Author: roovari

ಬೆಂಗಳೂರು : ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ‘ಪದ’ ಪ್ರಸ್ತುತ ಪಡಿಸಿದ ‘ಕರ್ನಾಟಕ ಜಾನಪದ ಉತ್ಸವ’ದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 20-02-2024ರಂದು ನಡೆಯಿತು. ಸುಮಾ ಆರ್. ಕಂಠಿ ನಿರ್ದೇಶನದ ಜಾನಪದ ನೃತ್ಯ ನಡೆಯಿತು. ಜಾನಪದ ನೃತ್ಯ ಹಳೆಯ ಮೂಲ ಜಾನಪದಗಳ ಮೆಲುಕು ಸೊಗಡು ನೋಡುಗರ ಮನ ತುಂಬಿತು. ದಿನಾಂಕ 21-02-2024ರಂದು ನಡೆದ ಜಾನಪದ ಉತ್ಸವದಲ್ಲಿ ಮೂಲ ಜಾನಪದ ಗಾಯನವನ್ನು ಪದ ದೇವರಾಜ್ ಶಂಕರ್, ಭಾರತಿಪುರ ಮಂಜುನಾಥ್ ಕೆ.ಎಸ್., ರಾಜೇಶ್ವರಿ ದಿವ್ಯ ಬಸವರಾಜ್, ಜಯಂತಿ ಶ್ರೀನಿವಾಸ್ ಹಾಗೂ ಚನ್ನಯ್ಯ ಗಾಯನವನ್ನು ಪ್ರಸ್ತುತಪಡಿಸಿದರು. ಸಮಾರೋಪ ನುಡಿಯನ್ನು ಡಾ. ಅಪ್ಪುಗೆರೆ ತಿಮ್ಮರಾಜು ಮಾತನಾಡಿ “ಪ್ರತಿ ಜಿಲ್ಲೆಗೊಬ್ಬರು ಜನಪದಗೋಸ್ಕರವಾಗಿ ದುಡಿದಂತಹ ಮಹನೀಯರಿದ್ದಾರೆ. ಅವರೆಲ್ಲ ಈಗ ಕಣ್ಮರೆಯಾಗಿದ್ದಾರೆ. ಸೋಬಾನೆ ಚಿಕ್ಕಮ್ಮನಂತವರು ಇಂದು ನಮ್ಮ ಜೊತೆ ಇಲ್ಲ. ಅನೇಕ ಜನರು ಜನಮನಗಳಿಂದ ದೂರವಾದ ಜನಪದ ಆಗಿದ್ದಾರೆ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ‘ಪದ’ ದೇವರಾಜ್ ಮಾಡುತ್ತಿದ್ದಾರೆ. ಸರ್ಕಾರಗಳು ಈಗಾಗಲೇ ಜನಪದಕ್ಕೆ ನೀಡಬೇಕಾದ ಸೌಲತ್ತುಗಳನ್ನು ನೀಡದೆ ವಂಚಿಸಿದೆ. ಜಿಲ್ಲೆಗಳಲ್ಲಿ…

Read More

ಮೈಸೂರು : ‘ಅಭಿಯಂತರರು’ ಪ್ರಸ್ತುತ ಪಡಿಸುವ ‘ರಾಷ್ಟ್ರೀಯ ರಂಗ ಉತ್ಸವ’ವು ದಿನಾಂಕ 28-02-2024ರಿಂದ 03-03-2024ರವರೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಿರಿಯ ಕವಿ ಹಾಗೂ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯರವರ ಅಧ್ಯಕ್ಷತೆಯಲ್ಲಿ ನಾಟಕ ಕಾರ ಹಾಗೂ ಸಾಹಿತಿಗಳಾದ ಡಾ. ಕೆ.ವೈ. ನಾರಾಯಣ ಸ್ವಾಮಿಯವರು ಉದ್ಘಾಟಿಸಲಿದ್ದಾರೆ. ದಿನಾಂಕ 28-02-2024ರಂದು ಆದಿಶಕ್ತಿ ಪುದುಚರಿ ಅರ್ಪಿಸುವ ವಿನಯ್ ಕುಮಾರ್ ನಿರ್ದೇಶನದಲ್ಲಿ ‘ಭೂಮಿ’ ಇಂಗ್ಲೀಷ್ ನಾಟಕ, ದಿನಾಂಕ 29-02-2024ರಂದು ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನ ಅರ್ಪಿಸುವ ಜೋಸೆಫ್ ಜಾನ್ ನಿರ್ದೇಶನದಲ್ಲಿ ‘ಸರಸ ವಿರಸ ಸಮರಸ’ ಕನ್ನಡ ನಾಟಕ, ದಿನಾಂಕ 01-03-2024ರಂದು ಕಾರ್ತಿಕ್ ಹೆಬ್ಬಾರ್ ನಿರ್ದೇಶನದಲ್ಲಿ ಬೆಂಗಳೂರಿನ ಧೀಮಹಿ ಸೆಂಟರ್ ಆಫ್ ಆರ್ಟ್ಸ್ ಅರ್ಪಿಸುವ ‘# 36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ, ದಿನಾಂಕ 02-03-2024ರಂದು ಆಕ್ಟ್ ರಿಯಾಕ್ಟ್ ಅರ್ಪಿಸುವ ಕೃಷ್ಣಮೂರ್ತಿ ಹನೂರು ರಚಿಸಿರುವ ನವೀನ್ ಸಾಣೇಹಳ್ಳಿ ನಿರ್ದೇಶನದಲ್ಲಿ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕನ್ನಡ ನಾಟಕ ಮತ್ತು ದಿನಾಂಕ 03-03-2024ರಂದು ಮುಂಬೈ ಅಭಿನಯ ಕಲ್ಯಾಣ್ ಅರ್ಪಿಸುವ ಅನಿಕೇತ್…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ತ್ರಿಂಶತ್ ಸಂಭ್ರಮದ ಪ್ರಯುಕ್ತ ಕೇರಳದ ವಿವೇಕ್ ಮೂಝಿಕುಳಮ್ ಅವರಿಂದ ವಿದ್ವತ್ ಪೂರ್ಣ ಸಂಗೀತ ಕಛೇರಿಯು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ದಿನಾಂಕ 24-02-2024ರಂದು ನಡೆಯಿತು. ಉತ್ತಮ ಶಾರೀರ ಹಾಗೂ ಕೃತಿಗಳ ಪ್ರಸ್ತುತಿಯು ಕೇಳುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಇವರಿಗೆ ಪಕ್ಕವಾದ್ಯದಲ್ಲಿ ಕೇಶವ ಮೋಹನ್ ಕುಮಾರ್ ಬೆಂಗಳೂರು ಪಿಟೀಲು, ಸುನಾದಕೃಷ್ಣ ಅಮೈ ಮಂಗಳೂರು ಮೃದಂಗ, ಬಾಲಕೃಷ್ಣ ಹೊಸಮನೆ ಪುತ್ತೂರು ಮೋರ್ಸಿಂಗ್ ಅವರ ಸಹಕಾರವು ಉತ್ತಮವಾಗಿತ್ತು. ಇದಕ್ಕೂ ಮೊದಲು ಉಡುಪಿಯ ಶ್ರೀಯುತ ರಾಘವೇಂದ್ರ ರಾಯರ ಶಿಷ್ಯ ಯುವ ಪ್ರತಿಭೆ ಪ್ರಣವ್ ಅಡಿಗ ಅವರಿಂದ ಕೊಳಲು ವಾದನ ಕಛೇರಿಯು ಮಂಗಳೂರಿನ ಗೌತಮ್ ಭಟ್ ಪಿಟೀಲು ಹಾಗೂ ಕಟೀಲಿನ ಶೈಲೇಶ್ ರಾವ್ ಮೃದಂಗ ಸಹಕಾರದೊಂದಿಗೆ ನಡೆಯಿತು. ಸಂಗೀತ ಪರಿಷತ್ತಿನ ಸದಸ್ಯೆ ಸೀತಾಲಕ್ಷ್ಮಿ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಖಜಾಂಚಿ ಸುಬ್ರಹ್ಮಣ್ಯ ಉಡುಪ ವಂದಿಸಿದರು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ವಿದ್ಯಾಭವನ ಸಂಯೋಗದೊಂದಿಗೆ ಈ…

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ‘ಗ್ರಾಮ ಸಾಹಿತ್ಯ ಸಂಭ್ರಮ 2024’ ಸರಣಿ ಕಾರ್ಯಕ್ರಮ-13 ದಿನಾಂಕ 24-02-2024ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಮುಖ್ಯವಾಗಿ ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಂಡು ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ಹಾಗೂ ಅವರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನ ಜೊತೆಗೆ ಕ.ಸಾ.ಪ. ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರ ಧ್ಯೇಯ ವಾಕ್ಯವಾದ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿಸುವಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಡ್ಪಳ್ಳಿ ಗ್ರಾಮ ಸಾಹಿತ್ಯ ಸಂಭ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಖಂಡಿತವಾಗಿಯೂ ಈ ಕಾರ್ಯಕ್ರಮದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸಾಹಿತ್ಯದಲ್ಲಿ ಆಸಕ್ತಿ ಇಲ್ಲದ…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಕರ್ನಾಟಕ ಸಂಘ ಪುತ್ತೂರು ಹಾಗೂ ಕನ್ನಡ ವಿಭಾಗ ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಸಹಯೋಗದಲ್ಲಿ ಡಾ. ಶ್ರೀಧರ ಎಚ್. ಜಿ. ಅವರ ‘ನೆನಪಾಗಿ ಉಳಿದವರು’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 29-02-2024ರ ಸಂಜೆ ಘಂಟೆ 4.30 ರಿಂದ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಡಾ. ಗಿರೀಶ್ ಭಟ್ ಅಜಕ್ಕಳ ಕೃತಿ ಲೋಕಾರ್ಪಣೆ ಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್, ಹಾಗೂ…

Read More

ತೆಕ್ಕಟ್ಟೆ: ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್-1999 ಶ್ವೇತಯಾನ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18-02-2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಮಾತನಾಡಿ “ಕಲಾಭಿಮಾನಿಗಳ ಆಸಕ್ತಿಯನ್ನು ಗುರುತಿಸಿ, ಯಶಸ್ವಿ ಸಂಸ್ಥೆ ಪ್ರದರ್ಶನಗಳನ್ನು ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಬೆನ್ನೆಲುಬಾಗಿದ್ದ ಸದಸ್ಯರನ್ನು ರಜತ ಸಂಭ್ರಮದಲ್ಲಿ ನೆನಪಿಸುವ ಕೆಲಸ ಮಾಡುತ್ತಿರುವ ಕಲಾವೃಂದ ಬಹಳಷ್ಟು ಎತ್ತರಕ್ಕೆ ಏರುವ ಸಾಧ್ಯತೆಗಳಿವೆ. ಕಲಾ ಪೋಷಕರಿಗೆ ವೇದಿಕೆ ನಿರ್ಮಿಸಿ, ಅವರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಕಾರ್ಯ ಸಾಧರಣವಲ್ಲ. ಬಹು ಕ್ಲಿಷ್ಟವಾದ ಸಾಹಸವೆನ್ನಿಸುವ ಕೆಲಸವನ್ನೇ ಕೈಗೆತ್ತಿಕೊಂಡು ಮುನ್ನುಗ್ಗುತ್ತಿರುವ ಸಂಸ್ಥೆ ಇಂದು ಇಪ್ಪತೈದನೇ ಸಂಭ್ರಮಕ್ಕೆ ನಾಂದಿ ಹಾಡುತ್ತಿದೆ. 108 ಕಾರ್ಯಕ್ರಮದ ಯೋಜನೆ ಸಾವಿರದಷ್ಟು ಆಗಲಿ” ಎಂದು ಶುಭಹಾರೈಸಿದರು. ಶುಭಾಶಂಸನೆಗಾಗಿ ಆಗಮಿಸಿದ ಯಕ್ಷ ಸಾಹಿತಿ ಪವನ್ ಕಿರಣ್‌ಕೆರೆ ಮಾತನ್ನಾಡಿ “ಯಶಸ್ವಿ ಸಂಸ್ಥೆ ಯಕ್ಷಗಾನವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿತ್ತೇ ಹೊರತು ಯಕ್ಷಗಾನದಿಂದ ತಾನು ಮುಖ್ಯ ವಾಹಿನಿಗೆ ಬರುವ ಯಾವ ಪ್ರಯತ್ನವನ್ನು ಮಾಡಿರಲಿಲ್ಲ. ಇಪ್ಪತ್ತೆತೈದು ವರ್ಷದ ಈ…

Read More

ಆಲ್ ಔಟ್, ನಾಕ್ ಔಟ್.. ಶಬ್ದಗಳನ್ನು ಧಾರಳ ಕೇಳಿ ಮನನ ಮಾಡಿಕೊಂಡಿರುವ ನಮಗೆ ಯಾಕೋ ಗೊತ್ತಿಲ್ಲ ಈ ‘ಲೀಕ್ ಔಟ್’ ಮಾತ್ರ ಅಷ್ಟು ಸಹ್ಯವಲ್ಲ ಕೇಳಲು. ( ಇದೇ ಕಾರಣಕ್ಕೆ ಕೆಲವು ಕಡೆ ನಾಟಕ ಪ್ರದರ್ಶನಕ್ಕೆ ಒಪ್ಪುತ್ತಿಲ್ಲವಂತೆ!) ಆದರೆ ಮಂಗಳೂರು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ  ನಡೆದ ನಟಿ ಅಕ್ಷತಾ ಪಾಂಡವಪುರ ಅವರ ಏಕವ್ಯಕ್ತಿ, ಆಪ್ತ ರಂಗಭೂಮಿ ಆಧಾರದ ಅತೀ ಸರಳ ರಂಗಸಜ್ಜಿಕೆಯ ‘ಲೀಕ್ ಔಟ್’ ನಾಟಕ ಸುಮಾರು ತೊಂಭತ್ತು ನಿಮಿಷ ಒಂದು ಹೊಸ ಆನುಭವ ನೀಡಿದ್ದು ಸುಳ್ಳಲ್ಲ. ಆಧುನಿಕ ರಂಗಭೂಮಿಯ ಮುಂದುವರಿದ ಭಾಗವಾಗಿ ಆಪ್ತ ರಂಗಭೂಮಿ ಈಗೀಗ ಅಲ್ಲಲ್ಲಿ ಹೊಸದಾಗಿ ಕಂಡುಬರುತ್ತಿರುವ ವಿದ್ಯಮಾನ. ಪ್ರೇಕ್ಷಕರನ್ನು ಸಂದರ್ಭಾನುಸಾರ ನಟ ಹಾಗೂ ನಟಿಯರನ್ನಾಗಿ, ನಾಟಕದ ಒಂದು ಭಾಗವನ್ನಾಗಿ ಮಾಡುವ ಈ ಪ್ರಕ್ರಿಯೆ ಸ್ವಲ್ಪ ಸಾವಾಲಿನದ್ದೆ ನಿಜ. ಇಂತಹ ಸನ್ನಿವೇಶದಲ್ಲಿ ತಾನೇ ಬರೆದ ಕಥಾಸಂಕಲನ (ಲೀಕ್ ಔಟ್) ದ ಕಥೆಗಳಲ್ಲಿ  ಪ್ರತಿ ಬಾರಿ ಎರಡನ್ನು ಆಯ್ದು ಅದಕ್ಕೆ ನಾಟಕ ರೂಪನೀಡಿ ಅವುಗಳಲ್ಲಿ ಬರುವ ಪಾತ್ರಗಳಲ್ಲಿ ಕೆಲವನ್ನು…

Read More

ಪುತ್ತೂರು : ಪುತ್ತೂರು ಸಮೀಪದ‌ ಪಾದೆಕರ್ಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಷ್ಣು ಭಟ್ ಪಾದೆಕರ್ಯರ ನೇತೃತ್ವದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ‘ಭೀಷ್ಮ ಪ್ರತಿಜ್ಞೆ’ ತಾಳಮದ್ದಳೆಯು ದಿನಾಂಕ 24-02-2024ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಚೆಂಡೆ ಮದ್ದಳೆಗಳಲ್ಲಿ ಲಕ್ಷ್ಮೀಶ ಬೆಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಶಂತನು), ಗಾಯತ್ರಿ ಹೆಬ್ಬಾರ್ (ದಾಶರಾಜ), ಜಯಂತಿ ಹೆಬ್ಬಾರ್ (ದೇವವೃತ), ಮನೋರಮಾ ಜಿ. ಭಟ್ (ಮತ್ಸ್ಯಗಂಧಿ) ಮತ್ತು ಭಾರತೀ ರೈ ಅರಿಯಡ್ಕ (ಮಂತ್ರಿ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮನೋರಮಾ ಜಿ. ಭಟ್ ವಂದಿಸಿದರು.

Read More

ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಹೀಗೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದೆ ಪೂಜಾ ಆಚಾರ್ಯ. 10.06.2002ರಂದು ಪ್ರಹ್ಲಾದ್ ಆಚಾರ್ಯ ಹಾಗೂ ಪೂರ್ಣಿಮ ಆಚಾರ್ಯ ಇವರ ಮಗಳಾಗಿ ಜನನ. Msc Psychology ಇವರ ವಿದ್ಯಾಭ್ಯಾಸ. Dr. ರಾಧಾಕೃಷ್ಣ ಉರಾಳ,  ಭರತ್ ರಾಜ್ ಪರ್ಕಳ, ಸುಬ್ಬರಾಯ ಹೆಬ್ಬಾರ್, ರವೀಶ್ ಐನಬೈಲ್, ನಿತ್ಯಾನಂದ ನಾಯಕ್ ಇವರ ಯಕ್ಷಗಾನ ಗುರುಗಳು. ಎ.ಪಿ  ಫಾಟಕ್ ಬಳಿ ಮದ್ದಳೆ ಅಭ್ಯಾಸ ಹಾಗೂ ಭಾಗವತಿಕೆಯನ್ನು ಪ್ರಸನ್ನಕುಮಾರ್ ಹೆಗ್ಡೆ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸಂಗದ ಪದ್ಯ ಪುಸ್ತಕ ಓದುವುದು. ಪಾತ್ರದ ನಿರ್ವಹಣೆ ಹೇಗಿರಬೇಕು ಎನ್ನುವುದನ್ನು YouTube ಅಲ್ಲಿ ಸಿಗುವ ವೀಡಿಯೋಗಳನ್ನು ನೋಡಿ, ಆ ಪಾತ್ರ ನಿರ್ವಹಿಸಿದ ಬೇರೆ ಬೇರೆ ಮಹನೀಯರ ಶೈಲಿ ಗಮನಿಸಿ, ನನಗೆ ಬೇಕಾದದ್ದನ್ನು ಅನುಕರಣೆ ಮಾಡಿ, ನನ್ನತನವನ್ನು ಅದಕ್ಕೆ ಅಳವಡಿಸಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪೂಜಾ ಆಚಾರ್ಯ. ಎಲ್ಲ ಪ್ರಸಂಗಗಳಲ್ಲಿ ಅದರದ್ದೇ…

Read More

ಮಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಮೂರು ದಿನಗಳ ಕಾಲ ನಡೆಯುವ 32ನೇ ವರ್ಷದ ಅಂತ‌ರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ-2024’ ಕಾರ್ಯಕ್ರಮವು ದಿನಾಂಕ 23-02-2024 ರಂದು ಕಾಲೇಜಿನ ಆವರಣದಲ್ಲಿ ಆರಂಭಗೊಂಡಿತು. ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಹಿರಿಯ ವಕೀಲರಾದ ಶ್ರೀ ಮಹೇಶ್ ಕಜೆ “ಯಕ್ಷಗಾನ ಪರಿಪೂರ್ಣ ಕಲೆಯಾಗಿದೆ. ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಗಂಡು ಕಲೆಯಾಗಿದ್ದು, ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ‘ಯಕ್ಷೋತ್ಸವ’ದಂತಹ ವೇದಿಕೆ ಸೂಕ್ತವಾಗಿದೆ. ಎಸ್‌.ಡಿ.ಎಂ. ಕಾನೂನು ಕಾಲೇಜಿನಲ್ಲಿ ಹಲವಾರು ಜನರ ಪರಿಶ್ರಮದಿಂದ ಇಂದು ‘ಯಕ್ಷೋತ್ಸವ’ ಮುಂದುವರೆಯುತ್ತಿದೆ. ವಿದ್ಯಾರ್ಥಿಗಳ ತಂಡ ಮುಂದಿಟ್ಟ ಹೆಜ್ಜೆಗಳಿಂದಾಗಿ 32 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ” ಎಂದರು. ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ. ಮಾತನಾಡಿ “ಕಳೆದ 32 ವರ್ಷಗಳಿಂದ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ನಿಲ್ಲಿಸುವ ಹಂತಕ್ಕೆ…

Read More