Subscribe to Updates
Get the latest creative news from FooBar about art, design and business.
Author: roovari
ಪುತ್ತೂರು: ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ. ಬಿ. ಎಸ್. ಇ. ಸಂಸ್ಥೆಯಲ್ಲಿ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮವು 19 ಆಗಸ್ಟ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಪ್ಪಳಿಗೆ ಅಂಬಿಕಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಮಾತನಾಡಿ “ಸಂಸ್ಕೃತ ಕೇವಲ ಭಾಷೆಯಲ್ಲ ಅದು ಭಾರತಾಂಬೆಯ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿ ಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣೀಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯವಾಕ್ಯಗಳನ್ನು ನಾವು ಕಾಣಬಹುದು.” ಎಂದು ಹೇಳಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ “ರಕ್ಷೆಯಲ್ಲಿನ ಎಲ್ಲಾ ದಾರಗಳ ಒಗ್ಗೂಡುವಿಕೆಯು ಹೇಗೆ ಏಕತೆ ಸೂಚಿಸುತ್ತದೆಯೋ ಅದರಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಕ್ಷಣೆ ಮಾಡಬೇಕು.” ಎಂದರು. ಅಂಬಿಕಾ ವಿದ್ಯಾಲಯ ಸಿ. ಬಿ.…
ಮಂಗಳೂರು : ಕೇದಿಗೆ ಪ್ರತಿಷ್ಠಾನ ಮಂಗಳೂರು ಹಾಗೂ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಲೀಜನ್ ಸಹಯೋಗದೊಂದಿಗೆ ‘ಲಕ್ಷ್ಮೀ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 17 ಆಗಸ್ಟ್ 2024ರಂದು ನಡೆಯಿತು. ಕೇದಿಗೆ ಪ್ರತಿಷ್ಠಾನ ಮಂಗಳೂರು ವತಿಯಿಂದ ನಿವೃತ್ತ ಸೇನಾನಿ ವಿಕ್ರಂ ದತ್ತಾ ಅವರಿಗೆ ರಾಷ್ಟ್ರ ಸೇವಾ ನಿಷ್ಠ, ಸಂಘಟಕ ಸುಧಾಕರ ರಾವ್ ಪೇಜಾವರ ಅವರಿಗೆ ಸಮಾಜ ಸೇವಾ ನಿಷ್ಠ, ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರಿಗೆ ಚಿತ್ರಕಲಾ ನಿಷ್ಠ, ಕೃಷಿಕ ದಯಾಪ್ರಸಾದ್ ಚೀಮುಳ್ಳು ಅವರಿಗೆ ಕೃಷಿ ಕ್ಷೇತ್ರ ನಿಷ್ಠ, ಕಲಾವಿದ ಎಲ್ಲೂರು ರಾಮಚಂದ್ರ ಭಟ್ ಅವರಿಗೆ ಯಕ್ಷಗಾನ ಕಲಾನಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸೇನಾನಿ ರಾಮ ಶೇಷ ಶೆಟ್ಟಿ, ಚಂದ್ರಹಾಸ ಕೊಂಚಾಡಿ, ದೇವಿಪ್ರಸಾದ್ ಕೊಂಚಾಡಿ, ಸುನಿಲ್ ಕೊಂಚಾಡಿಗೆ ಇವರೆಲ್ಲಾರಿಗೂ ವಿಶೇಷ ಸನ್ಮಾನ ನೀಡಲಾಯಿತು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, “ಡಾ. ಕೇದಿಗೆ ಅರವಿಂದ…
ಕಾಸರಗೋಡು: ಹಿರಿಯ ಯಕ್ಷಗಾನ ಭಾಗವತ ಹಾಗೂ ಕೃಷಿಕರಾದ ಮಡ್ವ ಶಂಕರನಾರಾಯಣ ಭಟ್ 22 ಆಗಸ್ಟ್ 2024ರ ಗುರುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣದಿಂದ ಕಳೆದ ಎರಡು ತಿಂಗಳುಗಳಿಂದ ಬಳಲುತ್ತಿದ್ದ ಶ್ರೀಯುತರು, ದೇಲಂಪಾಡಿ ಪರಿಸರದಲ್ಲಿ ಭಾಗವತರೆಂದೇ ಖ್ಯಾತರಾಗಿದ್ದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಶಿಷ್ಯರಾಗಿದ್ದ ಶಂಕರನಾರಾಯಣ ಭಟ್, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಹಿರಿಯ ಸದಸ್ಯರಾಗಿದ್ದದ್ದು ಮಾತ್ರವಲ್ಲದೆ. ಯಕ್ಷಗಾನ ಭಾಗವತಿಕೆಯನ್ನು ಕಲಿಸುವ ಗುರುವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಬೆಂಗಳೂರು : ಎ ಬ್ಯಾಂಗ್ಲೂರ್ ಪ್ಲೇಯರ್ಸ್ ಪ್ರಸ್ತುತಪಡಿಸುವ ‘ಅನವರತ’ ಸಂಗೀತ ನೃತ್ಯ ನಾಟಕದ ಪ್ರದರ್ಶನವು 25 ಆಗಸ್ಟ್ 2024ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ. ಚಿದಾನಂದ ಎಸ್. ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ನಟರಾಜ ಶರ್ಮ ಹಾಗೂ ಅರುಣ್ ಸಾಹಿತ್ಯ ರಚಿಸಿದ್ದು, ನಾಗರಾಜ್ ರಾವ್ ಸಂಗೀತ ನೀಡಿದ್ದಾರೆ. ಶ್ರೀಪಾದ ಬೆಳಕಿನ ವಿನ್ಯಾಸ ಮಾಡಲಿದ್ದು, ರಂಗ ಸಜ್ಜಿಕೆ ತೇಜಸ್ ಅವರದ್ದು. ಅನವರತ : ‘ಕಲೆಗಾಗಿ ಕಲೆ’ ಹೊರನೋಟಕ್ಕೆ ಈ ವಾಕ್ಯ ಸಾಮಾನ್ಯವಾಗಿ ಕಂಡರೂ ಇದರ ಆಳಕ್ಕೆ ಇಳಿದಷ್ಟು, ಅರ್ಥ ಸೃಷ್ಟಿಯ ಮೂಲಕ್ಕೆ ಕರೆದೊಯ್ಯುತ್ತದೆ. ಜಗತ್ತಿನ ಸೃಷ್ಟಿಯೇ ಒಂದು ಕಲೆ ಎನ್ನಬಹುದು. ಕಲೆಯನ್ನು ನಾವು ಹೇಗೆ ನೋಡುತ್ತೇವೆ ? ಕೇವಲ ಒಂದು ಮನೋರಂಜನಾ ವಸ್ತುವಾಗಿಯೋ, ಮನಸ್ಸಿಗೆ ಉಲ್ಲಾಸವನ್ನು ನೀಡುವ ಕ್ರಿಯೆಗಿಗೊ, ಜೀವನ ಶೈಲಿಯಾಗಿಯೋ ಅಥವಾ ಆತ್ಮ ಶುದ್ಧಿಗೊಳಿಸುವ ಪ್ರಕ್ರಿಯೆಯಾಗಿಯೊ ? ಆ. ನ. ಕೃ. ಅವರ ದೃಷ್ಟಿಯಲ್ಲಿ ಕಲೆಗಳಲ್ಲಿ ಪರಮಕಲೆ ಜೀವನದ ಲಲಿತಕಲೆ. ಎಲ್ಲವೂ ನಾವು ನೋಡುವ, ಗ್ರಹಿಸುವ ಹಾಗೂ ಅರ್ಥೈಸಿಕೊಳ್ಳುವ…
ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ ವಾರ್ಷಿಕ ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯ ಅಂಗವಾಗಿ ದಿನಾಂಕ 3 ಆಗಸ್ಟ್ 2024ರಂದು ಚೆನ್ನೈಯ ಸಿದ್ದಾರ್ಥ ಪ್ರಕಾಶ್ ಇವರ ತಂಡದವರಿಂದ ಸಂಗೀತ ಕಛೇರಿಯು ಉಡುಪಿಯ ಲತಾಂಗಿ ಹಾಲ್ನಲ್ಲಿ ನಡೆಯಿತು. ಸಿದ್ದಾರ್ಥ ಪ್ರಕಾಶ್ ಮತ್ತು ತಂಡ ಪ್ರಸ್ತುತ ಪಡಿಸಿದ ಅನುಸರಣಿ -ಜಗನ್ನೋಹಿನಿಯ ಶೋಭಿಲ್ಲು ಕನ್ನಡಗೌಳದ ಓರಜೂಪು, ಹಮೀರ್ಕಲ್ಯಾಣಿಯ ವೆಂಕಟಶೈಲ, ಆನಂದ ಭೈರವಿಯ ಮರಿವೇರೆ, ಪೂರ್ಣಚಂದ್ರಿಕದ ತೆಲಿಸಿರಾಮ, ಕೀರವಾಣಿಯ ಕಲಿಗೆಯುಂಟೆ, ರಾಗಮಾಲಿಕೆಯ ಬಳಿಕ ರಾಮ ಮಂತ್ರವ. ಸಿದ್ದಾರ್ಥರಿಗೆ ಟಿ.ಎನ್.ಎಸ್. ಮತ್ತು ನೈವೇಲಿ ಗುರುಪರಂಪರೆಯನ್ನು ನೆನಪಿಸುವ, ಅನಾಯಾಸವಾಗಿ ಓಡಿಯಾಡುವ ಆಕಾರಗಳಿವೆ. ಸಂಪ್ರದಾಯಬದ್ಧ ಶೈಲಿಯ ಇವರ ಹಾಡುಗಾರಿಕೆಯು ಸ್ವರ ಸಂಯೋಜನೆಗಳ ಸ್ವರ ಗುಚ್ಛಗಳ ಹೆಣಿಗೆಯಾಗಿರುತ್ತದೆ. ಇವರು ವಾಯ್ಸ್ ಕಲ್ಟರ್ನೊಂದಿಗೆ, ಘನ ನಯ ಕ್ರಮ ಅನುಸರಿಸಿ ಕಾರ್ವೆ ಸಹಿತವಾಗಿ ಸ್ವರಗಳನ್ನು ಪ್ರಯೋಗಿಸಿದ್ದಾರೆ. ಜನಮನವನ್ನು ಬಹು ಬೇಗ ಗೆಲ್ಲಬಲ್ಲರು. ವಯಲಿನ್ನಲ್ಲಿ ಸಹಕರಿಸಿದ ವೈಭವ್ ರಮಣಿ, ಮೃದಂಗದ ಅಕ್ಷಯ ಆನಂದ್ ಹಾಗೂ ಖಂಜಿರದ ಕಾರ್ತಿಕ್ ಇನ್ನಂಜೆ ಅವರ ನುಡಿ ಸಾಣಿಕೆ ಹಿತಮಿತವಾಗಿತ್ತು.
ಸೃಷ್ಟಿಯ ಅನಾದಿ ಕಾಲದಿಂದಲೂ ಬದುಕು ಜೀವನ ಕಾವ್ಯ ಸಂಸ್ಕೃತಿಗಳು ನಿರಂತರ ಪ್ರಯಾಣ ಮಾಡುತ್ತಿರುತ್ತವೆ, ಸಂಚಾರ ಮಾಡುತ್ತಿರುತ್ತವೆ. ಅವು ಕಾಲ ಕಾಲಕ್ಕೆ ಬೇರೆ ಬೇರೆ ಹೆಸರು, ಭಾಷೆ, ಕ್ಷೇತ್ರಗಳನ್ನು ಪಡೆದುಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ತಜ್ಞರು, ವಿದ್ವಾಂಸರು ತಮ್ಮ ಸಮಕಾಲೀನ ಸಮಾಜದ ಸಾಮಾನ್ಯರಿಗೆ ಅವುಗಳ ತಿಳಿವಳಿಕೆ ನೀಡುತ್ತಾರೆ. ಕಾವ್ಯ ಸಂಸ್ಕೃತಿಯ ಯಾನದ ಅಂಥ ಪಯಣ ಈ ಸಲ ಒಂದು ವಿಶಿಷ್ಟ ಉದ್ದೇಶ, ಗುರಿಗಳನ್ನು ಹೊಂದಿಕೊಂಡು ನಾಡಿನ ತುಂಬ ಪಸರಿಸಲಿದೆ. ನಾಡು ನುಡಿಯ ಅಭಿಮಾನದ ಪರಿಮಳವನ್ನು ಬೀರುತ್ತ, ಹೊರನಾಡ ಕನ್ನಡಿಗರು, ಗಡಿನಾಡು ಮತ್ತು ಒಳಭಾಗದ ಎಲ್ಲಾ ಕಾವ್ಯಪ್ರೇಮಿಗಳ ಪರಿಚಯವನ್ನು ನವೀಕರಿಸಲಿದೆ. ಕಾವ್ಯಕ್ಕೆ ಹೊಸತು ಹಳತು ಎಂಬುದಿಲ್ಲ. ಅದು ನಿತ್ಯ ನವೀನವಾದುದು. ಓದುವ ಮನಸ್ಸು ಪ್ರತಿದಿನವೂ ಹೊಸದನ್ನು ಸ್ವೀಕರಿಸುತ್ತದೆ. ಆ ಮೂಲಕ ಮನುಕುಲದ ನೋವಿಗೆ ಮತ್ತೆ ಮತ್ತೆ ಮುಲಾಮು ಲೇಪಿಸಬೇಕಾಗುತ್ತದೆ. ಕಾವ್ಯದ ಓದು ಮತ್ತು ಪ್ರಚಾರ ಇಂದಿನ ದಿನಮಾನದಲ್ಲಿ ಸ್ವಲ್ಪ ಮಸುಕಾದಂತೆ ಕಂಡಿರಬಹುದಾದರೂ, ಸಂಗೀತ ಸಾಹಿತ್ಯ ರಂಗಭೂಮಿ ಮುಂತಾದವುಗಳ ಮೂಲಕ ವಿವಿಧ ಕಲಾಪ್ರೇಮಿಗಳ ಮನಸ್ಸನ್ನು ಮುದಗೊಳಿಸಿ ಹದಗೊಳಿಸಿ…
ಕೋಟ : ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ವತಿಯಿಂದ ದಶಮಾನ ಪೂರ್ವ ಕಾರ್ಯಕ್ರಮ ಶ್ರಾವಣ ಸಂಭ್ರಮದಲ್ಲಿ ‘ಸೌರಭ ಸಪ್ತಮಿ’ ಯಕ್ಷಗಾನ ಸಪ್ತಾಹವು ದಿನಾಂಕ 25-08-2024ರಿಂದ 31-08-2024ರವರೆಗೆ ಸಂಜೆ 6-00 ಗಂಟೆಗೆ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದಲ್ಲಿ ನಡೆಯಲಿದೆ. ದಿನಾಂಕ 25 ಆಗಸ್ಟ್ 2024ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಇದರ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕರ್ಕೇರ ಕೋಡಿ ಇವರು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾಲ್ಲೂರು ಶಿವರಾಮ ಶೆಟ್ಟಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೀರ್ತಿಶೇಷ ಹಂದಾಡಿ ಬಾಲಕೃಷ್ಣ ನಾಯಕ್ ಸಂಸ್ಮರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕವಿ ದೇವಿದಾಸ ವಿರಚಿತ ‘ಚಿತ್ರಸೇನ ಕಾಳಗ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಿನಾಂಕ 26 ಆಗಸ್ಟ್ 2024ರಂದು ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಮೈಂದ ದ್ವಿವಿಧ ಕಾಳಗ’, ದಿನಾಂಕ 27 ಆಗಸ್ಟ್ 2024ರಂದು…
ಧಾರವಾಡ : ಆಲೂರು ವೆಂಕಟರಾವ್ ಸಭಾಭವನದಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ‘ಅನಂತ ಸ್ವರ ನಮನ’ ಮೂರು ದಿನಗಳ ಸಂಗೀತೋತ್ಸವವು ದಿನಾಂಕ 23 ಆಗಸ್ಟ್ 2024ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಇವರು ಮಾತನಾಡಿ “ಸಂಗೀತ ಹಾಗೂ ಸಾಹಿತ್ಯಕ್ಕೆ ಧಾರವಾಡ ಪ್ರಸಿದ್ಧವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅನಂತ ಹರಿಹರ ನೀಡಿದ ಕೊಡುಗೆ ಅಪಾರವಾಗಿದೆ. ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರ ಮಾರ್ಗದರ್ಶನಲ್ಲಿ ಸಾಕಷ್ಟು ಕಲಾವಿದರಿಗೆ ಉತ್ತಮ ವೇದಿಕೆ ದೊರೆಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶವಾಯಿತು. ಅವರು ಯಾವುದೇ ಅಪೇಕ್ಷೆ ಇಲ್ಲದೆ ಸಂಗೀತಕ್ಕೆ ಸೇವೆ ಸಲ್ಲಿಸಿದ್ದಾರೆ. ಅದೇ ಮಾರ್ಗದಲ್ಲಿ ಯುವ ಕಲಾವಿದರು ಸಾಗಬೇಕು. ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರ ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು. ಯಶಸ್ವಿ ಸಂಘಟಕ, ಸಂಸ್ಕೃತಿಯ ರಾಯಭಾರಿಯಾಗಿ ಎಲ್ಲರ ಮನದಲ್ಲಿ…
ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ.) ಇದರ ವತಿಯಿಂದ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 26 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ. ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸಂಸ್ಮರಣೆಯನ್ನು ಶ್ರೀ ನಾರಾಯಣ ದೇಲಂಪಾಡಿ ಇವರು ನಡೆಸಿಕೊಡಲಿದ್ದು, ಸುಳ್ಯದ ಶ್ರೀ ವೆಂಕಟ ರಾಮ ಭಟ್ಟ ಇವರಿಗೆ ‘ಕೀರಿಕ್ಕಾಡು ವನಮಾಲ ಕೇಶವ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ‘ಶ್ರೀ ಕೃಷ್ಣ ಜನನ – ರಾಜಸೂಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ 112ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕಟ್ಟಡ ಭವ್ಯವಾಗಿ ನಿಂತ ನಂತರ ಕೆಳಗಡೆ ಇರುವ ಭದ್ರ ಅಡಿಪಾಯ ಮರೆಯಾಗಿರುತ್ತದೆ. ಆದರೆ ಕಟ್ಟಡ ಸುಭದ್ರವಾಗಿ ನಿಲ್ಲಲು ಅಡಿಪಾಯವೇ ಮುಖ್ಯವೆನ್ನುವುದನ್ನು ನಾವು ಮರೆಯಬಾರದು. ಅದೇ ರೀತಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯವನ್ನು ಭದ್ರಗೊಳಿಸಿದವರು. ಹೀಗಾಗಿ ಅವರ ಸ್ಮರಣೆಗೆ ವಿಶೇಷ ಮಹತ್ವವಿದೆ. ಕನ್ನಡ ಸಾಹಿತ್ಯ ಪರಿಷತ್ ಜೊತೆಗಿನ ವೆಂಕಟಸುಬ್ಬಯ್ಯನವರ ಒಡನಾಟಕ್ಕೆ ಸುದೀರ್ಘ ಪರಂಪರೆ ಇದೆ. ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಸೀಮಿತವಾಗಿದ್ದ ಪರಿಷತ್ತಿಗೆ ಅಖಿಲ ಕರ್ನಾಟಕದ ಸ್ವರೂಪ ನೀಡಿದ್ದೂ ಕೂಡ ಜಿ.ವಿ.ಯವರ ಹೆಗ್ಗಳಿಕೆ. ಜಿ.ವಿಯವರಿಗೆ ಎಲ್ಲಾ ರೀತಿಯ ಗೌರವಗಳು ಬಹಳ ವಿಳಂಬವಾಗಿಯೇ ಬಂದರೂ ಇದರ ಕುರಿತು ಎಂದಿಗೂ ಅವರು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಕನ್ನಡದಲ್ಲಿ ನಿಘಂಟು ಎನ್ನುವ ಪದ ಕೇಳಿದ ಕೂಡಲೇ ನೆನಪಾಗುವುದೇ…