Subscribe to Updates
Get the latest creative news from FooBar about art, design and business.
Author: roovari
ಕೋಟ : ಯಕ್ಷಾಂತರಂಗ ವ್ಯವಸಾಯಿ ಯಕ್ಷ ತಂಡ (ರಿ.) ಕೋಟ ತಂಡದ ಹತ್ತನೇ ವರ್ಷದ ಉಚಿತ ಯಕ್ಷಗಾನ ಹೆಜ್ಜೆ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 08 ಜೂನ್ 2025ರಂದು ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಇಲ್ಲಿ ನಡೆಯಿತು. ತರಗತಿಯನ್ನು ತಾಳ ನುಡಿಸುವುದರ ಮೂಲಕ ಉದ್ಘಾಟಿಸಿದ ಶ್ರೇಷ್ಠ ಮಹಿಳಾ ಯಕ್ಷಗಾನ ಕಲಾವಿದೆ, ರಂಗಭೂಮಿ ನಿರ್ದೇಶಕಿ, ‘ರಸರಂಗ’ ಕದ್ರಿಕಟ್ಟು ಸಂಸ್ಥೆಯ ಸಂಚಾಲಕಿಯಾದ ಸುಧಾ ಮಣೂರು ಮಾತನಾಡಿ “ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಉತ್ತಮ ಯಕ್ಷಗಾನ ಕಲಿಯುವಿಕೆಗಾಗಿ ಶ್ರೇಷ್ಠ ಅನುಭವಿ ಯಕ್ಷ ಗುರುಗಳ ಅಗತ್ಯತೆ ಇದೆ, ಅಂತಹ ಗುರುಗಳು ಈ ತಂಡದಲ್ಲಿದ್ದು ಕ್ರಮ ಪ್ರಕಾರವಾದ ಯಕ್ಷ ತರಬೇತಿಯನ್ನು ಕಳೆದ 10 ವರ್ಷಗಳಿಂದ ಉಚಿತವಾಗಿ ನೀಡುತ್ತಿರುವುದು ಹೆಮ್ಮೆ ತರುತ್ತದೆ. ಇಂತಹ ಗುರುಗಳಿಂದ ವಿದ್ಯೆಯನ್ನು ಕಲಿಯುತ್ತಿರುವ ನೀವೆಲ್ಲ ಪುಣ್ಯವಂತರು” ಎಂಬುದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಟ್ರಸ್ಟ್ ಹಾಗೂ ಯಕ್ಷಾಂತರಂಗದ ಕಾರ್ಯಾಧ್ಯಕ್ಷರಾದ ಎಂ. ಸುಬ್ಬರಾಯ…
ಕಾಸರಗೋಡು : ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತಮ ಬಿಳಿಮಲೆ ಯವರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ” ಪ್ರದಾನ ಸಮಾರಂಭ ದಿನಾಂಕ 24 ಜೂನ್ 2025ರಂದು ನಡೆಯಿತು. ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ದಂಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಕಾಸರಗೋಡಿನ ಏತಡ್ಕ ನಾರಾಯಣ ಅಲೆವೂರಾಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಶ್ರೀ ಎ. ಆರ್. ಸುಬ್ಬಯ್ಯಕಟ್ಟೆ ಮಾತನಾಡಿ “ಕಾಸರಗೋಡು ಪ್ರದೇಶದ ಕನ್ನಡಿಗರ ಅತಿತ್ಯ, ಗೌರವ ಭಾವಕ್ಕೆ ಶರಣು. ಇಲ್ಲಿಯವರು ತೋರುವ ಪ್ರೀತಿ, ಆದರಗಳು ಆದರಣೀಯ. ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ಕನ್ನಡಪರ ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ನಾನು ಪ್ರಾಧಿಕಾರದ ಸೀಮಿತ ಪರಿದಿಗೂ ಮೀರಿ ಸಹಾಯ ಸಹಕಾರಗಳನ್ನು ಮಾಡಲು ಪ್ರಯತ್ನಿಸುವೆ” ಎಂದರು. ಪ್ರೊ. ಎ. ಶ್ರೀನಾಥ್ ಇವರು…
ಬೆಂಗಳೂರು : ಕನ್ನಡ ಜಾನಪದ ಪರಿಷತ್ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ (ನೋಂ) ಹಿರಿಯೂರು ಚಿತ್ರದುರ್ಗಾ ಜಿಲ್ಲೆ ಇವುಗಳ ಸಹಯೋಗದಲ್ಲಿ ರಾಜ್ಯಮಟ್ಟದ ‘ಕನ್ನಡ ಜಾನಪದ ಸಮ್ಮೇಳನ’ವನ್ನು ದಿನಾಂಕ 26 ಮತ್ತು 27 ಜುಲೈ 2025ರಂದು ಬೆಂಗಳೂರಿನ ಟಿ. ದಾಸರಹಳ್ಳಿ ಸೌಂದರ್ಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಜಾನಪದ ಕಲಾ ತಂಡಗಳಿಗೆ ವಿಶೇಷ ಪ್ರದರ್ಶನ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪುರಸ್ಕಾರ. ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ ‘ಕನ್ನಡ ಜಾನಪದ ಸಿರಿ ಪ್ರಶಸ್ತಿ’ ನೀಡಲಾಗುವುದು ಹಾಗೂ ಭಾಗವಹಿಸಿದವರೆಲ್ಲರಿಗೂ ‘ಕನ್ನಡ ಜಾನಪದ ಪ್ರಶಂಸನಾ ಪತ್ರ’ ಪ್ರದಾನ ಮಾಡಲಾಗುವುದು. ಸ್ಪರ್ಧೆಯ ನಿಯಮಗಳು ಮತ್ತು ಸೂಚನೆಗಳು : ಸ್ಪರ್ಧೆಯಲ್ಲಿ ಭಾಗವಹಿಸುವ ಜಾನಪದ ಕಲಾ ತಂಡಗಳು : ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕೋಲಾಟ, ಲಂಬಾಣಿ ಕುಣಿತ, ಕಂಸಾಳೆ, ನಂದಿ ಧ್ವಜದ ಕುಣಿತ, ಕರಗದ ಕುಣಿತ, ಸುಗ್ಗಿಯ ಕುಣಿತ, ಸಾಮೂಹಿಕ ಹಾಗೂ ವೈಯಕ್ತಿಕ ಕನ್ನಡ…
ಬೆಂಗಳೂರು : ಈ ಕೆಳಕಂಡ ಕರುನಾಡಿನ ಹದಿನೈದು ವೀರ ವನಿತೆಯರ ಬಗ್ಗೆ ಕವನ/ಗೀತೆ/ಹಾಗೂ ಲಾವಣಿಗಳನ್ನು ತಮ್ಮಿಂದ ಆಹ್ವಾನಿಸಲಾಗಿದೆ. ಈ ಕೃತಿಯನ್ನು ದಿನಾಂಕ 15 ಆಗಸ್ಟ್ 2025ರಂದು ಲೋಕಾರ್ಪಣೆಗೊಳಿಸಲಾಗುವುದು. ನಿಬಂಧನೆಗಳು : 1. ಯಾರು ಎಷ್ಟು ಬೇಕಾದರೂ ಕವನಗಳನ್ನು ರಚಿಸಿ ಕಳಿಸಬಹುದು. 2. ಸಾಲುಗಳ ಮಿತಿಯಿಲ್ಲ. 3. ರಚನೆಗಳು ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. 4. ರಚನೆಗಳಿಗೆ ಆಕರ ಗ್ರಂಥ/ಪುಸ್ತಕ/ಕೃತಿಯ ಹೆಸರು ಮತ್ತು ಕೃತಿಕಾರ ಹೆಸರನ್ನು ತಮ್ಮ ಕಾವ್ಯದ ಕೊನೆಯಲ್ಲಿ ಕಡ್ಡಾಯವಾಗಿ ಬರೆದಿರಬೇಕು. 5. ತಮ್ಮ ರಚನೆಗಳನ್ನು ಈ ಕೆಳಕಂಡವರಿಗೆ ದಿನಾಂಕ 15 ಜುಲೈ 2025ರೊಳಗೆ ವಾಟ್ಸಪ್ ಗ್ರೂಪ್ಗೆ ಕಳುಹಿಸಲು ಕೋರಿದೆ. 1. ಶ್ರೀಮತಿ ರಾಧಾಮಣಿ ಎಮ್. ಕೋಲಾರ : 9972731056 2. ಶ್ರೀಮತಿ ಶ್ರೀಮತಿ ಕೆ.ಟಿ. : 9945225958 3. ಶ್ರೀಮತಿ ಮಾಯಾ ಬಾಲಚಂದ್ರ : 9449909494 4. ಶ್ರೀ ರಮೇಶ್ ಚನ್ನಪ್ಪ 9482874933 https://chat.whatsapp.com/K66GbtWu59mIkJrCagIE7P ಕರುನಾಡಿನ ವೀರ ವನಿತೆಯರ ಪಟ್ಟಿ: 1. ಕಿತ್ತೂರು ರಾಣಿ ಚೆನ್ನಮ್ಮ, 2. ರಾಣಿ ಅಬ್ಬಕ್ಕ,…
ಮಂಗಳೂರು : ಸದಾ ಹೊಸತನವನ್ನು ಹುಡುಕುತ್ತಾ ಕಲಿಕೆಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾ ರಂಗಭೂಮಿಯನ್ನು ಪ್ರೀತಿಸುವ ಮಂಗಳೂರಿನ ರಂಗ ಸಂಸ್ಥೆ ಕಲಾಭಿ. ಮುಂದಿನ ದಿನಗಳಲ್ಲಿ ಆಸಕ್ತರಿಗೆ ನಟನ ಕೌಶಲ್ಯಗಳ ತರಬೇತಿ ನೀಡಲಿದೆ. ಈ ತರಬೇತಿಯು ನೀನಾಸಂ ಪದವೀಧರ, ಚಲನಚಿತ್ರ ಮತ್ತು ಸಿನಿಮಾ ನಟ ಹಾಗೂ ಕಲಾಭಿಯ ಕಾರ್ಯದರ್ಶಿಯಾದ ಉಜ್ವಲ್ ಯು.ವಿ. ಇವರ ಸಾರಥ್ಯದಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಎನ್.ಎಸ್.ಡಿ., ನಿನಾಸಂ ಪದವೀಧರ ಕಲಾವಿದರು, ನಿರ್ದೇಶಕರು, ಅನೇಕ ರಂಗ ಕಲಾವಿದರು ಮತ್ತು ಚಿತ್ರ ನಿರ್ದೇಶಕರು, ಕಲಾವಿದರನ್ನು ಸೇರಿಸಿಕೊಂಡು ನಟನೆಯ ಪಠ್ಯಕ್ಕಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಂದೆ ನಡೆಯಲಿರುವ ತರಬೇತಿ ಮೂರು ಹಂತದಲ್ಲಿ ನಡೆಯಲಿದ್ದು, ಅದು ಏನನ್ನು ಒಳಗೊಂಡಿರಬೇಕು ಎಂದು ಚರ್ಚಿಸಲಾಯಿತು. ಶೀಘ್ರವೇ ಪಠ್ಯಕ್ರಮ ಸಿದ್ದವಾಗಲಿದ್ದು ತರಬೇತಿ ಆರಂಭವಾಗಲಿದೆ. ಈ ಸಭೆಯಲ್ಲಿ ಜರ್ನಿ ಮ್ಯಾನ್ ಫಿಲ್ಮ್ಸ್ ನ ಸುಮಂತ್ ಭಟ್, ತುಳು ಸಿನಿಮಾದ ನಟ ಹಾಗೂ ನಿರ್ದೇಶಕ ರಾಹುಲ್ ಅಮೀನ್, ನೀನಾಸಂ ಪದವೀಧರ ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ತರಬೇತುದಾರರಾದ ಅವಿನಾಶ್ ರೈ,…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವನ್ನು ದಿನಾಂಕ 15 ಜೂನ್ 2025ರಿಂದ 21 ಜೂನ್ 2025ರವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 15 ಜೂನ್ 2025ರಂದು ಅಪರಾಹ್ನ 2-30 ಗಂಟೆಗೆ ಬಾಳದ ಅಷ್ಟಾವಧಾನಿ ಡಾ. ರಾಮಕೃಷ್ಣ ಪೆಜತ್ತಾಯ ಇವರಿಂದ ‘ಕನ್ನಡ ಸಂಸ್ಕೃತ ಅಷ್ಟಾವಧಾನ’ ಮತ್ತು ರಾತ್ರಿ 8-00 ಗಂಟೆಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಿಂದ ‘ತಾಮ್ರಧ್ವಜ ಕಾಳಗ’, ದಿನಾಂಕ 16 ಜೂನ್ 2025ರಂದು ರಾತ್ರಿ 7-00 ಗಂಟೆಗೆ ಯು.ಎಸ್.ಎ.ಯ ಕುಮಾರಿ ಸಿದ್ದಿ ಜಯದೇವ್ ತಂತ್ರಿ ಇವರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು 8-00 ಗಂಟೆಗೆ ‘ಕರ್ಣ ಪರ್ವ’, ದಿನಾಂಕ 17 ಜೂನ್ 2025ರಂದು ‘ಗದಾ ಪರ್ವ’, ದಿನಾಂಕ 18 ಜೂನ್ 2025ರಂದು ‘ಮನ್ಮಥೋಪಖ್ಯಾನ’, ದಿನಾಂಕ 19 ಜೂನ್…
ಯು. ಎ. ಇ. : ಯಕ್ಷಗಾನ ಅಭ್ಯಾಸ ಕೇಂದ್ರ ಯು. ಎ. ಇ. ವತಿಯಿಂದ ಕೊಡಮಾಡುವ 2024-2025 ನೇ ಸಾಲಿನ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಸುಬ್ರಾಯ ಹೊಳ್ಳರಿಗೆ ನೀಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯು. ಎ. ಇ. ಯ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ 29 ಜೂನ್ 2025ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯು. ಎ. ಇ.) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ನಡೆಯಲಿರುವ ದುಬಾಯಿ ಯಕ್ಷೋತ್ಸವ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮುಂಬೈ : ಪ್ರಥ್ವಿ ಥಿಯೇಟರ್ ಪ್ರಸ್ತುತ ಪಡಿಸುವ ‘ಉದಯಸ್ವರ’ ಸಂಗೀತ ಕಛೇರಿಯನ್ನು ದಿನಾಂಕ 15 ಜೂನ್ 2025ರಂದು ಬೆಳಿಗ್ಗೆ 7-30 ಗಂಟೆಗೆ ಮುಂಬೈಯ ಪ್ರಥ್ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ರಜತ್ ಪ್ರಸನ್ನ ಇವರ ಕೊಳಲು ವಾದನಕ್ಕೆ ತೇಜೋವೃಷ್ ಜೋಶಿ ಇವರು ತಬಲಾ ಸಾಥ್ ನೀಡಲಿದ್ದಾರೆ.
ಕಾಸರಗೋಡು : ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ, ಜಾನಪದ ವಿದ್ವಾಂಸ, ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ. ಎ. ಶ್ರೀನಾಥ್ ಕಾಸರಗೋಡು ‘ಕಯ್ಯಾರ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಯ್ಯಾರ್, 16ನೇ ವಾರ್ಡ್ ಕಯ್ಯಾರ್ ಕುಟುಂಬ ಶ್ರೀ ಘಟಕಗಳ ಸಹಯೋಗದಲ್ಲಿ ಕಯ್ಯಾರ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ದಿನಾಂಕ 18 ಜೂನ್ 2025ರಂದು ಬೆಳಗ್ಗೆ ಗಂಟೆ 9-00ರಿಂದ ನಡೆಯುವ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಕನ್ನಡ ಎಂ.ಎ. ಪದವೀಧರ, ಚಿಂತಕ, ವಾಗಿ, ಸಂಘಟಕ, ಸಮಾಜ ಸೇವಕರೂ ಆದ ಶ್ರೀನಾಥ್, ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಳವಾದ ಜ್ಞಾನವುಳ್ಳ ಕಾಸರಗೋಡಿನ ಸಾಹಿತ್ಯಕ, ಸಾಂಸ್ಕೃತಿಕ, ಧಾರ್ಮಿಕ ಸಂಘಟನೆಯಲ್ಲಿ ಹೆಸರು ಪಡೆದಿದ್ದಾರೆ. ಮೂರು ದಶಕಗಳ ಕಾಲ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ,…
ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಮತ್ತಿತರ ಕಲಾಪ್ರಕಾರಗಳಲ್ಲಿ 2024ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (ದಿನಾಂಕ 01-01-2024ರಿಂದ 31-12-2024ರ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ/ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಪುಸ್ತಕಕ್ಕೆ ರೂ.25,000/- ನಗದು ಬಹುಮಾನವನ್ನು ನೀಡಲಾಗುವುದು. ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹಾರ್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಕೃತಿ ಅಥವಾ ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು. ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು -560002, ಇವರಿಗೆ ದಿನಾಂಕ 10 ಜುಲೈ 2025ರೊಳಗೆ ಅರ್ಜಿಯೊಂದಿಗೆ ಪುಸ್ತಕದ…