Author: roovari

ಪ್ರತಿಯೊಬ್ಬರನ್ನೂ ಒಳಗೊಳ್ಳುವ, ಸಮಾಜ ಬೆಸೆವ ಕಲೆ ಯಕ್ಷಗಾನ 13 ಫೆಬ್ರವರಿ 2023, ಉಡುಪಿ: ಭಾರತೀಯ ಸಂಸ್ಕೃತಿಯ ಮೂವರು ಮಕ್ಕಳಂತಿರುವ ವೇದ ವೇದಾಂತ, ಮಹಾಕಾವ್ಯಗಳ ಹೊರತು ಪುರಾಣ ಪ್ರಪಂಚದ ವಿರುದ್ಧ ಸೋ ಕಾಲ್ಡ್ ಬುದ್ಧಿ ಜೀವಿಗಳು ದಾಳಿ ನಡೆಸಿ ಸಮಾಜ ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಉಡುಪಿ ಮೂಲದ ಬೆಂಗಳೂರಿನ ಲೇಖಕ ರೋಹಿತ್ ಚಕ್ರತೀರ್ಥ ಆರೋಪಿಸಿದ್ದಾರೆ. ಅವರು ಕುಂಜಿಬೆಟ್ಟಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಂಗವಾಗಿ ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ಗೋಷ್ಟಿಗಳನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಪೂರ್ಣ ಲಿಖಿತವೂ ಆಶುವೂ ಅಲ್ಲದ, ಪಠ್ಯ ಗದ್ಯಗಳ ಸಮ್ಮಿಲನ, ದೇಶಿ ಮತ್ತು ಮಾರ್ಗ, ಸಂಸ್ಕೃತಿ ಮತ್ತು ಪ್ರಾದೇಶಿಕತೆ, ಪೌರಾಣಿಕಮತ್ತು ಸಾಮಾಜಿಕ ಸಮಸ್ಯೆಗಳ ಸಮನ್ವಯವೇ ಯಕ್ಷಗಾನ. ಬೌದ್ಧಿಕ, ಭಾವನಾತ್ಮಕತೆ ಪ್ರಚೋದಿಸುವ, ಪಂಡಿತ ಪಾಮರರನ್ನೂ ತಲುಪುವ ಯಕ್ಷಗಾನ ಮಾನಸಿಕ ಸಂಸ್ಕಾರ ನೀಡಬಲ್ಲದು. ಜಗತ್ತಿನ ರಾಷ್ಟ್ರಗಳ ನಾಗರಿಕತೆ ಮ್ಯೂಸಿಯಂಗಳಲ್ಲಿದ್ದರೆ ಜೀವಂತವಾದ ಭಾರತೀಯ ನಾಗರಿಕತೆಯಲ್ಲಿ ಸಾಂಸ್ಕ?ತಿಕವಾಗಿ ಜೀವಂತಿಕೆಯುಳ್ಳ ಯಕ್ಷಗಾನ ಕಲೆಯ ಬಗ್ಗೆ ಹೆಮ್ಮೆ, ಗೌರವದ ಜತೆಗೆ ಎಚ್ಚರವೂ…

Read More

13 ಫೆಬ್ರವರಿ 2023, ಬೆಳಗಾವಿ: ರಂಗಸಂಪದ ಬೆಳಗಾವಿ ಫೆಬ್ರವರಿ 11 ಮತ್ತು 12ರಂದು ಆಯೋಜಿಸಿದ ಎರಡು ದಿನಗಳ ರಂಗತರಬೇತಿ ಕಾರ್ಯಾಗಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಅತೀ ಯಶಸ್ವಿಯಾಗಿ ಮೂಡಿಬಂತು. 16 ರಿಂದ 70 ವರ್ಷ ವಯಸ್ಸಿನ 25 ಅತೀ ಉತ್ಸಾಹೀ ರಂಗಾಸಕ್ತರು ತಮ್ಮ ಜೀವನದ ಸರ್ವ ಶ್ರೇಷ್ಠ ರಂಗತರಬೇತಿಯನ್ನು ಆನಂದಿಸಿದರು. ತರಬೇತಿದಾರ ಶ್ರೀ. ವೈಭವ ಲೋಕೂರ ಅವರ ಶ್ರೇಷ್ಟ ರಂಗತರಬೇತಿ ಎಲ್ಲರನ್ನೂ ಸತತವಾಗಿ ಒಂದು ಬೇರೆಯೇ ಲೋಕಕ್ಕೆ ಕೊಂಡೊಯ್ದು ವಿಶಿಷ್ಟ ಅನುಭವ ನೀಡಿತು. ರಂಗಸಂಪದ ಬೆಳಗಾವಿ ಮತ್ತೊಮ್ಮೆ ರಂಗಭೂಮಿಯ ಮತ್ತೊಂದು ಚಟುವಟಿಕೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿತು.

Read More

13 ಫೆಬ್ರವರಿ 2023, ಮಂಗಳೂರು:  “ಕಲೆ ಒಂದು ಧ್ಯಾನ. ಕಲೆಯನ್ನು ಪ್ರೀತಿಸಿ.” ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ಆಶ್ರಯದ ರಜತ ಸಂಭ್ರಮದ ಪ್ರಯುಕ್ತ ” ನೃತ್ಯ ಶರಧಿ ” ಸರಣಿ ಕಾರ್ಯಕ್ರಮವು ಫೆಬ್ರವರಿ 12ರಂದು ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ನಟರಾಜನಿಗೆ ದೀಪ ಹಚ್ಚಿ ಸಾಂಕೇತಿಕವಾಗಿ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾತನಾಡುತ್ತ ” ಕಲೆ ಒಂದು ಧ್ಯಾನ. ನಾವು ಕಲೆಯನ್ನು ಪ್ರೀತಿಸಿದರೆ, ಸಮಾಜವೇ ಪ್ರೀತಿಸುತ್ತದೆ.” ಎಂದು ಹೇಳುವ ಮೂಲಕ ನೃತ್ಯ ಕಲೆಯ ಬಗ್ಗೆ ಅವರಿಗಿರುವ ಅಭಿಮಾನ ಪ್ರಕಟವಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ. ಕಮಲಾಕ್ಷ ಆಚಾರ್ “ನೃತ್ಯ ಪಾರಮಾರ್ಥಿಕ ಕಲೆ. ಅದು ಕೊಡುವ ಪರಮಾನಂದ ಭಗವಂತನನ್ನು ತಲುಪುವುದಕ್ಕೆ ಸಾಧನವಾಗಿದೆ. ” ಎಂದರು. ನೃತ್ಯ ಗುರು ವಿದುಷಿ ಭಾರತಿ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಿಯಾದ ಸಮಯಕ್ಕೆ ಆರಂಭಿಸಿ ಸಮಯ ಪ್ರಜ್ಞೆಯನ್ನು ಮರೆದಿರುವುದು ಗಮನಾರ್ಹ. ಸಂಸ್ಥೆಯ ಸದಸ್ಯೆಯರಿಂದ ನೃತ್ಯ ಪ್ರದರ್ಶನ ನಡೆಯಿತು.…

Read More

13 Feb 2023, Mangaluru: When we talk of Sarojini Naidu as an Indian Poet, Politician, Women and Civil Rights activist we generally tend to forget the Woman she was from within. It’s pretty easy otherwise to detail and evaluate her works in the society based on her activism. But to discern Sarojini Naidu as the diverse lady she was born as and the to distinguish her as the steely woman she lived as, it is imperative to analyze her poems which is the place where she opened her heart. Aptly conferred to be known as the “Nightingale of India” and…

Read More

12 ಫೆಬ್ರವರಿ 2023: ಉಡುಪಿ ಜಿಲ್ಲೆಯ ಪುತ್ತಿಗೆ ಗ್ರಾಮದ ಗಣೇಶ್ ನಾಯಕ್ ಹಾಗೂ ಸುಶೀಲಾ ನಾಯಕ್ ಇವರ ತೃತೀಯ ಪುತ್ರರಾಗಿ ೦೨.೦೭.೧೯೭೪ ರಂದು ನಿತ್ಯಾನಂದ ನಾಯಕ್ ಅವರ ಜನನ. ೬ ನೇ ತರಗತಿ ವರೆಗೆ ವಿದ್ಯಾಭ್ಯಾಸ. ಸ್ವಂತ ಆಸಕ್ತಿಯಿಂದ ಯಕ್ಷಗಾನ ರಂಗಕ್ಕೆ ಬಂದವರು ನಿತ್ಯಾನಂದ ನಾಯಕ್. ಸುಬ್ರಹ್ಮಣ್ಯ ಮುದ್ರಾಡಿ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :- ಭಾಗವತರ ನಿರ್ದೇಶನದಂತೆ ತಮ್ಮ ಪಾತ್ರಕ್ಕೆ ತಕ್ಕಂತೆ ನಾವು ರಂಗ ಪ್ರದೇಶದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ನಾಯಕ್ ಅವರು ಹೇಳುತ್ತಾರೆ. ಭಸ್ಮಾಸುರ ಮೋಹಿನಿ, ಮಹಿಷಮರ್ದಿನಿ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಪುಣ್ಯಕೋಟಿ, ಕಂಸವಧೆ, ದಕ್ಷ ಯಜ್ಞ, ಅಶೋಕ ಸುಂದರಿ, ಶನೀಶ್ವರ ಮಹಾತ್ಮೆ, ಹಿಡಿಂಬ ವಿವಾಹ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಭಸ್ಮಾಸುರ, ದೇವಿ, ಮಹಿಷಾಸುರ, ನಾರದ, ದೇವೇಂದ್ರ, ಪದ್ಮಗಂದಿನಿ, ಹುಲಿ, ಪಾರ್ವತಿ, ವೀರಭದ್ರ, ಚಾನುರರಮುಷ್ಟಿಕ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ:- ಯಕ್ಷಗಾನವು…

Read More

ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ ಸಿಗಲಿ – ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ  11 ಫೆಬ್ರವರಿ 2023 ಉಡುಪಿ: ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ, ಸಂಗೀತ ನಾಟಕ ಅಕಾಡೆಮಿಯಿಂದ ಶಾಸ್ತ್ರೀಯ ಪ್ರಕಾರಗಳ ಮನ್ನಣೆ ಜತೆಗೆ ಕಲಾಭಿಮಾನದ ಹೊಸ ಶಕ್ತಿಯ ಅಭಿಯಾನವಾಗಲಿ ಎಂದು ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು. ಅವರು ಕುಂಜಿಬೆಟ್ಟು ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಶನಿವಾರ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಸಂಸ್ಕತಿ, ಭಾರತೀಯ ಸಂಸ್ಕಾರದ ಧಾರ್ಮಿಕ ಸಾರವಾದ ಯಕ್ಷಗಾನಕ್ಕೆ 11ಆಧಾರ ಸ್ಥಂಭಗಳಿದ್ದು 50ರಷ್ಟು ಗುಣಮಟ್ಟದ ಸಂಶೋಧನಾ ಅಧ್ಯಯನ ನಡೆದಿದೆ. ಯಕ್ಷಗಾನ ಶಿಕ್ಷಣ ಪದ್ಧತಿ, ಸಂಘಟನೆಯ ಸ್ವರೂಪದಲ್ಲಿ ಆಮೂಲಾಗ್ರ ಪರಿಷ್ಕಾರಗಳಾಗಬೇಕು. ಯಕ್ಷಗಾನ ಶಿಕ್ಷಣದಲ್ಲಿ ಕಲಾತತ್ವ, ಅನ್ಯಕಲೆಗಳ ಪರಿಚಯ ಅಳವಡಿಕೆ ಅಗತ್ಯ. ಕಲೆಗೆ ಪಾರಂಪರಿಕ, ಸಾಂಸ್ಥಿಕ, ಸಾಮುದಾಯಿಕ ಪದ್ಧತಿಗಳ ಯೋಗ್ಯ ಸಮನ್ವಯದ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ಸರಕಾರಿ, ಖಾಸಗಿ ನೆರವು, ರಾಜ್ಯ ಸರಕಾರದಿಂದ ಯಕ್ಷಗಾನ ಕೇಂದ್ರಗಳಿಗೆ ಸಮಗ್ರ ಗೌರವಯುತ ಅನುದಾನ ನೀತಿ ರೂಪಿಸಿ, ಯಕ್ಷಗಾನ ಮೇಳ…

Read More

11 ಫೆಬ್ರವರಿ 2023, ಬೆಂಗಳೂರು: ಕನ್ನಡದ ಶ್ರೇಷ್ಠ ನಾಟಕ ಬರಹಗಾರರಲ್ಲಿ ಒಬ್ಬರಾದ ಡಿ ಆರ್ ನಾಗರಾಜ್ ರವರು ಆಂಟನ್ ಚೆಕಾವ್ ರವರು ಬರೆದಿರುವ ವಾರ್ಡ್ ನಂ. 6 ಎಂಬ ಕೃತಿಯನ್ನು ಕನ್ನಡಕ್ಕೆ ರೂಪಾಂತರ ಮಾಡಿ 1980ರ ದಶಕದಲ್ಲಿ ಕನ್ನಡದ ನಾಟಕ ಪ್ರಪಂಚಕ್ಕೆ ಪರಿಚಯಿಸಿದರು. ಕತ್ತೆಲೆ ದಾರಿ ದೂರ ಕನ್ನಡ ನಾಟಕ ರಂಗದಲ್ಲೆ ಅದರದ್ದೆ ಆದ ದೂರದ ದಾರಿಯನ್ನು ಹುಡುಕಿಕೊಂಡು ತನ್ನದೆ ಛಾಪನ್ನು ಮೂಡಿಸಿದೆ. ಈ ಕೃತಿಯು ಮಾನಸಿಕ ಸ್ತಿಮಿತ ಕಳೆದುಕೊಂಡಿರುವ ಮನಸುಗಳ ನಡುವೆ ನಡೆಯುವ ಒಂದು ಕಥೆ. ಅನ್ಯಾ ಯ, ಶೋ ಷಣೆ, ಭ್ರಷ್ಟಾಚಾರ, ಹಿಂಸೆ, ದೌರ್ಜ ನ್ಯ- ಇದೆಲ್ಲವು ಭ್ರಷ್ಟ ಅಧಿಕಾರಿಯ ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುವ ಮೂಲ ಬೇರಾಗಿ ಈ ನಾಟಕದಲ್ಲಿ ಕಾಣುತೊ ಡಗುತ್ತದೆ. ಆಂಟನ್ ಚೆಕಾವ್ ಪ್ರಕಾರ ‘ಒಬ್ಬ ಪಾತ್ರಧಾರಿಯ ಕರ್ತ ವ್ಯ ಪ್ರಶ್ನೆಗಳನ್ನು ಹುಡುಕುವುದೇ ಹೊ ರತು ಉತ್ತರಗಳನ್ನು ಹುಡುಕುವುದಲ್ಲ’. ನಾಗರಾಜ್ ರವರ ಪ್ರಕಾರ ಮನುಷ್ಯ ತನ್ನ ಬುದ್ಧಿ ಮಟ್ಟದಲ್ಲಿ, ತನ್ನ ತೊ ಡಲಾಟದಲ್ಲಿ —— ತನ್ನ…

Read More

ಈ ನಾಟಕದ ಮೊದಲ ಪ್ರದರ್ಶನದಿಂದಲೇ ನಾಟಕದ ಕುರಿತು ಒಳ್ಳೆಯ ಮಾತುಗಳನ್ನು ಕೇಳಿದ್ದೆ. ಆವಾಗಿನಿಂದ್ಲೂ ನಾಟ್ಕ ನೋಡಲೇಬೇಕೆಂಬ ತೀವೃ ತುಡಿತವಿತ್ತು. ಆಗ ಮೈಸೂರಿನಲ್ಲಿ ಮಾತ್ರ ಪ್ರದರ್ಶನಗಳಾಗ್ತಿದ್ವು. ನಮ್ಮೂರಿಗೆ ಮೈಸೂರು ತುಂಬ ದೂರ. ಆದರೂ ಹೊಗೋ ಉಮೇದು ತುಂಬ ಇತ್ತು. ಯಾಕೋ ಸಧ್ಯವಾಗಲೇ ಇಲ್ಲ. ಈ ಮಧ್ಯೆ ನಾಟಕದ ಪ್ರದರ್ಶನಗಳೂ ನಡೆದಂತೆ ಕಾಣಲಿಲ್ಲ. ಇನ್ನೇನು ಇಂಥದೊಂದು ನಾಟ್ಕ ಕೈತಪ್ಪಿ ಹೋಯ್ತಲ್ಲ ಅಂದ್ಕೊಳ್ತಾ ಇರುವಾಗ್ಲೇ ಗೆಳೆಯ ಐಕೆ ಉಡುಪಿಯ ಪ್ರದರ್ಶನದ ಬಗ್ಗೆ ಹೇಳಿದ್ರು. ಮಗ್ಗುಲಲ್ಲೇ ಇರೋವಾಗ ಬಿಡೋದುಂಟೇ?. ಮೊನ್ನೆ ಉಡುಪಿಗೆ ಹೊರಟೇಬಿಟ್ಟೆ. ರಂಗಭೂಮಿ ಯ ನಾಟಕೋತ್ಸವದಲ್ಲಿ ನಾಟ್ಕ ನೋಡ್ದೆ. ಖರೇ ಹೇಳ್ತೇನೆ. ಅಷ್ಟು ದೂರ ಹೋಗಿ ನಾಟ್ಕ ನೋಡಿದ್ದಕ್ಕೆ ಸಾರ್ಥಕ ಅನ್ನಿಸ್ತು. ಮೊದಲಿಗೆ ಈ ನಾಟ್ಕ ಉಡುಪಿಗೆ ತಂದಿದ್ದಕ್ಕೆ ಪ್ರದೀಪ್ ಗೆ ಧನ್ಯವಾದ. ರಾಮಾಯಣ, ಮಹಾಭಾರತಗಳು ಭಾರತೀಯ ಸೃಜನಶೀಲ ಕಲೆಗಳನ್ನು ಕಾಡಿದಷ್ಟು ಇನ್ಯಾವುದೂ ಕಾಡಿಲ್ಲವೇನೋ. ಮೊಗೆದಷ್ಟೂ ಸಿಗುತ್ತ ಹೋಗುವ ಜೀವನಾನುಭವಗಳು, ಎಣೆಯಿಲ್ಲದಷ್ಟು ಸಂಘರ್ಷಗಳು. ನೂರಾರು ವ್ಯಾಖ್ಯಾನಗಳು. ಹಾಗೆಂತಲೇ ಶಾಸ್ತ್ರೀಯ ಮತ್ತು ಜಾನಪದೀಯ ಕಲಾಪ್ರಕಾರಗಳ ಫೇವರಿಟ್ ಅವು.…

Read More

10 February 2023, Mangaluru: The National School of Drama organizes a worldwide theatrical festival under the name “Bharat Rang Mahotsav,” every year. Now this festival is regarded as one of the biggest festivals in the entire world. The 22nd edition of this festival will take place from 14 to 26 February 2023. 77 plays have been chosen from the 960 submissions & they will be staged in 10 places throughout India, the play “Kendonians” which is produced by Astitva will be staged one among 77plays. Astitva, is a group of young men & women with a special passion for theatre…

Read More

10 ಫೆಬ್ರವರಿ 2023: ಗಂಡಾಗಿ ಹುಟ್ಟಿ ಹೆಣ್ಣಿನ ಹಾವಭಾವ, ನಡೆ ನಡೆದುಕೊಳ್ಳುವುದು, ಅಭಿನಯಿಸುವುದು ಸಣ್ಣ ವಿಚಾರವಲ್ಲ. ಆದರೆ ಎಂಥವರನ್ನೂ, ಗಂಡಾಗಿ ಹುಟ್ಟಿ ಹೆಣ್ಣಿನ ರೂಪದಲ್ಲಿ ಆಕರ್ಷಿಸಬಲ್ಲ ತಾಕತ್ತಿರುವುದು ಯಕ್ಷಗಾನ ಕಲಾವಿದರಿಗೆ ಮಾತ್ರ. ಈ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಕಲಾವಿದ ರಾಜೇಶ್ ನಿಟ್ಟೆ. 10.02.1992 ರಂದು ಸಂಜೀವ ಕೊಟ್ಟಾರಿ ಹಾಗೂ ಬೇಬಿ ಇವರ ಮಗನಾಗಿ ಜನನ. ಚಿಕ್ಕಂದಿನಿಂದಲೂ ಯಕ್ಷಗಾನ ಕಲೆಯ ಮೇಲೆ ಇದ್ದ ಆಸಕ್ತಿ; ಶಶಿಕಾಂತ್ ಶೆಟ್ಟಿ ಅವರ ಪಾತ್ರಗಳು; ನೀಲ್ಕೋಡು ಶಂಕರ ಹೆಗಡೆ ಅವರ ನಾಗವಲ್ಲಿ ಪಾತ್ರ ನೋಡಿ ಇದರಿಂದ ಪ್ರೇರಣೆಗೊಂಡು ಸ್ತ್ರೀವೇಷ ಮಾಡಬೇಕೆಂಬ ಆಸೆ ಹುಟ್ಟಿ ಯಕ್ಷಗಾನ ರಂಗಕ್ಕೆ ಬಂದರು. ನಿಟ್ಟೆ ಅವರ ಪ್ರಥಮ ಯಕ್ಷಗಾನ ಗುರುಗಳು ಕೆರ್ವಾಷೆ ಆನಂದ ಗುಡಿಗಾರ. ನಂತರ ಕೃಷ್ಣಪ್ಪ ಮೂಲ್ಯ ಕಟೀಲ್, ವಿಶ್ವರೂಪ ಮಧ್ಯಸ್ಥ ನೀಲಾವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:- ಹಿಂದೆ ಆದ ಯಕ್ಷಗಾನ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ನೋಡಿ ಅಥವಾ ಎಂ.ಕೆ…

Read More