Subscribe to Updates
Get the latest creative news from FooBar about art, design and business.
Author: roovari
ಕನ್ನಡದ ಯುವ ಬರಹಗಾರ್ತಿ ವಿದ್ಯಾ ಕೆ.ಎನ್. ಅವರ ಎರಡನೇ ಕಾದಂಬರಿ ‘ಯೋಗದಾ’. ಶೀರ್ಷಿಕೆಯೇ ಸೂಚಿಸುವಂತೆ ಇದು ಸನಾತನ ಹಿಂದೂ ಸಂಸ್ಕೃತಿಯನ್ನು ಜೀವಾಳವಾಗಿಸಿಕೊಂಡ ಒಂದು ಕೃತಿ. ಆಧುನಿಕತೆಯ ಹುಚ್ಚು ಪ್ರವಾಹದಲ್ಲಿ ತನ್ನತನವನ್ನು ಮರೆಯುತ್ತಿರುವ ಇಂದಿನ ಜನತೆಗೆ ಭಾರತೀಯ ಸಂಸ್ಕೃತಿಯೊಳಗಿನ ಅಗಾಧ ಶಕ್ತಿಯ ಮಹತ್ವವನ್ನು ನೆನಪಿಸುವ ಈ ಕೃತಿಯ ತಿರುಳು ಒಂದು ಸುಂದರ ಕೌಟುಂಬಿಕ ಕಥೆಯ ಕಣಕದೊಳಗೆ ಬೆಸೆದ ತತ್ವಜ್ಞಾನದ ಸಿಹಿ ಹೂರಣದಂತಿದೆ. ನಮ್ಮ ಹಿರಿಯರು ಹಿಂದೆ ಶ್ರದ್ಧೆಯಿಂದ ಮನೆ ಮನೆಗಳಲ್ಲಿ ಮಾಡುತ್ತಿದ್ದ ಶಕ್ತಿಯ ಉಪಾಸನೆ ಮತ್ತು ಆ ಮೂಲಕ ಮನೆಯೊಳಗೆ ಸಂಚರಿಸುವ ಧನಾತ್ಮಕ ವಾತಾವರಣದ ಬಗ್ಗೆ ಅವರ ಕಾಳಜಿಯನ್ನು ಈ ಕಾದಂಬರಿ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತದೆ. ಆಧುನಿಕತೆಯನ್ನು ರೂಢಿಸಿಕೊಂಡ ಕುಟುಂಬದೊಳಗೂ ಇದು ಸಾಧ್ಯ ಅನ್ನುವುದನ್ನು ತೋರಿಸಿ ಕೊಡುತ್ತದೆ. ಹುಟ್ಟೂರು ಸಾಂಸ್ಕೃತಿಕ ಮಹತ್ವದ ಸ್ಥಳ ಶೃಂಗೇರಿಯಾದರೂ ಉದ್ಯೋಗದ ಕಾರಣದಿಂದ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿರುವ ಶಂಕರ್ ದೀಕ್ಷಿತರು, ಅವರ ಪತ್ನಿ ಸುವರ್ಣಾ, ಮಕ್ಕಳಾದ ಅನಘಾ ಮತ್ತು ಅಭಿಜ್ಞಾರ ಸುಂದರ ಕೌಟುಂಬಿಕ ಬದುಕಿನ ಸುತ್ತ ಈ ಕಾದಂಬರಿ…
ಗೋವಾ : ಸಪ್ತಕ್ ಬೆಂಗಳೂರು ಮತ್ತು ಸ್ವಸ್ತಿಕ್ ಕಲ್ಚರಲ್ ಆಸೋಶಿಯೇಷನ್ ಗೋವಾ ಪ್ರಸ್ತುತ ಪಡಿಸುವ ‘ಸ್ವರ ಸ್ವಸ್ತಿಕ್’ ಕಾರ್ಯಕ್ರಮವು ದಿನಾಂಕ 17-03-2024ರಂದು ಸಂಜೆ 5.30ಕ್ಕೆ ಗೋವಾ ಪಣಜಿಯ ಕಲಾ ಅಕಾಡೆಮಿ ಬ್ಲಾಕ್ ಬಾಕ್ಸ್ ಇಲ್ಲಿ ನಡೆಯಲಿದೆ. ಪಲ್ಲವಿ ಪಾಟೀಲ ಇವರ ಹಾಡುಗಾರಿಕೆಗೆ ಶ್ರೀ ರೋಹಿದಾಸ್ ಪರಬ್ ತಬಲದಲ್ಲಿ, ಶ್ರೀ ಅನೈ ಘಾಟೆ ಹಾರ್ಮೋನಿಯಂ ಮತ್ತು ಶ್ರೀ ವಾಸೀಮ್ ಖಾನ್ ಸಾರಂಗಿ ಸಾಥ್ ನೀಡಲಿದ್ದಾರೆ. ಬೆಂಗಳೂರಿನ ಶ್ರೀ ಕೌಶಿಕ್ ಐತಾಳ್ ಇವರ ಹಾಡುಗಾರಿಕೆಗೆ ಡಾ. ಉದಯ್ ಕುಲಕರ್ಣಿ ತಬಲದಲ್ಲಿ ಮತ್ತು ಶ್ರೀ ಸುಭಾಷ್ ಫತರ್ಪೆಕರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಕಾರ್ಕಳ : ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ‘ರಾಷ್ಟ್ರೀಯ ಚಿಂತನೆ –ಕನಕ ವೈಚಾರಿಕತೆಯ ಸೊಬಗು’ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 16-03-2024ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಿಯೋ ವಿಶುವಲ್ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಈ ವಿಚಾರ ಸಂಕಿರಣವನ್ನು ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಉದ್ಘಾಟನೆ ಮಾಡಲಿರುವರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿ.ಎ. ಶಿವಾನಂದ ಪೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಗಂಟೆ 10-45ರಿಂದ ನಡೆಯುವ ಚಿಂತನೆ 1ರಲ್ಲಿ ‘ಕನಕ ಕೀರ್ತನೆ – ದೇಸೀ ಚಿಂತನೆಯ ವೈಶಿಷ್ಟ್ಯ’, ಚಿಂತನೆ…
ಬೆಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ಎಚ್.ವಿಶ್ವ ನಾಥ್ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ಪ್ರಶಸ್ತಿ’ ಗೆ ವಿಶೇಷ ದೃಷ್ಟಿ ಚೇತನ ಲೇಖಕರಾದ ರಮಾ ಫಣಿ ಭಟ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ದೃಷ್ಟಿ ವಿಶೇಷ ಚೇತನ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ. ಎಚ್. ವಿಶ್ವನಾಥ್ ಅವರು ಈ ಪುರಸ್ಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು, ಪರಿಷತ್ತಿನ ಅನನ್ಯವಾದ ಪ್ರಶಸ್ತಿ ಎಂಬ ಹೆಗ್ಗಳಿಕೆ ಈ ಪುರಸ್ಕಾರಕ್ಕಿದೆ. ರಮಾ ಫಣಿ ಭಟ್ ಗೋಪಿಯವರು ಎಂ.ಎ ಮತ್ತು ಎಂ.ಕಾಂ. ಹೀಗೆ ಎರಡು ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿದ್ದು ಬದುಕನ್ನು ಸವಾಲಾಗಿ ತೆಗೆದುಕೊಂಡ ಸೃಜನಶೀಲ ಬರಹಗಾರರಾಗಿದ್ದಾರೆ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿದ್ದು , ಚಂದನ, ಎಫ್. ಎಂ. ವಾಹಿನಿಗಳೂ ಸೇರಿದಂತೆ ಹಲವೆಡೆ ಕವಿಗೋಷ್ಟಿಗಳಲ್ಲಿ ತಮ್ಮ ಕವಿತೆಗಳನ್ನು ವಾಚಿಸಿದ್ದಾರೆ. ‘ಭಾವಲೋಕ’ ಮತ್ತು ‘ಆಕಾಶ…
ಬೆಂಗಳೂರು : 2024ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿಗೆ ಹಿರಿಯ ಬರಹಗಾರರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ ಮತ್ತು ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಕನ್ನಡದಲ್ಲಿಯೇ ಕ್ತೈಸ್ತ ಪ್ರಾರ್ಥನೆಗಳು ನಡೆಯ ಬೇಕು ಎಂದು ಹೋರಾಟ ಮಾಡಿದ ಫಾದರ್ ಚಸರಾ ಎಂದೇ ಸಾಂಸ್ಕೃತಿಕ ವಲಯಗಳಲ್ಲಿ ಚಿರಪರಿಚಿತರಾದ ಫಾದರ್ ಚೌರಪ್ಪ ಸೆಲ್ವರಾಜ್ ಚರ್ಚ್ ಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ ಮತ್ತು ಸಂಗೀತ ರೂಪುಗೊಳ್ಳಲು ಶ್ರಮಿಸಿದವರು. ‘ಇಕ್ಕಟ್ಟಿಗೆ ಸಿಲುಕಿಸಿ ಬಿಟ್ಟೆ ಕ್ರಿಸ್ತಾ’ ‘ಅದುಮಿಟ್ಟ ನೆನಪಿನ ಪುಟಗಳಿಂದ’ ಇವರ ಪ್ರಮುಖ ಕೃತಿಗಳು. ಅನೇಕ ಕ್ರೈಸ್ತ…
ಪಡುಬಿದ್ರಿ : ನಟೇಶ ನೃತ್ಯನಿಕೇತನ ಉಚ್ಚಿಲದ ವಿಂಶತಿ ವಾರ್ಷಿಕೋತ್ಸವವು ದಿನಾಂಕ 08-03-2024ರಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಆವರಣದಲ್ಲಿ ನಡೆಯಿತು. ವಿದುಷಿ ವೀಣಾ ಎಂ. ಸಾಮಗ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮನ್ನು ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅರ್ಚಕ ಗೋವಿಂದ ರಾಜ್ ಭಟ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ “ಸಂಸ್ಕಾರಯುತ ಮಾನವ ಸಂಪನ್ಮೂಲ ದೇಶದ ಆಸ್ತಿ. ಪಾಶ್ಚಿಮಾತ್ಯದೆಡೆಗೆ ಮಕ್ಕಳು ವಾಲುತ್ತಿರುವ ಈ ಸಂದರ್ಭದಲ್ಲಿ ನಮ್ಮ ನೆಲದ ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸುವುದು ಅನಿವಾರ್ಯ. ಐತಿಹಾಸಿಕ ಸಾಂಸ್ಕೃತಿಕ ನೃತ್ಯ ಪ್ರಾಕಾರವಾದ ಭರತನಾಟ್ಯವನ್ನು ನೂರಾರು ಮಕ್ಕಳಿಗೆ ಕಲಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕೀರ್ತಿ ನಟೇಶ ನೃತ್ಯ ನಿಕೇತನ ಸಂಸ್ಥೆಗಿದೆ.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪತ್ರಿಕಾರಂಗದಲ್ಲಿ ಕಾಪು ತಾಲೂಕು ಪತ್ರಕರ್ತರಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಸಂಗೀತ ಕ್ಷೇತ್ರದಲ್ಲಿ ಶರತ್ ಉಚ್ಚಿಲ,…
ಪುತ್ತೂರು : ಸಂಸ್ಕಾರ ಭಾರತೀ ದ. ಕ. ಜಿಲ್ಲೆ ಪುತ್ತೂರು ವಿಭಾಗ ಇದರ ವತಿಯಿಂದ ಆಯೋಜಿಸಲ್ಪಟ್ಟ ತ್ಯಾಗರಾಜ ಆರಾಧನಾ ಮಹೋತ್ಸವವು ದಿನಾಂಕ 12-3-2024ನೇ ಮಂಗಳವಾರದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಭಕ್ತಿ, ಭಾವಪೂರ್ಣ ಹಾಗೂ ವಿಜೃಂಭಣೆಯಿಂದ ಜರುಗಿತು. ಹಿರಿಯ ಸದಸ್ಯರು ಹಾಗೂ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಶ್ರೀಮತಿ ವತ್ಸಲಾ ರಾಜ್ಞಿ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ, ಪುತ್ತೂರಿನ ವಿವಿಧ ಸಂಗೀತ ಶಾಲಾ ಗುರುಗಳು ಹಾಗೂ ವಿದುಷಿಯರಾದ, ವೀಣಾ ರಾಘವೇಂದ್ರ, ವಿದ್ಯಾ ಈಶ್ವರ ಚಂದ್ರ, ರಮಾ ಪ್ರಭಾಕರ್, ಪ್ರೀತಿಕಲಾ, ಪಾರ್ವತಿ ಹೊಸಮೂಲೆ, ಸ್ವರ್ಣ ಭಟ್, ಗೀತಾ ಸಾರಡ್ಕ ಮುಂತಾದವರು ಭಾಗವಹಿಸಿ, ಪಂಚರತ್ನ ಕೀರ್ತನೆ ಗೋಷ್ಠಿ ಗಾಯನವನ್ನು ನಡೆಸಿಕೊಟ್ಟರು. ವಿದುಷಿ ಮೇಘನಾ ಪಾಣಾಜೆ, ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ಶ್ರೀರಾಗ, ಭಾರತಿ ಶಶಿ ಹಾಗೂ ಇತರ ಕಲಾವಿದರು ಮುಂಚೂಣಿಯಲ್ಲಿದ್ದು ಸಹಕರಿಸಿದರು. ಹಿಮ್ಮೇಳನವಾದ ಮೃದಂಗದಲ್ಲಿ ಶ್ಯಾಮ ಭಟ್ ಸುಳ್ಯ ಮತ್ತು ಪ್ರಸನ್ನ ಭಟ್ ಬಲ್ನಾಡು, ವೀಣೆಯಲ್ಲಿ ಮಧುಲಿತಾ…
ಉಡುಪಿ : ಚುಟುಕು ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಲೇಖಕಿ ಸುಲೋಚನಾ ಪಚ್ಚಿನಡ್ಕ ಅವರನ್ನು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ನೇಮಕ ಮಾಡಿರುತ್ತಾರೆ. ಮುಂದಿನ ಆದೇಶದವರೆಗೆ ಸುಲೋಚನಾ ಪಚ್ಚಿನಡ್ಕ ಅವರು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ’ ಎಂಬ ಧ್ಯೇಯದೊಂದಿಗೆ ಚುಟುಕು ಸಾಹಿತ್ಯ ಪರಿಷತ್ತು 23 ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದಾದ್ಯಂತ ಚುಟುಕು ಸಾಹಿತ್ಯದ ಏಳಿಗೆಗೆ ಶ್ರಮಿಸುತ್ತಾ ಕಾರ್ಯಾಚರಿಸುತ್ತಿದೆ. 25 ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಸುಲೋಚನಾ ಪಚ್ಚಿನಡ್ಕ ಅವರು ಒಂದು ಕವನ ಸಂಕಲನ, ಎರಡು ಆತ್ಮ ಚರಿತ್ರೆ, ಒಂದು ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ತುಳು ಕಥಾ ಸಂಕಲನ ‘ತುಡರ್’ ಪ್ರಕಟಣೆಯ ಹಂತದಲ್ಲಿದೆ. ನೂರಾರು ಸಾಹಿತ್ಯ ಗೋಷ್ಠಿಗಳಲ್ಲಿ ಸಾಹಿತಿಯಾಗಿ ಭಾಗವಹಿಸಿದ ಅನುಭವವನ್ನು ಹೊಂದಿದ್ದಾರೆ.
ಮಂಗಳೂರು : ಪ್ರವಚನಕಾರ ಹರಿದಾಸ ದಿ. ಪೇಜಾವರ ವಿಜಯಾನಂದ ರಾವ್ ಸಂಸ್ಮರಣಾರ್ಥ, ಹರಿಕಥಾ ಪರಿಷತ್, ಶೇಣಿ ಚಾರಿಟೇಬಲ್ ಟ್ರಸ್ಟ್, ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ಶ್ರೀ ರಮಾನಂದ ಸ್ವಾಮೀ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ‘ದ್ವಾದಶ ಹರಿಕಥಾ ಸತ್ಸಂಗ’ ಕಾರ್ಯಕ್ರಮವು ದಿನಾಂಕ 12-03-2024 ರಂದು ಉದ್ಘಾಟಣೆಗೊಂಡಿತು . ಕಾರ್ಯಕ್ರಮವನ್ನು ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ “ಹರಿಕಥಾ ಕಾರ್ಯಕ್ರಮವು ಕೇವಲ ಮನೋರಂಜನೆಗಾಗಿರದೆ ಸಮಾಜದಲ್ಲಿ ಆಧ್ಯಾತ್ಮ ಹಾಗೂ ಪುರಾಣ ಚಿಂತನೆಗಳ ಒಂದು ಸಂಸ್ಕೃತಿ ಶಿಕ್ಷಣ ಕಲೆಯಾಗಿದೆ. ನಾಡಿನ ಎಲ್ಲ ಧಾರ್ಮಿಕ ಕ್ಷೇತ್ರಗಳು ನಡೆಸುವ ಉತ್ಸವಗಳ ಸಾಂಸ್ಕೃತಿಕ ಸರಣಿಯಲ್ಲಿ ಹರಿಕಥೆಯಂಥ ಕಲೆಗೆ ಪ್ರಾಶಸ್ತ್ಯ ನೀಡಿ ಪ್ರೋತ್ಸಾಹಿಸಬೇಕು.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಸಾಧಕರ ಸಂಸ್ಮರಣೆ, ಸನ್ಮಾನಗಳು ಸೇರಿದಂತೆ ಉಪಯುಕ್ತ ಚಟುವಟಿಕೆಗಳನ್ನು ಮಾಡುವಂತದ್ದು ಸಾಂಸ್ಕೃತಿಕ ಸಂಘಟನೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ನಿರಂತರ ಕಾರ್ಯಶ್ರದ್ಧೆಯಲ್ಲಿರುವ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ…
ಮಂಗಳೂರು : ಉರ್ವ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಅಂಗವಾಗಿ ‘ನೃತ್ಯಾಮೃತ’ ಸರಣಿ ಕಾರ್ಯಕ್ರಮ ಹಿನ್ನೆಲೆ ಪಾವಂಜೆ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ‘ನೃತ್ಯ ಲಹರಿ’ ಕಾರ್ಯಕ್ರಮವು ದಿನಾಂಕ 03-03-2024 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಾಸಿ ಯಕ್ಷಗಾನ ಕಲಾವಿದ ಡಾ. ಸತ್ಯಮೂರ್ತಿ ಐತಾಳ್ “ಭರತನಾಟ್ಯ ಕಲೆಯು ಕಲಾವಿದರಿಗೆ ಮಾತ್ರವಲ್ಲದೆ ಕಲಾ ಪ್ರೇಕ್ಷಕರನ್ನೂ ಆಧ್ಯಾತ್ಮಿಕ ಆನಂದ ಕಡಲಲ್ಲಿ ತೇಲಿಸಿ ಆತ್ಮೋನ್ನತಿಗೆ ಪೂರಕವಾದ ಭಾವಾನಂದ ನೀಡುತ್ತದೆ. ಅದು ಭರತನಾಟ್ಯ ಕಲೆಯ ಶಕ್ತಿ.” ಎಂದರು. ಉದ್ಯಮಿ ವಿಶ್ವೇಶ್ವರ ಬದವಿದೆ ಹೊಸಬೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಬೈಕಾಡಿ ಶ್ರೀನಿವಾಸ ರಾವ್, ವಿದುಷಿ ಸುಲೋಚನಾ ವಿ. ಭಟ್, ವಿದುಷಿ ವೀಣಾ ಎಂ. ಸಾಮಗ ಉಡುಪಿ, ವೈ. ರಾಘವೇಂದ್ರ ರಾವ್ ಸುರತ್ಕಲ್, ನಯನ ಹೆಜಮಾಡಿ, ಸಂಸ್ಥೆಯ ಟ್ರಸ್ಟಿ ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಉಪಸ್ಥಿತರಿದ್ದರು. ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಖಂಡಿಗೆ-ಚೇಳಾಯ್ರು , ಸನಾತನ ನಾಟ್ಯಾಲಯ ಮಂಗಳೂರು, ನೃತ್ಯಾಂಗನ್ ಮಂಗಳೂರು,…