Author: roovari

ಮಂಗಳೂರು:  ಸನಾತನ ನಾಟ್ಯಾಲಯ ವತಿಯಿಂದ ಆಯೋಜಿಸಿದ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮ ದಿನಾಂಕ 15 ಜೂನ್ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಿಯಾಗಿ ಭಾಗವಹಿಸಿದ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ “ಭಾರತದ ಜ್ಞಾನಪುಂಜ ಎಂದರೆ ಅದು ಕಾಶ್ಮೀರ.‌ ಆದ್ದರಿಂದ ಅದು ಭಾರತ ಮಾತೆಯ ಸಿಂಧೂರವೇ ಹೊರತು  ಕೇವಲ ಪ್ರವಾಸಿ ತಾಣ ಎಂದು ಸೀಮಿತ ಮಾಡುವುದು ಸರಿಯಲ್ಲ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆ ಆಳಿದ ಊರು ಕಾಶ್ಮೀರ. ಅಗಾಧ ಗ್ರಂಥಗಳು ರೂಪುಗೊಂಡ, ತಪಸ್ವಿಗಳು ಋಷಿಗಳು ಇದ್ದ ನಾಡು ಕಾಶ್ಮೀರ. ಜಗತ್ತಿನಲ್ಲಿ ಪ್ರಾಚೀನ ಎಂದು ಕರೆಸಿಕೊಂಡ ಗ್ರೀಕ್, ರೋಮನ್, ಲೆಬನಾನ್‌ ಸೇರಿದಂತೆ ಅನೇಕ ಜನಾಂಗಗಳು ಅಳಿಸಿ ಹೋದವು.‌ ಆದರೆ ಸನಾತನ ಧರ್ಮದ ಮೇಲೆ ಸಾವಿರಕ್ಕೂ ಹೆಚ್ಚು ವರ್ಷ ದಾಳಿ ನಡೆಯಿತು. ಆದರೆ ಸನಾತನ ಹಿಂದೂ ಧರ್ಮ ಜಾಗೃತವಾಗಿದೆ.‌ ತಾಯಿ ಭಾರತಿಯ ಸಿಂಧೂರ ಕಾಪಾಡಲು ಆಕೆಯ ಮಕ್ಕಳು ಸದಾ ಜಾಗೃತರಾಗಿದ್ದರು. ಇಂದಿಗೂ ಜಾಗೃತರಾಗಿದ್ದಾರೆ” ಎಂದು ವಿವರಿಸಿದರು. ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ “ಸಣ್ಣ…

Read More

ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆಟ್ಸ್ ಮತ್ತು ಸ್ಪೋಟ್ಸ್ ಕ್ಲಬ್ ಕಯ್ಯಾರು, 16ನೇ ವಾರ್ಡ್ ಕಯ್ಯಾರು ಕುಟುಂಬಶ್ರೀ ಘಟಕಗಳು ಇವರ ಸಹಯೋಗದಲ್ಲಿ ನಾಡೋಜ ಕವಿ ಡಾ. ಕಯ್ಯಾರ ಕಿಞಣ್ಣ ರೈಯವರ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನಾಂಕ 18 ಜೂನ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಕಯ್ಯಾರು ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಕಲ್ಕೂರ ಫೌಂಡೇಶನ್ ಮಂಗಳೂರು ಅಧ್ಯಕ್ಷ, ಗಸಾಸಾ ಅಕಾಡೆಮಿ ಕಾಸರಗೋಡು ಸಂಸ್ಥಾಪಕ ಎಸ್. ಪ್ರದೀಪ್‌ ಕುಮಾರ್ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುವರು. ಬಹುಭಾಷಾ ಕವಿ,…

Read More

ಉಡುಪಿ : ಮಣಿಪಾಲದ ಲೇಖಕಿ ವೈದೇಹಿಯವರ ಮನೆ ‘ಇರುವಂತಿಗೆ’ಯಲ್ಲಿ ದಿನಾಂಕ 14 ಜೂನ್ 2025ರಂದು ಪುಸ್ತಕ ಬಿಡುಗಡೆಯ ಸರಳ ಸಮಾರಂಭದಲ್ಲಿ ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಎಂಬ ಕೃತಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಕನ್ನಡದ ಹಿರಿಯ ಲೇಖಕಿ ವೈದೇಹಿ ಇವರು ಮಾತನಾಡಿ “ಬೇರೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯಗಳ ನಡುವೆ ವಿನಿಮಯಗಳು ನಡೆಯುವ ಮೂಲಕವಷ್ಟೇ ಯಾವುದೇ ಸಾಹಿತ್ಯ ಬೆಳವಣಿಗೆ ಸಾಧಿಸಲು ಸಾಧ್ಯ. ಎರಡು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ ಭಾಷಾಂತರಕಾರರಿಲ್ಲದೆ ಆ ರೀತಿಯ ವಿನಿಮಯ ಸಾಧ್ಯವಿಲ್ಲ’ ಎಂದು ಹೇಳಿದರು. ಮಾಹೆ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ವರದೇಶ್ ಹಿರೇಗಂಗೆ, ಕೃತಿಕಾರ್ತಿ ಪಾರ್ವತಿ ಜಿ. ಐತಾಳ್ ಮತ್ತು ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ ಮೂರ್ತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಸ್ರೂರು ಶಾರದಾ ಕಾಲೇಜಿನ ಕನ್ನಡ ಉಪನ್ಯಾಸಕ ಕುಮಾರ್ ಸ್ವಾಗತಿಸಿ, ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕಿ ಕೌಸ್ತುಭ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ಕೊಪ್ಪಳ : ಕುಷ್ಟಗಿ ರಸ್ತೆಯಲ್ಲಿರುವ ಪದಕಿ ಟೌನ್ ಶಿಪ್ ಪ್ರದೇಶದ ಶಾಂತಿ ನಿವಾಸದಲ್ಲಿ ದಿನಾಂಕ 15 ಜೂನ್ 2025ರಂದು ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕೊಪ್ಪಳ ಇದರ ವತಿಯಿಂದ ಹಮ್ಮಿಕೊಂಡಿದ್ದ ಖ್ಯಾತ ಕವಿ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಇವರಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕಾವ್ಯೋತ್ಸವ (ಚುಟುಕು, ಕವಿತೆ, ಶಾಹಿರಿ ಹಾಗೂ ಗಜಲ್ ವಾಚನಗಳ ಝಲಕ್) ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಈ ಕಾರ್ಯಕ್ರಮದಲ್ಲಿ ಎಚ್.ಎಸ್.ವಿ.ಯವರ ‘ಬದುಕು ಬರಹ’ ಕುರಿತು ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ “ಭಾವಗೀತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರಹ ರೂಪದಲ್ಲಿ ಪ್ರಕಟಿಸಿದ ಶ್ರೇಯಸ್ಸು ಖ್ಯಾತ ಕವಿ ದಿವಂಗತ ಎಚ್.ಎಸ್. ವೆಂಕಟೇಶ ಮೂರ್ತಿಯವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವುದೇ ಗುಂಪು ಪಂಗಡಕ್ಕೆ ಸೀಮಿತಗೊಳ್ಳದೆ ನಿರಂತರ ಅಧ್ಯಯನ ಸಾಹಿತ್ಯ ಕೃಷಿ ಮಾಡುತ್ತಾ ಸುಮಾರು ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ, ಇಂತಹ ಸಾಹಿತ್ಯ ದಿಗ್ಗಜರ ಪರಂಪರೆಯನ್ನು ಯುವ…

Read More

ಹಿಮ್ಮೇಳದೊಂದಿಗೆ ಮಧುರ ಹೊಂದಾಣಿಕೆ, ಮುಮ್ಮೇಳದ ಕಲಾಭಿವ್ಯಕ್ತಿ ಚೈತನ್ಯಶೀಲವಾಗಿಸುವ ನುಡಿಸುವಿಕೆ, ಮದ್ದಳೆಗಾರಿಕೆಯಲ್ಲಿ ಶುದ್ಧ, ಹೃದ್ಯ, ನಿರೂಪಣೆ, ಪ್ರಬುದ್ಧ ಮದ್ದಳೆವಾದನ. ಪರಿಪೂರ್ಣವಾಗಿ ಸಭಾಲಕ್ಷಣ, ಒಡ್ಡೋಲಗ, ಯುದ್ಧಕುಣಿತ ಹೀಗೆ ನೀರಾಳವಾಗಿ ಬಾರಿಸುವ ಸಾಲಿಗೆ ಸೇರಿದವರು ರಾಘವೇಂದ್ರ ಹೆಗಡೆ ಯಲ್ಲಾಪುರ. ಯಲ್ಲಾಪುರದ ಮಂಚಿಕೇರಿಯಲ್ಲಿ 1988ರಲ್ಲಿ ಜನಿಸಿದ ಹೆಗಡೆಯವರು ಎಸ್.ಎಸ್.ಎಲ್.ಸಿ. ಯವರೆಗೆ ವಿದ್ಯಾಭ್ಯಾಸ ಮುಗಿಸಿ, ಭಾವ ಸುಬ್ರಮಣ್ಯ ಹೆಗಡೆ ಯವರ ಪ್ರೇರಣೆ ಮೇರೆಗೆ ಕಲೆಯಲ್ಲಿ ಪರಿಪೂರ್ಣತೆ ಸಾಧಿಸುವ ಉದ್ದೇಶದಿಂದ ಶ್ರೀಮಯ ಕಲಾಕೇಂದ್ರ ಗುಣವಂತೆಯಲ್ಲಿ ಎರಡು ವರ್ಷ ಯಕ್ಷಗಾನದ ಕುಣಿತ, ಮದ್ದಳೆ ವಾದನದ ಬಗ್ಗೆ ಅಭ್ಯಾಸ ಮಾಡಿದರು. ನಗರ ಸುಬ್ರಹ್ಮಣ್ಯ ಆಚಾರ್, ಹೆರಂಜಾಲು ವೆಂಕಟರಮಣ ಗಾಣಿಗ, ಗಜಾನನ ಹೆಗಡೆ ಮೂರೂರು ಇವರ ಗುರುತನದಲ್ಲಿ ಸಾಕಷ್ಟು ಪರಿಪೂರ್ಣತೆಯನ್ನು ಪಡೆದು, ಸೌಕೂರು ಮೇಳದಲ್ಲಿ ಮದ್ದಳೆವಾದಕರಾಗಿ, ಅನಿವಾರ್ಯ ಸಂದರ್ಭದಲ್ಲಿ ಮೇಳದ ವ್ಯಾನ್ ಚಾಲಕರಾಗಿ 6 ವರ್ಷ ತಿರುಗಾಟ ಮಾಡಿದರು. ಕಳೆದ 9 ವರ್ಷದಿಂದ ಅಮೃತೇಶ್ವರಿ ಮೇಳದಲ್ಲಿ ಪ್ರಧಾನ ಮದ್ದಳೆ ವಾದಕರಾಗಿ ತಿರುಗಾಟ ನಡೆಸುತ್ತಿದ್ದಾರೆ. ಸ್ಪಷ್ಟ ಘಾತದ ಪೆಟ್ಟು, ಗುಂಪು, ಛಾಪು, ಸ್ಪೂಟ ಉರಳಿಕೆ, ಇವರಿಗೆ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯೋಜನೆಗಳಲ್ಲಿ ಒಂದಾದ ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯಡಿ ಸೇವಾನಿರತರಾಗಿರುವ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆಯು ದಿನಾಂಕ 14 ಜೂನ್ 2025ರ ಶನಿವಾರದಂದು ಮಂಗಳೂರಿನ ಪತ್ತುಮುಡಿ ಸಭಾಂಗಣದಲ್ಲಿ ನಡೆಯಿತು. ಪಟ್ಲ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷರೂ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾಗಿರುವ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಸಕ್ತ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ರೂಪುರೇಷೆಯ ಬಗ್ಗೆ ಯಕ್ಷಗಾನ ಶಿಕ್ಷಕರಿಗೆ ತಿಳಿದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಪ್ರೊ. ಎಂ.ಎಲ್. ಸಾಮಗ ಪ್ರಸಕ್ತ ಕಾಲದಲ್ಲಿ ಯಕ್ಷಗಾನ ಶಿಕ್ಷಣದ ಸಾಧ್ಯತೆ ಮತ್ತು ಶೈಕ್ಷಣಿಕ ವೈಧಾನಿಕತೆಯ ಬಗ್ಗೆ ಯಕ್ಷಗಾನ ಶಿಕ್ಷಕರಿಗೆ ಮಾಹಿತಿ ನೀಡಿದರು. ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿಯ ಗೌರವ ಸಲಹೆಗಾರರಾದ ಡಾ.‌ ಎಂ. ಪ್ರಭಾಕರ ಜೋಷಿ ಯಕ್ಷಗಾನ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ ಯಕ್ಷಗಾನ ಶಿಕ್ಷಕರ ಸವಾಲು – ಸಾಧ್ಯತೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಯಕ್ಷಧ್ರುವ…

Read More

ಮಂಗಳೂರು : ಕಾಸರಗೋಡಿನ ನುಳ್ಳಿಪ್ಪಾಡಿಯ ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಜ್ಯೋತಿನಗರದ ಅನಿತಾ ಶೆಣೈ ಇವರ ಮನೆಯಲ್ಲಿ ದಿನಾಂಕ 22 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ನಡೆಯಲಿದೆ. ಕಾರ್ಯಕ್ರಮವನ್ನು ಕಾಸರಗೋಡಿನ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಉದ್ಘಾಟಿಸುವರು. ಕೇರಳ ರಾಜ್ಯ ಕನ್ನಡ ಚು.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ಕನ್ನಡ ಚು.ಸಾ.ಪ. ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಇವರು ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ಟರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಅಭಿಯಾನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ. ಪ್ರದೀಪ್ ಕುಮಾರ್, ಸತ್ಯವತಿ ಕೊಳಚಪ್ಪು,…

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ಣಾಟಕ ಸರ್ಕಾರ ಇದರ ‘ಮರೆಯಲಾಗದ ಬ್ಯಾರಿ ಮಹನೀಯರು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 20 ಜೂನ್ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಉಮರ್ ಯು.ಹೆಚ್. ಇವರ ವಹಿಸಲಿದ್ದು, ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ‘ಮರೆಯಲಾಗದ ಬ್ಯಾರಿ ಮಹನೀಯರು’ ಭಾಗ -1 ಮತ್ತು 2 ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಆಶಯ ಭಾಷಣ ಮಾಡಲಿದ್ದು, ಪತ್ರಕರ್ತ ಹಂಝ ಮಲಾರ್ ಪುಸ್ತಕಗಳ ಪರಿಚಯ ಮಾಡಲಿದ್ದಾರೆ.

Read More

ಆರ್. ಕೆ. ಸೂರ್ಯನಾರಾಯಣ ಇವರೊಬ್ಬ ಶ್ರೇಷ್ಠ ವೀಣಾ ವಿದ್ವಾಂಸ. ಇವರು ಜನಿಸಿದ್ದೆ ಸಂಗೀತಕ್ಕೆ ಹೆಸರುವಾಸಿಯಾದ ರುದ್ರಪಟ್ಟಣಂ ಮನೆತನದಲ್ಲಿ. ತಂದೆ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್ ಆರ್. ಎಸ್. ಕೇಶವ ಮೂರ್ತಿ ಮತ್ತು ತಾಯಿ ವೆಂಕಟ ಲಕ್ಷ್ಮಮ್ಮ. 14 ಜೂನ್ 1937ರಲ್ಲಿ ಇವರ ಜನನವಾಯಿತು. ತಂದೆಯೇ ಸ್ವತಃ  ಶಿಕ್ಷಕರಾಗಿ ಇವರನ್ನು ಉತ್ತಮ ವೈಣಿಕರನ್ನಾಗಿ ಮಾಡಿದರು. ಇವರು ಮೊತ್ತಮೊದಲು ವೀಣಾ ಕಚೇರಿ ನಡೆಸಿದ್ದು 1944 ರಲ್ಲಿ, ತಮ್ಮ ಏಳನೆಯ ವಯಸ್ಸಿನಲ್ಲಿ.  ಅದೂ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಇವರ ಸನ್ನಿಧಾನದಲ್ಲಿ. ಈ ಕಚೇರಿಯಲ್ಲಿ ಅವರ ಅಸಾಧಾರಣ ಪ್ರತಿಭೆಯು ಅನಾವರಣಗೊಂಡಿತು. ಇವರು ಹೊಸತನ ತರಬೇಕೆಂಬ ಪ್ರಯೋಗಾತ್ಮಕ ದೃಷ್ಟಿಯಿಂದ 24 ತಂತಿಗಳಿರುವ ವೀಣೆಯನ್ನು ಆವಿಷ್ಕಾರ ಮಾಡಿ ದೇಶ ವಿದೇಶಗಳ ಜನರು ಈ ವೀಣೆಯ ತುಂಬು ಮಧುರ ನಾದವನ್ನು ಕಿವಿ ತುಂಬಿಸಿಕೊಳ್ಳುವಂತೆ ಮಾಡಿದರು. ಇವರ ಅಪ್ರತಿಮ ಕಲಾ ಪ್ರೌಢಿಮೆಗೆ ಜನತೆ ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದೆ. ಮೇಳ ರಾಗಮಾಲಿಕೆಯು ಸೇರಿದಂತೆ ಹಲವಾರು ಕೃತಿ, ವರ್ಣಗಳ ರಚನೆ ಮಾಡಿ ಸಂಗೀತ…

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಬೆಳಿಗ್ಗೆ ಘಂಟೆ 10.30ಕ್ಕೆ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್. ಎಲ್. ಪುಷ್ಟ ಆಶಯ ನುಡಿಗಳನ್ನಾಡಲಿದ್ದಾರೆ. ಸಮಾರಂಭದಲ್ಲಿ ಡಾ. ಶಿವಗಂಗಾ ರುಮ್ಮ ಇವರಿಗೆ ಗದ್ಯ ವಿಭಾಗದಲ್ಲಿ, ಡಾ. ಕವಿತಾ ರೈ ಇವರಿಗೆ ಕಾವ್ಯ ವಿಭಾಗದಲ್ಲಿ, ನಂದಿನಿ ಜಯರಾಮ್ ಇವರಿಗೆ ಸಕೀರ್ಣ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಶ್ರೀಮತಿ ಗಂಗಮ್ಮ (ಅರುಂಧತಿ) ಬಳಿಗಾರ್ ಉಪಸ್ಥಿತರಿರುವರು.

Read More