Author: roovari

ಬೆಂಗಳೂರು : ರಂಗ ಸಂಗ, ಭಾರತೀಯ ವಿದ್ಯಾ ಭವನ, ಕಲಾ ಗಂಗೋತ್ರಿ (ರಿ.) ಮತ್ತು ನವ್ಯಚೇತನ ಟ್ರಸ್ಟ್ ಇವರುಗಳ ಸಹೋಯೋಗದಲ್ಲಿ ‘ಡಾ. ಎಚ್.ಕೆ.ಆರ್. 100ರ ನೆನಪು’ ಕಾರ್ಯಕ್ರಮವನ್ನು ದಿನಾಂಕ 8 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಡಾ. ಎಚ್.ಕೆ. ರಂಗನಾಥ ಜನ್ಮ ಶತಮಾನೋತ್ಸವ ವರ್ಷ 2024-25 100ನೆಯ ವರ್ಷದ ಹುಟ್ಟುಹಬ್ಬದ ನೆನಪಿನ ಕಾರ್ಯಕ್ರಮವಾಗಿದೆ. ಖ್ಯಾತ ಕಲಾವಿದರಾದ ವಿದ್ವಾನ್ ಶ್ರೀ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ವಾದ್ಯವೃಂದ, ಆಕಾಶವಾಣಿಯವರಿಂದ ರೂಪಕ ‘ನುಡಿತೇರನೆಳೆದವರು’, ವೇದ ವಿದ್ವಾನ್ ಶ್ರೀ ರಾಜಗೋಪಾಲ ಶರ್ಮ ಇವರಿಂದ ವೇದಘೋಷ ಹಾಗೂ ಪುಷ್ಪ ನಮನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಶ್ರೀ ಹೆಚ್.ಎನ್. ಸುರೇಶ್ ಇವರಿಂದ ಜನ್ಮ ಶತಮಾನೋತ್ಸವ ವರ್ಷ ಉದ್ಘಾಟನೆ ನಡೆಯಲಿದೆ. ಕಲಾ ಗಂಗೋತ್ರಿ ರಂಗ ತಂಡದವರು ಡಾ. ಎಚ್.ಕೆ. ರಂಗನಾಥ ರಚಿಸಿರುವ ಡಾ. ಬಿ.ವಿ. ರಾಜಾರಾಂ…

Read More

ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಘಟಕ ಮತ್ತು ಕಾರ್ಕಳದ ಕುಂದಾಪ್ರದವರು ಆಯೋಜಿಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯು ದಿನಾಂಕ 5 ಆಗಸ್ಟ್ 2024ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ “ಭಾಷಿಯಲ್ಲ ಬದ್ಕ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಖ್ಯಾತ ಕುಂದಾಪ್ರ ಕನ್ನಡದ ವಾಗ್ಮಿ ಮನುಹಂದಾಡಿಯವರು “ಕುಂದಾಪ್ರ ಕನ್ನಡವೆನ್ನುವುದು ಕೇವಲ ಒಂದು ಭಾಷಾ ಪ್ರಭೇದ ಮಾತ್ರ ಅಲ್ಲ ಅದೊಂದು ಸುಂದರವಾದ ಸಂಸ್ಕೃತಿ, ವೈವಿಧ್ಯಮಯವಾದ ಆಚಾರ-ವಿಚಾರ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಕುಂದಾಪುರದವರು ಪ್ರತಿನಿತ್ಯ ಕೈಮುಗಿಯುವ ದೈವ ದೇವರುಗಳ ಮೂರ್ತಿ ಸಿದ್ಧವಾಗಿರುವುದು ಕಾರ್ಕಳದ ನೆಲ್ಲಿಕಾರಿನ ಕಲ್ಲಿನಿಂದ ಹಾಗಾಗಿ ಕುಂದಾಪ್ರ ಮತ್ತು ಕಾರ್ಕಳದ ನಡುವೆ ಅವಿನಾಭಾವ ಸಂಬಂಧವಿದೆ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಷ್ಟು ಪ್ರಚಾರ ಹಾಗೂ ಪ್ರಸಿದ್ಧಿ ಪಡೆಯುವಲ್ಲಿ ಮಾಧ್ಯಮದ ಪಾತ್ರ ಬಹಳ ಇದೆ” ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕ್ವಾರಿ ಸ್ಟೋನ್…

Read More

ಉಡುಪಿ : ಖ್ಯಾತ  ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ಇವರು ದೂರದರ್ಶನದ  ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಪ್ರದೀಪ್ ಕುಮಾರ್ ಹಾಗೂ ಶ್ರೀಮತಿ ಗೀತಾಂಜಲಿ ಇವರ ಸುಪುತ್ರಿಯಾಗಿರುವ ಡಾ. ಶೀತಲ್ ಉಡುಪಿಯ ಎಸ್. ಡಿ. ಎಂ. ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿರುತ್ತಾರೆ. ಪ್ರಸ್ತುತ ಕೇರಳದ ಕೊಲ್ಲಂನಲ್ಲಿರುವ ‘ಅಮೃತ ಸ್ಕೂಲ್ ಆಫ್ ಆಯುರ್ವೇದ’ ಇಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಭರತನಾಟ್ಯ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಕಳೆದ ಸುಮಾರು 12 ವರ್ಷಗಳಿಂದ ಭರತನಾಟ್ಯವನ್ನು ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದ ವಿದ್ವತ್ ಪದವಿ ಪೂರ್ತಿಗೊಳಿಸಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಚೇತನಾ ಆಚಾರ್ಯ ಇವರಲ್ಲಿ ಕಲಿತಿದ್ದು, ಜೂನಿಯರ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ನೃತ್ಯ ನಿಕೇತನ ಕೊಡವೂರಿನ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಹಾಗೂ ನೃತ್ಯ ನಾಟಕಗಳಲ್ಲಿ ಭಾಗವಹಿಸಿರುತ್ತಾರೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ತಿಂಗಳ‌ ಸರಣಿ ತಾಳಮದ್ದಳೆ ‘ಸುದರ್ಶನ ವಿಜಯ’ವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ‌ 5 ಆಗಸ್ಟ್2024 ರಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಸತೀಶ್ ಇರ್ದೆ , ನಿತೀಶ್ ಎಂಕಣ್ಣಮೂಲೆ , ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಹರಿಯಾಗಿ ಗುಂಡ್ಯಡ್ಕ ಈಶ್ವರ ಭಟ್ ಮಹಾಲಕ್ಷ್ಮಿಯಾಗಿ ಭಾಸ್ಕರ್ ಬಾರ್ಯ, ಸುದರ್ಶನನಾಗಿ ಗುಡ್ಡಪ್ಪ ಬಲ್ಯ, ಶತ್ರುಪ್ರಸೂದನನಾಗಿ ಸುಬ್ಬಪ್ಪ ಕೈಕಂಬ ಮತ್ತು ಮಾಂಬಾಡಿ ವೇಣುಗೋಪಾಲ ಭಟ್ ಹಾಗೂ ದೇವೇಂದ್ರನಾಗಿ ಬಡೆಕ್ಕಿಲ ಚಂದ್ರಶೇಖರ್ ಭಟ್ ಪಾತ್ರ ನಿರ್ವಹಿಸಿದರು. ಟಿ ರಂಗನಾಥ ರಾವ್‌ ಸಹಕರಿಸಿದರು.

Read More

ಶೇಣಿ : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಸಹಯೋಗದೊಂದಿಗೆ ಕೇರಳ ಹಾಗೂ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ವಿಜೇತ ರಂಗ ನಿರ್ದೇಶಕ, ನಟ, ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಗಾಗಿ ‘ರಂಗ ಸಂಸ್ಕೃತಿ’ ಕಾರ್ಯಾಗಾರವನ್ನು ದಿನಾಂಕ 8 ಆಗಸ್ಟ್ 2024ರಂದು ಬೆಳಗ್ಗೆ 10-00 ಗಂಟೆಗೆ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ತರಗತಿಯಲ್ಲಿ ಆಯೋಜಿಸಲಾಗಿದೆ. ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶಾಸ್ತ ಕುಮಾರ್ ಎ. ಇವರ ಅಧ್ಯಕ್ಷತೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ರಂಗಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ಮತ್ತು ಶ್ರೀ ಶಾರದಾಂಬಾ ಹಿರಿಯ ಪ್ರಾಥಮಿಕ ಶಾಲೆಯ ಮ್ಯಾನೇಜರ್ ಶ್ರೀಮತಿ ಶಾರದಾ ವೈ. ಇವರ ಗೌರವ ಉಪಸ್ಥಿತಿಯಲ್ಲಿ ರಂಗ ನಿರ್ದೇಶಕ…

Read More

ಮೂಡಬಿದಿರೆ : ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿಯ 27ನೇ ವರ್ಷದ ‘ಯಕ್ಷ ಸಂಭ್ರಮ’ ಕಾರ್ಯಕ್ರಮವು 27 ಜುಲೈ 2024ರಂದು ಮೂಡಬಿದಿರೆಯ ಬೆಳುವಾಯಿ ಇಲ್ಲಿನ ಪ್ರೀತಂ ಗಾರ್ಡನ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರದಾನಿಸಿ ಆಶೀರ್ವಚನ ನೀಡಿದ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ “ಭಾರತೀಯ ಸಂಸ್ಕೃತಿ ಅನಾವರಣಗೊಳ್ಳುವುದೇ ಕಲೆಗಳಿಂದ. ಯಕ್ಷಗಾನವು ಪುರಾಣದ ಕತೆಗಳನ್ನು ಜನರಿಗೆ ತಲುಪಿಸುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿಯ ಚಟುವಟಿಕೆಗಳು ಹೆಚ್ಚಾದಾಗ ಸಮಾಜದಲ್ಲಿ ವಿಕೃತಿಗಳು ದೂರವಾಗುತ್ತದೆ.” ಎಂದು ಹೇಳಿದರು. ಯಕ್ಷದೇವ ಮಿತ್ರಕಲಾ ಮಂಡಳಿ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್‌ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳವಾದಕ ಪೆರುವಾಯಿ ನಾರಾಯಣ ಭಟ್, ಹಿರಿಯ ವೇಷಧಾರಿ ರಾಮಕುಮಾ‌ರ್ ದಾಸನಡ್ಕ ಇವರುಗಳಿಗೆ ‘ಯಕ್ಷ ದೇವ ಪ್ರಶಸ್ತಿ’ ಹಾಗೂ ನಿವೃತ್ತ ಶಿಕ್ಷಕಿ ಕೆ. ಕಲಾವತಿ ಇವರಿಗೆ ‘ವನಜಾಕ್ಷಿ ಅಮ್ಮ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಬಿ. ಜೆ. ಪಿ. ಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಕರ್ಣಾಟಕ ಬ್ಯಾಂಕ್‌ನ…

Read More

ಉಡುಪಿ : ಮಣಿಪಾಲದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್, ರಂಗ ಚಿನ್ನಾರಿ (ರಿ.) ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಮಣಿಪಾಲದ ಸರಳೆಬೆಟ್ಟು ಇಲ್ಲಿನ ರತ್ನ ಸಂಜೀವ ಕಲಾ ಮಂಡಲದಲ್ಲಿ ‘ರಂಗಸಂಸ್ಕೃತಿ’ ರಂಗ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 28 ಜುಲೈ 2024ರಂದು ಜರಗಿತು. ಈ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ರಂಗ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಇವರು ಮಾತನಾಡಿ “ನಟನೆಯನ್ನು ಕಲಿಯುವುದರಿಂದ ಮತ್ತು ಪಾತ್ರಗಳನ್ನು ಅಭಿನಯಿಸುವುದರಿಂದ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಬದುಕಿನಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಪ್ರಶ್ನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಾತ್ರವಲ್ಲ ಇದರಿಂದ ಮನೋಸ್ಥೈರ್ಯ ಬೆಳೆಯಲು ಅನುಕೂಲವಾಗುತ್ತದೆ. ಜೊತೆಗೆ ಸಾಮಾಜಿಕ ಬದುಕು ಸಾರ್ಥಕ ಎನಿಸುತ್ತದೆ” ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ‘ರಂಗಸಂಸ್ಕೃತಿ’ ಶಿಬಿರ ನಡೆಸುವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಮಹೇಶ್…

Read More

ಉತ್ತರ ಕನ್ನಡ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಸಂಯೋಜನೆಯಲ್ಲಿ ಟಿ.ಎಂ.ಎಸ್. ಸಿದ್ಧಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ದಿನಾಂಕ 14 ಆಗಸ್ಟ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಸಿದ್ಧಾಪುರದ ಟಿ.ಎಂ.ಎಸ್. ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮ ಪ್ರತಿಜ್ಞೆ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಕುಮಾರಿ ಶ್ರೀರಕ್ಷಾ ಹೆಗಡೆ ಭಾಗವತರು, ಶ್ರೀ ಎನ್.ಜಿ. ಹೆಗಡೆ ಮದ್ದಳೆ ಮತ್ತು ಶ್ರೀವತ್ಸ ಗುಡ್ಡೆದಿಂಬ ಚೆಂಡೆ ಹಾಗೂ ಮುಮ್ಮೇಳದಲ್ಲಿ ವಿಶ್ವೇಶ್ವರ ಭಟ್ ಸುಣ್ಣಂಬಳ, ವಾಸುದೇವ್ ರಂಗ ಭಟ್, ಮೋಹನ್ ಹೆಗಡೆ, ಪ್ರಸಾದ್ ಭಟ್ಕಳ ಮತ್ತು ಗಣಪತಿ ಗುಂಜಗೋಡ್ ಇವರುಗಳು ಸಹಕರಿಸಲಿರುವರು.

Read More

ಸುರತ್ಕಲ್: ಅಗರಿ ಪ್ರಶಸ್ತಿ ಪ್ರದಾನ, ಅಗರಿ ರಘುರಾಮ ಸನ್ಮಾನ ಹಾಗೂ ಅಗರಿ ಸಂಸ್ಮರಣೆ ಕಾರ್ಯಕ್ರಮವು 28 ಜುಲೈ 2024ರ ಭಾನುವಾರದಂದು ಹೊಸಬೆಟ್ಟು ಇಲ್ಲಿನ ನವಗಿರಿ ಸಭಾ ಭವನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಅಗರಿ ಪ್ರಶಸ್ತಿಯನ್ನು ಅಭಿಜ್ಞ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ‘ಹೊಳ್ಳ ಅವರಿಗೆ ಹಾಗೂ ಅಗರಿ ರಘುರಾಮ ಸನ್ಮಾನ ಪುರಸ್ಕಾರವನ್ನು ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆಯಾದ ‘ಯಕ್ಷಗಾನ ಕಲಾರಂಗ’ಕ್ಕೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಹರಿನಾರಾಯಣದಾಸ ಆಸ್ರಣ್ಣ “ಯಕ್ಷಗಾನ ರಂಗಕ್ಕೆ ಅಗರಿ ಶ್ರೀನಿವಾಸ ಭಾಗವತರು ಹಾಗೂ ರಘುರಾಮ ಭಾಗವತರು ನೀಡಿದ ಸೇವೆ ಸ್ಮರಣೀಯ, ಶ್ರೀ ದೇವೀ ಮಹಾತ್ಮೆ ಸಾವಿರಾರು ಸೇವೆಯನ್ನು ಕಂಡಿದೆ. ಕವಿಯಾಗಿ ಹಾಗೂ ನಿರ್ದೇಶಕರಾಗಿ ಯಕ್ಷಗಾನವನ್ನು ಬೆಳೆಸಿದ ಗರಿ ಇವರ ಅಗರಿ ಶೈಲಿ ಇಂದಿಗೂ ಉಳಿಸಿ ಕೊಂಡಿರುವುದು ಅವರ ಪ್ರಸಿದ್ದಿಗೆ ಸಾಕ್ಷಿಯಾಗಿದೆ. ಅವರ ಸವಿನೆನಪಿನಲ್ಲಿ ಪ್ರಶಸ್ತಿ ನೀಡುತ್ತಾ ಬರುತ್ತಿರುವುದು ಪ್ರಶಂಸನೀಯ.” ಎಂದರು ಪ್ರಶಸ್ತಿ ಸ್ವೀಕರಿಸಿದ ಪುತ್ತಿಗೆ ರಘುರಾಮ ಹೊಳ್ಳ ಮಾತನಾಡಿ “ಅಗರಿ ಪ್ರಶಸ್ತಿಯನ್ನು ನಾನು…

Read More

 ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್ ಹಾಗೂ ಕಲಾ ಶಾಲೆಯ 83ನೇ ಸ್ವರಾಲಯ ಸಾಧನಾ ಮಾಸಿಕ ಶಿಬಿರವು 28 ಜುಲೈ 2024ರಂದು ಮಂಗಳೂರಿನ  ಯೆಯ್ಯಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾತನಾಡಿ “ಸಂಗೀತಕ್ಕೆ ಯಾವುದೇ ಭಾಷೆ ಇಲ್ಲ. ಆದರೆ ಪ್ರತಿಯೊಬ್ಬರ ಮನಸ್ಸಿಗೂ ರಿಲ್ಯಾಕ್ಸ್ ನೀಡುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಸಣ್ಣ ವಯಸ್ಸಿನಲ್ಲಿ ನನಗೆ ಸಂಗೀತ ಕಲಿಯುವ ಉತ್ಸಾಹ ಇದ್ದರೂ ಮುಂದೆ ಅದಕ್ಕೆ ಪೂರಕ ವಾತಾವರಣ ಇರಲಿಲ್ಲ. ಈಗ ಸಂಗೀತ ಕಲಿಯುವ ಅವಕಾಶ ಇದ್ದರೂ ಅದಕ್ಕೆ ಪೂರಕವಾಗಿ ನಮ್ಮ ವಯಸ್ಸು ಇಲ್ಲ. ಹಾಗಾಗಿ ಎಲ್ಲ ಪಾಲಕರು ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಸಂಗೀತ, ನೃತ್ಯ ಮುಂತಾದ ಕಲೆಗಳ ಅಧ್ಯಯನಕ್ಕೆ ಕಳುಹಿಸಬೇಕು. ಮಕ್ಕಳಿಗೆ ಸ್ವಲ್ಪ ಕಷ್ಟ ಎನಿಸಿದರೂ ಮುಂದಕ್ಕೆ ಇದು ನಿಮ್ಮ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ”.  ಎಂದು ಹೇಳಿದರು. “ಮಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮಗಳ ಉತ್ತೇಜನಕ್ಕೆ ನಿಮ್ಮ…

Read More