Subscribe to Updates
Get the latest creative news from FooBar about art, design and business.
Author: roovari
ವರ್ಷದ ಹಿಂದೆ ಮಂಗಳೂರಿನದೇ ಕಲಾಭೀ ರಂಗಸಂಸ್ಥೆ ವಿಶೇಷ ಮತ್ತು ಪುಟ್ಟ ರಂಗ ಮಂಚ ಹಾಗೂ ಮಂದಿರದಲ್ಲಿ ಪ್ರಯೋಗಿಸಿದ ಬುನ್ರಾಕು (ಜಪಾನೀ ಗೊಂಬೆಯಾಟ), ರಸಿಕ ವರ್ಗದಲ್ಲಿ ಆಶ್ಚರ್ಯದ ಬಹುದೊಡ್ಡ ಅಲೆಯನ್ನೇ ಎಬ್ಬಿಸಿತ್ತು. ಅದರ ನಿರ್ಮಾಣ ಮತ್ತು ನಿರ್ದೇಶಕ ಶ್ರವಣ್ ಹೆಗ್ಗೋಡು. ಇವರು ರಂಗಕಲೆಗಳಲ್ಲಿ ನೀನಾಸಂ ಪದವೀಧರ. ಅದರ ಮೇಲೆ, ದಿಲ್ಲಿಯಲ್ಲಿ ಕನಿಷ್ಠ ಆರು ವರ್ಷಗಳ ಕಾಲ ಅಕ್ಷರಶಃ ‘ಗುರುಸೇವೆ’ಯಂತೆ ಪರಿಶ್ರಮಿಸಿ, ಈ ಬುನ್ರಾಕನ್ನು ಗಳಿಸಿಕೊಂಡರು. ಮೊದಲ ಮಂಗಳೂರ ಪ್ರದರ್ಶನಕ್ಕೂ ಮುನ್ನ ಇವರು ಬುನ್ರಾಕಿನೊಡನೆ, ಮೈಸೂರು ರಂಗಾಯಣ ಸೇರಿದಂತೆ ಕೆಲವು ತಂಡಗಳಲ್ಲೂ ಕೆಲವು ಪೂರ್ಣ ಪ್ರಮಾಣದ ಪ್ರಯೋಗಗಳನ್ನು ನಡೆಸಿದ್ದರು. ಆ ಅನುಭವಗಳ ಮೊತ್ತವೆಂಬಂತೆ, ಈ ಬಾರಿ ಪೂರ್ಣ ರಂಗಮಂಚವನ್ನು ಬಳಸುವ ನಾಟಕದೊಡನೆ ಬುನ್ರಾಕು ಬೆಸೆದು ಬಂದ ಪ್ರಯೋಗ – ಬೇಲಿಯಾಚಿನ ಗೆಳೆಯ (ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್). ಎರಡನೇ ಮಹಾಯುದ್ಧ ಕಾಲದ ಜರ್ಮನ್ ಕ್ರೌರ್ಯದ ಸತ್ಯಗಳಿಗೆ ಶ್ರವಣ್ ನಾಟಕದ ರೂಪ ಕೊಟ್ಟು, ನಿರ್ದೇಶನ ಮಾಡಿದ ಪ್ರಯೋಗ ಬೇಲಿಯಾಚಿನ ಗೆಳೆಯ. (ಇದಕ್ಕೆ ಪ್ರೇರಣೆ ಕೊಟ್ಟ…
ಮಂಗಳೂರು : ಸನಾತನ ಯಕ್ಷಾಲಯ (ರಿ.) ಮಂಗಳೂರು ಇದರ ವಾರ್ಷಿಕೋತ್ಸವವು ದಿನಾಂಕ 16-06-2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಪದ್ಮವಿಭೂಷಣ ಡಾ. ಶ್ರೀ. ಡಿ. ವೀರೇಂದ್ರ ಹೆಗ್ಗಡೆ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸರಕಾರದ ವಿಧಾನಸಭೆ ಮಾನ್ಯ ಸ್ಪೀಕರ್ ಶ್ರೀ ಯು. ಟಿ. ಖಾದರ್, ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ರೈ, ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ಛೇರ್ ಮನ್ ಶ್ರೀ ಸೂರ್ಯಕಾಂತ್ ಜೆ. ಸುವರ್ಣ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕರಾದ ಶ್ರೀ ವಸಂತ ಶೆಟ್ಟಿ, ಬಂಟರ ಸಂಘ ಥಾಣೆ, ಮುಂಬಯಿ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ, ಪಟ್ಲ ಫೌಂಡೇಷನ್ ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಎಂ. ಶೆಟ್ಟಿ, ಮುಂಬೈ ಉದ್ಯಮಿ ಶ್ರೀ ಆನಂದ ಬಂಗೇರ ಹಾಗೂ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿಯಲ್ಲಿ ಗಂಗೊಳ್ಳಿಯ ಉದಯೋನ್ಮುಖ ಕಲಾವಿದ ಮಾಸ್ಟರ್ ಶಾಮ್ ಜಿ.ಎನ್. ಪೂಜಾರಿ ಇವರಿಂದ ‘ಕೊಳಲು ವಾದನ’ವು ದಿನಾಂಕ 16-06-2024ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ.
ಕಾಸರಗೋಡು : ಕಾರಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ ಇವರ ಜನ್ಮದಿನಾಚರಣೆಯು ದಿನಾಂಕ 10-06-2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯ ಶಿಕ್ಷಕ ಶ್ರೀ ಸಂಜೀವ ಎಂ. ಮಾತನಾಡಿ “ಕಾಸರಗೋಡಿನವರ ಪಾಲಿಗೆ ಕಯ್ಯಾರ ಕಿಞ್ಞಣ್ಣ ರೈಗಳು ಅಭಿಮಾನ ಪಡಬಹುದಾದ ವ್ಯಕ್ತಿತ್ವವಾಗಿದ್ದಾರೆ. ಇಂಥವರ ಜನ್ಮದಿನಾಚರಣೆಯ ಮೂಲಕ ನಾವು ಪ್ರೇರಣೆ ಪಡೆದುಕೊಳ್ಳಬಹುದಾಗಿದೆ.” ಎಂದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಹಿರಿಯ ಶಿಕ್ಷಕಿ ಶ್ರೀಮತಿ ಬೇಬಿ ರೇಖಾ, ಸ್ಟಾಫ್ ಸೆಕ್ರೆಟರಿ ಶಶಿ ಮಾಸ್ಟರ್, ಶೋಭನಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಡಾ.ಶ್ರೀಶ ಕುಮಾರ ಇವರು ಕವಿ ಪರಿಚಯದ ಬಿತ್ತಿ ಪತ್ರ ಬಿಡುಗಡೆಗೊಳಿಸಿದರು. ಹಾಗೂ ಕೀರ್ತನ ಕವಿ ಪರಿಚಯ ಮಾಡಿಕೊಟ್ಟರು. ಪೃಥ್ವಿರಾಜ್ ಅವರಿಂದ ಸ್ಲೈಡ್ ಶೋ ನಡೆಯಿತು. ಅನಘಾ ಸರಸ್ವತಿ ಅವರು ಪುಸ್ತಕ ಆಸ್ವಾದನ ಟಿಪ್ಪಣಿಯನ್ನು ಮಂಡಿಸಿದರು. ಕವಿ ಕೈಯಾರರ ಗುರು ಸಮಾನರಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಇವರ ಪರಿಚಯವನ್ನು…
ಮೂಡಬಿದಿರೆ : ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2024′ ಕಾರ್ಯಕ್ರಮವು ದಿನಾಂಕ 11-06-2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ ಹಾಗೂ ರಂಗಕರ್ಮಿ ಅರುಣ್ ಸಾಗರ್ ತಮ್ಮ ಕಂಚಿನ ಕಂಠದಲ್ಲಿ ‘ವಿದ್ಯಾ ಬುದ್ಧಿ ಕಲಿಸಿದ ಗುರುವೇ ಕೊಡು ನಮಗೆ ಮತಿಯ…’ ಸಾಲುಗಳನ್ನು ಹಾಡುತ್ತಲೇ ತಮ್ಮ ಮಾತಿಗೆ ಚಾಲನೆ ನೀಡಿ “ಆಳ್ವಾಸ್ನಲ್ಲೇ ಒಂದು ನಾಡು, ಒಂದು ದೇಶ ಇದೆ. ದೇಶದ ಬೇರೆಡೆ ಇಲ್ಲದ ಗುರುಕುಲ ಆಳ್ವಾಸ್. ಮನಸ್ಸಿನೊಳಗೆ ಮಗುತನ ಇದ್ದರೆ ಮಾತ್ರ ದೊಡ್ಡ ಮನುಷ್ಯನಾಗಲು ಸಾಧ್ಯ. ನಾವೆಲ್ಲ ಮನುಷ್ಯರಾಗೋಣ. ಮನುಷ್ಯತ್ವದ ಮಹಲು ಕಟ್ಟುತ್ತಿರುವ ಮೋಹನ ಆಳ್ವರ ಜೊತೆಯಾಗೋಣ. ಆಳ್ವಾಸ್ ವಿದ್ಯಾರ್ಥಿ ಶಿಲ್ಪಗಳನ್ನು ಕೆತ್ತುವ ತಾಣವಾಗಿದೆ. ಇಲ್ಲಿ ಆಳ್ವರು ಮನುಷ್ಯತ್ವ ತುಂಬುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದು ಊರು ಚಿಕ್ಕದಾದರು ದೊಡ್ಡ ಮನಸ್ಸಿನ ಪ್ರಪಂಚ. ಸಾಹಿತ್ಯ, ಕಲೆ, ಕ್ರೀಡೆ ಹಾಗೂ ಶಿಕ್ಷಣಗಳಿಗೆ ಪ್ರೋತ್ಸಾಹಿಸುವ ಆಳ್ವರು ಹಿರೋಗಿಂತ ದೊಡ್ಡ ಹೀರೋ.…
ಮಂಗಳೂರು : ಶತಮಾನಗಳ ಹಿಂದೆ ಕನ್ನಡ ರಂಗಭೂಮಿ ಕಂಪನಿ ನಾಟಕಗಳಲ್ಲಿ ನೈಜ ಒಂಟೆ ಮತ್ತು ಆನೆಗಳನ್ನು ಬಳಸಿ ಮನರಂಜನೆ ನೀಡುವಷ್ಟು ಶ್ರೀಮಂತವಾಗಿತ್ತು. ಇಂದು ಸರಳ ತಂತ್ರಗಳನ್ನು ಬಳಸಿಕೊಂಡು ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ನಾಟಕಗಳನ್ನು ಹೊಂದಿಸಲಾಗಿದೆ. ಆದರೆ ಈಗ ಕಲಾಭಿ(ರಿ ) ಸಂಸ್ಥೆ ಹಳೆಯ ಸಂಪ್ರದಾಯವನ್ನು ಪ್ರೇಕ್ಷಕರಿಗೆ ನೆನಪಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರಿನಲ್ಲಿ ನಿಜವಾದ ಆನೆಗಳನ್ನು ವೇದಿಕೆಗೆ ತರುವಲ್ಲಿ ಕಲಾಭಿ ತಂಡ ಮತ್ತೆ ಯಶಸ್ಸು ಕಂಡಿದೆ . ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ದಿನಾಂಕ 09-06-2024 ರಂದು ನಡೆದ ಕಲಾಭಿ ರಂಗೋತ್ಸವದಲ್ಲಿ ಪ್ರಸಿದ್ಧ ರಂಗ ನಿರ್ದೇಶಕ ಶ್ರವಣ್ ಹೆಗ್ಗೋಡು ನಿರ್ದೇಶನದ “ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್” ಎಂಬ ಅಪೂರ್ವ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಜಪಾನ್ನ ಬುರ್ನಾಕು ಬೊಂಬೆ ಪ್ರದರ್ಶನ ತಂತ್ರವನ್ನು ಕಲಿತು ನುರಿತ ಕಲಾವಿದರನ್ನು ಒಳಗೊಂಡಂತೆ ಈ ನಾಟಕವು ತನ್ನ ಅತ್ಯುತ್ತಮ ವೇದಿಕೆ, ಅದ್ಭುತ ಸಂಗೀತ ಮತ್ತು ಅನೇಕ ವಿಶೇಷ ತಂತ್ರಗಳು ಮತ್ತು ವಿಶೇಷ ಬೆಳಕಿನಿಂದ ಅಪಾರ ಪ್ರೇಕ್ಷಕರನ್ನು ಆಕರ್ಷಿಸಿದೆ.…
ವಯನಾಡು : ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರು ನಿರ್ದೇಶಿಸಿ ನೃತ್ಯ ಸಂಯೋಜಿಸಿದ “ಶ್ರೀರಾಮ ಕಥಾಮೃತ” ಭರತನೃತ್ಯವನ್ನು ಕೇರಳದ ವಯನಾಡು ಜಿಲ್ಲೆಯ ನೃತ್ಯ ಕಲಾವಿದರ ಒಕ್ಕೂಟವು (AKDTO ) ದಿನಾಂಕ 08-06-2024 ರಂದುಪ್ರದರ್ಶಿಸಿದ್ದು, ಸುಮಾರು 18 ಹಿರಿಯ ನೃತ್ಯ ಗುರುಗಳು ಮತ್ತು ಕಿರಿಯ ನೃತ್ಯ ಶಿಕ್ಷಕರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಪ್ರದರ್ಶನದ ಮೊದಲು ಗುರು ಪೂಜೆಯನ್ನು ನೆರವೇರಿಸಿ, ವಿದ್ವಾನ್ ಮಂಜುನಾಥ ಇವರನ್ನು ಗೌರವಿಸಲಾಯಿತು. 45 ನಿಮಿಷಗಳ ಈ ನೃತ್ಯಕ್ಕೆ ಕೋಲ್ಕತ್ತಾದ ನೃತ್ಯ ಕಲಾವಿದರಾದ ಶ್ರೀ ಎನ್. ದೇಬಾಶಿಷ್ ಅವರು ಪರಿಕಲ್ಪನೆ ಮತ್ತು ತಾಂತ್ರಿಕ ಅಂಶಗಳನ್ನು ನೀಡಿದ್ದಾರೆ.
ಬೆಂಗಳೂರು : ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023-2024ರ ಸಾಲಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 23-06-2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ರಾಜ್ಯದ ರಾಜ್ಯಪಾಲರು ವಿತರಣೆ ಮಾಡಲಿದ್ದಾರೆ. ಯೋಗೇಶ್ ಕಾಂಚನ್ ಬೈಕಂಪಾಡಿಯ ಮೀನಕಳಿಯದ ನಿವಾಸಿಯಾದ ಇವರೋರ್ವ ಹವ್ಯಾಸಿ ಯಕ್ಷಗಾನ ಕಲಾವಿದ. ತುಳುವಿನಲ್ಲಿ ‘ಮಣ್ಣ್ ದ ಮಗಳ್’, ‘ಸತ್ಯೋದ ಬಾಲೆಲ್’ ಮತ್ತು ಕೈಯಲ್ತ ಗುಳಿಗೆ’ ಹಾಗೂ ಕನ್ನಡದಲ್ಲಿ ‘ನಾಗ ಕನ್ನಿಕೆ’ ಎಂಬ ಯಕ್ಷಗಾನ ಪ್ರಸಂಗಗಳ ಕೃರ್ತ ಇವರಾಗಿದ್ದಾರೆ. ‘ಕಂಚಿಲ್’ (ತುಳು) ‘ವಾಸ್ತವತೆ’ ಮತ್ತು ‘ನಗ್ನ ಸತ್ಯ’ (ಕನ್ನಡ) ಇವು ಇವರ ಕವನ ಸಂಕಲನಗಳು. ‘ಚಿತ್ರಾಪುರೋತ ಸಿರಿದೇವಿ ಉಳ್ಳಾಲ್ದಿ’ (ತುಳು ನಾಟಕ), ‘ಪನ್ನಂಬರೋ’ (ತುಳು ಕಥಾ ಸಂಕಲನ) ಇವೆಲ್ಲಾ ಪ್ರಕಟಿತ ಕೃತಿಗಳು. ಅಪ್ರಕಟಿತ ಅನೇಕ ತುಳು, ಕನ್ನಡ ಕಾದಂಬರಿಗಳು, ಯಕ್ಷಗಾನ ಪ್ರಸಂಗಗಳಿವೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವು ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ…
ಕಾರ್ಕಳ : ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿರುವ ಕಾಂತಾವರ ಕನ್ನಡ ಸಂಘವು 2024ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹದ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಪ್ರಶಸ್ತಿಯು ರೂ.ಹತ್ತು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನ ಒಳಗೊಂಡಿದೆ. ಆಸಕ್ತ ಕವಿಗಳು ದಿನಾಂಕ 15-09-2024ರೊಳಗೆ ಹಸ್ತಪ್ರತಿಗಳನ್ನು ಅಧ್ಯಕ್ಷರು ಕಾಂತಾವರ ಕನ್ನಡ ಸಂಘ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರಿಗೆ ಕಳುಹಿಸಬಹುದು.
ಉಜಿರೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು. ವಸತಿ ಕಾಲೇಜು ಉಜಿರೆ ಇವುಗಳ ಆಶ್ರಯದಲ್ಲಿ ‘ಡಾ. ಟಿ.ಎನ್. ತುಳಪುಳೆ ನೆನಪು ದತ್ತಿ ಉಪನ್ಯಾಸ ಮತ್ತು ಸನ್ಮಾನ’ ಕಾರ್ಯಕ್ರಮವನ್ನು ದಿನಾಂಕ 13-06-2024ರಂದು ಅಪರಾಹ್ನ ಗಂಟೆ 3-00ಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು. ವಸತಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಉಜಿರೆಯ ಶ್ರೀ ಧ. ಮಂ. ಎಜ್ಯುಕೇಶನಲ್ ಸೊಸೈಟಿ (ರಿ) ಇದರ ಕಾರ್ಯದರ್ಶಿಗಳಾದ ಡಾ. ಎಸ್. ಸತೀಶ್ಚಂದ್ರ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಅಧ್ಯಕ್ಷತೆ ವಹಿಸಲಿರುವರು. ‘ಸಾಹಿತ್ಯ ಪ್ರೇರಣೆ’ ಎಂಬ ವಿಷಯದ ಬಗ್ಗೆ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷರಾದ ಶ್ರೀ ಸಂಪತ್ ಟಿ. ಸುವರ್ಣ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಶ್ರೀಕರ ಭಟ್ ಮರಾಠೆ ಮುಂಡಾಜೆ ಇವರನ್ನು ಸನ್ಮಾನಿಸಲಾಗುವುದು.