Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಾಸರಗೋಡು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ದಿನಾಂಕ 10 ಆಗಸ್ಟ್ 2024ರಂದು ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ದಂಪತಿಯ ಹೆಸರಲ್ಲಿ ಪ್ರಪ್ರಥಮವಾಗಿ ಕೊಡಲ್ಪಡುವ ಸ್ಮೃತಿ ಗೌರವವನ್ನು ಖ್ಯಾತ ಹಿರಿಯ ಸಾಹಿತಿ, ಅರ್ಥಧಾರಿ ಡಾ. ರಮಾನಂದ ಬನಾರಿ ಅವರಿಗೆ ನೀಡಿ ಗೌರವಿಸಲಾಯಿತು. ಮಹಾಲಿಂಗ ಪಾಟಾಳಿ ಅವರ 18ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಧಾರಿ ನಿವೃತ್ತ ಪ್ರಾಧ್ಯಾಪಕ ರಾಮಣ್ಣ ಮಾಸ್ತರ್ ವಹಿಸಿದ್ದರು. ಭಾಗವತ ನಾರಾಯಣ ತೋರಣಗಂಡಿ ಸಂಸ್ಕರಣಾ ಭಾಷಣ ಮಾಡಿದರು. ಯಕ್ಷಗಾನ ಕಲೋಪಾಸಕ ಎಂ. ರಮಾನಂದ ರೈ ವಂದಿಸಿದರು. ನಾರಾಯಣ ದೇಲಂಪಾಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಣೆಗೈದರು. ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಕಲಾ ಸಾಂಸ್ಕೃತಿಕೋತ್ಸವದಲ್ಲಿ ಸಂಘದ ಹಿರಿಯ ಭಾಗವತ, ಗುರುಗಳಾದ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಪಾರ್ತಿಸುಬ್ಬ ವಿರಚಿತ ‘ಸೀತಾಪಹಾರ – ಜಟಾಯು ಮೋಕ್ಷ’ ತಾಳಮದ್ದಳೆ ನಡೆಯಿತು. ಭಾಗವತರಾದ ರಚನಾ ಚಿದ್ಗಲ್ ಇವರ…
ಮಂಗಳೂರು : ಬಲ್ಲಾಳ್ ಬಾಗ್ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ 18 ಆಗಸ್ಟ್ 2024ರಿಂದ 20 ಆಗಸ್ಟ್ 2024ರವರೆಗೆ ‘ಹಯಾತಿ ಬೈ ಮೂನಿಶಾ’ ಎಂಬ ಶೀರ್ಷಿಕೆಯ ತಮ್ಮ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಮಂಗಳೂರಿನ ಕಲಾವಿದೆ ಮೂನಿಶಾ ಹಲೀಮಾ ದರ್ಬಾರ್ ಪ್ರಸ್ತುತಪಡಿಸುತ್ತಿದ್ದಾರೆ. ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ. ಈ ಪ್ರದರ್ಶನವು ಮೂನಿಶಾ ಅವರ ಕೆಲವು ಅತ್ಯುತ್ತಮ ಕೃತಿಗಳನ್ನು ಒಳಗೊಂಡಿರುತ್ತದೆ. ಇದು ವೀಕ್ಷಕರ ಹೃದಯಗಳನ್ನು ಸ್ಪರ್ಶಿಸುವ ಮತ್ತು ಪರಿವರ್ತಕ ಅನುಭವಕ್ಕೆ ಕರೆದೊಯ್ಯುವ ಭರವಸೆ ನೀಡುವ ರೋಮಾಂಚಕ ಬಣ್ಣಗಳು ಮತ್ತು ವಿನ್ಯಾಸಗಳನ್ನು ಪ್ರದರ್ಶಿಸುತ್ತದೆ. ಮೂನಿಶಾ ಕಳೆದ 15 ವರ್ಷಗಳಿಂದ ಚಿತ್ರಕಲೆಯಲ್ಲಿ ತಲ್ಲೀನರಾಗಿದ್ದಾರೆ. ಪ್ರಕೃತಿಯ ಪ್ರಶಾಂತ ಸೌಂದರ್ಯ, ಮಸೀದಿಗಳು, ಸಮ್ಮಿತೀಯ ವಾಸ್ತುಶಿಲ್ಪ, ಅಮೂರ್ತ ರೂಪಗಳು ಮತ್ತು ವಿನ್ಯಾಸಗಳನ್ನು ಸೆರೆಹಿಡಿಯುವಲ್ಲಿ ಅವರ ಪರಿಣತಿಯು ಆಕ್ರಿಲಿಕ್ ಮೂಲಕ ಜೀವಂತಗೊಳಿಸಿದೆ. ಮೂನಿಶಾ ಅವರ ಕಲೆಯ ಮೇಲಿನ ಒಲವು ಜೀವನದುದ್ದಕ್ಕೂ ಸಾಗಿದೆ ಮತ್ತು ಅವರು ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಕಾಲೇಜು ದಿನಗಳಲ್ಲಿ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮದ ಪ್ರಯುಕ್ತ ಉಡುಪಿ ಪತ್ರಿಕಾ ಭವನದಲ್ಲಿ ಸ್ಥಾಪಿಸಲಾದ ಗ್ರಂಥಾಲಯವನ್ನು ದಿನಾಂಕ 16 ಆಗಸ್ಟ್ 2024ರಂದು ಉಡುಪಿ ಇಂಚರ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವೈ.ಸುದರ್ಶನ್ ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ವೈ. ಸುದರ್ಶನ್ ರಾವ್, “ಕಂಪ್ಯೂಟರ್, ಮೊಬೈಲ್ಗಳ ಪರಿಣಾಮವಾಗಿ ಮನುಷ್ಯ ತನ್ನ ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಹಾಗಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ ಪುಸ್ತಕಾಲಯವನ್ನು ಸ್ಥಾಪಿಸಬೇಕು. ಪುಸ್ತಕ ಓದುವವುದರಿಂದ ಭಾಷೆ ಮೇಲೆ ಹಿಡಿತ ಬರುತ್ತದೆಯೇ ಹೊರತು ಮೊಬೈಲ್, ಟಿವಿಗಳಿಂದಲ್ಲ” ಎಂದು ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅವರಿಗೆ ಉಡುಪಿ ಕನ್ನಡ ಮತ್ತು ಸಂಸ್ಕೃತಿ…
ಹೆಬ್ರಿ : ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿ ಬೆನಕನಹಳ್ಳಿ, ಪಾಂಡುಕಲ್ಲು, ಶಿವಪುರ ಹೆಬ್ರಿ ಇದರ ಸುವರ್ಣ ಆರಾಧನಾ ಪ್ರಯುಕ್ತ ಮಂಗಳೂರಿನ ಡಾ. ಎಸ್.ಪಿ. ಗುರುದಾಸ ಇವರಿಂದ ‘ಹರಿಕಥೆ’ ಕಾರ್ಯಕ್ರಮವನ್ನು ದಿನಾಂಕ 21 ಆಗಸ್ಟ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಪಾಂಡುಕಲ್ಲು, ಪಟ್ಟಾಭಿ ನಿಲಯದಲ್ಲಿ ಆಯೋಜಿಸಲಾಗಿದೆ.
ಚನ್ನರಾಯಪಟ್ಟಣ : ಕಲಾವಿದ ಉಮೇಶ್ ತೆಂಕನಹಳ್ಳಿ ಅವರ ಚೊಚ್ಚಲ ಕೃತಿ ‘ಕಪ್ಪು ಹಲ್ಲಿನ ಕಥೆಗಳು’ ಕಾದಂಬರಿ ಲೋಕಾರ್ಪಣೆಯು ದಿನಾಂಕ 12 ಆಗಸ್ಟ್ 2024ರಂದು ಚನ್ನರಾಯಪಟ್ಟಣ ರಾಘವೇಂದ್ರ ಸಾಮಿಲ್ ರಸ್ತೆಯ ರಂಗ ಲೋಕದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಜನಪದ ವಿದ್ವಾಂಸ ಡಾ. ಚಂದ್ರು ಕಾಳೇನಹಳ್ಳಿ “ಸಾಹಿತ್ಯ ರಚನೆ ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಪುಸ್ತಕ ರಚನೆಯಿಂದ ಹಣ ಸಿಗುತ್ತದೆ ಎಂಬುದು ಸುಳ್ಳು. ಇದು ಎಲ್ಲರ ವಿಷಯದಲ್ಲೂ ಒಂದೇ ರೀತಿ ಇರುವುದಿಲ್ಲ. ನಮ್ಮೊಳಗಿನ ತುಡಿತವನ್ನು ಹೊರಹಾಕಲು ಸಾಹಿತ್ಯ ರಚನೆ ನೆರವಾಗುತ್ತದೆ. ಆದ್ದರಿಂದ ನಮ್ಮ ವಿಕಾಸವೂ ಸಾಧ್ಯ, ಆ ಮೂಲಕ ಯಶಸ್ಸು ಗಳಿಸಬಹುದು. ಯಾವುದೇ ಕೃತಿಯು ಪ್ರತಿ ಬಾರಿ ಓದಿದಾಗಲೂ ಹೊಸದೊಂದು ಅನುಭವ ನೀಡಿದರೆ ಅದು ಸಾರ್ಥಕತೆಯಾದಂತೆ. ಉದಯೋನ್ಮುಖ ಲೇಖಕರಿಗೆ ಹಲವು ಸವಾಲುಗಳಿದ್ದು, ಅವುಗಳನ್ನು ಎದುರಿಸಬೇಕಾಗಿದೆ. ಸಾಹಿತ್ಯದ ಓದನ್ನು ಮರೆತಿರುವ ಜನ ಮೊಬೈಲ್ ನೋಡುವುದಕ್ಕೆ ತಮ್ಮ ಸಮಯ ವಿನಿಯೋಗ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದು ಹೇಳಿದರು. ರಂಗಕರ್ಮಿ ಪ್ರಸಾದ್ ರಕ್ಷಿದಿ ಮಾತನಾಡಿ “ಅಧ್ಯಯನ ಮತ್ತು…
ಮುಂಬಯಿ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಪ್ರಸ್ತುತಿಯಲ್ಲಿ ತ್ರಿರಂಗ ಸಂಗಮ ಮುಂಬಯಿ ಸಂಚಾಲಕತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ ‘ಯಕ್ಷ ಜ್ಞಾನ ಯಾನ’ವನ್ನು ದಿನಾಂಕ 19 ಆಗಸ್ಟ್ 2024ರಿಂದ 22 ಆಗಸ್ಟ್ 2024ರವರೆಗೆ ಮುಂಬಯಿಯಲ್ಲಿ ಆಯೋಜಿಸಲಾಗಿದೆ. ದಿನಾಂಕ 19 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ಥಾಣೆ (ಪಶ್ಚಿಮ), ಚೆಕ್ ನಾಕಾ ಬಳಿ, ಗೋಪಾಲಾಶ್ರಮದ ಹತ್ತಿರ, ಆರ್ ನೆಸ್ಟ್ ಬ್ಯಾಂಕ್ವೆಟ್ ಹೊಟೇಲಿನಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’, ದಿನಾಂಕ 20 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ದತ್ತಾನಿ ಮಾಲ್ 3ನೇ ಮಹಡಿ, ಆರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ಇಲ್ಲಿ ಕವಿ ಮೂಲ್ಕಿ ರಾಮಕೃಷ್ಣಯ್ಯ ವಿರಚಿತ ‘ಸುಧನ್ವ ಮೋಕ್ಷ’, ದಿನಾಂಕ 21 ಆಗಸ್ಟ್ 2024ರಂದು ಸಂಜೆ 3-30 ಗಂಟೆಗೆ ಮುಂಬಯಿ ಪಶ್ಚಿಮ, ಬೊರಿವಲಿ, ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮಾರ್ಜುನ’ ಮತ್ತು ದಿನಾಂಕ 22 ಆಗಸ್ಟ್ 2024ರಂದು ಸಂಜೆ…
ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ (ರಿ.) ಮತ್ತು ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ದಿನಾಂಕ 15 ಆಗಸ್ಟ್ 2024ರಂದು ಶೇಣಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ‘ಶೇಣಿ ಪ್ರಶಸ್ತಿ-2024’ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಮಾತನಾಡಿ “ಶೇಣಿ ಪ್ರಶಸ್ತಿ ನನ್ನ ಪಾಲಿಗೆ ದೇವರ ಪ್ರಸಾದಕ್ಕೆ ಸಮನಾದುದು. ಈ ಪ್ರಶಸ್ತಿಯ ನಿರೀಕ್ಷೆಯೇ ಇರಲಿಲ್ಲ. ಶೇಣಿ ಗೋಪಾಲಕೃಷ್ಣ ಭಟ್ ಅವರ ಜತೆ ಒಡನಾಟ ಹೊಂದಿ ಕಲಾಮಾತೆಯ ಸೇವೆ ಮಾಡಿದ್ದರಿಂದ ಈ ಪ್ರಶಸ್ತಿ ನನಗೆ ಒಲಿದಿರಬಹುದು. ಆಟ-ಕೂಟಗಳಲ್ಲಿ ಶೇಣಿಯವರು ಇದ್ದರೆ ಸಹಕಲಾವಿದರು ಬಹಳ ಎಚ್ಚರಿಕೆಯಿಂದ ಅರ್ಥ ಹೇಳಬೇಕಿತ್ತು. ಅವರು ಸಹಕಲಾವಿದರ ಜತೆ ಪಾತ್ರಕ್ಕೆ ಒದಗುವ ಬಗೆ ಅಸಾಮಾನ್ಯವಾಗಿತ್ತು. ಹರಿದಾಸರಾಗಿದ್ದ ಅವರಿಂದ ಯಕ್ಷಗಾನದ ಮಾತುಗಾರಿಕೆಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ಲಭಿಸಿದೆ. ಅವರಂಥ ಕಲಾವಿದರು ಇನ್ನಷ್ಟು ಹುಟ್ಟಿಬರಬೇಕು” ಎಂದು ಶೇಣಿ ಜತೆಗಿನ ಒಡನಾಟವನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ…
ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟಕ ಸುಧಾಕರ ಆಚಾರ್ಯರ ಕಲಾರಾಧನೆಯ ಸಂಯೋಜನೆಯಲ್ಲಿ ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ದಿನಾಂಕ 15 ಆಗಸ್ಟ್ 2024ರಂದು 34ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ನಡೆದ ಯಕ್ಷಗಾನ ತಾಳಮದ್ದಳೆ ‘ವೈಕುಂಠ ದರ್ಶನ’ ಮತ್ತು ‘ನಾದ ವೈಕುಂಠ’ ಕಾರ್ಯಕ್ರಮದಲ್ಲಿ ಗಾನ ಚಕ್ರವರ್ತಿ ಎಂ. ದಿನೇಶ ಅಮ್ಮಣ್ಣಾಯ ಭಾಗವತರಿಗೆ ರಜತ ಗೌರವವನ್ನು ಸಮರ್ಪಸಲಾಯಿತು. ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಅಮ್ಮಣ್ಣಾಯ ಭಾಗವತರ ಸಾರಥ್ಯದಲ್ಲಿ ಮಾನಿಷಾದ ಪ್ರಸಂಗದ ಆಯ್ದ ಭಾಗವಾಗಿ ‘ವೈಕುಂಠ ದರ್ಶನ’ ತಾಳಮದ್ದಳೆಯ ತರುವಾಯ ನಡೆದ ಅಮ್ಮಣಾಯ ಅಭಿನಂದನಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಶ್ರೀನಿವಾಸ ವೆಂಕಟರಮಣ ಆಸ್ರಣ್ಣ, ಡಾ. ಸಾಯಿ ಗಣೇಶ್, ಭವ್ಯಶ್ರೀ ಕಿದಿಯೂರು, ಸುಧಾಕರ ಆಚಾರ್ಯ, ಅಮಿತಾ ಆಚಾರ್ಯ, ಆಚಾರ್ಯ ಯಾಸ್ಕ, ಮೇಧಿನಿ ಆಚಾರ್ಯ, ಡಾ. ಅಭಿನ್ ದೇವದಾಸ್ ಶ್ರೀಯಾನ್, ಸುಧಾ ದಿನೇಶ್ ಅಮ್ಮಣ್ಣಾಯ, ಕನಿಷ್ಕ್ ಕಿಶನ್ ಹೆಗ್ಡೆ, ಸಮೃದ್ಧ್ ಸೂರ್ಯ ಪ್ರಕಾಶ್ ಉಪಸ್ಥಿತರಿದ್ದರು. ಪ್ರೊ. ಪವನ್ ಕಿರಣಕೆರೆ ನಾದ ನಿರ್ದೇಶನದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಲಯದ…
ನೀರ್ಚಾಲು : ಶ್ರೀ ಶಂಕರ ಶರ್ಮ ಕುಳಮರ್ವ ಇವರು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಮಹಾಕಾವ್ಯ ‘ಉತ್ತರಕಾಂಡ ಕಾವ್ಯಧಾರ’ ಗ್ರಂಥದ ಲೋಕಾರ್ಪಣಾ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಸಹಯೋಗದೊಂದಿಗೆ ದಿನಾಂಕ 18 ಆಗಸ್ಟ್ 2024ರ ಭಾನುವಾರ ಅಪರಾಹ್ನ 2-30 ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಲಾ ಪ್ರಬಂಧಕರಾದ ಶ್ರೀ ಜಯದೇವ ಖಂಡಿಗೆ ಇವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಹಾಯಕ ಶಿಕ್ಷಕರಾದ ಶ್ರೀಮತಿ ಬಿ. ಶೈಲಜಾ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಮುಖ್ಯ ಅತಿಥಿಗಳಾಗಿದ್ದು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಇವರು ಕೃತಿ ಅವಲೋಕನ ಮಾಡಲಿರುವರು. ವಿಶ್ರಾಂತ…
ಬಂಟ್ವಾಳ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಳೆ ಕೂಟದ ಅಂಗವಾಗಿ ದಿನಾಂಕ 13 ಆಗಸ್ಟ್ 2024ನೇ ಮಂಗಳವಾರ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ, ಚೆಂಡೆ ಮತ್ತು ಮದ್ದಳೆಗಳಲ್ಲಿ ಮುರಳೀಧರ ಆಚಾರ್ಯ ನೇರಂಕಿ, ಶ್ರೀ ವತ್ಸ ಸೋಮಯಾಜಿ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಭೀಮ), ಭಾಸ್ಕರ ಬಾರ್ಯ (ಹನೂಮಂತ), ನಾ. ಕಾರಂತ ಪೆರಾಜೆ (ದ್ರೌಪದಿ), ಸುಬ್ಬಪ್ಪ ಕೈಕಂಬ (ಕುಬೇರ) ಸಹಕರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾಗೇಂದ್ರ ಪೈ ಸ್ವಾಗತಿಸಿ, ವಂದಿಸಿದರು.