Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2023-24ನೇ ಸಾಲಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 24-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ “ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು, ಬದುಕಿನಲ್ಲಿ ಸಂಸ್ಕಾರ ಕಲಿಸುತ್ತದೆ. ಶಿಕ್ಷಣವು ಜೀವನ ನಡೆಸಲು ಸಂಪಾದನೆಗೆ ದಾರಿ ಮಾಡಿಕೊಟ್ಟರೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಯಕ್ಷಗಾನ ದಾರಿ ದೀಪವಾಗಿದೆ. ಶಿಕ್ಷಣ ನನ್ನ ಕೈ ಸೇರದಿದ್ದರೂ ಯಕ್ಷಗಾನ ನನ್ನ ಹೃದಯ ಸೇರಿದೆ. ಛಲ ಹಾಗೂ ಅಭಿಮಾನಿಗಳ ಪ್ರೋತ್ಸಾಹ ಈ ಕ್ಷೇತ್ರದಲ್ಲಿ ನನ್ನನ್ನು ಯಶಸ್ವಿಗೊಳಿಸಿದೆ. ಜಾತಿ, ಧರ್ಮ, ಭೇದಭಾವ ಮರೆತು ಮನುಷ್ಯತ್ವ ಮೈಗೂಡಿಸಿಕೊಳ್ಳಿ. ಒಳ್ಳೆಯತನ ಎಂದಿಗೂ ಎಲ್ಲರ ಕೈ ಹಿಡಿಯುತ್ತದೆ.” ಎಂದರು. ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲಿನ ಪ್ರಾಂಶುಪಾಲೆ ಡಾ. ಮಾಲಿನಿ ಎನ್. ಹೆಬ್ಬಾರ್ ಮಾತನಾಡಿ “ಜೀವನದಲ್ಲಿ ಸಮಯ ಪ್ರಜ್ಞೆ ಇದ್ದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಹಾಗಾಗಿ ಸಮಯ ಪ್ರಜ್ಞೆ ಕೂಡ ಒಂದು ಪ್ರತಿಭೆ ಇದ್ದಂತೆ. ಸುತ್ತಲಿನ ಪರಿಸರದಲ್ಲಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿ…
ಬಂಟ್ವಾಳ : ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ ಆಯೋಜಿಸಿದ್ದ ಹಿರಿಯ ಸಾಹಿತಿ, ವಿದ್ವಾಂಸದ್ವಯರಾದ ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಾಗೂ ದಿ. ದೇರಾಜೆ ಸೀತಾರಾಮಯ್ಯ ಅವರ ಒಡನಾಟದ ಸಂಸ್ಮರಣೆಯ ‘ದೇರಾಜೆ – ಏರ್ಯ ನೆನಪಿನ ಕ್ಷಣಗಳು’ ಕಾರ್ಯಕ್ರಮವು ದಿನಾಂಕ 23-05-2024ರಂದು ಮೊಡಂಕಾಪು ಸಮೀಪ ಏರ್ಯಬೀಡಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಪತ್ನಿ ಏರ್ಯ ಆನಂದಿ ಆಳ್ವ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಉಭಯ ಸಾಹಿತಿಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, “ಏರ್ಯ ಮತ್ತು ದೇರಾಜೆ ಸೀತಾರಾಮಯ್ಯ ಇಬ್ಬರೂ ಯಕ್ಷಗಾನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಏರ್ಯ ಅವರಿಗೆ ಸಾಹಿತ್ಯ, ಸಂಸ್ಕೃತಿ ಕಲೆಗಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರು ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದು, ಉತ್ಸಾಹ ಗಮನಾರ್ಹ. ಕಲೆಯ ರಸದ ಬಗ್ಗೆ ಇದ್ದಂಥ ಒಲವು ದೇರಾಜೆ ಸೀತಾರಾಮಯ್ಯ ಅವರೆಡೆ ಸೆಳೆದಿತ್ತು. ಮಾತು ಮತ್ತು ಬರಹಗಳ ಮೂಲಕ ಶ್ರೇಷ್ಠವಾದ ಸಾಹಿತ್ಯ ಸೃಷ್ಟಿ ಮಾಡಿರುವುದು ದೇರಾಜೆ…
ಕಾರ್ಕಳ : ಅಮಿತ್ ಎಸ್. ಪೈ ಸ್ಮಾರಕ ಯೋಗ ಧ್ಯಾನ ಮಂದಿರ ಪೆರ್ವಾಜೆಯಲ್ಲಿ ಹೊಸಸಂಜೆ ಪ್ರಕಾಶನದ 33ನೆಯ ಪ್ರಕಟಣೆ ಲೇಖಕ ಕೆ.ಎ. ಶೆಟ್ಟಿ ಕುಂಜತ್ತೂರು ಇವರ ‘ಭಾಂಧವ್ಯದ ಬೆಸುಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19-05-2024ರಂದು ನಡೆಯಿತು. ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ “ಆಧುನಿಕ ಬದುಕಿನಲ್ಲಿ ಬಹುವಿಧದ ತಂತ್ರಜ್ಞಾನ ಕೈಯಳತೆಯಲ್ಲಿದೆ. ಇದರಿಂದ ನಮ್ಮ ಬದುಕು ಸುಲಲಿತವಾಗಿದೆ ಎಂಬುದು ಸತ್ಯ. ಆದರೆ ಇದರ ಅತಿಯಾದ ಬಳಕೆಯಿಂದ ಮನುಷ್ಯನ ಬದುಕು ಕೂಡ ಅಸ್ತವ್ಯಸ್ತವಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮೊಬೈಲ್, ಕಂಪ್ಯೂಟರ್, ಇಂಟರ್ ನೆಟ್ ಗಳಂತಹ ಆಧುನಿಕ ಸೌಲಭ್ಯಗಳನ್ನು ಮಿತವಾಗಿ ಬಳಸುವ ಮೂಲಕ ನಮ್ಮ ಬದುಕಿನಲ್ಲಿ ಸೌಕರ್ಯಗಳು ಸೃಷ್ಟಿಸುವ ಅನಾಹುತಗಳನ್ನು ತಪ್ಪಿಸಬಹುದು. ನೆಮ್ಮದಿಯ ಬದುಕು ಬೇಕಿದ್ದರೆ ಇಂತಹ ಸಾಧನಗಳ ಅತಿಬಳಕೆ ಬಿಟ್ಟು ಪುಸ್ತಕಗಳನ್ನು ಓದುವ ಮತ್ತು ಬರೆಯುವ ಮೂಲಕ ಬದಲಾವಣೆ ತಂದುಕೊಳ್ಳಬೇಕು” ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕೃಷರ್ಸ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ…
ಮೈಸೂರು : ಅದಮ್ಯ ರಂಗ ಶಾಲೆಯು ಕಳೆದ ಎಂಟು ವರ್ಷಗಳಿಂದ ಮೈಸೂರಿನ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಯಸ್ಕರ ಮತ್ತು ಮಕ್ಕಳ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತಾ ಬರುತ್ತಿದೆ. ಅದಮ್ಯದ ಮುಂದಿನ ಭಾಗವಾಗಿ 30 ದಿನಗಳ ಅವಧಿಯ ಅಭಿನಯ ತರಬೇತಿ ಮತ್ತು ಕಲಾತ್ಮಕ ಚಲನಚಿತ್ರ ತಯಾರಿ ಮತ್ತು ಚಿತ್ರೀಕರಣ 27-05-2024ರಂದು ಪ್ರಾರಂಭವಾಗಲಿದೆ. ಅಭಿನಯ ತರಬೇತಿ, ಧ್ವನಿ ಮುದ್ರಣ, ಪ್ರಸಾದನ, ಸಂಕಲನ ಸೇರಿದಂತೆ ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ನಿರ್ದೇಶಕರು ಮತ್ತು ಚಲನಚಿತ್ರ ಕಲಾವಿದರು ತರಬೇತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳನ್ನು ತೊಡಗಿಸಿಕೊಂಡು ಕಲಾತ್ಮಕ ಸಿನಿಮಾ ತಯಾರಾಗಲಿದ್ದು, ಪ್ರತಿದಿನ ಸಂಜೆ 6.30ರಿಂದ 9.00ರವರೆಗೂ ಚಿತ್ರೀಕರಣ ನಡೆಯಲಿದೆ. ಮೊದಲು ನೋಂದಣಿ ಮಾಡಿಕೊಂಡ ಗರಿಷ್ಠ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ವಯೋಮಿತಿ 16ರಿಂದ 50 ವರ್ಷ ಹೆಚ್ಚಿನ ಮಾಹಿತಿಗಾಗಿ ರಂಗಶಾಲೆ ಕಾರ್ಯದರ್ಶಿ ಚಂದ್ರು ಮಂಡ್ಯ – 8660103141 ಇವರನ್ನು ಸಂಪರ್ಕಿಸಬಹುದು.
ಬೆಂಗಳೂರು : ರಂಗಚಂದಿರ (ರಿ) ಬೆಂಗಳೂರು ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ರಂಗಚಿನ್ನಾರಿ ಕಾಸರಗೋಡು (ರಿ.) ಅಭಿನಯಿಸುವ ಎರಡು ನಾಟಕಗಳ ಪ್ರದರ್ಶನ ದಿನಾಂಕ 01-06-2024ರಂದು ಸಂಜೆ ಗಂಟೆ 6-00ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ್ ಮೂರ್ತಿ ಇವರು ವಹಿಸಲಿದ್ದು, ಚಲನ ಚಿತ್ರ ನಟರಾದ ಶ್ರೀ ಸುಂದರ್ ರಾಜ್ ಇವರು ಉದ್ಘಾಟಿಸಲಿದ್ದಾರೆ. ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಇವರ ಗೌರವ ಉಪಸ್ಥಿತಿಯಲ್ಲಿ ನಾಟಕಕಾರರಾದ ಡಾ. ನಾ. ದಾಮೋದರ ಶೆಟ್ಟಿ ಮತ್ತು ರಂಗಚಂದಿರದ ಗೌರವಧ್ಯಕ್ಷರಾದ ಶ್ರೀ ಆರ್. ಕೆ. ಹೆಗಡೆ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವಿರತ ಹರೀಶ್, ನಯನ ರಾಜು ಮತ್ತು ಎಸ್. ತಿಮ್ಮಯ್ಯ ಇವರಿಗೆ ರಂಗ ಗೌರವ ಹಾಗೂ ಡಾ. ಡಿ.ಕೆ. ಚೌಟರ ನೆನಪು ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕರಾದ ಶ್ರೀ ಶಶಿಧರ…
ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ರಮಾನಂದ ಬನಾರಿ ಹಾಗೂ ಗಣರಾಜ ಕುಂಬ್ಳೆ ರಚಿಸಿರುವ ‘ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ’ ಮತ್ತು ಪ್ರೊ. ಪಿ. ಎನ್. ಮೂಡಿತ್ತಾಯರು ಸಂಪಾದಿಸಿದ ‘ಚಿಕಿತ್ಸಕ ದೃಷ್ಟಿಯ ಸಂಸ್ಕೃತಿಯ ಸೂತ್ರಧಾರಿ ಡಾ.ರಮಾನಂದ ಬನಾರಿ’ ಎಂಬ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 19-05-2024ರ ಭಾನುವಾರದಂದು ಕಾಸರಗೋಡಿನ ಎಡನೀರು ಮಠದ ಭಾರತೀ ಸದನದಲ್ಲಿ ನಡೆಯಿತು. ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ತಾಳಮದ್ದಳೆ ಕ್ಷೇತ್ರಕ್ಕೆ ಡಾ. ರಮಾನಂದ ಬನಾರಿಯವರು ನೀಡಿದ ಕೊಡುಗೆ ಅಪಾರವಾದುದು. ಅವರ ವ್ಯಕ್ತಿತ್ವ ಸಾಧನೆ ಪುಸ್ತಕರೂಪದಲ್ಲಿ ಹೊರಬರುತ್ತಿರುವುದು ತುಂಬಾ ಸಂತೋಷದ ವಿಚಾರ. ‘ತಾಳಮದ್ದಳೆಯ ಐತಿಹಾಸಿಕ ಅಧ್ಯಯನದ’ ಪುಸ್ತಕವನ್ನು ಹೊರತರುತ್ತಿರುವುದು ತುಂಬಾ ಸ್ತುತ್ಯರ್ಹ.” ಎಂದು ಹೇಳಿದರು. ಖ್ಯಾತ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆದ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಉಡುಪಿಯ ರಾಗ ಧನ ಸಂಸ್ಥೆ ಹಮ್ಮಿಕೊಂಡಿದ್ದ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೃತಿಗಳ ಕಾರ್ಯಾಗಾರವು 32 ಸಂಗೀತಾಭ್ಯಾಸಿಗಳ ಪಾಲ್ಗೊಳ್ಳುವಿಕೆಯೊಂದಿಗೆ ದಿನಾಂಕ 22-05-2024ರಂದು ಸಂಪನ್ನಗೊಂಡಿತು. ವಿದ್ವಾನ್ ಜಿ. ರವಿಕಿರಣ್ ಚೆನೈಯವರ ಸಂಗೀತ ಕಛೇರಿಯ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯೂ ಆದ ವಿದ್ವಾನ್ ಶ್ರೀ ಜಿ. ರವಿಕಿರಣ್, ಶಾಸ್ತ್ರೀಯ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಮಕ್ಕಳನ್ನು ಶ್ಲಾಘಿಸಿ, “ಇದರಲ್ಲಿ ನಿರಂತರತೆ ಕಾಯ್ದುಕೊಳ್ಳಿ. ನಿನ್ನೆ ಮತ್ತು ಇಂದು ಕಲಿತ ಪಾಠಗಳನ್ನು ದಿನವೂ ಮನನ ಮಾಡುವುದು ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರಿಗೆ ನಿಮ್ಮ ಗುರುಕಾಣಿಕೆ. ನಿಮ್ಮ ಓದುವಿಕೆಗೆ ಸಂಗೀತ ಯಾವತ್ತೂ ಅಡ್ಡಿಯಾಗುವುದಿಲ್ಲ. ಸಂಗೀತಾಭ್ಯಾಸವು ನಿಮ್ಮ ತನ್ಮಯತೆಯನ್ನು (ಕಾನ್ಸಂಟ್ರೇಷನ್) ಹೆಚ್ಚಿಸುವುದಲ್ಲದೆ ಮನಸ್ಸಿಗೆ ಶಾಂತತೆಯನ್ನು ತರುತ್ತದೆ” ಎಂದರು. ತದನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ, ಹರಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಶ್ರೀಕಿರಣ್ ಹೆಬ್ಬಾರ್, “ಕಾರ್ಯಾಗಾರದ ಯಶಸ್ಸಿಗೆ ಹೆತ್ತವರ ಪ್ರೋತ್ಸಾಹ ಕಾರಣ. ಸಂಗೀತಾಸಕ್ತ ಮಕ್ಕಳ ಪಾಲ್ಗೊಳ್ಳುವಿಕೆ ನಿರಂತರವಾಗಿರಲಿ, ಮಕ್ಕಳನ್ನು…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವುಗಳ ಆಶ್ರಯದಲ್ಲಿ ಸಾಹಿತಿ ದಿ. ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯಪ್ರಯೋಗ ನಾಟಕ ಪ್ರದರ್ಶನವು ದಿನಾಂಕ 26-05-2024ರಂದು ಸಂಜೆ 5-30ಕ್ಕೆ ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ.ಯ ಸಭಾಂಗಣದಲ್ಲಿ ನಡೆಯಲಿದೆ. ಯುವ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ – ಡಾ. ನಮ್ರತಾ ಬಿ., ದ್ವಿತೀಯ ಬಹುಮಾನ – ಡಾ. ಜಿ.ಪಿ. ನಾಗರಾಜ್ ಹಾಗೂ ಮೆಚ್ಚುಗೆ ಬಹುಮಾನಗಳಿಗೆ ರಾಮಾಂಜಿ ನಮ್ಮಭೂಮಿ, ಮಂಜುನಾಥ್ ಕಾರ್ತಟ್ಟು ಮತ್ತು ಮಂಜುನಾಥ ಹಿಲಿಯಾಣ ಇವರುಗಳು ಆಯ್ಕೆಯಾಗಿದ್ದು ಇವರಿಗೆ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಕಥಾ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು. ಇದೇ ಸಂದರ್ಭದಲ್ಲಿ ದಿವಂಗತ ಮೇಟಿ ಮುದಿಯಪ್ಪ ಅವರ ‘ಬದುಕು ಬರಹ’ದ ಕುರಿತು…
ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ – ನೃತ್ಯ – ಮಾತುಗಾರಿಕೆ – ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ – ಸಮಯಪ್ರಜ್ಞೆ – ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ಸುರೇಶ್ ಮೊಯ್ಲಿ. 05.05.1975ರಂದು ಸಂಜೀವ ಹಾಗೂ ಗಿರಿಜ ಇವರ ಮಗನಾಗಿ ಜನನ. 9ನೇ ತರಗತಿವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೂ ಯಕ್ಷಗಾನ ನೋಡುವ ಅಭ್ಯಾಸ. ಹಾಗಾಗಿ ಅದರ ಬಗ್ಗೆ ಆಸಕ್ತಿ. ಮುಂದೊಂದು ದಿನ ನಾನೂ ಕಲಾವಿದನಾಗಬೇಕು ಎನ್ನುವ ಹಂಬಲ. ನಾವಡರು ಹಾಗೂ ಧಾರೇಶ್ವರ ಭಾಗವತರ ಪದ್ಯವೇ ನನಗೆ ಯಕ್ಷಗಾನಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಸುರೇಶ್ ಮೊಯ್ಲಿ. ಗೋರ್ಪಾಡಿ ವಿಠಲ್ ಪಾಟೀಲ್, ವಿದ್ವಾನ್ ಗಣಪತಿ ಭಟ್, ಹೆರಂಜಾಲು…
ತೆಕ್ಕಟ್ಟೆ : ಯಕ್ಷಗಾನವು ಅಲ್ಲಲ್ಲಿ ಕಲಿಕಾ ಕೇಂದ್ರಗಳ ಮೂಲಕ ಪ್ರಬುದ್ಧತೆ ಹೊಂದುತ್ತಿದೆ. ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ತೆಕ್ಕಟ್ಟೆ ಹಯಗ್ರೀವವನ್ನು ಕೇಂದ್ರವಾಗಿರಿಸಿಕೊಂಡು ಕಳೆದ ಹಲವು ವರ್ಷಗಳಿಂದ ಬಡಗು ಯಕ್ಷಗಾನದ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆಗಳನ್ನು ಕಲಿಸುತ್ತಾ ಪ್ರತೀ ವರ್ಷ ಒಂದಷ್ಟು ಕಲಾವಿದರನ್ನು ರಂಗಕ್ಕೆ ಸಿದ್ಧಗೊಳಿಸಿ, ಕೊಡುಗೆಯಾಗಿಸಿ ಹೆಸರು ಮಾಡಿದೆ. 01-06-2024ರಿಂದ ಆರು ತಿಂಗಳುಗಳ ಕಾಲದ ಕಲಿಕೆಗೆ ಮತ್ತೆ ತೆಕ್ಕಟ್ಟೆ ಹಯಗ್ರೀವ ತೆರೆದುಕೊಳ್ಳುತ್ತಿದೆ. ಪ್ರತೀ ದಿನ ಮಧ್ಯಾಹ್ನ ಗಂಟೆ 3.00ರಿಂದ ಆರಂಭವಾಗುವ ತರಗತಿಗೆ ಪ್ರಾಚಾರ್ಯ ಕೆ. ಪಿ. ಹೆಗಡೆ, ದೇವದಾಸ್ ರಾವ್ ಕೂಡ್ಲಿ, ಲಂಬೋದರ ಹೆಗಡೆ ನಿಟ್ಟೂರು ಇವರುಗಳು ತೆಕ್ಕಟ್ಟೆ ಕಲಿಕಾ ಕೇಂದ್ರದಲ್ಲಿ ಗುರುಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ತರಗತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಯಕ್ಷ ಸಂಘಟಕ ಹಾಗೂ ಕಲಾವಿದರಾದ ಮಹಮದ್ ಗೌಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತರಗತಿಗೆ ಸೇರಲು ಬಯಸುವವರು 9945947771 ಸಂಖ್ಯೆಯನ್ನು ಸಂಪರ್ಕಿಸಬಹುದು…