Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಬಯಲು ರಂಗಮಂದಿರದಲ್ಲಿ ‘ರಂಗಚಂದಿರ’ ಆಯೋಜಿಸಿದ್ದ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮವು ದಿನಾಂಕ 17-02-2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರನ್ನು ಅಭಿನಂದಿಸಿ ಮಾತನಾಡಿದ ಸಂಗೀತ ವಿದ್ವಾಂಸ ಶ್ರೀ ವಿದ್ಯಾಭೂಷಣ “ಉಪನಿಷತ್ತಿನಲ್ಲಿ ಉಲ್ಲೇಖಿಸಿರುವಂತೆ ಲಕ್ಷ್ಮೀಶ ತೋಳ್ಪಾಡಿಯವರು ಕಲಿತ ವಿದ್ಯೆಯನ್ನು ತಪಸ್ಸಿಗೆ ಸೀಮಿತಗೊಳಿಸದೆ, ಎಲ್ಲೆಡೆ ಹರಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲಿತ ವಿದ್ಯೆಯನ್ನು ಅನುಷ್ಠಾನ ಮತ್ತು ತಪಸ್ಸಿಗೆ ಮಾತ್ರ ಕೆಲವರು ಬಳಸುತ್ತಾರೆ. ಶಾಸ್ತ್ರಾಧ್ಯಯನದ ಬಳಿಕ ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳುವುದು ಕಲಿಕೆಯಲ್ಲ, ಸ್ವಾಧ್ಯಾಯ ಮತ್ತು ಪ್ರವಚನ ಮಾಡುವುದನ್ನು ಕಲಿಕೆ ಎಂದು ಉಪನಿಷತ್ತಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂತಹ ಮಹತ್ ಕೈಂಕರ್ಯವನ್ನು ಲಕ್ಷ್ಮೀಶ ತೋಳ್ಪಾಡಿ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರಶಸ್ತಿಗಳನ್ನು ಲಾಬಿ ಮಾಡಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ತೋಳ್ಪಾಡಿಯವರು ಪ್ರಶಸ್ತಿಗಾಗಿ ಯಾವುದೇ ಇಲಾಖೆಯನ್ನು ಸುತ್ತಿದವರಲ್ಲ” ಎಂದು ಪ್ರಶಂಸಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಮಾತನಾಡಿ “ಮಹಾಕಾವ್ಯಗಳಾದ…
ಕಾಸರಗೋಡು : ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನವಾದ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೂಲ ಸ್ಥಾನವಾದ, ಕಾಸರಗೋಡಿನ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮ ದಿನಾಂಕ 27-02-2024 ರಂದು ನಡೆಯಿತು. ತಂಡದ ಗುರುರಾಜ್ ಕಾಸರಗೋಡು, ಜ್ಞಾನ ರೈ ಪುತ್ತೂರು, ಕೌಶಿಕಾ, ಸ್ವೀಕೃತಿ, ಅಹನಾ ಎಸ್. ರಾವ್, ಆಜ್ಞಾ ರೈ ಪುತ್ತೂರು, ಅನನ್ಯ ಎನ್. ಶೆಟ್ಟಿ, ದೇವಿಶಾ, ಹಿತಾಶ್ರೀ, ಇನಿಶಾ, ಆರಾಧ್ಯ ಆರ್., ಅಕ್ಷರ, ಸಾನ್ವಿ ಆರ್. ಚೌಟಾ, ಅನನ್ಯ, ಹರೀಶ್ ಪಂಜಿಕಲ್ಲು, ದೀಪ್ತಿ ಅಡ್ಡoತ್ತಡ್ಕ, ನವ್ಯಶ್ರೀ, ದಿಯಾ, ಶೈಲಜಾ, ಭವ್ಯ, ಜಯಾ, ಮಧುಮತಿ, ರಾಜಿ, ಪ್ರಮೀಳಾ, ಅಶ್ವತಿ, ಯಾಮಿನಿ ಕಾರ್ತಿಕ್, ಲತಾ ನಾಗೇಶ್, ಸಾಹಿತ್ಯ, ಜಿಶಾನ್ವಿ, ರಿತ್ವಿ, ಪೂಜಶ್ರೀ, ಸನುಷಾ ಸುನಿಲ್, ಉಷಾ ಸುಧಾಕರನ್, ಸಮಿತಾ ಭಟ್, ತೇಜಸ್ವಿನಿ, ವರ್ಷ…
ಮೈಸೂರು : ಬಿರುಬೇಸಿಗೆಯ ಧಗೆಯಲ್ಲಿ ತೂರಿಬಂದ ಮಳೆಯ ತಿಳಿ ತಂಗಾಳಿಯ ಸಿಂಚನದಂತೆ ಮಕ್ಕಳ ನಗೆ, ಅದಕ್ಕೊಂದು ಕಲೆಯ ಚೌಕಟ್ಟು. ನಲಿವಿನಲ್ಲೇ ನಡೆವ ಕಲಿಕೆಯ ತಿಂಗಳ ಸಂಭ್ರಮ ‘ರಜಾಮಜಾ’. ಮೈಸೂರಿನ ನಟನ ಇವರ ವತಿಯಿಂದ ಮಂಡ್ಯ ರಮೇಶ ನೇತೃತ್ವದಲ್ಲಿ ದಿನಾಂಕ 11-04-2024ರಿಂದ 05-05-2024ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಮೈಸೂರಿನ ದಟ್ಟಗಳ್ಳಿ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ನಡೆಯುವ ಮಕ್ಕಳ ಈ ಸಡಗರದ ಶಿಬಿರ. ನೂರಾರು ಮಕ್ಕಳ ವೈವಿಧ್ಯಮಯ ಕಲೆಯ ಮುಖಗಳನ್ನು ಅಪ್ಪ-ಅಮ್ಮಂದಿರಿಗೆ, ಬಂಧು-ಮಿತ್ರರಿಗೆ ಮತ್ತು ಬಾಳುವ ಈ ಸಮಾಜಕ್ಕೆ ಸರಳವಾಗಿ ದಾಖಲಿಸುತ್ತಾ ಹೋಗುತ್ತದೆ. ನಮ್ಮ ಕನ್ನಡ ಜಾನಪದದ ಪ್ರಖರ ಶಕ್ತಿಯನ್ನು ಆಧುನಿಕ ರಂಗಭೂಮಿಗೆ ದಾಟಿಸುವ ಆರಂಭದ ಕಲಿಕೆಯ ಶಿಬಿರವಿದು. ಎರಡು ದಶಕಗಳ ಸುದೀರ್ಘ ಯಾನದ ಅನುಭವವೂ ಇದರೊಂದಿಗಿದೆ. ತಿಂಗಳಿಡೀ ಮಕ್ಕಳು ಹಲವು ಸಾಧಕರೊಂದಿಗೆ, ಶ್ರೇಷ್ಠ ಸಂಪನ್ಮೂಲರೊಂದಿಗೆ, ಹೊಸ ಗೆಳೆಯ-ಗೆಳತಿಯರೊಂದಿಗೆ ಒಡನಾಡುತ್ತಾ, ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾ ಸಾಗುವುದನ್ನು ಮತ್ತು ಅರಳುವುದನ್ನು ಗಮನಿಸುವುದೇ ಒಂದು ಚಂದ. ಪ್ರವೇಶ ಪ್ರಕ್ರಿಯೆಯು ದಿನಾಂಕ 31-03-2024ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ…
ಬೆಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ 2023-24ನೇ ಸಾಲಿನ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗಳನ್ನು ದಿನಾಂಕ 01-03-2024ರಂದು ಪ್ರಕಟಿಸಲಾಗಿದೆ. ಕಾಸರಗೋಡಿನ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಹಿರೇಮಠ ಭಾಲ್ಕಿ ಇವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಜತೆಗೆ ಕನ್ನಡದ ಏಕೀಕರಣದ ಹೋರಾಟದ ವೀರಾಗ್ರಣಿ ಡಾ. ಜಯದೇವಿತಾಯಿ ಲಿಗಾಡೆ ಇವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಬೀದರ್ನ ಹಿರಿಯ ಕನ್ನಡ ಹೋರಾಟಗಾರ ಶ್ರೀ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಇವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಬೆಳಗಾವಿಯ ಕನ್ನಡ ಚಿಂತಕರಾದ ಪ್ರೊ. ಬಿ.ಎಸ್. ಗವಿಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ತಿಳಿಸಿದ್ದಾರೆ. ನಾಡು, ನುಡಿ, ಸಾಹಿತ್ಯ ಹಾಗೂ ಕನ್ನಡ ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಹಾಗೂ ಹೊರ ರಾಜ್ಯದ ಗಡಿ ಕನ್ನಡ ಪ್ರದೇಶಗಳಲ್ಲಿನ ಸಂಘ ಸಂಸ್ಥೆಗಳು/ಮಹನೀಯರಿಗೆ ಈ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 6ನೇ ದಿನದ ಕಾರ್ಯಕ್ರಮವು ದಿನಾಂಕ 01-03-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಇವರು ಮಾತನಾಡುತ್ತಾ “ಸುಮನಸಾ ಸಂಘಟನೆಯ ಶಿಸ್ತು, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಯುವ ಜನರು ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ 60ಕ್ಕೂ ಅಧಿಕ ಯುವ ಜನರನ್ನು ಒಂದೆಡೆ ಸೇರಿಸಿಕೊಂಡು ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ನೀಡುತ್ತಾ, ಸಮಾಜದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಾ ಬಂದಿರುವುದು ಮಹತ್ವದ ಕೆಲಸ. ಶಿಕ್ಷಣದ ಬಗ್ಗೆ, ರಂಗಶಿಕ್ಷಣದ ಬಗ್ಗೆ, ಸಮಾಜದ ಬಗ್ಗೆ ಚಿಂತನೆಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸುಮನಸಾ ಸಂಘಟನೆಯು ರಾಜ್ಯ ಮತ್ತು ದೇಶದ ವಿವಿಧ ಕಡೆಗಳಿಂದ ರಂಗತಂಡಗಳನ್ನು ಕರೆಸಿ ಅಲ್ಲಿನ ಸಾಂಸ್ಕೃತಿಕ ಜಗತ್ತನ್ನು ಇಲ್ಲಿನ ಜನರಿಗೆ ಪರಿಚಯಿಸುತ್ತಾ ಬಂದಿದೆ. ಪುಟ್ಟ ಮಕ್ಕಳಲ್ಲಿ ರಂಗಶಿಸ್ತು ಮೂಡಿಸುವ ಕೆಲಸ ಇಲ್ಲಿ…
ಶಿವಮೊಗ್ಗ : ರಂಗಾಯಣ ಶಿವಮೊಗ್ಗ ಸಹಯೋಗದಲ್ಲಿ ಕಡೆಕೊಪ್ಪಲ ಪ್ರತಿಷ್ಠಾನ, ಶಿವಮೊಗ್ಗ (ರಿ.) ಅರ್ಪಿಸುವ ರಂಗಬಂಡಿ ಮಳವಳ್ಳಿ (ರಿ.) ಪ್ರಸ್ತುತ ಪಡಿಸುವ ಶಶಿಕಾಂತ ಯಡಹಳ್ಳಿಯವರ ‘ಅನುರಕ್ತೆ’ (ದೇವಯಾನಿ ಬದುಕಿನ ದುರಂತ ಕಥನ) ಏಕವ್ಯಕ್ತಿ ರಂಗ ಪ್ರಯೋಗವು ದಿನಾಂಕ 08-03-2024ರಂದು ಸಂಜೆ 6.45ಕ್ಕೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಉಮಾಶ್ರೀ ಮಧು ಮಳವಳ್ಳಿ ಪ್ರಸ್ತುತಪಡಿಸಲಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಧು ಮಳವಳ್ಳಿ ನಿರ್ವಹಿಸಿರುತ್ತಾರೆ. ನಾಟಕದ ರಂಗ ವಿನ್ಯಾಸವನ್ನು ಶಶಿಧರ ಅಡಪ ನಿರ್ವಹಿಸಲಿದ್ದು, ಸಂಗೀತ ಜನಾರ್ದನ (ಜನ್ನಿ) ಅವರದ್ದು, ಬೆಳಕಿನ ವಿನ್ಯಾಸವನ್ನು ಅರುಣ್ ಮೂರ್ತಿ ಮತ್ತು ನಾಟಕಕ್ಕೆ ಆದಿತ್ಯ ಭಾರದ್ವಾಜ್ ಸಾಂಗತ್ಯ ನೀಡಲಿದ್ದಾರೆ. ನಾಟಕದ ಕುರಿತು : ಪೌರಾಣಿಕ ಕತೆಗಳು, ಪಾತ್ರಗಳು, ಘಟನೆಗಳು ಸದಾ ನಮ್ಮನ್ನಾವರಿಸುತ್ತವೆ. ಇವು ಸಾರ್ವಕಾಲಿಕವಾಗಿರುವುದೇ ಇದಕ್ಕೆ ಕಾರಣವಿರಬಹುದು! ಅಲ್ಲಿಯ ಪಾತ್ರಗಳ ರಸವತ್ತತೆ, ಮನುಜ ಸಹಜ ಗುಣಗಳು, ಜೀವನದ ಪಾಠಗಳು, ಬದುಕಿನೊಡನೆ ಬೆಸೆದ ಬರಹವಾಗಿರುತ್ತದೆ. ಮನುಷ್ಯನ ಮುಖವಾಡ ಕಳಚಲು ಸಹಾಯಕವಾಗುತ್ತದೆ. ನ್ಯಾಯದ, ನೀತಿಯ ಪರಾಮರ್ಷೆಯ ನೋಟಗಳು, ಬದುಕಿಗೆ ಹತ್ತಿರವಾಗುವಂತೆ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 5ನೇ ದಿನದ ಕಾರ್ಯಕ್ರಮವು ದಿನಾಂಕ 29-02-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ “ವಿ.ಎಸ್. ಆಚಾರ್ಯರ ಕಲ್ಪನೆಯಲ್ಲಿ ಭುಜಂಗ ಪಾರ್ಕ್ನಲ್ಲಿ ಬಯಲು ರಂಗಮಂದಿರ ನಿರ್ಮಾಣಗೊಂಡಿತ್ತು. ಆದರೆ, ಈ ಬಯಲು ರಂಗಮಂದಿರವನ್ನು ಸುಮನಸಾ ಸಂಸ್ಥೆ ಬಿಟ್ಟು ಬೇರೆಯವರು ಬಳಸದೇ ಇರುವುದು ಬೇಸರದ ಸಂಗತಿ. ಸುಮನಸಾವು ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದು, ರಾಜ್ಯದೆಲ್ಲೆಡೆ ಇಲ್ಲಿನ ಪ್ರತಿಭೆಗಳು ಬೆಳಗುತ್ತಿವೆ. ನಾಟಕಗಳ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಹರಡುವ ಕೆಲಸಗಳಾಗುತ್ತಿವೆ” ಎಂದು ಹೇಳಿದರು. ಉದ್ಯಮಿ ಅಚ್ಯುತ್ ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಮಾಜದ ಮತ್ತು ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ರಂಗಭೂಮಿ. ಅದರಂತೆ ಸುಮನಸಾ ಕಾರ್ಯನಿರ್ವಹಿಸುತ್ತಿದ್ದು, ಸಾಂಸ್ಕೃತಿಕ ಮಾತ್ರವಲ್ಲ, ಸಾಮಾಜಿಕ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ನಟರು, ನಿರ್ದೇಶಕರು ಉತ್ತಮ ಸಾಧನೆ ಮಾಡಿ, ಅದು ಪ್ರೇಕ್ಷಕರಿಗೆ…
ಬೆಂಗಳೂರು : ರಂಗಚಂದಿರ ಟ್ರಸ್ಟ್ (ರಿ.) ಪ್ರಸ್ತುತ ಪಡಿಸುವ ಡಾ. ಚಂದ್ರಶೇಖರ ಕಂಬಾರ ರಚಿಸಿರುವ ‘ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶನವು ದಿನಾಂಕ 02-03-2024ರಂದು ಸಂಜೆ 6.30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಮೂಲ ಜೋತಪ್ಪ ಈ ನಾಟಕದ ನಿರ್ದೇಶನ ಮಾಡಿದ್ದು, ಎಸ್.ಟಿ. ಮಲ್ಲು (ತಿಮ್ಮಯ್ಯ), ಶೀಬಾ ಮತ್ತು ಆರ್.ಕೆ. ಪ್ರವೀಣ್ ಮೇಳದಲ್ಲಿದ್ದಾರೆ. ಸಿ.ಎಂ.ಟಿ. ಇವರು ಸಹನಿರ್ದೇಶನ ಮಾಡಿದ್ದು, ಜಿ. ಪಿ. ಒ. ಚಂದ್ರು ನಿರ್ವಹಣೆ ಮಾಡಿರುತ್ತಾರೆ. ಸಂಸ್ಕೃತಿ ಸಚಿವಾಲಯ ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ನಡೆಯಲಿದೆ. ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಆರ್. ನರೇಂದ್ರ ಬಾಬು ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ಎನ್. ನಮೃತ ಇವರು ನಾಟಕ ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ. ‘ಸಂಗ್ಯಾಬಾಳ್ಯಾ’ ನಡೆದ ಘಟನೆಯನ್ನು ಬಯಲಾಟವಾಗಿಸಿದ ಜಾನಪದ ರೂಪಕ. ಹಾಡುಗಳ ಜನಪ್ರಿಯ ಧಾಟಿಗಳು ಹಾಗೂ ನಡೆದ ಘಟನೆಯ ಆಧಾರದ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷರಂಗಾಯಣ ಕಾರ್ಕಳ ವತಿಯಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ದಿನಾಂಕ 05-03-2024ರ ಮಂಗಳವಾರ ಸಂಜೆ ಗಂಟೆ 6:15ಕ್ಕೆ ಡಾ. ಗೀತಾ ಪಿ. ಸಿದ್ಧಿ ಅವರ ಕಥೆ ಆಧಾರಿತ ಶಿವಮೊಗ್ಗ ರಂಗಾಯಣ ಪ್ರಸ್ತುತಪಡಿಸುವ ‘ಮಾರ್ನಮಿ’ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕದ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಕಾಂತ್ ಕುಮಟಾ ಇವರು ಮಾಡಿದ್ದು, ಶ್ರೀಪಾದ್ ತೀರ್ಥಹಳ್ಳಿ ಇವರ ಸಂಗೀತ ಇರುತ್ತದೆ. ನೃತ್ಯ ಸಂಯೋಜನೆ ಮತ್ತು ಸಿದ್ಧಿ ಹಾಡುಗಳು ಗಿರೀಶ್ ಪಿ. ಸಿದ್ಧಿ ಮಂಚಿಕೇರಿಯವರು ಸಂಯೋಜನೆ ಮಾಡಿರುತ್ತಾರೆ. ರಂಗಸಜ್ಜಿಕೆ ಮತ್ತು ಪರಿಕರ ಮಧುಸೂದನ್, ವಸ್ತ್ರವಿನ್ಯಾಸ ರಾಜಣ್ಣ ಗಡಿಕಟ್ಟೆ ಮತ್ತು ಬೆಳಕು ಚಂದನ್ ಎನ್. ಇವರು ನಿರ್ವಹಿಸಿರುತ್ತಾರೆ. ಕನ್ನಡ ಮತ್ತು ಕೊಂಕಣಿ ಮಿಶ್ರಿತ ‘ಮಾರ್ನಮಿ’ ಎಂಬ ನಾಟಕ ಶ್ರೀಕಾಂತ್ ಕುಮಟಾ ಇವರ ನಿರ್ದೇಶನದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ 4 ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನಗೆದ್ದ ನಾಟಕವಾಗಿದೆ. ಈ ನಾಟಕವನ್ನು ಶ್ರೀಕಾಂತ್ ಕುಮಟಾ ಇವರು ಉತ್ತರ…
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿಯಾಗಿ ವಾರಪೂರ್ತಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಭಾಗವಾಗಿ ಚರ್ಚೆ, ಛದ್ಮವೇಷ ಹಾಗೂ ಕವನ ರಚನೆ ಸ್ಪರ್ಧೆಗಳು ಆಳ್ವಾಸ್ ಕಾಲೇಜಿನಲ್ಲಿ ದಿನಾಂಕ 29-02-2024 ರಂದು ಪ್ರಾರಂಭಗೊಂಡಿತು. ಪದವಿ ಪೂರ್ವ ಹಾಗೂ ಪದವಿ ಮತ್ತು ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಚರ್ಚಾ ಸ್ಪರ್ಧೆಯಲ್ಲಿ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಶೆಟ್ಟಿ ಪ್ರಥಮ, ಆಳ್ವಾಸ್ ಕಾಲೇಜಿನ ಬಿ. ಬಿ. ಎ. ವಿದ್ಯಾರ್ಥಿ ಶಶಾಂಕ್ ದ್ವಿತೀಯ ಹಾಗೂ ಶ್ಯಾಮ್ ಪ್ರಸಾದ್ ತೃತೀಯ ಬಹುಮಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ‘ಸೌಂದರ್ಯ ಹಾಗೂ ಕಾಸ್ಮೆಟಿಕ್ಸ್ ಕ್ಷೇತ್ರ ಮಹಿಳೆಯರಿಗೆ ವರದಾನವೇ?’, ‘ವಿವಾಹಿತ ಮಹಿಳೆಯರಿಗೆ ವೃತ್ತಿ ಹಾಗೂ ಸಾಂಸಾರಿಕ ಜವಾಬ್ದಾರಿಗಳು’, ‘ಚಲನಚಿತ್ರಗಳಲ್ಲಿ ಬಿಂಬಿಸುವ ಮಹಿಳಾ ಚಿತ್ರಣಗಳು ನೈಜತೆ ಸಾರುತ್ತವೆಯೇ?’ ಹಾಗೂ ‘ಸರ್ಕಾರದ ಮೀಸಲಾತಿ ಹಾಗೂ ಮಹಿಳಾ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆಯೇ?’ ಮತ್ತಿತರ ವಿಷಯಗಳ…