Author: roovari

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೊಳುವಾರು ಶ್ರೀ ಅಂಜನೇಯ ಯಕ್ಷಗಾನ ಕಲಾ ಸಂಘದ 55ರ ಸಂಭ್ರಮ ಕಾರ್ಯಕ್ರಮವು ದಿನಾಂಕ 23-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ತಾಳಮದ್ದಳೆಗೆ ಸೀಮಿತವಾಗಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ತನ್ನ 55ನೇ ವರ್ಷಾಚರಿಸುವುದು ನೋಡಿದರೆ ಯಕ್ಷಗಾನ ತಾಳಮದ್ದಳೆ ಎಷ್ಟು ಪ್ರಬಲವಾದ ಮಾಧ್ಯಮ ಅನ್ನುವುದನ್ನು ತೋರಿಸಿಕೊಟ್ಟಿದೆ. ಭಾಸ್ಕರಾಚಾರ್ಯ ಅವರು ಈ ಸಂಘದ ಸಾರಥ್ಯ ವಹಿಸಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. 10 ವರ್ಷಗಳ ಹಿಂದೆ ಮಹಿಳಾ ಸಂಘ ಪುತ್ತೂರಿನಲ್ಲಿ ಆರಂಭಿಸಿ ಹಲವು ಮಹಿಳಾ ಅರ್ಥಧಾರಿಗಳಿಗೆ ತರಬೇತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಸಂಘದಿಂದ ಯಕ್ಷಗಾನಕ್ಕೆ ಇನ್ನಷ್ಟು ಸೇವೆ ಸಿಗಲಿ” ಎಂದು ಹಾರೈಸಿದರು. ಸ್ವರ್ಣೋದ್ಯಮಿ ಶ್ರೀ ಲಕ್ಷ್ಮೀಕಾಂತ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಕಲಾ ಸಂಘ ಮತ್ತಷ್ಟು ಬೆಳವಣಿಗೆ ಕಾಣಲಿ” ಎಂದು ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ ಡಾ.…

Read More

ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್‌ ಮಂಗಳೂರು ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ದಿನಾಂಕ 24-12-2023ರಂದು ಅಲ್ಲಿಯ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ “ಮನಸ್ಸಿಗೆ ಮದ ನೀಡದೆ ಮುದ ನೀಡುವ ಮೋಹಕ ಕಲೆ ಭರತನಾಟ್ಯ. ಕರಾವಳಿಯ ನೃತ್ಯ ಕಲಾವಿದರ ಈ ಸಂಘಟನೆ ಸ್ತುತ್ಯಾರ್ಹ” ಎಂದು ಹೇಳಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸ್ಥಾಪಕ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್’ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ದಂಪತಿಯನ್ನು ಗೌರವಿಸಲಾಯಿತು. ಗೋಷ್ಠಿಗಳಲ್ಲಿ ವಿದ್ವಾನ್ ಚಂದ್ರಶೇಖರ ನಾವಡ ಅಧ್ಯಕ್ಷತೆಯಲ್ಲಿ ಗುರು ಉಷಾ ದಾತಾರ್ ದೇವಾಲಯ ನೃತ್ಯದ ಬಗ್ಗೆ, ಲಂಡನ್‌ನ ಚಿತ್ರಲೇಖ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೀಲಾ ಚಂದ್ರಶೇಖರ್ ಭಕ್ತಿಯ ವಿವಿಧ ಆಯಾಮಗಳ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಯಲ್ಲಿ ಭರತನಾಟ್ಯಕ್ಕೆ ಧ್ವನಿಸುರುಳಿ: ಸಜೀವ ಹಿಮ್ಮೇಳ…

Read More

ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಸಂಸ್ಥೆಯ ಐವತ್ತರ ಸಂಭ್ರಮದ ಹಬ್ಬ ‘ಯಕ್ಷ ಸಪ್ತೋತ್ಸವ’ ಕಾರ್ಯಕ್ರಮವು ದಿನಾಂಕ 01-01-2024ರ ಸೋಮವಾರದಿಂದ 07-01-2024 ಆದಿತ್ಯವಾರದವರೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ದಿನಾಂಕ 01-01-2024ರ ಸೋಮವಾರ ‘ಪುತ್ರಕಾಮೇಷ್ಟಿ’, 02-01-2024ರ ಮಂಗಳವಾರ ‘ಸೀತಾ ಕಲ್ಯಾಣ’ – ‘ಪರಶುರಾಮ ಗರ್ವಭಂಗ’, 03-01-2024ರ ಬುಧವಾರ ‘ಪಟ್ಟಾಭಿಷೇಕ ಭಂಗ’, 04-01-2024ರ ಗುರುವಾರ ‘ಸೀತಾಪಹಾರ’, 05-01-2024ರ ಶುಕ್ರವಾರ ‘ವಿಭೀಷಣ ನೀತಿ’ – ‘ಕೈಕಸಾ ನೀತಿ’, 06.01.2024ರ ಶನಿವಾರ ‘ರಾವಣ ವಧೆ’ ಹಾಗೂ ದಿನಾಂಕ 07-01-2024ರ ಆದಿತ್ಯವಾರ ದೊಂದಿ ಬೆಳಕಿನಲ್ಲಿ ‘ಅಗ್ನಿ ಪರೀಕ್ಷೆ’ – ‘ರಾಮಪಟ್ಟಾಭೀಷೇಕ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕಲಾವಿದರುಗಳಾಗಿ ಸರ್ವಶ್ರೀಗಳಾದ ರಾಘವೇಂದ್ರ ಮಯ್ಯ ಹಾಲಾಡಿ, ಜನ್ಸಾಲೆ ರಾಘವೇಂದ್ರ ಆಚಾರ್, ಸುರೇಶ್ ಶೆಟ್ಟಿ ಶಂಕರನಾರಾಯಣ, ಪ್ರಸನ್ನ ಭಟ್ ಭಾಲ್ಕಲ್, ಪರಮೇಶ್ವರ ನ್ಯಾಕ್ ಕಾನ್‌ಗೋಡು, ಲಂಬೋದರ ಹೆಗಡೆ ನಿಟ್ಟೂರು, ಉದಯ ಕುಮಾರ ಹೊಸಾಳ, ಸುನಿಲ್ ಭಂಢಾರಿ ಕಡತೋಕ, ಬೋಳೆರೆ ಗಜಾನನ ಭಂಡಾರಿ, ಎನ್.ಜಿ.ಹೆಗೆಡೆ, ರಾಘವೇಂದ್ರ ಹೆಗಡೆ, ಶಶಿ ಆಚಾರ್,…

Read More

ಧಾರವಾಡ : ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಇದರ ವತಿಯಿಂದ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತೋತ್ಸವ -2023 ಕಾರ್ಯಕ್ರಮವು ದಿನಾಂಕ 31-12-2023ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಭಾರತ ಸರ್ಕಾರದ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಎಸ್. ಲಾಡ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಜಾನೆ 9.30ಕ್ಕೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಚೇರಿಯಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಧಾರವಾಡದ ಶ್ರೀಮತಿ ಅಕ್ಕಮಹಾದೇವಿ ಆಲೂರ, ಹುಬ್ಬಳ್ಳಿ ಡಾ. ಚಂದ್ರಿಕಾ ಕಾಮತ್, ಉಜಿರೆ ಡಾ. ಮಿಥುನ ಚಕ್ರವರ್ತಿ…

Read More

ಬೆಳಗಾವಿ : ಸ್ವಚ್ಛ ಸಂಕೇಶ್ವರ ಮುಖಗೀತೆ (ಟೈಟಲ್ ಸಾಂಗ್)ಗಾಗಿ ಸ್ವರಚಿತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಕವನಗಳು ಸ್ವಚ್ಛತೆ, ಶುಚಿತ್ವ, ಸಂಕೇಶ್ವರ, ಅಭಿಯಾನ, ಪರಿಸರ, ಸ್ವಚ್ಛ ಭಾರತ, ಹಸಿತ್ಯಾಜ್ಯ ಮತ್ತು ಒಣತ್ಯಾಜ್ಯ ವಿಂಗಡಣೆ, ಹಸುರೀಕರಣ ಹಾಗೂ ಶ್ರಮದಾನ ಈ ರೀತಿಯಾಗಿ ಸ್ವಚ್ಛತೆಗೆ ಸಂಬಂಧಿಸಿದ ಪದಬಳಸಿ ಕವನ ರಚಿಸಿ ಕಳುಹಿಸಬಹುದಾಗಿದೆ. *ಕವಿತೆ ಸ್ವಚ್ಛ ಸಂಕೇಶ್ವರ ಅಭಿಯಾನದ (ಟೈಟಲ್ ಸಾಂಗ್) ಮುಖಗೀತೆ ಆಗುವಂತಿರಬೇಕು. *ನುಡಿ, ಬರಹ ಅಥವಾ ವಾಟ್ಸಾಪ್ ಟೈಪ್ಸ್ (ಯೂನಿಕೋಡ್) ಮಾದರಿಯಲ್ಲಿ ಇಪ್ಪತ್ತು ಸಾಲುಗಳ ಒಳಗಿರಬೇಕು. *ಒಬ್ಬರು ಒಂದೇ ಕವಿತೆ ಕಳಿಸಬೇಕು. *ನಿರ್ಣಾಯಕರ ನಿರ್ಧಾರ ಅಂತಿಮ ಬಹುಮಾನವಾಗಿ ಪ್ರಥಮ ನಗದು ರೂಪಾಯಿ 5000/-, ದ್ವಿತೀಯ 2500/-  ಹಾಗೂ ತೃತೀಯ 1000/-  ನೀಡಿ ಗೌರವಿಸಲಾಗುವುದು. ಕವನವನ್ನು ದಿನಾಂಕ 05-01-2023ರ ಒಳಗಾಗಿ [email protected] ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ : 9481742709

Read More

ಕಟಪಾಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಇನ್ವೆಂಜರ್ ಫೌಂಡೇಶನ್ ಮಂಗಳೂರು, ಸೃಷ್ಟಿ ಫೌಂಡೇಶನ್ (ರಿ.) ಕಟಪಾಡಿ ಹಾಗೂ ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31-12-2023ರ ಭಾನುವಾರ ಸಂಜೆ ಗಂಟೆ 4.00ರಿಂದ ಕಟಪಾಡಿಯ ಎಸ್.ವಿ.ಎಸ್. ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಪು ವಿಧಾನ ಸಭಾಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರಿನ ಇನ್ವೆಂಜ‌ರ್ ಫೌಂಡೇಶನ್ ಇದರ ಅಧ್ಯಕ್ಷರಾದ ಶ್ರೀ ಕೆ. ಸತ್ಯೇಂದ್ರ ಪೈ, ಉಡುಪಿ ತುಳುಕೂಟ (ರಿ.) ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯ ಉದ್ಯಮಿ ಶ್ರೀ ಮಹಮ್ಮದ್ ಮೌಲಾ ಮಾಲಕರು ನೈನಾ ಫ್ಯಾನ್ಸಿ, ಸಮಾಜ ಸೇವಕರರಾದ ಶ್ರೀ ಶೇಖರ್ ಅಮೀನ್ ಕೋಟೆ, ಉಡುಪಿಯ ಸಮಾಜ ಸೇವಕರರಾದ ಶ್ರೀ ವಿಶ್ವನಾಥ ಶೆಣೈ, ಪಾಂಗಾಳದ ಶ್ರೀ ದೇವಿ ಕ್ರೇನ್ಸ್ ಇದರ ಮಾಲಕರಾದ…

Read More

ಮಂಗಳೂರು : ಸಂಗೀತ ಪರಿಷತ್‌ ಮಂಗಳೂರು ವತಿಯಿಂದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಾರತೀಯ ವಿದ್ಯಾಭವನ ಮಂಗಳೂರು ಸಹಯೋಗದೊಂದಿಗೆ ದಿನಾಂಕ 31-12-2023ರಂದು ನಗರದ ಕೊಡಿಯಾಲ್‌ ಬೈಲ್‌ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ‘ಕರ್ನಾಟಕ ಸಂಗೀತ ಕಾರ್ಯಕ್ರಮ’ ಆಯೋಜಿಸಲಾಗಿದೆ. ಸಂಜೆ 4ಕ್ಕೆ ಶ್ರೀಮತಿ ಸುನಾದ ಪಿ.ಎಸ್.ಮಾವೆ ಇವರಿಂದ ಹಾಡುಗಾರಿಕೆ ನಡೆಯಲಿದ್ದು, ಕು. ಸುಪ್ರೀತಾ ಪಿ.ಎಸ್‌. ವಯಲಿನ್, ಸುಮುಖ ಕಾರಂತ್ ಮೃದಂಗದಲ್ಲಿ ಸಹಕಾರ ನೀಡುವರು. ಸಂಜೆ 5ರಿಂದ ವಯಲಿನ್‌ ಕಲಾವಿದರಾದ ರಘುರಾಮ್‌ ಹೊಸಹಳ್ಳಿ, ವಿಶ್ವಜಿತ್ ಮತ್ತೂರು ಮತ್ತು ಕಾರ್ತಿಕೇಯ ರಾಮಚಂದ್ರ ಇವರ ವಯಲಿನ್‌ ಕಛೇರಿಗೆ ಮೃದಂಗದಲ್ಲಿ ಅನೂರು ವಿನೋದ ಶ್ಯಾಮ್ ಬೆಂಗಳೂರು ಹಾಗೂ ಖಂಜೀರದಲ್ಲಿ ಸುಮುಖ ಕಾರಂತ್‌ ಸಹಕರಿಸುವರು.

Read More

ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಡಾ. ಡಿ.ಎಸ್. ಕರ್ಕಿಯವರ 116ನೇ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ 2023 ಕಾರ್ಯಕ್ರಮವು ದಿನಾಂಕ 31-12-2023ರಂದು ಮುಂಜಾನೆ 11 ಗಂಟೆಗೆ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಪೂಜ್ಯ ಶ್ರೀ ಜಗದ್ಗುರು ಡಾ. ಸಿದ್ಧರಾಮಸ್ವಾಮಿಗಳ ಆಶೀರ್ವಾದದೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ರಮೇಶ ಮು. ಕರ್ಕಿಯವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಾರವಾರದ ಶ್ರೀಮತಿ ಶ್ರೀದೇವಿ ಕೆರೆಮನೆ ಇವರ ‘ಆಸೆಯೆಂಬ ಶೂಲದ ಮೇಲೆ’, ಬೆಳಗಾವಿಯ ಶ್ರೀಮತಿ ಆಶಾ ಕಡಪಟ್ಟಿ ಇವರ ‘ಹರಕು ಕೌದಿಯ ಕಿಂಡಿ’ ಮತ್ತು ಶ್ರೀಮತಿ ಇಂದಿರಾ ಮೊಟೆ ಬೆನ್ನೂರು ಇವರ ‘ಭಾವ ಬೆಳಗು’ ಕೃತಿಗಳಿಗೆ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಿರುವರು.

Read More

ಬೆಂಗಳೂರು : ಕಲಾ ಗಂಗೋತ್ರಿ ರಂಗ ತಂಡದ ಸುವರ್ಣ ಸಂಭ್ರಮದ ಪ್ರಯುಕ್ತ ಡಾ. ವಿದ್ವಾನ್ ಮಂಜುನಾಥ ಭಟ್ಟ ಅವರ ನೆನಪಿನಲ್ಲಿ ‘ಮೂಕಜ್ಜಿಯ ಕನಸುಗಳು’ ನಾಟಕ ಪ್ರದರ್ಶನ ದಿನಾಂಕ 31-12-2023ರಂದು ಬೆಂಗಳೂರಿನ ಜೆ.ಪಿ. ನಗರದ ರಂಗ ಶಂಕರದಲ್ಲಿ ನಡೆಯಲಿದೆ. ಡಾ. ಕೋಟ ಶಿವರಾಮ ಕಾರಂತ ಇವರ ಕಾದಂಬರಿ ಆಧಾರಿತ ಈ ನಾಟಕದ ರಂಗರೂಪ ಎಸ್. ರಾಮಮೂರ್ತಿ, ವಿನ್ಯಾಸ ಮತ್ತು ನಿರ್ದೇಶನ ಡಾ. ಬಿ.ವಿ. ರಾಜಾರಾಂ ಇವರದ್ದು. ಈ ನಾಟಕಕ್ಕೆ ನಾರಾಯಣ ರಾಯಚೂರ್ ಗೀತ ರಚಿಸಿದ್ದು, ಪ್ರವೀಣ್ ಡಿ. ರಾವ್ ಹಿನ್ನೆಲೆ ಸಂಗೀತ ಸಂಯೋಜಿಸಿ ಎಂ.ಡಿ. ಪಲ್ಲವಿ ಧ್ವನಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ ಕೈವಾರ 9972398931 ಇವರನ್ನು ಸಂಪರ್ಕಿಸಿ.

Read More

ಗರಿಗೆದರಿ ನರ್ತಿಸುತ್ತಿರುವ ನವಿಲು, ಮೋಡದ ಮರೆಯಿಂದ ಇಣುಕುತ್ತಿರುವ ಸೂರ್ಯ, ಮರದಿಂದ ಮರಕ್ಕೆ ಹಾರಿ ಬರುತ್ತಿರುವ ಪಕ್ಷಿಗಳು, ವರ್ಷಧಾರೆಗೆ ಪ್ರಕೃತಿಯ ರಮ್ಯ ನೋಟ, ಸರೋವರದ ವಿಹಂಗಮ ದೃಶ್ಯ, ಆಕಾಶದೆತ್ತರಕ್ಕೆ ನಿಂತ ಪರ್ವತಗಳ ಸಾಲು, ಮರಗಿಡಗಳಲ್ಲಿ ಅರಳಿ ನಿಂತ ಹೂವುಗಳು ಹೀಗೆ ಒಂದಕ್ಕಿಂತ ಒಂದು ಕಣ್ಮನ ಸೆಳೆಯುವ ಚಿತ್ರಗಳು, ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಎಂಬ ಚಿತ್ರಗಳ ಸರಣಿ ಮಾಲೆಯನ್ನು ಕಲಾಸಕ್ತರ ಮಡಿಲಿಗೆ ಅರ್ಪಿಸಿದ್ದಾರೆ ಹವ್ಯಾಸಿ ಕಲಾವಿದೆ ಶ್ರೀಮತಿ ಭಾರತಿ ಭಂಡಾರಿ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯವರು. ಪ್ರಸ್ತುತ ಈಗ ಬೆಂಗಳೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಾ ತರಗತಿಗೆ ಹೋಗಿ ಅಧ್ಯಯನ ಮಾಡಿದವರಲ್ಲ. ಇವರಿಗೆ ಕಲಾಸಕ್ತಿ ಮೂಡಿದ್ದು ಬಾಲ್ಯದಲ್ಲಿ ಇವರ ತಾಯಿ ಮಾಡಿರುವ ಚಿಕ್ಕಪುಟ್ಟ ಕಲಾಕೃತಿಗಳನ್ನು ನೋಡಿ. ಅದೇ ರೀತಿ ಕಲಾಕೃತಿಯನ್ನು ತಾವು ಕೂಡ ಮಾಡಬೇಕೆಂಬ ಹಂಬಲವನ್ನು ಮೂಡಿಸಿಕೊಂಡರು. ಬಾಲ್ಯದಲ್ಲಿ ಇವರ ಪ್ರತಿಭೆಗೆ ನೀರೆರೆದು ಪೋಷಿಸಿದವರು ಇವರ ತಾಯಿ. ನಂತರದ ದಿನಗಳಲ್ಲಿ ತಾವು…

Read More