Author: roovari

ಮಾನವನ ಬಾಳಿಗೆ ಬೆಳಕಾಗಬಲ್ಲ ಕೃತಿಗಳು ಹೆಚ್ಚು ಪ್ರಸ್ತುತ : ಡಾ.ನಿ.ಬೀ.ವಿಜಯ ಬಲ್ಲಾಳ್ 16 ಫೆಬ್ರವರಿ 2023, ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿಯ ಪ್ರವರ್ತಕ, ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ `ನಿತ್ಯ ಸತ್ಯ-ಬಾಳಿಗೆ ಬೆಳಕು ‘ ಕೃತಿಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಗುರುವಾರ ಎಂಜಿಎA ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ಉಡುಪಿಯ ಎರಡನೇ ದಿನದ ರಂಗೋತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಾವು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ನೆಮ್ಮದಿ ಕಡಿಮೆಯಾಗುತ್ತಿದೆ. ಹೀಗಾಗಿ ಬದುಕಿಗೆ ದಾರಿ ದೀಪವಾಗಬಲ್ಲ ಭಗವದ್ಗೀತೆ, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಮೊದಲಾದ ಕೃತಿಗಳನ್ನು ಓದುತ್ತಾ ನೆಮ್ಮದಿಯ ಹುಡುಕಾಟ ನಡೆದಿದೆ. 1೦೦೦ದಷ್ಟು ಲೋಕೋಕ್ತಿಗಳನ್ನು ಹೊಂದಿರುವ ಈ ಕೃತಿ ಜನರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರದ್ದು ಬಹುಮುಖ ಪ್ರತಿಭೆ. ಜಾನಪದ, ಯಕ್ಷಗಾನಕ್ಕೆ ಹೆಚ್ಚಿನ ಮನ್ನಣೆ ಕೊಟ್ಟವರು. ಸ್ವತ:…

Read More

16 ಫೆಬ್ರವರಿ 2023, ಮೈಸೂರು: ಶಿವರಾತ್ರಿಯ ಪ್ರಯುಕ್ತ ಚಿದಂಬರ ದೇಗುಲದಲ್ಲಿ ಫೆಬ್ರವರಿ 18ರಂದು ನಡೆಯುವ ವಿಜೃಂಭಣೆಯ “ನಾಟ್ಯಾಂಜಲಿ ಉತ್ಸವ”ದಲ್ಲಿ, ಮೂಲತಃ ಮಂಗಳೂರಿನವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಸಂಸ್ಥೆಯ ನೃತ್ಯ ಗುರುಗಳಾದ ವಿದುಷಿ ಶ್ರೀ ವಿದ್ಯಾ ಶಶಿಧರ್ ಮತ್ತು ಬಳಗದವರಿಂದ ಸಂಜೆ 6.30 ರಿಂದ ಭರತನಾಟ್ಯ ವೈಭವವು ಜರುಗಲಿದೆ. ತಂಜಾವೂರಿನ ಬೃಹದೇಶ್ವರ ದೇಗುಲದಲ್ಲಿ ಫೆಬ್ರವರಿ 19ರಂದು ಮಧ್ಯಾಹ್ನ 3.30 ರಿಂದ ನಡೆಯುವ “ಬೃಹನ್ ನಾಟ್ಯಂಜಲಿ”ಯಲ್ಲಿಯೂ ನೃತ್ಯ ಮತ್ತು ನಟವಾಂಗ ಕಲಾವಿದರಾಗಿ ಗುರು ವಿದುಷಿ ಶ್ರೀವಿದ್ಯಾ ಶಶಿಧರ್ ಅವರು ಪಾಲ್ಗೊಳ್ಳಲಿದ್ದಾರೆ.

Read More

16 ಫೆಬ್ರವರಿ 2023, ಪುತ್ತೂರು: ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಇವರು ಈ ಬಾರಿ ಶಿವರಾತ್ರಿಯ ಪ್ರಯುಕ್ತ ಚಿದಂಬರಂನಲ್ಲಿ ನಡೆಯುತ್ತಿರುವ ವಿಜೃಂಭಣೆಯ  “ನಾಟ್ಯಾಂಜಲಿ ಉತ್ಸವ”ದಲ್ಲಿ ಭರತನಾಟ್ಯ ಮತ್ತು ನಟವಾಂಗ ಕಲಾವಿದರಾಗಿ ಭಾಗವಹಿಸಲಿದ್ದಾರೆ. ತಂಜಾವೂರಿನ ಬೃಹದೇಶ್ವರ ದೇಗುಲದಲ್ಲಿ ನಡೆಯುವ “ಬೃಹನ್ ನಾಟ್ಯಾಂಜಲಿ”ಯಲ್ಲೂ ಭಾಗವಹಿಸಲಿದ್ದಾರೆ.ಇವರು ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆ, ಕಲಬುರಗಿ ಇದರ ನಿರ್ದೇಶಕರಾಗಿರುತ್ತಾರೆ.

Read More

15 February 2015, Mangaluru: Ranga Adhyayana Kendra in collaboration with UGC STRIDE Project & Kannada Department will be organizing the Yaksharoopaka “NIRUTTARAAYANA”. This show will be staged by St Aloysius Yakshagaana Team on 17th February 2023 at 2:15pm in the LCRI Auditorium, St Aloysius Autonomous College, Mangalore. This is a unique performance using modern Theatrical lights & techniques within the traditional art form Yakshagana. The veteran Yakshagana artist Mr K Govinda Bhat will perform the character of Bhishma. The grand narratives of Bhishma will be presented with alternative perspectives in this tale & also raising questions on Bhishma’s silence in…

Read More

15 ಫೆಬ್ರವರಿ 2023, ಮಂಗಳೂರು: “ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಕಲಾವಿದನ ನೈಜ ಪ್ರತಿಭೆಯ ಅನಾವರಣ” – ಮೋಹನ್ ಕುಮಾರ್ ಉಳ್ಳಾಲ ಚಕ್ರಪಾಣಿ ನೃತ್ಯ ಕಲಾಕೇಂದ್ರದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಆವರಣದಲ್ಲಿ ಪುರುಷ ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಿದರು. ಕಲಾವಿದನಲ್ಲಿ ಲಯಬದ್ಧ ಚಲನೆ, ನಾಟಕೀಯತೆಯೊಂದಿಗೆ ನೃತ್ಯ ಸಂಯೋಜನೆ ಈ ಮೂರು ಅಂಶಗಳು ಇದ್ದಾಗ ಮಾತ್ರ ಗುಣಮಟ್ಟ ನಿರ್ಧಾರವಾಗುತ್ತದೆ ಎಂದು ಹಿರಿಯ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು. ಮುಖ್ಯ ಅತಿಥಿ ಸ್ಥಾನದಿಂದ ರತೀಂದ್ರನಾಥ್ ಮಾತನಾಡಿ ಕಲಾಸೇವೆಯೊಂದಿಗೆ ಶ್ರೀ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡ ಚಕ್ರಪಾಣಿ ಸಂಸ್ಥೆಯ ನಿರ್ದೇಶಕ ಶ್ರೀ ಸುರೇಶ್ ಅತ್ತಾವರ ಇವರನ್ನು ಅಭಿನಂದಿಸಿದರು. ಕ್ಷೇತ್ರದ ಮಾಜಿ ಆಡಳಿತ ಅಧ್ಯಕ್ಷ ಧರ್ಮಣ್ಣ ನಾಯಕ್ ಶುಭ ಹಾರೈಸಿದರು. ನಿರ್ದೇಶಕ ಸುರೇಶ್ ಅತ್ತಾವರ ಸ್ವಾಗತಿಸಿ, ಲಕ್ಮ್ಮೀಶ ನಿರೂಪಿಸಿ ವಂದಿಸಿದರು.

Read More

15 ಫೆಬ್ರವರಿ 2023, ಮಂಗಳೂರು: ಜಾತಿ ಮತ ಕಂದಕವ ಮೀರಿದ ಸಂತ ಕವಿ ಕನಕದಾಸರು: ಪುತ್ತೂರು ನರಸಿಂಹ ನಾಯಕ್ ಮುಡಿಪು: ಕನಕದಾಸರ ಸಾಹಿತ್ಯದ ಶಕ್ಯಿ, ಕಾವ್ಯದ ಶಕ್ತಿ ಅತ್ಯದ್ಭುತವಾದುದು. ಅಂದಿನ‌ ಕಾಲದಲ್ಲೇ ಅವರು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತೋರಿಸುವುದರ ಜೊತೆಗೆ ಮನಸ್ಸು ಮನಸ್ಸು ಗಳನ್ನು ಬೆಸೆಯುವ , ಜಾತಿ‌,‌ಮತ ಕಂದಕಗಳನ್ನು ದೂರಗೊಳಿಸುವ ಪ್ರಯತ್ನವನ್ನು ಮಾಡಿದವರು ಕನಕದಾಸರು ಎಂದು ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದರು. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಗಾಯನ ಮತ್ತು ಸಮೂಹ ನೃತ್ಯ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸರ ಪ್ರತಿಯೊಂದು ಕಾವ್ಯದಲ್ಲೂ ಅವರ ಪ್ರಗತಿಪರ ಚಿಂತನೆ ಎದ್ದು ಕಾಣುತ್ತದೆ. ಪ್ರಗತಿಪರ ಚಿಂತನೆಯೊಂಂದಿಗೆ ಸಾಮರಸ್ಯವನ್ನು ತರುವಲ್ಲಿ ಕನಕರು ಕೊಂಡಿಯಾಗುವುದನ್ನು ಗಮನಿಸಲು ಸಾಧ್ಯವಾಗುತ್ತದೆ. ಕನಕದಾಸರ ಹಲವಾರು ಹಾಡುಗಳಲ್ಲಿ ಕಾವ್ಯದ…

Read More

15 ಫೆಬ್ರವರಿ 2023, ಮಂಗಳೂರು: ಫೆಬ್ರವರಿ 11 ಮತ್ತು 12ರಂದು ಸಂಪನ್ನಗೊಂಡ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಕುರಿತು ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಷಿ ಇವರ ಅನಿಸಿಕೆ “ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಕಾರ್ಕಳ, ಶಾಸಕ ರಘುಪತಿ ಭಟ್ ಹಾಗೂ ಸಂಘಟನಾ ಸಮಿತಿಯ ಎಲ್ಲರೂ, ಜಿ.ಎಲ್.ಹೆಗ್ಡೆ ಮತ್ತು ಅವರ ಬಳಗ, ಉಡುಪಿ ಕಲಾರಂಗ ಬಳಗ ತುಂಬಾ ದುಡಿದು ಒಂದು ಅದ್ಭುತವಾದ ಕೆಲಸ ಮಾಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಮುತುವರ್ಜಿ ಸಹಕಾರವೂ ಸ್ಮರಣೀಯ. ಅಕಾಡೆಮಿ ರಿಜಿಸ್ಟ್ರಾರ್ ಮತ್ತವರ ಸಿಬ್ಬಂದಿಗಳು, ಸ್ವಯಂಸೇವಕರು, ಅನೇಕ ದಾನಿಗಳು, ಸಹಕಾರಿ ಸಂಸ್ಥೆಗಳು, ದೇವಾಲಯಗಳ ಆಡಳಿತ ಮಂಡಳಿಗಳು ಜೊತೆಗಿದ್ದು ಸಹಕರಿಸಿದ್ದು ಶ್ಲಾಘನೀಯ. ಅದಕ್ಕೆ ಪೂರಕವಾಗಿ ಮಾಹೆಯವರ ಬಿ. ಎಡ್. ಕಾಲೇಜೂ ಸಿಕ್ಕಿತು. ಎಂ. ಜಿ. ಎಂ. ಕಾಲೇಜಿಗೂ ಇದು ಹತ್ತಿರವಾಯಿತು. ಉತ್ತಮ ಜಾಗ ಮತ್ತು ಎಲ್ಲಾ ಸೌಕರ್ಯಗಳಿರುವ ಜಾಗವೂ ಹೌದು. ಅತ್ಯಲ್ಪ…

Read More

15 ಫೆಬ್ರವರಿ 2023, ಉಡುಪಿ: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಫೆಬ್ರವರಿ 12ರಂದು ಜರುಗಿದ ಸರಣಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಅರುಣ ಜ್ಯುವೆಲರ್ಸ್ ಮಾಲಕ ಅರುಣ್ ಜಿ. ಶೇಟ್ ಮೇಲಿನಂತೆ ನುಡಿದರು.ಯಕ್ಷಗಾನವನ್ನು ಹಿಂದಿನವರು ಅತ್ಯಂತ ಶೃದ್ಧೆಯಿಂದ ಪ್ರದರ್ಶಿಸುತ್ತಲಿದ್ದರು.ಕೇಳುಗರು ಇಲ್ಲದಿದ್ದರೂ ದೇವರ ಆರಾಧನೆ ಎಂಬ ನೆಲೆಯಲ್ಲಿ ಕಲಾ ಸೇವೆ ಮಾಡುತ್ತಿದ್ದುದೇ ಯಕ್ಷಗಾನದ ಉಳಿವಿಗೆ ಕಾರಣ ಎಂದರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ,ಶ್ರೀ ಮಹಾಮಾಯೀ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಹಾರ್ಮೋನಿಯಂ ವಾದಕನಾಗಿ ಸಂಘದಲ್ಲಿ ಸೇವೆ ಮಾಡುತ್ತಿದ್ದ ಭವಾನಿಶಂಕರ ಆಚಾರ್ಯರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು. ಸಂಘದ ಬಯಲಾಟದಂದೂ ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದ ಭವಾನಿ ಶಂಕರರ ಸೇವೆ ಅನನ್ಯ ಎಂದು ಶ್ಲಾಘಸಿದರು. ಸಂಘಟನಾ ಕಾರ್ಯದರ್ಶಿ ಅಶೋಕ್ ಬೋಳೂರು ಸಂಮಾನ ಪತ್ರದ ವಾಚನ ಗೈದರು. ಕೀರ್ತಿಶೇಷ ಪೆರ್ಲ ಕೃಷ್ಣ ಭಟ್ಟರು ವಾಗೀಶ್ವರೀ ಯಕ್ಷಗಾನ ಸಂಘದಲ್ಲಿ ಅರ್ಥಧಾರಿಯಾಗಿ ಭಾಗವಹಿಸಿ ಸಲ್ಲಿಸಿದ್ದ ಸೇವೆಗಾಗಿ ನುಡಿ ನಮನ ಸಲ್ಲಿಸಲಾಯಿತು.ಉಡುಪಿಯಲ್ಲಿ ಜರಗಿದ ಪ್ರಪ್ರಥಮ…

Read More

15 ಫೆಬ್ರವರಿ 2023, ಮಂಡ್ಯ: ರಂಗಬಂಡಿ ಮಳವಳ್ಳಿ ಟ್ರಸ್ಟ್ (ರಿ). ಇದರ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ಇದೇ 16/02/2023ರಂದು ಸಂಜೆ 6:00ಕ್ಕೆ ಬಯಲು ರಂಗಮಂದಿರ ಶಾಂತಿ ಕಾಲೇಜು ಅವರಣ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಹಕಾರದೊಂದಿಗೆ ನಡೆಯಲಿದೆ. ಗಂಗೆ ಗೌರಿ ಪ್ರಸಂಗ – ನಾಟಕದ ಬಗ್ಗೆ ಬೆಸ್ತರ ಹುಡುಗಿ ಗಂಗೆ ಭುವಿಗೆ ಬಂದ ಶಿವನಲ್ಲಿ ಮೋಹಗೊಳ್ಳುತ್ತಾಳೆ.ಶಿವ ಗಂಗೆಯಲ್ಲಿ ಅನುರಕ್ತ ನಾಗಿ ಅವಳನ್ನು ತನ್ನ ಜಡೆಯಲ್ಲಿ ಹುದುಗಿಸಿಕೊಂಡು ಕೈಲಾಸಕ್ಕೆ ಕರೆದೋಯ್ಯುತಾನೆ. ಸವತಿ ಮತ್ಸರ್ಯದಿಂದ ಗೌರಿ ಗಂಗೆಯನ್ನು ಹೀನಕುಲದವಳೆಂದು ಜರಿದು ಕೈಲಾಸದಿಂದ ಹೊರ ಅಕಲು ಬಯಸುತ್ತಾಳೆ. ಗಂಗೆ ಕೈಲಾಸದಿಂದ ಹೊರಡುವಾಗ ಗೌರಿ ಹೊರಗಾಗುತ್ತಾಳೆ (ಮುಟ್ಟಗುತ್ತಾಳೆ ). ಗೌರಿ ಸೂತಕದಿಂದ ಹೊರಬರಬೇಕಾದರೆ ಗಂಗೆ ಬೇಕೇಬೇಕೆಂದು ಅರಿತ ಗಂಗೆ ಕೈಲಾಸದಿಂದ ಮಾಯವಾಗುತ್ತಾಳೆ. ಗಂಗೆಯನ್ನು ತರಲು ಗೌರಿ ವೀರಣ್ಣನನ್ನು ಭೂಮಿಗೆ ಕಳಿಸುತ್ತಾಳೆ. ಭೂಮಿಯಲ್ಲೂ ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಜನರು ಎಲ್ಲ ನದಿಯ ನೀರನ್ನು ಕಲುಷಿತ ಮಾಡಿದ್ದಾರೆ.…

Read More

13 ಫೆಬ್ರವರಿ 2023, ಮಂಗಳೂರು: ನಿಲ್ಲದ ಕಾಲ ,ಸಿಗದ ಬಿಡುವು, ಸತ್ತ ಬದುಕು,ಇವೆಲ್ಲದರ ನಡುವೆ ತಪ್ಪಿಸಿಕೊಳ್ಳಲಾಗದಂತೆ ತಮ್ಮನ್ನು ತಾವೇ ಬಂಧಿಸಿಕೊಂಡಿರುವ ನಗರವಾಸಿಗಳ ಆಂತರ್ಯದ ಕೂಗು ಕೆಂಡೋನಿಯನ್ಸ್. ಇಲ್ಲಿ Hope for the best ಎನ್ನುತ್ತಲೇ ನಾಗರಿಕತೆಯ ಅಲಗಿಗೆ ಕೊರಳೊಡ್ಡಬೇಕು. ಮ್ಯಾನೇಜರ್, ಆಫೀಸರ್, ಜವಾನ, ಎನ್ನುತ್ತಾ ಕಟ್ಟಿಕೊಂಡಿರುವ ತಾರತಮ್ಯದ ಹೈರಾರ್ಕಿಯಲ್ಲಿ ಎಲ್ಲರೂ ಸಮಾನ ದುಃಖಿಗಳೇ. ಇವರನ್ನೆಲ್ಲೋ ನೋಡಿದ್ದೀನಿ ಎನ್ನುತ್ತಾ ಪಾತ್ರಧಾರಿ ದಾಮು ಗ್ರಾಮಗಳಿಂದ ನಗರಗಳಿಗೆ ಎಳೆದು ತರುವ ಭ್ರಮೆಗಳೊಡನೆ ನಗುತ್ತಲೇ ವ್ಯವಹರಿಸುತ್ತಾನೆ, ತನ್ನ ಹಳ್ಳಿಯನ್ನು ನೆನಪಿಸುತ್ತಾ ನಮ್ಮನ್ನು ಜೊತೆಯಲ್ಲೇ ಕರೆದೊಯ್ಯುತ್ತಾನೆ. ನಮ್ಮದೇ ಕಥೆಯನ್ನು ನಮ್ಮ ಮುಂದೆ ಹರವಿ ನಿಲ್ಲುತ್ತಾನೆ. ಅದೇ ದಾಮು ಸರ್ಕಸ್ನಲ್ಲಿ ಕುಣಿಯುತ್ತಾ ನಲಿಯುತ್ತಾ ಹಸಿವಿನಿಂದ ಬಳಲುತ್ತಾ ವೀಕೆಂಡ್ಗಳಿಗೆ ಕಾಯುವ ನಮ್ಮನ್ನು ಅಣಕಿಸುತ್ತಾನೆ. “ಇಲ್ಲೊಂದು ಮೆಷಿನ್ ಇದೆ ಅದರಲ್ಲಿ ನನೆಲ್ಲಾ ನೋಡ್ಬಹುದು, ನಾನ್ಯಾರಿಗೂ ಕಾಣೋದಿಲ್ಲ” ಎನ್ನುತ್ತಾ ಕಟ್ಟಿಕೊಡುವ ಜಾತ್ರೆಯ ದೃಶ್ಯ ಗದ್ಗದಿತವಾಗುವಂತೆ ಮಾಡುತ್ತದೆ. ದಾಮೂ, ಪುಷ್ಪ ,ದಿನೇಶ, ಅಷ್ಪಕ್, ಸಿಪ್ರಿಯನ್ ಪಾತ್ರಗಳು ನಮ್ಮ ಸುತ್ತವೇ ಕನ್ನಡಕ ಹಾಕಿ “ಸ್ಟೈಲಾಗಿ ಕಾಣ್ತಿರಬಹುದು. ಆದ್ರೆ…

Read More