Author: roovari

ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ ಮತ್ತು ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 01-12-2023 ಶುಕ್ರವಾರದಂದು ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೊದಲ ಉಪನ್ಯಾಸ ಮೈಸೂರಿನ ಹಿರಿಯ ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಇವರಿಂದ ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಮತ್ತು ಖ್ಯಾತ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್‌ ಎರಡನೇ ಉಪನ್ಯಾಸ ‘ಕಾದಂಬರಿಕಾರರಾಗಿ ಬಲ್ಲಾಳರು’ ಎಂಬ ವಿಷಯದಲ್ಲಿ ನಡೆಯಲಿದೆ. ಬಳಿಕ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ‘ನಾನು ಕಂಡಂತೆ ಬಲ್ಲಾಳರು’ ಎಂಬ ವಿಷಯದಲ್ಲಿ ವ್ಯಾಸರಾಯ ಬಲ್ಲಾಳರ ಮಕ್ಕಳಾದ ಪೂರ್ಣಿಮಾ ಹೆಬ್ಬಾರ್ ಮತ್ತು ಅಂಜಲಿ ಅರುಣ್, ಇವರ ಜೊತೆಗೆ ಮುಂಬಯಿಯ ಖ್ಯಾತ ಕಾದಂಬರಿಕಾರರಾದ  ಮಿತ್ರಾ ವೆಂಕಟ್ರಾಜ್ ಭಾಗವಹಿಸಲಿದ್ದಾರೆ. ಮೂರನೇ ಉಪನ್ಯಾಸ ಮುಂಬಯಿಯ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಭರತ್ ಕುಮಾರ್ ಪೊಲಿಪು ಇವರು ‘ಬಲ್ಲಾಳರ ಕನ್ನಡ…

Read More

ಬೆಂಗಳೂರು : ಅನ್ ಬಾಕ್ಸಿಂಗ್ ಬೆಂಗಳೂರು ಮತ್ತು ಜಂಗಮ ಕಲೆಕ್ಟಿವ್ ಜೊತೆಯಾಗಿ ಅರ್ಪಿಸುವ ‘ನಾಟಕಗಳ ಹಬ್ಬ’ ದಿನಾಂಕ 04-12-2023ರಿಂದ 11-11-2023 ರ ವರೆಗೆ ಬೆಂಗಳೂರಿನ ವಿವಿಧೆಡೆ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 04-12-2023ರಂದು ಸಂಜೆ 7.30ಕ್ಕೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಮಂಗಳೂರಿನ ‘ಅಸ್ತಿತ್ವ’ ಪ್ರಸ್ತುತ ಪಡಿಸುವ ಅರುಣ್ ಲಾಲ್ ಕೇರಳ ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದ ನಾಟಕ ‘ಜುಗಾರಿ’ ಪ್ರದರ್ಶನಗೊಳ್ಳಲಿದೆ. ದಿನಾಂಕ 06-12-2023ರಂದು ಸಂಜೆ 7.30ಕ್ಕೆ ಜೆ.ಸಿ.ರೋಡಿನ ನಯನ ಸಭಾಂಗಣದಲ್ಲಿ ಧಾರವಾಡದ ‘ಆಟ-ಮಾಟ’ ಪ್ರಸ್ತುತ ಪಡಿಸುವ ಮಹಾದೇವ ಹಡಪದ ಪರಿಕಲ್ಪನೆ ಮತ್ತು ನಿರ್ದೇಶನದ ‘ನಾ ರಾಜಗುರು’ ನಾಟಕದಲ್ಲಿ ವಿಶ್ವರಾಜ್ ನಿಜಗುಣ ರಾಜಗುರು ಅಭಿನಯಿಸಲಿದ್ದಾರೆ. ದಿನಾಂಕ 07-12-2023ರಂದು ಸಂಜೆ 7.30ಕ್ಕೆ ಹನುಮಂತ ನಗರದ ಕೆ.ಹೆಚ್ ಕಲಾ ಸೌಧದಲ್ಲಿ ಮೈಸೂರಿನ ‘ನಟನ’ ಪ್ರಸ್ತುತ ಪಡಿಸುವ ‘ಕಣಿವೆಯ ಹಾಡು’ ಪ್ರದರ್ಶನಗೊಳ್ಳಲಿದ್ದು, ಡಾ. ಶ್ರೀಪಾದ್ ಭಟ್ ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕಕ್ಕೆ ಸಂಗೀತ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರದ್ದು. ದಿನಾಂಕ 10-12-2023ರಂದು ಬೆಳಿಗ್ಗೆ…

Read More

ಮಂಗಳೂರು : ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ಸಮಿತಿ ಆಶ್ರಯದಲ್ಲಿ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವು ದಿನಾಂಕ 25-11-2023 ಶನಿವಾರದಂದು ಸಂಜೆ ಗಂಟೆ 4ಕ್ಕೆ ಶರವು ದೇವಸ್ಥಾನದ ಬಳಿಯಿರುವ ಬಾಳಂಭಟ್ ಹಾಲ್ ಇಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಳಂಭಟ್ ಮನೆತನದ ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ತನ್ನ ಮುಖ್ಯ ಭಾಷಣದಲ್ಲಿ ಸಂಸ್ಕಾರಯುತವಾದ ಕಾರ್ಯಕ್ರಮ ಸಂಸ್ಕಾರ ಭಾರತೀಯದ್ದು. ಸಂಸ್ಕಾರ ಭಾರತೀ ಸಂಸ್ಕೃತಿಯಿಂದ ಕೂಡಿದೆ. ಸಂಸ್ಕಾರ ಭಾರತೀ ಅರ್ಥಪೂರ್ಣವಾದ ಹೆಸರು ಹೀಗೆ ಸಂಸ್ಕಾರ ಭಾರತೀಯ ಹೆಸರಿನ ವಿಶ್ಲೇಷಣೆ ಮಾಡಿದರು. ಭಾರತೀಯರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಉದ್ದೀಪನ ಮಾಡುವ ಸತ್ಕಾರ್ಯ ಸಂಸ್ಕಾರ ಭಾರತೀ ಮಾಡುತ್ತಿದೆ. ಭಾರತ ಮಾತೆಯ ಬಗ್ಗೆ, ಸನಾತನ ಧರ್ಮದ ಬಗ್ಗೆ, ನಮ್ಮ ಆಚಾರ ನೀತಿಯ ಬಗ್ಗೆ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಕಾರ ಭಾರತೀ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಸಂಸ್ಕಾರ ಭಾರತೀ…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ವತಿಯಿಂದ ಡಾ.ಎಚ್.ಆರ್. ವಿಶ್ವಾಸ ಅವರ ಸಂಗಮ ಕಾದಂಬರಿಯ ಬಿಡುಗಡೆ ಮತ್ತು ಅಭಾಸಾಪ ಮಂಗಳೂರು ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಘೋಷಣೆಯು ದಿನಾಂಕ 27-11-2023ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರ ಸಭಾಂಗಣದಲ್ಲಿ ನಡೆಯಿತು. ಕಾದಂಬರಿ ಬಿಡುಗಡೆಗೊಳಿಸಿದ ಕರ್ಣಾಟಕ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಎಂ.ಎಸ್‌. ಮಹಾಬಲೇಶ್ವರ ಮಾತನಾಡಿ, ಸಾಹಿತ್ಯ ಓದುಗರಿಗೆ ಕುತೂಹಲದ ಜೊತೆಗೆ ಆನಂದ ನೀಡಬೇಕು. ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಅದಕ್ಕೆ ಪರಿಹಾರ ಸೂಚಿಸಬೇಕು. ಅಂತಹ ಧನಾತ್ಮಕ ಅಂಶಗಳು ಸಂಗಮ ಕಾದಂಬರಿಯಲ್ಲಿ ಅಡಕವಾಗಿದೆ ಎಂದರು. ಶಕ್ತಿನಗರದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಸುಮನಾ ನಂದೋಡಿ ಕೃತಿ ಪರಿಚಯ ನೀಡಿದರು. ಅಭಾಸಾಪ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಡಾ. ಎಚ್‌.ಆರ್. ವಿಶ್ವಾಸ ಉಪಸ್ಥಿತರಿದ್ದರು. ಶೈಲೇಶ್ ಕುಲಾಲ್ ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದರು. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಗೀತಾ ಲಕ್ಷ್ಮೀಶ ವಂದಿಸಿ, ಅಭಾಸಾಪ ಜಿಲ್ಲಾ…

Read More

ಮಂಗಳೂರು : ಮರಕಡದ ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವವು ಮರಕಡ ಮೈದಾನದಲ್ಲಿ ದಿನಾಂಕ 18-11-2023ರಂದು ಮಂಗಳೂರಿನ ಮಂಗಳಾದೇವಿಯ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮೇಲ್ವಿಚಾರಕರಾದ ಸ್ವಾಮಿ ರಘು ರಾಮಾನಂದ ಇವರ ಆಶೀರ್ವಚನದೊಂದಿಗೆ ನೆರವೇರಿತು. ಇದೇ ಸಂದರ್ಭದಲ್ಲಿ ಮರಕಡ ಕುಮೇರುಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ರೂ.10,000/- ಮೊತ್ತದ ‘ಶುಭವರ್ಣ ಪ್ರಶಸ್ತಿ-2022’ನ್ನು ಹಿರಿಯ ನಿವೃತ್ತ ಕಲಾವಿದ ಕಾವೂರು ವಿಠಲ ಶೆಟ್ಟಿಗಾರ್ ಅವರಿಗೆ, ಹಾಗೂ ರೂ.10,000/- ಮೊತ್ತ ‘ಶುಭವರ್ಣ ಸಂಮಾನ -2023’ನ್ನು ಶ್ರೀ ಅಶೋಕ ಆಚಾರ್ಯ ವೇಣೂರು ಇವರಿಗೆ ಮತ್ತು ಮರಕಡ ಕಾರ್ತಿಕ್ ಕಮಾರ್ ಸ್ಮರಣಾರ್ಥ 5,000/- ಮೊತ್ತದ ‘ಶುಭವರ್ಣ ಪ್ರತಿಭಾ ಪುರಸ್ಕಾರ -2023’ನ್ನು ಶ್ರೀ ದೇವಿಪ್ರಸಾದ್ ಪೆರಾಜೆ ಅವರಿಗೆ ಕೊಡಮಾಡಲಾಯಿತು. ಶ್ರೀ ಕಟೀಲು ಆರು ಮೇಳಗಳ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿ, ಹಿರಿಯ ಯಕ್ಷ ಗುರುಗಳಾದ ಶ್ರೀ ಶಿವರಾಮ ಪಣಂಬೂರು, ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು ಮತ್ತು ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷರಾದ ಶ್ರೀ ಯಜ್ಞೇಶ್ವರ ಬರ್ಕೆ, ಕರ್ನಿರೆ ಸುವರ್ಣ…

Read More

ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಮಿತಿಯು ಆಯೋಜಿಸಿದ ರಾಜ್ಯ ಮಟ್ಟದ ವಿದ್ಯಾರ್ಥಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಮಾರಿ ನಂದಿನಿ ಯು. (ಶಿವಮೊಗ್ಗ) ಪ್ರಥಮ, ಚಿನ್ಮಯ್ ರಮೇಶ್ ಹೆಗಡೆ (ಬೆಂಗಳೂರು) ದ್ವಿತೀಯ, ಯಜ್ಞುಶಾ ಕನ್ನೆಪ್ಪಾಡಿ (ಕಾಸರಗೋಡು) ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಕವಿತೆಗಳು ನೈಸರ್ಗಿಕ ವಿದ್ಯಮಾನ ಮತ್ತು ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುತ್ತದೆ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ರಚನೆಗಳು ವಾಸ್ತವ ಸತ್ಯಗಳನ್ನು ಒಳಗೊಂಡಿವೆ ಎಂದು ತೀರ್ಪುಗಾರರಾಗಿ ಸಹಕರಿಸಿದ ಕುಮಾರಿ ಭವ್ಯ ಭಟ್ ಮಡಿಕೇರಿ ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಬಹುಮಾನ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 82 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.

Read More

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ನಾಟ್ಕದೂರು ಇಲ್ಲಿರುವ ನಮ ತುಳುವೆರ್ ಕಲಾ ಸಂಘಟನೆ (ರಿ.) ವತಿಯಿಂದ ಸುವರ್ಣ ಕರ್ನಾಟಕ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 01-11-2023ರಿಂದ 01-11-2024ರವರೆಗೆ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ದಿನಾಂಕ 01-12-2023ನೇ ಶುಕ್ರವಾರದಂದು ‘ಸುವರ್ಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಮುದ್ರಾಡಿ ನಾಟ್ಕದೂರು ಬಿ.ವಿ. ಕಾರಂತ ಬಯಲು ರಂಗ ಸ್ಥಳದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಇವರು ವಹಿಸಲಿದ್ದು, ಬೆಳಗಾವಿಯ ರಂಗ ನಿರ್ದೇಶಕರಾದ ಶ್ರೀ ಶ್ರೀಪತಿ ಮಂಜನಬೈಲು ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ವಾಸ್ತು ತಜ್ಞರಾದ ಶ್ರೀ ಪ್ರಮಲ್ ಕುಮಾರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆ, ಶಂಕರಪುರ, ಏಕ ಜಾತಿ ಧರ್ಮ ಪೀಠ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ, ಮಂದಾ ರ್ತಿ ದೇವಸ್ಥಾನದ…

Read More

ಶಿವಮೊಗ್ಗ : ಕರ್ನಾಟಕ ಸಂಘದಿಂದ ‘ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮ 2022’ನ್ನು ದಿನಾಂಕ 26-11-2023ರಂದು ಶಿವಮೊಗ್ಗ ಕರ್ನಾಟಕ ಸಂಘ ಭವನದಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ವಿತರಿಸಿದ ಲೇಖಕ ಡಾ.ಗಜಾನನ ಶರ್ಮ ಮಾತನಾಡಿ “ಮೂಲ ಮೂರ್ತಿಯಾಗಬೇಕಿದ್ದ ಕನ್ನಡವನ್ನು ನಾವೆಲ್ಲರೂ ಸೇರಿಕೊಂಡು ಉತ್ಸವ ಮೂರ್ತಿಯನ್ನಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡವನ್ನು ಮೂಲ ಮೂರ್ತಿಯಾಗಿ ಮಾಡುವುದಲ್ಲದೆ, ದಿನವೂ ಪೂಜೆಗೆ ಒಳಪಡಬೇಕಿದೆ. ನಮ್ಮೆಲ್ಲರ ಅಂತರಂಗದಲ್ಲಿಯೂ ಕನ್ನಡ ಅಡಗಿದೆ. ಆದರೆ ಅದನ್ನು ಹೊರಗೆ ತಂದು ಪೂಜಿಸುವಲ್ಲಿ ಎಡವುತ್ತಿದ್ದೇವೆ. ಮಕ್ಕಳಲ್ಲಿ ಜನರೇಷನ್ ಗ್ಯಾಪ್ ಹೆಚ್ಚಾಗಿರುವ ಕಾರಣ ಕನ್ನಡ ಭಾಷೆ ಬಳಕೆ ಕಡಿಮೆ ಆಗುತ್ತಿದೆ. ನಮ್ಮ ನಡತೆ, ಸಂಸ್ಕೃತಿ, ಭಾಷೆ ಯಾವುದೂ ಅವರಿಗೆ ಪೂರ್ಣಮಯವಾಗಿಲ್ಲ. ಇಂದಿನ ಜನರೇಷನ್ ತನ್ಮಯತೆ ಕಳೆದುಕೊಂಡಿದ್ದು ಅದನ್ನು ಉಳಿಸಿಕೊಂಡರೆ ಕನ್ನಡದ ಮೇಲಿನ ಪ್ರೀತಿ ಮತ್ತು ರಾಷ್ಟ್ರ ಪ್ರೀತಿ ಹೆಚ್ಚಾಗುತ್ತದೆ. ನಾವೆಲ್ಲರೂ ಇತಿಹಾಸ, ಸೇವಾಕರ್ತರನ್ನೂ ಮರೆತಿದ್ದೇವೆ. ಅದರ ಪರಿಣಾಮವೇ ಅಜ್ಜ ಮತ್ತು ಮೊಮ್ಮೊಕ್ಕಳು ಬೆಸೆಯುತ್ತಿಲ್ಲ. ಇದು ದುರ್ದೈವದ ಸಂಗತಿ. ಅವರನ್ನು ಬೆಸೆಯುವ ಕೆಲಸವನ್ನು ಮೊದಲು ಮಾಡಬೇಕಿದೆ.…

Read More

ಪುತ್ತೂರು : ಪುತ್ತೂರಿನ ಅರ್ಯಾಪು ಅಕ್ಷಯ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವ, ಅದ್ವಯ ಕನ್ನಡ ಸಂಘ ಮತ್ತು ರೋಟರಾಕ್ಟ್ ಕ್ಲಬ್ ಅಕ್ಷಯ ಕಾಲೇಜ್ ಸಹಯೋಗದೊಂದಿಗೆ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರು ದಿನಾಂಕ 24-11-2023ರಂದು ‘ಅನುವಾದ ಸಾಹಿತ್ಯ’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ನೀಡಿದರು. ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ ಅಬ್ದುಲ್ ಕಲಾಮ್ ಅವರು ರಚಿಸಿದ “ವಿಂಗ್ಸ್ ಆಫ್ ಫೈರ್” ಕೃತಿಯನ್ನು “ಅಗ್ನಿಯ ರೆಕ್ಕೆಗಳು” ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದ ಮಾಡಿದ ರೋಚಕ ಅನುಭವಗಳನ್ನು ಹಾಗೂ ಅನುವಾದ ಮಾಡುವ ಸಂದರ್ಭದಲ್ಲಿ ಅನೇಕ ವಿಚಾರಗಳಲ್ಲಿ ಎಚ್ಚರಿಕೆಯನ್ನು ವಹಿಸಬೇಕಾದ ಬಗ್ಗೆ ಮತ್ತು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆಂಬ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು. ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ವರದರಾಜ ಚಂದ್ರಗಿರಿ…

Read More

ಉಡುಪಿ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಮಾರ್ಚ್ ತಿಂಗಳಲ್ಲಿ ಉಡುಪಿಯಲ್ಲಿ ಜರಗುವ ಮಹಿಳಾ ಸಮಾವೇಶದ ಪೂರ್ವಭಾವಿಯಾಗಿ ಲಿಂಗ ಸಂವೇದನೆಯ ಜಾಗೃತಿ ಕಾರ್ಯಕ್ರಮ ‘ಅರಿವಿನ ಪಯಣ’ ಉಡುಪಿಯ ಸುತ್ತಾ ಮುತ್ತ ದಿನಾಂಕ 21-11-2023ರಂದು ಜರಗಿತು. ಹಾಡು, ಕಿರುನಾಟಕ, ಕತೆ ಹೇಳುವುದು ಮತ್ತು ಸಂವಾದದ ಮೂಲಕ ಸುಮಾರು ಒಂದೂವರೆ ಗಂಟೆಗಳ ಕಾಲ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಯಿತು. ಈ ಕಾರ್ಯಕ್ರಮದಲ್ಲಿ ಅಖಿಲಾ ವಿದ್ಯಾಸಂದ್ರ, ಗೌರಿ, ಪ್ರಭಾ ಬೆಳವಂಗಲ, ಲಿನೆಟ್, ಮಲ್ಲಿಕಾ ಜ್ಯೋತಿಗುಡ್ಡೆ, ಲಾವಣ್ಯ ಬಂಟ್ವಾಳ, ಶುಭಲಕ್ಷ್ಮೀ ಕಡೆಕಾರ್, ಡಾ. ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಡಿ, ಜಾನಕಿ ಬ್ರಹ್ಮಾವರ, ಮೇರಿ ಡಿ’ಸೋಜಾ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾಗಿ ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಾ ಎಸ್. ಉಡುಪಿ, ಕ್ರಿಶ್ಚಿಯನ್ ಪ್ರೌಢ ಶಾಲೆಯ ಮುಖೋಪಾಧ್ಯಾಯಿನಿ ಶ್ರೀಮತಿ ಜೋಸ್ಲಿನ್ ಮಣಿಪಾಲ ಮತ್ತು ಎಸ್.ಎಸ್.ಎಲ್.ಸಿ. ನಂತರದ ಸರಕಾರಿ ನರ್ಸಿಂಗ್ ವಿದ್ಯಾರ್ಥಿಗಳ ವಸತಿ…

Read More