Author: roovari

03 ಮಾರ್ಚ್ 2023, ಉಡುಪಿ:  3ನೇ ದಿನದ ಸುಮನಸ ರಂಗ ಹಬ್ಬ(ಫೆಬ್ರವರಿ 28, ಮಂಗಳವಾರ)ದಲ್ಲಿ ಪ್ರದರ್ಶನಗೊಂಡ ದ್ಯಾಟ್ಸ್ ಆಲ್ ಯುವರ್ ಆನರ್ ಕನ್ನಡ ನಾಟಕ – ಪೂರ್ಣಿಮಾ ಜನಾರ್ದನ ಕೊಡವೂರು ಕಂಡಂತೆ ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ ತಂಡ: ರಂಗ ಸಂಗಾತಿ, ಮಂಗಳೂರು        ರಚನೆ-ನಿರ್ದೇಶನ: ಶಶಿರಾಜ್ ರಾವ್ ಕಾವೂರು ರಂಗಾಸಕ್ತರು ಪ್ರತಿ ವರುಷ ಕಾಯುವ ರಂಗ ಹಬ್ಬದಲ್ಲಿ ಇವತ್ತಿನ ರಂಗ ಮಂಟಪವನ್ನು ರಂಗಾಗಿಸಿದ್ದು ರಂಗ ಸಂಗಾತಿ ಪ್ರತಿಷ್ಠಾನ ರಿ. ಮಂಗಳೂರು ಪ್ರಸ್ತುತಪಡಿಸಿದ ಶಶಿರಾಜ್ ಕಾವೂರು ಸ್ವತಃ ರಚಿಸಿ ನಿರ್ದೇಶಿಸಿದ ದಾಟ್ಸ್ ಆಲ್ ಯುವರ್ ಆನರ್ ಎಂಬ ರಂಗ ಪ್ರದರ್ಶನ . ಕೋರ್ಟ್ ಕಲಾಪಗಳ ವಿಷಯಾಧಾರಿತವಾಗಿ ಆರಂಭದಿಂದ ಕೊನೆಯ ದೃಶ್ಯದವರೆಗೂ ಪ್ರೇಕ್ಷಕರನ್ನು ಹದವಾಗಿ ಹಿಡಿದಿಟ್ಟುಕೊಂಡು , ಒಂದಷ್ಟು ಯೋಚನೆಗೆ ಸಿಲುಕಿಸಿ ಅಲ್ಲಲ್ಲಿ ನಗೆ ಹನಿಯ ಉಕ್ಕಿಸುವ ನವಿರಾದ ಹಾಸ್ಯ ಭರಿತ ಸಾಲುಗಳೊಂದಿಗೆ ಆಗಾಗ ಗಾಂಭೀರ ಹೊತ್ತ ಅರ್ಥಪೂರ್ಣ ಪದಪುಂಜಗಳ ಜೋಡಣೆ. ಮನದಲ್ಲಿ ಮೆಲುಕು ಹಾಕುವಂತಹ…

Read More

03 ಮಾರ್ಚ್ 2023, ಅಜೆಕಾರು/ಕಿನ್ನಿಗೋಳಿ: 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮೂಲ್ಕಿ ಪುನರೂರಿನಲ್ಲಿ ಮಾರ್ಚ್ 05ರಂದು ಭಾನುವಾರ ಪ್ರಸಿದ್ಧ ಕಲಾವಿದ ಅರುವ ಕೊರಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ವೀರಪ್ಪ ಮೊಯಿಲಿ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ಜೀವಮಾನದ ಸಾಧನೆಗಾಗಿ ವಿಶ್ವ ತುಳುವ ರತ್ನ ಗೌರವ ನೀಡಲಾಗುತ್ತಿದೆ. ಮಾಧ್ಯಮ ಕ್ಷೇತ್ರದ ಸಾಧಕರಾದ ಯು.ಸತೀಶ ಪೈ ಮತ್ತು ಸಂಧ್ಯಾ ಎಸ್ ಪೈ ಅವರಿಗೆ ವಿಶ್ವ ದಂಪತಿ ಗೌರವ ಸಲ್ಲ ಲಿದೆ ಎಂದು ಸಂಘಟಕ ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ವಿವಿದೆಡೆಯ 25 ಮಕ್ಕಳು ಪ್ರತಿಭಾ ಪ್ರದರ್ಶನ ನೀಡಲಿದ್ದು ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳ 33 ಯುವ ಸಾಧಕರು ಭಾಗವಹಿಸುವರು.ಪಂಚ ಭಾಷಾ ಕವಯತ್ರಿ ಅರುಷ ಎನ್ ಶೆಟ್ಟಿ ಅವರು 60ಕ್ಕೂ ಕವಿಗಳು ಭಾಗವಹಿಸುವ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಾಧನಾ ರತ್ನ ಗೌರವ 2023 ಕ್ಕೆ ಪಾತ್ರರಾಗುವ ವರ ವಿವರ:…

Read More

3 ಮಾರ್ಚ್ 2023, ಉಡುಪಿ: ಸುಮನಸಾ ಕೊಡವೂರು ಉಡುಪಿ (ರಿ), ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ), ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು (ರಿ) ಬೆಂಗಳೂರು – ಉಡುಪಿ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ದಿನಾಂಕ 05-03-2023ನೇ ರವಿವಾರ “ಭುಜಂಗ ಪಾರ್ಕ್” ಅಜ್ಜರ ಕಾಡು ಉಡುಪಿ ಇಲ್ಲಿ “ಜಾನಪದ ಹಬ್ಬ 2023” ಹಾಗೂ “ಜಾನಪದ ಸಂಘಟಕ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸುಮನಸಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಜಿ. ಕೊಡವೂರು ಇವರು ಸಭಾಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಪಿ. ಸುಬ್ರಹ್ಮಣ್ಯ ಯಾಡಪಡಿತ್ತಾಯ ಉದ್ಘಾಟಿಸಲಿರುವರು. ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ್, ಮಣಿಪಾಲದ ಮಾಹೆಯ ಸಹಾಯಕ ಉಪ ಕುಲಪತಿಗಳಾದ ಡಾ. ನಾರಾಯಣ ಸಬಾಹಿತ್, ಶ್ರೀ ರವೀಂದ್ರ ಶೆಟ್ಟಿ, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಉಡುಪಿ, ಶ್ರೀ ಪ್ರದೀಪ್ ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ…

Read More

03 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಏರ್ಪಡಿಸಿದ “ಕನಕ ಕೀರ್ತನ ಗಂಗೋತ್ರಿ” ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಿಂದ 18 ಮಂದಿ ಗಾಯಕರನ್ನು ಮತ್ತು ಸಾರ್ವಜನಿಕ ವಿಭಾಗದಲ್ಲಿ “ಕನಕ ಕುಣಿತ ಭಜನೆ”ಯ ನಾಲ್ಕು ತಂಡಗಳನ್ನು 2022-23ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಜನೆಗೆ ತೊಡಕಾಗುವುದಿಲ್ಲ ಬದಲಾಗಿ ಪೂರಕವಾಗುತ್ತದೆ ಎಂಬುದನ್ನು ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಾಬೀತು ಪಡಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಈ ಒಂದು ಕಾರ್ಯಕ್ರಮದಿಂದಾಗಿ ಕಲಿಕೆಯ ಏಕತಾನತೆಯು ತಪ್ಪಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವುದಕ್ಕೆ ಅವಕಾಶ ಸಿಕ್ಕಿದಂತಾಗಿದೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವನೆ ಬಲಗೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಿದೆ ಮತ್ತು ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಹೆಚ್ಚಿನ ಜ್ಞಾನ ಪಡೆದು ಇನ್ನೂ ಮುಂದುವರಿಯಲು ಪ್ರೇರಣೆ ನೀಡಿದಂತಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡ ಈ ಕಾರ್ಯಕ್ರಮವು ಶ್ಲಾಘನೀಯವಾಗಿದೆ. ಇಂದು ನಡೆಯುವ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ನೀಡಲಾಗುವುದು. ಪ್ರೌಢ ಶಾಲಾ ವಿಭಾಗದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮೇಧಾ…

Read More

03 ಫೆಬ್ರವರಿ 2023, ಉಡುಪಿ: ಸಮಾಜದ ಅಂಕುಡೊಂಕು ತಿದ್ದುವ ರಂಗಮಾಧ್ಯಮ: ಅಶೋಕ್‌ ಕೊಡವೂರು. ರಂಗಮಾಧ್ಯಮ ಅತ್ಯಂತ ಪರಿಣಾಮಕಾರಿಯಾದುದು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ರಂಗಮಾಧ್ಯಮ ಮೂಲಕ ಆಗುತ್ತದೆ ಎಂದು ಉಡುಪಿ ಜಿಲ್ಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಜಿ. ಕೊಡವೂರು ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಗುರುವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಮನಸಾ ಹುಟ್ಟುವಾಗ ಇಷ್ಟು ಎತ್ತರಕ್ಕೆ ಬೆಳೆಯುತ್ತದೆ ಅಂದುಕೊಂಡಿಲ್ಲ. ಇದು ಬರೀ ಕಲಾತಂಡವಲ್ಲ. ಎಲ್ಲ ರಂಗದಲ್ಲಿಯೂ ಬದ್ಧತೆಯಿಂದ ಕೆಲಸ ಮಾಡುವ ಅತ್ಯಂತ ಶಿಸ್ತುಬದ್ಧ ತಂಡ ಇದು ಎಂದು ಶ್ಲಾಘಿಸಿದರು. ಒಮ್ಮೆ ನೋಡಿದ ಸಿನಿಮಾವನ್ನು ಮತ್ತೆ ಮತ್ತೆ ನೋಡಲಾಗುವುದಿಲ್ಲ. ಯಾಕೆಂದರೆ ಅದೇ ದೃಶ್ಯಗಳಿರುತ್ತವೆ. ಆದರೆ ನಾಟಕ ಪ್ರತಿಬಾರಿಯೂ ಹೊಸತನದಿಂದ ಹೊಸಬಗೆಯ ನಟನೆಯಿಂದ ಕೂಡಿರುತ್ತದೆ ಎಂದು ವಿಶ್ಲೇಷಿಸಿದರು. ಪಾಂಬೂರು ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್‌ ನೊರೊನ್ಹಾ ಮಾತನಾಡಿ, ರಂಗಚಟುವಟಿಕೆ ಅಂದರೆ ಚಟವಲ್ಲ, ಹವ್ಯಾಸವಲ್ಲ. ಅದು ಸಾಮಾಜಿಕ ಬದ್ಧತೆ ಇರುವ ಕಾರ್ಯ ಎಂದು ಹೇಳಿದರು. ಚಟದಿಂದ…

Read More

02 ಮಾರ್ಚ್ 2023, ಉಡುಪಿ:  ಹಳೆಬೇರು ಹೊಸಚಿಗುರಿನ ಸಮಾಗಮವೇ ಸುಮನಸಾ: ಗೋಪಾಲ ಸಿ. ಬಂಗೇರ ಅನುಭವದಿಂದ ಮಾಗಿದ ಹಿರಿಯರನ್ನು, ಹೊಸಚೈತನ್ಯದ ಯುವಜನರನ್ನು, ಪುಟ್ಟ ಮಕ್ಕಳನ್ನು ಸೇರಿಸಿಕೊಂಡು ಮುನ್ನಡೆಯುತ್ತಿರುವ ಸುಮನಾಸವು ಹಳೆಬೇರು ಹೊಸಚಿಗುರಿನ ಸಮಾಗಮ ಎಂದು ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಬುಧವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಈ ಸಂಸ್ಥೆಗೂ ನನಗೂ ಅವಿನಾಭಾವ ಸಂಬಂಧ. ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣಗುರುಗಳ ಸಂದೇಶದಂತೆ ಸಂಘಟಿತರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸುಮನಸಾದ ಶಿಸ್ತು, ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ’ ಎಂದು ಶ್ಲಾಘಿಸಿದರು. ರಂಗಸನ್ಮಾನ ಸ್ವೀಕರಿಸಿದ ನಾರಾಯಣ ಪ್ರಭು ಗುಳ್ಮೆ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದವನು. ನಿರ್ದೇಶಿಸಿದವನು. ಆದರೂ ಯಕ್ಷಗಾನದ ಕಡೆಗೆ ಒಲವು ಜಾಸ್ತಿ. ಕರಾವಳಿಯ ಶ್ರೇಷ್ಠ ಕಲೆ ವಿಶ್ವಕ್ಕೆ ಮುಟ್ಟಿರುವ ಕಲೆ ಯಕ್ಷಗಾನ. ಅದು ತಾತ್ಕಾಲಿಕ ಮನರಂಜನೆ ಅಲ್ಲ. ಜನಮನಕ್ಕೆ…

Read More

02 ಮಾರ್ಚ್ 2023, ಮಂಗಳೂರು: ಬೆಂಗಳೂರಿನ ಕರಾವಳಿ ಕನ್ನಡಿಗರ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಸ್ಥೆಯಾದ ಆನಂದ ಬಳಗ ನೀಡುವ 35ನೇ ವರ್ಷದ “ಆನಂದ ಸಮಾಜ ಭೂಷಣ” ಪ್ರಶಸ್ತಿಗೆ ಹಿರಿಯ ಕಲಾವಿದ, ಸಾಹಿತಿ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮತ್ತು ಉದ್ಯಮಿ, ಸಮಾಜ ಸೇವಕ ಎಂ. ಭಾಸ್ಕರ ರಾವ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 5ರಂದು ಸಂಜೆ ಬೆಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ಸ್ ಸಭಾಭವನದಲ್ಲಿ ಜರಗಲಿರುವುದು. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಸಂಸ್ಥೆಯ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ ಅಧ್ಯಕ್ಷತೆ ವಹಿಸುವರು. ನೃತ್ಯ ವಿದುಷಿ ಸಂಧ್ಯಾ ಕೇಶವ ರಾವ್ ಬಳಗದಿಂದ “ನೃತ್ಯ ಸಂಧ್ಯಾ” ಕಾರ್ಯಕ್ರಮ ಜರಗಲಿದ್ದು, ಬಳಗವನ್ನು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬ್ರಾಹ್ಮಣ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆನಂದ ಬಳಗವು ಬೆಂಗಳೂರಿನ ಕರಾವಳಿ…

Read More

02 ಮಾರ್ಚ್ 2023, ಮಂಗಳೂರು : ನೆಯ್ಗೆಯ ನೂಲಿನಂತೆ ಮುದ್ರಾಡಿಯವರ ಜೀವನವೂ ಸಾಹಿತ್ಯ ಕೃತಿಗಳೂ ಸಾಧನೆಗಳೂ ಸ್ಪುಟವಾಗಿದ್ದವು. ಪ್ರಾಥಮಿಕ ಶಾಲಾ ಶಿಕ್ಷಕರಾದ ಮುದ್ರಾಡಿಯವರ ಕೃತಿ ವಿ.ವಿ.ಯ ಕನ್ನಡ ಐಚ್ಚಿಕ ವಿಷಯ ಪಠ್ಯವಾಗಿ ಆಯ್ಕೆಗೊಂಡಿದ್ದು, ಅವರ ಪ್ರತಿಭೆಗೆ ಸಾಕ್ಷಿ ಎಂದು ದ.ಕ. ಜಿಲ್ಲಾ ಕ.ಸಾ.ಪ.ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದರು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಕಚೇರಿಯಲ್ಲಿ ದಿನಾಂಕ 28-02-2023ರಂದು ಆಯೋಜಿಸಲಾದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು. ಹಿರಿಯ ಕಲಾವಿದ, ಸಾಹಿತಿ, ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿಯವರು ಅಂಬಾತನಯರ ಬಹುಮುಖ ಪ್ರತಿಭೆಯನ್ನು ವಿವರಿಸುತ್ತಾ ‘ಪರಿತ್ಯಕ್ತ’ ಕೃತಿಯನ್ನು ಕನ್ನಡದ ಮೇರು ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರು ಶ್ಲಾಘಿಸಿರುವುದು ಅವರಿಗೆ ಸಂದ ಪ್ರಶಸ್ತಿಯೇ ಆಗಿದೆ. ನಟ, ನಾಟಕಕಾರ, ಪ್ರಸಂಗಕರ್ತೃ, ಯಕ್ಷಗಾನ ಕಲಾವಿದ ಅರ್ಥಧಾರಿ ಪ್ರವಚನಕಾರ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಂಬಾತನಯರಿಗೆ ಪಾರ್ತಿ ಸುಬ್ಬ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮೊದಲಾದ…

Read More

02 ಮಾರ್ಚ್ 2023, ಮಂಗಳೂರು: ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೋ ಇವರಿಗೆ ಕೊಂಕಣಿ ಲೇಖಕ ಸಂಘವು ‘ ಕೊಂಕಣಿ ಸಾಹಿತ್ಯ ಪ್ರಶಸ್ತಿ 2023 ’ ನೀಡಿ ಗೌರವಿಸಿದೆ. ಫೆಬ್ರವರಿ 25ರಂದು ನಂತೂರಿನ ಸಂದೇಶ ಪ್ರತಿಷ್ಠಾನದ ಸಂದೇಶ ಆವರಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರಗಿತು. ಮುಖ್ಯ ಅತಿಥಿಯಾಗಿ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕ ರೆ. ಫ್ರಾನ್ಸಿಸ್ ರೋಡ್ರಿಗರ್ಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಬೆಳ್ಳೂರು ಭಾಗವಹಿಸಿದ್ದರು. ಈ ಪ್ರಶಸ್ತಿಯ 25,000 ನಗದು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಐರಿನ್ ಪಿಂಟೋ ಕೊಂಕಣಿ ಲೇಖಕಿ, ಕಾದಂಬರಿ ಗಾರ್ತಿ ಎಂದು ಗುರುತಿಸಿದ್ದಕ್ಕಾಗಿ ಇಡೀ ಕೊಂಕಣಿ ಸಾಹಿತ್ಯ ಲೋಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊಂಕಣಿ ಸಮುದಾಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಕೆಎಲ್ಎಸ್ ನಿಂದ ಪ್ರಶಸ್ತಿ ಸ್ವೀಕರಿಸಿರುವುದು ನನಗೆ ಅಪಾರ ಸಂತಸ ತಂದಿದೆ. ನನ್ನ ಬೆಂಬಲಿಗರಿಗೆ ಸಾಹಿತ್ಯ ಅಭಿಮಾನಿಗಳಿಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ನಾನು ಕೃತಜ್ಞಳಾಗಿದ್ದೇನೆ…

Read More

02 ಮಾರ್ಚ್ 2023, ಬೆಂಗಳೂರು :  ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಮ್ ಗೋಪಾಲ್ (87) ಅವರು ಮಾರ್ಚ್ 1ರಂದು ಬುಧವಾರ ನಿಧನರಾದರು. ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ತಮಿಳುನಾಡಿನ ಕುಂಭಕೋಣಂನಲ್ಲಿ 1935ರಲ್ಲಿ ಜನಿಸಿದ ವಿದುಷಿ ನೀಲಾ ಅವರು, ರಾಮ್ ಗೋಪಾಲ್ ಅವರನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ತಮಿಳುನಾಡಿನ ತ್ಯಾಗರಾಜಪುರಂ ಎಂಬ ಹಳ್ಳಿಯಿಂದ ಆರಂಭವಾದ ಅವರ ಗಾಯನ ಯಾತ್ರೆ, ಲಂಡನ್ ನ ಭಾರತೀಯ ಭವನದವರೆಗೂ ತಲುಪಿದೆ. 72 ಮೇಳಕರ್ತ ರಾಗಗಳನ್ನು ಹಾಡಿ 19 ಧ್ವನಿಸುರಳಿ ಹೊರತಂದಿದ್ದಾರೆ. 59ನೇ ವರ್ಷದಲ್ಲಿ ಅವರು ಕ್ಯಾನ್ಸರ್ ಗೆ ತುತ್ತಾಗಿದ್ದರು. ಕ್ಯಾನ್ಸರ್ ಜಯಿಸಿದ ಅವರು ಮತ್ತೆ ಗಾಯನದಲ್ಲಿ ತೊಡಗಿಕೊಂಡಿದ್ದರು. ಉತ್ತಮ ಮನೋಧರ್ಮ ವಿದ್ವತ್ಪೂರ್ಣ ಗಾಯನಕ್ಕೆ ಹೆಸರಾದ ನೀಲಾ ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಗಾಯನ ಲೋಕಕ್ಕೆ ನೀಡಿದವರು. ಇವರನ್ನು ಶಿಷ್ಯಂದಿರು “ನೀಲಾ ಮಾಮಿ” ಎಂದೇ ಕರೆಯುತ್ತಿದ್ದರು. ಮದ್ರಾಸ್ ಮ್ಯೂಜಿಕ್ ಅಕಾಡೆಮಿ ನೀಡುವ ‘ಸಂಗೀತ ಕಲಾಚಾರ್ಯ’ ಪ್ರಶಸ್ತಿ,…

Read More