Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್ ಇದರ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ 10-03-2024ರಂದು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಠದ ಅಧ್ಯಕ್ಷ ರಾಮಕೃಷ್ಣ ಜಿತಕಾಮಾನಂದಜೀ, ಭಾರತೀಯ ವಿದ್ಯಾಭವನದ ಗೌರವ ಜೊತೆ ಕಾರ್ಯದರ್ಶಿ ಪ್ರೊ ಜಿ.ಆರ್. ರೈ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಸಮಕ್ಷಮದಲ್ಲಿ ಮೃದಂಗ ಕಲಾವಿದ ಬಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಗರು “ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ಮತ್ತು ಬೌದ್ಧಿಕ ಪ್ರಬುದ್ಧತೆ ಬೆಳೆಯುತ್ತದೆ. ಸಂಗೀತ ಆಲಿಸುವವರ ಹೃದಯ ಮೃದುವಾಗುತ್ತದೆ. ಸಂಗೀತದಿಂದ ಸಾಮರಸ್ಯ ಮೂಡುತ್ತದೆ” ಎಂದರು. ಸಂಗೀತ ಪರಿಷತ್ ಉಪಾಧ್ಯಕ್ಷ ಎಚ್. ಸುಬ್ರಹ್ಮಣ್ಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ “ಈ ವರ್ಷ 30 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತ್ರಿಂಶತ್ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಲಾಗಿದೆ.” ಎಂದರು. ಕೃಷ್ಣಮೂರ್ತಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಬೆಂಗಳೂರಿನ ಪಟ್ಟಾಭಿರಾಮ ಪಂಡಿತ್ ಅವರಿಂದ ಹಾಡುಗಾರಿಕೆ ನಡೆಯಿತು. ತಿರುವನಂತಪುರದ ಸಂಪತ್ ಪಿಟೀಲಿನಲ್ಲಿ, ಬೆಂಗಳೂರಿನ…
ಕೋಟೇಶ್ವರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ಕೋಟೇಶ್ವರ ಮಂಜರ ಮನೆಯ ಗೃಹಪ್ರವೇಶದ ಸಂದರ್ಭ ‘ಶ್ವೇತಯಾನ’ ಸರಣಿ ಕಾರ್ಯಕ್ರಮದ ಅಂಗವಾಗಿ 9ನೇ ಕಾರ್ಯಕ್ರಮ ‘ಭಕ್ತಿ ಭಾವಾಮೃತ- ಯಕ್ಷಗಾನಾಮೃತ’ ಜುಗಲ್ಬಂದಿ ಕಾರ್ಯಕ್ರಮವು ದಿನಾಂಕ 15-03-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಸತ್ಯನಾರಾಯಣ ಮಂಜ ಮಾತನಾಡಿ “ಸಂಸ್ಥೆಯು ವಿಭಿನ್ನವಾದ ಕಾರ್ಯಕ್ರಮದಲ್ಲಿ ತೊಡಗಿದಾಗ ಉತ್ತುಂಗಕ್ಕೇರುವಲ್ಲಿ ಹೆಚ್ಚು ಫಲಕಾರಿಯಾಗುತ್ತದೆ. ಹಿಂದೂಸ್ಥಾನಿ ಸಂಗೀತದೊಂದಿಗೆ ಯಕ್ಷ ಸಾಹಿತ್ಯದ ಗಾನ ಲಹರಿ ಬೆರತಾಗ ಔನತ್ಯವನ್ನು ಸಾಧಿಸುವುದಕ್ಕಾಗುತ್ತದೆ. ಪ್ರಸಿದ್ಧರಾದ ಪಂಡಿತ್ ನಾಗಭೂಷಣ ಹೆಗಡೆಯವರ ಸಂಗೀತ, ಯಕ್ಷ ಗಾಯನದೊಂದಿಗೆ ಬೆರೆತು ಹೊಸ ಹುಡುಕಾಟ ಮತ್ತು ಹೆಚ್ಚು ಹೆಚ್ಚು ಯೋಚಿಸುವುದಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ‘ಶ್ವೇತಯಾನ’ ಕಾರ್ಯಕ್ರಮದುದ್ದಕ್ಕೂ ಹೊಸ ಹೊಸ ಸಾಧ್ಯತೆಯನ್ನು ಶೋಧಿಸಲಿ.” ಎಂದು ಶುಭಹಾರೈಸಿದರು. ಕೋಟೇಶ್ವರ ಮಂಜರ ಮನೆಯ ಗೃಹಪ್ರವೇಶದ ಸಂದರ್ಭ ‘ಜುಗಲ್ಬಂದಿ’ ಕಾರ್ಯಕ್ರಮ ನಡೆಸಲು ಅನುವುಮಾಡಿಕೊಟ್ಟ ರಮೇಶ್ ಮಂಜ ಹಾಗೂ ಸರೋಜ ದಂಪತಿಗಳನ್ನು ಆರ್.ಎಸ್.ಎಸ್. ಮುಖಂಡ ಸುಬ್ರಹ್ಮಣ್ಯ ಹೊಳ್ಳ ಗೌರವಿಸಿದರು. ಕಾರ್ಯದರ್ಶಿ ವೆಂಕಟೇಶ ವೈದ್ಯ,…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿಯನ್ನು ಹಿರಿಯ ಬರಹಗಾರರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಮತ್ತು ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್ ಅವರಿಗೆ ಪ್ರದಾನ ಮಾಡುವ ಕಾರ್ಯಕ್ರಮವು ದಿನಾಂಕ 16-03-2024ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ನಾಡೋಜ ಡಾ. ಮಹೇಶ ಜೋಶಿ “ಧರ್ಮ ಪ್ರಚಾರದ ಉದ್ದೇಶವನ್ನೇ ಮರೆತು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳೆವಣಿಗೆಗೆ ಕ್ರೈಸ್ತರು ವಿವಿಧ ರೂಪದಲ್ಲಿ ನೀಡಿದ ಕೊಡುಗೆಗಳ ಮೂಲಕವೇ ಕನ್ನಡದ ಪರಂಪರೆ ಬೆಳೆದಿದೆ. ಹರ್ಮನ್ ಮೊಗ್ಲಿಂಗ್ ‘ಮಂಗಳೂರು ಸಮಾಚಾರ’ದ ಮೂಲಕ ಕನ್ನಡದಲ್ಲಿ ಪತ್ರಿಕೋದ್ಯಮವನ್ನು ಆರಂಭಿಸಿದರೆ ಕಿಟಲ್ ನಿಘಂಟನ್ನು ಕೊಡುಗೆಯಾಗಿ ನೀಡಿದರು, ಬೆಂಜಮಿನ್ ಲೂಯಿಸ್ ರೈಸ್ ಕನ್ನಡ ಶಾಸನಗಳ ಅಧ್ಯಯನ, ಇ.ಪಿ. ರೈಸ್ ಸಾಹಿತ್ಯ ಚರಿತ್ರೆಯನ್ನು ಬರೆದರು, ರಿಪ್ಪನ್, ಕರ್ಜನ್, ಕಬ್ಬನ್, ಮೇಖ್ರಿ ಮೊದಲಾದವರು ಆಡಳಿತಗಾರರಾಗಿ ಮಹತ್ವದ ಕೊಡುಗೆಯನ್ನು ನೀಡಿದರು.…
ಮಂಗಳೂರು : ‘ನಿರ್ದಿಗಂತ’ ವತಿಯಿಂದ ‘ನೇಹದ ನೇಯ್ಗೆ’ ನಾಟಕ, ಸಂಗೀತ, ಚಿತ್ರ, ಸಿನೆಮಾ, ಸಾಹಿತ್ಯಗಳ ಸಮ್ಮಿಲನ ‘ರಂಗೋತ್ಸವ’ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಆವರಣದಲ್ಲಿ ದಿನಾಂಕ 20-03-2024ರಿಂದ 25-03-2024ರ ತನಕ ಆಯೋಜಿಸಲಾಗಿದೆ. ದಿನಾಂಕ 20-03-2024ರಂದು ಗಂಟೆ 5.30ಕ್ಕೆ ನಾನಾ ಪಾಟೇಕರ್ ಇವರಿಂದ ಈ ರಂಗೋತ್ಸವವು ಉದ್ಘಾಟನೆಗೊಳ್ಳಲಿದೆ. ನಿರ್ದಿಗಂತ ರಂಗ ತಂಡದಿಂದ ಹಾಡುಗಳ ಪ್ರಸ್ತುತಿ ಮತ್ತು ಗಂಟೆ 7-00 ಕ್ಕೆ ಬೆಂಗಳೂರಿನ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಕೆ.ಪಿ. ಲಕ್ಷ್ಮಣ ರಚನೆ, ವಿನ್ಯಾಸ ಹಾಗೂ ನಿರ್ದೇಶನದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 21-03-2024ರಂದು ಗಂಟೆ 9.30ಕ್ಕೆ ಸಾನಿಧ್ಯ ಆಡಿಟೋರಿಯಂನಲ್ಲಿ ‘ಪ್ರಯೋಗಗೊಂಡ ನಾಟಕದ ಚರ್ಚೆ’ ಮತ್ತು ‘ರಂಗ ತಜ್ಞರೊಂದಿಗೆ ಮಾತುಕತೆ’ ರಂಗ ಸಂವಾದಗಳು, 2-00 ಗಂಟೆಗೆ ಸಹೋದಯ ಆಡಿಟೋರಿಯಂನಲ್ಲಿ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ಕೆ.ಪಿ. ಲಕ್ಷ್ಮಣ ವಿನ್ಯಾಸ ಹಾಗೂ ನಿರ್ದೇಶನದ ‘ದ್ವೀಪ’ ನಾಟಕ ಪ್ರದರ್ಶನ, ಗಂಟೆ 3-30ಕ್ಕೆ ಮದರ್…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದ.ಕ. ಜಿಲ್ಲಾ 26ನೆಯ ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 23-03-2024 ಮತ್ತು 24-03-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ, ಪುರಭವನದಲ್ಲಿ ನಡೆಯಲಿದೆ. ದಿನಾಂಕ 23-03-2024ರಂದು ಬೆಳಿಗ್ಗೆ 8.45ಕ್ಕೆ ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸದಾಶಿವ ಉಳ್ಳಾಲ ಇವರು ಉದ್ಘಾಟಿಸಲಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಗಂಟೆ 9.30ಕ್ಕೆ ಬೆಂಗಳೂರು ಕ.ಸಾ.ಪ.ದ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಇವರು ಸಮ್ಮೇಳನದ ಉದ್ಘಾಟನೆ ಮತ್ತು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳೂರಿನ ಹಿರಿಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ ವೀ. ಹೆಗಡೆಯವರು ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರಾಗಿರುವರು. ಗಂಟೆ 11.30ಕ್ಕೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆನರಾ…
ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಆಯೋಜಿಸಲಾದ “ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಮತ್ತು ಅದರ ಬೆಳವಣಿಗೆ’ ವಿಷಯದ ಉಪನ್ಯಾಸ ಕಾರ್ಯಕ್ರಮವು ದಿನಾಂಕ 04-03-2024 ರಂದು ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ‘ಅಭಿನವ ಸ್ವರ ಶಾಲಾ’ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಯಾದ ಎಚ್.ಎಸ್. ಕೇಶವ ಮಾತನಾಡಿ “ಸಂಗೀತ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ಸಂಗೀತದ ಅಭಿರುಚಿ ಮತ್ತು ಪ್ರವೀಣತೆ ಹೆಚ್ಚಿಸುತ್ತವೆ ಮತ್ತು ಉತ್ತಮ ಸಂಸ್ಕಾರವನ್ನು ನೀಡುತ್ತವೆ. ಶುದ್ಧ ಶಾಸ್ತ್ರೀಯ ಸಂಗೀತ ಪರಂಪರೆಗೆ ಅವಶ್ಯವಿರುವ ಶೈಕ್ಷಣಿಕ ಶಿಸ್ತನ್ನು ಸಹ ಅಳವಡಿಸುವುದು ಅತಿ ಮುಖ್ಯ. ನಮ್ಮ ದೇಶದ ಸಂಗೀತ ಅದರ ಪರಂಪರೆ ಅವುಗಳನ್ನು ಅರಿಯುವುದು ಪ್ರತಿಯೊಬ್ಬ ಸಂಗೀತಾರ್ಥಿಗಳ ಜವಾಬ್ದಾರಿ ಎಂದರು.” ಸಂಸ್ಥೆಯ ಅಧ್ಯಕ್ಷೆ ಲೋಲಾಕ್ಷಿ, ಸಂಸ್ಥಾಪಕ ಕಾರ್ಯದರ್ಶಿ ಅಮಿತ್ ಬೆಂಗ್ರೆ, ಸದಸ್ಯರಾದ ಸಂದೇಶ್ ಕಾಮತ್, ಸಂತೋಷ್ ಉಪಸ್ಥಿತರಿದ್ದರು. ಪ್ರೇಮನಾಥ ಆಚಾರ್ಯ ನಿರೂಪಿಸಿದರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಮಹಿಳಾ ದಿನಾಚರಣೆ ಮತ್ತು ಹಿರಿಯ ಸಾಹಿತಿ ಮನೆ ಭೇಟಿ ಕಾರ್ಯಕ್ರಮವು ದಿನಾಂಕ 08-03-2024ರಂದು ಮಂಗಳೂರಿನ ಮೇರಿಹಿಲ್ ನಲ್ಲಿರುವ ಹಿರಿಯ ಕವಯಿತ್ರಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಅವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು “ಸಾಹಿತ್ಯವೆಂಬ ಸತ್ಯ ನಿತ್ಯ ನಿರಂತರ ಓದುಗರನ್ನು ತಟ್ಟುತ್ತಲೇ ಇರಬೇಕು. ಅದಕ್ಕಾಗಿ ಸಾಹಿತಿಗಳು ಹೊಸ ದೃಷ್ಟಿ ಮತ್ತು ಸೃಷ್ಟಿಯೊಂದಿಗೆ ತಮ್ಮ ಕೊಡುಗೆ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿ ಮನೆಗೆ ಬಂದು ಮಾತನಾಡಿಸಿದ್ದು ನನ್ನ ಜೀವನದ ಅತ್ಯಂತ ಮಧುರ ಕ್ಷಣ. ಇದರಿಂದ ನನಗಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದ ಎಲ್ಲರಿಗೂ ಸ್ನೇಹ ಸದ್ಭಾವನೆಯೊಂದಿಗೆ ಸ್ಫೂರ್ತಿ ಸಿಗುತ್ತದೆ.” ಎಂದು ಹೇಳಿದರು. ಕಸಾಪ ಕೇಂದ್ರ ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯ ಮುರಲೀ ಮೋಹನ್ ಚೂಂತಾರು ಅಭಿನಂದನೆಯ ಮಾತುಗಳನ್ನಾಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ…
ಉಡುಪಿ : ಎಂ. ಜಿ. ಎಂ. ಸಂಧ್ಯಾ ಕಾಲೇಜು ವತಿಯಿಂದ ಕಾಲೇಜಿನ ಬುಲೆಟಿನ್ ‘ದಿ ಹಾರಿಝಾನ್’ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯ್ಕ ಕೂಜಳ್ಳಿ ಅವರ ‘ಕದಂಬ ವೃಕ್ಷ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮಮವು ದಿನಾಂಕ 02-03-2024ರ ಶನಿವಾರದಂದು ಕಾಲೇಜಿನ ನೂತನ ರವೀಂದ್ರ ಮಂಟಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಟ್ರಸ್ಟಿನ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಕಾಲೇಜಿನ ‘ಬುಲೆಟಿನ್’ ಮತ್ತು ‘ಕದಂಬ ವೃಕ್ಷ’ ಕೃತಿ ಲೋಕರ್ಪಣೆ ಮಾಡಿದರು. ಕೃತಿಯ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಿದ ಹಿರಿಯ ಲೇಖಕ ಸುಮುಖಾನಂದ ಜಲವಳ್ಳಿ “ಜನಪದ ದಾಖಲೀಕರಣಕ್ಕೆ ಗ್ರಾಮೀಣ ಸೊಗಡಿನ ಸಂಸ್ಕೃತಿ ಬಿಂಬಿಸುವ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ‘ಕದಂಬ ವೃಕ್ಷ’ ಕೃತಿಯಲ್ಲಿ ಜನಪದ ಸಂಸ್ಕೃತಿ, ಗ್ರಾಮೀಣ ಬದುಕಿನ ಚಿತ್ರಣವನ್ನು ಲೇಖಕರು ಅದ್ಭುತವಾಗಿ ಚಿತ್ರಿಸಿದ್ದಾರೆ. ಜನಪದ ಸಂಸ್ಕೃತಿಯನ್ನು ದಾಖಲಿಸುವ ಕಳಕಳಿ ಈ ಕೃತಿಯಲ್ಲಿ ಕಂಡು ಬರುತ್ತದೆ. ಕೃತಿಯಲ್ಲಿ ಕೃಷಿ ಬದುಕಿನ ನೋಟವನ್ನು ಸ್ಕೂಲವಾಗಿ ಚಿತ್ರಿಸಲಾಗಿದೆ.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ…
ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಸುಳ್ಯ ಗುತ್ತಿಗಾರು ಬಂಟಮಲೆ ಅಕಾಡೆಮಿ ವತಿಯಿಂದ ‘ಕಲ್ಲೆ ಶಿವೋತ್ತಮ ರಾವ್ ಜನಪ್ರಗತಿಯ ಪಂಜು’ ಕೃತಿ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09-03-2024 ಶನಿವಾರ ನಗರದ ಸಹೋದಯ ಸಭಾಂಗಣದಲ್ಲಿ ಜರಗಿತು. ಪುಸ್ತಕ ಬಿಡುಗಡೆ ಮಾಡಿದ ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ “ಕಲ್ಲೆ ಶಿವೋತ್ತಮ ರಾವ್ ಅವರು ಪತ್ರಕರ್ತನಾಗಿ 70 ರ ದಶಕದ ಎಲ್ಲ ಕ್ರಾಂತಿಕಾರಕ ಬದಲಾವಣೆಗಳನ್ನು ಬೆಂಬಲಿಸಿದ್ದರು. ಕ್ರಾಂತಿಕಾರಕ ಮಾನವತಾವಾದಿಯಾಗಿದ್ದರು” ಎಂದರು. ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮಾತನಾಡಿ “ದೇಶದ ಪ್ರಗತಿಗೆ ಸಾಹಿತಿ, ಪತ್ರಕರ್ತರ ಕೊಡುಗೆ ದೊಡ್ಡದು. ಕಲ್ಲೆ ಶಿವೋತ್ತಮ ರಾವ್ ತುಳಿತಕ್ಕೊಳಗಾದವರಿಗೆ ದನಿಯಾದವರು.” ಎಂದು ಹೇಳಿದರು. ಕಲ್ಲೆಶಿವೋತ್ತಮರಾವ್ ಅವರ ಪರವಾಗಿ ಅವರ ಪುತ್ರ ಅಜಿತ್ ಅಶುತೋಷ್ ಕಲ್ಲೆ ಮತ್ತು ಪುತ್ರಿ ಅಲಕಾ ಕುಮಾರ್ ಅವರು ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಾಟಕಕಾರ ಎ. ಕೆ. ಹಿಮಕರ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಶಕ್ತಿ ಪತ್ರಿಕೆಯ ಸಂಸ್ಥಾಪಕರಾದ ದಿ. ಜಿ. ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮ ಹಾಗೂ ಮುಕ್ತ ಕಥಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ದಿನಾಂಕ 19-03-2024ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಬಾಳೆಲೆಯ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಿ. ಬಿ. ಎಸ್ ಗೋಪಾಲಕೃಷ್ಣ ದತ್ತಿಯ ಮುಕ್ತ ಕಥಾ ಸ್ಪರ್ಧೆಯಲ್ಲಿ ಜಿಲ್ಲೆಯ 23ಮಂದಿ ಕತೆಗಾರರು ಭಾಗವಹಿಸಿದ್ದು, ತೀರ್ಪುಗಾರರು ಮೌಲ್ಯಮಾಪನ ಮಾಡಿ ನೀಡಿದ ಪಲಿತಾಂಶದಂತೆ ಪ್ರಥಮ ಸ್ಥಾನವನ್ನು ಕುಶಾಲನಗರದ ಶ್ರೀಮತಿ ಕುಕ್ಕನೂರು ರೇಷ್ಮಾ ಮನೋಜ್, ದ್ವಿತೀಯ ಸ್ಥಾನವನ್ನು ನಾಪೋಕ್ಲಿನ ಮಧುಸೂಧನ್ ಬಿಳಿಗುಲಿ ಮತ್ತು ತೃತಿಯ ಸ್ಥಾನವನ್ನು ಮೂರ್ನಾಡಿನ ಕಿಗ್ಗಾಲು ಗಿರೀಶ್ ರವರು ಪಡೆದು ಕೊಂಡಿದ್ದಾರೆ. ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ…