Author: roovari

ಮಡಿಕೇರಿ : ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ ಇದರ ವತಿಯಿಂದ ಕಾಲೇಜು ಸಭಾಂಗಣದಲ್ಲಿ ‘ಕಲೋತ್ಸವ -2025’ ಜಿಲ್ಲಾ ಮಟ್ಟದ ಅಂತ‌ರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎನ್. ಪೊನ್ನಣ್ಣ “ಆಧುನಿಕ ಯುಗದಲ್ಲಿ ಪ್ರತಿ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದ್ದು, ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆರೋಗ್ಯಯುತವಾಗಿ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಕಾಲೇಜು ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದೊಂದಿಗೆ ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರೊಂದಿಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಶನಕ್ಕೆ ಎಲ್ಲರೂ ಶ್ರಮಪಡಬೇಕು. ಪ್ರತಿಯೊಬ್ಬರಲ್ಲಿಯೂ ಸಹ ಒಂದಲ್ಲ ಒಂದು ರೀತಿ ಪ್ರತಿಭೆ ಇದ್ದು, ಅದನ್ನು ಸರಿಯಾಗಿ ಬಳಸಿಕೊಂಡು ಗೆಲುವು ಸಾಧಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾಗಿದ್ದು, ಭವಿಷ್ಯದಲ್ಲಿ ಸ್ಮರಿಸುವಂತಹ ಬದುಕನ್ನು ಕಟ್ಟಿಕೊಳ್ಳಬೇಕು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಹೊಂದಬೇಕು. ಈ ನಿಟ್ಟಿನಲ್ಲಿ ಇಂತಹ ಕಲೋತ್ಸವ ಕಾರ್ಯಕ್ರಮಗಳು ಪ್ರತಿಯೊಬ್ಬ…

Read More

ಮಂಗಳೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಮೈಸೂರಿನ ಚಾಮರಾಜೇಂದ್ರ ಸರಕಾರಿ ದೃಶ್ಯಕಲಾ ಕಾಲೇಜು (ಕಾವಾ) ಸಂಸ್ಥೆಯಲ್ಲಿ ಬ್ಯಾಚುಲ‌ರ್ ಆಫ್ ವಿಷುವಲ್ ಆರ್ಟ್ಸ್ (ಬಿ. ವಿ. ಎ.)-ನಾಲ್ಕು ವರ್ಷ, ಎಂಟು ಸೆಮಿಸ್ಟರ್‌ಗಳ ಎನ್‌. ಇ. ಪಿ. ಪದ್ಧತಿಯ ದೃಶ್ಯಕಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಬಿ. ವಿ. ಎ. ಪದವಿ ಪ್ರವೇಶಕ್ಕಾಗಿ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ಪದವಿಯಲ್ಲಿ 3ನೇ ಸೆಮಿಸ್ಟರ್‌ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚುಕಲೆ), ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಚಿತ್ರ ಪತ್ರಿಕೋದ್ಯಮ ವಿಭಾಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು htts://uucms.karnataka.gov.in ಅಥವಾ https://www.cavamysore.karnataka.gov.in ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶಾತಿಗಾಗಿ ಅರ್ಹತಾ ಪರೀಕ್ಷೆಯ ದಿನಾಂಕ ಮತ್ತು ಇತರ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ.

Read More

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ವತಿಯಿಂದ ಯಕ್ಷಗಾನದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಆಯೋಜಿಸುತ್ತಿದೆ. ಯಕ್ಷಗಾನ ತೆಂಕು ಮತ್ತು ಬಡಗುತಿಟ್ಟು ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೌಲಭ್ಯಕ್ಕಾಗಿ, ಪ್ರೌಢ ಶಾಲೆ – 6ರಿಂದ 9 ತರಗತಿ, ಪದವಿಪೂರ್ವ ಕಾಲೇಜು (ಕಲಾ-ವಾಣಿಜ್ಯ ಮಾತ್ರ) ಹಾಗೂ ಪದವಿ ತರಗತಿಗಳಿಗೆ ದಾಖಲಾಗ ಬಯಸುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವುದು. ವಿಳಾಸ : ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ – 574227. ಹೆಚ್ಚಿನ ಮಾಹಿತಿಗಾಗಿ 9480529236 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಇವರು ಮಣಿಪಾಲ ಅಕಾಡೆಮಿ ಇದರ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ. ಎಚ್. ಶಾಂತಾರಾಮ್ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಯನ್ನು ಪರಿಗಣಿಸಿದ್ದು, 2023 ಮತ್ತು 2024ರ ಅವಧಿಯಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ರೂಪಾಯಿ 15,000 ನಗದು ಮತ್ತು ಬೆಳ್ಳಿಯ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ. ಆಸಕ್ತ ಪ್ರಕಾಶಕರು ಮತ್ತು ಲೇಖಕರು ಕಾದಂಬರಿಗಳು ನಾಲ್ಕು ಪ್ರತಿಗಳನ್ನು ದಿನಾಂಕ 15 ಮೇ 2025ರ ಒಳಗಾಗಿ ಡಾ. ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ – 576201 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶ ವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊ. 8792107369 ಸಂಪರ್ಕಿಸಬಹುದು.

Read More

ಕಟೀಲು : ಇಲ್ಲಿನ ಗಂಪ ಚಂದ್ರಶೇಖರ ಬೆಳ್ಚಡ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಐವತ್ತನೇ ವರುಷದ ಯಕ್ಷಗಾನ ಸೇವೆಯಾಟದ ಐವತ್ತನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ ಕಾರ್ಯಕ್ರಮವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದರಾದ ಕುಮಾರ ಪಡ್ರೆ, ಪದ್ಯಾಣ ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಮೊನ್ನಪ್ಪ ಗೌಡ ಕಿನ್ನಿಕೊಡಂಗೆ ಇವರನ್ನು ಸನ್ಮಾನಿಸಲಾಯಿತು. ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ “ಗರ್ಭಗುಡಿಯೊಳಗಿನಿಂದ ದೇವರು ಉತ್ಸವ ಸಂದರ್ಭ ಹೊರಬಂದು ಪೂಜೆ ಸ್ವೀಕರಿಸಿ ಭಕ್ತರನ್ನು ಆಶೀರ್ವದಿಸಿ ಹೋಗುವುದು ಸಾಮಾನ್ಯ, ಆದರೆ ಕಟೀಲು ಅಮ್ಮ ಯಕ್ಷಗಾನದ ಮೂಲಕ ಭಕ್ತರ ಮನೆಗೇ ಬಂದು ಸೇವೆ ಸ್ವೀಕರಿಸಿ ಹೋಗುತ್ತಾಳೆ ಎಂಬ ನಂಬಿಕೆಯಂತೆ ಕಳೆದ ಐವತ್ತು ವರುಷಗಳಿಂದ ತಪಸ್ಸಿನಂತೆ ಗಂಪ ಮನೆಯಲ್ಲಿ ಯಕ್ಷಗಾನಾರಾಧನೆ, ಕಲಾರಾಧನೆ, ಆ ಮೂಲಕ ಕಟೀಲಮ್ಮನ ಆರಾಧನೆ ನಡೆಸುತ್ತ ಬಂದಿರುವುದು ಅಭಿನಂದನೀಯ” ಎಂದರು. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ…

Read More

ಬೆಂಗಳೂರು : ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದ್ದ 82ನೇ ವರ್ಷದ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ವಾರ್ಷಿಕ ‘ಹವ್ಯಕ ವಿಶೇಷ ಪ್ರಶಸ್ತಿ’ ಮತ್ತು ಪಲ್ಲವ ಪುರಸ್ಕಾರ ಪ್ರದಾನ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು. ಉದ್ಯಮಿ ಮತ್ತು ಸಮಾಜ ಸೇವಕ ಜಿ.ವಿ. ಭಟ್ ಗೋರೆ ಇವರಿಗೆ ‘ಹವ್ಯಕ ವಿಭೂಷಣ’ ಪ್ರಶಸ್ತಿ, ವಿದ್ವಾಂಸ ಮತ್ತು ಭಾಷಾ ತಜ್ಞರಾದ ಪಾದೇಕಲ್ಲು ವಿಷ್ಣು ಭಟ್ಟ, ಶಿಕ್ಷಣ ಮತ್ತು ಸಂಶೋಧಕ ಎಸ್.ಎನ್. ಹೆಗಡೆ, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪರಮೇಶ್ವರ ಹೆಗಡೆ ಶಿರಸಿ ಇವರಿಗೆ ‘ಹವ್ಯಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಸಂಜಯ ಬೆಳೆಯೂರು, ನೃತ್ಯ ಕಲಾವಿದೆ ಕಾವ್ಯಾ ಜಿ. ರಾವ್, ಸಂಗೀತ ಕಲಾವಿದ ಕೆ.ಜೆ. ದಿಲೀಪ್ ಇವರಿಗೆ ‘ಹವ್ಯಕ ಶ್ರೀ’ ಪ್ರಶಸ್ತಿ, ಹವ್ಯಕ ಮಾಸ ಪತ್ರಿಕೆಯ ನಿರ್ದೇಶಕ ಹಾಗೂ ಸಂಚಾಲಕ ನಾರಾಯಣ ಭಟ್ ಹುಳೇಗಾರು ‘ಹವ್ಯಕ ಸೇವಾ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಸಮ್ಮಾನಿಸಲಾಯಿತು. ವಿಶೇಷ ಸಾಧನೆ…

Read More

ಮಂಗಳೂರು : ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿದ ಸುರ್ ಸೊಭಾಣ್ ಗಾಯನ ಮತ್ತು ಬಾಯ್ಲಾ – ಹೊಪ್ ನೃತ್ಯ ತರಬೇತಿ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದ ‘ಉಜ್ವಾಡ್’ ಪಾಕ್ಷಿಕದ ಸಂಪಾದಕರಾದ ವಂ. ಆಲ್ವಿನ್ ಸಿಕ್ವೇರಾ ಮಾತನಾಡಿ “ಬೈಬಲಿನ ನೋಹನ ನೌಕೆಯು ಪ್ರವಾಹದ ಪರಿಸ್ಥಿತಿಯಲ್ಲಿ ಉತ್ತಮವಾದುದನ್ನು ಭವಿಷ್ಯಕ್ಕಾಗಿ ಉಳಿಸಿತು. ಅದೇ ರೀತಿ ಕಲಾಂಗಣ್ ಕೊಂಕಣಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೊಂಕಣಿಯ ನೋಹನ ನೌಕೆ. ಇಲ್ಲಿಗೆ ಬರುವುದೇ ಒಂದು ಸಂಭ್ರಮ. ಇಲ್ಲಿಯ ಕಾರ್ಯಕ್ರಮಗಳು ಕೊಂಕಣಿ ಉಳಿವಿಗೆ ನಿರಂತರತೆಯನ್ನು ನೀಡಿವೆ. ಇಂದು ನೃತ್ಯ ಹಾಗೂ ಗಾಯನ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲಿದ್ದಾರೆ. ಅವರು ಭವಿಷ್ಯದ ಸಾಂಸ್ಕೃತಿಕ ರಾಯಭಾರಿಗಳು. ಈ ಪರಂಪರೆಯನ್ನು ಮುನ್ನಡೆಸಿ’’ ಎಂದು ಹೇಳಿದರು. ಸುರ್ ಸೊಭಾಣ್ 60 ಗಂಟೆಗಳ ಹಿಂದೂಸ್ತಾನಿ ಸಂಗೀತ ಮತ್ತು ಕೊಂಕಣಿ ಹಾಡುಗಾರಿಕೆ ಬಗ್ಗೆ ತರಬೇತಿಯಾದರೆ, ಬಾಯ್ಲಾ –ಹೊಪ್…

Read More

ಬೆಂಗಳೂರು : ರಾಗಸುಧಾ ಪೌಂಡೇಶನ್ ಜೆ. ಪಿ. ನಗರ ಇವರ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ “ಆಧುನಿಕ ಮಹಿಳೆ, ಪ್ರಗತಿಯ ಕಹಳೆ” ಕಾರ್ಯಕ್ರಮದಡಿಯಲ್ಲಿ ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡದಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ಡ್ 26 ಏಪ್ರಿಲ್ 2025 ರಂದು ಬೆಂಗಳೂರಿನ ಜೆ.ಪಿ. ನಗರದ ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಿತು. ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗುರುಗಳಾದ ಸುದರ್ಶನ ಉರಾಳ, ಪ್ರೀತಿ ಕೆ. ಮೋಹನ್ ಹಾಗೂ ಕಲಾವಿದರಾಗಿ ಶ್ರೀರಾಮ, ಶ್ರೀ ವಿದ್ಯಾ, ಸರಸ್ವತಿ, ಚಿನ್ಮಯಿ, ಮೇಘನಾ, ಚೈತ್ರ ಹಾಗೂ ಶಾಶ್ವತ್ ಭಾಗವಹಿಸಿದರು. ಹಲವು ಕಾರ್ಯಕ್ರಮದ ನಡುವೆ ಯಕ್ಷಗಾನ ಪ್ರದರ್ಶನ ಬಲುವಾಗಿ ರಂಜಿಸಿತು. ಕಾರ್ಯಕ್ರಮ ಮುಗಿದ ನಂತರ ಭಾಗವಹಿಸಿದ ಕಲಾವಿದರಿಗೆ ಗೌರವಿಸಿ, ಪ್ರಮಾಣಪತ್ರ ನೀಡಲಾಯಿತು.

Read More

ಮಕ್ಕಳೇ ಮನೆಗೆ ನಂದಾದೀಪ ಎಲ್ಲರ ಬಾಳಿಗೂ ಮಕ್ಕಳೇ ನಮ್ಮೆಲ್ಲರ ಬದುಕಿನ ಜೀವದ ಜೀವಾಳ. ಕೂಸು ಇದ್ದ ಮನೆಗೆ ಬೀಸಣಿಕೆ ಯಾತಾಕ? ‘ಕೂಸು ಕಂದಯ್ಯ ಒಳ ಹೊರಗೂ ಆಡಿದರ ಬೀಸಣಕಿ ಗಾಳಿ ಸುಳಿದಾಂವ’ ಎಂದು ನಮ್ಮ ಜನಪದರ ಹಾಡಿನಲ್ಲೂ ಮಕ್ಕಳ ಹಿರಿಮೆ ಗರಿಮೆಯ ಬಗ್ಗೆ ವ್ಯಕ್ತವಾಗಿದೆ. ಇಂಥ ಮಕ್ಕಳ ಮನಸ್ಸನ್ನು ಅರಿತು ಬೆರೆತು ಅವರ ಬುದ್ಧಿಮಟ್ಟಕ್ಕೆ ಇಳಿದು ಮನಮುಟ್ಟುವಂತೆ ಎದೆತಟ್ಟುವಂತೆ, ಅವರ ಅಭಿರುಚಿಗೆ ತಕ್ಕಂತೆ ಕವಿತೆ ಬರೆಯುವುದೆಂದರೆ ಸಾಮಾನ್ಯವಾದುದಲ್ಲ, ಅದೊಂದು ಮಹತ್ಕಾರ್ಯವೇ ಸರಿ. ಆ ನಿಟ್ಟಿನಲ್ಲಿ ನನ್ನ ನೆಚ್ಚಿನ ಹಿರಿಯ ಕವಿಗಳಾದ ಶ್ರೀಯುತ ನೀ. ಶ್ರೀಶೈಲ ಅವರು ತುಂಬಾ ಚೆನ್ನಾಗಿ ಪಳಗಿದ್ದಾರೆ. ಅದಕ್ಕೆ ಸಾಕ್ಷಿ ಅನ್ನುವಂತಿದೆ ಅವರ ಇತ್ತೀಚಿಗೆ ಲೋಕಾರ್ಪಣೆಗೊಂಡ ಕೃತಿಯಾದ ‘ಪ್ಯಾಂಟೂ ಇಲ್ಲ.. ಚೆಡ್ಡಿಯು ಇಲ್ಲ..’ ಎಂಬ ಶಿಶುಗೀತೆಗಳ, ಮಕ್ಕಳ ಕವನಸಂಕಲನವು ಸಾಕ್ಷಿಯಾಗಿದೆ. ಇದೊಂದು ಅತ್ಯದ್ಭುತವಾದ ಕೃತಿ ಆಗಿದ್ದು, ಓದುಗರನ್ನು ಸರಾಗವಾಗಿ, ಸರಳವಾಗಿ ಓದಿಸಿಕೊಂಡು ಹೋಗುವ ಕೃತಿಯಾಗಿದೆ. ಇದರಲ್ಲಿ ಒಟ್ಟು 23 ಕವಿತೆಗಳಿವೆ. ಅತ್ಯಂತ ಸೊಗಸಾದ ಸುಲಾಲಿತ್ಯವಾದ ಈ ಕವಿತೆಗಳು ಕನ್ನಡ…

Read More

ಕೋಟ : ಶ್ರೀ ಹಂದೆ ವಿಷ್ಣುಮೂರ್ತಿ ಮತ್ತು ಶ್ರೀ ಹಂದೆ ವಿನಾಯಕ ದೇವಸ್ಥಾನದ ಶ್ರೀಮನ್‌ಮಹಾರಥೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 29 ಏಪ್ರಿಲ್ 2025 ರಿಂದ 01 ಮೇ 2025ರ ವರೆಗೆ ನಡೆಯಲಿದೆ. ದಿನಾಂಕ 29 ಏಪ್ರಿಲ್ 2025 ರಂದು ಸಂಜೆ ಘಂಟೆ 5.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಹೆಚ್. ಸೂರ್ಯನಾರಾಯಣ ಹಂದೆ ನಿವೃತ್ತ ಶಿಕ್ಷಕರ ಪ್ರಾಯೋಜನೆಯಲ್ಲಿ ಯಕ್ಷಗಾನದ ಎರಡನೇ ವೇಷದ ಕಲಾವಿದರಾದ ಬಳ್ಕೂರು ಕೃಷ್ಣಯಾಜಿ, ಶ್ರೀಪಾದ ಭಟ್ ಥಂಡಿಮನೆ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಇವರಿಗೆ ವಿಶೇಷ ಪುರಸ್ಕಾರ, ಕಡಬಾಳ ಉದಯ ಹೆಗಡೆ ಇವರಿಗೆ ‘ದಿ. ನರಸಿಂಹ ಸೋಮಯಾಜಿ ಪ್ರಶಸ್ತಿ–2025’ ಮತ್ತು ಊರಿನ ಸಾಧಕರಾದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹೆಚ್. ಸುಜಯೀಂದ್ರ ಹಂದೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾರಾನಾಥ ಹೊಳ್ಳ, ಪಿ. ಎಚ್. ಡಿ. ಪದವೀಧರಾದ ಶಮಂತ ಕುಮಾರ್, ದೇವಸ್ಥಾನದ ವಿಶೇಷ ದಾನಿಗಳಾದ ಶ್ರೀಮತಿ ಜಯಲಕ್ಷ್ಮೀ ಎನ್. ಮತ್ತು ಜಗದೀಶ ಬಾಸ್ರಿಯವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ಸರ್ಕಾರದ ಶೌರ್ಯ ಪ್ರಶಸ್ತಿ…

Read More