Subscribe to Updates
Get the latest creative news from FooBar about art, design and business.
Author: roovari
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ 14-05-2024ರ ಮಂಗಳವಾರ ನಡೆದ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ’ ಸರಣಿ -4 ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ ಕಲಾವಿದರಾದ ಶ್ರೀ ಚೆನ್ನಪ್ಪ ಗೌಡ ಸಜಿಪ ಅವರು ತಮ್ಮ ಯಕ್ಷಪಯಣದ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಚೆನ್ನಪ್ಪ ಗೌಡ “ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನದಲ್ಲಿ ಪಾತ್ರಗಳನ್ನು ಸಾವಧಾನವಾಗಿ ಭಾವಪ್ರಧಾನವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತಿತ್ತು. ಪ್ರಸಂಗದ ನಡೆಯನ್ನು ಕ್ರಮಬದ್ಧವಾಗಿ ನಿರೂಪಿಸಲು ಸಾಧ್ಯವಾಗುತ್ತಿತ್ತು. ಕಾಲಮಿತಿಯ ಪ್ರದರ್ಶನದಲ್ಲಿ ಪಾತ್ರಗಳು ಬಂದಷ್ಟೇ ವೇಗದಲ್ಲಿ ನಿರ್ಗಮಿಸುತ್ತವೆ. ಹಾಗಾಗಿ ಯಕ್ಷಗಾನದ ಮೂಲ ಸೌಂದರ್ಯ ಮತ್ತು ಪರಂಪರೆಗೆ ಧಕ್ಕೆಯಾಗುತ್ತಿದೆ. ಅಂದಿನ ರಂಗಸ್ಥಳವೆಂದರೆ ಅಡಕೆ ಮರದ ಕಂಬ ಅದರ ಮೇಲೆ ಹಾಸಿದ ಮಡಲು, ಆಚೀಚೆ ಎರಡು ದೊಂದಿ ಅಥವಾ ಗ್ಯಾಸ್ಲೈಟ್ ತೂಗಿದ ರಂಗಸ್ಥಳ. ಆದರೆ ಆ ಕಾಲದ ಕಲಾವಿದರಿಗೆ ಕುಣಿತದಲ್ಲಿ ಉದಾಸೀನ ಇರಲಿಲ್ಲ. ನಾವೆಲ್ಲ ಹಿರಿಯರ ಕುಣಿತ ವೇಷವನ್ನು ನೋಡಿಯೇ ಕಲಿತದ್ದು. ಪ್ರತ್ಯೇಕ…
ಉಳ್ಳಾಲ : ಶ್ರೀ ನಾಗವನ ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಸ್ಥಾನ ಅಂಬ್ಲಮೊಗರು ಇಲ್ಲಿನ ನೂತನ ಧರ್ಮ ಚಾವಡಿ ಪ್ರವೇಶೋತ್ಸವ ಮತ್ತು ಪಡ್ಯಾರ ಮನೆ ಬ್ರಹ್ಮಕಲಶೋತ್ಸವ ಸಲುವಾಗಿ ಉಳ್ಳಾಲ ತಾಲೂಕು ಪಡ್ಯಾರ ಮನೆಯಲ್ಲಿ ‘ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ದಿನಾಂಕ 05-05-2024 ರಂದು ಜರಗಿತು. ದಿ.ಕಲ್ಲಾಯಿ ವಿಠಲ ರೈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು. ಗಣೇಶ್ ಕುಮಾರ್ ಹೆಬ್ರಿ, ಹರಿಶ್ಚಂದ್ರ ನಾಯಗ ಮಾಡೂರು, ಜೀತೇಶ್ ಕೋಳ್ಯೂರು, ಸ್ಕಂದ ಕೊನ್ನಾರ್ ಇವರ ಹಿಮ್ಮೇಳದ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸಂಜೀವ ಶೆಟ್ಟಿ ಬಿ.ಸಿ.ರೋಡು ಅರ್ಥಧಾರಿಗಳಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ತಾಳಮದ್ದಳೆಯನ್ನು ಸಂಯೋಜಿಸಿದ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರನ್ನು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಶೆಟ್ಟಿ ಪಡ್ಯಾರಮನೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಸಮಿತಿ…
ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಮತ್ತು ಕುವೆಂಪು ವಿ.ವಿ. ಕನ್ನಡ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ‘ಜಾನಪದ ದಿಕ್ಕು-ದೆಸೆ’ ವಿಚಾರವಾಗಿ ಒಂದು ದಿನದ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ದಿನಾಂಕ 28-05-2024ರಂದು ಮಂಗಳವಾರ ಬೆಳಿಗ್ಗೆ 10-00ರಿಂದ ಸಂಜೆಯವರೆಗೆ ಏರ್ಪಡಿಸಲಾಗಿದೆ. ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಡಾ. ರಾಧಾಕೃಷ್ಣ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕುವೆಂಪು ವಿ.ವಿ. ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿಗಳು, ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಹಿ.ಶಿ. ಬೋರಲಿಂಗಯ್ಯ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್. ರಾಜೇಶ್ವರಿ, ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷರಾದ ಡಾ. ಸಬಿತಾ ಬನ್ನಾಡಿಯವರು ಭಾಗವಹಿಸಲಿದ್ದಾರೆ. ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ಡಾ. ವಿಶ್ವನಾಥ ಬದಿಕಾನೆ ಇವರು ‘ಜಾನಪದ ಸ್ವರೂಪ ಮತ್ತು ಮಹತ್ವ’ ವಿಚಾರವಾಗಿ ಮತ್ತು ಬೆಂಗಳೂರಿನ ಡಾ. ಮೊಗಳ್ಳಿ ಗಣೇಶ್ ಇವರು ‘ಜಾನಪದ ಹೊಸ ಆಯಾಮಗಳು’ ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ.ಆರ್.…
ಗಿರಿಮನೆ ಶ್ಯಾಮರಾವ್ ಅವರ ‘ಬಣ್ಣದ ಜಿಂಕೆ’ ಕಾದಂಬರಿಯು ಮಲೆನಾಡಿನ ರೋಚಕ ಕಥಾ ಸರಣಿಯ ಹದಿನೈದನೇ ಕೃತಿಯಾಗಿದ್ದು ಚಿತ್ರರಂಗದ ಥಳುಕು ಬಳುಕಿನ ಜಗತ್ತಿನ ಆಗು ಹೋಗುಗಳನ್ನು ಭಾವನಾತ್ಮಕವಾಗಿ ವಿವರಿಸುತ್ತದೆ. ಖ್ಯಾತ ನಿರ್ದೇಶಕ ಭಾನುಪಿಳ್ಳೈಯ ಚಿತ್ರದ ನರ್ತಕಿಯಾಗಿ ಬಣ್ಣದ ಬದುಕಿಗೆ ಕಾಲಿಡುವ ಮಂದಾಕಿನಿಯು ಅದೇ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಕುಮಾರ ಎಂಬ ಸ್ಫುರದ್ರೂಪಿ ಯುವಕನ ಪ್ರೇಮಕ್ಕೆ ಪಾತ್ರಳಾದ ಬಳಿಕ ಜರಗುವ ವಿದ್ಯಮಾನಗಳು ಮುಖ್ಯವಾಗುತ್ತವೆ. ಹಳ್ಳಿ ಹುಡುಗಿಯಾದ ಮಂದಾಕಿನಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಮೂಲಕ ಮಾನವೀಯತೆಯನ್ನು ಮೆರೆಯುವ ಸುಕುಮಾರನು ಆಕೆಯ ನಡೆನುಡಿಗಳನ್ನು ತಿದ್ದಲು ಮುಂದಾಗುವ ಕ್ರಿಯೆಯು ಬಹಳಷ್ಟು ಬದಲಾವಣೆಗಳಿಗೆ ಮುನ್ನುಡಿ ಬರೆಯುತ್ತದೆ. ಇತ್ತೀಚಿನ ಬದುಕಿನಲ್ಲಿ ಹಾಸುಹೊಕ್ಕ ಆಧುನಿಕತೆಯ ಅಂಶಗಳನ್ನು ಮಂದಾಕಿನಿಯ ಬದುಕಿನಲ್ಲಿ ಅಳವಡಿಸಲು ಮುಂದಾಗುವ ಸುಕುಮಾರನ ಕಾರ್ಯತತ್ಪರತೆಯಲ್ಲಿ ಅವನ ಅಂತರಂಗದ ನೈರ್ಮಲ್ಯ ಪ್ರತಿಫಲಿಸುತ್ತದೆ. ಮಂದಾಕಿನಿಯ ಭಾಷಾ ಶೈಲಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸುಕುಮಾರನು ಆಕೆಗೆ ಇಂಗ್ಲೀಷ್, ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಕಲಿಸುವುದರೊಂದಿಗೆ ಸಂಗೀತ, ಭಿನ್ನ ರೀತಿಯ ನೃತ್ಯ ಪ್ರಕಾರಗಳಲ್ಲಿ ನಿಪುಣಳಾಗುವಂತೆ ಮಾಡುವಲ್ಲಿ ಸಫಲನಾಗುವುದಲ್ಲದೆ, ಮಂದಾಕಿನಿಯನ್ನು…
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಆಶ್ರಯದಲ್ಲಿ ‘ಸಾಹಿತ್ಯ ಮತ್ತು ಬದುಕು’ ಉಪನ್ಯಾಸ-ಸಂವಾದ-ಸಂಘಟನೆ ಕಾರ್ಯಕ್ರಮವು ದಿನಾಂಕ 18-05-2024ನೇ ಶನಿವಾರ ಬೆಳಗ್ಗೆ ಗಂಟೆ 10-00ಕ್ಕೆ ಬೆಳ್ತಂಗಡಿ ತಾಲೂಕಿನ ಎಳನೀರು ಸಮುದಾಯ ಭವನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುನಿರಾಜ ರೆಂಜಾಳ ಇವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಬೆಂಗಳೂರಿನ ಕ.ಸಾ.ಪ. ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಮಾಧವ ಎಂ.ಕೆ. ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಿ. ಯದುಪತಿ ಗೌಡ ಇವರುಗಳು ಉಪಸ್ಥಿತಿರಿರುವರು.
ಉಡುಪಿ : ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಶ್ರಯದಲ್ಲಿ ಕನ್ನಡ ಭಾಷೆಯಲ್ಲಿ ಕ್ರೈಸ್ತ ಸಾಹಿತಿಗಳು ಬರೆದಿರುವ ಪುಸ್ತಕಗಳಿಗೆ ವರ್ಷಂಪ್ರತಿ ನೀಡುವ ‘ದಾಂತಿ ಪುರಸ್ಕಾರ’ಕ್ಕೆ 2023ನೇ ಸಾಲಿನ ವಿನಿಶಾ ರೊಡ್ರಿಗಸ್ ಅವರ ‘ಎತ್ತಿನಗಾಡಿ ಎಕ್ಸ್ ಪ್ರೆಸ್ 2’ ಕೃತಿ ಆಯ್ಕೆಯಾಗಿದೆ. ಅದರ ಮೊದಲ ಭಾಗ 2015ರಲ್ಲಿ ಪ್ರಕಟವಾಗಿದೆ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ವಿನಿಶಾ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಝೀ ಟಿವಿ ಮತ್ತು ದೂರದರ್ಶನ ವಾಹಿನಿಯಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕರಾವಳಿ ಕರ್ನಾಟಕದ ಕನ್ನಡ, ಕೊಂಕಣಿ ಹಾಗೂ ಇತರ ಭಾಷೆಯ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ವಿನಿಶಾ, ವಿಕ್ಟರ್ ರೊಡ್ರಿಗಸ್ ಮತ್ತು ವಿಕ್ಟೋರಿಯ ಡಿ’ಮೆಲ್ಲೊ ಪುತ್ರಿ. ಬರಹಗಾರ ಪ್ರಮೋದ್ ರೊಡ್ರಿಗಸ್ ಹೊಸ್ಪೆಟ್ ಪತ್ನಿ. ಈ ಪ್ರಶಸ್ತಿಯು ರೂ.25 ಸಾವಿರ ನಗದಿನೊಂದಿಗೆ ಶಾಲು, ನೆನಪಿನ ಕಾಣಿಕೆಯನ್ನು ಹೊಂದಿದ್ದು, ದಿನಾಂಕ 09-06-2024ರಂದು ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆಯಲಿರುವ ಕಥೊಲಿಕ್ ಸಭಾ ಉಡುಪಿ ಪ್ರದೇಶ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ…
ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನ ಕನ್ನಡ ಉಪನ್ಯಾಸಕ, ಯುವ ಬರಹಗಾರ, ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕ, ನಿರೂಪಕ ಪ್ರದೀಪ್ ಡಿ.ಎಮ್. ಹಾವಂಜೆ ಇವರ ಸಣ್ಣ ಕಥಾ ಸಂಕಲನ ‘ಮುಂಡ್ರು’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 07-05-2024ರಂದು ಕಟೀಲು ಪ್ರಥಮ ದರ್ಜೆ ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ವಿ. ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ವಿದ್ಯಾರ್ಥಿನಿ ಲಾವಣ್ಯ ಮತ್ತು ಶ್ರೇಯ ಇವರ ಪ್ರಾರ್ಥನೆಯೊಂದಿಗೆ ನೆರವೇರಿಸಲಾಯಿತು. ಪೂಜ್ಯ ವೇದಮೂರ್ತಿ ಶ್ರೀ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಿ ಕಟೀಲು ವಿದ್ಯಾ ಸಂಸ್ಥೆ ಕನ್ನಡ-ಸಾಹಿತ್ಯ ಕಲೆಗಳಿಗೆ ನೀಡುತ್ತಿರುವ ಕಾಳಜಿ, ಸಹಕಾರ ಬಗ್ಗೆ ಹಾಗೂ ನುಡಿ ಹಬ್ಬದ ಸಂಭ್ರಮವನ್ನು ತಿಳಿಸಿ, ಉಪನ್ಯಾಸಕ ಪ್ರದೀಪ್ ಹಾವಂಜೆಯವರ ಸಣ್ಣ ಕಥಾ ಸಂಕಲನ ‘ಮುಂಡ್ರು’ ಇದು ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನವಾಗಲೆಂದು…
ಮಂಗಳೂರು : ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಪದವರ್ಣವೆಂಬ ನೃತ್ಯಬಂಧದ ವಿವಿಧ ಮುಖಗಳು ‘ಬಣ್ಣಗಳ ಭಾವಲೋಕ’ ನೃತ್ಯ ಪ್ರದರ್ಶನವು ದಿನಾಂಕ 18-05-2024ರಂದು ಸಂಜೆ 6-00ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮೈಸೂರಿನ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕಿ ಡಾ. ವಸುಂಧರಾ ದೊರೆಸ್ವಾಮಿ ಇವರು ಉದ್ಘಾಟಿಸಲಿದ್ದು, ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಯು.ಕೆ. ಪ್ರವೀಣ್ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.
ಹೊಸಬೆಟ್ಟು : ಶ್ರೀಕೃಷ್ಣ ಮುಖ್ಯಪ್ರಾಣ ಹವ್ಯಾಸಿ ಯಕ್ಷಗಾನ ಬಳಗದ ದ್ವಿತೀಯ ವರ್ಷದ ವಾರ್ಷಿಕೋತ್ಸವವು ದಿನಾಂಕ 12-05-2024ರ ಆದಿತ್ಯವಾರದಂದು ಸಂಜೆ ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟಿಸಿದ ಯಕ್ಷಗಾನಾಭಿಮಾನಿ ಹಾಗೂ ಪ್ರೋತ್ಸಾಹಕರದ ಶ್ರೀ ಎಚ್. ಗುರುರಾಜ ಆಚಾರ್ಯ ಮಾತನಾಡಿ “ಈ ಬಳಗದವರಿಗೆ ಪ್ರತೀ ತಿಂಗಳು ಯಕ್ಷಗಾನ ಮಾಡುವ ಅವಕಾಶ ಸಿಗಲಿ.” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿಕ್ಷಕರು, ಸಾಹಿತಿಗಳು ಹಾಗೂ ಕನ್ನಡ ಜಾನಪದ ಪರಿಷತ್ ವಿಜಯಪುರ ಇದರ ಜಿಲ್ಲಾಧ್ಯ ಕ್ಷರಾಗಿರುವ ಶ್ರೀ ಬಾಳನಗೌಡ ಎಸ್. ಪಾಟೀಲ “ಯಕ್ಷಗಾನವು ಕೇವಲ ಕರಾವಳಿಯ ಕಲೆ ಮಾತ್ರವಲ್ಲದೆ ಇಡೀ ಕರ್ನಾಟಕದ ಕಲೆಯಾಗಿದ್ದು ತನ್ನ ಶಿಸ್ತುಬದ್ಧ ಪ್ರದರ್ಶನದಿಂದ ಕಡಲು ದಾಟಿ ಹೊರದೇಶಗಳಲ್ಲೂ ಜನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಕಲೆಯಾಗಿದೆ. ಇದು ಕೇವಲ ತುಳುನಾಡಿನ ಕಲೆಯಾಗದೆ ಕನ್ನಡ ನಾಡಿನ ಪ್ರತಿಷ್ಟಿತ ಜನಪದ ಕಲೆಯಾಗಿದ್ದು ಯುವಕರು ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವುದು ನಮ್ಮ ನಾಡಿನ ಹೆಮ್ಮೆಯಾಗಿದೆ.” ಎಂದು ಸಂತೋಷ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.…
ಕಾಸರಗೋಡು : ಕೊಲ್ಲಂಗಾನ ಶ್ರೀ ನಿಲಯ ನಿವಾಸಿ, ನಿವೃತ್ತ ಉಪತಹಸೀಲ್ದಾರ್, ಕಲಾವಿದ ಉದಯ ಶಂಕರ್ ಎನ್.ಎ. ಸೋಮವಾರ ದಿನಾಂಕ 13-05-2024 ರಂದು ನಿಧನರಾದರು. ಅವರಿಗೆ 76ವರ್ಷ ವಯಸ್ಸಾಗಿತ್ತು. ಜಿಲ್ಲೆಯ ತುಳು, ಕನ್ನಡ ಹಾಗೂ ಮಲಯಾಳ ರಂಗಭೂಮಿ ಸಾಹಿತ್ಯ ರಚನೆಯ ಮೂಲಕ ಗುರುತಿಸಿಕೊಂಡಿದ್ದ ಇವರು ನಾಟಕ ರಚನೆ, ನಿರ್ದೇಶನ, ಪ್ರಸಾದನ, ರಂಗ ಸಜ್ಜಿಕೆಯಲ್ಲಿ ಖ್ಯಾತರಾಗಿದ್ದರು. ಕಂದಾಯ ಇಲಾಖೆಯಲ್ಲಿ ಉಪತಹಸೀಲ್ದಾರ್ ಆಗಿ ನಿವೃತ್ತರಾಗಿದ್ದ ಶ್ರೀಯುತರು ಕಾಸರಗೋಡು ಜಿಲ್ಲಾ ತುಳುಕೂಟದ ಕಾರ್ಯದರ್ಶಿಯಾಗಿ, ನವರಂಗ ಆರ್ಟ್ಸ್ನ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಕೊಲ್ಲಂಗಾನ ಶ್ರೀ ಶಾರದಾ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೇರಳ ರಾಜ್ಯೋದಯ ಪ್ರಶಸ್ತಿ, ಧರ್ಮಸ್ಥಳ ದಿ. ರತ್ನವರ್ಮ ಹೆಗ್ಡೆ ಸ್ಮಾರಕ ನಾಟಕ ಪ್ರಶಸ್ತಿ ಎರಡು ಬಾರಿ ಇದಲ್ಲದೇ ಆನೇಕ ಪ್ರಶಸ್ತಿ, ಸನ್ಮಾನಗಳು ಇವರ ಸಾಧನೆಗೆ ಸಂದ ಗೌರವಗಳು ಮೃತರು ಪತ್ನಿ ಶಶಿಪ್ರಭ, ಪುತ್ರಿಯರಾದ ಶ್ರೀರಕ್ಷಾ, ಶ್ರೀದೀಕ್ಷಾ ಹಾಗೂ ಸಹೋದರ, ಸಹೋದರಿಯರನ್ನಗಲಿದ್ದಾರೆ.