ಪಿಸಿತ್ತು. ಬಂದ 25 ಹಾಡುಗಳಲ್ಲಿ 10 ಆಯ್ದ ಹಾಡುಗಳಿಗೆ ರಾಗ ಸಂಯೋಜಿಸಿ, ಸಂಗೀತ ನೀಡಿ, ನಾಚ್ ಸೊಭಾಣ್ ತಂಡವು ನರ್ತಿಸಿತು. ಬಾಯ್ಲಾ, ಬಾಯ್ಲಾ ಮಸಾಲಾ, ವೆಸ್ಟರ್ನ್ ಹಿಪ್ಹೊಪ್, ಬೊಲ್ರೂಮ್, ಲಿರಿಕಲ್ ಪ್ರಕಾರದ ಹಾಡುಗಳು ಪ್ರೇಕ್ಷಕರ ಮನ ಗೆದ್ದವು. ರೊನಿ ಕ್ರಾಸ್ತಾ ಕೆಲರಾಯ್, ಐರಿನ್ ರೆಬೆಲ್ಲೊ, ಲುಸಿಫೆರ್, ಜೊಯೆಲ್ ಪಿಂಟೊ ಇಜಯ್, ಆಲ್ಬನ್ ಡಿಸಿಲ್ವಾ, ಹೊನ್ನಾವರ, ಲೊಯ್ಡ್ ರೇಗೊ ತಾಕೊಡೆ, ಮತ್ತು…
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕರ್ನಾಟಕ 50ರ ಸಂಭ್ರಮ ಪ್ರಯುಕ್ತ ಮಹಿಳಾ ಸಾಹಿತ್ಯ ಸಮಾವೇಶ ಹಾಗೂ 2022ರ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ’ ಪ್ರದಾನ ಸಮಾರಂಭವನ್ನು ನಗರದ ಕ.ವಿ.ವ. ಸಂಘದ ಶ್ರೀ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ದಿನಾಂಕ 07-04-2024ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಮಾತನಾಡಿ, “ಸಾಮಾಜಿಕ ವಾಸ್ತವ ಸತ್ಯ ಅರಿಯುವುದಿಲ್ಲವೋ ಅಲ್ಲಿಯವರೆಗೆ ಸಾಹಿತ್ಯದ ಮೂಲಕ ಸಾಮಾಜಿಕ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಮಹಿಳಾ ಸಾಹಿತ್ಯ ನೋಡುವ ದೃಷ್ಟಿಕೋನ ಬದಲಾಗಬೇಕು. ಇಲ್ಲವಾದಲ್ಲಿ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ನ್ಯಾಯ ದೊರಕುವುದಿಲ್ಲ. ಮಹಿಳೆಯರು ಇಲ್ಲದ ಸಮಾಜ ಸಾಧ್ಯವಿಲ್ಲ ಎಂಬುದನ್ನು 12ನೇ ಶತಮಾನದಲ್ಲಿ ಶರಣರು ಸಾರಿದ್ದಾರೆ. ಸಾಹಿತ್ಯದ ಮೂಲಕ ಸಮಾಜಕ್ಕೆ ಎಂಥ ಸಂದೇಶ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕಿದೆ. ಇಂದು ಯಾವುದೇ ಚಳವಳಿಗಳಿಲ್ಲ. ಇಂಥ ಸಂದರ್ಭದಲ್ಲಿ ಮುಂದಿನ ಪೀಳಿಗೆಯನ್ನು ಯಾವ ರೀತಿ ಸಾಮಾಜಿಕ ಮುಖ್ಯವಾಹಿನಿಗೆ ತರಬೇಕೆಂಬ ಸಂಕಷ್ಟಗಳು ಕಾಡುತ್ತಿವೆ.…
ಮಂಗಳೂರು : ತುಳು ಕೂಟ (ರಿ) ಕುಡ್ಲ ಇದರ ವತಿಯಿಂದ ವಿಷು ಸಂಕ್ರಮಣದ ವಿಶೇಷತೆಯನ್ನು ಸಾರುವ ತುಳುವರ ‘ಬಿಸು ಪರ್ಬೊ ಸಂಭ್ರವೊ’ ಕಾರ್ಯಕ್ರಮವು ದಿನಾಂಕ 14-04-2024ರ ಆದಿತ್ಯವಾರದಂದು ಸಂಜೆ 3-30 ಗಂಟೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಮಂಗಳಾದೇವಿ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಕುಮಾರ್ ಐತಾಳ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ತುಳು ಕೂಟ (ರಿ) ಕುಡ್ಲ ಇದರ ಅಧ್ಯಕ್ಷರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ನಮ್ಮ ಕುಡ್ಲದ ತುಳು ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ವಿಷುವಿನ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರಿಗೆ 2023-2024ನೇ ಸಾಲಿನ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ಯ ಪ್ರಥಮ ಬಹುಮಾನ ಶ್ರೀ ಶಶಿರಾಜ್ ರಾವ್ ಕಾವೂರು, ದ್ವಿತೀಯ ಬಹುಮಾನ ನವೀನ್ ಸುವರ್ಣ ಪಡ್ರೆ ಮತ್ತು ತೃತೀಯ…
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ವತಿಯಿಂದ ಮತದಾನದ ಮಹತ್ವ ಹಾಗೂ ಜಾಗೃತಿ ನಿಟ್ಟಿನಲ್ಲಿ ‘ಮತದಾನ ಪ್ರದಾನ’ ಎಂಬ ವಿಷಯದ ಕವಿಗೋಷ್ಠಿಯು ದಿನಾಂಕ 20-04-2024ರಂದು ನಡೆಯಲಿದೆ. ಕವಿತೆಗಳು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿರಬಾರದು. ಕವಿಗಳು ತಮ್ಮ ಕವಿತೆಗಳನ್ನು ಡಾ. ಮೀನಾಕ್ಷಿ ರಾಮಚಂದ್ರ, ಅಕ್ಷರ, ಗುರುದೇವನಗರ, ಮೋರ್ ಮಾರುಕಟ್ಟೆ ‘ಹಿಂಭಾಗ, ಬಿಜೈ, ಮಂಗಳೂರು -575004 ಈ ವಿಳಾಸಕ್ಕೆ ಅಥವಾ 9448911777 ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬಹುದೆಂದು ತಿಳಿಸಿದ್ದಾರೆ.