Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಖ್ಯಾತ ಸಾಹಿತಿ ಹಿರಿಯ ಜಾನಪದ ವಿದ್ವಾಂಸರಾದ ಪ್ರೋ. ಅಮೃತ ಸೋಮೇಶ್ವರರು ದಿನಾಂಕ 06-01-2024ರಂದು ನಿಧನರಾಗದ್ದಾರೆ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಇರ್ವರು ಮಕ್ಕಳನ್ನು ಅಗಲಿದ್ದು, ಮೃತರು ಕಾವ್ಯ ಸಣ್ಣಕಥೆ, ನಾಟಕ, ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಕೋಟೆಕ್ಕಾರು ನಿವಾಸಿಯಾಗಿದ್ದ ಶ್ರೀಯುತರು ಎಂ.ಎ. ಪದವೀಧರರಾಗಿದ್ದು, ಮಂಗಳೂರಿನ ಸಂತ ಅಲೊಶಿಯಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬಳಿಕ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದು, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು…
ಮಂಗಳೂರು : ಕುಡ್ಲದ ತುಳು ಕೂಟ ಸಂಸ್ಥೆಯ ಬಂಗಾರ್ ಪರ್ಬ ಸರಣಿ ವೈಭವ 10 ಸಮಾರೋಪ ಸಮಾರಂಭದಲ್ಲಿ ‘ತುಳು ನಾಡಿನ ಪಾರಂಪರಿಕ ವಾದ್ಯ ವಾದನಗಳ ಸ್ಪರ್ಧೆ’ಯು ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 30-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ದಯಾಕರ ಕುಳಾಯಿಯವರು ದೀಪ ಬೆಳಗಿಸಿ ಉದ್ಧಾಟಿಸಿ “ನಮ್ಮ ತುಳು ವೈವಿಧ್ಯತೆಯಲ್ಲೂ ಭಾಷಾ ಸೊಬಗನ್ನು ಪಡೆದಿದೆ. ನಾವು ಪಟ್ಟು ಹಿಡಿದು ಅದನ್ನು ಆಗ್ರಹಪೂರ್ವಕವಾಗಿ ಉಳಿಸಿ-ಬೆಳೆಸುವಲ್ಲಿ ಹಿಂದುಳಿಯಬಾರದು ತುಳುವಿನ ಉಳಿವು – ಅಳಿವಿನ ಪ್ರಶ್ನೆಗೆ ನಾವೇ ಬಾಧ್ಯಸ್ಥರು” ಎಂದು ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಬಂದ ಮಾಜಿ ಸೈನಿಕರ ಅಸೋಸಿಯೇಶನ್ ನ ಅಧ್ಯಕ್ಷರಾದ ಬಾಳ ಶ್ರೀ ಶ್ರೀಕಾಂತ ಶೆಟ್ಟಿಯವರು “ಈಗೀಗ ತುಳುವಿನ ಅನೇಕ ಶಬ್ದಗಳು ಕನ್ನಡೀಕರಣವಾಗಿ ತುಳುವಿನ ಮೂಲ ಅಸ್ತಿತ್ವ ಅಳಿಸಿ ಹೋಗಿ ನಮ್ಮ ಮುಂದಿನ ಪೀಳಿಗೆ ಭಾಷಾ ಗೊಂದಲದಲ್ಲಿ ಬಳಲುವಂತಾಗುತ್ತದೆ. ಅದಕ್ಕಾಗಿ ತುಳು…
ಮುಡಿಪು : ಮಂಗಳೂರು ವಿಶ್ವ ವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆದ 2023-24ನೇ ಸಾಲಿನ ಯಕ್ಷಮಂಗಳ ತಂಡದ ಯಕ್ಷನಾಟ್ಯ ತರಬೇತಿಯನ್ನು ದಿನಾಂಕ 12-12-2023ರಂದು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಗಣೇಶ್ ಸಂಜೀವ ಇವರು ಉದ್ಘಾಟಿಸಿ “ಶಿಕ್ಷಣದೊಂದಿಗೆ ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳದ ಕಲಿಕೆ ವಿದ್ಯಾರ್ಥಿಗಳಲ್ಲಿ ಕಲೆಯ ಬಗೆಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಹವ್ಯಾಸವಾಗಿ ಕಲೆಯೊಂದನ್ನು ರೂಢಿಸಿಕೊಂಡರೆ ಕಲಾವಿದನಾಗದಿದ್ದರೂ ಉತ್ತಮ ಪ್ರೇಕ್ಷಕರಾಗುವುದಂತೂ ಸಾಧ್ಯ. ಯಕ್ಷಗಾನ ಕಲೆಯನ್ನು ಆಸ್ವಾದಿಸುವುದಕ್ಕೂ ಯುವ ತಲೆಮಾರಿಗೆ ತರಬೇತು ನೀಡುವ ಅಗತ್ಯವಿದೆ. ಉತ್ತಮ ಪ್ರೇಕ್ಷಕವರ್ಗ ನಿರ್ಮಾಣ ಇಂದಿನ ಅಗತ್ಯ. ವಿವಿಯ ಯಕ್ಷಗಾನ ಕೇಂದ್ರವು ಹಲವು ಕಾರ್ಯಯೋಜನೆಗಳೊಂದಿಗೆ ತರಬೇತಿ ಚಟುವಟಿಕೆಗಳನ್ನು ಆಯೋಜಿಸಿ ಯಕ್ಷ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ. ಇಲ್ಲಿ ಕಲಿತ ವಿದ್ಯಾರ್ಥಿಗಳ ಮೂಲಕ ಹೊಸ ಯಕ್ಷ ಪ್ರಯೋಗಗಳನ್ನು ರೂಪಿಸಬೇಕು” ಎಂದು ಹೇಳಿದರು. ಯಕ್ಷಗುರು ದೀವಿತ್ ಶ್ರೀಧರ್ ಕೋಟ್ಯಾನ್ ಅವರು ಮಾತನಾಡಿ “ಜಾನಪದ ಕಲೆಯಾದ ಯಕ್ಷಗಾನವು ಈಗ ಶಾಸ್ತ್ರೀಯ ಚೌಕಟ್ಟನ್ನು ಹೊಂದುತ್ತಿರುವುದು ಕಲೆ ಬೆಳೆಯುತ್ತಿರುವುದರ ಲಕ್ಷಣ. ಗಾನ ನೃತ್ಯ,…
ಮಂಗಳೂರು : ಸುರತ್ಕಲ್ ಗೋವಿಂದದಾಸ ಕಾಲೇಜಿನ ಸಾಹಿತ್ಯ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮತ್ತು ವಿದ್ಯಾ ಪ್ರಕಾಶನ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ರಘು ಇಡ್ಕಿದು ಅವರ 30ನೇ ಕೃತಿ ‘ಎನ್ನ ನಲಿಕೆ’ ತುಳು ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವು ಗೋವಿಂದದಾಸ ಕಾಲೇಜು ಸಭಾಂಗಣದಲ್ಲಿ ದಿನಾಂಕ 30-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೈವನರ್ತಕ ಲೋಕಯ್ಯ ಸೇರ ಮಾಣಿ ಇವರು ಕೃತಿ ಬಿಡುಗಡೆಗೊಳಿಸಿ “ತುಳುನೆಲದ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ನಂಬಿಕೆಗಳಂತಹ ಜಾನಪದ ಸೊಗಡಿನ ಮಹತ್ವದ ಸಂಗತಿಗಳು ಪುಸ್ತಕ ರೂಪದಲ್ಲಿ ಶಾಶ್ವತವಾಗಿ ದಾಖಲಾಗಬೇಕು. ಸಾಹಿತಿಗಳು ಈ ನಿಟ್ಟಿನಲ್ಲಿ ಮನ ಮಾಡಬೇಕು. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಹಳೆಯ ಆಚಾರ ವಿಚಾರಗಳು ಮರೆಗೆ ಸರಿಯುತ್ತಿದೆ. ಅದು ಮುಂದಿನ ಪೀಳಿಗೆಗೂ ಉಳಿಯುವಂತಾಗಲು ಗ್ರಂಥರೂಪದಲ್ಲಿ ದಾಖಲಾಗಬೇಕಾದುದು ಅಗತ್ಯ. ತುಳುನಾಡಿನ ದೈವಾರಾಧನೆಯ ಮೌಖಿಕ ಸಾಹಿತ್ಯದಲ್ಲಿ ಮೊಗೆದಷ್ಟೂ ಅದ್ಭುತ ವಿಚಾರಗಳಿವೆ. ಇಂದು ದೈವರಾಧನೆ ಬಗ್ಗೆ ಬಹಳಷ್ಟು ದಾಖಲೀಕರಣ…
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸುವರ್ಣ ಕರ್ನಾಟಕ ಭಾಷೆ-ಸಾಹಿತ್ಯ-ಸಂಸ್ಕೃತಿ ಆಶಯದಲ್ಲಿ ಬೆಳ್ತಂಗಡಿ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 17-12-2023ರಂದು ನಡೆಯಿತು. ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ “ಜೀವನ ಮೌಲ್ಯಗಳು ಮಾತೃ ಭಾಷೆಯಿಂದಲೇ ಬರುವುದು. ಮಾತೃಭಾಷೆಯಲ್ಲಿ ಮೂಡಿ ಬಂದ ಸಾಹಿತ್ಯ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಉದಾತ್ತವಾದ ಸಮಾಜ ನಿರ್ಮಾಣವೇ ಸಾಹಿತ್ಯದ ಮುಖ್ಯ ಕಾರ್ಯವಾಗಲಿ” ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಭಾಷೆ ಎಂಬುದು ಜ್ಞಾನದ ವಾಹಿನಿಯೇ ಹೊರತು ಭಾಷೆಯೇ ಜ್ಞಾನ ಅಲ್ಲ. ಇಂಗ್ಲೀಷ್ ನಮಗೆ ವಿದ್ಯೆಯ ಮಾಧ್ಯಮವಾಗಿರಲಿ ಹೊರತು ಸಂಸ್ಕೃತಿಯಾಗಿ ಸಲ್ಲದು. ಸತ್ವಗುಣ ರೂಪಿಸಲು ಸಾಹಿತ್ಯ ಮುಖ್ಯವಾದುದು. ಜನರ ಜೊತೆ ಬೆರೆಸುವ, ಜನರ ಮಧ್ಯೆ…
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಕದ್ರಿ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ ‘ಮಕ್ಕಳ ಹರಿಕಥೆ ಸ್ಪರ್ಧೆ’ಯನ್ನು ದಿನಾಂಕ 31-12-2023ರಂದು ವಿಜಯ ಬ್ಯಾಂಕ್, ನಿವೃತ್ತ ಚೀಫ್ ಮ್ಯಾನೇಜರ್ ಸುಂದರ ಶೆಟ್ಟಿ ಬೆಟ್ಟಂಪಾಡಿ ಇವರು ಉದ್ಘಾಟಿಸಿ “ಆಧುನಿಕ ಕಾಲಘಟ್ಟದಲ್ಲಿ ಬಹುಮಾಧ್ಯಮ ಮನೋರಂಜನೆಗಳ ಮಧ್ಯೆ ವಿದ್ಯಾರ್ಥಿಗಳಲ್ಲಿ ಹರಿಕಥೆಯಂತಹ ಶಾಸ್ತ್ರೀಯ ಕಲೆಗಳ ಮೇಲೆ ಒಲವು ಮೂಡಿಸುವ ಪ್ರಯತ್ನ ಆಗಬೇಕು. ವಿದ್ಯಾರ್ಜನೆಯೊಂದಿಗೆ ಶಿಷ್ಟಕಲೆಗಳ ಹವ್ಯಾಸವು ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿಸಲು ಸಹಕಾರಿಯಾಗುವುದು” ಎಂದು ಅಭಿಪ್ರಾಯಪಟ್ಟರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅವರು ಮಾತನಾಡಿ “ಹರಿಕಥೆ ಕಲೆಯಲ್ಲೂ ಮಕ್ಕಳಿಗೆ ಆಸಕ್ತಿ ಬರಬೇಕೆನ್ನುವ ದೃಷ್ಟಿಯಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ನಿರಂತರವಾಗಿಸುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪಂದಿಸಬೇಕು” ಎಂದರು. ಮುಖ್ಯ ಅಭ್ಯಾಗತರಾಗಿ ಕಲಾ ಸಾಹಿತಿ ಜನಾರ್ದನ ಹಂದೆ, ಹರಿಕಥಾ ಪರಿಷತ್ತಿನ ಉಡುಪಿ ಜಿಲ್ಲಾ ಸಂಚಾಲಕರಾದ ವೈ. ಅನಂತ ಪದ್ಮನಾಭ ಭಟ್ ಕಾರ್ಕಳ, ಶ್ರೀಮತಿ ಮಾಲತಿ ಭಂಡಾರ್ಕರ್…
ಉಡುಪಿ : ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಸಂಸ್ಥೆಗೆ ಐವತ್ತರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡ ‘ಯಕ್ಷ ಸಪ್ತೋತ್ಸವ’ ಕಾರ್ಯಕ್ರಮವು ದಿನಾಂಕ 01-01-2024ರಂದು ಉದ್ಘಾಟನೆಗೊಂಡಿತು. ಈ ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ಮಾತನಾಡುತ್ತಾ “ಇಂದಿನ ಯುವ ಪೀಳಿಗೆ ಹಿರಿಯರನ್ನು ಗೌರವಿಸುವಂತಾಗಲು, ತಮ್ಮ ತಂದೆತಾಯಿಯರ ಮಾತುಗಳನ್ನು ಪಾಲಿಸುವಂತಾಗಲು ರಾಮಾಯಣದ ನೈತಿಕ ಮೌಲ್ಯಗಳನ್ನು ಅವರಿಗೆ ದಾಟಿಸುವ ಕೆಲಸವಾಗಬೇಕು. ಯಕ್ಷಗಾನದಿಂದ ಈ ಕಾರ್ಯವನ್ನು ಮಾಡಲು ಸಾಧ್ಯವಿದೆ. ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು, ವೃದ್ಧ ತಂದೆತಾಯಿ ವೃದ್ಧಾಶ್ರಮಗಳನ್ನು ಸೇರುತ್ತಿರುವುದನ್ನು ಕಂಡಾಗ ದಿಗಿಲು ಹುಟ್ಟುತ್ತದೆ. ದುಡ್ಡಿನಿಂದ ಮಾನವ ಸಂಬಂಧಗಳು ಬಲಗೊಳ್ಳಲಾರವು ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಇಂದಿನ ಯುವಜನರಿಗೆ ವೃದ್ಧರೇಕೆ ಬೇಡವಾಗಿದ್ದಾರೆ ಎಂಬುದನ್ನು ವಿಮರ್ಶಿಸಿದಾಗ, ಅವರಲ್ಲಿ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳ ಅಧ:ಪತನ ಕಂಡು ಬರುತ್ತಿದೆ. ಈ ಸಮಸ್ಯೆಗೆ ಮರ್ಯಾದ ಪುರುಷೋತ್ತಮನ ಆದರ್ಶಗಳನ್ನು ಸಾರುವ ರಾಮಾಯಣ ರಾಮಬಾಣವಾಗಬಲ್ಲದು. ಆದ್ದರಿಂದ ಮಕ್ಕಳನ್ನು ಯಕ್ಷಗಾನ ಕಲಿಕೆಗೆ ಸೇರಿಸಿ.…
ಉಡುಪಿ : ಬೆಂಗಳೂರಿನ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜೀನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಯನ್ನು ದಿನಾಂಕ 30-12-2023ರಂದು ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಲೇಖಕರೂ ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದ ಸಂಸ ಬಯಲು ರಂಗಮಂದಿರದಲ್ಲಿ ನಡೆದ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ರಮೇಶ್ ಸುರ್ವೆ, ಗೌರವಾಧ್ಯಕ್ಷ ರಮೇಶ್ ಎನ್. ಅಂಗಡಿ, ಬೆಳಗಾವಿ ಚಿಪ್ಪಲಕಟ್ಟಿ ಹಿರೇಮಠದ ಡಾ.ಕಲ್ಮೇಶ್ವರ ಸ್ವಾಮಿ, ಬೆಂಗಳೂರು ವನಕಲ್ಲು ಶ್ರೀ ಮಲ್ಲೇಶ್ವರ ಸುಕ್ಷೇತ್ರದ ಡಾ. ಬಸವರಮಾನಂದ ಮಹಾಸ್ವಾಮಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ನಟಿ ಮೀನಾ, ನಟ ಶಂಕರ ಭಟ್, ಸಾಹಿತಿ ಡಾ. ಮಹಂತೇಶ ಮಲ್ಲನಗೌಡರ ಹಾಗೂ ಮತ್ತಿತರ…
ಮೈಸೂರು : ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ (ರಿ.) ಮೈಸೂರು ಪ್ರಸ್ತುತ ಪಡಿಸುವ 32ನೇ ‘ಅಂತರರಾಷ್ಟ್ರೀಯ ನಿರಂತರ ಕಲೆಮನೆ ಫೆಸ್ಟಿವಲ್’ ಕಾರ್ಯಕ್ರಮವು ದಿನಾಂಕ 07-01-2024ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಕಲೆಮನೆ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ವಿಶೇಷ ಆಹ್ವಾನಿತರಾದ ಯು.ಸಿ.ಎಫ್.ಎ., ಯು.ಒ.ಎಂ. ಸಂಗೀತ ಬೋಧನಾ ವಿಭಾಗದ ವಿದುಷಿ ಶ್ರೀಮತಿ ಆರ್.ಕೆ. ಚಂದ್ರಿಕಾ, ಶ್ರೀ ಸದ್ಗುರು ಸಂಗೀತ ಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ವಿ. ಮಹಾಲಕ್ಷ್ಮಿ, ಯು.ಸಿ.ಎಫ್.ಎ., ಯು.ಒ.ಎಂ. ಸಂಗೀತ ಬೋಧನಾ ವಿಭಾಗದ ಡಾ.ಎಸ್. ಗೀತಾ, ಮೈಸೂರಿನ ಕೆ.ಎಸ್.ಜಿ.ಎಚ್. ಸಂಗೀತ ವಿಶ್ವವಿದ್ಯಾಲಯದ ಬೋಧನಾ ವಿಭಾಗದ ಕಲಾರತ್ನ ವಿದ್ವಾನ್ ರಾವ್ ಆರ್. ಶರತ್, ಶಾಂತಲಾ ಅಕಾಡೆಮಿ ಆಫ್ ಮ್ಯೂಸಿಕ್ & ಡ್ಯಾನ್ಸ್ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ಶಾಂತಲಾ ವಟ್ಟಂ, ಖ್ಯಾತ ನೃತ್ಯ ಗುರು ಹಾಗೂ ಮೈಸೂರು ಆರ್ಟ್ ಗ್ಯಾಲರಿಯ ಕಾರ್ಯದರ್ಶಿಯಾದ ಡಾ. ಜಮುನಾರಾಣಿ ಮಿರ್ಲೆ, ಮಂಡ್ಯ ಮದ್ದೂರಿನ ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ…
ಮಂಗಳಾದೇವಿ : ಯಕ್ಷ ಪ್ರತಿಭೆ ಮಂಗಳೂರು ವತಿಯಿಂದ 15ನೇ ವರ್ಷದ ಸಂಭ್ರಮ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮವು ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ದಿನಾಂಕ 23-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಇವರು ಉದ್ಘಾಟಿಸಿ ಮಾತನಾಡುತ್ತಾ “ಕಲಾವಿದರನ್ನು, ಕಲಾ ಪೋಷರಕನ್ನು ಗುರುತಿಸಿ ಅವರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ಮಾಡುವುದು ಶ್ರೇಷ್ಠ ಕಾರ್ಯ. ವರ್ಷದಿಂದ ವರ್ಷಕ್ಕೆ ಗೋಪಾಲಕೃಷ್ಣ ಆಸ್ರಣ್ಣ ಅವರನ್ನು ಸಂಸ್ಮರಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಕಷ್ಟು ಸಂಘಟನೆಗಳು ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದೆ ಇಂದು ಸಂತೋಷದ ವಿಚಾರ, ಕಟೀಲಿನ ಒಂದು ಮೇಳ ಆರು ಮೇಳಗಳಾಗಿ ವಿಸ್ತರಣೆಗೊಳ್ಳಲೂ ಅವರೇ ಕಾರಣ ಎನ್ನಲು ಹೆಮ್ಮೆಯಾಗುತ್ತಿದೆ” ಎಂದು ಹೇಳಿದರು. ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್, ಬರ್ಕೆ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಸುಚೇಂದ್ರ ಅಮೀನ್, ಹರಿನಾರಾಯಣ ಬೈಪಡಿತ್ತಾಯ, ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಡಾ. ಹರಿಕೃಷ್ಣ…