Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಬೆಂಗಳೂರಿನ ಲಹರಿ ಭಾರಿಘಾಟ್ ಅವರು ರಂಗಭೂಮಿ ಮತ್ತು ಭರತನಾಟ್ಯದ ಬಗ್ಗೆ ಆಳವಾದ ಒಲವು ಹೊಂದಿರುವ ಮತ್ತು ವೃತ್ತಿಯಾಗಿ ಸಮಾಜ ಕಾರ್ಯದಲ್ಲಿ ತೊಡಗಿರುವವರು. ತಮ್ಮ ಸಂಸ್ಥೆ ‘ಸಹಚಾರಿ’ ಮೂಲಕ ತಮ್ಮ ಸಮಾಜ ಕಾರ್ಯದ ಮೌಲ್ಯಗಳನ್ನು ಕಲೆಯೊಂದಿಗೆ ಬೆಸೆಯುವ ಉದ್ದೇಶವನ್ನು ಹೊಂದಿದ್ದಾರೆ. ‘ಸಹಚಾರಿ’ಯ ಮೊದಲ ಪ್ರಯೋಗ ‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ಕಾರ್ಯಕ್ರಮ ‘ಸಂವಿಧಾನ ಸಾಥಿ’ ಯೋಜನೆಯ ಭಾಗವಾಗಿದ್ದು, ದಿನಾಂಕ 16-06-2024ರ ಭಾನುವಾರ ಸಂಜೆ ಗಂಟೆ 4-30ರಿಂದ 5-30ರ ತನಕ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಸಾಂಸ್ಕೃತಿಕ ಸಂಘಟನೆ, ರಥಬೀದಿ ಗೆಳೆಯರು (ರಿ.), ಉಡುಪಿ ಇದರ ಆಶ್ರಯದಲ್ಲಿ ನೃತ್ಯ ತಜ್ಞೆ ಕೆ. ಶಾರದಾ ಆಚಾರ್ಯ ಇವರು ಪ್ರಸ್ತುತ ಪಡಿಸಲಿದ್ದಾರೆ. ‘ಸಂವಿಧಾನ ಸಾಥಿ’ ಎಂಬುದು ಬೆಂಗಳೂರಿನ ಸಂವಾದ ಬದುಕು ನೀಡುವ ಫೆಲೋಶಿಪ್ ಆಗಿದ್ದು, ಇದು ಭಾರತದ ಸಂವಿಧಾನದ ತತ್ವಗಳನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ನೃತ್ಯ ಪ್ರದರ್ಶನವು ಸಂವಿಧಾನದಲ್ಲಿರುವ ಧರ್ಮ ನಿರಪೇಕ್ಷತೆ ಮತ್ತು ಬಂಧುತ್ವ ಎಂಬ ಆದರ್ಶಗಳನ್ನು ಪ್ರತಿಪಾದಿಸುತ್ತದೆ. ಈ…
ಧಾರವಾಡ : ದಿನಾಂಕ 11-06-2024ರಂದು ನಮ್ಮನ್ನಗಲಿದ ಹಿರಿಯ ಸರೋದ್ ಕಲಾವಿದರಾದ ಪಂಡಿತ್ ರಾಜೀವ್ ತಾರಾನಾಥರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 13-06-2024 ರಂದು ಧಾರವಾಡದ ಗ್ರಂಥಮಾಲೆ ಅಟ್ಟದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತ್ ವೆಂಕಟೇಶ ಕುಮಾರ್ “ಪಂಡಿತ್ ರಾಜೀವ್ ತಾರಾನಾಥರು ನಮ್ಮ ದೇಶದ ಶ್ರೇಷ್ಠ ಸಂಗೀತಗಾರರು. ಸ್ಪಷ್ಟವಾದಿ, ನೇರ ನಿಷ್ಠುರರಾಗಿದ್ದ ಶ್ರೀಯುತರು ಅತ್ಯುತ್ತಮ ಮಾನವತಾವಾದಿಯೂ ಆಗಿದ್ದರು. ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಲ್ಲದೆ, ಅನೇಕ ಗುರುಗಳಿಂದ ಮಾರ್ಗದರ್ಶನ ಪಡೆದಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ರಾಜೀವ್ ತಾರಾನಾಥರು ಮತ್ತೆ ಈ ಸಂಗೀತ ನಾಡಿನಲ್ಲಿ ಹುಟ್ಟಿಬರಲಿ” ಎಂದು ಆಶಿಸಿದರು. ಹಿರಿಯ ಲೇಖಕ ಜಿ. ಸಿ. ತಲ್ಲೂರ ಮಾತನಾಡಿ “ಇಂತಹ ಕಲಾವಿದರು ಅಪರೂಪ. ಸಂಗೀತ ಎಲ್ಲರ ಮನಸ್ಸು ತಟ್ಟಬೇಕು. ಸಂಗೀತದಲ್ಲಿ ಶುದ್ಧತೆ, ಪ್ರಮಾಣ ಬದ್ಧತೆ, ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಸಾಧಿಸಿ ತೋರಿಸಿದವರು ಪಂ. ರಾಜೀವ ತಾರನಾಥ.” ಎಂದು ಹೇಳಿದರು. ರಮಾಕಾಂತ ಜೋಶಿಯವರು ಮಾತನಾಡಿ “ರಾಜೀವ್, ಜಿ. ಬಿ. ಜೋಶಿ ಮತ್ತು ಮನೋಹರ ಗ್ರಂಥಮಾಲೆ…
ಸಾವಿರಾರು ಮೈಲು ದೂರದ ಅರಬ್ ದೇಶವೊಂದರ ನೆಲದಲ್ಲಿ ಯಕ್ಷಗಾನವನ್ನು ಕಟೀಲು ಮೇಳದ ಆಯ್ದ ಪ್ರಬುದ್ಧ ಕಲಾವಿದರು ಪ್ರಸ್ತುತ ಪಡಿಸಿದ್ದು, ‘ಶ್ರೀದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನ ಸಾವಿರಕ್ಕೂ ಹೆಚ್ಚು ಯಕ್ಷಗಾನಪ್ರಿಯ ಅನಿವಾಸಿ ಭಾರತೀಯರನ್ನು ಭಕ್ತಿ ಮತ್ತು ಭಾವ ಪರವಶರನ್ನಾಗಿಸಿದ್ದಲ್ಲದೆ ಮೆಚ್ಚುಗೆಯ ಮಹಾ ಪೂರವೇ ವ್ಯಕ್ತವಾಗಿದೆ. ಬಿರುವೆ ಜವನೆರ್ ಮಸ್ಕತ್ ತಂಡವು ಕಟೀಲಿನ ಆರೂ ಮೇಳಗಳ 33 ಮಂದಿ ಕಲಾವಿದರನ್ನು ಆಯ್ದು ಮಸ್ಕತ್ ನಲ್ಲಿ ಶ್ರೀದೇವೀ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ದಿನಾಂಕ 31-05-2024ರ ಶುಕ್ರವಾರ ದಂದು ಏರ್ಪಡಿಸಿತ್ತು. ರಂಗಸ್ಥಳ ನಿರ್ಮಾಣ ಹಾಗೂ ವಿನ್ಯಾಸ, ಯಕ್ಷಗಾನದ ಕೆಲ ಪರಿಕರಗಳ ಸಿದ್ದತೆಯ ಹೊಣೆಗಾರಿಕೆ ಹೊತ್ತು ನಿರ್ವಹಿಸಿದ್ದಲ್ಲದೆ ರಂಗಸ್ಥಳ ಹಾಗೂ ಕದಂಬವನ ಸ್ವರ್ಣದುಯ್ಯಾಲೆ ಮಂಟಪ ಅಲಂಕಾರಕ್ಕಾಗಿ ವೈವಿಧ್ಯಮಯ ಹೂವುಗಳನ್ನು ಭಾರತದಿಂದಲೇ ತರಿಸಲಾಗಿತ್ತು. ಶ್ರೀದೇವಿ ಪಾತ್ರಗಳಿಗೆ ಬಳಸಲಾದ ಮಲ್ಲಿಗೆ ಸಹಿತ ಇತರ ಹೂವುಗಳನ್ನು ದುಬಾರಿ ಬೆಲೆ ತೆತ್ತು ಅಲ್ಲಿಯೇ ಖರೀದಿ ಸಿದ್ದು, ಚೌಕಿ ಪೂಜೆಗಾಗಿ ಪವಿತ್ರ ಹೂವುಗಳನ್ನೇ ಬಳಸಿ ವಿನ್ಯಾಸಗೊಳಿಸಿದ ಕಟೀಲು ದೇವಿಯ ಭಾವಚಿತ್ರ ಆಕರ್ಷಕವಾಗಿತ್ತು. ಇಲ್ಲಿ ಸತ್ಕಾರ ವ್ಯವಸ್ಥೆಗೂ…
ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ. ಸಾ. ಪ.), ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆ ವಲಯ ಕ. ಸಾ. ಪ. ಘಟಕ ಹಾಗೂ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಭಾಷಾ ಸಂಘದ ಸಂಯುಕ್ತಾಶ್ರಯದಲ್ಲಿ ಬಿ. ಜಿ. ರಘುನಾಥನಾಯಕ್ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 11-06-2024 ರಂದು ನಡೆಯಿತು. ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಹಾಗೂ ಕ. ಸಾ. ಪ. ಅಧ್ಯಕ್ಷರುಗಳು ಕುರಿತು ನಡೆದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ. ಜಿ. ಪ್ರೇಮಕುಮಾರ್ ಮಾತನಾಡಿ “ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವುದು ಮತ್ತು ಅವರನ್ನು ಉತ್ತಮ ಸತ್ಪಜೆಗಳನ್ನಾಗಿ ರೂಪಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ. ಮಕ್ಕಳು ಕಲೆ, ಸಾಹಿತ್ಯ, ವಿಜ್ಞಾನದ ಪುಸ್ತಕಗಳನ್ನು ಓದುವ ಪ್ರವೃತ್ತಿಯೊಂದಿಗೆ ಬರವಣಿಗೆಯ ಕೌಶಲ್ಯ ಬೆಳೆಸಿಕೊಂಡು ಜ್ಞಾನವಂತರಾಗಬೇಕು. ನಾಡಿನ ಸಾಹಿತಿಗಳ ಸಾಹಿತ್ಯವನ್ನು…
ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2023 ಸಾಲಿನ ರಾಜ್ಯಮಟ್ಟದ ನಾನಾ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಅವರ ‘ಬಹುತ್ವದ ಭಾರತ’ ಕೃತಿಯು ಆಯ್ಕೆಯಾಗಿದ್ದು, ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಗೆ ನಟಿ ರಂಜಿನಿ ರಾಘವನ್ ಅವರ ‘ಟೈಪ್ ರೈಟ್’ ಕೃತಿ ಆಯ್ಕೆಯಾಗಿದೆ. ಅದೇ ರೀತಿ ‘ಪುಸ್ತಕ ರತ್ನ’ ಪ್ರಶಸ್ತಿಗೆ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ‘ಮುದ್ರಣ ರತ್ನ’ ಪ್ರಶಸ್ತಿಗೆ ಗೌರಿ ಲ್ಯಾಮಿನೇಟರ್ಸ್ ಸಂಸ್ಥೆಯ ಟಂಕಸಾಲಿ ಎಸ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕೂ ಪ್ರಶಸ್ತಿಗಳು ತಲಾ 10,000 ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಪ್ರಶಸ್ತಿಗಳನ್ನು ದಿನಾಂಕ 06-07-2024ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸಾಮಯ್ಯ ತಿಳಿಸಿದ್ದಾರೆ. ಡಾ. ಹೆಚ್. ಎನ್. ಜಗದೀಶ್ ಕೊಪ್ಪ ಕುಮಾರಿ ರಂಜಿನಿ ರಾಘವನ್ ಶ್ರೀ ಅಭಿರುಚಿ ಗಣೇಶ್ …
ತುಮಕೂರು : ತುಮಕೂರಿನ ‘ವೀಚಿ ಸಾಹಿತ್ಯ ಪ್ರತಿಷ್ಠಾನ’ದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಇದರ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16-06-2024ರಂದು ತುಮಕೂರಿನ ಅಮಾನಿಕೆರೆ ರಸ್ತೆ, ಕನ್ನಡ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಕೇಂದ್ರ ವಲಯದ ಮಾನ್ಯ ಪೋಲೀಸ್ ಮಹಾನಿರ್ದೇಶಕರಾದ ಡಾ. ಬಿ.ಆರ್. ರವಿಕಾಂತೇ ಗೌಡ ಇವರು ಈ ಕಾರ್ಯಕ್ರಮ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದು, ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಶ್ರೀ ಎಸ್. ನಾಗಣ್ಣ ಇವರು ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಪುಸ್ತಕ ಪ್ರಾಧಿಕಾರದ ಲೇಖಕರು ಮತ್ತು ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಕವಿ ವೀಚಿಯವರ ಕುರಿತು ಮಾತನಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ‘ವಿನೂತನ ಕಥನ ಕಾರಣ’ (ಸಾಹಿತ್ಯ ವಿಮರ್ಶೆ) ಕೃತಿಯ ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರಶಸ್ತಿ ಪುರಸ್ಕೃತ ‘ಅರಸು ಕುರನ್ಗರಾಯ’ (ಸಂಶೋಧನೆ) ಕೃತಿಯ ಲೇಖಕರಾದ ಡಾ. ರವಿಕುಮಾರ್ ನೀಹ ಇವರಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ 2023’, ಪ್ರಶಸ್ತಿ ಪುರಸ್ಕೃತ ‘ಬುದ್ಧನ ಕಿವಿ’…
ಮಡಿಕೇರಿ : ರೆಡ್ ಬ್ರಿಕ್ಸ್ ಇನ್ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ವೈವಿಧ್ಯಮಯವಾದ 82 ಲೇಖನ ಗಳುಳ್ಳ 320 ಪುಟಗಳ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 09-06-2024ರಂದು ನಡೆಯಿತು. ವೈಚಾರಿಕ ಬರಹಗಳು, ಮಹಿಳಾ ಪರವಾದ ಲೇಖನಗಳು, ಸಾಧಕರು ಹಾಗೂ ವಿಶೇಷ ದಿನಗಳನ್ನು ಕುರಿತ ಲೇಖನಗಳಿರುವ ಈ ಪುಸ್ತಕದ ಕುರಿತು ಎಲ್ಲರೂ ಮೆಚ್ಚುಗೆಯ ನುಡಿಗಳನ್ನಾಡಿದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2002ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ 21 ಲೇಖಕಿಯರು ಅರ್ಹರಾಗಿದ್ದಾರೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಅಳುವಾರದಲ್ಲಿನ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಮಾತನಾಡಿ “ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ…
‘ಅಮ್ಮ ಬರುತ್ತಾಳೆ’ ಎಂಬ ಕೃತಿಯು ಭಾರತೀ ಕಾಸರಗೋಡು ಅವರ ಹದಿನೈದು ಕತೆಗಳ ಸಂಕಲನವಾಗಿದೆ. ಆಯಾ ಕತೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಜೀವಂತಿಕೆಯಿಂದ ಕಂಗೊಳಿಸುತ್ತವೆ. ಸಾಮಾನ್ಯ ಕುಟುಂಬದ ಆಗುಹೋಗುಗಳ ಹಿನ್ನೆಲೆಯಲ್ಲಿ ವ್ಯಕ್ತಿಯ ಅಂತರಂಗದ ಭಾವನೆಗಳನ್ನು ಚಿತ್ರಿಸುವ ಲೇಖಕಿಯು ಮಹಾಭಾರತದ ದ್ರೌಪದಿ-ಗಾಂಧಾರಿಯರ ಮನಸ್ಸಿನ ವಿಷಾದವನ್ನು ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓದಿಸಿಕೊಂಡು ಹೋಗುವ ಭಾಷೆ, ಬಿಗಿಯಾದ ಬಂಧ, ಸಮರ್ಥವಾದ ಹೆಣಿಗೆ, ಗಹನವಾದ ವಿಚಾರಗಳನ್ನು ಸಹಜ ನೆಲೆಯಲ್ಲಿ ವಿಶ್ಲೇಷಿಸುತ್ತಾ ಸಾಗುವ ಪರಿಯು ಓದುಗನ ಮನಸ್ಸು ಪಾತ್ರಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ಬಾಲಕ ಹರಿನಾಥನ ಹೃದಯಲ್ಲಿ ಹೊಯ್ದಾಡುವ ಅಪಕ್ವ ಭಾವನೆಗಳು, ಜೊತೆಯಲ್ಲಿರದ ತಂದೆಯ ಕುರಿತಾದ ಕಲ್ಪನೆಗಳು, ಕೊನೆಗೆ ಅಪ್ಪನು ಕಾಣಿಸಿಕೊಂಡಾಗ ಅವನ ಮನದಲ್ಲಿ ಉಂಟಾಗುವ ಭಾವದ ಏರಿಳಿತಗಳನ್ನು ವಸ್ತುವಾಗಿ ಹೊಂದಿದ ‘ಹಾರಗುದರಿ ಬೆನ್ನಏರಿ’ ಎಂಬ ಕತೆಯು ಓದುಗರ ಗಮನ ಸೆಳೆಯುತ್ತದೆ. ತಂದೆಯ ಪ್ರೀತಿಗಾಗಿ ಹಂಬಲಿಸುವ ಹರಿನಾಥನು ತನ್ನ ತಾಯಿಯ ಮಡಿಲಲ್ಲಿ ಮಲಗಿ, ಮಾಸಿದ ಸೀರೆಯ ಘಮಲನ್ನು ಹೀರುತ್ತಾ ಬಿಕ್ಕುವ ಬಗೆಯು ಮಾರ್ಮಿಕವಾಗಿ ಮೂಡಿ ಬಂದಿದೆ. ತಂದೆಯ ಕುರಿತ ವಿಚಾರಗಳು ಅತಿರೇಕಕ್ಕೆ ತಲುಪಿದಾಗ,ತಾಯಿಯ…
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್( ರಿ) ಉಡುಪಿ ಕಳೆದ 17 ವರ್ಷಗಳಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದು, ಈ ವರ್ಷ ಶಾಸಕರಾದ ಗುರುರಾಜ ಗಂಟಿಹೊಳೆಯವರ ಅಪೇಕ್ಷೆಯಂತೆ ಬೈಂದೂರು ವಿಧಾನಸಭಾ ವ್ಯಾಪ್ತಿಯ 11 ಶಾಲೆಗಳು ಸೇರಿ ಒಟ್ಟೂ 91 ಶಾಲೆಗಳಲ್ಲಿ ಯಕ್ಷಶಿಕ್ಷಣ ನಡೆಸಲು ಯೋಜಿಸಿದೆ. ಈ ಪ್ರಯುಕ್ತ ಯಕ್ಷಗಾನ ಗುರುಗಳ ಸಮಾಲೋಚನಾ ಸಭೆಯು ದಿನಾಂಕ 12-06-2024ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ಹೊರಾಂಗಣದಲ್ಲಿ ಜರಗಿತು. ಉಡುಪಿ ಕ್ಷೇತ್ರದ ಶಾಸಕ, ಟ್ರಸ್ಟಿನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ, “ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯನಿರ್ವಹಣೆಯಲ್ಲಿ ಕಲಾರಂಗದ ಕಾರ್ಯಕರ್ತರ ದುಡಿಮೆ ದೊಡ್ಡದು, ನಾವೆಲ್ಲ ಒಟ್ಟಾಗಿ ಈ ಮಹಾಭಿಯನವನ್ನು ಯಶಸ್ವಿಯಾಗಿಸೋಣ” ಎಂದರು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ “ಮಕ್ಕಳಿಗೆ ಸಂಸ್ಕಾರ ನೀಡುವ ಈ ಕಲಾಪ್ರಕಾರ ಉಳಿಸಿ ಬೆಳೆಸುವಲ್ಲಿ ಯಕ್ಷ ಗುರುಗಳ ಕೊಡುಗೆ ಮಹತ್ತ್ವದ್ದು” ಎಂದು ಅಭಿಪ್ರಾಯಪಟ್ಟರು. ಹಿರಿಯ ಟ್ರಸ್ಟಿ ಎಸ್.ವಿ. ಭಟ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಗುರುಗಳಿಗೆ ಉಪಯುಕ್ತ ಮಾಹಿತಿ…
ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ಅತ್ಯುತ್ತಮ ಕವನ ಸಂಕಲನಕ್ಕೆ ನೀಡುವ 2023ನೇ ಸಾಲಿನ ‘ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ’ಕ್ಕೆ ದಾವಣಗೆರೆಯ ಸದಾಶಿವ ಸೊರಟೂರು ಇವರ ‘ನಿನ್ನ ಬೆರಳು ತಾಕಿ’ ಕವನ ಸಂಕಲನವು ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ. ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ಪುರಸ್ಕಾರವು 25,000 ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದ್ದು ಮುಂಬರುವ ನವೆಂಬರ್ ತಿಂಗಳಿನಲ್ಲಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಕವಿ ಸದಾಶಿವ ಸೊರಟೂರು ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿಯಲ್ಲಿ ವಾಸ. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕ. ಇದುವರೆಗೂ ಇವರ ನಾಲ್ಕು ಕವನಸಂಕಲನ ಮತ್ತು ಎರಡು ಕಥಾಸಂಕಲನಗಳು ಪ್ರಕಟವಾಗಿವೆ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’ ಕವನ ಸಂಕಲನಕ್ಕೆ ‘ಹರಿಹರಶ್ರೀ ಕಾವ್ಯ ಪ್ರಶಸ್ತಿ’, ಕವನ ಸಂಕಲನದ ಹಸ್ತಪ್ರತಿಗೆ ಕೊಡಮಾಡುವ ‘ಬಳ್ಳಾರಿ ಎನ್. ಗವಿಸಿದ್ದ ಕಾವ್ಯ ಪುರಸ್ಕಾರ’ವು ಇವರ ‘ಗಾಯಗೊಂಡ ಸಾಲುಗಳು’ ಕವನ ಸಂಕಲನಕ್ಕೆ ಬಂದಿದೆ. ‘ಕೊಲ್ಲುವುದಕ್ಕೆ ಸದ್ದುಗಳಿವೆ’ ಎಂಬ ಕವನಸಂಕಲನದ ಹಸ್ತಪ್ರತಿಗೆ ‘ಕಾವ್ಯಸಂಜೆ’ಯ ‘ದಶಮಾನೋತ್ಸವ…