Author: roovari

26 ಫೆಬ್ರವರಿ 2023, ಮಂಗಳೂರು: ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳ ಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ ಇಂತಹ ಒಬ್ಬರು ನಾಯಕ, ಸೂತ್ರಧಾರ ಪದ್ಯಾಣ ಗೋವಿಂದ ಭಟ್. ಗಣಪತಿ ಭಟ್ ಹಾಗೂ ಅದಿತಿ ಅಮ್ಮ ಇವರ ಮಗನಾಗಿ 13.12.1968ರಂದು ಜನನ. ಮಾಂಬಾಡಿ ಸುಬ್ರಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ಕಳೆದ ೩೦ ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ವೀರ ರಸ ಪ್ರಧಾನದ ಎಲ್ಲಾ ಪ್ರಸಂಗಗಳು ನೆಚ್ಚಿನವು ಹಾಗೂ ಬೆಳಗಿನ ಜಾವದ ಯಕ್ಷಗಾನದ ರಾಗಗಳು ನೆಚ್ಚಿನವು. ಕಡತೋಕ, ಪುತ್ತಿಗೆ, ಕುರಿಯ, ಪೂಂಜ ನೆಚ್ಚಿನ ಭಾಗವತರು. ನಿಡ್ಲೆ ನರಸಿಂಹ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕನಾರಾಯಣ ಭಟ್, ಮಿಜಾರು ಮೋಹನ ಶೆಟ್ಟಿಗಾರ್ ಇನ್ನೂ ಅನೇಕರು…

Read More

25 ಫೆಬ್ರವರಿ 2023, ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯ ಜ್ಞಾನಸಾಗರ – ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಡಾ. ಸಿಎ. ಎ. ರಾಘವೇಂದ್ರ ರಾವ್‌ ಅಭಿಪ್ರಾಯ. ಜ್ಞಾನ ಎಂಬುದು ಆಹಾರವಿದ್ದಂತೆ. ಜ್ಞಾನವೆಂಬ ಆಹಾರವನ್ನು ಶ್ರೀನಿವಾಸ ವಿಶ್ವ ವಿದ್ಯಾಲಯ ಯಾವ ರೀತಿಯಲ್ಲಿ ಬಂದರೂ ಸ್ವೀಕರಿಸುತ್ತದೆ. ಆದ್ದರಿಂದ  ಶ್ರೀನಿವಾಸ ವಿಶ್ವ ವಿದ್ಯಾಲಯ ಒಂದು ಜ್ಞಾನಸಾಗರವಾಗಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್‌ ಹೇಳಿದರು. ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿರುವ  ‘ವಿಶ್ವ ಸಂಸ್ಕೃತ ಸಮ್ಮೇಳನ’ದ ೨ನೇ ದಿನವಾದ ಫೆಬ್ರವರಿ ೨೫ ರಂದು ವಿಶ್ವ ವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಸಮ್ಮೇಳನದ ಸಾರಾಂಶ ಮತ್ತು ತಜ್ಞರ ಅಧಿವೇಶನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಾನವೀಯತೆಗೆ ಭಾರತೀಯ ಜ್ಞಾನ  ಮತ್ತು ಸಂಸ್ಕೃತದ ಕೊಡುಗೆ ಎಂಬ ವಿಷಯದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಭಾರತ ಸರ್ಕಾರದ ಹಸ್ತಪ್ರತಿಯ ರಾಷ್ಟ್ರೀಯ ಮಿಷನ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ನವದೆಹಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್…

Read More

25 ಫೆಬ್ರವರಿ 2023, ಬೆಂಗಳೂರು: ದಿನಾಂಕ 26 ಭಾನುವಾರದಂದು ಇಡೀ ದಿನ ಬೆಂಗಳೂರಿನ ‘ಸಿವಗಂಗ ರಂಗಮಂದಿರ’ದಲ್ಲಿ ಕಾವ್ಯ ಸಂಭ್ರಮ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು ಕಪ್ಪಣ್ಣನವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಉತ್ಸವದ ಸರ್ವಾಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ನಾಡಿನ ಖ್ಯಾತ ಕವಿಗಳು ಡಾ.ಚಂದ್ರಶೇಖರ ಕಂಬಾರರು ಹಾಗೂ ನಾಡಿನ ಹೆಸರಾಂತ ಕವಿಗಳು, ಕಲಾವಿದರು, ಹಾಡುಗಾರರು ಆಗಮಿಸುತ್ತಿದ್ದಾರೆ. ಈ ಕಾವ್ಯೋತ್ಸವ ಹಾಗೂ ಅಭಿನಂದನಾ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿ ಆಯೋಜಕರು ಕೇಳಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭ : ಬೆಳಿಗ್ಗೆ 09-30ರಿಂದ 10-45 ಕಾವ್ಯ ಗಾಯನ -1 ಅಧ್ಯಕ್ಷತೆ : ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿ ಉದ್ಘಾಟನೆ : ಶ್ರೀ. ಟಿ.ಎನ್. ಸೀತಾರಾಂ ಮುಖ್ಯ ಅತಿಥಿಗಳು : ಶ್ರೀ ವಲ್ಲೀಶ ಶಾಸ್ತ್ರಿ, ಲಾಸ್ ಏಂಜಲೀಸ್, ಅಮೇರಿಕ ಶ್ರೀ ರಮೇಶ್ ಎನ್. ಉಪಸ್ಥಿತಿ : ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ಪ್ರಾಸ್ತಾವಿಕ ಮಾತು : ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ನಿರೂಪಣೆ : ಬಿ.ವಿ .…

Read More

25 ಫೆಬ್ರವರಿ 2023, ಮಂಗಳೂರು: “ಅನುಭವಕ್ಕೆ ಅಕ್ಷರ ರೂಪ ಕೊಡುವುದು ಮತ್ತು ಅಕ್ಷರಕ್ಕೆ ಅನುಭಾವ ರೂಪ ಕೊಡುವುದೇ ಸಾಹಿತ್ಯ ರಚನೆ” -ವಿವೇಕಾನಂದ ಎಚ್. ಕೆ. 25.02.2023ರಂದು ಕೊಡಿಯಾಲ್ ಬೈಲ್ ನಲ್ಲಿರುವ ವಾತ್ಸಲ್ಯ ಧಾಮದಲ್ಲಿ ಸ್ವರೂಪ ಅಭಿವೃದ್ಧಿ ಶಿಕ್ಷಣ ಯೋಜನೆ 2023 ಹಮ್ಮಿಕೊಂಡ “ಪುಸ್ತಕ ಪ್ರೀತಿ” ಎಂದೂ ಬರೆಯದವರೂ ಬರೆಯಿರಿ ಎಂಬ ಬರಹದ ಕಾರ್ಯಗಾರವನ್ನು ಉದ್ಘಾಟಿಸಿದ ಸೃಜನಶೀಲ ಚಿಂತಕ, ಕ್ರಿಯಾಶೀಲ ಹೋರಾಟಗಾರ ಶ್ರೀ ವಿವೇಕಾನಂದ ಎಚ್.ಕೆ ಹೇಳಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುರಾಜ ಮಾರ್ಪಳ್ಳಿ , ಸುಮಾಡ್ಕರ್, ಗೋಪಾಡ್ಕರ್ ಮತ್ತು ಸ್ವರೂಪ ರಾಷ್ಟ್ರೀಯ ಶಿಕ್ಷಣ ಯೋಜನೆ -2023 ಇದರ ಶ್ರೀಮತಿ ಕೃಷ್ಣವೇಣಿ ಉಪಸ್ಥಿತರಿದ್ದರು.

Read More

25 ಫೆಬ್ರವರಿ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಕೃಷ್ಣಪ್ಪ ಹಾಗೂ ಚಂದ್ರಾವತಿ ದಂಪತಿಯರ ಮಗನಾಗಿ 25.02.1997 ರಂದು ಪುನೀತ್ ಬೋಳಿಯಾರು ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಅಮ್ಮ ಅಪ್ಪ ಹಾಗೂ ಅಜ್ಜ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. 7ನೇ ತರಗತಿಯಲ್ಲಿ ಇರುವಾಗ ಕಟೀಲು 3ನೇ ಮೇಳಕ್ಕೆ ಸೇರ್ಪಡೆ. ಆಗಿನ ಭಾಗವತರು ಕುರಿಯ ಗಣಪತಿ ಶಾಸ್ತ್ರಿಗಳು ತುಂಬಾ ಉತ್ತಮವಾದ ಮಾರ್ಗದರ್ಶನ ನೀಡಿದರು. ನಂತರದಲ್ಲಿ ಕಟೀಲು 2, 4, 1ನೇ ಮೇಳದಲ್ಲಿ ತಿರುಗಾಟ ಮಾಡಿ ಕಾಲೇಜ್ ವಿದ್ಯಾಭ್ಯಾಸ ಮಾಡುವಾಗ ಎಡನೀರು ಮೇಳಕ್ಕೆ ಸೇರಿ 4 ವರ್ಷ ತಿರುಗಾಟ ಮಾಡಿ, ಉದ್ಯೋಗಕ್ಕೆ ಸೇರಿದ ಮೇಲೆ ಕಟೀಲು 6ನೇ ಮೇಳಕ್ಕೆ ಸೇರಿ ಪ್ರಸ್ತುತ ಕಟೀಲು 1ನೇ ಮೇಳದಲ್ಲಿ 3ನೇ ಕಿರೀಟ ವೇಷಧಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಾಗವತರಿಂದ ಕೆಲವು ವೇಷದ ಬಗ್ಗೆ ಹಾಗೂ ಹಿರಿಯ ಕಲಾವಿದರ ಜೊತೆ, ಪುಸ್ತಕ ಓದುವುದರಿಂದ,  ವೇಷದ ಬಗ್ಗೆ ಪ್ರಸಂಗದ ಸನ್ನಿವೇಶದ ಬಗ್ಗೆ ಪಾತ್ರದ…

Read More

24 ಫೆಬ್ರವರಿ 2023, ಬೆಂಗಳೂರು: ಮಹೇಶ್ ಎಸ್. ಪಲ್ಲಕ್ಕಿಯವರ ನಿರ್ದೇಶನದ ಸಂಸರ ಮೂಲ ರಚನೆಯಾದ ‘ಭಾವರಂಗ ತಂಡ’ದ ಅಭಿನಯದಲ್ಲಿ “ಬಿರುದಂತೆಂಬರ ಗಂಡ” ಕನ್ನಡ ನಾಟಕ, ನಟನಾ ರಂಗ ಶಾಲೆ ಮೈಸೂರಿನಲ್ಲಿ ಫೆಬ್ರವರಿ 26ಕ್ಕೆ ಸಂಜೆ 5 ಗಂಟೆಗೆ ಪ್ರದರ್ಶನ ಕಾಣಲಿದೆ. ಬಿರುದಂತೆಂಬರಗಂಡ ನಾಟಕದ ಸಾರಾಂಶ ಕನ್ನಡ ನಾಟಕ ಕ್ಷತ್ರದ ಶೇಕ್ಸ್ ಪಿಯರ್ ಯೆಂದು ಪ್ರಸಿದ್ದರಾದ ಸಂಸರವರು ಬರೆದಿರುವ ನಾಟಕ, ಬಿರುದಂತೆಂಬರಗಂಡ. ಈ ನಾಟಕ 1572-1575 ಇಸವಿಯ ಕಾಲಘಟ್ಟದಾಗಿದ್ದು,ಒಡೆಯರ್ ರಾಜವಂಶದಲ್ಲಿ ಮೊಟ್ಟಮೊದಲ ಬಾರಿಗೆ ರಾಜಪ್ರಭುತ್ವ ಸಾಧಿಸಿದ,ಶ್ರೀ ಇಮ್ಮಡಿ ತಿಮ್ಮರಾಜ ಒಡೆಯರ್ ಅವರ ಕಥೆಯಾಗಿದೆ. ಕೇವಲ ವ್ಯಾಪಾರಿಯಾಗಿದ್ದ ರಾಜನ ಭಕ್ತ, ಇನ್ನೊಂದು ರಾಜ್ಯದ ರಾಜನ ಮೇಲೆ ಯುದ್ಧಕ್ಕೆ ಹೋಗಿ,ಕೊನಗೆ ಆ ಊರಿನ ರಾಣಿಯ ಮುಂದೆ ಅವನು ಮಾಡಿದ ಉದ್ದತ್ತಿಕೆಯ ಉತ್ಸಾಹ ಮೆರವಣಿಗೆಗೆ ಅವನ ಮೊಣಕಾಲುಗಳ ಮೇಲೆ ನಿಂತು ಕ್ಷಮೆ ಬೇಡುವಂತಾಯಿತು. ಆದರೆ ಇದು ಯಾಕೆ ಸಂಭವಿಸಿತು? ರಾಜನ ಮರ್ಯಾದೆಯನ್ನು ರಕ್ಷಿಸುತ್ತಿರುವಾಗ ಕ್ಷಮೆಯನ್ನು ಬೇಡಲು ರಾಜನು ತನ್ನ ಅಪ್ಪಟ ಪ್ರಜೆಯನ್ನು ಏಕೆ ಶಿಕ್ಷೆಗೆ ಒಳಪಡೆಸಿದನು ಎಂಬುದು…

Read More

24 ಫೆಬ್ರವರಿ 2023, ಮುಂಬೈ: ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ಶಾಸ್ತ್ರೀಯ ನೃತ್ಯದ ಖ್ಯಾತ ನೃತ್ಯಗಾತಿ ಪದ್ಮಭೂಷಣ ಪುರಸ್ಕೃತೆ ಡಾ. ಕನಕ್ ರೆಲೆ ಅವರು 22 ಫೆಬ್ರವರಿ 2023 ರಂದು ತಮ್ಮ 85ನೇ ವಯಸ್ಸಿನಲ್ಲಿ ಬುಧವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ . ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರಚಾರ ಮತ್ತು ಸಂಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ನೂರಾರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ನೃತ್ಯ ಪ್ರಕಾರವನ್ನು ಉಳಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟವರು. ಡಾ. ರೆಲೆಯವರು ಗುಜರಾಥ್ ನಲ್ಲಿ11 ಜೂನ್ 1937 ರಲ್ಲಿ ಜನಿಸಿದರು. ತನ್ನ ಚಿಕ್ಕಪ್ಪನೊಂದಿಗೆ ಕೊಲ್ಕೊತ್ತಾದಲ್ಲಿರುವಾಗ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ಪ್ರದರ್ಶನಗಳನ್ನು ವೀಕ್ಷಿಸುವ ಅವಕಾಶ ಒದಗಿದ್ದು ಅದು ಕಲಾತ್ಮಕ ಸಂವೇದನೆಗಳನ್ನು ರೂಪಿಸಿಕೊಳ್ಳಲು ತನಗೆ ಸಹಾಯ ಮಾಡಿದೆ ಎಂದು ಅವರೇ ಹೇಳುತ್ತಾರೆ. ಕಥಕ್ಕಳಿ ಕಲಾವಿದೆಯಾದ ಡಾ.ರೆಲೆ ಗುರು ಪಾಂಚಾಲಿ ಕರುಣಾಕರ ಪಣಿಕ್ಕರ್ ಇವರಲ್ಲಿ ತನ್ನ 7ನೇ ವರ್ಷದ ಎಳವೆಯಲ್ಲಿಯೇ ಕಥಕ್ಕಳಿ ತರಬೇತಿಯನ್ನು ಮತ್ತು ಕಲಾಮಂಡಲ ರಾಜಲಕ್ಷ್ಮಿ ಅವರಿಂದ ಮೋಹಿನಿಯಾಟ್ಟಂಗೆ ದೀಕ್ಷೆಯನ್ನು ಪಡೆದರು. ಸಂಗೀತ ನಾಟಕ ಅಕಾಡಮಿ…

Read More

24 ಫೆಬ್ರವರಿ 2023, ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಂಭ್ರಮದ ಸ್ಥಾಪನಾ ದಿನದ ಪ್ರಯುಕ್ತ ಶ್ರೀ ಸಚ್ಚಿದಾನಂದ ಸೇವಾ ಸದನ, ದರ್ಬೆ ಇಲ್ಲಿ ದಿನಾಂಕ 23 ಫೆಬ್ರವರಿ 2023ರಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯರು,ಮಾಜಿ ವಿಧಾನಪರಿಷತ್ ಸದಸ್ಯರು ಆದ ಶ್ರೀ ಅಣ್ಣಾ ವಿನಯಚಂದ್ರ ರವರು ಗಣೇಶ್ ನಾಯಕ್ ಪುತ್ತೂರು ಇವರು ಬರೆದ “ಮನವು ಮಾತಾಡಿತು” ಪುಸ್ತಕ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇದರ ಜಂಟಿ‌ ನಿರ್ದೇಶಕ ಗೋಕುಲದಾಸ್ ನಾಯಕ್ ,ಉದ್ಯಮಿ ಕರೋಡಿ ಗೋಪಾಲಕೃಷ್ಣ ಬೋರ್ಕರ್, ಪ್ರಗತಿಪರ ಕೃಷಿಕ ಕುಳ್ಳಾಜೆ ಈಶ್ವರ ನಾಯಕ್, ಉದ್ಯಮಿ ಶಿವಶಂಕರ ನಾಯಕ್ ರೈತ ಬಂಧು  ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ,ಸಾರಸ್ವತ ಸಮೂಹ ಸಂಸ್ಥೆಗಳ ಕೇಂದ್ರೀಯ ಸಮಿತಿ ಅಧ್ಯಕ್ಷ ಉಮೇಶ್ ಪ್ರಭು ಬೆಳ್ತಂಗಡಿ,  ಪುರುಷೋತ್ತಮ ಪ್ರಭು ಮುಂಡಕೊಚ್ಚಿ ,ನಿವೃತ್ತ ವೃತ್ತ ನಿರೀಕ್ಷಕ ಮುಕುಂದ ನಾಯಕ್ ,ಶ್ರೀಮತಿ ವಿನತಾದೇವಿ‌ ಸುಳ್ಯ ,ಬದನಾಜೆ…

Read More

24 ಫೆಬ್ರವರಿ 2023, ಬೆಂಗಳೂರು: ಬೀಚಿ ಅವರ ರಚನೆ, ಶೈಲೇಶ್ ಕುಮಾರ್ ಅವರ ನಿರ್ದೇಶನದಲ್ಲಿ ನಗುವಿನ ಭೋಜನ ಉಣಿಸಲು ಸೈಡ್ ವಿಂಗ್ ತಂಡದವರು ‘ಸೀತೂ ಮದುವೆ’ ನಾಟಕದೊಂದಿಗೆ ಬರುತ್ತಿದ್ದಾರೆ. ನಾಳೆ, ಫೆಬ್ರವರಿ 25ಕ್ಕೆ ಕೆ.ಎಚ್. ಕಲಾಸೌಧ, ಹನುಮಂತನಗರ ಬೆಂಗಳೂರಿನಲ್ಲಿ ಸಂಜೆ 7:30ಕ್ಕೆ. ಟಿಕೇಟಿಗಾಗಿ ಸಂಪರ್ಕಿಸಿ: ಶ್ರೀಮತಿ ಮಾಲಾ: 9980179019, ಶ್ರೀ ಶೈಲೇಶ್: 9845087901 ಸೀತು ಮದುವೆ ಬಗ್ಗೆ: ಮದುವೆಯನ್ನೂದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಅದಕ್ಕೆ ಎನೋ ಕೆಲವರಿಗೆ ಸ್ವರ್ಗ ಸೇರೋವರಿಗೂ ಮದ್ವೆನೇ ಆಗೋದಿಲ್ಲ. ಆ ಕಾಲ, ಅರವತ್ತರ ಆಸುಪಾಸಿನಲ್ಲಿ ಇಪ್ಪತ್ತರ ಹರೆಯದ ಹೆಣ್ಣಿಗೆ ಮದುವೆಯಾಗಿಲ್ಲ ಅಂದ್ರೆ! ಛೆ ಛೆ.. ಎಂಥಾ ಅಪರಾಧ.. ದೊಡ್ಡ ಕನಸುಗಳನ್ನು ಹೊತ್ತು ಮದುವೆಯೆಂದರೆ ಮೂತಿ ಮುರಿಯೋ ಮದುವೆ ಹುಡುಗಿ ಒಂದೆಡೆ.. ಆಕೆಗೆ ಮದುವೆ ಮಾಡುವುದನ್ನೇ ದೊಡ್ಡ ಕನಸಾಗಿಸಿಕೊಂಡ ಮನೆಯವರು ಒಂದೆಡೆ..ಈ ಎರಡೆಡೆಯಲ್ಲಿರುವವರು ಒಂದೆಡೆಗೆ ಸೇರುತ್ತಾರೋ? ಬೀಚಿಯವರ ಕಚಗುಳಿಯಿಡುವ ಸಾಲುಗಳೊಂದಿಗೆ ಅರವತ್ತರ ಆಸುಪಾಸಿನ ರಸವತ್ತಾದ ಕಥನ ! “ಸೀತೂ ಮದುವೆ !?” ರಚನೆ – ನಿರ್ಮಾಣ – ನಿರ್ದೇಶನ :…

Read More

24 ಫೆಬ್ರವರಿ 2023, ಮಂಗಳೂರು: ಹಳೆಯ ತಳಹದಿಯಲ್ಲಿ ಹೊಸದು ರೂಪುಗೊಳ್ಳುವಲ್ಲಿ ವಸ್ತು ಸಂಗ್ರಹಾಲಯಗಳು ಹಿರಿದಾದ ಪಾತ್ರ ವಹಿಸುತ್ತಿವೆ. ಇದರಿಂದ ಈ ಕಾಲದಲ್ಲಿ ನಿಂತು ಭೂತ ಕಾಲವನ್ನು ನೋಡುವ ಜತೆಗೆ ತುಳುನಾಡಿನ ಬದುಕು ಕೃಷಿ ಪರಂಪರೆ, ಅವಿಭಕ್ತ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಡುವ ಕಾರ್ಯವನ್ನು ತುಳು ವಸ್ತು ಸಂಗ್ರಹಾಲಯ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಬಿ.ಸಿ. ರೋಡ್ ನ ಸಂಚಯ ಗಿರಿಯಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಳಿಕೆಯ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 23, ಫೆಬ್ರವರಿಯಂದು ಉದ್ಘಾಟಿಸಿ ಮಾತನಾಡಿದರು. ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವು ಅಬ್ಬಕ್ಕನ ಇತಿಹಾಸ ಪರಿಚಯಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆ, ವಿದ್ವಾಂಸರಿಗೆ ಅಧ್ಯಯನ ಕೇಂದ್ರವಾಗಿದ್ದು, ನಾಡಿನ ತನ್ಮಯತೆ ಕಲಾತ್ಮಕತೆಯನ್ನು ಪರಿಚಯಿಸುತ್ತಿದೆ . ಪ್ರೊ | ತುಕಾರಾಮ ಪೂಜಾರಿ ದಂಪತಿ ರಾಣಿಯ…

Read More