Subscribe to Updates
Get the latest creative news from FooBar about art, design and business.
Author: roovari
ಕುಶಾಲನಗರ : ಖ್ಯಾತ ಕಾದಂಬರಿಕಾರರೂ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರೂ ಆದ ಎಸ್.ಎಲ್. ಭೈರಪ್ಪ ಅವರ ಅಗಲುವಿಕೆಯ ಕುರಿತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಿರಿ ಬಳಗದ ವತಿಯಿಂದ ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜಂಟಿಯಾಗಿ ದಿನಾಂಕ 26 ಸೆಪ್ಟೆಂಬರ್ 2025ರಂದು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಾಹಿತ್ಯಾಭಿಮಾನಿಗಳು ಕಂಬನಿ ಮಿಡಿದರು. ಕಾದಂಬರಿಕಾರ ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಕಾಲ ಮೌನಾಚರಣೆ ನಡೆಸಿ ನುಡಿನಮನ ಸಲ್ಲಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ “ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದ ಎಸ್.ಎಲ್. ಭೈರಪ್ಪ ತಮ್ಮ ಕಾದಂಬರಿ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ, ಅವರ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿರುವುದು ಅವರ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿದೆ” ಎಂದರು. ಜಿಲ್ಲಾ ಕ.ಸಾ.ಪ. ಸಮಿತಿಯ ಸದಸ್ಯ ಎಂ.ಎನ್. ವೆಂಕಟನಾಯಕ್ ಮಾತನಾಡಿ “ವಂಶವೃಕ್ಷ, ದಾಟು, ತಂತು ಮುಂತಾದ ಪ್ರಮುಖ ಕಾದಂಬರಿಗಳ…
ಉದ್ಯಾವರ : ಶ್ರೀ ಗಣೇಶ ಕಲಾಮಂದಿರ (ರಿ.) ಉದ್ಯಾವರ, ಸಾರ್ವಜನಿಕ ಶ್ರೀ ಶಾರದೋತ್ಸವದ ಸಮಿತಿ ಉದ್ಯಾವರ ಆಶ್ರಯದಲ್ಲಿ ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇವರು ಪ್ರಸ್ತುತ ಪಡಿಸುವ ‘ಕಾಲಚಕ್ರ’ ನಾಟಕ ಪ್ರದರ್ಶನವನ್ನು ದಿನಾಂಕ 30 ಸೆಪ್ಟೆಂಬರ್ 2025ರಂದು ರಾತ್ರಿ 9-00 ಗಂಟೆಗೆ ಉದ್ಯಾವರ ಶಾರದೋತ್ಸವದ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರದೀಪ್ ಚಂದ್ರ ಕುತ್ಪಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶ್ರೀಪಾದ ಹೆಗಡೆ ಇವರ ಸಹ ನಿರ್ದೇಶನದಲ್ಲಿ ಪ್ರಸ್ತುತ ಗೊಳ್ಳುವ ಈ ನಾಟಕಕ್ಕೆ ಗೀತೆ ರಚನೆ ಮತ್ತು ಸಂಗೀತ ನಿರ್ದೇಶನ ಗೀತಂ ಗಿರೀಶ್, ಬೆಳಕು ನಿತಿನ್ ಪೆರಂಪಳ್ಳಿ ನೀಡಿರುತ್ತಾರೆ. ‘ಕಾಲಚಕ್ರ’ ನಮ್ಮ ನಿಮ್ಮ ಮಧ್ಯೆ ಇರುವ ಹಿರಿಜೀವಗಳು-ಕಿರಿಜೀವಗಳೇ ಈ ನಾಟಕದ ಪಾತ್ರ. ಮನೆ ಮನದ ಕಥೆ ಇಲ್ಲಿನ ವಸ್ತು. ಕಾಲಾಂತರದಲ್ಲಿ ತಲೆಮಾರುಗಳ ಮಧ್ಯೆ ಬೆಸೆಯುವ ಮೌಲ್ಯಗಳು, ಬದುಕಿನ ವಿವಿಧ ಸ್ತರದಲ್ಲಿ ಕಾಣುವ ಅನಿವಾರ್ಯತೆ, ಮರುಕಳಿಸುವ ನೆನಪುಗಳು, ನಂಬುಗೆ – ನಡವಳಿಕೆಯ ತಾಕಲಾಟ, ಪ್ರತಿಯೊಬ್ಬರಿಗೂ ನಿಚ್ಚಳವಾಗಿ ಬಂದೇ ಬರುವ ಪ್ರೀತಿಯ…
ಮಂಗಳೂರು : ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಗ್ರಂಥಾಲಯ ವಿಭಾಗ ಮತ್ತು ಕನ್ನಡ ವಿಭಾಗದ ವತಿಯಿಂದ ಡಾ. ಎಸ್.ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ 26 ಸೆಪ್ಟೆಂಬರ್ 2025ರಂದು ನಡೆಯಿತು. ಪ್ರಾಂಶುಪಾಲರಾದ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಗೌರವಾರ್ಪಣೆ ಮಾಡಲಾಯಿತು. “ಸರಳ ವ್ಯಕ್ತಿತ್ವ ಮನುಷ್ಯರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇದಕ್ಕೆ ಭೈರಪ್ಪನವರು ಉತ್ತಮ ಉದಾಹರಣೆ” ಎಂದು ಪ್ರಾಂಶುಪಾಲರು ನುಡಿನಮನಗಳನ್ನು ಅರ್ಪಿಸಿದರು. ಕನ್ನಡ ವಿಭಾಗದ ಡಾ. ಶೈಲಜಾ ಕೆ. ಇವರು ಭೈರಪ್ಪನವರ ಜೀವನ ಮತ್ತು ಸಾಹಿತ್ಯ ಸೇವೆಯನ್ನು ಕುರಿತು ಮಾತನಾಡಿದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಅನುಶ್ರೀಯವರು ತಾವು ಓದಿದ ಭೈರಪ್ಪನವರ ಕೃತಿಗಳ ಬಗ್ಗೆ ವಿವರಿಸಿ, ಅವರ ವಿಶೇಷ ವ್ಯಕ್ತಿತ್ವ ಕುರಿತು ವಿವರಿಸಿದರು. ಗ್ರಂಥಪಾಲಕಿಯಾದ ಡಾ. ವಿಶಾಲಾ ಬಿ.ಕೆ.ಯವರು ಮಾತನಾಡಿ “ಭೈರಪ್ಪನರಂತ ಸಾಹಿತಿಗಳಿಂದಾಗಿ ಕನ್ನಡ ಸಾಹಿತ್ಯ ಲೋಕ ಉತ್ತುಂಗಕ್ಕೇರಲು ಸಾಧ್ಯವಾಯಿತು” ಎಂದರು. ಕನ್ನಡ ವಿಭಾಗದ ಡಾ. ಬಸ್ತಿಯಂ ಪಾಯ್ಸ್…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜ್ ಚೇಳ್ಯಾರು ಸಹಬಾಗಿತ್ವದಲ್ಲಿ ನಡೆದ ‘ನಲ್ಮೆ ಬಲ್ಮೆ’ ವಿದ್ಯಾರ್ಥಿಗಳಿಗಾಗಿ ಮೂರು ದಿನದ ರಂಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ರಂಗ ಪ್ರದರ್ಶನದೊಂದಿಗೆ ದಿನಾಂಕ 26 ಸೆಪ್ಟೆಂಬರ್ 2025ರಂದು ನಡೆಯಿತು. ಮುಖ್ಯ ಅತಿಥಿ ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ “ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರತಿಭೆಯಿದ್ದು, ಅದರ ಅಭಿವ್ಯಕ್ತಿಗೆ ರಂಗ ತರಬೇತಿ ಉತ್ತಮ ಅವಕಾಶವಾಗಿದ್ದು ಉತ್ತಮ ಕಲಾವಿದರು ಮೂಡಿಬರಬೇಕು” ಎಂದು ಆಶಿಸಿದರು. ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ. ರಾಜಮೋಹನ ರಾವ್ ಮಾತನಾಡಿ “ಪಠ್ಯ ಪೂರಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದೆ ಇರುತ್ತಾರೆ” ಎಂದರು. ಎಂ.ಆರ್.ಪಿ.ಎಲ್. ಸಂಸ್ಥೆಯ ನಿವೃತ್ತ ಪ್ರಬಂಧಕಿ ಹಾಗು ಲೇಖಕಿ ವೀಣಾ ಶೆಟ್ಟಿಯವರು “ನಲ್ಮೆ ಬಲ್ಮೆಯಂತಹ ತರಬೇತಿ ಕಾರ್ಯಕ್ರಮಗಳಿಂದ ಸುಪ್ತವಾಗಿರುವ ಪ್ರತಿಭೆಗಳು ಪ್ರಕಟವಾಗಲು ಸಾಧ್ಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಿಂಗಾರ…
ಸುಬ್ರಹ್ಮಣ್ಯ : ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಳದಲ್ಲಿ ದಿನಾಂಕ 26 ಸೆಪ್ಟೆಂಬರ್ 2025ರಂದು ನಡೆದ ನವರಾತ್ರಿ ಪರ್ವ ಸಮಯದ ವೇದಿಕೆಯಲ್ಲಿ ಯಕ್ಷ ಕಲಾವಿದ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರಿಗೆ ಕಲಾವಿದ ಗೌರವವನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಮೊಕ್ತೇಸರ ಪಿ. ಮಹಾಬಲ ಚೌಟ “ಕಲಾವಿದನಾಗಿ ಯಕ್ಷರಂಗವನ್ನು ಆಳಬೇಕಾದರೆ ಆಳವಾದ ಅಧ್ಯಯನ ಮಾಡಬೇಕಾಗುತ್ತದೆ. ಅದನ್ನು ತನ್ನ ಬಾಲ್ಯದಿಂದಲೇ ಸಾಧಿಸಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆಯವರು ಇಂದು ಪಾತ್ರ ತನ್ಮಯತೆಯ ಮೂಲಕ ರಂಗರಸನಾಗಿ ಮೆರೆಯುತ್ತಿದ್ದಾರೆ. ಶರನ್ನವರಾತ್ರಿಯ ಈ ಶುಭಾವಸರದಲ್ಲಿ ಇಂತಹಾ ಮೇರು ಕಲಾವಿದನನ್ನು ಗೌರವಿಸಲು ನಾವು ಹೆಮ್ಮೆಪಡುತ್ತೇವೆ. ಮುಂದೆಯೂ ಇದೇ ರೀತಿಯ ಗೌರವ, ಕೀರ್ತಿಗಳನ್ನು ಹೊಂದಿಕೊಂಡು ರಾರಾಜಿಸುವಂತಾಗಲು ಶ್ರೀದೇವಿ ಹರಸಲಿ” ಎಂದು ಹೇಳಿದರು. ನಿರೂಪಕ, ಕಲಾವಿದ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ವಿಜಯಲಕ್ಷ್ಮೀ ಎಲ್. ನಿಡ್ವಣ್ಣಾಯ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿಗಳಾದ ಮೋಹನ್ ಶೆಟ್ಟಿ, ಸುನಿಲ್ ಪಾಲ್ದಡಿ, ಲೋಕೇಶ್ ಗುರಿಕಂಡ, ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷರು ಮತ್ತು ಸದಸ್ಯರು…
ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಟ್ಟಣದ ಬಿಲಿವಿಯರ್ಸ್ಲ ಚರ್ಚಿನಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಅಗಲಿಕೆಯ ಹಿನ್ನೆಲೆಯಲ್ಲಿ ದಿನಾಂಕ 26 ಸೆಪ್ಟೆಂಬರ್ 2025ರಂದು ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ “ಕನ್ನಡ ಸಾಹಿತ್ಯದ ಕಾದಂಬರಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಶ್ರೇಷ್ಠಾತಿಶ್ರೇಷ್ಠ ಕೃತಿಗಳನ್ನು ನೀಡುವುದರ ಮೂಲಕ ಕನ್ನಡದ ಅದರಲ್ಲೂ ಹಾಸನದ ನೆಲದನಿಯ ಕಂಪನ್ನು ರಾಜ್ಯ, ದೇಶ, ಹೊರದೇಶಗಳಲ್ಲಿಯೂ ಪಸರಿಸುವುದರ ಮುಖೇನ ನಾಡುನುಡಿಗೆ ಕೀರ್ತಿ ತಂದ ಅಪ್ರತಿಮ ಬರಹಗಾರ ಎಸ್.ಎಲ್. ಭೈರಪ್ಪ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರದಲ್ಲಿ ಜನಿಸಿ ಬಾಲ್ಯದಲ್ಲಿಯೇ ಕಡುಕಷ್ಟದಲ್ಲಿ ಬೆಳೆದು ಉನ್ನತವ್ಯಾಸಂಗಗೈದು ಮೈಸೂರಿಗೆ ತೆರಳಿ ನೆಲೆನಿಂತು ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾದಂಬರಿ ವಿಭಾಗದಲ್ಲಿ ಉತ್ತಮೋತ್ತಮ ಕೃತಿಗಳನ್ನು ನೀಡುವುದರ ಮುಖೇನ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಇವರ ‘ನಾಯಿ ನೆರಳು’, ‘ವಂಶವೃಕ್ಷ’, ‘ಮತದಾನ’, ‘ತಬ್ಬಲಿಯು ನೀನಾದೆ ಮಗನೆ’…
ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ವತಿಯಿಂದ ಕೊಡ ಮಾಡುವ 2025ರ ಸಾಲಿನ ‘ಆದಿಕವಿ ಪುರಸ್ಕಾರ’ಕ್ಕೆ ಪ್ರೊ. ಎಲ್.ವಿ. ಶಾಂತಕುಮಾರಿ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಅರಬಗಟ್ಟೆ ಅಣ್ಣಪ್ಪನವರು ಆಯ್ಕೆಯಾಗಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕದ ವತಿಯಿಂದ ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯ ದೃಷ್ಟಿಕೋನವುಳ್ಳ ಹಿರಿಯ ಸಾಹಿತ್ಯ ಸಾಧಕರಿಗೆ ‘ಆದಿಕವಿ ಪುರಸ್ಕಾರ’ವನ್ನೂ, ಕಿರಿಯ ಸಾಹಿತ್ಯ ಸಾಧಕರಿಗೆ ‘ವಾಗ್ದೇವಿ ಪುರಸ್ಕಾರ’ ನೀಡಲಾಗುತ್ತಿದೆ. ಅದರಂತೆ ಈ ಬಾರಿ ಆದಿಕವಿ ಪುರಸ್ಕಾರಕ್ಕೆ ಪ್ರೊ. ಎಲ್.ವಿ. ಶಾಂತಕುಮಾರಿ ಹಾಗೂ ‘ವಾಗ್ದೇವಿ ಪುರಸ್ಕಾರ’ಕ್ಕೆ ಅರಬಗಟ್ಟೆ ಅಣ್ಣಪ್ಪನವರು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವನ್ನು ಜಿ.ಕೆ. ಗ್ರೂಪ್ ಉದ್ಯಮಿ ಎಸ್. ಜಯರಾಮ್, ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ. ಹರೀಶ್ ಪ್ರಯೋಜಿಸಿದ್ದು, ದಿನಾಂಕ 12 ಅಕ್ಟೋಬರ್ 2025ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ. ಈ ಎರಡು ಪ್ರಶಸ್ತಿಯು ತಲಾ । ಲಕ್ಷ ರೂ.ನಗದು ಹಾಗೂ ಫಲಕವನ್ನು ಹೊಂದಿದೆ. ಆದಿಕವಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪ್ರೊ. ಎಲ್.ವಿ. ಶಾಂತಕುಮಾರಿಯವರು,…
ಕಲಬುರಗಿ : ಕರ್ನಾಟಕ ರಂಗಾಯಣ ಕಲಬುರಗಿ ಇದರ ವತಿಯಿಂದ ‘ರಂಗ ದಸರಾ’ ಮೂರು ದಿನಗಳ ನಾಟಕೋತ್ಸವವನ್ನು ದಿನಾಂಕ 27, 28 ಮತ್ತು 29 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 27 ಸೆಪ್ಟೆಂಬರ್ 2025ರಂದು ಈ ನಾಟಕೋತ್ಸವವನ್ನು ಮಾನ್ಯ ಜಿಲ್ಲಾಧಿಕಾರಿ ಕು. ಬಿ. ಫೌಜಿಯಾ ತರನ್ನುಮ್ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರಂಗಾಯಣ ಕಲಬುರಗಿ ಇದರ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯನಗರ ಜಿಲ್ಲೆಯ ಹನುಮಯ್ಯ ಕಲಾ ತಂಡ ಇವರಿಂದ ರಂಗಗೀತೆಗಳು ಮತ್ತು ಕಲಬುರಗಿಯ ವಿಶ್ವರಂಗ (ರಿ.) ತಂಡದವರಿಂದ ಡಾ. ವಿಶ್ವರಾಜ ಪಟೇಲ್ ಇವರ ನಿರ್ದೇಶನದಲ್ಲಿ ‘ಭರ್ಜರಿ ಭಾಗ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 28 ಸೆಪ್ಟೆಂಬರ್ 2025ರಂದು ಮರಿಯಮ್ಮನಹಳ್ಳಿ ರಂಗ ಬಿಂಬ (ರಿ.) ತಂಡದವರಿಂದ ಬಿ.ಎಂ.ಎಸ್. ಪ್ರಭು ಇವರ ನಿರ್ದೇಶನದಲ್ಲಿ ‘ಸಂಗ್ಯಾ ಬಾಳ್ಯ’ ನಾಟಕ ಪ್ರಸ್ತುತಗೊಳ್ಳಲಿದೆ. ದಿನಾಂಕ 29 ಸೆಪ್ಟೆಂಬರ್ 2025ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು…
ಮೂಡುಬಿದಿರೆ : ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಅಗಲಿದ ಚೇತನ ಸಾಹಿತಿ ಎಸ್.ಎಲ್. ಭೈರಪ್ಪರಿಗೆ ನುಡಿನಮನ ಕಾರ್ಯಕ್ರಮ ದಿನಾಂಕ 25 ಸೆಪ್ಟೆಂಬರ್ 2025ರಂದು ನಡೆಯಿತು. ವಿದ್ಯಾರ್ಥಿಗಳಾದ ಪ್ರಶಾಂತ್, ವೀರಭದ್ರ ಹಾಗೂ ಪ್ರಾಧ್ಯಾಪಕರಾದ ಡಾ. ಯೋಗೀಶ ಕೈರೋಡಿ, ಹರೀಶ್ ಟಿ.ಜಿ., ಡಾ. ಗಾಳಿಮನೆ ವಿನಾಯಕ ಭಟ್ ನುಡಿನಮನ ಸಲ್ಲಿಸಿದರು.
ಬೆಂಗಳೂರು : ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ. ಪ್ರವರ ಥಿಯೇಟರ್ ಪ್ರಸ್ತುತಿ ‘ಅಣ್ಣನ ನೆನವು’ ಸಾಕ್ಷ್ಯ ನಾಟಕ ಈಗಾಗಲೇ…