Author: roovari

ಬಂಟ್ವಾಳ : ಏರ್ಯ ಫೌಂಡೇಶನ್ ವತಿಯಿಂದ ಕರಾವಳಿಯ ಪ್ರಸಿದ್ಧ ಸಾಹಿತಿ, ಸಹಕಾರಿ ಸಂಘಗಳ ಪ್ರಮುಖ ನೇತಾರರಾಗಿದ್ದ ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಜನ್ಮಶತಮಾನೋತ್ಸವದ ಅಂಗವಾಗಿ ಕನ್ನಡದ ಹಿರಿಯ ಸಾಹಿತಿ, ರಂಗಕರ್ಮಿ, ನಿವೃತ್ತ ಪ್ರೊ. ನಾ. ದಾಮೋದರ ಶೆಟ್ಟಿ ಹಾಗೂ ಪ್ರಸಿದ್ಧ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಇವರಿಗೆ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಾಧಕರಿಗೆ ತಲಾ ರೂ. ಒಂದು ಲಕ್ಷ ರೂಪಾಯಿಗಳು, ಪ್ರಶಸ್ತಿ ಫಲಕ, ಅರಸು ಪೇಟ ನೀಡಿ ಸನ್ಮಾನಿಸಲಾಗುವುದು ಎಂದು ಏರ್ಯ ಫೌಂಡೇಶನ್ ತಿಳಿಸಿದೆ. ಬಂಟ್ವಾಳದ ‘ಏರ್ಯ ಬೀಡುವಿನಲ್ಲಿ’ ದಿನಾಂಕ 28 ಆಗಸ್ಟ್ 2025ರಂದು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ಸಂದರ್ಭ ನಾ.ದಾ. ಸಂಪಾದಿತ ‘ಏರ್ಯ ಸಾಹಿತ್ಯ ಮರುಚಿಂತನ’ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಬಿ.ಎ. ವಿವೇಕ ರೈ ಅನಾವರಣಗೊಳಿಸುವರು.…

Read More

ಪೆರಿಂಜೆ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಇದರ ವತಿಯಿಂದ ದಿನಾಂಕ 16 ಆಗಸ್ಟ್ 2025ರಂದು ಪೆರಿಂಜೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಗಮಕ ಕಾರ್ಯಕ್ರಮದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಗಮಕಲಾ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ “ಕಾವ್ಯಗಳು ಮಕ್ಕಳಿಗೆ ಅರ್ಥವಾಗಬೇಕು ಅಂತಾದರೆ ಗಮಕದಲ್ಲಿ ಅದನ್ನು ಹೇಳಬೇಕು. ಗಮಕದ ಪ್ರಾಥಮಿಕ ಜ್ಞಾನ ಇದ್ದಂತಹ ಅಧ್ಯಾಪಕರು ಉತ್ತಮ ಅಧ್ಯಾಪಕರಾಗಿ ರೂಪುಗೊಳ್ಳಲು ಗಮಕವು ತುಂಬಾ ಸಹಕಾರಿಯಾಗುತ್ತದೆ. ರಾಗಬಾರದ ವ್ಯಕ್ತಿ ಇಲ್ಲ. ಬರುವಂತಹ ರಾಗದಲ್ಲಿ ಸಾಹಿತ್ಯದ ಸ್ಪಷ್ಟತೆಯನ್ನು ಅರಿತುಕೊಂಡು ಗಟ್ಟಿಯಾಗಿ ಕಾವ್ಯವನ್ನು ಓದುವಂತಹುದು ವಿದ್ಯಾರ್ಥಿಗಳಿಗೆ ಪದ್ಯಗಳನ್ನು ಕಲಿಯಲು ತುಂಬಾ ಅನುಕೂಲವಾಗುತ್ತದೆ” ಎಂದು ಹೇಳಿದರು. ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ಚಂದ್ರ ಇವರು ವಿದ್ಯಾರ್ಥಿಗಳು ಈ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಜಯಂತಿ ಅವರು ಸ್ವಾಗತಿಸಿ, ವಂದನಾರ್ಪಣೆಯನ್ನು ಮಾಡಿದರು. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಗಮಕವನ್ನು ಆಸ್ವಾದಿಸಿದರು. ಪಠ್ಯ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಏರ್ಪಡಿಸಿದ 34ನೇ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ದಿನಾಂಕ 20 ಆಗಸ್ಟ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ಶಾಲಾ ಕಾಲೇಜುಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ವೈಭವಯುತವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೊ. ಅರುಣಾ ಕಾಮತ್ “ರಾಜ್ಯಭಾಷೆ ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾದರೆ ಕೊಂಕಣಿಯ ವಿಶೇಷತೆ ಏನೆಂದರೆ ಅದು ಇಡೀ ಕೊಂಕಣ ಪ್ರದೇಶಕ್ಕೆ ಅನ್ವಯಿಸುವ ಭಾಷೆ. ಸಾವಿರಾರು ಭಾಷೆ, ಉಪಭಾಷೆಗಳಿರುವ ಭಾರತದಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಅಧಿಕೃತ ಭಾಷೆಯ ಸ್ಥಾನಮಾನವಿದೆ. ಅದರಲ್ಲಿ ಕೊಂಕಣಿ ಒಂದು ಎಂಬ ಅಭಿಮಾನ ನಮ್ಮದು. ಹಲವಾರು ಕಠಿಣ ನಿಬಂಧನೆಗಳನ್ನು ದಾಟಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ನಮ್ಮ ಹಿರಿಯರು ಶ್ರಮಿಸಿದ್ದಾರೆ. ಇಂದು ಕರ್ನಾಟಕದಲ್ಲಿ ಕೊಂಕಣಿ ಕಲಿಕೆಗೆ, ಸ್ನಾತಕೋತ್ತರ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಅವಕಾಶವಿದೆ. ಅದನ್ನು ಬಳಸಬೇಕು ಹಾಗೂ ಇದು ತಂತ್ರಜ್ಞಾನ…

Read More

ಧಾರವಾಡ : ಧಾರವಾಡ ರಂಗಾಯಣ ಆವರಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿನಾಂಕ 22 ಅಗಸ್ಟ್ 2025 ರವಿವಾರ ಸಂಜೆ ನಡೆದ ಶ್ರಾವಣದ ಕವಿ ಬೇಂದ್ರೆ ವಾಚನ – ಗಾಯನ – ನೃತ್ಯ ಒಂದು ಅಭೂತಪೂರ್ವ ಕಾರ್ಯಕ್ರಮ ಎನಿಸಿ ಹೊಸದೊಂದು ದಾಖಲೆ ಬರೆಯುವಲ್ಲಿ ಯಶಸ್ವಿಯಾಯಿತು. ವೇದಿಕೆಯಲ್ಲಿ ಬೇಂದ್ರೆಯವರು ಮಾತ್ರ ಇದ್ದರು. ಅವರ ಭಾವಚಿತ್ರ ಮಾತ್ರ ಅಲ್ಲಿತ್ತು. ಕುರ್ಚಿಗಳು ಇರಲಿಲ್ಲ. ಸಂಘಟಕರು, ಉದ್ಘಾಟಕರು ಎಲ್ಲರೂ ವೇದಿಕೆಯ ಎದುರಿಗೆ ಪ್ರೇಕ್ಷಕರ ನಡುವೆ ಆಸೀನರಾಗಿದ್ದರು. ವೇದಿಕೆಯ ಬ್ಯಾನರ್ ಅತ್ಯಂತ ಸೊಗಸಾಗಿ ಕಂಗೊಳಿಸುತ್ತಿತ್ತು. ಬೇಂದ್ರೆಯವರ ವಿವಿಧ ಭಾವಚಿತ್ರಗಳು ಮತ್ತು ಹಸ್ತಾಕ್ಷರ ಪದೇ ಪದೇ ಲಕ್ಷಕೊಟ್ಟು ನೋಡುವಂತೆ ಆಕರ್ಷಣೀಯವಾಗಿದ್ದವು. ಮನೋಹರ ಗ್ರಂಥಮಾಲೆ, ಜಿ.ಬಿ. ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಮಹಿಪತಿ ಸಾಂಸ್ಕೃತಿಕ ಕೇಂದ್ರ, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಸ್ನೇಹ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬರೀ ಯುವಕರು ಮಾತ್ರ ಶ್ರಾವಣದ ಕವಿ ಬೇಂದ್ರೆಯವರ ಕವನಗಳನ್ನು ವಾಚಿಸಿದರು, ಹಾಡಿದರು, ನೃತ್ಯ ರೂಪದಲ್ಲಿ ಪ್ರಸ್ತುತ ಪಡಿಸಿದರು. ಡಾ. ಕೃಷ್ಣ ಕಟ್ಟಿಯವರು…

Read More

ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಬಳಗ ಕೊಡಗು ಜಿಲ್ಲೆ ಮತ್ತು ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಇವರ ಸಹಯೋಗದಲ್ಲಿ ದಿನಾಂಕ 31 ಆಗಸ್ಟ್ 2025ರ ಭಾನುವಾರದಂದು ಬೆಳಿಗ್ಗೆ 10-00 ಗಂಟೆಗೆ ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ‘ಗಣೇಶೋತ್ಸವ ಕವಿಗೋಷ್ಠಿ, ಕೃತಿ ಲೋಕಾರ್ಪಣೆ, ಗೀತಗಾಯನ ಹಾಗೂ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವು ನಡೆಯಲಿದೆ. ಮೈಸೂರಿನ ಖ್ಯಾತ ಕವಿಗಳಾದ ಜಯಪ್ಪ ಹೊನ್ನಾಳಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಉಪ ಖಜಾನೆಯ ಅಧೀಕ್ಷಕರಾದ ಗಣೇಶ್ ನಿಲುವಾಗಿಲು ಇವರ ‘ಹುಣಸೂರಿನ ಅರಸು’ ಕೃತಿಯ ಲೋಕಾರ್ಪಣೆ ಹಾಗೂ ಮೂವತ್ತಕ್ಕೂ ಹೆಚ್ಚು ಕವಿಗಳಿಂದ ಕವನ ವಾಚನ ನಡೆಯಲಿದೆ ಎಂದು ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಸಂಸ್ಥಾಪಕರಾದ ವೈಲೇಶ್ ಪಿ.ಎಸ್. ಕೊಡಗು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು 8861405738 ಅಥವಾ 98862 64430 ಸಂಖ್ಯೆಗಳಿಗೆ ಸಂದೇಶ ಅಥವಾ ಕರೆಮಾಡಿ ನೋಂದಾಯಿಸಿಕೊಳ್ಳಬಹುದು.

Read More

ಮೈಸೂರು : ಧ್ವನಿ ಫೌಂಡೇಷನ್ ಇದರ ವತಿಯಿಂದ ತಬಲಾ ತರಗತಿಯನ್ನು ಮೈಸೂರಿನ ಸೋಮನಾಥ ನಗರದಲ್ಲಿ ಆರಂಭಿಸುತ್ತಿದೆ. ಬದುಕು ಪುರುಸೊತ್ತು ಇಲ್ಲದಂತೆ ಸಾಗುತ್ತಿದೆ. ಹಳ್ಳಿಯ ಮಕ್ಕಳಿಗೆ ಹಲವು ಬಗೆಯ ಕಲಿಕೆಗಳಿಗೆ ಅವಕಾಶವಿರುವುದಿಲ್ಲ. ಆದರೆ ನಾವು ಪಟ್ಟಣದಲ್ಲಿದ್ದೇವೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಸಾಧ್ಯವಾದಷ್ಟು ಅವರನ್ನು ಕಲಾ ಚಟುವಟಿಕೆಗಳಿಗೆ ಪ್ರೇರೇಪಿಸಿ. ಅವಕಾಶ ನೀಡಿ. ಅವರ ಮಾನಸಿಕ ಆರೋಗ್ಯ ಬಹು ಮುಖ್ಯ. ಅಕಾಡೆಮಿಕ್ ಕಲಿಕೆಯ ಜೊತೆಗೆ ಒಂದು ಸಾಂಸ್ಕೃತಿಕ ಸಾಂಗತ್ಯ ದೊರಕಿದರೆ ಅವರ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳಬಹುದು. ಕಲಿಕೆ ಯಾರ ಕೈಯಲ್ಲಿ, ಹೇಗೆ ನಡೆಯುತ್ತದೆ ಎಂಬುದು ಕೂಡ ಅತ್ಯಂತ ಮುಖ್ಯ. ವಾರಾಂತ್ಯ ರಂಗ ತರಗತಿ, ತಬಲಾ, ಸಂಗೀತ, ಭರತನಾಟ್ಯ, ಚಿತ್ರಕಲೆ ಇಷ್ಟು ವಿಷಯಗಳು ಧ್ವನಿ ಫೌಂಡೇಷನ್ ಅಡಿಯಲ್ಲಿ ಆರಂಭಗೊಂಡಿವೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9483918783 ಮತ್ತು 7019188932 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಹಾಗೂ ಸಂತ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆ ಬಿಜೈ ಇವುಗಳ ಜಂಟಿ ಆಶ್ರಯದಲ್ಲಿ 113ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2025 ಶನಿವಾರ ಸಂತ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆ ಬಿಜೈಯಲ್ಲಿ ಮುಖ್ಯೋಪಾಧ್ಯಾಯರಾದ ನಿರ್ಮಲ ಸಿಲ್ವಿಯ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಹಾಗೂ ಇನ್ನರ್ವಿಲ್ ಕ್ಲಬ್ ಮಂಗಳೂರು ನಾರ್ತ್ ಮಾಜಿ ಅಧ್ಯಕ್ಷರಾದ ಗೀತಾ ಬಿ. ರೈ, ಹಿರಿಯ ಬರಹಗಾರರಾದ ಎನ್. ಸುಬ್ರಾಯ ಭಟ್ ಮತ್ತು ವಿಜಯಾ ಕರ್ನಾಟಕ ದೈನಿಕ ಪತ್ರಿಕೆಯ ಚೀಫ್ ಕಾಫಿ ಎಡಿಟರ್ ಆರ್.ಸಿ. ಭಟ್. ವೇದಿಕೆಯಲ್ಲಿ ಉಪಸ್ಥಿತರಿದರು. ಶಿಕ್ಷಕಿ ಹಾಗೂ ಲೇಖಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು.

Read More

ಉಡುಪಿ : ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಪ್ರಸ್ತುತ ಪಡಿಸುವ ‘ನೃತ್ಯಾರ್ಪಣ’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 28 ಆಗಸ್ಟ್ 2025ರಂದು ಸಂಜೆ 5-15 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ವೀಣಾ ಎಂ. ಸಾಮಗರ ಶಿಷ್ಯೆ ಕುಮಾರಿ ಅದಿತಿ ಜಿ. ನಾಯಕ್ ಇವರು ನೃತ್ಯ ಕಾರ್ಯಕ್ರಮ ನೀಡಲಿದ್ದು, ನಟುವಾಂಗ, ಹಾಡುಗಾರಿಕೆ ಮತ್ತು ನೃತ್ಯ ನಿರ್ದೇಶನದಲ್ಲಿ ವಿದುಷಿ ವೀಣಾ ಎಂ. ಸಾಮಗರ, ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಮನೋಹರ್ ರಾವ್, ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ ಆಚಾರ್ಯ ಮತ್ತು ಕೊಳಲಿನಲ್ಲಿ ಮಣಿಪಾಲದ ಡಾ. ಬಾಲಕೃಷ್ಣ ಇವರುಗಳು ಸಹಕರಿಸಲಿದ್ದಾರೆ.

Read More

ಕುಂದಾಪುರ : ಮೊಗೇರಿ ಅಡಿಗರ ಸಮಷ್ಟಿ ಬಳಗದ ವತಿಯಿಂದ ಕವಿಗಳ ಕವಿ ಗೋಪಾಲಕೃಷ್ಣ ಅಡಿಗರ ಹುಟ್ಟು ಪರಿಸರದ ಭಾಷೆ, ಬದುಕಿನ ಸೊಗಡನ್ನೊಳಗೊಂಡಿರುವ ಉತ್ತಮ ಪುಸ್ತಕಕ್ಕೆ ನೀಡಲಾಗುತ್ತಿರುವ ಮೊದಲ ಮೊಗೇರಿ ಸಮಷ್ಟಿ ವಾರ್ಷಿಕ ಪುಸ್ತಕ ಪುರಸ್ಕಾರಕ್ಕೆ ಕೆ. ಪುಂಡಲೀಕ ನಾಯಕ್ ಅವರ ‘ಭಾವ ಸ್ಮೃತಿ’ ಆತ್ಮಕಥನ ಆಯ್ಕೆ ಆಗಿದೆ ಎಂದು ಮೊಗೇರಿ ಅಡಿಗರ ಸಮಷ್ಟಿ ಬಳಗದ ಮುಖ್ಯಸ್ಥ ಎಂ. ಜಯರಾಮ ಅಡಿಗ ಇವರು ಮೊಗೇರಿ ಸ್ವಾಣಿ ಹಬ್ಬದಲ್ಲಿ ಪ್ರಕಟಿಸಿದರು. ಮೊಗೇರಿ ಸ್ವಾಣಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಕಮಲಶಿಲೆ ಪೂರ್ಣಿಮಾ ನಿರ್ದೇಶಕತ್ವದಲ್ಲಿ ಗೃಹಿಣೀ ಶಕ್ತಿ, ಮಕ್ಕಳ ಅಭಿವ್ಯಕ್ತಿ ಸರಣಿಯನ್ನು ಉದ್ಘಾಟಿಸಲಾಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಶುಭ ಹಾರೈಸಿದರು.

Read More

ಕಾಸರಗೋಡು : ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 23 ಆಗಸ್ಟ್ 2025ರಂದು ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ ‘ಕನ್ನಡದ ನಡಿಗೆ – ಶಾಲೆಯ ಕಡೆಗೆ’ ಎಂಬ 5ನೇ ಶಿಬಿರ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ವಿ. ಬಿ. ಕುಳಮರ್ವ ಮಾತನಾಡಿ “ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವ ಕಾರಣ ಅನೇಕ ಸಂಸ್ಕೃತಿಯ ಪರಿಚಯವಾಗುತ್ತದೆ. ಭಾಷೆಯಿಂದ ಸಾಹಿತ್ಯ ಬೆಳಗುತ್ತದೆ. ಸಾಹಿತ್ಯದಿಂದ ಸಂಸ್ಕಾರ ದೊರೆಯುತ್ತದೆ. ಕನ್ನಡ ಸಾಹಿತ್ಯ ಸರಸ್ವತಿಯ ಸೇವೆ ನಿರಂತರವಾಗಬೇಕು” ಎಂದು ಹೇಳಿದರು. ಶಿಬಿರವನ್ನು ಉದ್ಘಾಟಿಸಿದ ಕಾಸರಗೋಡಿನ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಮಾತನಾಡಿ “ಶಿಕ್ಷಣವು ಕೇವಲ ಅಂಕ ಗಳಿಕೆಗೆ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಗೂ ಅವಕಾಶವಾಗಬೇಕು. ಶಿಬಿರಗಳಿಂದ ಜ್ಞಾನವೃದ್ಧಿಯಾಗುತ್ತದೆ. ಕನ್ನಡ ಸಾಹಿತ್ಯವು ತಲೆಮಾರಿನಿಂದ ತಲೆಮಾರಿಗೆ ಶಕ್ತವಾಗಿ ದಾಟಬೇಕು. ಇದು ಈ ಅಭಿಯಾನದ ಮೂಲ…

Read More