Author: roovari

Intach Mangaluru Chapter, in collaboration with Art Kanara Trust, released a new illustrated booklet, “Chennu: Mangaluru City Profile,” on Saturday, January 21, 2023, at 5:00 PM at Kodialguthu Centre for Art and Culture, CG Road, Balall Bagh, Mangalore. Akshy Sridhar, Commissioner, Mangaluru City Corporation, released the book in the presence of Subhas Basu, Convener, Intach Mangaluru Chapter, and Niren Jain, Co-convener. Addressing the gathering, Akshy Sridhar said, “It is essential to preserve our heritage and maintain our cultural links. The heritage community should draft a proper working methodology and systematic approach.” He assured them that the City Corporation would extend…

Read More

ಪ್ರಿಯರೇ ಬಳ್ಕೂರು ಯಕ್ಷ ಕುಸುಮ ಟ್ರಸ್ಟ್ ನಲ್ಲಿ ನಡೆದ ಕೃಷ್ಣ ಗಾರುಡಿ ಮತ್ತು ಜಾಂಬವತಿ ಯಕ್ಷಗಾನವನ್ನು ದೀಪ ಬೆಳಗುವ ಮೂಲಕ ರಂಗ ಸಂಗಾತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲ ಶೆಟ್ಟಿ ಅವರು ದೀಪ ಬೆಳಗುವ ಮೂಲ ಉದ್ಘಾಟಿಸಿದರು. ನಿಮ್ಮೆಲ್ಲರ ಸಹಕಾರದಿಂದ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮವು ಯಶ್ವಸಿಯಾಗಿ ಮೂಡಿಬಂದಿದೆ. ತೆಂಕಿನ ನೆಲದಲ್ಲಿ ಬಡಗಿನ ಆಟಕ್ಕೆ ಪ್ರೇಕ್ಷಕರ ಒಲವು ಇದೆ ಎನ್ನುವುದಕ್ಕೆ ಸಾಕ್ಷಿಯಾದ ಪ್ರೇಕ್ಷಕರ ಸಮೂಹವೇ ಸಾಕ್ಷಿ. ತಮಗೆಲ್ಲರಿಗೂ ರಂಗಸ್ಥಳ ಮಂಗಳೂರು, ಭಗವತೀ ದೇವಸ್ಥಾನ ಮತ್ತು ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದ ಪರವಾಗಿ ಧನ್ಯವಾದಗಳು , ಎಲ್ಲಾ ಗಣ್ಯರು ಸೇರಿದಂತೆ ಹೋಟೇಲ್ ಓಶಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮತ್ತು ಉತ್ತರ ದಕ್ಷಿಣ ವಿಭಾಗದ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಅವರು ಆಗಮಿಸಿ ಶುಭ ಹಾರೈಸಿದರು ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ ಮತ್ತು ಶ್ರೀ ರಂಜಿತ್ ಕುಮಾರ್ ಅವರಿಗೆ ಬಳ್ಕೂರು ಯಕ್ಷ ಕುಸುಮ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.

Read More

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿ ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಭರವಸೆಯ ಲೇಖಕಿ ಶ್ರಿಮತಿ ದೀಪ್ತಿ ಎಸ್.ರಾವ್ (ಸಿಯಾಟಲ್ ಅಮೆರಿಕಾ) ಇವರು ರಚಸಿರುವ “ಸಾವಿನಂಚಿನ ಸಂವಾದ – ಸಾರ್ಥಕ ಬದುಕಿನ ಸೋಪಾನ ” ಎಂಬ ಅಪರೂಪದ ಕೃತಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಲೋಕಾರ್ಪಣೆಗೊಂಡಿದೆ. ಇವರು ಖ್ಯಾತ ಸಾಹಿತಿ ಡಾ. ಚ.ನ. ಶಂಕರ ರಾವ್ ಹಾಗೂ ಡಾ. ಸರಸ್ವತಿ ಎಸ್. ರಾವ್ ಇವರ ಸುಪುತ್ರಿ. ಶ್ರೀಮತಿ ವೀಣಾ ಟಿ.ಶೆಟ್ಟಿ ಮಹಾಪ್ರಬಂಧಕರು, (ಶಿಕ್ಷಣ ವಿಭಾಗ) ಎಂ. ಆರ್. ಪಿ. ಎಲ್. ಮಂಗಳೂರು ಇವರು ಪುಸ್ತಕ ಬಿಡುಗಡೆ ಮಾಡಿ, “ಪುಸ್ತಕದಲ್ಲಿನ ಉತ್ತಮ ವಿಚಾರಗಳನ್ನು ನಾವು ಯಾವತ್ತೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕ ಎಲ್ಲರಿಗೂ ಮಾರ್ಗದರ್ಶಕವಾಗಲಿ.” ಎಂದರು. ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ.ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು , ಕೃತಿಯಿಂದ ಆಯ್ದ ಕೆಲವು ವಿಚಾರಗಳ ಬಗ್ಗೆ ತಮ್ಮ…

Read More

ಥಾಯ್ ಲ್ಯಾಂಡಿನ ಬ್ಯಾಂಕಾಕ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಜಾದೂ ಸಮ್ಮೇಳನದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಅವರು ಪ್ರಸುತ ಪಡಿಸಿದ ” ತುಳುನಾಡು ತುಡರ್ ಚೆಂಡು” ಜಾದೂವಿಗೆ ಎರಡು ಅಂತರ್ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಲಭಿಸಿದೆ. ಜಗತ್ತಿನ ಅತ್ಯಂತ ಪುರಾತನ ಜಾದೂ ಆಗಿರುವ ಕಪ್ಸ್ ಆಂಡ್ ಬಾಲ್ಸ್ ಮ್ಯಾಜಿಕ್ ಅನ್ನು ಕುದ್ರೋಳಿ ಗಣೇಶ್ ರವರು ನೂತನ ತಂತ್ರಗಾರಿಕೆಯ ಮೂಲಕ ತುಳು ಭಾಷೆ ಹಾಗೂ ಪಾಡ್ದನದ ಮೂಲಕ ಪ್ರಸ್ತುತ ಪಡಿಸಿದ ಸೃಜನಶೀಲತೆಯನ್ನು ಪರಿಗಣಿಸಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಬ್ರಹತ್ ಜಾದೂ ಸಂಸ್ಥೆ ಅನ್ನುವ ಹೆಗ್ಗಳಿಕೆ ಹೊಂದಿದ ಅಮೆರಿಕಾದ ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯು ಪ್ರತಿಷ್ಟಿತ “ಮರ್ಲಿನ್ ಮೆಡಲ್ ” ನೀಡಿ ಗೌರವಿಸಿದೆ. ತುಳುನಾಡು ತುಡರ್ ಚೆಂಡು ಜಾದೂವಿನ ಹೊಸತನವನ್ನು ಗಮನಿಸಿ ವಿಶ್ವ ಜಾದೂ ಸಮ್ಮೇಳನ ಸಂಘಟಿಸಿದ ಥಾಯ್ ಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ ” ಮೋಸ್ಟ್ ಓರಿಜಿನಲ್ ಆಕ್ಟ್ ” ಪ್ರಶಸ್ತಿ ನೀಡಿ…

Read More

ಮಂಗಳೂರು: ಜೀವನದಲ್ಲಿಸಂಸ್ಕಾರ ಇದ್ದರೆ ಮಾತ್ರ ನಾವು ಪರಿಪೂರ್ಣವಾಗಿ ಬದುಕಲು ಸಾಧ್ಯ. ಭಾರತದಲ್ಲಿ ಕಲಾ‌ ಪ್ರಕಾರಗಳು ಜೀವನಕ್ಕೆ ಅಗತ್ಯ ಸಂಸ್ಕಾರಗಳನ್ನು ಕೊಡಬಲ್ಲವು ಎಂದು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು. ಅವರು ಶನಿವಾರ ನಗರದ ಕುದ್ಮುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ ನಲ್ವತ್ತನೆ ವರ್ಷಾಚರಣೆಯ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶೇಣಿ ಮುರಳಿ ಅವರಿಂದ ಶ್ರೀಹರಿದರ್ಶನ ಎಂಬ ಹರಿಕತೆ, ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿಶೇಖರ್, ವಿದುಷಿ ಶ್ರೀಲತಾ ನಾಗರಾಜ್, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ನಾಗರಾಜ್ ಶೆಟ್ಟಿ, ವಿದುಷಿ ಉಮಾ ಹೆಬ್ಬಾರ್, ವಿದುಷಿ ವಾಣಿಶ್ರೀ, ವಿದುಷಿ ಛಾಯಾಶ್ರೀ,ವಿದುಷಿ ಕೃಪಾ, ವಿದುಷಿ ನೇಹಾ , ವಿಜಿತಾ ಶೆಟ್ಟಿ, ಸಿಂಚನ ಕುಲಾಲ್ ಉಪಸ್ಥಿತರಿದ್ದರು.

Read More