Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಸುಮನಸಾ ಕೊಡವೂರು ಆಯೋಜಿಸುವ ನಾಟಕ ಉತ್ಸವ ‘ರಂಗ ಹಬ್ಬ-12’ ದಿನಾಂಕ 25-02-2024 ರಿಂದ 02-03-2024ರ ವರೆಗೆ ಉಡುಪಿಯ ಅಜ್ಜರ ಕಾಡಿನಲ್ಲಿರುವ ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ದಿನಾಂಕ : 25-02-2024 – ‘ಸರಸ ವಿರಸ ಸಮರಸ’- ಕನ್ನಡ ನಾಟಕ ತಂಡ : ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು ರಚನೆ : ವಿಲಿಯಂ ಶೇಕ್ಸ್ ಪಿಯರ್, ಅನುವಾದ – ಕೆ. ಎಸ್. ರಂಗೇ ಗೌಡ ನಿರ್ದೇಶನ : ಜೋಸೆಫ್ ಜಾನ್ ‘ಸರಸ ವಿರಸ ಸಾಮರಸ’ : ವಿಲಿಯಂ ಶೇಕ್ಸ್ ಪಿಯರ್ ರವರ ನಲಿವಿನ ನಾಟಕಗಳಲ್ಲಿ ಒಂದಾಗಿರುವ ‘The Taming of the Shrew’ ನಾಟಕವು ‘ಸರಸ ವಿರಸ ಸಮರಸ’ ನಾಟಕವಾಗಿ ಕನ್ನಡಕ್ಕೆ ಅನುವಾದ ಗೊಂಡಿರುವ ಒಂದು ವಿಶಿಷ್ಟ ರಂಗ ಪ್ರಯೋಗ. ಮೂಲ ನಾಟಕದಲ್ಲಿ ನಾಯಕ ಪೆಟ್ರೋಷಿಯೋ ಗಯ್ಯಾಳಿ ನಾಯಕಿ ಕ್ಯಾಥರೀನಳನ್ನು ತನ್ನದೇ ಶೈಲಿಯಲ್ಲಿ ಪಳಗಿಸಿ ಅವಳನ್ನು ಒಳ್ಳೆಯವಳನ್ನಾಗಿ ಪರಿವರ್ತಿಸುತ್ತಾನೆ. ಆದರೆ ಈ ನಾಟಕದಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನತೆಯನ್ನು ಸಾರಿ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 26-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದುಷಿ ರೆಮೊನಾ ಇವೈಟ್ ಪಿರೇರ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯವನ್ನು ಪ್ರಾರಂಭಿಸಿರುವ ರೆಮೊನಾ ಇವೈಟ್ ಪಿರೇರ ಸೌರಭ ನೃತ್ಯ ಕಲಾ ಪರಿಷತ್ತಿನ ವಿದ್ಯಾರ್ಥಿನಿ. ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿರುವ ಇವರು 2019ರಲ್ಲಿ ರಂಗ ಪ್ರವೇಶ ಮಾಡಿರುತ್ತಾರೆ. ಐದನೇ ವಯಸ್ಸಿನಲ್ಲಿ ‘ಅರಳು ಮಲ್ಲಿಗೆ ಪ್ರಶಸ್ತಿ’ ಹಾಗೂ ಕುಂದಾಪುರದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ. ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ಧಾರವಾಡದ ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಗೌರವ್ ಪ್ರಶಸ್ತಿ, ಹೊಯ್ಸಳಾ ಕೆಳದಿ…
ಕನ್ನಡದ ಗಮನಾರ್ಹ ಯುವ ಕಥೆಗಾರ್ತಿ ತೇಜಸ್ವಿನಿ ಹೆಗಡೆಯವರು ‘ಕಾಣ್ಕೆ’ ಮತ್ತು ‘ಸಂಹಿತಾ’ ಎಂಬ ಎರಡು ಕಥಾ ಸಂಕಲನಗಳ ನಂತರ ಈಗ ‘ಜೋತಯ್ಯನ ಬಿದಿರು ಬುಟ್ಟಿ’ ಎಂಬ ತಮ್ಮ ಮೂರನೇ ಕಥಾ ಸಂಕಲನವನ್ನು ಹೊರ ತಂದಿದ್ದಾರೆ. ಹತ್ತು ವಿಶಿಷ್ಠ ಕಥೆಗಳಿರುವ ಈ ಸಂಕಲನವು ಅವರ ಗಾಢವಾದ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುತ್ತವೆ. ಕಳೆದ ಕೆಲವು ದಶಕಗಳಿಂದ ಸ್ತ್ರೀ ಶೋಷಣೆಯ ವಿರುದ್ದ ಸೆಟೆದು ನಿಲ್ಲುವುದನ್ನೇ ತಮ್ಮ ಕಥೆಗಳ ಫೋಕಸ್ ಆಗಿ ಮಾಡಿಕೊಂಡ ಕಥೆಗಾರ್ತಿಯರು ಭಿನ್ನ ದಾರಿಗೆ ಹೋಗಿ ಮರಳುತ್ತಿದ್ದಾರೆ ಅನ್ನುವುದಕ್ಕೆ ತೇಜಸ್ವಿನಿಯವರ ಕಥೆಗಳು ಸಾಕ್ಷಿಯಾಗುತ್ತವೆ. ಬೆನ್ನುಡಿ ಬರೆದಿರುವ ಕೆ. ಸತ್ಯನಾರಾಯಣ ಅವರು ಹೇಳಿರುವಂತೆ ತೇಜಸ್ವಿನಿಯವರದ್ದು ಹೆಣ್ಣು ಕಥೆಗಳೇ ಆದರೂ ಹೆಣ್ಣಿನ ಶಕ್ತಿಯ ವಿವಿಧ ಮುಖಗಳನ್ನು ಬೆಳಕಿಗೊಡ್ಡುವುದೇ ಅವರ ಲಕ್ಷ್ಯವಾಗಿರುವಂತೆ ಕಾಣುತ್ತದೆ. ಮೊದಲ ಕಥೆ ‘ರತ್ನಗಂಧಾ’ ಆರಂಭವಾಗುವುದು ಹಳ್ಳಿಯ ಇಬ್ಬರು ಗೆಳೆಯರ ಮೂಲಕವಾದರೂ ಅದರ ಮುಖ್ಯ ಎಳೆ ಇರುವುದು ಇಳಿ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಮಗನಿಂದ ದೂರವಾದ ರತ್ನಮ್ಮ ಮರು ಮದುವೆ ಮಾಡಿಕೊಳ್ಳ ಹೊರಟಿದ್ದಾರೆ ಎಂಬ…
ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ಕಲಾಬ್ಧಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ವೇದಿಕೆಗಳ ಆಶ್ರಯದಲ್ಲಿ ನಟಿ ಅಕ್ಷತಾ ಪಾಂಡವಪುರ ಅವರ ಕಥೆ, ವಿನ್ಯಾಸ ಮತ್ತು ಅಭಿನಯದ ಸ್ತ್ರೀ ಸಂವೇದನೆಯ ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಆಪ್ತ ರಂಗಪ್ರಯೋಗ ‘ಲೀಕ್ ಔಟ್’ – ಏಕವ್ಯಕ್ತ ನಾಟಕ ಪ್ರದರ್ಶನವು ದಿನಾಂಕ 21-02-2024 ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಿರ್ಮಾಪಕಿ ಗೀತಾ ಸುರತ್ಕಲ್ ಮಾತನಾಡಿ “ಆಧುನಿಕ ಜಗತ್ತಿನ ಹೊಸ ಸಮಸ್ಯೆಗಳನ್ನು ಅನುಸಂಧಾನ ಮಾಡುತ್ತಾ ಹೆಣ್ಣಿನ ಅಂತರಂಗದ ತಲ್ಲಣಗಳನ್ನು ಕಟ್ಟಿಕೊಡುವ ಅಕ್ಷತಾರ ರಂಗ ಪ್ರಯೋಗ ಅನನ್ಯವಾದುದು.” ಎಂದು ಹೇಳಿದರು. ಹಿರಿಯ ನಟ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ “ಆಪ್ತ ರಂಗಭೂಮಿ ಪ್ರಯೋಗಗಳಲ್ಲಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಪಾತ್ರಗಳನ್ನಾಗಿಸಿಕೊಂಡು ಸಮಸ್ಯೆಗಳ ಕುರಿತು ಸಂವಾದಿಸಲು ಪ್ರೇರೇಪಿಸುವ ರಂಗಭೂಮಿಗೆ ಹೊಸ ಆಯಾಮ ನೀಡುವ ಪ್ರಯೋಗ ಇದಾಗಿದೆ.” ಎಂದರು. ಕಾಲೇಜಿನ ಪ್ರಾಚಾರ್ಯ…
ಕಡಬ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಪಡುಬೆಟ್ಟು ಸರಕಾರಿ ಹಿ. ಪ್ರಾ. ಶಾಲೆಯ ಸಹಯೋಗದಲ್ಲಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ, ಗುರುವಂದನೆ ಮತ್ತು ಮಕ್ಕಳ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 10-02-2024ರಂದು ಪಡುಬೆಟ್ಟು ಸರಕಾರಿ ಹಿ.ಪ್ರಾ. ಶಾಲಾ ರಂಗಮಂದಿರದಲ್ಲಿ ನಡೆಯಿತು. ಮಕ್ಕಳ ಯಕ್ಷಗಾನ ಮಂಡಳಿಯನ್ನು ಉದ್ಘಾಟಿಸಿ ಮಾತನಾಡಿದ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ “ಎಂಭತ್ತರ ದಶಕದಲ್ಲಿ ಈ ಮೇಳವನ್ನು ಸ್ಥಾಪಿಸಿ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳ ನೀಡಿ ಪ್ರಸಿದ್ದಿ ಪಡೆಯಲು ಕಾರಣೀಭೂತರಾದ ಇಲ್ಲಿನ ನಿವೃತ್ತ ಶಿಕ್ಷಕ ದಿ. ಶಾಂತಿಗೋಡು ಗೋಪಾಲ ಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಪ್ರತಿಷ್ಠಾನ ಮೂಲಕ ನಾಲ್ಕು ದಶಕಗಳ ಬಳಿಕ ಮತ್ತೆ ಅದೇ ಮಕ್ಕಳ ಮೇಳವನ್ನು ಲೋಕಾರ್ಪಣೆಗೊಳಿಸುವ ಕಾರ್ಯ ನನ್ನ ಪಾಲಿಗೊದಗಿದೆ. ಯಕ್ಷಗಾನವು ಭಾರತೀಯ ಸಂಸ್ಕೃತಿ ಬಿಂಬಿಸುವ ಕಲೆಯಾಗಿದ್ದು, ಮಕ್ಕಳ ತಂಡದ ಮೂಲಕ ನಿರಂತರ ಆ ಕೆಲಸ ನಡೆಯುವಂತಾಗಲಿ.” ಎಂದು ಶುಭ ಹಾರೈಸಿದರು. …
ಬೆಂಗಳೂರು : 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಡಾ. ರಾಜ್ ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ಉಮೇಶ್ ಅವರನ್ನು ಡಾ. ರಾಜ್ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ರಾಜ್ ಕುಮಾರ್ ಅವರು ತಮಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಬಂದಾಗ ನಗದು ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದರು. ನಂತರದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ದತ್ತಿನಿಧಿಗೆ ಇನ್ನಷ್ಟು ಮೊತ್ತವನ್ನು ಸೇರಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯನ್ನು ಪ್ರವೇಶಿಸಿದ ಎಂ.ಎಸ್. ಉಮೇಶ್ ಇವರು ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಾಲನಟರಾಗಿ ಹೆಸರು ಮಾಡುವ ಮೂಲಕ ಕಲಾರಂಗ ಪ್ರವೇಶಿಸಿದ್ದರು. ಗುಬ್ಬಿ ಕಂಪನಿಯಲ್ಲಿ ಕೂಡ ಬಾಲ ನಟನಾಗಿ ಪ್ರಸಿದ್ಧಿ ಪಡೆದ…
ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ನಾಗೇಶ ಪ್ರಭುಗಳ ಶೃದ್ಧಾಂಜಲಿ ಕಾರ್ಯಕ್ರಮ ಮೌರಿಷ್ಕ ಪಾರ್ಕ್ ನಲ್ಲಿ ದಿನಾಂಕ 21-02-2024ರಂದು ನಡೆಯಿತು. ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘವನ್ನು 30 ವರ್ಷಗಳ ಕಾಲ ಮುನ್ನಡೆಸಿದ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ವಿವರ ನೀಡಿದರು. ಯಾವುದೇ ಕಷ್ಟಗಳು ಎದುರಾದರೂ ಅವನ್ನೆಲ್ಲ ನಿವಾರಿಸಿಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು. ಬಿ.ಸಿ. ರೋಡಿನಲ್ಲಿ ನಾಗೇಶ ಪ್ರಭುಗಳೇ ಸ್ಥಾಪಿಸಿದ್ದ ಶ್ರೀ ರಾಮ ಯಕ್ಷಗಾನ ಸಂಘದ ಸಂಜೀವ ಶೆಟ್ಟಿಯವರು ಮಾತನಾಡಿ ಪ್ರಭುಗಳು ಭಾಗವತರಾಗಿ, ಮದ್ದಳೆವಾದಕರಾಗಿ, ಅರ್ಥಧಾರಿಯಾಗಿ ಸಲ್ಲಿಸಿದ ಸೇವೆಯನ್ನು ನೆನಪಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು. ಇಸ್ಕಾನ್ ಕಾರ್ಯದರ್ಶಿ ಸನಂದನ ದಾಸ ಪ್ರಭುಗಳು ನಾಗೇಶ ಪ್ರಭುಗಳ ಅಪಾರವಾದ ಪುರಾಣ ಜ್ಞಾನದ ಬಗ್ಗೆ ಹೇಳಿ, ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದ ಕಾರಣ ನಾಗೇಶರಿಗೆ ಶ್ರೀ ಕೃಷ್ಣ ಸದ್ಗತಿಯನ್ನು ನೀಡಲಿ ಎಂದು ಹಾರೈಸಿದರು. ದೇರಾಜೆ ಸೀತಾರಾಮಯ್ಯರ ಒಡನಾಡಿಯಾಗಿದ್ದ, ಯಕ್ಷಗಾನ…
ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಹಾಗೂ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇದರ ರಂಗ ತಿರುಗಾಟ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ. ಸುಮಾರು 8 ನಾಟಕಗಳ 40ಕ್ಕೂ ಹೆಚ್ಚು ಪ್ರದರ್ಶನಗಳು ಈ ಎರಡು ತಿಂಗಳುಗಳಲ್ಲಿ ನಡೆಯಲಿದೆ. ಅಸ್ತಿತ್ವ ತಂಡ ಕಳೆದ ಎಂಟು ವರ್ಷಗಳಿಂದ ‘ಸುವಾರ್ತೆ ಭೊಂವ್ಡಿ’ ಎಂಬ ಶೀರ್ಷಿಕೆಯಲ್ಲಿ ನಾಟಕಗಳನ್ನು ಪ್ರದರ್ಶನ ನೀಡುತ್ತಾ ಬಂದಿದೆ. ಈವರೆಗೆ ಸುಮಾರು 12 ನಾಟಕಗಳ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶ ವಿದೇಶದಲ್ಲಿ ಪ್ರದರ್ಶನ ಕಂಡಿವೆ. ಈ ವರ್ಷದ ತಿರುಗಾಟಕ್ಕೆ ಸಂತ ಅಲೋಶಿಯಸ್ ಕಾಲೇಜಿನ ರಂಗತಂಡದ ಸಹಭಾಗಿತ್ವ ಕೂಡ ಇದ್ದು, ಡಿಪ್ಲೋಮಾ ವಿಧ್ಯಾರ್ಥಿಗಳ ನಾಟಕ ‘ದಾದ್ಲ್ಯಾಂ ಮಧೆಂ ತುಂ ಸದೆಂವ್’ ಎಂಬ ನಾಟಕವೂ ಈ ತಿರುಗಾಟದಲ್ಲಿ ಪ್ರದರ್ಶನಗೊಳ್ಳುತ್ತಲಿದೆ. ಅಸ್ತಿತ್ವ ತಂಡದ ಮುಖ್ಯಸ್ಥರಾದ ವಂದನೀಯ ಡಾಕ್ಟರ್ ಆಲ್ವಿನ್ ಸೆರಾವೊರವರು ಬಹುತೇಕ ನಾಟಕಗಳನ್ನು ರಚಿಸಿದ್ದು, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಕ್ರಿಸ್ಟಿ ಈ ತಿರುಗಾಟದ ಸಂಯೋಜಕರಾಗಿದ್ದಾರೆ. ಈ ತಿರುಗಾಟಕ್ಕೆ ಕನ್ನಡ…
ಗಾಯನ ಸಮಾಜದ ವೇದಿಕೆಯ ಮೇಲೆ ಅಂದು ಮಧುಮಿತ ರವೀಂದ್ರ ವೀರಾಂಜನೇಯನ ಪ್ರತಿರೂಪವಾಗಿ, ಕೆಚ್ಚೆದೆಯ ಕಲಿ ಆತ್ಮವಿಶ್ವಾಸದಿಂದ ಸಮುದ್ರಲಂಘನ ಮಾಡಿ ಸೀತಾಮಾತೆಯನ್ನು ದರ್ಶಿಸಿ, ರಾವಣನ ಸಮ್ಮುಖ ತನ್ನ ಬಾಲವನ್ನು ಸುತ್ತಿ ಸಿಂಬಿ ಹೆಣೆದು ತನ್ನದೇ ಆದ ಸಿಂಹಾಸನ ನಿರ್ಮಿಸಿಕೊಂಡು ಎದೆಯುಬ್ಬಿಸಿ, ಅವನಿಗೆ ಸರಿಮಿಗಿಲಾಗಿ ಕುಳಿತು, ರಾವಣನ ಹತ್ತುತಲೆಗಳನ್ನು ನೋಡಿ ಲೇವಡಿಮಾಡಿ, ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಇಡೀ ಲಂಕೆಯನ್ನು ಸುಟ್ಟು, ಚೈತನ್ಯಪೂರ್ಣವಾದ ತನ್ನ ವ್ಯಕ್ತಿತ್ವವನ್ನು ಸಾಬೀತುಪಡಿಸಿದ. ಶ್ರೀರಾಮನ ಭಕ್ತಿ ತಾದಾತ್ಮ್ಯತೆಯಿಂದ ಮೈಮರೆತು ಕುಣಿದು, ಮಂಡಿ ಅಡವುಗಳಿಂದ ರಂಗಾಕ್ರಮಣದಲ್ಲಿ ವಿಜ್ರುಂಭಿಸಿದ ವೀರಹನುಮನ ಯೋಗದ ಭಂಗಿಗಳಿಂದ ರೋಮಾಂಚಗೊಳಿಸಿ, ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ ಮಧುಮಿತಳ ನುರಿತ ನಾಟ್ಯಾಭಿನಯ ಕಲಾರಸಿಕರಲ್ಲಿ ವಿಸ್ಮಯವನ್ನುಂಟು ಮಾಡಿತು. ಕಣ್ಮನ ಸೆಳೆದ ಪ್ರಸ್ತುತಿ ಅವಳ ರಂಗಪ್ರವೇಶದ ಮೊದಲಹೆಜ್ಜೆಗಳು ಅನಿಸಲೇ ಇಲ್ಲ. ಕಿರುತೆರೆ ಅಭಿನೇತ್ರಿ ಹಾಗೂ ನೃತ್ಯಾಚಾರ್ಯ ವಿ. ನಮಿತಾ ದೇಸಾಯಿ ಅವರ ಮನೋಹರ ನೃತ್ಯ ಸಂಯೋಜನೆಯಲ್ಲಿ ರೂಪುಗೊಂಡ ಕೃತಿಗಳನ್ನು ಅಂಗಶುದ್ಧವಾಗಿ ಯಾವ ಅರೆಕೊರೆಯಿಲ್ಲದೆ, ಮಿಂಚಿನ ಸಂಚಾರದ ನೃತ್ತ-ಮನೋಹರ ‘ಕರಣ’ಗಳಿಂದ ಸಾಕ್ಷಾತ್ಕರಿಸಿ ಮಿಂಚಿದ್ದಳು. ನಗುಮೊಗ…
ಹೈದರಾಬಾದ್ : ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ತೆಲಂಗಾಣದ ಕ್ರಾಫ್ಟ್ ಕೌನ್ಸಿಲ್ ಸಂಸ್ಥೆಯು ಕೊಡ ಮಾಡುವ ‘ಶ್ರೀಮತಿ ಪಿಂಗಳೆ ಕಮಲಾರೆಡ್ಡಿ ಎಕ್ಸಲೆನ್ಸ್ ಇನ್ ಕ್ರಾಫ್ಟ’ ರಾಷ್ಟ್ರೀಯ ಪುರಸ್ಕಾರವು ಕೊಂಕಣ ತೀರ ಪ್ರದೇಶದ ಕಾವಿ ಕಲೆಯ ಉಳಿವು ಮತ್ತು ಬೆಳೆಸುವಿಕೆಗೆ ಸುಮಾರು 20 ವರ್ಷಗಳಿಂದಲೂ ಸತತವಾಗಿ ಶ್ರಮಿಸುತ್ತಿರುವ ಡಾ. ಜನಾರ್ದನ ಹಾವಂಜೆಯವರಿಗೆ ದಿನಾಂಕ 22-02-2024ರಂದು ಲಭಿಸಿದೆ. ಮಾಜಿ ಚಯರ್ಮೆನ್ ಉಷಾ ಸರ್ವರಾಯಲು, ಚಯರ್ಮೆನ್ ಅನುರಾಧಾ ಬಿಷನೊಯಿ, ಪಿಂಗಳೆ ನೀಲ ರೆಡ್ಡಿ ಹಾಗೂ ಕ್ರಾಫ್ಟ್ ಕೌನ್ಸಿಲ್ ನ ಅರ್ಜುನ್ ನಾರ್ಣೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ (ವಿಸಿಟಿಂಗ್) ಹಾವಂಜೆಯವರು ಇಂದಿಗೆ ಅಳಿದು ಹೋಗುತ್ತಿರುವ ಈ ದೇಶಿಯ ಕಾವಿ ಕಲೆಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾವಿ ಕಲೆಯ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಹಲವಾರು ಕಾರ್ಯಾಗಾರಗಳು, ಶಿಬಿರಗಳು, ಕಲಾ ಪ್ರದರ್ಶನಗಳು…