Author: roovari

ಕೋಟ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೊಡಮಾಡುವ ನಾಲ್ಕನೇ ವರ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದೆ. ವೀಣಾ ಆರ್. ಭಟ್ ವರಂಗ ಹೆಬ್ರಿ,ಪದ್ಮಿನಿ ಪೈ. ಬಿ ಕಾಸನಗುಂದು ಕೋಟ, ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ, ಶಾಂತಾ ವಾಸುದೇವ ಪೂಜಾರಿ ಮದ್ದುಗುಡ್ಡೆ, ಲಲಿತಾ ನಾಯಕ್ ಮದ್ದೂರು, ಅಶ್ವಿನಿ ಆರ್. ಕೊಂಚಾಡಿ ಮಂಗಳೂರು, ಮೂಕಾಂಬಿಕಾ ಮಯ್ಯ ಹರ್ತಟ್ಟು ಕೋಟ, ಗೀತಾ ಲಕ್ಷ್ಮೀಶ ಶೆಟ್ಟಿ ಮಂಗಳೂರು, ಪುಷ್ಪಾ ಪ್ರಸಾದ್ ಕಡಿಯಾಳಿ, ಸರಿತಾ ಕುತ್ಪಾಡಿ, ಶೋಭಾ ದಿನೇಶ್ ಉದ್ಯಾವರ, ಪ್ರಜ್ಞಾ ಜಿ. ಹಂದಟ್ಟು, ಬಿಂದು ನವೀನ್ ಕೋಟೇಶ್ವರ, ಶಾರದಾ ಅಂಪಾರು, ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಆಯ್ಕೆಯಾಗಿದ್ದಾರೆ. ಡಾ.…

Read More

ಕುಂದಾಪುರ: ಕುಂದಾಪುರದ ವಿಜಯಲಕ್ಷ್ಮೀ ಟ್ರೇಡರ್ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ದಿನಾಂಕ 02 ಮಾರ್ಚ್ 2025ರ ಆದಿತ್ಯವಾರದಂದು ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕಂತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ‘ಜೀವನ ಚಕ್ರ’, ‘ವೇದ ಸಾರ’, ‘ಜೋ… ಜೋ’…. ಹಾಗೂ ‘ಜಾನಪದ ಜೋಗುಳ ಗೀತೆ’ ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ ಶಿಶುಗೀತೆಗಳ ಧ್ವನಿ ಪೆಟ್ಟಿಗೆ ಪ್ರಣಾಳಿಕೆ ತಂದವರು. ತಾಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯೂ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು. ‘ಕೊಂಕಣಿ ಕಲಾ ಸಮಾಜದ’ದ ಅಧ್ಯಕ್ಷರಾಗಿ ಹಲವು ಸಮ್ಮೇಳನ ನಡೆಸಿದ್ದ ಇವರು ಕೊಂಕಣಿ ಮಕ್ಕಳ ಸಂಘದ ಮೂಲಕ ಮಕ್ಕಳಿಗೆ ರಂಗ ಕಲೆ, ಯಕ್ಷಗಾನ, ಸಂಗೀತ ತರಬೇತಿ ವ್ಯವಸ್ಥೆ ಮಾಡುತ್ತಿದ್ದರು. ಮಂಗಳೂರಿನ ಚೆಂಬರ್ ಆಫ್ ಕಾಮರ್ಸ್, ಕೆ. ಎಸ್. ಎಸ್.…

Read More

ಧಾರವಾಡ: ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ನೀಡುವ ‘ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ’ಗೆ ಬೆಂಗಳೂರಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಪಂಡಿತ ಡಿ.ಕುಮಾರದಾಸ್ ಮತ್ತು ‘ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ’ಗೆ ಶಿರಸಿ ತಾಲ್ಲೂಕು ಮುತ್ತಮುರ್ಡು ಗ್ರಾಮದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ವಿನಾಯಕ ಹೆಗಡೆ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು, ಫಲಕ ಹಾಗೂ ಯುವ ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು, ಫಲಕ ಒಳಗೊಂಡಿದೆ. 10 ಮಾರ್ಚ್ 2025ರಂದು ಜರುಗುವ ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ನೃತ್ಯಕ್ಕೆ ಹೇಳಿ ಮಾಡಿಸಿದ ತೆಳ್ಳನೆಯ ಮೈಕಟ್ಟು, ಭಾವಸ್ಫುರಣ ಮೊಗ, ಲವಲವಿಕೆಯ ಆಂಗಿಕಾಭಿನಯ ಉದಯೋನ್ಮುಖ ನೃತ್ಯಕಲಾವಿದೆ ಪ್ರೇರಣಾ ಬಾಲಾಜಿಯ ಧನಾತ್ಮಕ ಅಂಶಗಳು. ಹೆಸರಾಂತ ‘ನೃತ್ಯೋದಯ ಅಕಾಡೆಮಿ’ಯ ಪ್ರಾಮಾಣಿಕ- ಉತ್ತಮ ನೃತ್ಯಗುರು ದಿವ್ಯಶ್ರೀ ವಟಿಯವರ ನೆಚ್ಚಿನ ಶಿಷ್ಯೆ ಗುರುಗಳ ಮಾರ್ಗದರ್ಶನದಂತೆ ಬಹು ಸುಂದರವಾಗಿ, ಅಚ್ಚುಕಟ್ಟಾಗಿ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ಈ ಭರವಸೆಯ ಕಲಾವಿದೆ ದಿನಾಂಕ 23 ಫೆಬ್ರವರಿ 2025ರಂದು ಯಲಹಂಕದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ‘ಮಾರ್ಗಂ’ ಪದ್ಧತಿಯ ರೀತ್ಯ ನೃತ್ಯ ಕೃತಿಗಳನ್ನು ಪ್ರಸ್ತುತಪಡಿಸಿದ ಪ್ರೇರಣ, ಮೊದಲಿನಿಂದ ಕಡೆಯವರೆಗೂ ಗೆಲುವಿನಿಂದ, ದೈವೀಕ ಆಯಾಮದ ಕೃತಿಗಳನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದಳು. ಶುಭಾರಂಭದಲ್ಲಿ – ಪ್ರೇರಣಾ ಅತ್ಯಂತ ವಿನಯದಿಂದ ಗುರು-ಹಿರಿಯರು, ದೇವಾನುದೇವತೆಗಳು, ಸಮಸ್ತರಿಗೂ ಭಕ್ತಿಪೂರ್ವಕವಾಗಿ, ಮೆರುಗಿನ ನೃತ್ತಗಳ ಮೂಲಕ ವಿನೀತ ಪ್ರಾರ್ಥನೆಯನ್ನು ‘ಪುಷ್ಪಾಂಜಲಿ’ಯಾಗಿ ಸಲ್ಲಿಸಿದಳು. ಪ್ರಥಮ ಪೂಜಿತ ಶ್ರೀ ವಿಘ್ನರಾಜನನ್ನು ಭಜಿಸಿ ‘ಪೂಜ್ಯಾಯ ರಾಘವೇಂದ್ರಾಯ’ ಎಂದು ರಾಯರಿಗೆ ನಮಿಸಿ ತನ್ನ ಪ್ರಸ್ತುತಿಯನ್ನು ಆರಂಭಿಸಿದಳು. ಎಲ್ಲಕ್ಕಿಂತ ವಿಶೇಷ ಎನಿಸಿದ್ದು, ಅವಳ ‘ಅಲರಿಪು’ವಿನ…

Read More

ಮಲ್ಪೆ : ಮಲ್ಪೆಪಡುಕರೆಯ ಶ್ರೀದೇವಿ ಭಜನಾ ಮಂದಿರ ಪರಿಸರದ ಕಡಲತಡಿಯಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀದೇವಿ ಭಜನಾ ಮಂದಿರದ ಸಹಕಾರದಲ್ಲಿ ನಡೆಯುತ್ತಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಯ್ದ ತಂಡಗಳ ಭಜನಾ ಜುಗಲ್ ಬಂದಿ ಸ್ಪರ್ಧೆಯು ದಿನಾಂಕ 02 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ಪರ್ಧೆಯನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದ ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ “ಮನದ ಅಂತರಾತ್ಮನೊಂದಿಗೆ ಸಖ್ಯ ಬೆಳೆಸಿ ಭಕ್ತಿಯ ಪರಿಪೂರ್ಣತೆ ಬೆಳೆಸಿಕೊಂಡು ಭಗವಂತನನ್ನು ಭಜಿಸಿದಾಗ ಆತ ಖಂಡಿತವಾಗಿಯೂ ನಮ್ಮೊಂದಿಗೆ ಸಂವಹಿಸುತ್ತಾನೆ. ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಸುಲಭದ ದಾರಿ ಎಂದು ನಮ್ಮ ಪೂರ್ವಜರು ಮನೆಮನೆಗಳಲ್ಲಿ ದೇವರ ನಾಮವನ್ನು ಭಜಿಸುತ್ತಿದ್ದರು. ವಿದ್ಯಾವಂತ ಮಕ್ಕಳಲ್ಲಿ ಈ ಸಂಸ್ಕೃತಿ ನಶಿಸುತ್ತಿರುವುದು ಖೇದದ ಸಂಗತಿ” ಎಂದು ನುಡಿದರು. ವೇದಿಕೆಯಲ್ಲಿ ಉದ್ಯಮಿಗಳಾದ ನಾಗರಾಜ ಸುವರ್ಣ, ಶೇಖರ್ ಪುತ್ರನ್, ಮತ್ಸ್ಯರಾಜ್ ಗ್ರೂಪಿನ ಅಧ್ಯಕ್ಷ…

Read More

ಕಾರ್ಕಳ : ಶಾಸ್ತ್ರೀಯ ಸಂಗೀತ ಸಭಾ (ರಿ.) ಇದರ ವತಿಯಿಂದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಸಂಗೀತಗುರು ವಿದ್ವಾನ್ ಬಿ. ಯೋಗೀಶ್ ಬಾಳಿಗಾ ಸ್ಮರಣಾರ್ಥ ‘ಕಲಾಸಾಧನ ಯುವ ಸಂಗೀತೋತ್ಸವ’ ಮತ್ತು 33ನೇ ‘ಕಾರ್ಕಳ ಸಂಗೀತ ಮಹೋತ್ಸವ 2025’ವನ್ನು ದಿನಾಂಕ 07ರಿಂದ 09 ಮಾರ್ಚ್ 2025ರವರೆಗೆ ಕಾರ್ಕಳದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 07 ಮಾರ್ಚ್ 2025ರಂದು ಸಂಜೆ 4-00 ಗಂಟೆಗೆ ಕಾರ್ಕಳದ ಮಾಸ್ಟರ್ ಶ್ರೀಕರ ನಾರಾಯಣ ಉಪಾಧ್ಯಾಯ ಇವರಿಂದ ಕೊಳಲು ವಾದನ, 5-00 ಗಂಟೆಗೆ ಬೆಂಗಳೂರಿನ ಕುಮಾರಿ ಪ್ರಜ್ಞಾ ಅಡಿಗ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಗಾಯನ’, ಗಂಟೆ 6-30ಕ್ಕೆ ಚೆನ್ನೈಯ ವಿದ್ವಾನ್ ಸಾಯಿ ವಿಘ್ನೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಲಿದೆ. ದಿನಾಂಕ 08 ಮಾರ್ಚ್ 2025ರಂದು ಸಂಜೆ 3-30 ಗಂಟೆಗೆ ಕಾರ್ಕಳ ಅನಂತಶಯನದ ಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ತಬಲಾ ವೃಂದ ವಾದನ ಮತ್ತು…

Read More

ಬೆಂಗಳೂರು  : ಚೇತನ ಫೌಂಡೇಶನ್ ಕರ್ನಾಟಕ ಸೋಶಿಯಲ್ ಕ್ಲಬ್ ಆಶ್ರಯದಲ್ಲಿ ನಡೆಯುವ ಮಹಿಳಾ ಸಾಹಿತ್ಯ ಸಮ್ಮೇಳನವು ದಿನಾಂಕ 9 ಮಾರ್ಚ್ 2025ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಸಾಹಿತ್ಯ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಇವರಿಗೆ ‘ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು ಎಂದು ಚೇತನ ಫೌಂಡೇಶನ್ ಕ್ಲಬ್ ಇದರ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ತಿಳಿಸಿದ್ದಾರೆ.

Read More

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸುವ 8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ 22 ಮತ್ತು 23 ಮಾರ್ಚ್ 205 ರಂದು ನಡೆಯಲಿದ್ದು, ಲೇಖಕಿ ಎಚ್.ಎಸ್. ಶ್ರೀಮತಿ ಇವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಹಿಂದಣ ಹೆಜ್ಜೆ, ಮುಂದಣ ನೋಟ’ ಎಂಬ ಶೀರ್ಷಿಕೆಯಡಿ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಿ, ಸಮಾರೋಪ ನುಡಿಗಳನ್ನಾಡಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಕವಿಗೋಷ್ಠಿಗಳು ನಡೆಯಲಿದ್ದು, ರಾಜ್ಯದ ವಿವಿಧೆಡೆ ಇರುವ ಲೇಖಕಿಯರು, ಕವಯಿತ್ರಿಯರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.

Read More

ಕನ್ನಡದಲ್ಲಿ ಲಲಿತಪ್ರಬಂಧಗಳು ಮಂಕಾಗಿವೆ ಎನ್ನುವವರು ‘ಮಂದಹಾಸ’ ಕೃತಿಯನ್ನೊಮ್ಮೆ ಓದಬೇಕು. ಇದರಲ್ಲಿ ಇಪ್ಪತ್ತೈದು ಬರಹಗಳಿವೆ. ಲಲಿತ ಪ್ರಬಂಧಗಳನ್ನು ಓದದ, ಗಂಭೀರವಾಗಿ ನೋಡದ ಸಾಹಿತ್ಯಪ್ರಿಯರು ಮತ್ತು ಪ್ರೋತ್ಸಾಹಿಸದ ಪತ್ರಿಕೆಗಳು ಪಶ್ಚಾತ್ತಾಪ ಪಡುವಂತೆ ಪುಸ್ತಕದ ಹಾಸುಬೀಸು ಇದೆ. ವಿಕಾಸ ಹೊಸಮನಿ ಎಂಬ ತರುಣ ಲೇಖಕ ಸಂಪಾದಿಸಿದ ಈ ಕೃತಿ ಮರುಮುದ್ರಣ ಕಾಣುವ ಶಕ್ತಿಯನ್ನು ಹೊಂದಿದೆ. ಬರಹವನ್ನು ಹೇಗೆ ಹೆಣೆಯಬಹುದೆಂದು ಈ ಪುಸ್ತಕದ ಓದಿನ ಮೂಲಕ ಕಲಿಯಬಹುದು. ಇಪ್ಪತ್ತೈದು ಮಂದಿ ಪ್ರಬಂಧಕಾರರನ್ನು ಕುರಿತ ಹೆಚ್ಚಿನ ಮಾಹಿತಿ ಇಲ್ಲವೆಂಬ ಸಣ್ಣ ಲೋಪವನ್ನು ಬಿಟ್ಟರೆ ಈ ಕೃತಿ ಶ್ರೀಮಂತವಾಗಿದೆ. ಕೃತಿಯ ನೋಟ ವಿಠ್ಠಲ ಕಟ್ಟಿ ‘ನಾನೇಕೆ ಬರೆಯುತ್ತಿಲ್ಲ’ ಎಂಬ ಲಲಿತ ಪ್ರಬಂಧದಲ್ಲಿ ಈ ‌ಮಾತಿನ ಮೂಲಕ ಗಮನ ಸೆಳೆಯುತ್ತಾರೆ. “ಮುಖ್ಯ ಕಾರಣ, ನನಗೆ ಓದುಗರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಕೆಲವರು ಬರೆದರೇ ಕನ್ನಡ ಸಾಹಿತ್ಯಕ್ಕೆ ಉಪಕಾರ ಕೆಲವರು ಬರೆಯದಿದ್ದರೆ ಉಪಕಾರ” ಎನ್ನುತ್ತಾ ಒಳ್ಳೆಯ ಪ್ರಬಂಧವನ್ನು ಹೆಣೆದು ಬಿಡುತ್ತಾರೆ. ಉತ್ತಮ ಕಥೆಗಾರನಾಗಿದ್ದೂ ಲಲಿತ ಪ್ರಬಂಧವನ್ನು ಬರೆಯ ಹೊರಟು, ಕಥೆಯಂತೆ…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಬನ್ನೂರು ಕರ್ಮಲದ ಭಾರತೀ ನಗರದ‌ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾವರ್ಧಂತಿ ಉತ್ಸವದ ಅಂಗವಾಗಿ ದಿನಾಂಕ 04 ಮಾರ್ಚ್ 2025ರಂದು ‘ದಕ್ಷಯಾಗ‌’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರೀ, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಶರಣ್ಯ ನೆತ್ರಕೆರೆ, ಮಾಸ್ಟರ್ ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಈಶ್ವರ (ಶುಭಾ ಅಡಿಗ), ದಾಕ್ಷಾಯಿಣಿ (ಕಿಶೋರಿ ದುಗ್ಗಪ್ಪ ನಡುಗಲ್ಲು), ದಕ್ಷ (ಹರಿಣಾಕ್ಷಿ ಜೆ. ಶೆಟ್ಟಿ‌), ವಿಪ್ರರು‌ (ಗಾಯತ್ರೀ ಹೆಬ್ಬಾರ್), ವೀರಭದ್ರ (ಶಾರದಾ ಅರಸ್), ದೇವೇಂದ್ರ (ಭಾರತೀ ರೈ ಅರಿಯಡ್ಕ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಪುಳು ಈಶ್ವರ ಭಟ್ ವಂದಿಸಿದರು. ಶ್ರೀ ದೇವಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಹಾಗು ಬಡೆಕ್ಕಿಲ ಚಂದ್ರಶೇಖರ್ ಭಟ್ ಸಹಕರಿಸಿದರು.

Read More