Subscribe to Updates
Get the latest creative news from FooBar about art, design and business.
Author: roovari
ಶಂಭೂರು : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇವರ ವತಿಯಿಂದ ಶಂಭೂರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ರಚನಾ ಪ್ರೇರಣಾ ಕಮ್ಮಟವು ದಿನಾಂಕ 02-04-2024 ರಂದು ನಡೆಯಿತು. ಶಾಲಾ ಎಸ್. ಡಿ .ಎಂ.ಸಿ ಅಧ್ಯಕ್ಷ ನಾಗರಾಜ್ ಕಮ್ಮಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಭಾಷಣ ಕಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಮಾಹಿತಿ ನೀಡಿದರು. ಮಕ್ಕಳ ಕಲಾಲೋಕದ ಗೌರವ ಸಲಹೆಗಾರರಾದ ಭಾಸ್ಕರ ಅಡ್ವರು ಕವನ, ಕಥೆ, ಚುಟುಕು ರಚನೆ ಬಗ್ಗೆ ತರಬೇತಿ ನೀಡಿದರು. ಎಸ್. ಡಿ. ಎಂ. ಸಿ. ಸದಸ್ಯರಾದ ವಿಶಾಲಾಕ್ಷಿ, ಮುಖ್ಯ ಶಿಕ್ಷಕ ಜಯರಾಮ ಪಡ್ರೆ, ಶಿಕ್ಷಕಿಯರಾದ ದಯಾವತಿ, ಇಂದಿರಾ, ಗಾಯತ್ರಿ, ಮೀನಾಕ್ಷಿ ಮತ್ತು ಉಷಾ ಉಪಸ್ಥಿತರಿದ್ದರು.
ಮಂಗಳೂರು : ಸಂಸ್ಕೃತ ಭಾರತೀ ಮಂಗಳೂರು ಆಯೋಜಿಸಿದ ‘ಸಂಸ್ಕೃತ ಮಹೋದಧಿಃ’ ಜನಪದ ಸಮ್ಮೇಳನವು ದಿನಾಂಕ 07-04-2024ರ ರವಿವಾರದಂದು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆಯಿತು. ಸಮ್ಮೇಳನವನ್ನು ಉದ್ಘಾಟಿಸಿದ ಸಂಸ್ಕೃತ ಭಾರತೀ ಇದರ ಅ. ಭಾ. ಸಹ ಪ್ರಶಿಕ್ಷಣ ಪ್ರಮುಖ ಡಾ. ಸಚಿನ್ ಕಠಾಳೆ ಮಾತನಾಡಿ “ಸಂಸ್ಕೃತವನ್ನು ಏಕೆ ಓದಬೇಕು? ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ ಭಾರತದಲ್ಲಿ ಸಂಸ್ಕೃತವನ್ನು ಏಕೆ ಓದಬೇಕು ಎಂಬ ಪ್ರಶ್ನೆಯೇ ಬರುವುದಿಲ್ಲ. ಇಂದಿನ ಕಾಲದಲ್ಲಿ ಬ್ರಿಟಿಷರ ಕಾರಣದಿಂದ ಸಂಸ್ಕೃತ ಕೇವಲ ಸಿಲೆಬಸ್ ವಿಷಯವಾಗಿದೆ. ಅದು ಅಧ್ಯನದ ವಿಷಯವಾಗಿ ಉಳಿದಿಲ್ಲ. ಉದಾಹರಣೆಗೆ ಕ್ರೀಡೆ ಅಧ್ಯಯನದ ವಿಷಯವಲ್ಲ. ಅದು ಸ್ವಾಭಾವಿಕ ವಿಷಯ. ಕ್ರೀಡೆ ಎಲ್ಲರಿಗೂ ಬೇಕಾದ ವಿಷಯವಾಗಿದೆ. ಯಾವಾಗ ಕ್ರೀಡೆ ಮತ್ತು ಸಂಗೀತಗಳಿಗೆ ಶಿಕ್ಷಕರ ತರಬೇತಿ ಆರಂಭವಾಯಿತೋ ಆ ದಿನದಿಂದಲೇ ಅವುಗಳು ಪಠ್ಯವಿಷಯವಾಗಿ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತಾ ಬಂದಿದೆ. ಇದೇ ರೀತಿ ಜ್ಞಾನ ಸಿದ್ಧಿಗಾಗಿ ಸಂಸ್ಕೃತವನ್ನು ಓದಬೇಕು. ಸಂಸ್ಕೃತದಲ್ಲಿ ಏನಿದೆ? ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುವ…
ಮಂಗಳೂರು : ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿ’ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯಡಿ ಆಯ್ಕೆಯಾದ ಲೇಖಕರ ಬಳಗದ ಜೊತೆ ಮಾತುಕತೆ ಹಾಗೂ ‘ಪುಸ್ತಕ ಪಂಚಾತಿಕೆ’ ಎಂಬ ಸಂವಾದ ಕಾರ್ಯಕ್ರಮವು ದಿನಾಂಕ 07-04-2024 ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲೇಖಕರ ಬಳಗವನ್ನು ಉದ್ದೇಶಿಸಿ ಮಾತನಾಡಿದ ಗೋವಾದ ಹಿರಿಯ ಸಾಹಿತಿ ಶ್ರೀ ದತ್ತಾ ದಾಮೋದರ ನಾಯಕ್ “ಲೇಖಕರು ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಮತ್ತು ಸಂವೇದನಾಶೀಲತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಾಹಿತ್ಯ ಕೃತಿ ರಚಿಸಲು ಸಾಧ್ಯ. 25 ಮಿಲಿ ಸುಗಂದ ದ್ರವ್ಯ ತಯಾರಿಸಲು ಸಾವಿರಾರು ಹೂವಿನ ಪಕಳೆಗಳನ್ನು ಅರೆಯಬೇಕಾಗುತ್ತದೆಯೋ ಹಾಗೆ ಒಂದು ಸಾಹಿತ್ಯ ಕೃತಿ ರಚನೆಯ ಹಿಂದೆ ಸಾವಿರಾರು ಪುಟಗಳ ಓದು, ಅಭ್ಯಾಸ ಇರುತ್ತದೆ. ಬರವಣಿಗೆಯ ಭಾಷೆ ಸಾಧ್ಯವಾದಷ್ಟು ಸರಳ ಮತ್ತು ಹೃದ್ಯವಾದಾಗ ವಾಚಕನಿಗೆ ಓದುವ ಅನುಭೂತಿ ದಕ್ಕುತ್ತದೆ. ಅತಿಯಾದ ಅಲಂಕಾರ, ಸಾಂಕೇತಿಕತೆ, ಪ್ರತಿಮೆ – ಪ್ರತೀಕಗಳನ್ನು ಹೇರಿಕೊಂದು ರಚಿಸಿದ ಸಾಹಿತ್ಯ ಕೃತಿಯಿಂದ ಓದುಗರು ವಿಮುಖರಾಗುವ…
ವಲಸೆ ಎಂಬುದು ಅನಾದಿ ಕಾಲದಿಂದ ಬಂದ ಪ್ರಕ್ರಿಯೆ. ಕಂಸ ಸಂಹಾರಕ್ಕಾಗಿ ಗೋಕುಲದಿಂದ ಮಥುರೆಗೆ ಬಂದ ಶ್ರೀಕೃಷ್ಣ, ಗೋಕುಲಕ್ಕೆ ಮತ್ತೆ ಮರಳಲೇ ಇಲ್ಲ. ಈಗಿನ ವಲಸೆ ವಿಧಾನಗಳೇ ಬೇರೆ. ಹಳ್ಳಿಗಳೆಲ್ಲ ನಗರಕ್ಕೆ ವಲಸೆ ಬಂದು, ಅವು ವೃದ್ಧಾಶ್ರಮಗಳಾದರೆ, ಅತಿ ಜನಸಾಂದ್ರತೆಯಿಂದ ನಗರಗಳು ಉಸಿರು ಕಟ್ಟಿಸುವ ನರಕಗಳಾಗುತ್ತಿವೆ. ಇಂತಹದೇ ವಲಸೆಯ ಅಪಾಯದ ಕುರಿತು ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅಥೋಲ್ ಫಗಾರ್ಡ್ ಬರೆದ ನಾಟಕ “ದಿ ವ್ಯಾಲಿ ಸಾಂಗ್” ಡಾ. ಮೀರಾ ಮೂರ್ತಿಯವರು ಅದನ್ನು ‘ಕಣಿವೆಯ ಹಾಡು’ ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಮೈಸೂರಿನಲ್ಲಿ ನಟನ ರೆಪರ್ಟರಿ ತಂಡದವರು ಕಣಿವೆಯ ಹಾಡನ್ನು ಶ್ರೀಪಾದ ಭಟ್ ನಿರ್ದೇಶನದಲ್ಲಿ ರಂಗಕ್ಕೆ ತಂದಿದ್ದಾರೆ. ಅಜ್ಜ ಮತ್ತು ಮೊಮ್ಮಗಳ ಸಂವಾದದಲ್ಲಿ ಇಡೀ ನಾಟಕ ನಡೆಯುತ್ತಾ ಹೋಗುತ್ತದೆ. ಕಣಿವೆಯ ಸುಂದರ ಗದ್ದೆಗಳಲ್ಲಿ ಕೃಷಿ ಮಾಡಿಕೊಂಡು, ಎಲ್ಲಕ್ಕೂ ಹರಿ ಚಿತ್ತ ಎಂದು ನಂಬಿ ಬದುಕುವ ವೃದ್ಧ ಅಬ್ರಾಂ ಜೋಂಕರ್ಸ್ ತುಂಡು ಭೂಮಿಯಲ್ಲಿಯೇ ಗೇಣಿ ಮಾಡಿಕೊಂಡು ಜೀವನ ಸಾಗಿಸುವವ. ಅವನ ಮಗಳು ಪ್ರಿಯತಮನೊಂದಿಗೆ ಪಟ್ಟಣಕ್ಕೆ…
ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿರುವ ಕನ್ನಡ ವಿಭಾಗದ ನಲ್ವತ್ತಾರರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 13-04-2024ರಂದು ಮಧ್ಯಾಹ್ನ ಗಂಟೆ 2ಕ್ಕೆ ಮುಂಬಯಿ ಜೆ.ಪಿ. ನಾಯಕ್ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ‘ಮಲ್ಲ’ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಇವರ ‘ಸಾಹಿತ್ಯ ಸಿದ್ಧಿ ಸಿರಿಸೇವೆಯ ಸಾಕಾರ – ಡಾ. ಸುಧಾಮೂರ್ತಿ’ ಮತ್ತು ‘ರಸಋಷಿ ರಾಷ್ಟ್ರಕವಿ ಕುವೆಂಪು’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ. ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಇವರು ಅನುವಾದಿಸಿದ ‘From words to Noble Deeds-The Inspiring Tale of Dr. Sudha Murthy’, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ…
ಬೆಂಗಳೂರು : ಕನ್ನಡ ಸಹೃದಯರ ಪ್ರತಿಷ್ಠಾನ (ನೋಂ.) ಇದರ ವತಿಯಿಂದ ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ‘ಚೈತ್ರೋತ್ಸವ’ವು ರಾಜಾಜಿನಗರ, ಕುಮಾರವ್ಯಾಸ ಮಂಟಪದಲ್ಲಿ ದಿನಾಂಕ 10-04-2024ರಿಂದ 18-04-2024ರವರೆಗೆ ನಡೆಯಲಿದೆ. ದಿನಾಂಕ 10-04-2024ರಂದು ಡಾ. ಸುಮನಾ ಮತ್ತು ಶ್ರೀ ಶಿವರಾಂ ಇವರಿಂದ ‘ವಾದ್ಯ ಸಂಗೀತ’, ದಿನಾಂಕ 11-04-2024ರಂದು ಶ್ರೀಮತಿ ಮೀನಾಕ್ಷಿ ಶ್ರೀಪಾದ ಮತ್ತು ತಂಡದವರಿಂದ ‘ಗಮಕ ರೂಪಕ’, ದಿನಾಂಕ 12-04-2024ರಂದು ವಿದುಷಿ ಗೌರಿ ವಿಶ್ವನಾಥ್ ಮತ್ತು ತಂಡ ಹಾಗೂ ಶ್ರೀಚಿತ್ರಾ ಭಜನಾ ಮಂಡಲಿಯವರಿಂದ ‘ಹನುಮದ್ವಿಲಾಸ’, ದಿನಾಂಕ 13-04-2024ರಂದು ಗಮಕಿ ಶ್ರೀಮತಿ ಸುಮಾ ಪ್ರಸಾದ್ ಮತ್ತು ತಂಡದವರಿಂದ ‘ಹನುಮದ್ವಿಲಾಸ’, ದಿನಾಂಕ 14-04-2024ರಂದು ವಿದುಷಿ ಸಂಪದಾ ಗುರುಪ್ರಸಾದ್ ಇವರಿಂದ ‘ಭರತನಾಟ್ಯ’, ದಿನಾಂಕ 15-04-2024ರಂದು ಶ್ರೀ ಶಾರದಾ ಭಜನಾ ಮಂಡಲಿ ಹಾಗೂ ಶ್ರೀಮತಿ ಇಂದು ಸುಂದರೇಶ್ ಮತ್ತು ತಂಡದವರಿಂದ ‘ಶ್ರೀರಾಮ ಭಜನೆ’, ದಿನಾಂಕ 16-04-2024ರಂದು ವಿದುಷಿ ರೇಖಾ ಪ್ರಸಾದ್ ಮತ್ತು ಶ್ರೀಮತಿ ಜ್ಯೋತಿ ಮಹೇಶ್…
ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಮತ್ತು ‘ಯಕ್ಷಗಾನ ಕಲಾ ಪ್ರಶಸ್ತಿ’ ಪ್ರದಾನ
ಮುಂಬಯಿ : ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಸಾಹಿತಿ ದಿ. ಎಮ್.ಬಿ. ಕುಕ್ಯಾನ್ ಪ್ರಾಯೋಜಿತ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ – 2023’ ಹಾಗೂ ದಿ. ಅಚ್ಚು ಸಿ. ಸುವರ್ಣರ ಸ್ಮರಣೆಯಲ್ಲಿ ಸಮಾಜ ಸೇವಾ ಧುರೀಣ ದಿ. ಜಯ ಸಿ. ಸುವರ್ಣ ಪ್ರಾಯೋಜಿತ ‘ಯಕ್ಷಗಾನ ಕಲಾ ಪ್ರಶಸ್ತಿ – 2023’ ಪ್ರದಾನ ಸಮಾರಂಭವು ದಿನಾಂಕ 29-03-2024ರ ಶುಕ್ರವಾರದಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಲೇಖಕಿ, ಸಾಹಿತಿ, ಮಿತ್ರಾ ವೆಂಕಟ್ರಾಜ್ ಮಾತನಾಡಿ “ಬಿಲ್ಲವರ ಎಸೋಸಿಯೇಶನ್ ಅನೇಕ ಉತ್ತಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ನಾಗರಿಕತೆಯ ಮೂಲ ಲಕ್ಷಣವೇ ಕಲೆ, ಸಾಹಿತ್ಯ ಮೊದಲಾದ ಸೃಜನಶೀಲ ಅಭಿವ್ಯಕ್ತಿಗಳು. ಇವು ಒಂದು ಸಮುದಾಯದ ಔನ್ನತ್ಯವನ್ನು ತೋರಿಸುತ್ತದೆ. ಬಿಲ್ಲವರ ಎಸೋಸಿಯೇಶನ್ ಈ ನಿಟ್ಟಿನಲ್ಲಿ ಮಾಡುತ್ತಿರುವ ಇಂತಹ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ. ಎಸೋಸಿಯೇಶನ್ನ ಕಲಾ ಪ್ರೇಮ ತುಂಬಾ ಮೆಚ್ಚುವಂತದ್ದು. ನಾರಾಯಣ ಗುರುಗಳ ವಿದ್ಯಾ ಕ್ರಾಂತಿ…
ಪುತ್ತೂರು : ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯದ ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ‘ಕರ್ನಾಟಕ ಸೇವಾರತ್ನ ಪ್ರಶಸ್ತಿ-2024’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 07-04-2024ರಂದು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ವಹಿಸಲಿದ್ದು, ಪುತ್ತೂರಿನ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ. ವಿಜಯ ಹಾರ್ವಿನ್ ಮತ್ತು ಬಂಟ್ವಾಳದ ಸೂರ್ಯ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಘುನಾಥ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೇಖಕಿ ಶ್ರೀಮತಿ ಮಲ್ಲಿಕಾ ಜೆ.ಆರ್. ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ರಾಸಾ ಆರ್. ಈಶ್ವರ ಅಭಯ್ ಮತ್ತು ರಾಸಾ ಸಂಸ್ಥೆಯ ಟ್ರಸ್ಟಿಯಾದ…
ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ (ಮಾಹೆ), ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಮಾಹೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬಡಗುತಿಟ್ಟು ಯಕ್ಷಗಾನದ ಭಾಗವತಿಕೆ ವಿವಿಧ ಶೈಲಿ-ಮಟ್ಟುಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣವು ದಿನಾಂಕ 07-04-2024ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಹೆ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ನೆರವೇರಿಸಲಿದ್ದು, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿರುವರು. ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸಿ.ಎ. ಶಿವಾನಂದ ಪೈ ಮತ್ತು ಹಿರಿಯ ಭಾಗವತರು ಹಾಗೂ ಗುರುಗಳಾದ ಹೆರಂಜಾಲು ಗೋಪಾಲ ಗಾಣಿಗ ಉಪಸ್ಥಿತರಿವರು. ಬೆಳಿಗ್ಗೆ 10-00 ಗಂಟೆಗೆ ಪ್ರಾತ್ಯಕ್ಷಿಕೆ ನಡೆಯಲಿದ್ದು, ಶ್ರೀ ಹೆರಂಜಾಲು ಗೋಪಾಲ ಗಾಣಿಗ, ವಿಷ್ಣು ಸುಬ್ರಾಯ ಹೆಗಡೆ, ಹಿರೇಮಕ್ಕಿ, ಹಿರಿಯಣ್ಣ ಆಚಾರ್ಯ ಕಿಗ್ಗ, ಉದಯಕುಮಾರ್ ಹೊಸಾಳ, ನಾಗೇಶ ಕುಲಾಲ್ ನಾಗರಕೊಡಿಗೆ, ಮರವಂತೆ ಕೃಷ್ಣದಾಸ್, ಮಹೇಶ ಕುಮಾರ್ ಮಂದಾರ್ತಿ, ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು…
ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ 20 ಗಾಯಕರು ಮತ್ತು ಮೂರು ತಂಡಗಳು 2023-24ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕನಕ ಕೀರ್ತನ ಗಂಗೋತ್ರಿಯಲ್ಲಿ ತೋನ್ಸೆ ಪುಷ್ಕಳ ಕುಮಾರ್, ರತ್ನಾವತಿ ಜೆ. ಬೈಕಾಡಿ, ಸುಮನ ಪ್ರಸಾದ್ ಮೂಡಬಿದ್ರೆ, ಪನ್ನಗ ಭಟ್ ಶಿರಸಿ, ಶ್ರೀದೇವಿ ಕಲ್ಲಡ್ಕ ಮತ್ತು ಕಾರ್ತಿಕ್ ಮಂಗಳೂರು ಮೌಲ್ಯಮಾಪಕರಾಗಿ ಭಾಗವಹಿಸಿದ್ದರು. ಕನಕ ಪುರಸ್ಕಾರವು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು 2000 ನಗದು ಬಹುಮಾನವನ್ನು ಹೊಂದಿದೆ. ಪ್ರೌಢ ಶಾಲಾ ವಿಭಾಗ : ಪೂರ್ವಿ ಬಿ.ಎಸ್. ಇವರು ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಅತ್ತಾವರದ ಶ್ರೀ ಬಿ. ಶೇಷಪ್ಪ ಬಂಬಿಲ ಮತ್ತು ಶ್ರೀಮತಿ ನಾಗರತ್ನ ಕೆ. ಯಸ್ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಸ್ತುತ ಇವರು ಕರ್ನಾಟಕ ಶಾಸ್ತ್ರಿಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು ಇವರ ಗಾನಂ ವೇಶಂ,…