Author: roovari

ಬೆಂಗಳೂರು : ವಿಧಾನ ಸೌಧದ ಆವರಣದಲ್ಲಿ ಏರ್ಪಾಡಿಸಿದ್ದ ಪುಸ್ತಕ ಮೇಳದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು’ ಎನ್ನುವ ಸಂವಾದ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ “ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ನೋಡಿದರೆ ನಮಗೆ ಕಾಣಿಸುವುದು ಸಾಮರಸ್ಯದ ಭಾವ. ವಿವಿಧ ಧರ್ಮಗಳ ಅನೋನ್ಯ ಸಂಪರ್ಕ. ಸಮಭಾವ ಮತ್ತು ಮನುಷ್ಯ ಜಾತಿ ತಾನೊಂದೆ ಎನ್ನುವ ಐಕ್ಯತೆಯ ದೃಷ್ಟಿ ಇಲ್ಲಿದೆ. ಬೂಕರ್ ಪ್ರಶಸ್ತಿಯ ಪ್ರಧಾನ ಸುತ್ತಿಗೆ ಬಾನುಮುಷ್ತಾಕ್ ಅವರ ಕೃತಿ ಪ್ರವೇಶಿಸಿರುವುದು ಹೆಮ್ಮೆ ಕನ್ನಡಿಗರಿಗೆ ಹೆಮ್ಮೆ. ರಂಜಾನ್ ನ ಪವಿತ್ರ ತಿಂಗಳಿನಲ್ಲಿ ಅವರಿಂದ ಕನ್ನಡಕ್ಕೆ ಶುಭ ಸುದ್ದಿ ದೊರಕಲಿ. ‘ಸಾಮರಸ್ಯದ ಭಾವ ಕನ್ನಡದ ಜೀವ’ ಎನ್ನುವುದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿಯೇ ಅಳವಡಿಕೆಯಾಗಿತ್ತು. ಪಂಪನು ಕನ್ನಡದ ಆದಿಕವಿ. ಸಮಾನತೆಯ ಭಾವವು ಅವನ ಕಾವ್ಯದಲ್ಲಿಯೇ ಆರಂಭವಾಯಿತು. ಇದು…

Read More

ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಇವರು ಶ್ರೀಮಂಗಲ ನಾಡು ನಾಲ್ಕೇರಿ ಗ್ರಾಮದ ಚೆಪ್ಪುಡಿರ ಮುದ್ದಪ್ಪ (ಸನ್ನು) ನಳಿನಿ ದಂಪತಿಗಳ ಪುತ್ರಿ. ಎಂ.ಎ., ಬಿ.ಇಡಿ., ಯು.ಜಿ.ಸಿ., ಎನ್.ಇ.ಟಿ., ಎಂ.ಫಿಲ್.ನೊಂದಿಗೆ ಇತ್ತೀಚೆಗೆ ತಾನೆ ಹಂಪಿ ವಿಶ್ವವಿದ್ಯಾಲಯದ ಜನಪದ ವಿಭಾಗದಲ್ಲಿ ‘ಕೊಡಗಿನ ತೆರೆ ಕಟ್ಟುವ ಆಚರಣೆಗಳ ವಿಶ್ಲೇಷಣೆ’ ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪದವಿಯನ್ನೂ ಪಡೆದಿರುತ್ತಾರೆ. ವೀರಾಜಪೇಟೆಯ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿ ಇದೀಗ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 2011ನೆಯ ಸಾಲಿನ ಫೆಲೋಶಿಪ್ ಪಡೆದಿರುತ್ತಾರೆ. ಪ್ರವೃತ್ತಿಯಲ್ಲಿ ‘ತೂಕ್ ಮೊಳಕ್’ ಕೊಡವ ವಾರಪತ್ರಿಕೆಯ ಉಪ ಸಂಪಾದಕಿಯಾಗಿದ್ದಾರೆ. ‘ಕೊಡವ ಜನಪದ ನೃತ್ಯಗಳು’ ಸಂಶೋಧನಾ ಕೃತಿ, ‘ನೆಲಂಜಪ್ಪೆ’ ಕೊಡವ ಭಾಷೆಯ ಕವನ ಸಂಕಲನ ಲೋಕಾರ್ಪಣೆ ಮಾಡಿರುತ್ತಾರೆ. ಕವನ, ಲೇಖನ, ಸಂಶೋಧನಾ ಬರಹ ಹಾಗೂ ಚುಟುಕು ರಚನೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ನಾಟಕ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಗಾಗಿ ಅರ್ಹ ಬರಹಗಾರರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ದತ್ತಿಯು ವಿಶೇಷ ದೃಷ್ಟಿಚೇತನ ಬರಹಗಾರರಿಗೆ ಮೀಸಲಾಗಿದ್ದು, ಈ ಮಾದರಿಯ ಪುರಸ್ಕಾರ ಇದೊಂದೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಯು ರಾಜ್ಯಮಟ್ಟದ ಪ್ರಶಸ್ತಿಯಾಗಿದ್ದು, ರಾಜ್ಯದ ಯಾವುದೇ ಭಾಗದ, ಹೊರನಾಡಿನ, ಹೊರದೇಶದ ಅರ್ಹ ಅಭ್ಯರ್ಥಿಗಳೂ ಕೂಡ ತಮ್ಮ ಕೃತಿಗಳನ್ನು ಕಳುಹಿಸಬಹುದು. ಕೃತಿಗಳನ್ನು 31 ಮಾರ್ಚ್ 2025ರ ಒಳಗಾಗಿ ಕೃತಿ ಮತ್ತು ಸ್ವ ಪರಿಚಯವನ್ನು ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಬೆಂಗಳೂರು-5600018 ಇಲ್ಲಿಗೆ ಕಳುಹಿಸಿ ಕೊಡಬೇಕೆಂದು ಕೋರಲಾಗಿದೆ.

Read More

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದಂಗವಾಗಿ ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಇವರನ್ನು ಅಭಿನಂದಿಸುವ ಕಾರ್ಯಕ್ರಮ ದಿನಾಂಕ 01 ಮಾರ್ಚ್ 2025 ರಂದು ಅವರ ಸ್ವ ಗೃಹದಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಡ್ಕ ಗೋಪಾಲಕೃಷ್ಣ ಭಟ್ ಹಾಗೂ ಸುಮತಿ ಕೆ. ದಂಪತಿಯನ್ನು ಅಭಿನಂದಿಸಲಾಯಿತು. ಹಿರಿಯ ತಾಳಮದ್ದಲೆ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಯತೀಶ ಕುಮಾ‌ರ್ ರೈ. ಯಕ್ಷಗಾನ ಭಾಗವತ ತಲ್ಪನಾಜಿ ವೆಂಕಟ್ರಮಣ ಭಟ್, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಭಟ್, ಪ್ರೇಮಲತಾ ಕೆ., ಕೃಷ್ಣ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಉಪಸ್ಥಿತರಿದ್ದರು.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 60’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 09 ಮಾರ್ಚ್ 2025ರಂದು ಬೆಳಗ್ಗೆ 6-00 ಗಂಟೆಗೆ ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಲಿದೆ. ಹೊಸಬೆಟ್ಟುವಿನ ಎಚ್. ಯಜ್ಞೇಶ ಆಚಾರ್ಯ ಮತ್ತು ಸುರತ್ಕಲ್ ಶ್ರೀಮತಿ ಪವಿತ್ರಾ ಮಯ್ಯ ಇವರ ಹಾಡುಗಾರಿಕೆಗೆ ಸುರತ್ಕಲ್ಲಿನ ಪ್ರಸನ್ನ ಕುಮಾರ್ ಇವರು ವಯಲಿನ್, ಸತೀಶ್ ಇವರು ಹಾರ್ಮೋನಿಯಂ ಮತ್ತು ಶ್ರೀ ಪ್ರಥಮ್ ಕುಮಾರ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ನಿಡಸೋಸಿ ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ…

Read More

ಬೆಂಗಳೂರು : ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ (ರಿ.) ಬೆಂಗಳೂರು ಹಾಗೂ ಶೇಷಾದ್ರಿಮರಂ ಸಂಜೆ ಪದವಿ ಕಾಲೇಜು, ಗೋಧೂಳಿ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ದ್ವಾರನಕುಂಟೆ ಪಾತಣ್ಣ 75ರ ಸಂಭ್ರಮ ಹಾಗೂ ‘ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 14 ಮಾರ್ಚ್ 2025ರ ಶುಕ್ರವಾರದಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣ ದತ್ತಿಯ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಕಾದಂಬರಿಕಾರರಾದ ಶ್ರೀ ದ್ವಾರನಕುಂಟೆ ಪಾತಣ್ಣ ಇವರ ಗೌರವ ಉಪಸ್ಥಿತಿ ಹಾಗೂ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಬಿ. ಎಂ. ಹನೀಫ್ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಇವರು ಶ್ರೀ ತುಂಬಾಡಿ ರಾಮಯ್ಯ ಹಾಗೂ ಶ್ರೀ ಗುರುಪ್ರಸಾದ್ ಕಂಟಲಗೆರೆ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಇದರ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಭಾಗವಹಿಸಲಿದ್ದಾರೆ.…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಆಬೊಲಿಂ’ ಮಹಿಳಾ ಕವಿಗೋಷ್ಠಿ, ದಿನಾಂಕ 07 ಮಾರ್ಚ್ 2025ರಂದು ಸಂಜೆ ಘಂಟೆ 4.00ರಿಂದ ಮಂಗಳೂರಿನ ಕೊಂಕಣಿ ಅಕಾಡೆಮಿ ಕಚೇರಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಸುಚಿತ್ರಾ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ‘ನಮ್ಮ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ ಅಂದು ಇಂದು’ ವಿಷಯದ ಬಗ್ಗೆ ಆಪ್ತ ಸಮಾಲೋಚಕಿ ಡಾ. ಜೂಡಿ ಪಿಂಟೊ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗ್ರೇಸ್ ನೊರೊನ್ಹಾ ಅವರನ್ನು ಸಮ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಡಾ. ಆನ್ನಿ ಕ್ಯಾಸ್ತೆಲಿನೊ ಕವಿ ಗೋಷ್ಠಿ ನಡೆಸಿಕೊಡಲಿದ್ದಾರೆ.

Read More

ದೆಹಲಿ : ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಏಷ್ಯಾದ ಅತಿದೊಡ್ಡ ಅಕ್ಷರಗಳ ಹಬ್ಬ “ಫೆಸ್ಟಿವಲ್ ಆಫ್ ಲೆಟರ್ಸ್” ಕಾರ್ಯಕ್ರಮ ದಿನಾಂಕ 7 ಮಾರ್ಚ್ 2025 ರಿಂದ 12 ಮಾರ್ಚ್ 2025ರ ವರೆಗೆ ನಡೆಯಲಿದ್ದು ಇದರಲ್ಲಿ ಕನ್ನಡ, ತುಳು, ಕೊಡವ, ಬಂಜಾರ ಸಾಹಿತಿಗಳು ಪಾಲ್ಗೊಂಡಿದ್ದು, ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಲೇಖಕರಾದ ಚಂದ್ರಶೇಖರ ಕಂಬಾರ, ಪೂರ್ಣಿಮಾ ಸುರೇಶ್, ಎಚ್. ಎಸ್. ಶಿವಪ್ರಕಾಶ್, ಮನು ಬಳಿಗಾರ್, ವಿವೇಕ ಶಾನುಭಾಗ ಎಂ. ಎಸ್. ಆಶಾದೇವೀ, ಅಮರೇಶ ನುಗಡೋಣಿ, ಪದ್ಮನಿ ನಾಗರಾಜು, ಸಿದ್ದಪ್ಪ ಸಿ. ಕೊಟರಗಸ್ತಿ, ರಮೇಶ್ ಅರೋಲಿ, ಕೇಶವ ಮಳಗಿ, ರೇಣುಕಾ ರಮಾನಂದ, ಜಯಶ್ರೀ ಕಂಬಾರ್, ಶೋಭಾ ನಾಯ್ಕ, ಸಿದ್ಧರಾಮ ಹೊನ್ನಲ್, ಚಂದ್ರಶೇಖರ ತಾಳ್ಯ, ಬೇಲೂರು ರಘುನಂದನ್, ಶಶಿ ತರೀಕೆರೆ, ಸಹನಾ ವಿಜಯಕುಮ‌ರ್, ಎ. ರೇವತಿ ತುಳು ಲೇಖಕಿಯರಾದ ಅಕ್ಷತಾ ರಾಜ್ ಪೆರ್ಲ, ಅತ್ರಾಡಿ ಅಮೃತಾ ಶೆಟ್ಟಿ, ಕೊಡವ ಭಾಷೆ ಲೇಖಕಿಯರಾದ ಎಂ. ಪಿ. ರೇಖಾ, ಮುಳ್ಳಂಗದ ರೇವತಿ ಪೂವಯ್ಯ ಹಾಗೂ ಬಂಜಾರ ಲೇಖಕರಾದ…

Read More

ಉಡುಪಿ : ಶ್ರೀ ಉಡುಪಿ ಮಾಧವ ಬಲ್ಲಾಳ್ ಇವರಿಗೆ ಗೌರವಾರ್ಪಣೆ ಪ್ರಯುಕ್ತ ‘ಭಕ್ತಿ ಸಂಗೀತ’ ಮತ್ತು ‘ನೃತ್ಯ ರೂಪಕ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025 ರಂದು ಸಂಜೆ 5-00 ಗಂಟೆಗೆ ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಂಜೆ 5-00 ಗಂಟೆಗೆ ಶ್ರೀಮತಿ ಮಾನಸ ತಂತ್ರಿ, ಶ್ರವಣ್ ಉಪಾಧ್ಯಾಯ, ಕುಮಾರಿ ಶ್ರದ್ಧಾ, ಕುಮಾರಿ ಸ್ಮೃತಿ, ಕುಮಾರಿ ರಕ್ಷಾ ಮತ್ತು ಇತರರಿಂದ ನಡೆಯುವ ಭಕ್ತಿ ಸಂಗೀತಕ್ಕೆ ಬಾಲಚಂದ್ರ ಭಾಗವತ ಮೃದಂಗದಲ್ಲಿ ಮತ್ತು ಕುಮಾರಿ ಧನಶ್ರೀ ಶಬರಾಯ ವಯೋಲಿನ್ ನಲ್ಲಿ ಸಹಕರಿಸಲಿದ್ದಾರೆ. 6-30 ಗಂಟೆಗೆ ನೃತ್ಯ ನಿಕೇತನ ಕೊಡವೂರು ತಂಡ ದವರಿಂದ ‘ನಾರಸಿಂಹ’ ನೃತ್ಯ ರೂಪಕ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ತುಳು ಕೂಟ (ರಿ) ಕುಡ್ಲ ಇದರ ವತಿಯಿಂದ ‘ಬಂಗಾರ್ ಪರ್ಬ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತಿಶೇಷ ಮರೋಳಿ ಬಿ. ದಾಮೋದರ ನಿಸರ್ಗ ವೇದಿಕೆಯಲ್ಲಿ ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ತುಳು ವರ್ಲ್ಡ್ ಫೌಂಡೇಶನ್ ಇವರಿಂದ ‘ಪಾಡ್ದನ ಮೇಳ’. ಮಾನ್ಯ ವಿಧಾನ ಸಭಾ ಸಭಾಪತಿಗಳಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ದೀಪ ಪ್ರಜ್ವಲನೆಗೈಯ್ಯಲಿರುವರು. ಅಪರಾಹ್ನ 11-30 ಗಂಟೆಗೆ ತುಳು ವಿಚಾರಗೋಷ್ಠಿ, 1-00 ಗಂಟೆಗೆ ‘ಯಕ್ಷಮಣಿ’ ಮಹಿಳಾ ತಾಳಮದ್ದಳೆ, ಮಧ್ಯಾಹ್ನ ಗಂಟೆ 2-15ಕ್ಕೆ ಬೆಂಗಳೂರಿನ ‘ಐಲೇಸಾ’ – ದ ವಾಯ್ಸ್ ಆಫ್ ಓಷ್ಯನ್’ ಇವರಿಂದ ‘ತುಳು ಸಾಂಸ್ಕೃತಿಕ ರಂಗು’ ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಂ. ರತ್ನಕುಮಾರ್ ಇವರಿಗೆ ‘ಕೀರ್ತಿಶೇಷ ಮರೋಳಿ ಬಿ. ದಾಮೋದರ ನಿಸರ್ಗ…

Read More