Subscribe to Updates
Get the latest creative news from FooBar about art, design and business.
Author: roovari
18 ಫೆಬ್ರವರಿ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜನೆಯಲ್ಲಿ ಸಂತ ಅಲೋಸಿಯಸ್ ಕಾಲೇಜು ಸಮುದಾಯ ಬಾನುಲಿ ರೇಡಿಯೋ ಸಾರಂಗ್ ಸಹಯೋಗದಲ್ಲಿ ಕಾಲೇಜು ಮಟ್ಟದ `ಏಕಾಂಕ ನಾಟಕ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ತುಳುನಾಡಿನ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿರುವ ಉಳ್ಳಾಲದ ಅಬ್ಬಕ್ಕ ರಾಣಿಯ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಐತಿಹಾಸಿಕ ಘಟನೆಗಳ ಮೂಲಕ ಏಕಾಂಕ ನಾಟಕ ಪ್ರದರ್ಶನ ನೀಡಬೇಕು. ಸ್ಪರ್ಧೆಯ ನಿಯಮಗಳು: 1. ದಿನಾಂಕ 18.03.2023 ಬೆಳಿಗ್ಗೆ 9.3೦ ರಿಂದ 2. ಸ್ಥಳ : ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಎಲ್ .ಸಿ. ಆರ್. ಸಭಾಂಗಣ 3. ಸ್ಪರ್ಧೆಯು ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜುಗಳಿಗೆ ಸೀಮಿತವಾಗಿರುತ್ತದೆ. 4. ನಾಟಕದ ಅವಧಿ 20+5 ಅಂದರೇ 25 ನಿಮಿಷಗಳು . 5. ಭಾಗವಹಿಸುವ ಕಾಲೇಜು ತಂಡಗಳು ಫೆಬ್ರವರಿ 28ರ ಒಳಗೆ ತಮ್ಮ ಕಾಲೇಜಿನ ಪ್ರಾಂಶುಪಾಲರ ಅನುಮತಿ ಪತ್ರದೊಂದಿಗೆ ನೋಂದಾವಣೆ ಮಾಡಿಕೊಳ್ಳಬೇಕು. 6. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ಪ್ರಶಸ್ತಿ ಫಲಕ…
18 ಫೆಬ್ರವರಿ 2023, ಮಂಗಳೂರು: ಯಕ್ಷಗಾನದ ಹಿರಿಯ ತಲೆಮಾರಿನ ಕೊಂಡಿಯಂತಿದ್ದ ಬಲಿಪ ನಾರಾಯಣ ಭಾಗವತರು ತನ್ನ ಅಸಾಧಾರಣವಾದ ಜ್ಞಾನ ಸಂಪನ್ನತೆಯಿಂದ, ಎಲ್ಲರೊಂದಿಗೆ ಬೆರೆತು ಸಜ್ಜನಿಕೆಯಿಂದ ಕೂಡಿದ ಮಾತುಗಳಿಂದ ಜನಪ್ರೀತಿ ಗಳಿಸಿದ್ದರು. ತನ್ನ ಏರುಸ್ವರದ ಭಾಗವತಿಕೆಯಿಂದ ಯಕ್ಷಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರು ಯಕ್ಷರಂಗದಲ್ಲಿ ಮೂಡಿಸಿ ಹೋಗಿರುವ ಛಾಪು ಸದಾ ಕಾಲವೂ ಸ್ಮರಣೀಯವಾಗಿದೆ. ಪ್ರಸಂಗ ರಚನೆ, ಸಹಿತ ಅನೇಕ ಪ್ರಸಂಗಗಳ ಪದ್ಯಗಳನ್ನು ಕಂಠಸ್ಥಗೊಳಿಸಿದ್ದ ಅವರು ಓರ್ವ ಪ್ರೌಢ ಭಾಗವತರಾಗಿ ಕಿರಿಯ ಕಲಾವಿದರೆಲ್ಲರಿಗೂ ಮಾರ್ಗದರ್ಶಿಯಾಗಿದ್ದರೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸಿದರು. ಇಂದು ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಬಲಿಪ ನಾರಾಯಣ ಭಾಗವತರಿಗೆ ‘ಸಾರ್ವಜನಿಕ ಶ್ರದ್ಧಾಂಜಲಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ನುಡಿನಮನ ಸಲ್ಲಿಸುತ್ತಾ ಬಲಿಪರ ಮತ್ತು ತನ್ನ ಯಕ್ಷಗಾನ ಒಡನಾಟವನ್ನು ಸ್ಮರಿಸಿದರು. ಮಗುವಿನ ಮುಗ್ಧತೆ ಬಲಿಪರಲ್ಲಿತ್ತು. ಭಾಗವತಿಕೆಯ ಹಾಗೂ ಯಕ್ಷಗಾನ ಕಲೆಯ ಕುರಿತ ಅವರಲ್ಲಿದ್ದ ಅಗಾಧವಾದ ಜ್ಞಾನ ಮತ್ತು ಯುವ ಕಲಾವಿದರನ್ನು ಪ್ರೋತ್ಸಾಹಿಸುವ…
18 ಫೆಬ್ರವರಿ 2023, ಮಂಗಳೂರು: ಮಂಗಳೂರು ಲಿಟ್ ಫೆಸ್ಟ್ 2023 ಐದನೇಆವೃತ್ತಿಯು ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ಶನಿವಾರದಂದು ವಿದ್ಯುಕ್ತವಾಗಿಆರಂಭಗೊಂಡಿತು. ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ಉಪಕುಲಪತಿ ವಿನಯ್ ಹೆಗ್ಡೆ ಅವರು ಮಾತನಾಡಿ ಮಂಗಳೂರು ನಗರವು ವಿದ್ಯಾಕ್ಷೇತ್ರ, ಆರೋಗ್ಯಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತ್ ಫೌಂಡೇಶನ್ ಮೂಲಕ ಆಯೋಜಿಸಲಾದ ಈ ಲಿಟ್ ಫೆಸ್ಟ್ ಕಾರ್ಯಕ್ರಮವು ಮಾರ್ಗದರ್ಶಿಯಾಗಿದೆ. ಮಂಗಳೂರು ಪ್ರದೇಶವು ಧಾರ್ಮಿಕವಾಗಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಏರಿದ ಸ್ಥಳವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಮಂಗಳೂರು ಪ್ರದೇಶಕ್ಕೆ ವಿಶೇಷ ಸ್ಥಾನವಿತ್ತು. ಭೌಗೋಳಿಕವಾಗಿಯೂ ಶ್ರೀಮಂತಿಕೆ ಹೋಂದಿರುವ ಈ ಪ್ರದೇಶದಲ್ಲಿ ಆಯೋಜಿಸಲಾದ ಲಿಟ್ ಫೆಸ್ಟ್ ವಿಶ್ವಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ವಾಣಿಜ್ಯ, ಉದ್ಯೋಗ ಕ್ಷೇತ್ರಗಳಲ್ಲೂ ಮಂಗಳೂರು ದೇಶದಲ್ಲೇ ಶ್ರೇಷ್ಠ ಸ್ಥಳವಾಗಿ ಮಾರ್ಪಡುತ್ತಿದೆ ಎಂದರು. ಎಲ್ಲರೂ ಅರಿಯಬೇಕಾದ, ತಿಳಿಯಬೇಕಾದ ಸ್ಥಳ ಇದಾಗಿದೆ ಎಂದರು. ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಹಿರಿಯ ಕಿರಿಯ ಉದ್ಯಮಿಗಳು…
17 ಫೆಬ್ರವರಿ 2023, ಕಾರ್ಕಳ: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರ ಹೆಸರಿನ ಗಮಕ ಕಲಾ ಪ್ರವಚನ ಪ್ರಶಸ್ತಿಯನ್ನು ಪ್ರಸಿದ್ಧ ಗಮಕ ವಾಚನಕಾರರಾದ ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಅವರಿಗೆ, ಪ್ರಸಿದ್ಧ ಗಮಕಿ ಉಡುಪಿಯ ಶ್ರೀಮತಿ ಯಾಮಿನಿ ಭಟ್ ಅವರು ಸ್ಥಾಪಿಸಿದ ಗಮಕ ಕಲಾ ವಾಚನ ಪ್ರಶಸ್ತಿಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಅವರಿಗೆ ಮತ್ತು ಭಾರತ ಸರಕಾರದ ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಅವರ ಹೆಸರಿನ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಶಿಲ್ಪಿ ಶ್ರೀ ಬಿ.ಎಸ್.ಭಾಸ್ಕರ ಆಚಾರ್ಯ ಕಾರ್ಕಳ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಇದೇ ಫೆಬ್ರವರಿ 26ರಂದು ಕಾಂತಾವರದಲ್ಲಿ ನಡೆಯುವ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನದ ಜೊತೆ ಮೂರು ದತ್ತಿ ಪ್ರಶಸ್ತಿಗಳ…
17 ಫೆಬ್ರವರಿ 2023, ಮಂಗಳೂರು: ಲೇಖಕಿ ಶರೋನ್ ಶೆಟ್ಟಿ ಐಕಳ ಪೆರಾರ ಅವರು ಬರೆದ ‘ನಾಗ-ಯಕ್ಷರ ಬೀಡು ತುಳುನಾಡು – ಪ್ರಕೃತಿಯ ಸೃಷ್ಟಿ’ ಕೃತಿ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಗುರುವಾರ ಫೆಬ್ರವರಿ 16ರಂದು ಬಿಡುಗಡೆಗೊಂಡಿತು. ಉದಯವಾಣಿಯ ವಿಶ್ರಾಂತ ಸಹಾಯಕ ಸಂಪಾದಕ ಶ್ರೀ ಮನೋಹರ್ ಪ್ರಸಾದ್ ಅವರು ಪುಸ್ತಕ ಬಿಡುಗಡೆ ಮಾಡಿ “ಮೌಲಿಕ ಕೃತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುತ್ತವೆ. ತುಳುನಾಡು ಹೆಮ್ಮೆಯ ವ್ಯಾಪ್ತಿ ಹೊಂದಿದ್ದು ಅದರ ಕುರಿತಾದ ಪುಸ್ತಕ ಬಿಡುಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಶೆರೋನ್ ಶೆಟ್ಟಿ ಐಕಳ ಪೆರಾರ ಅವರ ಎರಡನೇ ಕೃತಿಯು ಸಾಹಿತ್ಯ ವಲಯದಲ್ಲಿ ಹೊಸ ಮನ್ವಂತರ ಬರೆಯಲಿ” ಎಂದು ಶುಭ ಹಾರೈಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಹರಸಿದರು. ಪ್ರಮುಖರಾದ ವಿಜಯಲಕ್ಷ್ಮಿ, ಬಿ. ಶೆಟ್ಟಿ ಹಾಗೂ ಹರಿಶ್ಚಂದ್ರ ಪಿ ಸಾಲಿಯಾನ್ ಶುಭ ಹಾರೈಸಿದರು ಲೇಖಕಿ ಶರೋನ್ ಶೆಟ್ಟಿ ಐಕಳ, ಐಕಳ ಜಯಪಾಲ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
17 ಫೆಬ್ರವರಿ 2023, ಬೈಂದೂರು: 4 ದಶಕಗಳಿಗಿಂತಲೂ ಮಿಗಿಲಾಗಿ ಕಲಾ ಸೇವೇಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಲಾವಣ್ಯ ರಿ. ಬೈಂದೂರು ಊರಿನ ಪ್ರಾತಿನಿಧಿಕ ಕಲಾ ಸಂಸ್ಥೆಯಾಗಿ ರೂಪುಗೊಂಡಿದೆ. ಸದಾ ಲವಲವಿಕೆಯಿಂದಲೇ ತನ್ನನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಈ ವರ್ಷವೂ ಕೂಡಾ ಯಕ್ಷಗಾನ ಹಾಗೂ ನಾಟಕೋತ್ಸವದ ರಂಗ ಪಂಚಮಿ 2023 ಆಯೋಜಿಸಿದೆ. ಫೆಬ್ರವರಿ 20ರಿಂದ 24ರವರೆಗೆ ನಡೆಯಲಿರುವ ಈ ಕಲಾ ಹಬ್ಬದಲ್ಲಿ ಎಲ್ಲಾ ಕಲಾವಿದರು ಭಾಗವಹಿಸಿಹಬೇಕಾಗಿ ಆಯೋಜಕರು ವಿನಂತಿಸಿದ್ದಾರೆ. ಫೆಬ್ರವರಿ 20, ಸೋಮವಾರ ನಾಟಕ: ನಾಯಿ ಕಳೆದಿದೆ ತಂಡ: ಲಾವಣ್ಯ (ರಿ.) ಬೈಂದೂರು ರಚನೆ/ನಿರ್ದೇಶನ: ಶ್ರೀ ರಾಜೇಂದ್ರ ಕಾರಂತ, ಬೆಂಗಳೂರು ಪ್ರಾಯೋಜಕರು: ಶ್ರೀ ಯು. ಬಿ. ಎಸ್. ಚಾರಿಟೇಬಲ್ ಟ್ರಸ್ಟ್ (ರಿ.) ಧಾರವಾಡ ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್ಟಾಪ್, ಮೊಬೈಲ್ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ…
16 ಫೆಬ್ರವರಿ 2023, ಮೂಡಬಿದಿರೆ: ಯಕ್ಷ ರಂಗದ ಭೀಷ್ಮ, ಭಾಗವತಿಕೆಯಲ್ಲಿ ತನ್ನದೇ ಮೇರು ಶೈಲಿಯಾದ ‘ಬಲಿಪ ಹಾಡುಗಾರಿಕೆ’ಯನ್ನು ದಶಕಗಳಿಂದ ಯಕ್ಷಪ್ರಿಯರಿಗೆ ಉಣಪಡಿಸಿದ ಶ್ರೀಯುತ ಬಲಿಪ ನಾರಾಯಣ ಭಾಗವತರು ಇಂದು (84 ವರ್ಷ) ನಮ್ಮನ್ನಗಲಿದ್ದಾರೆ… ಕಂಚಿನ ಕಂಠ ಮೌನವಾಗಿದೆ… ಭಾಗವತಿಕೆಯ ರಂಗದಲ್ಲಿ ಅಗ್ರಜರಾಗಿ ನಿಂತ ಬಲಿಪರು ಮಂಗಳ ಹಾಡಿನೊಂದಿಗೆ ಇಹಲೋಕದ ಬಂಧ ಕಳಚಿ ಸರ್ವವಂದ್ಯನ ಕಿವಿಗಳನ್ನು ತಂಪಾಗಿಸಲು ನಾಕಕ್ಕೆ ಸರದಿದ್ದಾರೆ… “ನೋಡಿ ನಿರ್ಮಲ ಜಲ ಸಮೀಪದಿ…”, “ಜಗವು ನಿನ್ನಾಧೀನ ಖಗಪತಿ ವಾಹನ…”, “ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೊ”, “ಎಲವೋ ಕುಂತೀ ಸುತನೇ” ಎಂಬಿತ್ಯಾದಿ ವಿವಿಧ ಸ್ವರ ಏರಿಳಿತದ ಸಮ್ಮಿಲನ-ಸಮತೋಲನ ಹೊಂದಿದ್ದ ‘ಬಲಿಪ’ ಶೈಲಿಗೆ ಅದರದ್ದೇ ಆದ ತೂಕ-ಸ್ಥರ… ಅಜ್ಜ ಬಲಿಪರು ಹುಟ್ಟುಹಾಕಿದ ಯಕ್ಷಗಾನ ತೆಂಕುತಿಟ್ಟು ಹಾಡುಗಾರಿಕೆಯ ಬಲಿಪ ಶೈಲಿಯ ಪ್ರಬಲ ಪ್ರತಿಪಾದಕ,ಕಾಸರಗೋಡು ಪೆರ್ಲ ಪಡ್ರೆಯ ಯಕ್ಷಗಾನ ಸೊಗಡಿನ ಮಣ್ಣಲ್ಲಿ ಹುಟ್ಟಿ ಬೆಳೆದು ಮೂಡುಬಿದಿರೆ ನೂಯಿಯಲ್ಲಿದ್ದು ತನ್ನ ಮುಂದಿನ ತಲೆಮಾರಿಗೆ ಬಲಿಪ ಛಾಪನ್ನು ಮೆರೆದ ಶ್ರೀ ಬಲಿಪ ನಾರಾಯಣ ಭಾಗವತರು ಇದೀಗ ನಿಧನರಾದ…
16 ಫೆಬ್ರವರಿ 2023, ಮಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕುತ್ತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾ ರಥೋತ್ಸವ ಶುಭ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ವೈಭವದ ಸಂಭ್ರಮವು ಫೆಬ್ರವರಿ 20ರಂದು ರಾತ್ರಿ ಏಳು ಗಂಟೆಗೆ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ನಡೆಯಲಿದೆ. 13ನೇ ವರ್ಷದ ಈ ಸುವರ್ಣ ಸಾಂಸ್ಕೃತಿಕ ವೈಭವದ ಸಂಭ್ರಮದಲ್ಲಿ ನಾಡಿನ ಪ್ರತಿಷ್ಠಿತ ಮೂವರು ಕಲಾ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಭರತನಾಟ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ನಾಟ್ಯಾಚಾರ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಕಮಲಾಕ್ಷ ಆಚಾರ್, ಯಕ್ಷಗಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಅರುವ ಕೊರಗಪ್ಪ ಶೆಟ್ಟಿ, ಸ್ಯಾಕ್ಸೋಫೋನ್ ಮಾಂತ್ರಿಕ ರಾಜ್ಯದ ಸ್ಯಾಕ್ಸೋಫೋನ್ ವಾದನದಲ್ಲಿ ಏಕೈಕ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾದ ಶ್ರೀ ಪ್ರಕಾಶ್ ದೇವಾಡಿಗ ಈ ಮೂರು ಮಂದಿಗೆ ಸುವರ್ಣ ರಂಗ ಸನ್ಮಾನ್ – 2023 ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ…
16 ಫೆಬ್ರವರಿ 2023, ಬೆಂಗಳೂರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಕೃತಿ, ಮಹಾಕವಿ ಕುವೆಂಪು ರವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ. ಫೆಬ್ರವರಿ 17ರಂದು ಸಂಜೆ 7ಕ್ಕೆ, ಕೆ. ಹೆಚ್. ಕಲಾಸೌಧ, ಹನುಮಂತನಗರ, ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ
ಶೂದ್ರ ಶಿವ…. ಈ ಒಂದು ಹೆಸರೇ ವಿಶಿಷ್ಠ ಮತ್ತು ವಿನೂತನ. ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆರಂಭಿಸಿದ ದೇವಾಲಯ ಸ್ಥಾಪನೆಯ ಸಂದರ್ಭದಲ್ಲಿ ಮೇಲ್ವರ್ಗದ ಪ್ರತಿರೋಧದ ಉಪಶಮನಕ್ಕಾಗಿ ತಳೆದ ಜಾಣ ನಡೆ, “ನಾನು ಪ್ರತಿಷ್ಠಾಪಿಸಿದ್ದು ನಿಮ್ಮ ಶಿವನನ್ನಲ್ಲ… ನಮ್ಮ ಶಿವನನ್ನು… ಅವನು ಶೂದ್ರ ಶಿವ.” ಎಂಬ ಶಾಂತ ಉತ್ತರ. ಇದೇ ಪರಿಕಲ್ಪನೆಯನ್ನು ಇಟ್ಟು ಕೊಂಡು ಹೊಸದಾಗಿ ಹುಟ್ಟಿಕೊಂಡ ರುದ್ರ ಥೇಟರ್, ಮಂಗಳೂರು ಇವರು ನಿರ್ಮಿಸಿ ಫೆಬ್ರವರಿ 5ರಂದು ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಸ್ತುತ ಪಡಿಸಿದ ಚೊಚ್ಚಲ ಪ್ರಯೋಗವೇ ‘ಶೂದ್ರ ಶಿವ’ ಕನ್ನಡ ನಾಟಕ. ಇಂತಹದ್ದೊಂದು ಪ್ರಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ ಎಂಬ ಸುದ್ಧಿ ಕೆಲ ತಿಂಗಳ ಹಿಂದೆ ಬಂದಿದ್ದು ರುದ್ರ ಥೇಟರ್ನ ಉದ್ಘಾಟನೆಯೂ ವಿದ್ಯುಕ್ತವಾಗಿ ನಡೆದಿತ್ತು. ಬಳಿಕ ರಾಜ್ಯಾದ್ಯಂತದಿಂದ ಕಲಾವಿದರನ್ನು ಆಯ್ಕೆ ಮಾಡಿ ರಂಗ ತರಬೇತಿ ನಡೆಸಿ ನಾಟಕವನ್ನು ಸಿದ್ಧಗೊಳಿಸಲಾಯಿತು. ಇಂತಹ ಒಂದು ಪ್ರಯತ್ನದ ಬಗ್ಗೆ ಸಹಜವಾಗಿಯೇ ರಂಗಾಸಕ್ತರಲ್ಲಿ, ನಾರಾಯಣ ಗುರುಗಳ ಭಕ್ತರಲ್ಲಿ ಕುತೂಹಲ ಮೂಡಿತ್ತು. ನಾಟಕದ ವೀಕ್ಷಣೆಗೆ…