Author: roovari

ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವತಿಯಿಂದ ನೀಡಲಾಗುವ ‘ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ’ಗೆ ಕತೆಗಾರ ದಯಾನಂದ ಅವರ ‘ಬುದ್ಧನ ಕಿವಿ’ ಕಥಾ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು ರೂ.15,000/- ನಗದು, ಬೆಳ್ಳಿ ಫಲಕ ಒಳಗೊಂಡಿದೆ.  ಈ ಸಮಿತಿಗೆ ಲೇಖಕರಾದ ಎಚ್.ಆರ್. ಸುಜಾತ, ಪ್ರೊ. ಕೆ. ಫಣಿರಾಜ್, ಟಿ.ಎಸ್. ಗೊರವರ ನಿರ್ಣಾಯಕರಾಗಿದ್ದರು. ದಯಾನಂದ : 14 ಏಪ್ರಿಲ್ 1988ರಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಜನಿಸಿದ ಇವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿರುವ ಇವರು ‘ಸಮಯ ಟಿ.ವಿ.’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಮುಂತಾದ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕಗಳ ಕಾಲ ಪತ್ರಿಕೋದ್ಯಮದ ಅನುಭವ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2017ರಲ್ಲಿ ಪ್ರಕಟಗೊಂಡ ‘ದೇವರು ಕಚ್ಚಿದ ಸೇಬು’ ಇವರ ಪ್ರಥಮ ಕಥಾ ಸಂಕಲನ. 2005ರಲ್ಲಿ ಪ್ರಕಟಗೊಂಡ ‘ಬಾಳಪೂರ್ಣ’ ನಾಟಕ ‘ಛಂದಪುಸ್ತಕ’ ಬಹುಮಾನ ಪಡೆದಿದೆ. ಶ್ರೀಯುತರು ರಚಿಸಿದ ಕತೆಗಳಿಗ ಗುಲ್ಬರ್ಗ ವಿಶ್ವವಿದ್ಯಾಲಯದ ‘ಚಿನ್ನದ‌ ಪದಕ’,…

Read More

ಮಂಗಳೂರು : ಕುಡ್ಲ ಆರ್ಟ್ಸ್ ಫೆಸ್ಟಿವಲ್ ಮತ್ತು ರಾಮಕೃಷ್ಣ ಮಠ ಪ್ರಸ್ತುತ ಪಡಿಸುವ ವಿಶ್ವವಿಖ್ಯಾತ ರಂಜನಿ ಮತ್ತು ಗಾಯತ್ರಿ ಇವರಿಂದ ‘ರಾಗ ಲಹರಿ’ ಕರ್ನಾಟಕ ಸಂಗೀತ ಗಾಯನ ಕಛೇರಿಯು ದಿನಾಂಕ 4 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ನಡೆಯಲಿದೆ. ರಂಜನಿ-ಗಾಯತ್ರಿ (RaGa sisters) ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುಗರಿಗೆ ಈ ಸಿರಿಕಂಠದ ಜೋಡಿಯ ಹೆಸರು ಚಿರಪರಿಚಿತ. ಇವರ ಯುಗಳ ಗಾಯನ ಜಗತ್ಪಸಿದ್ದ. ಇವರು ರಾಗಗಳ ಸ್ವರಮಾಲೆ ಪೋಣಿಸಿದರೆಂದರೆ ಕಛೇರಿ ಮುಗಿದರೂ ಮನದಲ್ಲಿ ರಾಗಗಳದ್ದೇ ಗುಂಗು. ರಾಗ-ತಾನ-ಪಲ್ಲವಿ ಹಾಡುವುದನ್ನು ಕೇಳುವುದೇ ಪರಮಾನಂದ. ಚೆನ್ನೈಯಲ್ಲಿ ನೆಲೆಸಿರುವ ಈ ಸಹೋದರಿಯರು, ಎಳೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಪಕ್ವತೆ ಸಾಧಿಸಿದವರು. ಈ ಯುಗಳ ಸಹೋದರಿಯರು ವಿಶ್ವವೇದಿಕೆವರೆಗೆ ಹೋದದ್ದು ಗಾಯಕಿಯರಾಗಿ, ಗಾಯನ ಕಲಿಕೆಗೂ ಮುನ್ನ ಇಬ್ಬರೂ ಪಿಟೀಲು ವಾದಕಿಯರಾಗಿದ್ದರು. ಹದಿಹರೆಯದಲ್ಲೇ ಘಟಾನುಘಟಿ ಕಲಾವಿದರಾಗಿದ್ದ ಡಿ.ಕೆ. ಪಟ್ಟಮ್ಮಾಳ್, ಬಾಲಮುರಳಿಕೃಷ್ಣ, ಟಿ. ವಿಶ್ವನಾಥನ್‌ನಂಥವರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಸೈ ಎನಿಸಿಕೊಂಡವರು. ದೇಶ ವಿದೇಶಗಳಲ್ಲಿ ಸಂಗೀತದ ಕಂಪನ್ನು ಪಸರಿಸಿದ…

Read More

ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ. ಪನ್ನಗಾ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಪಿ.ಜಿ. ಪನ್ನಗಾ ರಾವ್ ಇವರು ಉಡುಪಿಯ ಶ್ರೀ ಗಣೇಶ್ ರಾವ್ ಹಾಗೂ ಶ್ರೀಮತಿ ಸುಮನಾ ಜಿ. ರಾವ್ ದಂಪತಿಗಳ ಸುಪುತ್ರಿ. ಉಡುಪಿಯ ಸೃಷ್ಟಿ ನೃತ್ಯಕಲಾ ಕುಟೀರ ಸಂಸ್ಥೆಯ ನಿರ್ದೇಶಕಿಯಾಗಿರುವ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿರುತ್ತಾರೆ. ಈವರೆಗೆ 600ಕ್ಕೂ ಮಿಕ್ಕಿ ಭರತನಾಟ್ಯ ಪ್ರದರ್ಶನವನ್ನು ನೀಡಿರುವ ಈಕೆ ವಿದ್ಯಾರ್ಜನೆಯಲ್ಲಿಯೂ ಉನ್ನತ ಸಾಧನೆಯನ್ನು ಮಾಡಿರುತ್ತಾರೆ. ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ ನಡೆಸುವ ಭರತನಾಟ್ಯ ಜ್ಯೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ದೇಶದಾದ್ಯಂತ ನಡೆಯುವ ಪ್ರತಿಷ್ಠಿತ ಭರತನಾಟ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ‘ಶ್ರೇಷ್ಠಕಲಾಯಶಸ್ವಿ’, ‘ನಾಟ್ಯ ಪ್ರವೀಣೆ, ‘ನಟವಾರ್ ಗೋಪಾಲಕೃಷ್ಣ ನ್ಯಾಷನಲ್ ಅವಾರ್ಡ್’, ‘ಕಲಾ ಸೌರಭ’, ‘ನೃತ್ಯ ವೃಂದ 2020’, ‘ನಾಟ್ಯ ಪ್ರಿಯ’, ‘ನಾದನಂ ಶೋಭನಮ್ 2020’, ‘ನಾಟ್ಯ ಮಯೂರಿ’ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿರುತ್ತಾರೆ.

Read More

ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಆಶ್ರಯದಲ್ಲಿ ಏಳನೇ ವರ್ಷದ ‘ಯಕ್ಷ ವೈಭವ’ ಕಾರ್ಯಕ್ರಮವನ್ನು ದಿನಾಂಕ 03 ಆಗಸ್ಟ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 4-00 ಗಂಟೆಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಯಕ್ಷ ಛಾಯಾಚಿತ್ರ ಪ್ರದರ್ಶನ, ಪ್ರಶಸ್ತಿ ಪ್ರದಾನ ಮತ್ತು ಯಕ್ಷ ವೈಭವಗಳು ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಶ್ರೀ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಇವರಿಗೆ ‘ಭ್ರಾಮರೀ ಯಕ್ಷ ಮಣಿ ಪ್ರಶಸ್ತಿ’ ಹಾಗೂ ಅಪೂರ್ವ ಯಕ್ಷ ಛಾಯಾಚಿತ್ರಗಳ ಸಂಗ್ರಹಕರಾದ ಶ್ರೀ ಮನೋಹರ ಯಸ್. ಕುಂದರ್ ಎರ್ಮಾಳ್ ಬಡ ಇವರ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ (ರಿ.) ಕೈರಂಗಳ ಇವರಿಗೆ ‘ಭ್ರಾಮರೀ ಯಕ್ಷ ಸೇವಾ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಸಂಜೆ 4-00 ಗಂಟೆಗೆ ಶ್ರೀ ಮನೋಹರ ಯಸ್. ಕುಂದರ್ ಎರ್ಮಾಳ್ ಬಡ ಇವರ ಸಂಗ್ರಹದ ಅಪೂರ್ವ ಯಕ್ಷ ಛಾಯಾಚಿತ್ರಗಳ ಪ್ರದರ್ಶನ ಮತ್ತು ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಪಂಚವಟಿ’, ‘ಕಂಸ ವಿವಾಹ’ ಸುಧನ್ವ ಮೋಕ್ಷ’ ಹಾಗೂ…

Read More

ಮಂಗಳೂರು: ಕೊಂಕಣಿ ಸಾಹಿತಿ, ಕಲಾವಿದರು ಹಾಗೂ ಸಂಘ ಸಂಸ್ಥೆಗಳು ತಮ್ಮ ಮಾಹಿತಿ, ವಿಳಾಸ ಮತ್ತಿತರ ವಿವರಗಳನ್ನು ಅಕಾಡೆಮಿಯ ಕಚೇರಿಗೆ ಕಳುಹಿಸುವಂತೆ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮನವಿ ಮಾಡಿದೆ. ವಿವರಗಳನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆಯ ಕಟ್ಟಡ, ಲಾಲ್‌ಬಾಗ್, ಮಂಗಳೂರು 575003 ಈ ವಿಳಾಸಕ್ಕೆ ಕಳುಹಿಸಬೇಕೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ  : 0824 2453167

Read More

ಮಂಗಳೂರು : ಚೇಳ್ಯಾರು ಇಲ್ಲಿರುವ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ವತಿಯಿಂದ ‘ನಾಟ್ಯಾಂಜಲಿ ನೃತ್ಯ ರಂಜನಿ ಯುಗ್ಮ ಕುಸುಮಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 4 ಆಗಸ್ಟ್ 2024 ಮತ್ತು 11 ಆಗಸ್ಟ್ 2024ರಂದು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ ಎಡನೀರು ಮಠ ಇವರ ಅನುಗ್ರಹದೊಂದಿಗೆ ನೀಡುವ ಈ ಕಾರ್ಯಕ್ರಮವನ್ನು ಗುರು ಉಳ್ಳಾಲ ಶ್ರೀ ಮೋಹನ್ ಕುಮಾರರಿಗೆ 90 ವರ್ಷ ತುಂಬಿದ ಪ್ರಯುಕ್ತ ನಾಟ್ಯ ಮೋಹನ ನವತ್ಯುತ್ಸವ ಆಚರಣೆ ಸಂಭ್ರಮದಲ್ಲಿ ಗುರುಗಳಿಗೆ ಅರ್ಪಣೆ ಮಾಡಲಾಗಿದೆ. ದಿನಾಂಕ 4 ಆಗಸ್ಟ್ 2024ರಂದು ಸಂಜೆ 4-44ಕ್ಕೆ ‘ನಾಟ್ಯಾಂಜಲಿ ನೃತ್ಯ ರಂಜನಿ’ ಹಾಗೂ ‘ನಾಟ್ಯಾಂಜಲಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ಡಾ. ಶ್ರೀಧರ್ ಇವರಿಗೆ ‘ನಾಟ್ಯಾಂಜಲಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕರ್ನಾಟಕ ಕಲಾಶ್ರೀ ಗುರು ಪ್ರವೀಣ್…

Read More

ಬೆಂಗಳೂರು : ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2025ನೇ ಸಾಲಿನ ‘ಟೊಟೊ ಪುರಸ್ಕಾರ’ಕ್ಕಾಗಿ ‘ಟೊಟೊ ಫಂಡ್ಸ್ ದಿ ಆರ್ಟ್ಸ್’ ಸಂಸ್ಥೆಯು ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದೆ. ಇಪ್ಪತ್ತೊಂದನೇ ವರ್ಷಕ್ಕೆ ಕಾಲಿಡುತ್ತಿರುವ ‘ಟೊಟೊ ಪುರಸ್ಕಾರ’ವು ರೂಪಾಯಿ ಅರವತ್ತು ಸಾವಿರ ನಗದನ್ನು ಒಳಗೊಂಡಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು ಹಾಗೂ 18 ರಿಂದ 29 ವರ್ಷದೊಳಗಿನ ವಯಸ್ಸಿನವರಾಗಿರಬೇಕು. ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಪುರಸ್ಕಾರವನ್ನು ಸ್ಥಾಪಿಸಲಾಗಿದೆ. ಕಥೆ, ಕವಿತೆ ಅಥವಾ ನಾಟಕ ಪ್ರಕಾರದಲ್ಲಿ ಪ್ರವೇಶಗಳನ್ನು ಕಳಿಸಬಹುದು. ಈ ಮೂರು ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಪ್ರವೇಶಗಳನ್ನು ಕಳುಹಿಸಲು 15 ಸೆಪ್ಟೆಂಬರ್ 2024  ಕೊನೇ ದಿನವಾಗಿದ್ದು, ಪ್ರವೇಶ ಪತ್ರವನ್ನು https:// totofundsthearts.org/  ಡೌನ್ ಲೋಡ್ ಮಾಡಿಕೊಳ್ಳಬಹುದು. ಬರಹ ಮತ್ತು ಪ್ರವೇಶ ಪತ್ರವನ್ನು totokannada@ gmail.comಗೆ ಕಳುಹಿಸಬೇಕು.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗದ 115ನೇ ಸರಣಿಯಲ್ಲಿ ಸಂಸ್ಥೆಯ ಕಲಾವಿದೆ ಕು. ಪ್ರಣಮ್ಯ ಪಾಲೆಚ್ಚಾರು ಇವರ ಪ್ರಥಮ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ 21 ಜುಲೈ 2024ರಂದು ನಡೆಯಿತು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿ.ಜಿ.ಭಟ್ ಇವರು ಅಭ್ಯಾಗತರಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ನಿಶಿ, ಪ್ರೀತಿ ಪ್ರಭು, ಲಾಸ್ಯ ಹಾಗೂ ಆಪ್ತ ಚಂದ್ರಮತಿ ಮುಳಿಯ ಪ್ರಾರ್ಥನೆಗೈದು, ಕುಮಾರಿ ಆದ್ಯ ಮತ್ತು ಮನಿಹ ಕಲಾವಿದರ ಮತ್ತು ಅಭ್ಯಾಗತರ ಪರಿಚಯ ಮಾಡಿದರು. ಕುಮಾರಿ ಆದ್ಯ ಭಟ್ ಪಂಚಾಂಗ ವಾಚನ, ವಿದ್ವಾನ್ ಗಿರೀಶ್ ಕುಮಾರ್ ಶಂಖನಾದಗೈಯುವುದರೊಂದಿಗೆ ಕಾರ್ಯಕ್ರಮದ ನಿರೂಪಣೆ ಮಾಡಿದವರು ಕುಮಾರಿ ವಿಭಾಶ್ರೀ. ವಿದುಷಿ ಅಕ್ಷತ ಕೆ. ‘ವೀರ ರಸ’ದ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದರೊಂದಿಗೆ ಗುರು ದೀಪಕ್ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕುಮಾರಿ ಪ್ರಣಮ್ಯ ಪಾಲೆಚ್ಚಾರು ಇವರ ಭರತನಾಟ್ಯ ಕಾರ್ಯಕ್ರಮದಲ್ಲಿ…

Read More

ಉಡುಪಿ : ಮಣಿಪಾಲದ ಸರಳೇಬೆಟ್ಟು ಇಲ್ಲಿನ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಇವರ ನೇತೃತ್ವದಲ್ಲಿ ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಏರ್ಪಡಿಸಲಾದ ಕಾಸರಗೋಡು ಚಿನ್ನಾ ಇವರ ನಿರ್ದೇಶನದಲ್ಲಿ ರಂಗಸಂಸ್ಕೃತಿ ಶಿಬಿರವು ದಿನಾಂಕ 28 ಜುಲೈ 2024ರಂದು ನಡೆಯಿತು. ಈ ಶಿಬಿರವನ್ನು ಉದ್ಘಾಟಿಸಿದ ಮಾಧವ ಕೃಪಾ ಸ್ಕೂಲ್‌ನ ಉಪ ಪ್ರಾಂಶುಪಾಲರಾದ ಜ್ಯೋತಿ ಸಂತೋಷ್ ಇವರು ಮಾತನಾಡಿ “ಮಕ್ಕಳು ರಂಗಭೂಮಿಯ ಕಲಾವೇದಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಕಷ್ಟ ಎದುರಿಸುವ ಎದೆಗಾರಿಕೆಯೂ ಬರುತ್ತದೆ. ರಂಗ ನಿರ್ದೇಶಕ ಕಾಸರಗೋಡು ಚಿನ್ನಾರವರು ರಂಗ ಸಂಸ್ಕೃತಿ ಮುಖಾಂತರ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಮಹೇಶ್ ಠಾಕೂರ್ ಮಾತನಾಡಿ, “ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ತರಗತಿಗಳನ್ನು ಉಚಿತವಾಗಿ ಏರ್ಪಡಿಸುತ್ತಿದ್ದೇವೆ. ಇದೀಗ ಈ ಸಾಲಿಗೆ ರಂಗಸಂಸ್ಕೃತಿ ಕೂಡ ಸೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ ಪರಿಸರದ ಶಾಲಾ ಕಾಲೇಜುಗಳಲ್ಲಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್…

Read More

ಸಾಲಿಗ್ರಾಮ : ನಾದಾಮೃತ (ರಿ.) ಕೋಟ ಇವರು ಅರ್ಪಿಸುವ ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ (ರಿ.) ಐರೋಡಿ ಇವರ ಸಹಕಾರದೊಂದಿಗೆ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ವು ದಿನಾಂಕ 1 ಆಗಸ್ಟ್ 2024ರಿಂದ 7 ಆಗಸ್ಟ್ 2024ರವರೆಗೆ ಪ್ರತಿ ದಿನ ಸಂಜೆ 5-00 ಗಂಟೆಯಿಂದ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ದಿನಾಂಕ 1 ಆಗಸ್ಟ್ 2024ರಂದು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸೀತಾರಾಮ ಕಾರಂತ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ‘ಭೃಗು ಶಾಪ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ದಿನಾಂಕ 2 ಆಗಸ್ಟ್ 2024ರಂದು ‘ತ್ರಿಶಂಕು ಚರಿತ್ರೆ’, ದಿನಾಂಕ 3 ಆಗಸ್ಟ್ 2024ರಂದು ‘ಕಚ ದೇವಯಾನಿ’, ದಿನಾಂಕ 4 ಆಗಸ್ಟ್ 2024ರಂದು ‘ಸುದರ್ಶನ ವಿಜಯ’, ದಿನಾಂಕ 5 ಆಗಸ್ಟ್ 2024ರಂದು ‘ಸೀತಾ ವಿಯೋಗ’, ದಿನಾಂಕ 6 ಆಗಸ್ಟ್ 2024ರಂದು ‘ವಾಮನ ಚರಿತ್ರೆ’ ಮತ್ತು…

Read More