Author: roovari

ಉಡುಪಿ, ಕಟಪಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯಲ್ಲಿ ದಿನಾಂಕ 08 ಸೆಪ್ಟೆಂಬರ್ 2024ರಂದು ಎಂ.ಕೆ. ಬಾಲರಾಜ್ ಸಾರಥ್ಯದ ಎಂಕಲ್ನ ಕಲಾವಿದೆರ್ ಮಟ್ಟು ಕಟಪಾಡಿ ತಂಡದವರಿಂದ ‘ಮಾಯೊದ ಮಹಾಶಕ್ತಿಲು’ ಎಂಬ ಅದ್ದೂರಿಯ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತ್ತು. ದಾರಿಕಾಸುರನು ಬ್ರಹ್ಮ ದೇವರನ್ನು ಕುರಿತು ದೀರ್ಘಕಾಲ ತಪಸ್ಸನ್ನಾಚರಿಸಿ ವರವನ್ನು ಪಡೆಯುವ ಸುಂದರ ದೃಶ್ಯದೊಂದಿಗೆ ಆರಂಭವಾಗುವ ಈ ನಾಟಕವು, ಅರೆಕ್ಷಣವೂ ಪ್ರೇಕ್ಷಕ ಕಣ್ಣ ರೆಪ್ಪೆಯನ್ನು ಮುಚ್ಚದೆ ನೋಡುವಂತೆ ಮಾಡುವ ಕುತೂಹಲ ಭರಿತವಾದ ಕಥಾ ಹಂದರವನ್ನೊಳಗೊಂಡಿರುವ ನಾಟಕ ಇದಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಬರವುದ ತುಡರ್’ ನವೀನ್ ಪಡ್ರೆ ಇವರು ಈ ನಾಟಕವನ್ನು ರಚಿಸಿದ್ದು, ಅಪ್ಪಟ ತುಳುವಿನ ಅದ್ಭುತವಾದ ಶಬ್ದ ಭಂಡಾರಗಳನ್ನೊಳಗೊಂಡ ಇವರ ಸಂಭಾಷಣೆ ಕಲಾಭಿಮಾನಿಗಳ ಮನ ಮುಟ್ಟುವಂತಿದೆ. ದಿವಾಕರ್ ಕಟೀಲು ಹಾಗೂ ನಾಗರಾಜ್ ವರ್ಕಾಡಿ ಇವರ ಜಂಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕ ಯಶಸ್ಸನ್ನು ಕಂಡಿದೆ. ಶರತ್ ಉಚ್ಚಿಲ ಇವರ ಸಂಗೀತ ನಿರ್ದೇಶನದ, ರವೀಂದ್ರ ಪ್ರಭು ಹಾಡಿರುವ ನವೀನ್ ಪಡ್ರೆ ಇವರ ಸಾಹಿತ್ಯದ ‘ಮಾಯೊದ…

Read More

ಹಾಸನ : ಹಾಸನದ ಮಾಣಿಕ್ಯ ಪ್ರಕಾಶನವು ಕಳೆದ ಒಂಭತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳ ಕೃತಿಗಳಿಗೆ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. 2024ರ ದತ್ತಿ ಪ್ರಶಸ್ತಿಗೆ 2023ರಲ್ಲಿ ಮೊದಲ ಮುದ್ರಣವಾದ ಸ್ವತಂತ್ರ ರಚನೆಯ ನಾಟಕ, ಕಾದಂಬರಿ, ಗಜಲ್ ಹಾಗೂ ಚುಟುಕು ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಲೇಖಕರು ನಿರೀಕ್ಷೆಗೂ ಮೀರಿ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಅವುಗಳಲ್ಲಿ ಸಾಹಿತಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ಡಾ. ಹಸೀನಾ ಎಚ್.ಕೆ., ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ಲತಾಮಣಿ ಎಂ.ಕೆ. ತುರುವೇಕೆರೆ ಇವರನ್ನೊಳಗೊಂಡ ಆಯ್ಕೆ ಸಮಿತಿಯು ನಾಟಕ ವಿಭಾಗದ “ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ”ಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾವಿತ್ರಿ ಮನೋಹರ್ ಇವರ “ನಮ್ಮ ಸಂಸಾರ ಆನ್ ಲೈನ್ ಅವಾಂತರ” ಕೃತಿ ಆಯ್ಕೆಯಾಗಿದ್ದು, ಪ್ರಶಸ್ತಿ ಜೊತೆಗೆ 2,500/- ನಗದು ಪುರಸ್ಕಾರ ಹೊಂದಿದೆ. ಕಾದಂಬರಿ ವಿಭಾಗದ ತುಮಕೂರಿನ ಮೋಹನ್ ಎಂ.ಕೆ. ತುರುವೇಕೆರೆ ಪ್ರಾಯೋಜಕತ್ವದ “ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ…

Read More

ರಾಮನಗರ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ‘ಮೇಘಮೈತ್ರಿ ಶಿಕ್ಷಕರ ಸಾಹಿತ್ಯ ಸಮ್ಮೇಳನ 2024’ವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ರಾಮನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಹಿಂಭಾಗ, ನ್ಯೂ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ, ಕನ್ನಡ ಧ್ವಜ ಮೆರವಣಿಗೆ, ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕನಕಪುರದ ಹಿರಿಯ ಸಾಹಿತಿಗಳು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಾ. ಕೂ.ಗಿ. ಗಿರಿಯಪ್ಪ ಇವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರೇಮಠ ಕಮತಗಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮ್ಮೇಳನದ ಉದ್ಘಾಟನೆಯನ್ನು ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡ ಇವರು ನೆರವೇರಿಸಲಿದ್ದಾರೆ. ಡಾ. ಕೂ.ಗಿ. ಗಿರಿಯಪ್ಪ ಇವರ ‘ರಾಣಿ ಕಿತ್ತೂರು ಚೆನ್ನಮ್ಮ’ ಎಂಬ ಕೃತಿಯನ್ನು ಭಾರತೀಯ ಸ್ತ್ರೀ ಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಭಾಗ್ಯ ಸರವನ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ಬನ್ನೂರು ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನ ಇದರ ಆಶ್ರಯದಲ್ಲಿ ದಿನಾಂಕ 25 ಸೆಪ್ಟೆಂಬರ್ 2024ರಂದು ‘ಜಾಂಬವತಿ ಕಲ್ಯಾಣ’ ಆಖ್ಯಾನ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್.ಭಟ್, ಆನಂದ ಸವಣೂರು, ನಿತೀಶ್ ಕುಮಾರ್ ಎಂಕಣ್ಣಮೂಲೆ, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಬಲರಾಮ (ಗುಂಡ್ಯಡ್ಕ ಈಶ್ವರ ಭಟ್), ಶ್ರೀಕೃಷ್ಣ (ಭಾಸ್ಕರ್ ಬಾರ್ಯ), ಜಾಂಬವ (ಗುಡ್ಡಪ್ಪ ಬಲ್ಯ), ನಾರದ (ಶುಭಾ ಜೆ.ಸಿ. ಅಡಿಗ) ಸಹಕರಿಸಿದರು. ಬಡೆಕ್ಕಿಲ ಚಂದ್ರಶೇಖರ್ ಭಟ್ ಪ್ರಾಯೋಜಿಸಿದ್ದರು. ವೇಣುಗೋಪಾಲ ಭಟ್ ಮಾಂಬಾಡಿ ಸಹಕರಿಸಿದರು.

Read More

ಉಡುಪಿ : ಬೆಂಗಳೂರಿನ ವಿಹಾ ಪ್ರಕಾಶನದಿಂದ ಪ್ರಕಟವಾಗಿದ್ದ ಕಾತ್ಯಾಯಿನಿ ಕುಂಜಿಬೆಟ್ಟು ಇವರ ‘ಏಕತಾರಿ ಸಂಚಾರಿ’ ಎಂಬ ಕವನ ಸಂಕಲನವನ್ನು ಹಿರಿಯ ವಿದ್ವಾಂಸರಾದ ಪ್ರೊ. ಎನ್. ತಿರುಮಲೇಶ್ವರ ಭಟ್ ಇವರು “Tunes of a Single String – Renaissance Poems of Modernist Tradition’ ಎಂಬ ಹೆಸರಲ್ಲಿ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಮಣಿಪಾಲ್ ಯುನಿವರ್ಸಲ್ ಪ್ರೆಸ್ ಬಹಳ ಸುಂದರವಾಗಿ ಪ್ರಕಟಿಸಿದ್ದು, ದಿನಾಂಕ 30 ಸೆಪ್ಟೆಂಬರ್ 2024 ಸೋಮವಾರ ಸಂಜೆ 4-00 ಗಂಟೆಗೆ ‘ವಿಶ್ವ ಅನುವಾದ ದಿನ’ದಂದು ಮಣಿಪಾಲ್ ಯುನಿವರ್ಸಲ್ ಪ್ರೆಸ್ ಇವರು ಉಡುಪಿ ಮಹಾತ್ಮಾ ಗಾಂಧಿ ಕಾಲೇಜಿನ ಸಹಯೋಗದೊಂದಿಗೆ, ಈ ಕೃತಿಯ ಅನಾವರಣ ಕಾರ್ಯಕ್ರಮವನ್ನು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿರುವ ಪ್ರಸಿದ್ಧ ಸಾಹಿತಿಗಳಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಕೃತಿ ಅನಾವರಣಗೊಳಿಸಲಿದ್ದಾರೆ. ಪ್ರತಿಷ್ಠಿತ ಮಾಹೆಯ ಉಪಕುಲಪತಿಗಳಾಗಿರುವ ಡಾ. ಶರತ್ ಕೆ. ರಾವ್ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದ್ದು, ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯರಾದ…

Read More

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ‘ರಾಜ್ಯಮಟ್ಟದ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಶಿಬಿರ’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ‘ಬಂಜಾರ ಸಮುದಾಯದ 20 ರಿಂದ 40 ವರ್ಷದಳೊಗಿನ ಆಸಕ್ತರು 10 ಅಕ್ಟೋಬರ್ 2024ರ ಒಳಗೆ ಅರ್ಜಿ ಸಲ್ಲಿಸಬಹುದು. ಬಂದ ಅರ್ಜಿಗಳಿಂದ ಈ ಶಿಬಿರಕ್ಕೆ 50 ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್‌ನಲ್ಲಿ ರಾಮನಗರ ಜಿಲ್ಲೆಯಲ್ಲಿ ಈ ಶಿಬಿರ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಎ. ಆರ್. ಗೋವಿಂದಸ್ವಾಮಿ ತಿಳಿಸಿದ್ದಾರೆ. ಅರ್ಜಿಗಳನ್ನು ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಜೆ. ಸಿ. ರಸ್ತೆ, ಬೆಂಗಳೂರು. ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ 080-29917745 ಈ ಸಂಖ್ಯೆಯನ್ನು ಸಂಪರ್ಕಿಸಿ.

Read More

ಮಂಗಳೂರು : ಯಕ್ಷರಂಗದ ಸವ್ಯಸಾಚಿ ಕಲಾವಿದರೆನಿಸಿದ್ದ ದಿ. ಬಾಬು ಕುಡ್ತಡ್ಕರ ಹೆಸರಿನಲ್ಲಿ ವರ್ಷಂಪ್ರತಿ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರವು ದಿ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಕಾರದಲ್ಲಿ ನೀಡಲಾಗುತ್ತಿರುವ 2024-25ರ ಸಾಲಿನ ‘ಬಾಬು ಕುಡ್ತಡ್ಕ ಪ್ರಶಸ್ತಿ’ಗಾಗಿ ತೆಂಕು ಬಡಗು ತಿಟ್ಟು ಎರಡು ಪ್ರಕಾರಗಳಲ್ಲೂ ಖ್ಯಾತನಾಮರೆನಿಸಿದ ಯಕ್ಷಗಾನದ ಸ್ತ್ರೀ ವೇಷಧಾರಿ, ಪ್ರಸಂಗ ಕರ್ತೃ ಎಂ.ಕೆ. ರಮೇಶ್ ಆಚಾರ್ಯ ಇವರನ್ನು ಸ್ವಸ್ತಿಕ್ ಆಯ್ಕೆ ಸಮಿತಿಯ ಮೂಲಕ ಪ್ರಶಸ್ತಿಗಾಗಿ ಆಯ್ಕೆಗೊಳಿಸಲಾಗಿದೆ. ಪರಿಚಯ : ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯರು. ಇವರು ಉಭಯ ತಿಟ್ಟುಗಳ ಸಮರ್ಥ ಸ್ತ್ರೀ ವೇಷ ದಾರಿ. ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿ, ವೃತ್ತಿ ಕಲಾವಿದರಾಗಿ ಐವತ್ತು ವರ್ಷಗಳ ಸಾರ್ಥಕ ಸೇವೆ ಗೈದು ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ, ಮೂವತ್ತೈದಕ್ಕೂ ಹೆಚ್ಚು ಕಾಲ್ಪನಿಕ ಪ್ರಸಂಗಗಳಿಗೆ ಪದ್ಯ ರಚನೆ, ಅನೇಕ ಪುರಾಣ ಪ್ರಸಂಗಗಳನ್ನು ಯಕ್ಷರಂಗಕ್ಕೆ ನೀಡಿರುವ ವೇಧಾವಿ. ಶೇಣಿ- ಸಾಮಗರಂತಹ ಯಕ್ಷ ದಿಗ್ಗಜರೊಂದಿಗೆ, ದ್ರೌಪದಿ, ಚಂದ್ರಮತಿ, ಶಾಂತಲೆ, ಮೇನಕ,…

Read More

ಮಂಗಳೂರು: ಮಂಗಳೂರಿನ ಜೆನೆಸಿಸ್ ಪ್ರಕಾಶನದ ವ್ಯವಸ್ಥಾಪಕ ಮಾರ್ಸೆಲ್ ಎಂ. ಡಿಸೋಜ (ಮಿಚ್ಚಾ ಮಿಲಾರ್) ಬರೆದಿರುವ 400 ಚುಟುಕುಗಳ ಸಂಕಲನ ‘ಚುಟುಕಾಂ’ ಇದರ ಲೋಕಾರ್ಪಣಾ ಸಮಾರಂಭವು 21 ಸೆಪ್ಟೆಂಬರ್ 2024ರ ಶನಿವಾರದಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಪುಸ್ತಕ ಲೋಕಾರ್ಪಣೆಗೊಳಿಸಿದ ಎಂ. ಸಿ. ಸಿ. ಬ್ಯಾಂಕ್‌ ಇದರ ಅಧ್ಯಕ್ಷರಾದ ಅನಿಲ್ ಲೋಬೋ ಮಾತನಾಡಿ “ಕೊಂಕಣಿ ಭಾಷಿಕರಿಗೆ ಅತ್ಯುತ್ತಮ ಸಂದೇಶ ನೀಡುವ ಕೃತಿ ಇದಾಗಿದೆ. ಕೊಂಕಣಿ ಭಾಷೆಯಲ್ಲಿ ಬರೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಮಾರ್ಸೆಲ್ ಅವರ ಈ ಕೃತಿಯು ಯುವಕರಿಗೆ ಮಾರ್ಗದರ್ಶನವಾಗಲಿದೆ.” ಎಂದರು. ಲೇಖಕರಾದ ಮಾರ್ಸೆಲ್ ಡಿ’ಸೋಜಾ ಮಾತನಾಡಿ “ಕೊಂಕಣಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 15 ಪುಸ್ತಕಗಳನ್ನು ಹಾಗೂ ಇಂಗ್ಲಿಷ್‌ನಲ್ಲಿ 2 ಪುಸ್ತಕಗಳನ್ನು ಈವರೆಗೆ ಪ್ರಕಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಮೂರು ಪುಸ್ತಕ ಬಿಡುಗಡೆಯಾಗಲಿದೆ. ‘ಚುಟುಕಾಂ’ ಕೃತಿಯಲ್ಲಿ 400 ಚುಟುಕುಗಳಿವೆ.” ಎಂದರು. ಅತಿಥಿಗಳಾಗಿ ಹಿರಿಯ ಕೊಂಕಣಿ ಸಾಹಿತಿ ಜೆ. ಎಫ್. ಡಿ’ಸೋಜಾ, ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ಮಹೇಶ್ ನಾಯಕ್, ಮಾರ್ಸೆಲ್ ಡಿ’ಸೋಜಾ ಇವರ ಪತ್ನಿ ಜಾನೆಟ್…

Read More

ಧಾರವಾಡ : ಧಾರವಾಡದ ರಾಘವೇಂದ್ರ ‘ಪಾಟೀಲ ಸಾಹಿತ್ಯ ವೇದಿಕೆಯು ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸುತಿದ್ದು, ಈ ಪ್ರಶಸ್ತಿಯು ರೂಪಾಯಿ 20 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಸ್ಪರ್ಧೆಗೆ ಲಿಂಗ, ವಯಸ್ಸು, ಜಾತಿ, ಧರ್ಮ, ಪ್ರದೇಶ ಇತ್ಯಾದಿ ಯಾವುದೇ ಕೃತಕ ಮಾನದಂಡಗಳು ಮತ್ತು ಯಾವುದೇ ಪ್ರವೇಶ ಶುಲ್ಕ ಇಲ್ಲ. ಕಥೆಗಳು ಈ ಮೊದಲು ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ (ಪ್ರಿಂಟ್ ಅಥವಾ ಡಿಜಿಟಲ್ ಮೀಡಿಯಾ)ದಲ್ಲಿ ಪ್ರಕಟವಾಗಿದ್ದರೂ ಪುಸ್ತಕರೂಪದಲ್ಲಿ ಪ್ರಕಟವಾಗಿರಬಾರದು. ಕನಿಷ್ಠ 5ರಿಂದ ಗರಿಷ್ಠ 20 ಅಪ್ರಕಟಿತ ಕಥೆಗಳನ್ನು ಕಳುಹಿಸಬಹುದು. ಎ-4 ಕಾಗದದಲ್ಲಿ 12 ಫಾಂಟ್ ಸೈಜಿನಲ್ಲಿ ತಪ್ಪಿಲ್ಲದಂತೆ ಟೈಪ್ ಮಾಡಿ, ಬೈಂಡ್ ಮಾಡಲಾದ, 120 ಪುಟಗಳಿಗೆ ಮೀರದ ಕಥೆಗಳ ನಾಲ್ಕು ಪ್ರತಿಗಳನ್ನು 25 ಅಕ್ಟೋಬರ್ 2024ರ ಒಳಗಾಗಿ ಸಾಹಿತ್ಯ ವೇದಿಕೆಯ ವಿಳಾಸಕ್ಕೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳ ಸಾಫ್ಟ್ ಕಾಪಿ ಸ್ವೀಕರಿಸಲಾಗುವುದಿಲ್ಲ. ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಲೇಖಕ/ಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ, ಒಂದು ಭಾವಚಿತ್ರವನ್ನು ಹಸ್ತಪ್ರತಿಯೊಡನೆ ಪ್ರತ್ಯೇಕವಾಗಿ ಲಗತ್ತಿಸಬೇಕು.…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ ಕಾರ್ಯಕ್ರಮ -33 ಉಪನಿಷದ್ ವರ್ಷದ ಪ್ರಯುಕ್ತ ‘ತಿಂಗಳ ಉಪನ್ಯಾಸ ಮಾಲೆ’ಯು ದಿನಾಂಕ 28 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ಕಾರ್ತಿಕ್ ವಾಗೈ ಪಂಚನಬೆಟ್ಟು ಇವರು ಮಾಂಡುಕ್ಯ ಉಪನಿಷದ್ ಕುರಿತು ಉಪನ್ಯಾಸ ನೀಡಲಿರುವರು. ಡಾ. ಕಾರ್ತಿಕ್ ವಾಗ್ಳೆ : ಡಾ. ಕಾರ್ತಿಕ್ ವಾಗ್ಳೆಯವರು ಮೂಲತಃ ಉಡುಪಿಯ ಹಿರಿಯಡ್ಕ ಸಮೀಪದ ಪಂಚನಬೆಟ್ಟಿನವರು. ಪ್ರಬೋಧಿನೀ ಗುರುಕುಲ ಮತ್ತು ವೇದವಿಜ್ಞಾನ ಗುರುಕುಲಗಳಲ್ಲಿ 12 ವರ್ಷಗಳ ಕಾಲ ವೇದ (ಕೃಷ್ಣಯಜುರ್ವೇದ ಮೂಲಾಂತ) ವೇದಾಂತ (ಪ್ರಸ್ಥಾನತ್ರಯ – ಶಾಂಕರ ಭಾಷ್ಯ ಸಹಿತ) ಯೋಗಗಳ ಅಧ್ಯಯನ ನಡೆಸಿರುತ್ತಾರೆ. ಯೋಗ ಮತ್ತು ಸಾಹಿತ್ಯ (ಸ್ವರ್ಣ ಪದಕ ಸಹಿತ) ಸ್ನಾತಕೋತ್ತರ ಪದವಿಯನ್ನು ಪಡೆದು “ಪ್ರಾಚೀನ ಭಾರತೀಯ ಆಡಳಿತ ವ್ಯವಸ್ಥೆಯ ಪ್ರಸ್ತುತ ಕಾಲದ ಆಡಳಿತದಲ್ಲಿ ಅನ್ವಯ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ…

Read More