Author: roovari

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ತ್ರಿಂಶತಿ ಸಂಭ್ರಮದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾ ಭವನ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 24-02-2024ರಂದು ಕೊಡಿಯಾಲ್‌ ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ‘ಕರ್ನಾಟಕ ಸಂಗೀತ ಕಛೇರಿ’ಯನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಉಡುಪಿಯ ಮಾಸ್ಟರ್ ಪ್ರಣವ ಅಡಿಗ ಇವರ ಕೊಳಲು ವಾದನಕ್ಕೆ ಮಂಗಳೂರಿನ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಕಟೀಲಿನ ಶ್ರೀ ಶೈಲೇಶ್ ರಾವ್ ಇವರು ಮೃದಂಗ ಸಾಥ್ ನೀಡಲಿದ್ದಾರೆ. ಸಂಜೆ ಗಂಟೆ 5ರಿಂದ ಮೂಝಿಕುಳಂ ಶ್ರೀ ವಿವೇಕ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಶ್ರೀ ಕೇಶವ ಮೋಹನ್ ಕುಮಾರ್ ವಯೋಲಿನ್, ಮಂಗಳೂರಿನ ಶ್ರೀ ಸುನಾದಕೃಷ್ಣ ಅಮೈ ಮೃದಂಗ ಹಾಗೂ ಪುತ್ತೂರಿನ ಶ್ರೀ ಬಾಲಕೃಷ್ಣ ಹೊಸಮನೆ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಆಚರಿಸಿಕೊಂಡು ಬರುತ್ತಿರುವ ‘ರಾಗ ಸುಧಾ ರಸ ಸಂಗೀತೋತ್ಸವ’ವು ಮಂಗಳೂರಿನ ಪುರಭವನದಲ್ಲಿ ದಿನಾಂಕ 15-02-2024ರಿಂದ 17-02-2024ರವರೆಗೆ ನಡೆಯಿತು. ದಿನಾಂಕ 17-02-2024ರಂದು ಕರ್ನಾಟಕ ಸಂಗೀತ ಕಲಾವಿದೆ ಶ್ರುತಿ ಎಸ್. ಭಟ್ ಇವರಿಗೆ ಈ ಬಾರಿಯ ‘ಯುವ ಕಲಾಮಣಿ’ ಪ್ರಶಸ್ತಿ ನೀಡಲಾಯಿತು. ಶೋಭಿತ ಭಟ್ ಮತ್ತು ಆಶ್ವೀಜಾ ಉಡುಪ (ಸ್ವರಾಂಜಲಿ ಸಹೋದರಿಯರು) ಅವರಿಗೆ ಚೆನ್ನೈಯ ಮಣಿ ಕೃಷ್ಣಸ್ವಾಮಿ ಫೌಂಡೇಶನ್ ಕೊಡಮಾಡುವ ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ’, ನಾದಸ್ವರ ವಾದಕ ವಿದ್ವಾನ್ ಲಿಂಗಪ್ಪ ಎಸ್. ಅವರಿಗೆ ‘ಎ ಈಶ್ವರಯ್ಯ ಸ್ಮರಣಾರ್ಥ ಪ್ರಶಸ್ತಿ’, ಚೆನ್ನೈಯ ಮಧುರಧ್ವನಿ ಸಂಸ್ಥೆಯ ಸ್ಥಾಪಕರು ಆರ್.ಕೆ. ರಾಮಕೃಷ್ಣನ್ ಅವರಿಗೆ ‘ಲಲಿತಕಲಾ ಪೋಷಕ ಮಣಿ ಪ್ರಶಸ್ತಿ’ ನೀಡಲಾಯಿತು. ಹಿರಿಯ ಮೃದಂಗ ಗುರು ವಿದ್ವಾನ್ ಕುಕ್ಕಿಲ ಶಂಕರ್ ಭಟ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ಸಂದರ್ಭ ಯುವ ಕಲಾಸಂಘಟಕ ವಿಶ್ವಾಸ್ ಕೃಷ್ಣ ಅವರನ್ನು ಅಭಿನಂದಿಸಲಾಯಿತು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ಅಧ್ಯಕ್ಷರಾದ ಕ್ಯಾ.…

Read More

“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎನ್ನುವ ಕುವೆಂಪುರವರ ಸಾರ್ವಕಾಲಿಕ ಸಂದೇಶವನ್ನು ಆತ್ಮೀಯ ರಂಗಮಿತ್ರ ರಾತ್ರಿ 11 ಗಂಟೆಗೆ ವಾಟ್ಸಾಪಲ್ಲಿ ಕಳುಹಿಸಿದ್ದ. ರಾತ್ರಿ ಕಳೆದು ಇನ್ನೂ ಬೆಳಿಗ್ಗೆ ಆಗಿತ್ತಷ್ಟೇ ಈ ಜನ್ಮಕ್ಕಾಗುವಷ್ಟು ಕ್ರಿಯಾಶೀಲ ಕೆಲಸ ಮಾಡಿ ಯಾವ ಟೀಕೆಗೂ ಒಳಗಾಗದೇ ಬದುಕಿದ ಗೆಳೆಯ ಜಗದೀಶ್ ಕೆಂಗನಾಳ ದಿನಾಂಕ 18-02-2024ರಂದು ಜಗಕ್ಕೇ ವಿದಾಯ ಹೇಳಿ ಮರಳಿ ಬಾರದೂರಿಗೆ ಹೊರಟೇ ಹೋದ. “ಏಳೋ ಜಗದೀಶಾ ಎದ್ದೇಳೋ. ಇನ್ನೂ ನೀನು ಮಾಡಬೇಕಾದ ರಂಗಕಾರ್ಯ ಬೇಕಾದಷ್ಟಿದೆ, ಎದ್ದೇಳೋ” ಎಂದು ಶವಾಗಾರದ ಕಟ್ಟೆಯ ಮೇಲೆ ಅಂಗಾತ ಮಲಗಿದ್ದ ಆತನ ನಿಶ್ಚಲ ದೇಹವನ್ನು ಹಿಡಿದು ಅಲ್ಲಾಡಿಸಿ ಗೋಳಾಡಿದೆ. ಮನದಲ್ಲಿ ಗೆಳೆಯನ ಅಗಲಿಕೆಯ ಸಂಕಟ. ಆತ ಏಳುವ ಸ್ಥಿತಿಯಲ್ಲಿರಲಿಲ್ಲ ಎಂಬುದೂ ದಿಟ. ಅದು ಗೊತ್ತಿದ್ದೂ ಎದ್ದರೂ ಏಳಬಹುದೇನೋ ಎನ್ನುವ ಭ್ರಮೆ. ನಂಬುವುದೋ ಬಿಡುವುದೋ ಗೊತ್ತಿಲ್ಲ. ನನ್ನ ಕಣ್ಣಲ್ಲಿ ನೀರು ತೊಟ್ಟಿಕ್ಕಿದ್ದೇನೋ ಸಹಜ. ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ಜಡವಾಗಿ ಮಲಗಿದವನ ಕಣ್ಣಲ್ಲೂ ನೀರಿನ ಪಸೆ. ಹೃದಯದ ಬಡಿತ ನಿಂತರೇನಾಯ್ತು ಮೆದುಳು ಇನ್ನೂ ಜೀವಂತವಾಗಿರುತ್ತದಂತೆ.…

Read More

ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ.) ಆಯೋಜಿಸುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವವು ದಿನಾಂಕ 24-02-2024ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ಶಾಸಕರು ಹಾಗೂ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಹಾಗೂ ಮೂಡಬಿದಿರೆ ಚೌಟರ ಅರಮನೆಯ ಡಾ. ಅಕ್ಷತಾ ಆದರ್ಶ್ ಜೈನ್ ಉತ್ಸವವನ್ನು ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಸರೋಜಿನಿ ಎಸ್. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ವಾಣಿ ವಿ. ಆಳ್ವ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನಪರಿಷತ್ ಸದಸ್ಯರು ಹಾಗೂ ಭರವಸೆ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಯಂ. ಫಾರೂಕ್ ಆಶಯ ನುಡಿಗಳನ್ನಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ದ. ಕ. ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಶುಭಾಶಂಸನೆಗೈಯಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್‌ ಇವುಗಳ ಸಹಯೋಗದೊಂದಿಗೆ 50ನೇ ಉದಯರಾಗ ಕಾರ್ಯಕ್ರಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳಾಧಾರಿತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯ 26ನೇ ಮಂಜುನಾದ ಕಾರ್ಯಕ್ರಮವು ದಿನಾಂಕ 18-02-2024 ರಂದು ಸುರತ್ಕಲ್ ಫ್ಲೈ ಓವರ್ ಕೆಳಗಡೆ ನಡೆಯಿತು. ಕಾರ್ಯಕ್ರಮಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಮಾತನಾಡಿ “ಉದಯರಾಗ ಸಂಗೀತ ಕಾರ್ಯಕ್ರಮದ ಪರಿಕಲ್ಪನೆ ಅನನ್ಯವಾದುದು. ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಸಂಗೀತ ಸೇವೆಯಿಂದ ದೈವಾನುಗ್ರಹ ಪ್ರಾಪ್ತವಾಗುತ್ತದೆ.” ಎಂದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಸರಿತಾ ಶಶಿಧರ್ ಶುಭ ಹಾರೈಸಿದರು. ಮಣಿಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಶಾಸ್ತ್ರೀಯ ಸಂಗೀತದ ಆಸಕ್ತಿ ವರ್ಧಿಸಿದ್ದು ಉದಯೋನ್ಮುಖ ಕಲಾವಿದರಿಗೆ ಹೆಚ್ಚಿನ ಅವಕಾಶ ಲಭ್ಯವಾಗತ್ತಿದೆ. ಪಿ. ನಿತ್ಯಾನಂದ ರಾವ್‌ ಇವರ ಶಾಸ್ತ್ರೀಯ…

Read More

ಕಲಬುರಗಿ : ಕಲಬುರಗಿ ಜಿಲ್ಲೆಯ ಪಾಳಾದ ಶುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ವತಿಯಿಂದ 6ನೇ ವರ್ಷದ ರಾಜ್ಯಮಟ್ಟದ ‘ಬಸವ ಪುರಸ್ಕಾರ’ಕ್ಕೆ 2023ರಲ್ಲಿ ಪ್ರಕಟವಾದ ನಾನಾ ಪ್ರಕಾರಗಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ವಚನ, ಮಕ್ಕಳ ಕಥೆ, ಚುಟುಕು, ಹಾಯ್ಕು, ಗಝಲ್ ಸೇರಿ ವಿವಿಧ ಸಾಹಿತ್ಯ ಕೃತಿಗಳ ಎರಡು ಪ್ರತಿಗಳನ್ನು  ದಿನಾಂಕ 30-03-2024ರ ಒಳಗೆ ಕಳುಹಿಸಬೇಕು. ವಿಳಾಸ: ಶರಣಗೌಡ ಪಾಟೀಲ ಪಾಳಾ  ಅಧ್ಯಕ್ಷರು, ಶುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್, ಶಿವಶರಣ ಸಂಕೀರ್ಣ ಅಪಾರ್ಟ್‌ಮೆಂಟ್, 3ನೇ ಮಹಡಿ, ಬಿ-1, ಖುಬಾ ಪ್ಲಾಟ್ ಕೋರ್ಟ್ ರಸ್ತೆ, ಕಲಬುರಗಿ – 585102

Read More

ವಿಜಯಪುರ : ವಿಜಯಪುರದ ಶ್ರೀ ಕುಮಾರವ್ಯಾಸ ಭಾರತ ವೇದಿಕೆಯಡಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ದಿನಾಂಕ 18-02-2024ರಂದು ಗುಜ್ಜರಗಲ್ಲಿಯ `ಶ್ರೀ ಗುರುವಿಠ್ಠಲ ಕೃಪಾ’ ಭವನದಲ್ಲಿ ವೈಭವದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿ ಉದ್ಘಾಟಿಸಿದ ಶ್ರೀಮತಿ ಭೂದೇವಿ ಕುಲಕರ್ಣಿಯವರು ಗದುಗಿನ ಭಾರತದ ಪೀಠಿಕಾ ಸಂಧಿಯ ಐದು ಪದ್ಯಗಳನ್ನು ವಾಚಿಸಿ ಕುಮಾರವ್ಯಾಸರು ಹಾಗೂ ಕನಕದಾಸರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು “ಕನಕದಾಸರು ಜ್ಞಾನ, ಭಕ್ತಿ ಹಾಗೂ ವೈರಾಗ್ಯದೊಂದಿಗೆ ಕನ್ನಡಿಗರಿಗೆ ಭಕ್ತಿಗೀತೆ, ಮಹಾಕಾವ್ಯ ನೀಡಿದ ಮಹನೀಯರು.  ಕನಕದಾಸರು ಭಕ್ತಿ ಸಾಮ್ರಾಜ್ಯದ ಮಹಾನ್ ನಾಯಕರು.” ಎಂದು ತಿಳಿಸಿದರು.  ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಕನಕದಾಸರ `ನಳಚರಿತ್ರೆ’ ಕಾವ್ಯದ `ನಳ ದಮಯಂತಿ’ ಪರಿಣಯ ಪ್ರಸಂಗದ ಗಮಕ ವಾಚನ ವ್ಯಾಖ್ಯಾನವನ್ನು ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳು ನಡೆಸಿಕೊಟ್ಟರು.  ಕಥೆಯಲ್ಲಿ ಕಾಣಬರುವ ನಳನ ಸದ್ಗುಣಗಳು, ದಮಯಂತಿಯ ಭಕ್ತಿ ಹಾಗೂ ವಿನಯವಂತಿಕೆ ಕೇಳುಗರ ಮನ ಸೆಳೆದವು. ಅತಿಥಿಗಳಾದ ಶ್ರೀಮತಿ ಭೂದೇವಿಯರಿಗೆ, ವೇದಿಕೆಯ…

Read More

ಬೆಂಗಳೂರು : ಬೆಂಗಳೂರಿನ ವಸಂತ ಆರ್ಟ್‌ ಆಯೋಜಿಸಿದ ಸಮೂಹ ಚಿತ್ರಕಲಾ ಪ್ರದರ್ಶನ ‘ಕಲರ್ಸ್ ಬ್ರಿಜ್’ ದಿನಾಂಕ 16-02-2024 ರಿಂದ 20-02-2024ರ ವರೆಗೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸಿಟ್ಯೂಟ್ ಆಪ್ ವರ್ಲ್ಡ್ ಕಲ್ಟರ್ ಸಭಾಂಗಣದಲ್ಲಿ ನಡೆಯಿತು. ದಿನಾಂಕ 16-02-2024 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಯೋಜನಾ ಮತ್ತು ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಇಂಜಿನಿಯರ್ ಆಗಿರುವ ಪ್ರದೀಪ್ ಮಿತ್ರ ಮಂಜುನಾಥ್ ಪ್ರದರ್ಶನವನ್ನು ಉದ್ಘಾಟಿಸಿ ಕಲಾವಿದರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೋದಿ ಸಂಸ್ಥೆಯ ನಿರ್ದೇಶಕರಾದ ಶಿವಾನಂದ ಬಸವಂತಪ್ಪ ಹಾಗೂ ಉದ್ಯಮಿಯಾದ ಕೋಲಿ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು ಹದಿನೆಂಟು ಚಿತ್ರಕಲಾವಿದರು ತಮ್ಮ ಕೈ ಚಳಕದಿಂದ ತಯಾರಿಸಿದ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡವು.

Read More

ಬೆಂಗಳೂರು : ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಮಹಾಗಣಪತಿ ಆಂಜನೇಯ ದೇವಸ್ಥಾನದಲ್ಲಿ ನಡೆಸಲಾಗುತ್ತಿರುವ ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ವತಿಯಿಂದ ‘ರಾಜ್ಯ ಮಟ್ಟದ ನೃತ್ಯೋತ್ಸವ’ವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ದಿನಾಂಕ 04-02-2024ರಂದು ನಡೆಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕುಂದಾಪುರದ ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿಯಾದ ಡಾ. ಅಶೋಕ್ ಶೆಟ್ಟಿ ವಹಿಸಿದ್ದರು. ನಟ ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ‘ನಾಟ್ಯ ಮಯೂರಿ’ ನೃತ್ಯ ಶಾಲೆಯ ಸಂಸ್ಥಾಪಕರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಸುವರ್ಣ ಸಂಭ್ರಮ ಕನ್ನಡಿಗ ಪ್ರಶಸ್ತಿ’ ಹಾಗೂ ‘ಸುವರ್ಣ ಶ್ರೀ ಕನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಸಮಾಜ ಸೇವಕ ಸೋಮನ್ ಎನ್.ಕೆ., ಷಣ್ಮುಗಂ ಎಂ., ಡಾ. ಮಮತಾ ಅಶೋಕ್, ಡಾ. ಪಿ. ಶ್ರೀಧರ್, ಶ್ರೀ ಮಹೇಂದರ್ ಮುಣೋತ್, ಬಾಲ ಪ್ರತಿಭೆ ಅಮೋಘ…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಪ್ರಿಯ ಸುಳ್ಯರವರ ‘ಬಾಳಿಗೆ ಬೆಳಕು’ ಕವನ ಸಂಕಲನ ಬಿಡುಗಡೆ ಸಮಾರಂಭವು ದಿನಾಂಕ 25-02-2024ರಂದು ಪುತ್ತೂರಿನ ಜೈನ ಭವನ ರಸ್ತೆಯಲ್ಲಿರುವ ‘ಮನಿಷಾ ಸಭಾಂಗಣ’ದಲ್ಲಿ ನಡೆಯಲಿದೆ. ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಸಾಹಿತಿ ಮತ್ತು ವಿಮರ್ಶಕರಾದ ಶ್ರೀ ಭಾಸ್ಕರ ಕೋಡಿಂಬಾಳ ಇವರು ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಪಡ್ನೂರು ಸ.ಹಿ.ಪ್ರಾ. ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ಮಣಿ ಕೃತಿ ಬಿಡುಗಡೆ ಮಾಡಲಿದ್ದು, ಬೆಂಗಳೂರಿನ ಪತ್ರಕರ್ತರಾದ ಶ್ರೀ ರಾಜು ಕೃತಿಗಾರರ ಪರಿಚಯ ಹಾಗೂ ಸಾಹಿತಿ ಮತ್ತು ವಿಮರ್ಶಕರಾದ ಶ್ರೀಮತಿ ವಿಂಧ್ಯಾ ಎಸ್. ರೈ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 11-30 ಗಂಟೆಗೆ ನಡೆಯಲಿರುವ ‘ಬಾಳಿಗೆ ಬೆಳಕು ಕವನಕೆ ಹೊಳಪು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವ…

Read More