Author: roovari

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣ ಮಠ ಉಡುಪಿಯಲ್ಲಿ, ರಾಗ ಧನ ಸಂಸ್ಥೆ (ರಿ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ರಾಗರತ್ನಮಾಲಿಕೆ -25’ ಸಂಗೀತ ಕಾರ್ಯಕ್ರಮವು ದಿನಾಂಕ 02-06-2024ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ವಿದ್ವಾನ್ ಪ್ರಣವಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಅವರ ಶಿಷ್ಯ ಚಿರಂಜೀವಿ ಮೋಕ್ಷಿತ್ ಯಸ್. ಬೆಂಗಳೂರು ಇವರ ದ್ವಂದ್ವ ವಯೊಲಿನ್ ವಾದನ ಕಚೇರಿ ನಡೆಯಿತು. ಮೃದಂಗದಲ್ಲಿ ಡಾ. ಅಕ್ಷಯ ನಾರಾಯಣ ಕಾಂಚನ ಮತ್ತು ಘಟಂನಲ್ಲಿ ವಿದ್ವಾನ್ ಯಸ್. ಮಂಜುನಾಥ್ ಮೈಸೂರು ಸಹಕರಿಸಿದರು.

Read More

ಮಡಿಕೇರಿ : ಲೇಖಕಿ ಪ್ರತಿಮಾ ಹರೀಶ್ ರೈ ಬರೆದಿರುವ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 09-06-2024ರಂದು ಬೆಳಗ್ಗೆ 10-30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಶ್ರೀ ಟಿ.ಪಿ. ರಮೇಶ್ ಉದ್ಘಾಟಿಸಲಿದ್ದು, ಸಾಹಿತಿ ಶ.ಗ. ನಯನ ತಾರಾ ‘ಅಂತರಗಂಗೆ’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಶ್ರೀ ಸುಬ್ರಾಯ ಸಂಪಾಜೆ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಕೊಡಗು ವಿ.ವಿ.ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಕೃತಿಯ ಕುರಿತಂತೆ ಮಾತನಾಡಲಿದ್ದು, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ಜಿ. ರಾಜೇಂದ್ರ, ಮಡಿಕೇರಿ ತಾಲೂಕು ಜಾನಪದ ಪರಿಷತ್‌ ಅಧ್ಯಕ್ಷ ಶ್ರೀ ಅನಿಲ್ ಹೆಚ್.ಟಿ., ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಡಿ. ಜಗದೀಶ್ ರೈ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Read More

ಶ್ರೀಮತಿ ಶಶಿಕಲಾ ಬಾಯಾರು ಅವರ ‘ಪತ್ರಾರ್ಜಿತ’ವು ಭಾವನಾತ್ಮಕ ಸಂವಾದಗಳ ಸುಂದರ ಗುಚ್ಛ. ಸಂಬಂಧ ಸಂವಹನಗಳು ಯಾಂತ್ರಿಕವಾಗುತ್ತಿರುವ ಹೊತ್ತಿನಲ್ಲಿ ಓಲೆಗಳ ಮೇಲೆ ಭಾವನೆಗಳು ಅರಳಿರುವುದು ವಿಶೇಷ. ಚಿತ್ತಭಿತ್ತಿಯಲ್ಲಿ ಮೂಡುವ ಭಾವಚಿತ್ರಗಳನ್ನು ಜೀವಂತಿಕೆಯಿಂದ ನೇಯಬಲ್ಲ ಇವರ ಕಸೂತಿಕಲೆಯಂತೆ ಇಲ್ಲಿನ ಪತ್ರಸಂಗ್ರಹವೂ ತನ್ನದೇ ಆದ ಕುಸುರಿತನದಿಂದ ಕಂಗೊಳಿಸುತ್ತದೆ. ಲೇಖಕಿಯು ತಮ್ಮ ಜೊತೆ ಒಡನಾಡಿದ ವ್ಯಕ್ತಿಗಳಿಗೆ ಬರೆದ ಪತ್ರಗಳು ಮತ್ತು ಅವರ ಪ್ರತ್ಯುತ್ತರಗಳು ಓದುಗನ ಪಾಲಿಗೆ ಎಂದಿಗೂ ಮರೆಯಲಾಗದ ನೆನಪಿನ ಚಿತ್ರಗಳಾಗಿವೆ. ಒಡನಾಟದ ಹಲವು ಸಂಗತಿಗಳನ್ನೂ ಸಂದರ್ಭಗಳನ್ನೂ ಲಕ್ಷ್ಯವಾಗಿಟ್ಟುಕೊಂಡು ಮೂಡಿದ ಬರಹಗಳು ಕತೆ ಕವಿತೆಗಳಂತೆ ಆಪ್ತವಾಗಿ ಓದಿಸುತ್ತಾ ಚಿಂತನೆಗೆ ತೊಡಗಿಸುತ್ತವೆ. ಪತ್ರದಲ್ಲಿ ಅವರು ಯಾರೊಂದಿಗೆ ಸಂವಾದವನ್ನು ನಡೆಸುತ್ತಾರೋ ಅವರೆಲ್ಲರೂ ಒಂದೇ ಮನೆಯ ಮಂದಿಗಳಂತೆ ಜೊತೆಯಲ್ಲಿ ಕುಳಿತು ಮಾತನಾಡುವಂತೆ ಭಾಸವಾಗುತ್ತದೆ. ಇಲ್ಲಿನ ಓಲೆಗಳು ಕೇವಲ ಕುಶಲೋಪರಿ, ಹರಟೆಗಳಿಗೆ ಎಡೆ ಕೊಡದೆ ಜನಜೀವನ, ಜಗತ್ತಿನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುತ್ತವೆ. ಲೇಖಕಿ ಬರೆದ ಪತ್ರಗಳಲ್ಲಿ ಅವರ ಆತ್ಮಕತೆಯ ಕೆಲವು ಪುಟಗಳು ಅನಾವರಣಗೊಳ್ಳುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ ಫಲವಾಗಿ ಇಲ್ಲಿನ ಪತ್ರಗಳು…

Read More

ಸಾಲಿಗ್ರಾಮ : ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ನಲವತ್ತನೆಯ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಹಾಗೂ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ ಇವರ ವತಿಯಿಂದ ‘ಯಕ್ಷ ಮುದ್ರಾ’ ಯಕ್ಷಗಾನದ ಅಭಿನಯದಲ್ಲಿ ಹಸ್ತ ಮುದ್ರೆಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ದಿನಾಂಕ 06-06-2024ರಂದು ಬೆಳಗ್ಗೆ 9-30 ಗಂಟೆಯಿಂದ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ. ಯಕ್ಷಗಾನದ ಅಭಿನಯದಲ್ಲಿ ಅಗುತ್ತಿರುವ ನ್ಯೂನತೆಯನ್ನು ಕಡಿಮೆ ಮಾಡುವ ಉದ್ದೇಶದಲ್ಲಿ ಅಭಿನಯದಲ್ಲಿ ಬರುತ್ತಿರುವ ಮುದ್ರೆಗಳ ಬಗ್ಗೆ ಕಲಾವಿದರಿಗೆ ಉಪಯುಕ್ತ ಕಾರ್ಯಾಗಾರ ಇದಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿಯ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ಇವರು ವಹಿಸಲಿದ್ದು, ಕುಂದಾಪುರದ ಮಾನ್ಯ ಶಾಸಕರಾದ ಶ್ರೀ ಕಿರಣ್ ಕುಮಾರ ಕೊಡ್ಗಿ, ಕೆ.ಇ.ಬಿ. ನಿವೃತ್ತ ಅಧಿಕಾರಿ ಶ್ರೀ ದಿನೇಶ ಉಪ್ಪೂರ ಮತ್ತು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿಯ ಪ್ರಾಚಾರ್ಯರಾದ ಶ್ರೀ ಸದಾನಂದ ಐತಾಳ ಇವರುಗಳು ಉದ್ಘಾಟಿಸಲಿರುವರು. ಹಿರಿಯ ಯಕ್ಷಗಾನ ಕಲಾವಿದರಾದ…

Read More

ಉಡುಪಿ : ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ 2024ನೇ ಸಾಲಿನ ಪ್ರಶಸ್ತಿಗೆ ತುಳುಭಾಷೆ ಹಾಗೂ ಸಂಸ್ಕೃತಿ ಚಿಂತಕ ಶ್ರೀ ಬೆನೆಟ್ ಜಿ. ಅಮ್ಮನ್ನ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ 20,000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಬೆನೆಟ್ ಜಿ. ಅಮ್ಮನ್ನ ಉಡುಪಿ ತಾಲೂಕಿನ ಪಾಂಗಾಳದವರು. ಅವರು 30 ವರ್ಷಗಳ ಕಾಲ ಮಂಗಳೂರಿನ ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ಪತ್ರಾಗಾರ ವಿಭಾಗದಲ್ಲಿ ಪತ್ರಾಗಾರ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ತುಳುನಾಡಿನ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ವಿದೇಶಿಯರ ಕೊಡುಗೆಗಳು ಹಾಗೂ ತುಳುನಾಡು ಚರಿತ್ರೆ ಇವರ ಆಸಕ್ತಿಯ ಕ್ಷೇತ್ರಗಳು. ಇದಕ್ಕೆ ಸಂಬಂಧಿಸಿದ ಸಂಶೋಧನೆ, ದಾಖಲೀಕರಣ, ಹಸ್ತಪ್ರತಿ, ಸಂರಕ್ಷಣೆ, ಭಾಷಾಂತರ ಮೊದಲಾದ ಕ್ಷೇತ್ರಗಳಲ್ಲಿ ಇವರು ಕೊಡುಗೆಯನ್ನು ನೀಡಿದ್ದಾರೆ. ‘ಚಿಗುರಿದ ಬದುಕು’ (ಕಿರು ಕಾದಂಬರಿ), ‘ಕ್ರೈಸ್ತರು ಮತ್ತು ಬಾಸೆಲ್…

Read More

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾ ವಿದ್ಯಾಲಯ, ಆಕೃತಿ ಆಶಯ ಪಬ್ಲಿಕೇಷನ್ಸ್, ಕಾಸರಗೋಡು ಕನ್ನಡ ಲೇಖಕರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಇವುಗಳ ಸಹಯೋಗದಲ್ಲಿ ದಿನಾಂಕ 02-06-2024ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿ.ಎ.ಎನ್. ಖಂಡಿಗೆ ಅವರ ಲೇಖನಗಳ ಸಂಗ್ರಹದ ಕೃತಿ ‘ಬರಿಗಾಲ ನಡಿಗೆ’ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ “ಸಾಹಿತ್ಯ ಅಭಿರುಚಿ ಯುವ ಮನಸ್ಸುಗಳಲ್ಲಿ ಕಡಿಮೆಯಾಗುತ್ತಿರುವುದು ಬಹಳ ಅಪಾಯಕಾರಿ ಪರಿಸ್ಥಿತಿಯಾಗಿದೆ. ಯಾವುದೇ ಕೃತಿಯನ್ನು ಒಂದು ಬಾರಿ ಓದಿದರೆ ಅರ್ಥವಾಗುವುದಿಲ್ಲ. ನಾವು ಅರ್ಥ ಮಾಡಿಕೊಳ್ಳುವವರೆಗೆ ಓದಬೇಕು. ಆಗ ನಾವು ಮತ್ತೊಬ್ಬರಿಗೆ ತಿಳಿಸಲು ಸಾಧ್ಯವಾಗುತ್ತದೆ. ಬರಿಗಾಲು ಎಂಬುದೊಂದು ರೂಪಕ. ಮುಕ್ತವಾಗಿ ಓದುವುದು. ನಿರ್ಭೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸುವುದು ಬರಿಗಾಲ ನಡಿಗೆಯ ಮೂಲ ಆಶಯ. ಕೃತಿಯಲ್ಲಿ ಅಡಕವಾಗಿರುವ ವಿಷಯಗಳನ್ನು ಪರಿಪೂರ್ಣವಾಗಿ ಅರ್ಥ…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಶ್ವೇತಯಾನ -32’ ಕಾರ್ಯಕ್ರಮದ ಅಂಗವಾಗಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ದಿ. ಕಾಳಿಂಗ ನಾವುಡರ ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 02-06-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಾಯೋಜಕ ಹಾಗೂ ಕಾಳಿಂಗ ನಾವುಡರ ಆತ್ಮೀಯ ಒಡನಾಡಿಯಾದ ಗಂಪು ಪೈ ಸಾಲಿಗ್ರಾಮ (ಗಣಪತಿ ಪೈ) ನಾವಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ “ತೆಂಕು-ಬಡಗು ವಿದ್ಯಾರ್ಥಿಗಳನೇಕರು ಯಕ್ಷರಂಗದಲ್ಲಿ ಇತ್ತೀಚೆಗೆ ಬಹಳ ಮಿಂಚುತ್ತಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ಯಕ್ಷಗಾನದ ಆಸಕ್ತಿಯಿಂದ ಅನೇಕರು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಾಳಿಂಗ ನಾವುಡರು ಕೂಡ ಅತೀ ಚಿಕ್ಕ ವಯಸ್ಸಿನಲ್ಲಿ ಅತ್ಯದ್ಭುತ ಸಾಧನೆಗೈದು ಅತೀ ಬೇಗನೇ ಇಹಲೋಕ ತ್ಯಜಿಸಿದವರು. ಕಾಳಿಂಗ ನಾವುಡರ ಹೆಸರು ಸಾಂಸ್ಕೃತಿಕ ಲೋಕಕ್ಕೆ ಅಜರಾಮರ. ಇಂದು ಕಿರಿಯ ಮಕ್ಕಳೇ ಕಾಳಿಂಗ ನಾವುಡರ ಸಂಸ್ಮರಣೆಯಲ್ಲಿ ಪಾಲ್ಗೊಂಡು ಯಾವ ದೊಡ್ಡ ಕಲಾವಿದರಿಗೂ ಕಡಿಮೆ ಇಲ್ಲದಂತೆ ಪ್ರದರ್ಶನ ನೀಡಿ ಕಾಳಿಂಗ ನಾವುಡರ ಆತ್ಮಕ್ಕೆ ಶಾಂತಿಯನ್ನು ನೀಡಿದ್ದಾರೆಂದು ನನ್ನ ಭಾವನೆ.” ಎಂದರು. ಮುಖ್ಯ…

Read More

ಯಕ್ಷಗಾನವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ರತ್ನವಾಗಿ ಉಳಿದಿದೆ, ಸಾಂಪ್ರದಾಯಿಕವಾಗಿ ಈ ಪ್ರದರ್ಶನ ಕಲಾ ಪ್ರಕಾರವನ್ನು ಪುರುಷ ಕಲಾವಿದರು ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅಭ್ಯಾಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳಾ ಕಲಾವಿದರು ಅದರಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತಿದ್ದಾರೆ ಮತ್ತು ಅವರು ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಅನೇಕ ಮಹಿಳಾ ಕಲಾವಿದರು ಈ ಕಲಾ ಪ್ರಕಾರವನ್ನು ಉತ್ಸಾಹದಿಂದ, ವಿಶೇಷವಾಗಿ ಮಂಗಳೂರು, ಉಡುಪಿ ಮತ್ತು ಕುಂದಾಪುರದಲ್ಲಿ ಹೇಗೆ ಅನುಸರಿಸುತ್ತಿದ್ದಾರೆ ಎಂಬುದನ್ನು ನೋಡುವುದು ಸಾಕಷ್ಟು ಉತ್ತೇಜನಕಾರಿಯಾಗಿದೆ. ಹೀಗೆ ಯಕ್ಷಗಾನ ರಂಗದಲ್ಲಿ ಧೀಶಕ್ತಿ ಮಹಿಳಾ ಯಕ್ಷಗಾನ ತಂಡವನ್ನು ಪುತ್ತೂರಿನಲ್ಲಿ ಕಟ್ಟಿ ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ಕಲಾವಿದೆ ಪದ್ಮಾ ಕೆ ಆರ್ ಆಚಾರ್ಯ. ಗಡಿನಾಡ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಡನೀರು ಇವರ ಹುಟ್ಟೂರು. ಅಲ್ಲಿರುವ ಶ್ರೀ ಎಡನೀರು ಮಠವು, ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಯಕ್ಷಗಾನ, ಕಲೆ, ಸಾಹಿತ್ಯ ಚಟುವಟಿಕೆಗಳ ಆಶ್ರಯ ತಾಣ. ಶ್ರೀ ಮಠದ ಮ್ಯಾನೇಜರ್ ಹುದ್ದೆಯನ್ನು ಬಹು ದೀರ್ಘ ಕಾಲ ನಿರ್ವಹಿಸಿದ ಶ್ರೀ ರಾಮಕೃಷ್ಣರಾವ್, ಎಡನೀರು…

Read More

ದಲಿತ-ಬಂಡಾಯ ಸಾಹಿತ್ಯವು ಹೊಸ ದಿಕ್ಕಿನತ್ತ ಹೊರಳಿದಾಗ ಹಸಿಹಸಿ ಅನುಭವ, ಪೂರ್ವ ನಿಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ವರದಿಗಾರಿಕೆಯ ಶೈಲಿ ಮತ್ತು ಸುಲಭ ಪರಿಹಾರಗಳನ್ನು ಮೀರಿ ಬದುಕಿನ ಆಳ ವಿಸ್ತಾರಗಳನ್ನು ಶೋಧಿಸತೊಡಗಿದ ಬರಹಗಾರರ ಪೈಕಿ ಜನಾರ್ದನ ಎರ್ಪಕಟ್ಟೆಯವರೂ ಒಬ್ಬರು. ತಾವು ಕಂಡು ಅನುಭವಿಸಿದ ಸಂಗತಿಗಳನ್ನು ಚಿತ್ರಿಸುವ ಪ್ರಾಮಾಣಿಕತೆ, ಹಳ್ಳಿಯ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಗಮನಿಸುವ ಚಿಕಿತ್ಸಕ ದೃಷ್ಟಿ, ತಮ್ಮ ಸಮುದಾಯದವರ ಅಂತರಂಗವನ್ನು ಹೊಕ್ಕು ಅವರ ನೋವು ನಲಿವುಗಳನ್ನು ಬಿಡಿಸುವ ಕಾಳಜಿ, ಒಳಗೆ ದುರ್ಬಲವಾಗಿದ್ದುಕೊಂಡು ಹೊರಗೆ ಕ್ರೂರವಾಗಿರುವ ಊಳಿಗಮಾನ್ಯ ಪದ್ಧತಿಯ ಒಳ ಹೊರಗುಗಳ ಅವಲೋಕನ, ಜನಾಂಗದ ಮೌಢ್ಯವನ್ನು ನಿವಾರಿಸುವ ಹಂಬಲಗಳನ್ನು ಒಳಗೊಂಡ ಕತೆಗಳು ಇಂದಿಗೂ ಅರ್ಥಪೂರ್ಣವೆನಿಸುತ್ತವೆ. ಇತರ ದಲಿತ ಬರಹಗಾರರಿಂದ ಭಿನ್ನವಾಗಿ ನಿಲ್ಲುವ ಎರ್ಪಕಟ್ಟೆಯವರ ಕತೆಗಳಲ್ಲಿ ದಲಿತರ ಸಾಂಸ್ಕೃತಿಕ ಲೋಕವು ಹೆಪ್ಪುಗಟ್ಟಿದೆ. ತುಳುನಾಡಿನ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಪ್ರಚಾರಪ್ರೀತಿಯ ದಾಳವಾಗಿ ಬದಲಾಗುವ ಬಗೆಗಿನ ವಿಷಾದವು ‘ಆಕ್ರಮಣ’ ಕತೆಯಲ್ಲಿದೆ. ಆಚಾರಗಳ ಮೇಲಿನ ಶ್ರದ್ಧೆ ಭಕ್ತಿಗಳು ವ್ಯಾವಹಾರಿಕತೆಯೊಂದಿಗೆ ಮುಖಾಮುಖಿಯಾಗುವಾಗ ಬೊಗ್ಗುವಿನ ಮಾನಸಿಕ ತುಮುಲವು ಭಾವ…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನೆಲೆಸಿದ್ದ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ, ಕೆಳದಿ ಸಂಸ್ಥಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ನಿಖರವಾಗಿ ಮಾತನಾಡುತ್ತಿದ್ದ ಕೆಳದಿ ಗುಂಡಾ ಜೋಯಿಸರು ದಿನಾಂಕ 02-06-2024ರಂದು ನಿಧನರಾಗಿದ್ದಾರೆ. ಪ್ರಖ್ಯಾತ ವಿದ್ವಾಂಸರೂ, ಸಂಶೋಧಕರೂ ಆಗಿ ಮಹತ್ವದ ಸಾಧನೆ ಮಾಡಿ ಹೆಸರಾಗಿದ್ದ, ಕೆಳದಿ ಸಂಸ್ಥಾನದ ಬಗ್ಗೆ ವಿಶಿಷ್ಟ ಸಂಶೋಧನೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದ ಕೆಳದಿ ಗುಂಡಾ ಜೋಯಿಸರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತೀವ್ರ ಸಂತಾಪಗಳನ್ನು ಸೂಚಿಸಿದ್ದಾರೆ. ಹಿರಿಯ ಸಂಶೋಧಕರು ಮತ್ತು ಕೆಳದಿ ಇತಿಹಾಸ – ಹಸ್ತಪ್ರತಿ ವಿದ್ವಾಂಸರೂ ಆಗಿದ್ದ ಅವರು ತಮ್ಮ 60ನೇ ವಯಸ್ಸಿನಲ್ಲಿ ಎಂ.ಎ., ಪಿಎಚ್.ಡಿ. ಮಾಡಿ ಕೆಳದಿ ಸಂಸ್ಥಾನದ ಇತಿಹಾಸವನ್ನು ಆಮೂಲಾಗ್ರ ಅಧ್ಯಯನ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಳೆಗರಿ ಸಂಗ್ರಹ ಮತ್ತು ಅಧ್ಯಯನ ನಡೆಯಲು ಅವರ ಕೊಡುಗೆ ಬಹಳ ಮಹತ್ವದ್ದಾಗಿತ್ತು. ಕೆಳದಿಯಲ್ಲಿ ತಮ್ಮ ಮನೆಯಲ್ಲೇ ಇದ್ದ ಸಂಸ್ಥಾನದ ಪ್ರಾಚೀನ ಹಸ್ತಪ್ರತಿಗಳು ಮತ್ತು ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸಲು…

Read More