Author: roovari

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದಿಂದ ನೀಡಲಾಗುವ 2024ನೇ ಸಾಲಿನ ನಾಗಮಣಿ ಎಸ್. ರಾವ್ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಎಚ್.ಎಲ್. ಸೀತಾದೇವಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ.10,000/- ನಗದು ಹಾಗೂ ಸ್ಮರಣಿಕೆಗಳನ್ನೊಳಗೊಂಡಿರುತ್ತದೆ. ದಿನಾಂಕ 11 ಆಗಸ್ಟ್ 2024ರಂದು ಬಸವನಗುಡಿಯ ಅಬಲಾಶ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮಾಧ್ಯಮ ಅಕಾಡಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು ‘ಮಹಿಳೆ: ಪತ್ರಿಕೋದ್ಯಮ ಮತ್ತು‌ ಸೃಜನಶೀಲ ಸಾಹಿತ್ಯ’ ಎಂಬ ವಿಷಯದ ಕುರಿತು ವಿಶೇಷ ದತ್ತಿ ಉಪನ್ಯಾಸ ನೀಡಲಿರುವರು. ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್. ರಾವ್. ಅವರು ಆಕಾಶವಾಣಿಯಲ್ಲಿ ಸುಧೀರ್ಘಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆಯೂ ಆಗಿದ್ದ ಇವರು ಸಂಘದಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕನ್ನಡ ಪತ್ರಿಕಾ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪತ್ರಕರ್ತೆಯೊಬ್ಬರನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಬೇಕೆಂಬುದು ಇವರ ಆಶಯವಾಗಿದೆ. ಈ ಪ್ರಕಾರ…

Read More

ಬೆಂಗಳೂರು : ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಹಾಗೂ ಶ್ರೀ ರಾಮ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಈಸ್ಟ್ ಎಂಡ್ ರಾಮ ಮಂದಿರದಲ್ಲಿ 3 ಆಗಸ್ಟ್ 2024ರಂದು ಒಕ್ಕೂಟದ ಗೌರವಾಧ್ಯಕ್ಷರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರ ಇವರ ಗಾಯನ ಕಛೇರಿ ನಡೆಯಿತು. ಶ್ರೀಯುತರು ಅಟತಾಳದ ಕಾನಡ ರಾಗದ ವರ್ಣದೊಂದಿಗೆ ಪ್ರಾರಂಭಿಸಿದ ಕಛೇರಿ ಹಂಸಧ್ವನಿ ರಾಗದ ಮುತ್ತಯ್ಯ ಭಾಗವತರ ಗಂಗಣಪತೆ, ಮಾಯಮಾಳವಗೌಳ ರಾಗದ ತುಳಸೀದಳ ಮತ್ತು ದೇವಮನೋಹರಿ ರಾಗದ ಪಲುಕವದೇಮಿರಾ ಕೃತಿಯ ಮೂಲಕ ಸಭಿಕರ ಮನ ಗೆದ್ದರು. ಅಂದಿನ ಮುಖ್ಯ ರಾಗ ಶುಭಪಂತುವರಾಳಿ ರಾಗಾಲಾಪನೆ, ಮುತ್ತಯ್ಯ ಭಾಗವತರ ರಚನೆ ಮನೋನ್ಮಣಿ ಕೃತಿಯ ತನುಧನ ಮನವ ತವಕದಿ ನೀಡಿ ಚರಣ ಭಾಗದ ನೆರವಲ್ ಹಾಗೂ ವಿಸ್ತಾರವಾದ ಸ್ವರ ಕಲ್ಪನೆ ಸಭಿಕರ ಕರತಾಡನಕ್ಕೆ ಸಾಕ್ಷಿಯಾಯಿತು. ಲೋಕ ಪ್ರಿಯ ಮೃದಂಗ ಹಿರಿಯ ವಿದ್ವಾಂಸರಾದ ಸುಬ್ರಹ್ಮಣ್ಯ ಮೋಹಿತೆಯವರು, ಖಂಜೀರ ರಾಹುಲ್ ಮತ್ತು ಬೆಟ್ಟ ವೆಂಕಟೇಶ್ ಮೋರ್ಚಿಂಗ್ ಇವರ ತನಿ ಆವರ್ತನ ತುಂಬಾ ಸೊಗಸಾಗಿ ಮೂಡಿ…

Read More

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಇದರ ಸಲುವಾಗಿ ಲೇಖಕರು ಅರೆಭಾಷೆಯಲ್ಲಿ ಕಥೆ, ಕವನ, ಲೇಖನ, ಅಜ್ಜಿ ಕಥೆ, ಜಾನಪದ, ವಿಚಾರ ಸಾಹಿತ್ಯ, ಲಲಿತ ಪ್ರಬಂಧ ಹಾಗೂ ಸಂಶೋಧನ ಕೃತಿಗಳನ್ನು ಅರೆಭಾಷೆ ಬರಹದಲ್ಲಿ ಬರೆದು ಅಕಾಡೆಮಿಗೆ ಸಲ್ಲಿಸುವಂತೆ ಕೋರಲಾಗಿದೆ.  ಬರಹಗಳನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜ ಸೀಟು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 6362522677 

Read More

ಕಿನ್ನಿಗೋಳಿ : ಯಕ್ಷಗಾನ ಕಲಾವಿದ, ವೇಷಭೂಷಣ ಪ್ರಸಾದನ ಕಲಾ ಪರಿಣತ, ಮೋಹಿನೀ ಕಲಾ ಸಂಪದದ ಸಂಸ್ಥಾಪಕ ಕೀರ್ತಿಶೇಷ ಟಿ. ದಾಮೋದರ ಶೆಟ್ಟಿಗಾರ್ ಇವರ 25ನೇ ವರ್ಷದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನವು ದಿನಾಂಕ 11 ಆಗಸ್ಟ್ 2024ರಂದು ಬೆಳಗ್ಗೆ 9-00 ಗಂಟೆಗೆ ಕಿನ್ನಿಗೋಳಿಯ ನೇಕಾರ ಸೌಧ ಸಭಾಭವನದಲ್ಲಿ ನಡೆಯಲಿದೆ. ಚೌಕಿ ಪೂಜೆಯ ಬಳಿಕ ಶ್ರೀ ಶರತ್ ಕುಡ್ಲ ಇವರ ನಿರ್ದೇಶನದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. (ದುಬೈ) ತಂಡದವರಿಂದ ಪೂರ್ವರಂಗ, ಬೆಳಿಗ್ಗೆ 9-00 ಗಂಟೆಗೆ ಕೀರ್ತಿಶೇಷ ಶೆಟ್ಟಿಗಾರರ ಮೊಮ್ಮಕ್ಕಳಿಂದ ‘ಚೆಂಡೆ ಪೀಠಿಕೆ ಜುಗಲ್ ಬಂದಿ’ ಪ್ರಸ್ತುತಗೊಳ್ಳಲಿದೆ. ಶ್ರೀಧರ ಡಿ.ಎಸ್. ಕಿನ್ನಿಗೋಳಿ, ಶ್ರೀ ಭುವನಾಭಿರಾಮ ಉಡುಪ, ಶ್ರೀ ಸುನಿಲ್ ಭಟ್, ಶ್ರೀ ಮಾಧವ ಶೆಟ್ಟಿಗಾರ್ ಕೆರೆಕಾಡು, ದಿನೇಶ ಶೆಟ್ಟಿ ಕೊಟ್ಟಿಂಜ, ವಿದುಷಿ ರಶ್ಮಿ ಉಡುಪ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ‘ಆಳ್ವಾಸ್ ಧೀಂಕಿಟ’ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ‘ಚೂಡಾಮಣಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 05-08-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಸಿಂಚನಾ ಬಾಯರಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕುಮಾರಿ ಸಿಂಚನಾ ಬಾಯರಿ ಇವರು ಉಡುಪಿಯ ಕೊಡಂಕೂರಿನ ಖ್ಯಾತ ಆಯುರ್ವೇದ ತಜ್ಞ ಡಾ. ಟಿ. ಶ್ರೀಧರ ಬಾಯರಿ ಹಾಗೂ ಡಾ. ಅನುಪಮ ಬಾಯರಿ ಇವರ ಸುಪುತ್ರಿ. ಇವಳು ನಾಲ್ಕು ವರ್ಷದ ವಯಸ್ಸಿನಿಂದ ವಿದುಷಿ ಮಾನಸಿ ಸುಧೀರ್ ಹಾಗೂ ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ತರಬೇತಿ ಪಡೆಯತ್ತಿದ್ದಾಳೆ. ವಿದ್ವತ್ ಪೂರ್ವ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ವರ್ಷ ವಿದ್ವತ್ ಅಂತಿಮ ಪರೀಕ್ಷೆಯನ್ನು ಬರೆಯಲಿದ್ದಾಳೆ. ಸುಮಾರು 8 ವರ್ಷದಿಂದ ನೃತ್ಯನಿಕೇತನ ಕೊಡವೂರು ತಂಡದ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾಳೆ.…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 02 ಆಗಸ್ಟ್ 2024ರಂದು ಆಯೋಜಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಆರ್. ಶ್ರೀನಿವಾಸಮೂರ್ತಿಯವರ 132ನೆಯ ಜಯಂತಿಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿಯವರು “ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿದ ಹಾಗೂ ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಮೂವರು ಶ್ರೀಗಳು ಪ್ರಮುಖರು. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ (ಬಿ.ಎಂ.ಶ್ರೀ), ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ (ತೀ.ನಂ.ಶ್ರೀ) ಮತ್ತು ಎಂ.ಆರ್. ಶ್ರೀನಿವಾಸಮೂರ್ತಿ (ಎಂ.ಆರ್.ಶ್ರೀ) ಇವರಲ್ಲಿ ಎಂ.ಆರ್. ಶ್ರೀನಿವಾಸಮೂರ್ತಿಯವರು ಕನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿ ಗ್ರಹಿಸಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಶ್ರಮಪಟ್ಟು ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ ಸಾಹಿತ್ಯಕ್ಕೆ ಎಂ.ಆರ್.ಶ್ರೀ.ಯವರದು ಬೆಲೆಯುಳ್ಳ ಕಾಣಿಕೆ. ‘ವಚನ ಧರ್ಮಸಾರ’ ಅವರ ಆಳವಾದ ವ್ಯಾಸಂಗಕ್ಕೆ, ವಿದ್ವತ್ತಿಗೆ, ಹೊಸದಾದ ಆಲೋಚನೆಗಳಿಗೆ ಸಂಕೇತವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ-ಇಂಗ್ಲೀಷ್ ನಿಘಂಟಿಗೆ ಹೊಸ ರೂಪ ನೀಡಿದ ಎಂ.ಆರ್.ಶ್ರೀ ಶಿಕ್ಷಣ ಇಲಾಖೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಾಗಿ ಮಹತ್ವದ…

Read More

ಮಂಗಳೂರು : ಕಾರ್ತಿಕ್ ಫಿಲ್ಮ್ಸ್ ವತಿಯಿಂದ ಮೂರು ದಿನಗಳ ‘ಆಕ್ಟಿಂಗ್ ಕ್ಲಾಸ್’ ಕಾರ್ಯಾಗಾರವು ದಿನಾಂಕ 16 ಆಗಸ್ಟ್ 2024ರಿಂದ 18 ಆಗಸ್ಟ್ 2024ರವರೆಗೆ ಅಶೋಕ ನಗರ ಉರ್ವಸ್ಟೋರ್ ಇಲ್ಲಿನ ತುಳು ಭವನದಲ್ಲಿ ನಡೆಯಲಿದೆ. ಈ ಕಾರ್ಯಾಗಾರವು ಪ್ರತಿದಿನ ಬೆಳಗ್ಗೆ 9-00 ಗಂಟೆಯಿಂದ ಸಂಜೆ 6-00 ಗಂಟೆ ತನಕ ನಡೆಯಲಿದ್ದು, ವಿದ್ದು ಉಚ್ಚಿಲ್ ಇವರು ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 80896 27220 ಸಂಪರ್ಕಿಸಿರಿ.

Read More

ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ರಜತ ಸಂಭ್ರಮ’ ಮಹೋತ್ಸವದ ಕಾರ್ಯಕ್ರಮವು ದಿನಾಂಕ 01 ಆಗಸ್ಟ್ 2024ರಂದು ಉಡುಪಿಯ ಯಕ್ಷಗಾನ ಕಲಾರಂಗ- ಇನ್ಫೋಸಿಸ್‌ ಫೌಂಡೇಶನ್‌ ಐ.ವೈ.ಸಿ. ಸಭಾಂಗಣದಲ್ಲಿ ಕೆ.ಆರ್‌. ರಾಘವೇಂದ್ರ ಆಚಾರ್ಯ ಮಣಿಪಾಲ ಅವರು ಪ್ರಾರ್ಥನಾ ಸ್ತುತಿಯೊಂದಿಗೆ ಪ್ರಾರಂಭವಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರ್ನಾಟಕ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಮಾತನಾಡಿ “ಭಾರತೀಯ ಕಲಾಪ್ರಕಾರಗಳು ಕೇವಲ ಮನೋರಂಜನೆಗಾಗಿ ಅಲ್ಲ, ಅವು ಭಗವಂತನ ಜೊತೆ ಅನುಸಂಧಾನ ಮಾಡುವ ಮಾಧ್ಯಮವೂ ಹೌದು. ಭಾರತದ ತಾಯಿ ಬೇರು ನಮ್ಮ ಕಲೆ, ಸಂಸ್ಕೃತಿಯ ಪರಂಪರೆಯಲ್ಲಿ ಭದ್ರವಾಗಿ ಅಡಗಿದೆ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಇಂತಹ ಸಂಸ್ಥೆಗಳಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆ ಬೇಕು ಎಂಬ ಪ್ರಜ್ಞೆ ಸಮಾಜದಲ್ಲಿ ಮೂಡುತ್ತಿರುವುದು ಸಂತಸದ ವಿಷಯ” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತರು, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ…

Read More

ಕೊಪ್ಪಳ : ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ (ರಿ.) ಕುಕನೂರು ಕೊಪ್ಪಳ ಜಿಲ್ಲೆ ಇದರ ವತಿಯಿಂದ ‘ಪುಸ್ತಕ-ಪತ್ರಿಕೆ ಸಂಸ್ಕೃತಿ ಅಭಿಯಾನ ಹಾಗೂ 8ನೆಯ ಮಕ್ಕಳ ಸಾಂಸ್ಕೃತಿಕ ಪ್ರತಿಭೋತ್ಸವ’ವು ದಿನಾಂಕ 6 ಆಗಸ್ಟ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ ಇಲ್ಲಿ ನಡೆಯಲಿದೆ. ಎಸ್.ಡಿ.ಎಂ.ಸಿ. ಇಟಗಿ ಇದರ ಅಧ್ಯಕ್ಷರಾದ ಶ್ರೀ ಲಿಂಗರಾಜ್ ಹೊಸಭಾವಿ ಇವರು ಅಧ್ಯಕ್ಷತೆ ವಹಿಸಲಿದ್ದು, ಆರ್.ಡಿ.ಟಿ.ಇ. ಸೊಸೈಟಿ ಇಟಗಿ ಇದರ ಆಡಳಿತಾಧಿಕಾರಿಯಾದ ಶ್ರೀ ನವೀನ ಕುಮಾರ್ ಗುಳಗಣ್ಣವರ್ ಇವರು ಉದ್ಘಾಟನೆ ಮಾಡಲಿರುವರು. ಹಿರಿಯ ಪತ್ರಕರ್ತರು ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀಯುತ ರಮೇಶ್ ಸುರ್ವೆ ಇವರು ‘ವಿದ್ಯಾರ್ಥಿಗಳ ಗುರಿ ಸಾಧನೆಗೆ ಪತ್ರಿಕೆ – ಪುಸ್ತಕ ಸಂಸ್ಕೃತಿ ಮಹತ್ವ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಮೇಘರಾಜ ಎಸ್. ಜಿಡಗಿ ಹಾಗೂ ಸ್ಥಳೀಯ ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಸುರತ್ಕಲ್: ಉಡುಪಿ, ಕಾಸರಗೋಡು, ದ. ಕ. ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಈ ಸಾಲಿನ ಮಕ್ಕಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ‘ಮಕ್ಕಳ ಧ್ವನಿ’ ಕಾರ್ಯಕ್ರಮವು ಸೆಪ್ಟೆಂಬರ್ 2ನೇ ವಾರದಲ್ಲಿ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಕಾರ್ಡ್ ಕಥೆ, ಕವನ ಗೋಷ್ಠಿಯಲ್ಲಿ ಭಾಗವಹಿಸಲು ಪ್ರಾಥಮಿಕದಿಂದ ಪದವಿ ಪೂರ್ವ ಕಾಲೇಜುವರೆಗಿನ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಸಕ್ತ ವಿದ್ಯಾರ್ಥಿಗಳು ಅಂಚೆ ಕಾರ್ಡ್‌ನಲ್ಲಿ ಬರೆದ ಕಥೆ, ಕವನಗಳನ್ನು 20 ಆಗಸ್ಟ್ 2024ರ ಮೊದಲು ರಮೇಶ್ ಭಟ್ ಎಸ್‌. ಜಿ., ಕಾರ್ಯದರ್ಶಿ ಮಕ್ಕಳ ಸಾಹಿತ್ಯ ಸಂಗಮ, ಶ್ರೀನಿಕೇತನ 1-19/1(1) ಎನ್‌. ಎಂ. ಪಿ. ಟಿ. ಕಾಲೊನಿ ಹಿಂಬದಿ ಕಡಂಬೋಡಿ, ಹೊಸಬೆಟ್ಟು ಕುಳಾಯಿ ಅಂಚೆ ಸುರತ್ಕಲ್ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.

Read More