Author: roovari

ಎಲ್ಲ ಪ್ರಯೋಗಗಳನ್ನು ತನ್ನ ಒಡಲೊಳಗೆ ತುಂಬಿಕೊಳ್ಳಬಲ್ಲ ಸಾಮರ್ಥ್ಯ ಯಕ್ಷಗಾನವೆಂಬ ರಂಗಭೂಮಿಗೆ ಇದೆ ಎಂಬುದು ಡಾ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯ ಕಾಲದಿಂದ ನಾವು ಕಾಣುತ್ತಾ ಬಂದಿದ್ದೇವೆ. ಅದರ ಗಾನಾಂಶ, ನಾಟ್ಯಾಂಶ, ನೃತ್ಯಾತ್ಮಕ ರಂಗಚಲನೆ, ಆಹಾರ್ಯ, ಅರ್ಥಗಾರಿಕೆ ಇತ್ಯಾದಿ ಕಲಾಘಟಕಗಳನ್ನು ವಿಸ್ತರಿಸಿ ಅಥವಾ ಪ್ರತ್ಯೇಕಿಸಿ, ಒಮ್ಮೊಮ್ಮೆ ವೈಭವೀಕರಿಸಿ ಯಕ್ಷಗಾನದ ರೂಪಾಂತರಗಳನ್ನು ವಿವಿಧ ಸೃಜನಶೀಲ ನಿರ್ದೇಶಕರು ಹೊಸ ಪ್ರಯೋಗದ ಹೆಸರಿನಲ್ಲಿ ಮಾಡುತ್ತಾ ಬಂದಿದ್ದಾರೆ. ಆ ಮೂಲಕ ಈ ರಂಗಭೂಮಿಯನ್ನು ಪ್ರಸ್ತುತಗೊಳಿಸುತ್ತಾ ಜೀವಂತವಾಗಿರಿಸಿದ್ದಾರೆ. ನಮ್ಮ ದೇಶದ ಇತರ ಪಾರಂಪರಿಕ ಕಲೆಗಳ ಸ್ಥಿತಿಗತಿಗೆ ಹೋಲಿಸಿದರೆ ಯಕ್ಷಗಾನ ವಿವಿಧ ಮುಖಗಳಲ್ಲಿ ಬೆಳೆಯುತ್ತಿದೆ(ಇಂಥ ಪ್ರಯೋಗಗಳು/ಬದಲಾವಣೆಗಳು ಯಕ್ಷಗಾನದ ಮೂಲಸ್ವರೂಪಕ್ಕೆ ಕಳಂಕ ತರುತ್ತಿವೆ ಎಂಬ ಸಂಪ್ರದಾಯವಾದಿಗಳ ಅಭಿಪ್ರಾಯ ಒಂದೆಡೆ ಇದೆ. ಅದು ಪತ್ಯೇಕ ವಿವೇಚನೆಗೆ ಬಿಟ್ಟ ವಿಷಯ). ಇತ್ತೀಚೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿ ಮಹಾಭಾರತದ ಭೀಷ್ಮ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡು ಯಕ್ಷಗಾನದ ಪ್ರಸಂಗ ಪಠ್ಯವನ್ನು ಪ್ರಧಾನವಾಗಿಸಿ, ’ನಿರುತ್ತರಾಯಣ’ ಎಂಬ ಯಕ್ಷರೂಪಕವನ್ನು ಪ್ರದರ್ಶಿಸಿದರು. ಕಳೆದ ಹಲವಾರು ವರ್ಷಗಳಲ್ಲಿ ಅನೇಕ…

Read More

16-03-2023,ಉಡುಪಿ: ಮಂದಾರ (ರಿ) ಪ್ರಸ್ತುತ ಪಡಿಸುವ “ರಂಗೋತ್ಸವ” ಸಾಂಸ್ಕೃತಿಕ ಉತ್ಸವವು ಇದೇ ಬರುವ ದಿನಾಂಕ 01-04-2023ರಿಂದ 04-04-2023 ಪ್ರತಿದಿನ ಸಂಜೆ 7 ಗಂಟೆಗೆ ಬ್ರಹ್ಮಾವರ, ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು, ಮಕ್ಕಳ ಮಂಟಪದಲ್ಲಿ ಜರಗಲಿದೆ. ಟೀಂ ಮಂದಾರ: ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ರೂಪದ, ತನ್ನ ವ್ಯಾಪ್ತಿಯೊಳಗಿನ ಕೊಡುಗೆಗಳನ್ನು ಸಮಾಜಕ್ಕೆ ನೀಡುವ ಸದುದ್ದೇಶದೊಂದಿಗೆ “ಮಂದಾರ” ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಒಂದಿಷ್ಟು ಸಹೃದಯರ ಒಗ್ಗೂಡುವಿಕೆಯೊಂದಿಗೆ ರೂಪುಗೊಂಡಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ಒಂದು ಸುಂದರ ಸಾಂಸ್ಕೃತಿಕ ವಾತಾವರಣ ಕಲ್ಪಿಸುವ ಹಾಗೂ ಆ ಮೂಲಕ ಅವರ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಆಗುವ ಯೋಚನೆಯೊಂದಿಗೆ ಉತ್ತಮ ಕಾರ್ಯಕ್ರಮಗಳ ಆಯೋಜನೆಯ ಕನಸು ಹೊತ್ತು ಸಾಗುತ್ತಿದ್ದೇವೆ. ಪ್ರತಿ ವರ್ಷ ನಮ್ಮ ಮಿತಿಯಲ್ಲಿ ಸಾಧ್ಯವಾಗುವ ಹಲವಾರು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ನಡೆಸುತ್ತಾ ಬಂದಿದ್ದೇವೆ. ನಾಟಕ ತಯಾರಿ, ಮಕ್ಕಳಿಗಾಗಿ ರಂಗ ತರಗತಿಗಳು, ಸಂಗೀತ ಕಾರ್ಯಕ್ರಮ, ಜಾನಪದ ನೃತ್ಯ ತರಬೇತಿ ಕಾರ್ಯಗಾರ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವಾರೂಪದ ಕೆಲಸಗಳಲ್ಲೂ…

Read More

17 ಮಾರ್ಚ್ 2023, ಮಂಗಳೂರು: ನಗರದ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಂಯೋಜಿಸಿದ ಮಂಗಳವಾದ್ಯ ಗೋಷ್ಠಿಯ ಸ್ಯಾಕ್ಸೋಫೋನ್ ಸಮ್ಮೇಳನವನ್ನು ಬೋಳಾರ ಮಾರಿಗುಡಿ ದೇವಾಲಯದ ಅಧ್ಯಕ್ಷ ಬಿ. ಅಶೋಕ್ ಕುಮಾರ್, ಮುಖ್ಯಪ್ರಾಣ ದೇವಾಲಯದ ಅಧ್ಯಕ್ಷ ವಸಂತ್‌ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಸುಧಾಕ‌ರ್ ರಾವ್ ಪೇಜಾವರ ಹಿರಿಯ ಕಲಾವಿದರ ಸಂಸ್ಮರಣೆ ಮಾಡಿದರು. ವೆಂಕಟಪ್ಪ ಡೋಗ್ರ, ಡಾ. ಕದ್ರಿ ಗೋಪಾಲನಾಥ, ಡಾ. ಮಚ್ಚೇಂದ್ರನಾಥ ಮಂಗಳಾದೇವಿ ಅವರ ಸಂಸ್ಮರಣೆ ಮಾಡಲಾಯಿತು. ಶ್ರೀ ಕ್ಷೇತ್ರದ ಮೊಕ್ತೇಸರರಾದ ರಾಮನಾಯ್ಕ ಕೋಟೆಕಾರ್, ಪ್ರೇಮಲತಾ ಎಸ್. ಕುಮಾರ್, ಆನುವಂಶಿಕ ಮೊಕ್ತೇಸರ ರಘುರಾಮ ಉಪಾಧ್ಯಾಯ, ಪ್ರಮುಖರಾದ ರಮೇಶ್‌ನಾಥ ಕದ್ರಿ, ಎನ್.ಆರ್. ರವಿ, ರಾಜೇಶ್ ಕದ್ರಿ, ಸೀತಾರಾಮ ಗುರುಪುರ, ಜಯರಾಮ, ವಿನಯ, ವಿದ್ಯಾ, ಪ್ರತಾಪ, ಅಶೋಕ, ಷಣ್ಮುಗ, ಚಂದ್ರಶೇಖರ್ ಜೋಗಿ, ಅಮೃತವರ್ಷಿಣಿ, ನಾಗೇಶ್, ಸತೀಶ್‌ ಮೈಸೂರು, ಸುರುಳಿ ಸತೀಶ್ ಆಚಾರ್ಯ, ಜಯರಾಮ ಸೇರಿಗಾರ್, ನವಮಿ, ವೈಷ್ಣವಿ…

Read More

17 ಮಾರ್ಚ್ 2023, ಮಂಗಳೂರು: ನಾರಾಯಣ ಗುರುಗಳಿಂದ ಶೂದ್ರ ಶಿವನ ಅನಾವರಣ –ಶ್ರೀ ಜಯಾನಂದ ಚೇಳಾಯರು “19ನೇ ಶತಮಾನದ ವಿಶ್ವ ಸಂತ ನಾರಾಯಣ ಗುರುಗಳು ದೇವರಿಂದ ವಂಚಿತರಾದವರಿಗೆ ದೇವರನ್ನು ನೀಡಿದ, ಪೂಜಿಸುವ ಅಧಿಕಾರ ಕೊಟ್ಟ ಸಂತ ಸತ್ವ. ಅವರಿಂದ ಶೂದ್ರ ಶಿವನ ಅನಾವರಣ ಆದುದು 19ನೇ ಶತಮಾನದ ದೊಡ್ಡ ಧಾರ್ಮಿಕ ಕ್ರಾಂತಿ” ಎಂದು ಯುವ ಚಿಂತಕ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಶ್ರೀ ಜಯಾನಂದ ಚೇಳಾಯರು ಹೇಳಿದರು. ಅವರು ಚೇಳಾಯರು ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠ ಸಂಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪುಷ್ಪರಾಜ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “ವಿಶ್ವವಿದ್ಯಾನಿಲಯದ ಅಧ್ಯಯನ ಪೀಠ ನಾರಾಯಣ ಗುರುಗಳ ತತ್ವದ ಮೂಲಕ ಗ್ರಾಮೀಣ ಯುವ ಜನಾಂಗವನ್ನು ಸಾಮರಸ್ಯದ ಬದುಕಿಗೆ ಕೊಂಡು ಹೋಗುವ ಮಾರ್ಗದರ್ಶನವನ್ನು ನೀಡುತ್ತಿರುವುದು ಸಂತೋಷ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೆರೇಸಾ ವೇಗಸ್…

Read More

17 ಮಾರ್ಚ್ 2023, ಶಿವಮೊಗ್ಗ: “ನನ್ನ ಕೈಯಲ್ಲಿ ಶಾಲೆ-ದೇವಸ್ಥಾನಗಳನ್ನು ಕಟ್ಟಲು ಆಗಲಿಲ್ಲ. ಗಾಯಕಿಯಾಗಿದ್ದರಿಂದ 35 ಸಾವಿರ ಜನರಿಗೆ ಗಾಯನ ಕಲಿಸಿದೆ.” ಎಂದು ಹಿರಿಯ ಗಾಯಕಿ ಡಾ.ಬಿ.ಕೆ.ಸುಮಿತ್ರಾ ಹೇಳಿದರು. ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನವು 11-03-2023 ಶನಿವಾರ ಹಮ್ಮಿಕೊಂಡ ಡಾ.ಜಿ.ಎಸ್.ಎಸ್. ಜನ್ಮದಿನ ಕಾವ್ಯ ಸೌರಭ ಮತ್ತು ಜಿ.ಎಸ್.ಎಸ್. ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಪುರಸ್ಕಾರ ಸ್ವೀಕರಿಸಿದರು. ಜಾನಪದೀಯ ಸಂಗೀತಕ್ಕೆ ಹೊಸ ಕಾಯಕಲ್ಪ ನೀಡಿದವರು ಬಿ.ಕೆ.ಸುಮಿತ್ರಾ. ಸಂಗೀತ ರಸಿಕರ ಎದೆಯಲ್ಲಿ ಅಳಿಸದೆ ಅಜರಾಮರವಾಗಿ ಉಳಿದ ಹಲವಾರು ಗೀತೆಗಳು ಇವರ ಕಂಠ ಸಿರಿಯಿಂದ ಬಂದವು ಮತ್ತು ಕನ್ನಡ ಕವಿಗಳ ಅಸಂಖ್ಯಾತ ಭಾವಗೀತೆಗಳಿಗೂ ದನಿಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ “ಗೌರವ ಡಾಕ್ಟರೇಟ್ ಪ್ರಶಸ್ತಿ”, “ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ” ಹಾಗೂ ಪ್ರತಿಷ್ಟಿತ ಹಂಪಿ ವಿಶ್ವವಿದ್ಯಾಲಯದ “ನಾಡೋಜ ಪ್ರಶಸ್ತಿ”ಗೆ ಇವರು ಭಾಜನರಾಗಿದ್ದಾರೆ. “ಜಿ.ಎಸ್.ಎಸ್.ಅವರೊಂದಿಗೆ ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಜೊತೆಜೊತೆಯಾಗಿ ಭಾಗವಹಿಸಿದ್ದೇನೆ. ಕೇವಲ ಪುರಸ್ಕಾರಕ್ಕೆ ಬರಲಾರೆ. ನಮ್ಮೂರಿನ ಮಹಿಳೆಯರಿಗೆ ಒಂದಿಷ್ಟು ಗಾಯನಗಳನ್ನು ಹೇಳಿಕೊಡುತ್ತೇನೆಂಬ ಷರತ್ತಿನನೊಂದಿಗೆ ಬಂದೆ. ಮಹಿಳೆಯರು ಉತ್ತಮ…

Read More

16 ಮಾರ್ಚ್ 2023 ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿ ಪ್ರಶಸ್ತಿ ವಿಜೇತ ಕಾಸರಗೋಡಿನ ಸಾಹಿತಿಗಳ ಕೃತಿಗಳ ಅವಲೋಕನ, ಅಭಿನಂದನೆ ಮತ್ತು ಸಂವಾದ ಕಾರ್ಯಕ್ರಮವು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ 19-03-2023 ರವಿವಾರ ಬೆಳಗ್ಗೆ ಗಂಟೆ 10ರಿಂದ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಸಂಪನ್ನಗೊಳ್ಳಲಿದೆ. ಸಾಹಿತಿ ಶ್ರೀ ರಾಧಾಕೃಷ್ಣ ಕೆ.ಉಳಿಯತಡ್ಕ ಇವರ ಘನ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸತ್ಯವತಿ ಕೊಳಚಪ್ಪು ಅವರ “ನವಿಲಗರಿ” ಮಕ್ಕಳ ಸಾಹಿತ್ಯ ಕೃತಿಯನ್ನು ಶ್ರೀ ಎ.ಬಿ.ದಿವಾಕರ ಬಲ್ಲಾಳ್ ಅವಲೋಕನ ಮಾಡಲಿದ್ದಾರೆ. ಅದೇ ರೀತಿ ಶ್ರೀಮತಿ ಸ್ನೇಹಲತಾ ದಿವಾಕರ್ ಇವರ “ಆಮೆ” ಕಥಾ ಸಂಕಲನವನ್ನು ಶ್ರೀ ಕಾರ್ತಿಕ್ ಪೆಡ್ರೆ, ಶ್ರೀ ವಿಕ್ರಂ ಕಾಂತಿಕೆರೆಯವರ “ಕಾವೇರಿ ತೀರದ ಪಯಣ” ಅನುವಾದ ಕೃತಿಯನ್ನು ಡಾ. ರತ್ನಾಕರ ಮಲ್ಲಮೂಲೆ, ಶ್ರೀಮತಿ ರಾಜಶ್ರೀ ಟಿ. ರೈಯವರ “ತುಳುನಾಡಿನ ಮೂರಿಗಳ ಆರಾಧನೆ” ಅಧ್ಯಯನ ಕೃತಿಯನ್ನು ಶ್ರೀಮತಿ ಕವಿತಾ ಕೂಡ್ಲು, ಡಾ. ಮುರಲಿ ಮೋಹನ್ ಚೂಂತಾರು ಇವರ “ಸಂಗಾತಿ” ವೈದ್ಯ ಸಾಹಿತ್ಯ ಕೃತಿಯನ್ನು…

Read More

17 ಮಾರ್ಚ್ 2023, ಬೆಂಗಳೂರು: ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ವಿಷಯಾಧಾರಿತ ಕವನ ಸಂಕಲನಕ್ಕೆ ಗುಣಾತ್ಮಕ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕವನಗಳ ಸಂಕಲನ ಬೆಂಗಳೂರಿನಲ್ಲಿ ಜೂನ್ 2023ರಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಕವನಗಳನ್ನು ಕಳುಹಿಸಲು ಮಾರ್ಚ್ 31 ಕೊನೆಯ ದಿನಾಂಕ. ವಿಷಯ:  1) ನಡಿಗೆ 2) ಓಟ 3) ವ್ಯಾಯಾಮ 4) ಬೈಸಿಕಲ್ 5) ಸಾಮಾನ್ಯ ಆರೋಗ್ಯ ಕಾಳಜಿ 6) ಆರೋಗ್ಯದ ಮಹತ್ವ 7) ಧೂಮಪಾನ ಹಾಗೂ ದುಷ್ಪರಿಣಾಮಗಳು 8) ಮದ್ಯಪಾನ ಹಾಗೂ ದುಷ್ಪರಿಣಾಮಗಳು ಕವಿಯ ಕಲ್ಪನೆಗೆ ತಕ್ಕಂತೆ ಕವಿತೆಯ ರೂಪ ಕೊಟ್ಟು ತಪ್ಪಿಲ್ಲದಂತೆ ಟೈಪ್ ಮಾಡಿ, ಶೀರ್ಷಿಕೆಯ ಸಮೇತ, 20ರಿಂದ 24 ಸಾಲುಗಳಲ್ಲಿ ಬರೆದು, ಕೆಳಕಂಡ ಯಾವುದಾದರೂ ಒಂದು ವಾಟ್ಸಪ್ ಸಂಖ್ಯೆಗೆ ತಾ:31-3-2023ರೊಳಗೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ. 1) ಡಾ:ಸುರೇಶ ನೆಗಳಗುಳಿ 9448216674 2) ಡಾ:ವಾಣಿಶ್ರೀ ಕಾಸರಗೋಡು 9446282641 3) ಡಾ: ಪ್ರೀತಿ ಅಶೋಕ 9901433229 4) ಕೆ.ವಿ.ಲಕ್ಷ್ಮಣಮೂರ್ತಿ 8762323985. 5) ಬ್ಶಾಡನೂರು ಶಾಂತ ವೀರಪ್ಪ 8310490815 ಈಗಾಗಲೇ ಕವನವನ್ನು ಕಳುಹಿಸಿದವರು ಮತ್ತೆ ಕಳುಹಿಸುವುದು ಬೇಕಾಗಿಲ್ಲ.

Read More

17 ಮಾರ್ಚ್ 2023, ಮಂಗಳೂರು: ವಿಶ್ವಬ್ರಾಹ್ಮಣ ಸಮಾಜದ ಮಂದಿಯಲ್ಲಿ ಕಲಾವಿದರಿಗೇನೂ ಕೊರತೆಯಿಲ್ಲ. ಕಲೆಯೆಂಬುದು ಅವರಿಗೆ ರಕ್ತಗತವಾಗಿ ಬಂದಿರುವ ಬಳುವಳಿ. ಪಂಚ ಶಿಲ್ಪಕಲೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು ಅನೇಕರಿದ್ದಾರೆ, ಹಾಗಂತ ಸಂಗೀತ ಕಲಾ ಕ್ಷೇತ್ರದಲ್ಲೂ ಹೆಸರು ಗಳಿಸಿದವರು ಇಲ್ಲವೆಂದಲ್ಲ, ಆದರೆ ಅನೇಕ ಕಲಾವಿದರು ಪ್ರತಿಭಾವಂತರಾಗಿದ್ದರೂ ಕೂಡ ಸೂಕ್ತವಾದ ಅವಕಾಶಗಳಿಂದ ವಂಚಿತರಾಗಿ, ಕಲಾಭಿಮಾನಿಗಳ ಪ್ರೋತ್ಸಾಹವೂ ಲಭಿಸದೆ ಎಲೆ ಮರೆಯ ಕಾಯಿಯಂತೆಯೇ ಉಳಿದಿರುವರು. ಇಂತಹ ಅನೇಕರ ಸಾಲಿನಲ್ಲಿ ಕಂಡುಬರುವ ಹೆಸರೇ ಕೆ.ರವಿಶಂಕರ್..! ಹಿಂದುಸ್ತಾನಿ ಸಂಗೀತ ಕಲಿತಿರುವ ಈತ ಹಾರ್ಮೋನಿಯಂ, ಮೃದಂಗ, ತಬ್ಲಾ, ನುಡಿಸುವ ಪರಿಣತರು ಮಾತ್ರವಲ್ಲ, ಹಾಡುಗಳಿಗೆ ರಾಗ ಸಂಯೋಜನೆ ಮಾಡಬಲ್ಲ ಪ್ರತಿಭಾನ್ವಿತ, ಅಂತೆಯೇ ದೇವರ ನಾಮ, ದಾಸರ ಪದಗಳು, ಭಾವ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲ ನಿಪುಣ. ಎಳವೆಯಲ್ಲೇ ಸಂಗೀತಾಸಕ್ತಿ ಹೊಂದಿದ್ದ ಕಾರಣ ಸಂಗೀತ ಕ್ಷೇತ್ರದ ಹಿರಿಯ ಸಾಧಕ ದಿ.ಎನ್.ಕೆ.ಸುಂದರ ಆಚಾರ್ಯರಲ್ಲಿ ಮೃದಂಗ ಹಾಗೂ ತಬ್ಲಾ ವಾದನವನ್ನು ಕಲಿತರು. ಅದೇ ರೀತಿ ಭಾರತೀಯ ವಿದ್ಯಾಭವನದ ಹಿಂದುಸ್ತಾನಿ ಸಂಗೀತ ಗುರು ಕೆ.ಎಮ್.ದಾಸ್ ಅವರಿಂದ ಹಿಂದುಸ್ತಾನಿ…

Read More

ಇಳೆಯಿಂದ ಮೊಳಕೆ ಒಗೆವಂದು ತಮಟೆಗಳಿಲ್ಲ ಫಲ ಮಾಗುವಂದು ತುತ್ತೂರಿ ದನಿಯಿಲ್ಲ ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ಕನ್ನಡ ನಾಡು ಋಷಿಗಳ ಬೀಡು. ಕನ್ನಡ ನಾಡಿನಲ್ಲಿ ಆನೇಕ ಸತ್ಪುರುಷರು ಹುಟ್ಟಿ ತ್ಯಾಗಜೀವನ ನಡೆಸಿ ಇತರರಿಗೆ ಆದರ್ಶರಾಗಿರುವವರಲ್ಲಿ ಡಾ. ದೇವನಹಳ್ಳಿ ವಂಕಟರಮಣಯ್ಯ ಗುಂಡಪ್ಪನವರು ಒಬ್ಬರು. 17-03-1887ರಂದು ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟರಮಣಯ್ಯ ತಾಯಿ ಅಲಮೇಲಮ್ಮ. ಪ್ರೌಢ ಶಾಲೆಯಲ್ಲಿ ಓದುವಾಗಲೇ ಡಿ.ವಿ.ಜಿ.ಯವರಿಗೆ ಮದುವೆಯಾಯಿತು. ಹೆಂಡತಿಯ ಹೆಸರು ಭಾಗೀರಥಮ್ಮ. ಅವರ ಪ್ರಸಿದ್ದ ಕೃತಿಯಾದ “ಮಂಕುತಿಮ್ಮನ ಕಗ್ಗ”ದಲ್ಲಿ ‘ತಿಮ್ಮ’ ಎಂಬ ಹೃದಯ ಸ್ಪರ್ಶಿ ಹೆಸರು ಅವರ ಪ್ರೀತಿಯ ಸೋದರ ಮಾವ ತಿಮ್ಮಪ್ಪನವರದೇ. ಡಿ.ವಿ.ಜಿ.ಯವರ ಅನನ್ಯ ಸಾಧನೆಗಳ ನಡುವೆ ಶ್ರೇಷ್ಟವೆನಿಸಿರುವುದು ತತ್ವಾಧಾರಿತವಾದ ಅವರ ಕಾವ್ಯಗಳಾದ “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಎನ್ನುವುದು ಸರ್ವವಿದಿತ. ಪತ್ರಿಕೋದ್ಯಮವೇ ಸರ್ವಸ್ವವೆಂದು ತಿಳಿದಿದ್ದ ಡಿ.ವಿ.ಜಿ. ಸಾಹಿತ್ಯಲೋಕಕ್ಕೆ ಪ್ರವೇಶಿಸಿದ್ದು ಮಾತ್ರ ಅನಿರೀಕ್ಷಿತವೇ ಆದರೂ ಅವರೊಬ್ಬ ದಾರ್ಶನಿಕ ಬರಹಗಾರರು. ಚಿಕ್ಕಂದಿನಿಂದಲೂ ಕನ್ನಡ, ಸಂಸ್ಕೃತ, ಇಂಗ್ಲೀಷ್…

Read More

16.03.2023, Mangaluru: Shyamala Sangeetha Sabha will organize its 5th ‘Griha Sangeetha’ concert at Gokul Residency, Kadri on March 18. A unique concert of songs related to Yakshagana will be presented by renowned Yakshagana Bhagvatha Sri Puttige Raghurama Holla on the occasion. He will be accompanied by Sri Krishnaprakash Ulithaya on the ‘Maddale’. The Shyama Sangeetha Sabha will be presenting the Yakshagana songs for the first time on experimental basis. Vidwan Vittala Ramamurty’s violin concert which won the hearts of music rasikas of Mangaluru. His soulful rendition on the violin accompanied by Vishwas Krishna on the violin and Vidwan K. H.…

Read More