Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಪಾಕ್ಷಿಕ ತಾಳಮದ್ದಳೆ ಕಾರ್ಯಕ್ರಮದಲ್ಲಿ ‘ಭರತಾಗಮನ’ ಎಂಬ ಪ್ರಸಂಗದ ತಾಳಮದ್ದಳೆಯು ದಿನಾಂಕ 18-05-2024ರಂದು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಮಾಸ್ಟರ್ ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಹರಿಣಾಕ್ಷಿ ಜೆ. ಶೆಟ್ಟಿ), ಭರತ (ಶುಭಾ ಜೆ.ಸಿ. ಅಡಿಗ), ವಸಿಷ್ಠ (ಮನೋರಮಾ ಜಿ. ಭಟ್), ಲಕ್ಷ್ಮಣ (ಭಾರತೀ ರೈ ಅರಿಯಡ್ಕ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಶುಭಾ ಅಡಿಗ ಪ್ರಾಯೋಜಿಸಿದ್ದರು.
ಉಪ್ಪಳ : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕವಾದ ‘ಸ್ವರ ಚಿನ್ನಾರಿ’ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಕಾಸರಗೋಡು ಕನ್ನಡ ಹಬ್ಬ’ದ ಪ್ರಯುಕ್ತ ಉಪ್ಪಳ ಐಲದ ತರುಣ ಕಲಾ ವೃಂದ (ರಿ.) ಇವರಿಂದ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮ ‘ಕನ್ನಡ ಉಸಿರು’ ದಿನಾಂಕ 25-05-2024ರಂದು ಸಂಜೆ 5-00 ಗಂಟೆಗೆ ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಐಲ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಕೋಡಿಬೈಲು ನಾರಾಯಣ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಖ್ಯಾತ ನಟರು ಮತ್ತು ಸಾಹಿತಿಯಾದ ಶ್ರೀ ಶಶಿರಾಜ್ ಕಾವೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಸಂಗೀತ ಗುರುಗಳಾದ ಶ್ರೀಮತಿ ಸುನೀತಾ ಬೈಪಾಡಿತ್ತಾಯ ಇವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಯಾಗಿ ಖ್ಯಾತ ನಟರು ಗಾಯಕರಾದ ಶ್ರೀ ಮೈಮ್ ರಾಮದಾಸ್ ಇವರು ಭಾಗವಹಿಸಲಿರುವರು ಎಂದು ರಂಗಚಿನ್ನಾರಿಯ ನಿರ್ದೇಶಕರಾದ ಶ್ರೀ ಕಾಸರಗೋಡು ಚಿನ್ನಾ ಇವರು ತಿಳಿಸಿರುತ್ತಾರೆ.
ತಾವರಗೇರಾ: ಮೇ ಸಾಹಿತ್ಯ ಮೇಳದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 18-05-2024 ರಂದು ಕೊಪ್ಪಳದ ತಾವರಗೇರಾ ಬುದ್ಧ ವಿಹಾರದ ಮಾನವ ಬಂಧುತ್ವ ವೇದಿಕೆಯ ಬುದ್ಧ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ “ಸಾಹಿತ್ಯ ಜನರ ನಾಡಿ ಮಿಡಿತವಾಗಬೇಕು. ಸಾಹಿತ್ಯ ಖಡ್ಗವಾಗಬೇಕು. ಸಂವಿಧಾನ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಸಂವಿಧಾನದ ಮೂಲಕ ನ್ಯಾಯದ ಧ್ವನಿಯನ್ನು ಎತ್ತಿ ಹಿಡಿದಿದೆ. ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ ಸಂವಿಧಾನವನ್ನು ಬದಲಾಯಿಸುವ ಹಂತದಲ್ಲಿ ಇರುವುದು ವಿಪರ್ಯಾಸ. ಇಂತಹ ವಿಷಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಆದ್ದರಿಂದ ಮೇ 18, 19,20 ಮೂರು ದಿನ ಶಿಬಿರ ಏರ್ಪಡಿಸಲಾಗಿದೆ.” ಎಂದು ಹೇಳಿದರು. ಶಿಬಿರವನ್ನು ಉದ್ಘಾಟಿಸಿದ ಹಿರಿಯ ಚಿತ್ರ ಕಲಾವಿದ ಬಿ. ಎಲ್. ಚವ್ಹಾಣ್ ಮಾತನಾಡಿ “ಎಲ್ಲ ಸಮುದಾಯವು ಒಂದಾಗಬೇಕು ಎನ್ನುವುದು ನಮ್ಮ ಕಲ್ಪನೆ. ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳನ್ನು ಶಾಲಾ ಕಾಲೇಜುಗಳಲ್ಲಿ ನಮ್ಮ ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ. ಲಲಿತ ಕಲೆಯಿಂದ…
ರಾಯಚೂರು : ಸಮುದಾಯ ರಾಯಚೂರು ಪ್ರಸ್ತುತ ಪಡಿಸುವ ನೂತನ ನಾಟಕ ‘ರಕ್ತ ವಿಲಾಪ’ ಇದರ ಪ್ರಥಮ ಪ್ರದರ್ಶನವು ದಿನಾಂಕ 19-05-2024ರ ಭಾನುವಾರದಂದು ರಾಯಚೂರಿನ ಸಿದ್ದರಾಮ ಜಂಬಲದನ್ನಿ ರಂಗಮಂದಿರದಲ್ಲಿ ಸಂಜೆ ಘಂಟೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ. ಡಾ. ವಿಕ್ರಮ ವಿಸಾಜಿ ವಿರಚಿತ ಈ ನಾಟಕದ ನಿರ್ದೇಶನವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ಮಾಡಿದ್ದು, ಸಹ ನಿರ್ದೇಶನದಲ್ಲಿ ನಿರ್ಮಲಾ ವೇಣುಗೋಪಾಲ್ ಸಹಕರಿಸಿದ್ದಾರೆ. ಇನ್ಸಾಫ್ ಹೊಸಪೇಟೆ ನಾಟಕಕ್ಕೆ ಸಂಗೀತ ನೀಡಲಿದ್ದು, ಲಕ್ಷ್ಮಣ್ ಮಂಡಲಗೇರ ಬೆಳಕಿನ ವಿನ್ಯಾಸ ಮಾಡಲಿದ್ದಾರೆ. ವೆಂಕಟ ನಾರಸಿಂಹಲು ಕಲಾವಿದರಿಗೆ ಪ್ರಸಾದನ ಮಾಡಲಿದ್ದು, ಎಂ. ಸುರೇಶ್ ಚಿಕ್ಕಸೂಗೂರು ಹಾಗೂ ಎನ್. ನಾಗರಾಜ್ ಸಿರಿವಾರ ರಂಜಸಜ್ಜಿಕೆ ನಿರ್ವಹಿಸಲಿದ್ದಾರೆ. ‘ರಕ್ತ ವಿಲಾಪ’ : ಕಾಲಗರ್ಭದಿಂದ ಸತ್ಯವನ್ನು ಹೆಕ್ಕಿ ತೆಗೆಯಲು ಹಂಬಲಿಸುವ ಸಂಶೋಧಕನ ತಳಮಳಗಳನ್ನು ‘’ರಕ್ತ ವಿಲಾಪ ನಾಟಕ ಅನನ್ಯವಾಗಿ ಅಭಿವ್ಯಕ್ತಿಸಿದೆ. ಸತ್ಯವೆಂಬ ಅಗ್ನಿದಿವ್ಯವನ್ನು ಹಿಡಿಯಲು ಯತ್ನಿಸಿ ಮೈ ಸುಟ್ಟುಕೊಂಡ ಜ್ಞಾನಿಗಳ ಪರಂಪರೆಯೇ ಲೋಕದಲ್ಲಿದೆ. ಲೋಕವು ತಾನು ಕಟ್ಟಿಕೊಂಡು ಬಂದ ನಂಬಿಕೆಗಳ ಗುಳ್ಳೆಯೊಡೆಯುವುದನ್ನು ಸಹಿಸದು. ಸತ್ಯದ ಸೂಜಿಮೊನೆ ಸುಮ್ಮನಿರುವುದನ್ನು ಅರಿಯದು.…
ಬಂಟ್ವಾಳ : ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 19-05-2024ರಂದು ಬೆಳಗ್ಗೆ 8.30ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ‘ಪತ್ತನಾಜೆ’ ಜಾನಪದ ಹಬ್ಬ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಡಾ. ಮಂಜಮ್ಮ ಜೋಗತಿ ಉದ್ಘಾಟಿಸಲಿದ್ದಾರೆ. ಪತ್ತನಾಜೆಯ ವಿಶೇಷತೆಯನ್ನು ಜನಮಾನಸಕ್ಕೆ ತಿಳಿಯಪಡಿಸುವ ಜತೆ ತುಳುನಾಡಿನ ಜನಪದ ಆಹಾರ ಪದ್ಧತಿಯನ್ನು ಪರಿಚಯಿಸುವ ದೃಷ್ಟಿಯಿಂದ ‘ಜಾನಪದ ಆಹಾರ ಮೇಳ’, ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ಉದ್ದೇಶದಿಂದ ‘ಸಾಂಸ್ಕೃತಿಕ ಮೇಳ’, ತುಳುನಾಡಿನ ಆಟಕೂಟಗಳ ‘ಜಾನಪದ ಕ್ರೀಡಾ ಕೂಟ’ ಹಾಗೂ ಜನಪದರು ಬಳಸುತ್ತಿದ್ದ ಭೌತಿಕ ಪರಿಕರಗಳ ಪ್ರದರ್ಶನ ‘ಜಾನಪದ ವಸ್ತು ಪ್ರದರ್ಶನ’ವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಉಜಿರೆ ಎಸ್.ಡಿ.ಎಂ.ನ ಕನ್ನಡ ಸಹಪ್ರಾಧ್ಯಾಪಕಿ ಡಾ. ದಿವಾ ಕೊಕ್ಕಡ ಪತ್ತನಾಜೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಮಾಣೂರು ಅಧ್ಯಕ್ಷತೆ ವಹಿಸಲಿದ್ದು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ…
ಉಡುಪಿ : ಬೆಂಗಳೂರಿನ ಸರ್ಜಾಪುರ, ಬಿಕ್ಕನಹಳ್ಳಿ ಮುಖ್ಯರಸ್ತೆ, ಬುರುಗುಂಟೆ ಹಳ್ಳಿ, ಸರ್ವೆ ನಂ.66 ಇಲ್ಲಿರುವ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ವತಿಯಿಂದ ಉಡುಪಿ ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಡಾ. ಶಿವರಾಮ ಕಾರಂತರ ‘ಬಾಳ್ವೆಯೇ ಬೆಳಕು’ ಪುಸ್ತಕದ ಬಗೆಗಿನ ವಿಶ್ಲೇಷಣಾತ್ಮಕ ಬರಹ ಬರೆದು ಕಳುಹಿಸಬೇಕು. ಸೂಚನೆಗಳು: * ವಿದ್ಯಾರ್ಥಿಯ ಕಾಲೇಜಿನ ಐಡಿ ಕಾರ್ಡಿನ ಪ್ರತಿ ಮತ್ತು ವಿದ್ಯಾರ್ಥಿಯ ಸ್ವಂತ ಬರಹವೆಂದು ಪ್ರಮಾಣೀಕರಿಸಲಾದ ಸಂಬಂಧಿತ ಕಾಲೇಜಿನ ಪ್ರಿನ್ಸಿಪಾಲರ ಪತ್ರ ಲಗತ್ತಿಸಿರಬೇಕು. * ಪ್ರತಿ ಕಾಲೇಜಿನಿಂದ ಗರಿಷ್ಠ ಐದು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. * ಗರಿಷ್ಠ ಮಿತಿ: ಫುಲ್ಸ್ಟೇಪ್ 6-8 ಪುಟ ಅಥವಾ 1500ರಿಂದ 2000 ಪದಗಳು. * ಪ್ರಬಂಧಗಳನ್ನು ದಿನಾಂಕ 25-05-2024ರೊಳಗೆ ಡಾ. ನಿಕೇತನ, ಎಚ್.ಓ.ಡಿ., ಕನ್ನಡ ವಿಭಾಗ. ಸರಕಾರಿ ಮಹಿಳಾ ಕಾಲೇಜು, ಅಜ್ಜರಕಾಡು, ಉಡುಪಿ -576 101 ಇವರಿಗೆ ತಲುಪಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ…
ಮಂಗಳೂರು : ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಕ್ಕಲಡ್ಕ ಯುವಕ ಮಂಡಲ (ರಿ) ಹಾಗೂ ಡಿ. ವೈ. ಎಫ್. ಐ. ಘಟಕದ ಜಂಟಿ ಆಶ್ರಯದಲ್ಲಿ ಉಚಿತವಾಗಿ ನಡೆಯುವ ‘ಆಟ ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 05-05-2024ರಂದು ಬಜಾಲ್ ಇಲ್ಲಿನ ಪಕ್ಕಲಡ್ಕ ಯುವಕ ಮಂಡಲದಲ್ಲಿ ನಡೆಯಿತು. ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು ಮಾತನಾಡಿ “ಶಿಕ್ಷಣ ವ್ಯವಸ್ಥೆ ಸಂಪೂರ್ಣ ಖಾಸಗೀಕರಣಗೊಂಡು ಬರೀ ವ್ಯಾಪಾರದ ಹಿತದೃಷ್ಟಿಯನ್ನು ಹೊಂದಿದೆ. ವಿದ್ಯಾರ್ಥಿಗಳನ್ನು ಅವರ ಸರಕಾಗಿಸಿ ಅವರಲ್ಲಿ ಶಿಕ್ಷಣದ ಒತ್ತಡವನ್ನು ತರುವ ಮೂಲಕ ಬರಿಯ ಅಂಕದ ಫಲಿತಾಂಶವನ್ನು ತರಬಯಸುವ ಯಾಂತ್ರಿಕತೆಗೆ ತಳ್ಳಿದ್ದಲ್ಲದೆ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳಿಗೂ ಇಲ್ಲಿ ಯಾವೊಂದು ಅವಕಾಶಗಳೂ ಇಲ್ಲದೇ ಇರೋದು ಬಹಳ ದುರಂತ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳಬೇಕಾದರೆ ಇಂತಹ ಬೇಸಿಗೆ ಶಿಬಿರಗಳು ಪರಿಣಾಮಕಾರಿ. ಶಿಕ್ಷಣದ ಒತ್ತಡಕ್ಕೆ ಒಳಗಾದ ಮಕ್ಕಳು ಇಂದು ಆಟದ ಮೈದಾನ ಕಡೆಗೆ…
ಬಂಟ್ವಾಳ : ಬಂಟ್ವಾಳ ಮಂಚಿಯ ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಮೂರು ದಿನಗಳ ‘ಮಂಚಿ ನಾಟಕೋತ್ಸವ’ದ ಉದ್ಘಾಟನಾ ಸಮಾರಂಭವು ದಿನಾಂಕ 17-05-2024 ರಂದು ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಉಡುಪಿ ಜಾದೂಗಾರ ಪ್ರೊ. ಶಂಕರ್ “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಬಿ. ವಿ. ಕಾರಂತರು ಕನ್ನಡ ನಾಡಿನ ಶ್ರೇಷ್ಠ ಕಲಾವಿದರಾಗಿ ಗೌರವ ತಂದು ಕೊಟ್ಟಿರುವುದನ್ನು ಇಲ್ಲಿನ ಜನತೆ ‘ಮಂಚಿ ನಾಟಕೋತ್ಸವ’ದ ಮೂಲಕ ಪ್ರತಿ ವರ್ಷ ನೆನಪಿಸುತ್ತಿರುವುದು ಶ್ಲಾಘನೀಯ. ಜಾದೂ ಹಾಗೂ ನಾಟಕ ಒಂದಕ್ಕೊಂದು ಪೂರಕವಾದ ಕಲೆ. ಮಂಚಿಯಲ್ಲಿ ಬಿ. ವಿ. ಕಾರಂತ ರಂಗ ಮಂದಿರ ನಿರ್ಮಾಣವಾಗಲಿ.” ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ ಜವಳಿ ಶಿವಮೊಗ್ಗ ಮಾತನಾಡಿ “ಬಿ. ವಿ. ಕಾರಂತರ ನಾಟಕಗಳಲ್ಲಿ ವೈಶಿಷ್ಟ್ಯ ಭಿನ್ನವಾಗಿ ಗುರುತಿಸಿಕೊಂಡಿದೆ.” ಎಂದರು. ಕ್ಯಾಂಪ್ಕೊ ನಿರ್ದೇಶಕ ಜಯಪ್ರಕಾಶ್ ನಾರಾಯಣ್ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಕಜೆ ರಾಮಚಂದ್ರ ಭಟ್…
ಉಡುಪಿಯ ಪೆರ್ಡೂರಿನ ಕಾರ್ ಸ್ಟ್ರೀಟ್ ನಲ್ಲಿ ಹೊರಾಂಗಣ ಚಿತ್ರ ಕಾರ್ಯಾಗಾರ | ಮೇ 19 ಉಡುಪಿ : ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಮತ್ತು ಆರ್ಟಿಸ್ಟ್ಸ್ ಫೋರಂ ಉಡುಪಿ ಇವುಗಳ ಸಹಯೋಗದಲ್ಲಿ ಹೊರಾಂಗಣ ಚಿತ್ರ ಕಾರ್ಯಾಗಾರವನ್ನು ದಿನಾಂಕ 19-05-2024ರಂದು ಬೆಳಿಗ್ಗೆ 6.30ಕ್ಕೆ ಉಡುಪಿಯ ಪೆರ್ಡೂರಿನ ಕಾರ್ ಸ್ಟ್ರೀಟ್ ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ ಚಿತ್ರ ಬಿಡಿಸಲು ಹಾಗೂ ಹಿರಿಯ ಕಲಾವಿದರ ಪ್ರಾತ್ಯಕ್ಷಿಕೆ ವೀಕ್ಷಿಸಲು ಅವಕಾಶವಿದೆ. ಎಲ್ಲಾ ಕಲಾವಿದರು ಮತ್ತು ಛಾಯಾಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜನಾರ್ದನ ಹಾವಂಜೆ 9845650544 ಮತ್ತು ಗಣೇಶ್ ಕೆ. 7760218447 ಸಂಪರ್ಕಿಸಬಹುದು.
ಮಂಗಳೂರು: ಮಂಗಳೂರಿನ ಚಿಣ್ಣರ ಚಾವಡಿ ಮತ್ತು ಸಂತ ಮದರ್ ತೆರೇಸ ವಿಚಾರ ವೇದಿಕೆ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ ‘ಚಿಣ್ಣರ ಕಲರವ-2024’ ಮಕ್ಕಳ ಕಲಿಕಾ ಕಾರ್ಯಾಗಾರವು ದಿನಾಂಕ 13-05-2024 ರಂದು ಉದ್ಘಾಟನೆಗೊಂಡಿತು. ಶಿಬಿರವನ್ನು ಉದ್ಘಾಟಿಸಿದ ಜನಪದ ವಿದ್ವಾಂಸ ಹಾಗೂ ನಿವೃತ್ತ ಶಿಕ್ಷಕ ಕೆ.ಕೆ ಪೇಜಾವರ ಮಾತನಾಡಿ “ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ, ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಸಮಾಜವು ಅಸ್ವಸ್ಥಗೊಂಡಾಗ ಮಕ್ಕಳು ಕೂಡ ಬದಲಾಗುತ್ತಾರೆ. ಹಾಗಾಗಿ ಮಾನವೀಯ ಗುಣಗಳನ್ನು ಮರು ಸ್ಥಾಪಿಸುವ ಕೆಲಸ ಶಿಕ್ಷಣದಿಂದ ಆಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ.” ಎಂದು ಹೇಳಿದರು. ಸೇಂಟ್ ಜೆರೋಸಾ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಅರ್ಪಿತಾ ಮಾತನಾಡಿ “ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಗಮನ ಹರಿಸಿ ನಿರಂತರ ಶ್ರಮ ಪಟ್ಟು ಅಧ್ಯಯನ ಮಾಡಿ ಗುರಿಯತ್ತ ಮುನ್ನಡೆಯಬೇಕು. ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು.” ಎಂದರು. ಚಿಂತಕ ಮಾಕ್ಸಿಂ ಡಿಸೋಜ ಬೋಂದೆಲ್ ಹಾಗೂ ಸಮುದಾಯ ಕರ್ನಾಟಕದ ರಾಜ್ಯ…