Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ‘ಮನೆಯೇ ಗ್ರಂಥಾಲಯ’ ವಿನೂತನ ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಸಾಹಿತಿ ವಿದ್ವಾಂಸ ನಾಡೋಜ ಡಾ. ಕೆ.ಪಿ. ರಾವ್ ಇವರು ಉಡುಪಿಯ ಬೈಲೂರಿನಲ್ಲಿರುವ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಗಳ ಮನೆ ‘ವಾಟಿಕಾ’ದಲ್ಲಿ ದಿನಾಂಕ 21-05-2024ರಂದು ಚಾಲನೆ ನೀಡಿದರು. “ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವಂತದ್ದು ಇವತ್ತಿನ ಆಧುನಿಕ ಸಂದರ್ಭದಲ್ಲಿ ಎಲ್ಲಾ ಸಾಧ್ಯತೆಗಳನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಆದರೆ ಅನೇಕ ಶತಮಾನಗಳ ಹಿಂದೆ ನಾವು ಕಂಡುಕೊಂಡ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಗಳಿಸಿದ ಜ್ಞಾನ ಸಂಪತ್ತನ್ನು ಅಕ್ಷರರೂಪವಾಗಿ ಪರಿವರ್ತಿಸಿ, ಮುಂದೆ ಅವುಗಳನ್ನು ಮುದ್ರಣ ರೂಪದಲ್ಲಿ ದಾಖಲೀಕರಣಗೊಳಿಸಿರುವುದರ ಪರಿಣಾಮವಾಗಿ ನಮಗಿಂದು ಕೋಟಿ ಕೋಟಿ ಗ್ರಂಥಗಳು ನಮ್ಮ ಅಧ್ಯಯನಕ್ಕೆ ಸಾಧ್ಯವಾಗಿವೆ, ಮುಂದೆಯೂ ಇವು ಸಾಧ್ಯವಾಗುತ್ತವೆ. ಅಷ್ಟು ಮಾತ್ರವಲ್ಲ ಒಂದು ಗ್ರಂಥವನ್ನು ತೆರೆದು ಅದರೊಳಗಿನ ಒಂದು ಪುಟದ ಸುವಾಸನೆಯನ್ನು ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ ಆಗಿರುತ್ತದೆ. ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅಂತಹ ಅನುಭವವನ್ನು ಗ್ರಂಥಗಳನ್ನು ಸ್ಪರ್ಶಿಸುವುದರಿಂದ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಬನ್ನೂರು ಭಾರತೀ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದ ವಠಾರದಲ್ಲಿ ದಿನಾಂಕ 21-05-2024ರಂದು ‘ತರಣಿ ಸೇನ ಕಾಳಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಪದ್ಯಾಣ ಶಂಕರನಾರಾಯಣ ಭಟ್, ವಿಷ್ಣು ಶರಣ ಬನಾರಿ, ಮಾಸ್ಟರ್ ಪರೀಕ್ಷಿತ್ ಪುತ್ತೂರು, ಮಾಸ್ಟರ್ ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಕು೦ಬ್ಳೆ ಶ್ರೀಧರ್ ರಾವ್ (ಶ್ರೀರಾಮ), ಪಕಳಕುಂಜ ಶ್ಯಾಮ್ ಭಟ್ (ರಾವಣ), ಭಾಸ್ಕರ್ ಶೆಟ್ಟಿ ಸಾಲ್ಮರ (ತರಣಿಸೇನ), ಭಾಸ್ಕರ್ ಬಾರ್ಯ (ಸರಮೆ), ಮಾಂಬಾಡಿ ವೇಣುಗೋಪಾಲ ಭಟ್ (ವಿಭೀಷಣ) ಹಾಗೂ ಚಂದ್ರಶೇಖರ್ ಭಟ್ ಬಡೆಕ್ಕಿಲ (ಸುಪಾರ್ಶ್ವಕ) ಸಹಕರಿಸಿದರು. ದೇವಳದ ಸಂಚಾಲಕ ವೆಂಕಟಕೃಷ್ಣ ಪ್ರಾಯೋಜಿಸಿದ್ದರು.
ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ನಾಲ್ಕನೇ ಕೃತಿಯಾಗಿರುವ ‘ಸಂಪ್ರಾಪ್ತಿ’ ಎಂಬ ಕಾದಂಬರಿಯು ಬದುಕಿನ ಪ್ರತಿಯೊಂದು ಆಯಾಮಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಾನಸಿಕ ಸ್ವಾಸ್ಥ್ಯದ ಕುರಿತು ಚರ್ಚಿಸುತ್ತದೆ. ಮೇಲ್ನೋಟಕ್ಕೆ ಸಾಮಾಜಿಕ ಕಾದಂಬರಿಯಂತೆ ಕಾಣುತ್ತಿದ್ದರೂ ಮನೋವೈಜ್ಞಾನಿಕ ಅಂಶಗಳನ್ನು ಓದುಗರ ಸೂಕ್ಷ್ಮ ದೃಷ್ಟಿಗೆ ಕಾಣುವಂತೆ ಚಿತ್ರಿಸಿರುವ ಲೇಖಕರು ವ್ಯಕ್ತಿಯ ಮನಸ್ಥಿತಿಗಳು ಕೌಟುಂಬಿಕ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರುವ ರೀತಿ, ಹದಗೆಟ್ಟ ಮಾನಸಿಕ ಪರಿಸ್ಥಿತಿಯಿಂದ ಏಳಬಹುದಾದ ಗುಲ್ಲುಗಳು ಜೀವನದ ಏರು ಪೇರುಗಳಿಗೆ ಮುನ್ನುಡಿ ಬರೆಯುವ ವಿಧಾನವನ್ನು ವಿವರಿಸುತ್ತದೆ. ಸಭ್ಯನೂ, ಸಹೃದಯಿಯೂ, ಅಪಾರ ತಾಳ್ಮೆಯುಳ್ಳವನೂ ಆದ ರವಿಶಂಕರ್ ಯಾರಿಗೂ ಕೇಡು ಬಗೆಯದ ವ್ಯಕ್ತಿ. ತನಗೆ ಕೇಡು ಬಗೆದವರನ್ನು ದ್ವೇಷಿಸದೆ, ಅವರಲ್ಲಿ ನೈತಿಕತೆಯನ್ನು ಪೋಷಿಸುವ ವಿಶಾಲ ಮನೋಭಾವದವನು. ತಾಯಿಯ ಮುದ್ದಿನ ಮಗನಾಗಿ, ಕವಿತಾಳ ಪ್ರೀತಿಯ ಅಣ್ಣನಾಗಿ ಕುಟುಂಬದ ಹೊಣೆ ಹೊತ್ತ ರವಿಶಂಕರ್ ವೃತ್ತಿಧರ್ಮದಲ್ಲೂ ಸಾರ್ಥಕತೆ ಕಾಣುವ ಸಲುವಾಗಿ ಉನ್ನತ ವ್ಯಾಸಂಗಕ್ಕೆ ಸಿದ್ಧತೆ ನಡೆಸುವಾಗ ಪರಿಚಿತಳಾದ ತನ್ನ ತಂಗಿಯ ಗೆಳತಿ ವಿನುತಾಳ ಅಕ್ಕ ಚಿತ್ರಾಳನ್ನು ಪ್ರೇಮಿಸಿ, ಕುಟುಂಬಸ್ಥರ…
ಪುತ್ತೂರು: ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯು ಪುತ್ತೂರು ಸುಕೃತೀಂದ್ರ ಕಲಾ ಮಂಟಪದಲ್ಲಿ ದಿನಾಂಕ 19-05-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ಸಾಹಿತಿ ಡಾ. ವಿವೇಕ ರೈ ಮಾತನಾಡಿ “ಡಾ. ರಾಮಕೃಷ್ಣ ಆಚಾರ್ ಅವರು ಎಲ್ಲೆಲ್ಲ ಇದ್ದರೋ ಅಲ್ಲೆಲ್ಲ ಸಂಘಟನೆ ಇದೆ. ಹಾಗಾಗಿ ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮುದಾಯವೆಂಬುದು ನಾಲ್ಕು ಚಕ್ರವಿದ್ದಂತಿತ್ತು. ಇದರೊಳಗೆ ತುಳು ಭಾಷೆಯ ಅಧ್ಯಯನ ವಿಶೇಷವಾಗಿತ್ತು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಉಪನ್ಯಾಸಕರಾಗಿ, ತನ್ನ ನಿವೃತ್ತಿಯ ತನಕ ಅಭ್ಯಾಸ ಮಾಡುತ್ತಾ ಬಂದಿರುವ ಅವರು ಬದುಕಿನಲ್ಲಿ ವಿಶ್ರಾಂತಿಯನ್ನು ಪಡೆದಿಲ್ಲ. 2010ರಲ್ಲಿ ಅನಾರೋಗ್ಯದ ಕಾರಣದಿಂದ ಕಾಲನ್ನು ಕಳೆದುಕೊಂಡರೂ 14 ವರ್ಷಗಳ ಕಾಲ ಒಂದೇ ಕಾಲಿನಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದರು. ಅವರ ಮಹತ್ವದ ಕೃತಿಗಳು ಬಂದದ್ದೇ 2010ರ…
ಮಂಗಳೂರು : ಮಂಗಳೂರು ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಗುರುಸೇವಾ ಪರಿಷತ್ತು ಮಂಗಳೂರು ಘಟಕ ವತಿಯಿಂದ ಕಳೆದ 7 ದಿನಗಳಿಂದ ನಡೆದ ‘ಜ್ಞಾನ ವಿಕಾಸ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 19-05-2024ರಂದು ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು ಇಲ್ಲಿನ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ “ನಾವು ಯಾವ ವ್ಯಕ್ತಿಗಳ ಸ್ನೇಹವನ್ನು ಅಥವಾ ಸಂಗವನ್ನು ಹೊಂದಿರುತ್ತೇವೆಯೋ ಅದುವೇ ನಮ್ಮ ವ್ಯಕ್ತಿತ್ವ ಹಾಗೂ ಬದುಕನ್ನು ನಿರ್ಧರಿಸುತ್ತದೆ. ಬೀಜವೊಂದನ್ನು ಭೂಮಿಯಲ್ಲಿ ಬಿತ್ತಿದಾಗ ಅದು ಕೊಳೆತು ಹೋಗುವುದನ್ನು ‘ವಿಕಾರ’ ಎನ್ನಬಹುದು. ಒಂದು ವೇಳೆ ಅದೇ ಬೀಜ ಚಿಗುರಿಕೊಂಡರೆ ಅದನ್ನೇ ‘ವಿಕಾಸ’ ಎನ್ನುತ್ತೇವೆ. ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆದ ಜ್ಞಾನ ಅವರೆಲ್ಲರ ಬುದ್ಧಿ ವಿಕಾಸಕ್ಕೆ ಹಾಗೂ ಬದುಕಿನ ವಿಕಾಸಕ್ಕೆ ನಾಂದಿಯಾಗಲಿ.” ಎಂದು ಹರಸಿದರು. ಅತಿಥಿಯಾಗಿ ಆಗಮಿಸಿದ ವೆಂಕಟರಮಣ ಆಚಾರ್ಯ ಮಾತನಾಡಿ “ಮಕ್ಕಳಲ್ಲಿ ಜ್ಞಾನ ಮತ್ತು ತಂತ್ರಜ್ಞಾನ ಮಿಳಿತಗೊಂಡಾಗ ಅದ್ಭುತವಾದ…
ಮಂಗಳೂರು: ಮೈಸೂರು ರಂಗಾಯಣದ 2023-24 ನೆ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಅಭಿನಯ ಮೂರು ನಾಟಕ ಗಳ ಪ್ರದರ್ಶನದ ನಾಂದಿ ನಾಟಕೋತ್ಸವವು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮೇ 24 ರಿಂದ 26 ರ ತನಕ ಪ್ರತಿದಿನ ಸಂಜೆ 7.00 ಕ್ಕೆ ನಡೆಯಲಿದೆ ಅರೆಹೊಳೆ ಪ್ರತಿಷ್ಠಾನ ಆಯೋಜಿಸಿರುವ ಈ ನಾಟಕೋತ್ಸವವು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಭಿ (ರಿ) ಮಂಗಳೂರು ಸಹಕಾರದಲ್ಲಿ ನಡೆಯಲಿದೆ. 24 ರಂದು ಹೈಸ್ನಾಂ ತೊಂಬಾ ರಂಗ ಪಠ್ಯ, ನಿರ್ದೇಶನದ ವೃಕ್ಷರಾಜ, 25 ರಂದು ಕೀರ್ತಿನಾಥ ಕುರ್ತುಕೋಟಿ ರಚನೆಯ ಮಂಜುನಾಥ ಬಡಿಗೇರ ನಿರ್ದೇಶನದ ಆ ಮನಿ ಹಾಗೂ 26 ರಂದು ವಿಲಿಯಮ್ ಶೇಕ್ಸ್ ಪಿಯರ್ ರಚನೆಯ ವೆನಿಸಿನ ವ್ಯಾಪಾರ ನಾಟಕ ಅಮಿತ್ ರೆಡ್ಡಿ ನಿರ್ದೇಶನದ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಇದೆ ಎಂದು ರಂಗಾಯಣದ ಮುಖ್ಯಸ್ಥ ರಾಮನಾಥ್ ಮತ್ತು…
ಕರಾವಳಿಯ ಸರ್ವಶ್ರೇಷ್ಠ ಕಲೆ ಯಕ್ಷಗಾನ, ಆಕರ್ಷಕ ವೇಷಭೂಷಣ, ಸಂಗೀತ, ನಾಟ್ಯ, ಅಭಿನಯ , ಮಾತುಗಾರಿಕೆಯಿಂದ ಕೂಡಿದ ಸರ್ವಾಂಗ ಸುಂದರ ಕಲೆಗೆ ವಿಶ್ವದೆಲ್ಲೆಡೆಯ ಜನ ಮಾರು ಹೋಗಿದ್ದಾರೆ. ಇಂತಹ ಮಹೋನ್ನತ ಕಲೆಯ ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡಿತ್ತಿರುವ ಕಲಾವಿದ ಆದಿತ್ಯ ಹೆಗಡೆ ಯಡೂರು. ಹೊಸನಗರ ತಾಲೂಕು ನಿಟ್ಟೂರಿನ ಮಹಾಬಲಗಿರಿ ಹಾಗೂ ಶ್ರೀದೇವಿ ಇವರ ಮಗನಾಗಿ 16.05.1996 ರಂದು ಜನನ. ಕರೆಸ್ಪಾಂಡೆನ್ಸ್ ನಲ್ಲಿ ದ್ವಿತೀಯ ವರ್ಷದ B.A ವ್ಯಾಸಂಗವನ್ನು ಮಾಡುತ್ತಿದ್ದಾರೆ. ಮಾವ, ಅಜ್ಜ, ಚಿಕ್ಕಪ್ಪಂದಿರಿಂದ ಹವ್ಯಾಸಿ ಯಕ್ಷಗಾನ ಕಲಾವಿದರಾದದಿಂದ ಆದಿತ್ಯ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಡಿ.ಎಸ್ ಸುಬ್ರಹ್ಮಣ್ಯ ಮೂರ್ತಿ ನಿಟ್ಟೂರು, ಸತ್ಯನಾರಾಯಣ ಆಚಾರ್ ಮೇಳಿಗೆ(ಹೆಜ್ಜೆ), ಉದಯ ಹೊಸಾಳ, ಸದಾನಂದ ಐತಾಳ್ ಇವರ ಯಕ್ಷಗಾನ ಗುರುಗಳು. ಯಕ್ಷಗಾನ ರಂಗದ ಎಲ್ಲಾ ಪ್ರಸಂಗ ಹಾಗೂ ವೇಷಗಳು ಇವರ ನೆಚ್ಚಿನನದು. ಹಿರಿಯ ಕಲಾವಿದರಲ್ಲಿ ಕೇಳಿ ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆದಿತ್ಯ ಹೆಗಡೆ ಯಡೂರು. ಯಕ್ಷಗಾನದ ಇಂದಿನ ಸ್ಥಿತಿ…
ಬಂಟ್ವಾಳ : ಬಿ .ವಿ. ಕಾರಂತ ರಂಗಭೂಮಿಕಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಬಿ. ವಿ. ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ದ ಸಮಾರೋಪ ಸಮಾರಂಭ ದಿನಾಂಕ 19-05-2024ರ ಭಾನುವಾರದಂದು ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ನ್ಯಾಯವಾದಿ, ನೋಟರಿ ಹಾಗೂ ವಕೀಲರ ಸಂಘ ಬಂಟ್ವಾಳದ ಮಾಜಿ ಅಧ್ಯಕ್ಷರಾದ ಎಂ. ಅಶ್ವನಿ ಕುಮಾರ್ ರೈ ಮಾತನಾಡಿ “ಚರಿತ್ರೆಯ ಕುರಿತ ಅರಿವು ನಮಗಿರಬೇಕು. ಬಿ. ವಿ. ಕಾರಂತರ ನೆನಪನ್ನು ಹುಟ್ಟೂರಿನವರು ನೆನಪಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ನಾಟಕೋತ್ಸವ ಏರ್ಪಡಿಸುವ ಮೂಲಕ ಅವರ ಕೆಲಸ ಕಾರ್ಯಗಳನ್ನು ನೆನಪಿಸುವ ಕಾರ್ಯ ನಡೆಯುತ್ತಿದೆ.” ಎಂದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಶಿವಮೊಗ್ಗದ ಕಮಲಾ ನೆಹರೂ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಭೂಷಣ ಎಚ್. ಎಸ್. ಮಾತನಾಡಿ “ಮಕ್ಕಳನ್ನು ರಂಗಚಟುವಟಿಕೆಗಳಿಂದ ವಿಮುಖರನ್ನಾಗಿಸಿ, ಯಾಂತ್ರಿಕವಾಗಿ ಇಂದು ಟ್ಯೂಷನ್ಗಳಿಗೆ ಕಳುಹಿಸಲಾಗುತ್ತಿದೆ. ಆದರೆ ನಾಟಕಾಭ್ಯಾಸ ಮಾಡಿದ ಮಕ್ಕಳು ಏಕಾಗ್ರತೆಯನ್ನು…
ಮಂಗಳೂರು : ಕೋಡಿಕಲ್ನ ಸರಯೂ ಬಾಲ ಯಕ್ಷ ವೃಂದದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 24ನೇ ವರ್ಷದ ‘ಸರಯೂ ಸಪ್ತಾಹ – 2024’ ಸಾಧಕ ಸಮ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮಗಳನ್ನು ದಿನಾಂಕ 25-05-2024ರಿಂದ 31-05-2024ರವರೆಗೆ ಸಂಜೆ 5ರಿಂದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 25-05-2024ರಂದು ಸಂಜೆ 5 ಗಂಟೆಗೆ ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಸಪ್ತಾಹ ಉದ್ಘಾಟಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಶ್ರೀ ದೇವಿ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ದಿನಾಂಕ 26-05-2024ರಂದು ಬೆಳಗ್ಗೆ 9ರಿಂದ ‘ಮಹಿಳಾ ಯಕ್ಷ ಸಂಭ್ರಮ’ ನಡೆಯಲಿದೆ. ಕೋಡಿಕಲ್ನ ಸರಯೂ ಮಹಿಳಾ ವೃಂದದಿಂದ ‘ವೀರ ವೀರೇಶ’, ಜಪ್ಪು ಶ್ರೀ ರಾಮ ಕ್ಷತ್ರಿಯ ಮಹಿಳಾ ವೃಂದದಿಂದ ‘ಶ್ರೀಕೃಷ್ಣ ಲೀಲಾರ್ಣವ’, ಸುರತ್ಕಲ್ನ ಯಕ್ಷಕಲಾ ಮಹಿಳಾ ತಂಡದಿಂದ ‘ಸುಧನ್ವ ಮೋಕ್ಷ’, ಕದ್ರಿ ಯಕ್ಷ ಮಂಜುಳಾ ತಂಡದಿಂದ ‘ಅತಿಕಾಯ ಮೋಕ್ಷ’ ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ. ಸಪ್ತಾಹದ…
ಬೆಂಗಳೂರು : ಸ್ವಾಭಿಮಾನಿ ಕರ್ನಾಟಕ ವೇದಿಕೆ (ರಿ.) ಬೆಂಗಳೂರು ಕೊಡಮಾಡುವ 2023ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ನಾಡಿನ ಆರು ಖ್ಯಾತ ಬರಹಗಾರರ ಪುಸ್ತಕಗಳು ಆಯ್ಕೆಯಾಗಿವೆ. ಕನ್ನಡ ಸಾಹಿತ್ಯ ಹಾಗೂ ಚಳುವಳಿಯಲ್ಲಿ ಕ್ರಿಯಾಶೀಲವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ 2023ರ ಸಾಲಿನ ಕೃತಿಗಳಲ್ಲಿ ಐದು ವಿವಿಧ ವಿಭಾಗದ ಕೃತಿಗಳನ್ನು ಆಯ್ಕೆ ಮಾಡಿದ್ದು, ಕಥೆ, ಅನುವಾದ, ಕವನ, ಪ್ರವಾಸ, ಲೇಖನ ಹಾಗೂ ವ್ಯಕ್ತಿ ಚಿತ್ರಣದ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಲಬುರಗಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎಚ್. ಟಿ. ಪೋತೆ ಇವರ ಪ್ರವಾಸ ಕಥನ ‘ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’, ಎಚ್. ಎಸ್. ಎಂ. ಪ್ರಕಾಶ ಇವರ ಅನುವಾದ ಕೃತಿ ‘ನಮ್ಮಂಥ ಬಲ್ಲಿದರು’, ಫಾತಿಮಾ ರಲಿಯಾ ಇವರ ಕಥಾ ಸಂಕಲನ ‘ಒಡೆಯಲಾರದ ಒಡಪು’, ಸಂತೋಷ ನಾಯಿಕ ಇವರ ಕವಿತೆಗಳ ಕೃತಿ ‘ಹೊಸ ವಿಳಾಸದ ಹೆಜ್ಜೆಗಳು’, ಇಂದಿರಾ ಕೃಷ್ಣಪ್ಪ ಇವರ ವ್ಯಕ್ತಿ ಚಿತ್ರಣ ‘ಸಾವಿತ್ರಿಬಾ ಪುಲೆ’,…