Author: roovari

21 ಮಾರ್ಚ್ 2023, ಮಂಗಳೂರು: ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭದ ಸಮಾರೋಪದ ಉದ್ಘಾಟನೆ ಶ್ರೀ ಮಹಾಮಾಯಿ ದೇವಸ್ಥಾನದ ಆವರಣದಲ್ಲಿ ದಿನಾಂಕ 19-03-2023 ಆದಿತ್ಯವಾರ ಬೆಳಿಗ್ಗೆ 9 ಘಂಟೆಗೆ ಜರಗಿತು.ಶ್ರೀ ಮಹಮ್ಮಾಯಿ ದೇವಸ್ಥಾನದ ಅರ್ಚಕ ವೃಂದದಿಂದ ದೀಪ ಬೆಳಗಿಸಲಾಯಿತು.ಸಂಘದ ಕಾರ್ಯಾಧಕ್ಷ ನಾಗೇಶ್ ಪ್ರಭುಗಳ ಅಧ್ಯಕ್ಷತೆಯಲ್ಲಿ ಮಕ್ಕಳ, ಮಹಿಳೆ ಮತ್ತು ಪುರುಷರ 3 ವಿಭಾಗಗಳಲ್ಲಿ ಪೀಠಿಕಾ ಸ್ಪರ್ಧೆಯ ಉದ್ಘಾಟನೆಯನ್ನು ಇಸ್ಕಾನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸನಂದನ ದಾಸ ನೆರವೇರಿಸಿದರು.ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲೆಯ ಔನ್ನತ್ಯವನ್ನು ವಿವರಿಸುತ್ತ ಈ ಕಲೆಯತ್ತ ಎಳೆಯ ಮಕ್ಕಳು ಇನ್ನಷ್ಟು ಆಕರ್ಷಿತಾರಾಗಬೇಕೆಂದು ಕರೆ ಇತ್ತರು.ಯಾವ ರೀತಿ ಔಷದಗಳಿಗೆ ಸಿಹಿಯ ಲೇಪನ ಮಾಡಿದಾಗ ಸೇವಿಸುವುದಕ್ಕೆಆಹ್ಲಾದವಾಗುತ್ತದೋ, ಹಾಗೆಯೇ ಯಕ್ಷಗಾನವು ಮನರಂಜನೆಯೊಂದಿಗೆ ಮಧುರವಾದ ಸಂಗೀತ, ಪಾಂಡಿತ್ಯಪೂರ್ಣ ಪುರಾಣ ಜ್ಞಾನ ನೀಡುವ ಕಲೆ. ಈ ಕಲೆಯ ಪ್ರಚಾರ ಮಾಡುತ್ತಿರುವ ಇಂತಹ ಸಂಘಗಳು ಇನ್ನಷ್ಟು ಕಾಲ ಉಳಿಯಬೇಕೆಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಾಗೇಶ್ ಪ್ರಭು ಯಕ್ಷಗಾನ ಜ್ಞಾನ ಪ್ರಸಾರಕ್ಕೆ ಅತ್ಯಂತ ಸಹಕಾರಿ ಎಂದರು.…

Read More

21 March 2023, Mangaluru: Institute of Aviation Studies, Srinivas University, conducted Bottle Painting Competition on 11th March 2023 for the students of B.B.A. Aviation Studies and M.B.A. Aviation Studies. Painting stimulates creativity, increases emotional intelligence, and also reduces stress. With this motive in mind and also to develop the concept of reusing and recycling materials the competition was set among the students. The participants were required to reuse and recycle the waste bottles and make a new masterpiece. The students used all their potential and skills to make a stunning piece of art. The students diligently took part with a…

Read More

20 ಮಾರ್ಚ್ 2023, ಧಾರವಾಡ: ಕಲ್ಯಾಣನಗರದ ಶರಣ ಲಿಟರೇಚರ್ ಪಬ್ಲಿಶರ್ಸ್ ಹಾಗೂ ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಲೇಖಕ ಡಾ. ಎನ್.ಜಿ.ಮಹಾದೇವಪ್ಪನವರ “ಪ್ರೈಮರ್ ಆಫ್ ಲಿಂಗಾಯತಿಸಂ” ಪ್ರಸ್ತಕ ಬಿಡುಗಡೆ ಸಮಾರಂಭ ದಿನಾಂಕ 14-03-2023ರಂದು ನಡೆಯಿತು. ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಅತ್ಯಂತ ಸರಳವಾಗಿ, ಖಚಿತವಾಗಿ ಮತ್ತು ಸಮಗ್ರವಾಗಿ ಲಿಂಗಾಯತ ಧರ್ಮದ ತತ್ವವನ್ನು ಸಾರುವ ಸಂದೇಶಗಳನ್ನು ‘ಪ್ರೈಮರ್ ಆಫ್ ಲಿಂಗಾಯತಿಸಂ’ ಕೃತಿಯು ಒಳಗೊಂಡಿದೆ. ಇದು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಪ್ರತಿವಾದಿಸುವ ಅಧಿಕೃತವಾದ ಆಧಾರ ಗ್ರಂಥವಾಗಿದೆ ಎಂದರು. “ಡಾ. ಎನ್.ಜಿ.ಮಹಾದೇವಪ್ಪನವರು ಆರಂಭದಲ್ಲಿ ಬರೆದ “ಲಿಂಗಾಯತರು ಹಿಂದುಗಳಲ್ಲ” ಎಂಬ ಕೃತಿಯು ಅಂದಿನ ಸಮಾಜದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿತು. ಅಲ್ಲಿಯವರೆಗೂ ಲಿಂಗಾಯತರು ಮತ್ತು ವೀರಶೈವರು ಒಂದೇ ಎನ್ನುವ ತಪ್ಪು ಗ್ರಹಿಕೆಯನ್ನು ಬದಲಿಸುವ ಹೊಸ ಆಲೋಚನಾ ಕ್ರಮವನ್ನೇ ಹುಟ್ಟುಹಾಕಿತು. ಅತ್ಯಲ್ಪ ಅವಧಿಯಲ್ಲಿಯೇ ಆ ಕೃತಿಯು ಹಿಂದಿ, ಮರಾಠಿ, ತಲುಗು ಭಾಷೆಗಳಿಗೂ ಅನುವಾದಗೊಂಡು ರಾಷ್ಟ್ರದಾದ್ಯಂತ ಪ್ರಚಾರ ಪಡೆಯುವಂತಾಯಿತು. ಅವರು ಕನ್ನಡದಲ್ಲಿ ಬರೆದ…

Read More

20 ಮಾರ್ಚ್ 2023 ಮಂಗಳೂರು: ಕನ್ನಡ ಬಳಗ ಮಂಗಳೂರು, ಮಾರ್ಪಳ್ಳಿ ಪ್ರಕಾಶನ ಹಾಗೂ ಸುಬ್ರಹ್ಮಣ್ಯ ಸಭಾದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 22ರ ಬುಧವಾರದಂದು ಬೆಳಿಗ್ಗೆ 10 ಗಂಟೆಯಿಂದ ಕೊಡಿಯಾಲಬೈಲ್ ನಲ್ಲಿರುವ ಸುಬ್ರಹ್ಮಣ್ಯ ಸದನದಲ್ಲಿ ಯುಗಾದಿ ಸಾಹಿತ್ಯೋತ್ಸವ ಏರ್ಪಡಿಲಾಗಿದೆ. ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯೋತ್ಸವವನ್ನು ಉದ್ಘಾಟಿಸುವರು. ಕವಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್. ವಾಸುದೇವ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಮತ್ತು ಕವಿತಾ ಶಾಸ್ತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. “ಡಿಜಿಟಲ್ ಯುಗ ಮತ್ತು ಸಾಹಿತ್ಯ” ಹಾಗೂ “ರಾಷ್ಟ್ರೀಯ ಚಿಂತನೆಯ ಸಾಹಿತ್ಯ” ವಿಚಾರವಾಗಿ ವಿಚಾರ ಸಂಕಿರಣ ನಡೆಯಲಿದ್ದು, ಬ್ರಹ್ಮಾವರದ ಪ್ರಾಂಶುಪಾಲೆ ಅಭಿಲಾಷಾ ಎಸ್. ಮತ್ತು ಉಡುಪಿಯ ಡಾ. ಪ್ರಜ್ಞಾ ಮಾರ್ಪಳ್ಳಿ ವಿಚಾರ ಮಂಡಿಸುವರು. ಪುತ್ತೂರಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸುವರು. ಬಳಿಕ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ರಾಮ ಎಲ್ಲಂಗಳ,…

Read More

20 ಮಾರ್ಚ್ 2023, ಉಳಿಯ: ಕರಾವಳಿಯ ಸರ್ವಾಂಗ ಸುಂದರ ಕಲೆ ಯಕ್ಷಗಾನಕ್ಕೆ ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ಕೊಡುಗೆ ಅಪಾರ. ಅನೇಕ ವರ್ಷಗಳಿಂದ ಉಳಿಯ ಮನೆಯಲ್ಲಿ ತಾಳಮದ್ದಳೆ, ಕೇರಳ ಮತ್ತು ಕರ್ನಾಟಕದ ಹಲವೆಡೆಗಳಲ್ಲಿ ಬಯಲಾಟಗಳನ್ನು ನಡೆಸುತ್ತಾ ಬಂದಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಐವತ್ತರ ಸಂಭ್ರಮಾಚರಣೆ ನಡೆಸಿ ಸಾರ್ಥಕ್ಯವನ್ನು ಪಡೆದುಕೊಂಡಿದೆ. ಉಳಿಯ ಮನೆತನದ ಪೂರ್ವಸೂರಿಗಳಾದ ನಾರಾಯಣ ಆಸ್ರರು ಯಕ್ಷಗಾನಕಲಾ ಪ್ರೇಮಿಯಾಗಿದ್ದರು. ಉಳಿಯ ಮನೆಯ ಒಡೆಯರನ್ನು ‘ಯಜಮಾನ’ರೆಂದು ಸಂಬೋದಿಸುವುದು ಪದ್ಧತಿ. ಅಂದಿನ ಯಜಮಾನರಾದ ದಿವಂಗತ ನಾರಾಯಣ ಆಸ್ರರು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದ ಸ್ನೇಹಮಯಿ. ಇವರ ಸ್ನೇಹ ಒಡನಾಟಕ್ಕೆ ಕಟ್ಟು ಬಿದ್ದು ಹಿರಿಯರಾದ ದಿವಂಗತ ಬಲಿಪ ಭಾಗವತರು ಮೇಳದ ತಿರುಗಾಟ ಕೊನೆಗೊಂಡ ಮೇಲೆ ಕೆಲವು ದಿನಗಳು ಹಾಯಾಗಿ ಉಳಿಯದಲ್ಲಿ ಉಳಿಯುತ್ತಿದ್ದರು. ಆ ದಿನಗಳಲ್ಲಿ ಉಳಿಯ ಮನೆಯಲ್ಲಿ ತಾಳಮದ್ದಳೆ ಸರಾಗವಾಗಿ ನಡೆಯುತಿತ್ತು. ದಿವಂಗತ ನಾರಾಯಣ ಆಸ್ರರ ಪುತ್ರ ಕೀರ್ತಿಶೇಷ ವಿಷ್ಣು ಆಸ್ರರು, ಯಕ್ಷಗಾನ ಕಲಾವಿದ ಮಧೂರು ಗಣಪತಿ ರಾವ್, ಉಗ್ರಾಣೆ…

Read More

20 ಮಾರ್ಚ್ 2023 ಮಂಗಳೂರು: “ಸಂಗ್ರಹ, ಕಾರಕ, ನಿರುಕ್ತಿಗಳಲ್ಲಿ ಬರೆಯಲ್ಪಟ್ಟಿರುವ ಭರತಮುನಿಯ ನಾಟ್ಯಶಾಸ್ತ್ರವು ನಾಟ್ಯ ಕಲೆಗೆ ಚೌಕಟ್ಟು ನೀಡಿದ ಮೊದಲ ಗ್ರಂಥ. ಶಾಸ್ತ್ರಾಧಾರಿತ ಪ್ರಸ್ತುತಿಯಿಂದ ಕಲೆಗೆ ಸಂಸ್ಕಾರ ದೊರೆಯುತ್ತದೆ. ಹೀಗಾಗಿ ಶಾಸ್ತ್ರಾಧ್ಯಯನ ಮುಖ್ಯ” ಎಂದು ಮಂಗಳೂರಿನ “ನಾಟ್ಯಾರಾಧನ” ಮತ್ತು “ಯಕ್ಷ ಆರಾಧನಾ ಕಲಾ ಕೇಂದ್ರ”ದ ನಿರ್ದೇಶಕರಾದ ಮಿದುಷಿ ಸುಮಂಗಲಾ ರತ್ನಾಕರ ರಾವ್ ಅವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತು (ರಿ.) ಮಂಗಳೂರು, ಆಯೋಜಿಸಿದ ಭರತಮುನಿ ಜಯಂತಿ ಕಾರ್ಯಕ್ರಮದಲ್ಲಿ ಭರತಮುನಿಗೆ ನುಡಿ ನಮನ ಸಲ್ಲಿಸುತ್ತಾ ತಮ್ಮ ವಿಚಾರವನ್ನು ಮಂಡಿಸಿದರು. ದಿನಾಂಕ 19-03-2023 ಆದಿತ್ಯವಾರದಂದು ಅತ್ತಾವರದ ಚಕ್ರಪಾಣಿ ಶ್ರೀಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ಜರುಗಿದ ಕಾರ್ಯಕ್ರಮವನ್ನು ಮಾಜಿ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೋ. ಎಂ.ಎಲ್.ಸಾಮಗರು ಉದ್ಘಾಟಿಸಿ, ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ನೃತ್ಯ ಕಲಾವಿದರಾದ ವಿದ್ವಾನ್ ಪಿ. ಕಮಲಾಕ್ಷ ಆಚಾರ್, ಕಲಾಶ್ರೀ ಪುರಸ್ಕೃತೆ ವಿದುಷಿ ಗೀತಾ ಸರಳಾಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ ವಿದುಷಿ ಪ್ರತಿಮಾ ಶ್ರೀಧರ್ ಅವರನ್ನು ಸಮ್ಮಾನಿಸಲಾಯ್ತು. ಪ್ರೆಸಿಡೆನ್ಸಿ…

Read More

20 ಮಾರ್ಚ್ 2023, ಮಂಗಳೂರು: “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಲ್ಲಿ ಸಾಹಸ ಹಾಗೂ ಸಾಹಿತ್ಯದ ಗುಣ ಅಡಕವಾಗಿರುತ್ತದೆ. ಅದು ಬರವಣಿಗೆಗೆ ಪೂರಕ. ಬೆವರು ಅದ್ದಿದ ಮಣ್ಣಿನಲ್ಲಿ ಹುಟ್ಟಿದ ಸಾಹಿತ್ಯ ಕೃಷಿ ಎಲ್ಲಕ್ಕಿಂತಲೂ ಶ್ರೇಷ್ಠ” ಎಂದು ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು. ನಗರದ ಕೆನರಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ತುಳು ಲಿಪಿ ಶಿಕ್ಷಕಿ, ಲೇಖಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ ತುಳು ಕವನ ಸಂಕಲನವನ್ನು ಭಾನುವಾರ ದಿನಾಂಕ 19-03-2023ರಂದು ಬಿಡುಗಡೆಗೊಳಿಸಿ ಮಾತನಾಡಿದರು. “ಇಂದಿನ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತುಂಬುವಲ್ಲಿ ವಿಫಲವಾಗುತ್ತಿದೆ. ಲಕ್ಷ ಜನರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಲೇಖಕರಾಗುತ್ತಿದ್ದಾರೆ. ಹಿರಿಯ ತಲೆಮಾರಿನ ಕವಿ, ಸಾಹಿತಿಗಳು ತೆರೆಮರೆಗೆ ಸರಿಯುತ್ತಿರುವ ಹೊತ್ತಿನಲ್ಲಿ ತುಳುವಿನಲ್ಲಿ ಹೊಸ ಬರಹಗಾರರು ಸೃಷ್ಟಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ತಾಯಿ, ಗುರು, ಹುಟ್ಟಿದ ಮಣ್ಣಿನಲ್ಲಿ ಸಾಹಿತ್ಯದ ಸತ್ವವಿದೆ. ಮನಸ್ಸು ಎಂಬ ಅಂಗ ದೇಹದಲ್ಲಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಸ್ವಸ್ಥವಿದ್ದರೆ ಮಾತ್ರ ಬದುಕು. ಅಂತಹ ಮನಸ್ಸಿಗೆ ಔಷಧ ನೀಡುವ…

Read More

20 ಮಾರ್ಚ್ 2023, ಮಂಗಳೂರು: ಅತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಸ್ಮರಣಿಕೆಗಳ ತಯಾರಕ ಶ್ರೀ ವೆಂಕಟೇಶ ವೈದ್ಯ ಕಲಾಸಾಧಕ, ಪರೋಪಕಾರಿ ಪ್ರವೃತಿಯ ಕಲಾಪೋಷಕ. ಕುಂದಾಪುರ ತಾಲೂಕು ತೆಕ್ಕಟ್ಟೆ ಕೊಮೆಯಲ್ಲಿ ಸಮಾನ ಮನಸ್ಕ ಸ್ನೇಹಿತರೊಂದಿಗೆ ಯಶಸ್ವಿ ಕಲಾವೃಂದ ಸ್ಥಾಪಿಸಿ ನಿರಂತರ ಕಲಾಚಟುವಟಿಕೆ ನಡೆಸುತ್ತಿರುವ ಕಲಾಸೇವಕ. ಇವರ ಮಗಳೇ ಪಂಚಮಿ ವೈದ್ಯ ತೆಕ್ಕಟ್ಟೆ. ಯಕ್ಷಗಾನ, ನೃತ್ಯ, ಸಂಗೀತ, ಭರತನಾಟ್ಯ, ಚಿತ್ರಕಲೆ ಈ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಪ್ರತಿಭೆ ಪಂಚಮಿ. ೧೬.೧೦.೨೦೦೭ ರಂದು ವೆಂಕಟೇಶ ವೈದ್ಯ ಹಾಗೂ ಭಾಗ್ಯಲಕ್ಷ್ಮಿ ದಂಪತಿಗಳ ಮಗಳಾಗಿ ಜನನ. ಸರ್ಕಾರಿ ಪ್ರೌಢ ಶಾಲೆ ತೆಕ್ಕಟ್ಟೆಯಲ್ಲಿ ೧೦ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಹಾಗೂ ತಾಯಿ ಇಬ್ಬರೂ ಕಲಾಪ್ರೇಮಿಗಳು, ಇಬ್ಬರೂ ಯಕ್ಷಗಾನ ಕಲಾವಿದರು. ಮನೆಯಲ್ಲಿದ್ದ ಈ ವಾತಾವರಣವು ಪಂಚಮಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಯಕ್ಷ ಗುರು ಸೀತಾರಾಮ ಶೆಟ್ಟಿ ಕೊಯಿಕೂರು, ದೇವದಾಸ್ ರಾವ್ ಕೂಡ್ಲಿ ಬಳಿ ಯಕ್ಷಗಾನ ಕುಣಿತ ಹಾಗೂ ಪ್ರಾಚಾರ್ಯ ಕೆ.ಪಿ.ಹೆಗಡೆ, ಲಂಬೋದರ ಹೆಗಡೆ…

Read More

20 ಮಾರ್ಚ್ 2023, ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ “ಮೈಸೂರು ರಂಗಹಬ್ಬ” ಮಾರ್ಚ್ 22 ರಿಂದ 27, 2023ರವರೆಗೆ ಕಿರುರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಮೈಸೂರಿನ ಹವ್ಯಾಸಿ  ತಂಡಗಳಿಂದ  ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿವೆ. ಉದ್ಘಾಟನಾ ಸಮಾರಂಭ: ಉದ್ಘಾಟನಾ ಸಮಾರಂಭವು ದಿನಾಂಕ 22 ಮಾರ್ಚ್ 2023 ಸಂಜೆ 6ಕ್ಕೆ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿಗಳಾದ ಪ್ರಸನ್ನ ನೆರವೇರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಂಡ್ಯ ರಮೇಶ್, ರಂಗಭೂಮಿ ಮತ್ತು ಚಲನಚಿತ್ರ ನಟರು ಹಾಗೂ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮೈಸೂರು ಹವ್ಯಾಸಿ ರಂಗಕಲಾವಿದರು ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣ: ದಿನಾಂಕ: 23.03.2023 ಬೆಳಗ್ಗೆ 10:30 “ಹವ್ಯಾಸಿ ರಂಗಭೂಮಿ-ನೆನ್ನೆ, ಇಂದು, ನಾಳೆ”…

Read More

18-03-2023,ಮಂಗಳೂರು: ‘ಸಮಾಜದ ವಿವಿಧ ಬಗೆಯ ಸೇವಾ ಸಂಸ್ಥೆಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ. ಇದರೊಂದಿಗೆ ನೃತ್ಯ,ನಾಟಕ, ಯಕ್ಷಗಾನ ಮುಂತಾದ ರಂಗಕಲೆಗಳಿಗೂ ಅವು ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ. ಏಕೆಂದರೆ ಕಲೆ ಮತ್ತು ಕಲಾವಿದರ ಪೋಷಣೆ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೇ ಆಗಿದೆ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಪದವು ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಶಕ್ತಿನಗರ ಸರಕಾರಿ ಶಾಲಾ ಮೈದಾನದಲ್ಲಿ ದಿನಾಂಕ 16-03-2023 ರಂದು ಜರಗಿದ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರ ಯಕ್ಷಗಾನ ಬಯಲಾಟ ಸಂದರ್ಭ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ‘ಇಂದು ಯಕ್ಷಗಾನ ಈ ಮಟ್ಟಕ್ಕೆ ಬೆಳೆಯಲು ಅನೇಕ ಹಿರಿಯ ಕಲಾವಿದರ ಕೊಡುಗೆ ಕಾರಣ. ಅಂಥವರನ್ನು ಕರೆದು ಪುರಸ್ಕರಿಸುವುದು ಕಲಾ ಸೇವೆಯ ಶೇಷ್ಠ ಮಾದರಿ’ ಎಂದವರು ನುಡಿದರು. ಡಿ.ಮನೋಹರ್ ಅವರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಬಯಲಾಟ ಮೇಳದ ಹಿರಿಯ ಕಲಾವಿದ ತುಳು…

Read More