Author: roovari

ಚೆನ್ನೈ, ಫೆಬ್ರವರಿ 04: ಕನ್ನಡ ಸೇರಿದಂತೆ ಇತರ 19 ಭಾಷೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ (78) ಅವರು ಶನಿವಾರ ನಿಧನರಾಗಿದ್ದಾರೆ. ವಾಣಿ ಅವರು ಸಿನಿಮಾ ಹಿನ್ನೆಲೆ ಗಾಯಕಿಯಾಗಿದ್ದು, ಕನ್ನಡ, ತಮಿಳು ಹಿಂದಿ, ಉರ್ದು, ಮರಾಠಿ, ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಾಣಿ ಜಯರಾಮ್‌ ಅವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ಒಡಿಶಾದಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Read More

ಮಂಗಳೂರು, ಫೆಬ್ರವರಿ 04: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ಇದರ ಆಶ್ರಯದಲ್ಲಿ 25 ವರ್ಷಗಳಿಂದ ಅಬ್ಬಕ್ಕ ಉತ್ಸವ ನಡೆಯುತ್ತಾ ಬಂದಿದ್ದು 2022 – 23ನೆ ಸಾಲಿನ ಉತ್ಸವ ಇಂದು ನಡೆಯುತ್ತಿದೆ. ವೀರರಾಣಿ ಅಬ್ಬಕ್ಕ ಉತ್ಸವ 2022-23 ವೀರಮಾರುತಿ ವ್ಯಾಯಾಮ ಶಾಲೆ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಇಲ್ಲಿಂದ ಮಹಾತ್ಮಗಾಂಧಿ ರಂಗಮಂದಿರ ನಗರಸಭೆ ಉಳ್ಳಾಲದವರೆಗೆ ಆಕರ್ಷಕ ಜಾನಪದ ದಿಬ್ಬಣ ದೊಂದಿಗೆ ಆರಂಭವಾಯಿತು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಫೆಬ್ರವರಿ 4ರಂದು ಉಳ್ಳಾಲದಲ್ಲಿ ವಿದ್ಯುಕ್ತವಾಗಿ ಹಲವು ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.

Read More

ಮಂಗಳೂರು, ಫೆಬ್ರವರಿ 4: “ಕಾಲನಾಗಿಹ ಶಿವನು ಹಳೆ ಶಾಸ್ತ್ರಗಳ ಸುಡುತ ಹೊಸ ಚಿಗುರ ಚಿಗುರಿಸುತ ಜೊತೆಯಲಿರುವ” “ಶೂದ್ರ ಶಿವ” ಜಾತೀಯ ಕಟ್ಟುಪಾಡುಗಳು, ಅಸ್ಪೃಶ್ಯತೆಯನ್ನೊಳಗೊಂಡ ಭ್ರಮೆಯ ಸಮಾಜಕ್ಕೆ ಧಾರ್ಮಿಕ ನೆಲೆಗಟ್ಟಿನ ಮೂಲಕ ಸಾಮಾಜಿಕ ಸುಧಾರಣೆ ,ಶೈಕ್ಷಣಿಕ ಚಳುವಳಿಯ ಹಾದಿಯಲ್ಲಿ ದೀನ ದಲಿತರ ಏಳಿಗೆಗಾಗಿ ಹೊಸ ಅಧ್ಯಾಯವನ್ನು ರೂಪಿಸಿದ “ಬ್ರಹ್ಮಶ್ರೀ ನಾರಾಯಣ ಗುರುಗಳ” ತತ್ವ ಸಂದೇಶ ಸಂದೇಶವನ್ನೊಳಗೊಂಡ *ಶೂದ್ರಶಿವ* ಕನ್ನಡ ನಾಟಕ ಪ್ರಥಮ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ.   ದಿನಾಂಕ 05, ಫೆಬ್ರವರಿ 2023ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳೂರು ಇಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಪ್ರತಿಭಾವಂತ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದ ನಾರಾಯಾಣ ಗುರುಗಳ ಚಳವಳಿ ಆಧಾರಿತ ನಾಟಕ “ಶೂದ್ರ ಶಿವ” ತಿರುಗಾಟಕ್ಕೆ ಸಿದ್ದಗೊಂಡಿದೆ. ಕುತೂಹಲ, ನಿರೀಕ್ಷೆ ಹುಟ್ಟಿಸಿರುವ ಈ ನಾಟಕ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಆಯೋಜಕರಾದ ರುದ್ರ ಥೇಟರ್, ಮಂಗಳೂರು ವಿನಂತಿಸಿದ್ದಾರೆ.

Read More

ಕನ್ನಡನಾಡು ಕಂಡ ಅದ್ಭುತ ರಂಗಸಂಘಟಕ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ.ಕಪ್ಪಣ್ಣ ಅವರಿಗೆ ಇದೀಗ 75ರ ಹರೆಯ. ಜಾನಪದ, ಹವ್ಯಾಸೀ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಿ ಜಗತ್ತಿನಾದ್ಯಂತ ತಲುಪಿಸಿದ ಶ್ರೀನಿವಾಸ್ ಜಿ. ಅವರು ‘ಕಪ್ಪಣ್ಣ’ ಎಂದೇ ಪ್ರಖ್ಯಾತರು. ಕರ್ನಾಟಕದಲ್ಲಿ ಜಾನಪದ ಉತ್ಸವಗಳನ್ನು ಆಯೋಜಿಸಿ ಪ್ರಖ್ಯಾತರಾದವರು. ಕರಾವಳಿ ಜಿಲ್ಲೆಗಳಿಗೂ ಅವರ ಸೇವೆ ಸಂದ ಹಿನ್ನೆಲೆಯಲ್ಲಿ ರಂಗಸಂಗಾತಿ, ಮಂಗಳೂರು ತಂಡವು ಇದೇ ಫೆ. 5, 2023 ರಂದು ಭಾನುವಾರ ಸಂಜೆ 5ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ. ಆರ್. ಐ. ಸಭಾಂಗಣದಲ್ಲಿ ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಿರಿಯ ವಿದ್ವಾಂಸರೂ ನಿವೃತ್ತ ಕುಲಪತಿಗಳೂ ಆಗಿರುವ ಪ್ರೊ. ಬಿ. ಎ. ವಿವೇಕ ರೈ, ಮಂಗಳೂರು ವಿಶ್ವ ವಿದ್ಯಾಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ, ಏರ್ಯ ಆಳ್ವ ಫೌಂಡೇಶನ್ನಿನ ಅಧ್ಯಕ್ಷರಾದ ಏರ್ಯ ಬಾಲಕೃಷ್ಣ ಹೆಗ್ಡೆ ಹಾಗೂ ಶ್ರೀನಿವಾಸ ಜಿ ಕಪ್ಪಣ್ಣ…

Read More

ನಟನ ರಂಗಶಾಲೆಯ 2022-23 ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ‘ತ್ರಿಪುರಾಣ’. ಕನ್ನಡಕ್ಕೊಂದು ಹೊಸ ನಾಟಕ… ರಂಗ ಸಾಧ್ಯತೆಗಳ ಹೊಸ ಹುಡುಕಾಟ.. ಭಾರತದಲ್ಲಿ ನೂರೆಂಟಕ್ಕೂ ಹೆಚ್ಚು ಪುರಾಣಗಳಿವೆ. ಅಗಣಿತ ಅತಿಮಾನುಷ ದೇವ, ದಾನವ, ಯಕ್ಷ, ಗಂಧರ್ವ, ಕಿನ್ನರ, ಭೂತ, ಪ್ರೇತ, ಪಿಶಾಚಿ, ಅಪ್ಸರೆ, ಸುರ, ಅಸುರ, ಮಹಾಸುರ, ದೈವ… ಮುಂತಾದ ಶಕ್ತಿಗಳ ಕುರಿತ ನಂಬಿಕೆ, ಕಥೆ, ಐತಿಹ್ಯ, ಕಾರಣಿಕಗಳಿವೆ. ಆತ್ಮ, ಪರಮಾತ್ಮ, ಪ್ರಕೃತಿ, ಪುರುಷ… ಹೀಗೆ ವಿವಿಧ ವಿಂಗಡಣೆಗಳಿವೆ.ಆಸ್ತಿಕ, ನಾಸ್ತಿಕ, ಚಾರ್ವಾಕ, ಆಜೀವಿಕ, ಸಾಂಖ್ಯ, ಸಿದ್ಧ, ನಾಗ, ಲೋಕಾಯತ, ಅಘೋರಿ.. ಹೀಗೆ ನಂಬಿಕೆ, ಆಚರಣೆ, ಆಧ್ಯಾತ್ಮಕ್ಕೆ ಸಂಬಂಧಿಸಿದ ವಿಭಿನ್ನ ತತ್ವ ಪರಂಪರೆಗಳಿವೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ಮಂತ್ರ ಮಾರ್ಗ, ತಂತ್ರ ಮಾರ್ಗ, ವಾಮ ಮಾರ್ಗ, ದಕ್ಷಿಣ ಮಾರ್ಗ ಮುಂತಾದ ಉಪಚಾರ, ಉಪಾಸನೆಯ ಪದ್ಧತಿಗಳಿವೆ. ಜನಪದ, ವೇದ, ಪುರಾಣ, ಮಹಾಕಾವ್ಯಗಳೇ ಮುಂತಾದ ಅನೇಕ ಆಖ್ಯಾನ, ವ್ಯಾಖ್ಯಾನಗಳಿವೆ. ಲೌಕಿಕ, ಅಲೌಕಿಕ, ಭೌತಿಕ, ಆದಿಭೌತಿಕ, ಆಧ್ಯಾತ್ಮಿಕ ಕಲ್ಪನೆಗಳಿವೆ.…

Read More

ನಾಟಕ: ದ್ರೋಪತಿ ಹೇಳ್ತವ್ಳೆ ನಿರ್ದೇಶನ: ಗಣೇಶ ಮಂದಾರ್ತಿ ಅಭಿನಯ: ರಂಗಾಸ್ಥೆ ನೋಡಿದ್ದು: ನಾಟಕ ಬೆಂಗ್ಳೂರು ಉತ್ಸವದಲ್ಲಿ ದ್ರೋಪತಿ ಹೇಳ್ತವ್ಳೆ. ಅದೊಂದು ಸಂಜೆ. ವಾದ್ಯದವರೂ ಮೇಳದವರೂ ಸಿದ್ಧರಾಗಿದ್ದಾರೆ. ಹಿರಿಯ ಭಾಗವತರೂ ಏಕತಾರಿ ಹಿಡಿದು ನಿಂತಿದ್ದಾರೆ. ಅಂದು ಒಂದು ಚೆಂದದ ಕತೆ ಹೇಳಬೇಕಿದೆ. ಸರಿ, ಯಾವ ಕತೆ ಹೇಳಬೇಕೆಂಬ ಚರ್ಚೆ ಮೇಳದಲ್ಲಿ ಶುರುವಾಗಿದೆ. ‘ಕೃಷ್ಣ ಕಥೆ ಹೇಳೋಣ’ ಎಂದು ನಿರ್ಣಯವಾಗಿದೆ. ಇನ್ನೇನು ಕತೆ ಶುರುವಾಗಬೇಕು… ಅಷ್ಟರಲ್ಲಿ….ಭೂಕಂಪನವಾದಂತೆ,ಸುತ್ತು ಹತ್ತು ದಿಕ್ಕುಗಳಿಂದಲೂ ಕಸಬರಿಗೆ ಬೀಸುತ್ತ ರೋಷದಿಂದ ರಂಗಕ್ಕೆ ದಾಂಗುಡಿಯಿಡುತ್ತದೆ ಮಹಿಳೆಯರ ದಂಡು. ‘ಈಬಾರಿ ಹೆಣ್ಣಿನ ಕಥೆಯೇ ಆಗಬೇಕು’ ಎಂಬುದು ಅವರ ಪಟ್ಟು. ಕೊನೆಗೂ ತೀರ್ಮಾನವಾಗುತ್ತದೆ ಕಥೆ. ಜೊತೆಗೆ ಶುರುವಾಗುತ್ತದೆ ನಾಟಕ. ‘ ದ್ರೋಪತಿ ಹೇಳ್ತವ್ಳೆ’ ಹೌದು ಇದು ದ್ರೌಪತಿ ಯ ಕಥೆಯೇ. ನಾಟಕ ಶುರುವಾಗೋದು ದ್ರೌಪತಿಯ ಹುಟ್ಟಿನ ಜೊತೆಗೇ. ದ್ರುಪದ ಅರ್ಜುನನಿಂದ ಸೋತುಹೋಗಿದ್ದಾನೆ. ದ್ರೋಣರು ಪ್ರಾಣಭಿಕ್ಷೆ ನೀಡಿ ಹೋಗಿದ್ದಾರೆ. ಅವಮಾನದ, ದ್ವೇಷದ ಬೆಂಕಿಯಲ್ಲಿ ಕುದಿಯುತ್ತಲೇ ಆತ ತಪಸ್ಸು ಮಾಡಿ ಶಿವನಿಂದ ವರ ಪಡೆದಿದ್ದಾನೆ. ಆ ವರದಿಂದಲೇ ಹುಟ್ಟಿದವಳು…

Read More

ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರ ಆಶ್ರಯದಲ್ಲಿ ಶ್ರೀ ಅಣ್ಣು ದಡ್ಡಲ್ ಕಾಡ್ ಇವರು ಬರೆದ “ರಾವ್ ಸಾಹೇಬ್ ಕುದ್ಮುಲ್ ರಂಗರಾವ್” ಎಂಬ ಕೃತಿಯನ್ನು ಬಲ್ಲಾಳ್ ಬಾಗ್ ನಲ್ಲಿರುವ ಪತ್ತುಮುಡಿ ಸೌಧದಲ್ಲಿ ಲೋಕಾರ್ಪಣೆ ಮಾಡಲಾಯಿತು.ಜೀವ ವಿಮಾ ನಿಗಮದ ನಿವೃತ್ತ ವಲಯ ಮಹಾಪ್ರಬಂಧಕ ಶ್ರೀ ಬಿ. ಚಂದ್ರಕಾಂತ ಕುಮಾರ್ ಇವರ ಅಧ್ಯಕ್ಷೆತೆಯಲ್ಲಿ ನಡೆದ ಈ ಕಾರ್ಯ್ರಮದಲ್ಲಿ ಲೇಖಕರು ಮತ್ತು ನಿವೃತ್ತ ಆರ್ ಟಿ ಒ ಆದ ಡಾ. ಮುಗಳವಳ್ಳಿ ಕೇಶವ ಧರಣಿಯವರು ಕೃತಿಯನ್ನು ಅನಾವರಣಗೊಳಿಸಿ, ಮಾತನಾಡುತ್ತಾ ಸಾಮಾಜಿಕ ಅಸಮಾನತೆ ಇದ್ದ ಆ ಕಾಲದಲ್ಲಿ ಕುದ್ಮಲ್ ರಾವ್ ಅವರು ಸಮುದಾಯಕ್ಕೆ ಮಾಡಿದ ತ್ಯಾಗ ಸೇವೆ , ಅವರಿಗಿದ್ದ ಕಾಳಜಿ ನೆನೆದು ಗದ್ ಗದ್ಗದಿತರಾದರು. ಸರಕಾರಿ ಪ. ಪೂ.ಕಾಲೇಜು ಕಾರ್ನಾಡು, ಮುಲ್ಕಿಯ ಪ್ರಾಂಶುಪಾಲರಾದ ಡಾ.ವಾಸುದೇವ ಬೆಳ್ಳೆಯವರು ಕುದ್ಮಲ್ ರಂಗರಾವ್ ಅವರನ್ನು ಸ್ಮರಿಸಿಕೊಳ್ಳುತ್ತ , ತಮ್ಮ ಇಳಿವಯಸ್ಸಿನಲ್ಲಿ ಕೃತಿ ರಚನೆ ಮಾಡಿದ ಶ್ರೀ ಅಣ್ಣು ದಡ್ಡಲ್ ಇವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ…

Read More

Intach Mangaluru Chapter, in collaboration with Art Kanara Trust, organised a “Heritage Spot Sketching Programme” for the students of Mahalasa College of Visual Art along with “Visit to Museum” for the children of DKZPHP School, Mannagudde, on Sunday, January 29, 2023, at 10:00 a.m. at Shreemanthibai Memorial Govt. Museum, Bejai, Mangalore. This is the second edition in its ongoing series titled “Exploring Mangalore Heritage.” The museum curator, Dhanalakshmi Ammal, Ganesh Kumar, the headmaster of DKZPHP School, and Syed Asif Ali, artist and senior faculty of Mahalasa College of Visual Art, were the dignitaries present on the occasion. Subhas Basu, the…

Read More

‘ಮಾತಿನ ಗಾರುಡಿ’,’ ಶಬ್ದ ಬ್ರಹ್ಮ’ , ‘ಮಂತ್ರ ಶಕ್ತಿಯ ವಾಗ್ಮಿ ‘, ಎಂಬ ವಿಶೇಷಣಗಳಿಂದ ಪ್ರಸಿದ್ಧರಾಗಿ, ವಿಶ್ವದ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲವರು, ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಸುಡುವ ಬಿಸಿಲು, ಕಿತ್ತು ಹೋದ ಚಪ್ಪಲಿಯೊಂದಿಗೆ ಚಪ್ಪಲಿ ಹೊಲಿಯುವುದಕ್ಕಾಗಿ ಮೋಚಿಯಲ್ಲಿಗೆ ಬೇಂದ್ರೆ ಬಂದಾಗ, ಕಿತ್ತುಹೋದ ಚಪ್ಪಲಿ ಹೊಲಿಯುವವರೆಗೆ ಪಾದ ಸುಡದಿರಲೆಂದು ಅಡಿಗಿಡಲು ಮೋಚಿ ಬೇರೆಚಪ್ಪಲಿಯನ್ನು ನೀಡಿದ. ಆದರೆ ದಿನವಿಡೀ ಉರಿಬಿಸಿಲಿನಲ್ಲಿ ಕುಳಿತು ಚಪ್ಪಲಿ ಹೊಲಿಯುವ ಮೋಚಿಯನ್ನು ಕಂಡು ಕಣ್ಣು ತುಂಬಿಕೊಂಡ ಬೇಂದ್ರೆಯವರು. ಚಪ್ಪಲಿ ಹೊಲಿದು ಮುಗಿಸುವವರೆಗೆ ತನ್ನ ಛತ್ರಿಯನ್ನು ಆತನಿಗೆ ಹಿಡಿದು ಸರಳತೆಯನ್ನು ತ್ರಿಕರಣ ಪೂರ್ವಕವಾಗಿ ಮೆರೆದರು. ನವೋದಯದ ಪ್ರಧಾನ ಕವಿಗಳಲ್ಲೊಬ್ಬರಾದ ಬೇಂದ್ರೆಯವರು ಅಗ್ನಿ ಪರ್ವತದಂತಹ ದುಃಖವನ್ನು ಒಳಗೆ ಅದುಮಿಕೊಂಡು, ನಗುವ, ನಗಿಸುವ, ನಗಿಸಿ ನಗುತ ಬಾಳುವ ಎದೆಗಾರಿಕೆಯವರು. ಜೀವನದಲ್ಲಿ ಹೂವಿನಂತೆ ಚೆಲುವು ತೋರಿ, ಪರಿಮಳ ಬೀರಿ, ವಿಧಿಯ ಪರೀಕ್ಷೆಗೆ ಚೆಂಡಿನಂತೆ ಪುಟಿದೆದ್ದರೂ, ಅಂತರಂಗದಾ ಮೃದಂಗ ತೋಮ್ ತನನ ನುಡಿಸಿದಾಗ, ಚಿತ್ತ ತಾಳ ಬಾರಿಸಿ, ನೆನಪು ತಂತಿ…

Read More

ಉಳ್ಳಾಲ – ಕೋಟೆಕಾರ್ ಸುತ್ತಮುತ್ತಲಿನ ಜನರಿಗೆ ಇದೊಂದು ಸುವರ್ಣಾವಕಾಶ ಎಳೆಯರು ಮತ್ತು ಯುವಸಮುದಾಯದಲ್ಲಿ ಸಂಸ್ಕೃತಿ ಸಂಸ್ಕಾರ ಪ್ರಜ್ಞೆ ಮೂಡಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ 120 ವಿದ್ಯಾರ್ಥಿಗಳೊಂದಿಗೆ ಉಚಿತವಾಗಿ ನಡೆಯುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಮೂಲಸಂಸ್ಕೃತಿ’ ಯೋಜನೆಯಡಿಯಲ್ಲಿ ಯುವಜನಾಂಗದಿಂದ ಕಣ್ಮರೆಯಾಗುತ್ತಿರುವ ಅಪೂರ್ವ ತುಳು ಪಾಡ್ದನಗಳ ಕಲಿಕಾ ಕಮ್ಮಟ. ಇಪ್ಪತ್ತು ದಿನಗಳ ತರಬೇತಿಯನ್ನು ನುರಿತ ಕಲಾವಿದರಿಂದ ಸಂಪೂರ್ಣ ಉಚಿತವಾಗಿ ಆಯೋಜಿಸಲಾಗಿದೆ. ಇಂದು 30-1-2023 ನೇ ಸೋಮವಾರ ಸಂಜೆ ಗಂಟೆ 7 ಗಂಟೆಗೆ ಕ್ಲಪ್ತ ಸಮಯದಲ್ಲಿ ತರಗತಿ ಉದ್ಘಾಟನೆಗೊಂಡು ಪ್ರತಿದಿನ ಇದೇ ಸಮಯಕ್ಕೆ ರಾತ್ರಿ 7 ರಿಂದ 8 ರ ವರೆಗೆ ನಡೆಯಲಿದೆ. 9 ನೇ ತರಗತಿ ಮೇಲ್ಪಟ್ಟು 70 ವರ್ಷದ ವರೆಗಿನವರು ಯಾವುದೇ ಸಮುದಾಯದ ಆಸಕ್ತರು ಒಂದು ನೋಟು ಪುಸ್ತಕ ಮತ್ತು ಪೆನ್‌ನೊಂದಿಗೆ ತರಗತಿಗೆ ಹಾಜರಾಗಬಹುದು. ಸ್ಥಳ – ಬ್ರಹ್ಮಶ್ರೀ ನಾರಾಯಣ ಗುರು…

Read More