Author: roovari

ಕಾಸರಗೋಡು : ಕಾಸರಗೋಡಿನ ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 11ನೇ ಸರಣಿ ಕಾರ್ಯಕ್ರಮ ‘ರಸ ಪಯಸ್ವಿನಿ’ ದಿನಾಂಕ 19-11-2023ರ ಆದಿತ್ಯವಾರ ಬೆಳಗ್ಗೆ 9.30 ರಿಂದ ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ತುಳು ಸಂಶೋಧಕಿ ಹಾಗೂ ಸಾಹಿತಿಯಾದ ಕುಶಾಲಾಕ್ಷಿ ಕುಲಾಲ್, ಗಾಯಕಿಯಾದ ಮಾಯಾ ಮುಕುಂದ ರಾಜ್ ನಾಯಕ್ ಹಾಗೂ ಮಾನವ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷೆ ಮತ್ತು ಸಮಾಜ ಸೇವಕಿಯಾದ ಜುಲೇಖಾ ಮಾಹಿನ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜ ಸೇವಕಿಯಾದ ಪ್ರಭಾವತಿ ಟೀಚರ್, ನಾಟಿ ವೈದ್ಯೆಯಾದ ಶ್ಯಾಮಲ ರೈ ಬೆಳ್ಳೂರು, ಮಲಯಾಳಂ ಲೇಖಕಿ ಆಲಿಸ್ ಟೀಚರ್ ಹಾಗೂ ರಂಗನಟಿ ಮತ್ತು ರಂಗ ನಿರ್ದೇಶಕಿಯಾದ ಮಾಲತಿ ಮಾಧವ್ ಕಾಮತ್ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಒಂದೇ ವೇದಿಕೆಯಲ್ಲಿ ನಾಲ್ಕು ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮ…

Read More

ಬದುಕೆಂಬುದನ್ನು ಕಲೆಯಾಗಿ ತಿಳಿದು ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ ಅವರು. ಕಾಲೇಜಿನ ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯಾಡಿಸಿದರು. ಎಂ.ಜಿ.ಎಂ. ಕಾಲೇಜಿನಲ್ಲಿ ಓದುತ್ತಿರುವ ವೇಳೆಯಲ್ಲಿ ಹವ್ಯಾಸವೆಂದು ಚಿತ್ರಿಸುತ್ತಾ ವರ್ಣ ಬಳಿಯುತ್ತಾ ನೈಫ್ ವರ್ಕ್ ನಲ್ಲಿ ಕೆತ್ತಿದ ಯೇಸು ಕ್ರಿಸ್ತನ ಪೈಂಟಿಂಗ್ ಅಂದಿನ ವಾರ ಪತ್ರಿಕೆ ತರಂಗದಲ್ಲಿ ಪ್ರಕಟಗೊಂಡಿತ್ತು. ಸಸ್ಯ ಶಾಸ್ತ್ರ ಉಪನ್ಯಾಸಕ ಶ್ರೀ ವೀ. ಅರವಿಂದ ಹೆಬ್ಬಾರರೊಂದಿಗಿನ ವಿವಾಹನಂತರ ಅವರ ಪ್ರೋತ್ಸಾಹದೊಂದಿಗೆ, ವಸಂತಲಕ್ಷ್ಮೀ ಅವರ ಸಂಗೀತ ಮತ್ತು ಪೈಂಟಿಂಗ್‌ಗಳು ಬಲವಾದ ಪ್ರವೃತ್ತಿಯಾಗಿ ಮುಂದೆ ಬೆಳೆಯಿತು. ರಂಜನಿ ಹೆಬ್ಬಾರ್ ಮತ್ತು ಸಾರಂಗ ಹೆಬ್ಬಾರ್ ಅವರ ತಾಯಿಯಾಗಿ, ಪುತ್ರಿ ರಂಜನಿ ಹೆಬ್ಬಾರ್ ಅವರನ್ನು ಸಂಗೀತ ಕ್ಷೇತ್ರದ ತಾರೆಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (1983) ದುಃಖದ ಮಡುವಿನಿಂದ ಮರೆಯಾಗಲು ಕಲಾ ಮಾಧ್ಯಮವನ್ನು ಬಳಸಿದ ಈ ಸಂಗೀತ ಟೀಚರು ಪೈಂಟಿಂಗನ್ನೇ ಗಂಭೀರವಾಗಿ ಆಯ್ದುಕೊಂಡು ಚಿತ್ರಕಲೆಯಲ್ಲಿ…

Read More

ಶಿವಮೊಗ್ಗ : ಕರ್ನಾಟಕ ಸಂಘ (ರಿ.), ಶಿವಮೊಗ್ಗ ಆಯೋಜಿಸುವ ಶ್ರೀಮತಿ ಎಂ.ಎಸ್. ಲಕ್ಷ್ಮೀ ಕಾರಂತ ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಅಧಿನಾಯಕಿ’ ದಿನಾಂಕ 18-11-2023ರ ಶನಿವಾರದಂದು ಸಂಜೆ ಘಂಟೆ 5.30ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಪ್ರದರ್ಶನ ಗೊಳ್ಳಲಿದೆ. ಕಾರ್ಯಕ್ರಮವನ್ನು ಬೆಂಗಳೂರಿನ ರಂಗಕರ್ಮಿಗಳಾದ ಶ್ರೀ ಬೇಲೂರು ರಘುನಂದನ್ ಉದ್ಘಾಟಿಸಲಿದ್ದು, ಕರ್ನಾಟಕ ಸಂಘ ಶಿವಮೊಗ್ಗದ ಅಧ್ಯಕ್ಷರಾದ ಶ್ರೀ ಎಂ.ಎನ್. ಸುಂದರರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ಅಧಿನಾಯಕಿ’ ಹೆಣ್ಣು ಸದಾ ಒಂದು ಮಿತಿಯಲ್ಲೇ ಇರಬೇಕು ಅಂತ ಸಮಾಜ ಅವಳನ್ನು ಕೂಡಿಟ್ಟಿದೆ… ಅವಳೆಷ್ಟೇ ಸಾಧನೆಗೈದರೂ. ಮನೆ-ಸಮಾಜ ಏನ್ನನ್ನೇ ಸಮರ್ಥವಾಗಿ ಸಂಭಾಳಿಸಿದರೂ, ಕೊನೆಯ ಮಾತು ಮಾತ್ರ – ಅವಳು ಹೆಣ್ಣು”..!? ರಾಣಿಯರ ಕಾಲದಿಂದಲೂ, ಸ್ತ್ರೀ ಭೋಗದ ವಸ್ತು… ಭೂಮಿಯೊಂದಿಗೆ ಹೆಣ್ಣನ್ನು ಗೆಲ್ಲುವುದು ಗಂಡಿನ ದಾರ್ಷ್ಟ್ಯದ ಉತ್ತುಂಗ… ಚರಿತ್ರೆ ಅದೆಷ್ಟೋ ಮಹಿಳೆಯರ ಸಾಧನೆಗಳನ್ನು ಮರೆಮಾಚಿದೆ… ಎಷ್ಟೇ ಎತ್ತರಕ್ಕೇರಿದರೂ, ಅಡುಗೆಮನೆಗೆ ಹೆಣ್ಣನ್ನು ಸೀಮಿತಗೊಳಿಸುವ ಅಪ್ಯಾಯ ಓಲೈಕೆ ಸಮಾಜದ್ದು! ತನ್ನವರನ್ನು ಸದಾ ಓಲೈಸುಲೆ ಬದುಕುವ ದೌರ್ಭಗ್ಯ ಹೆಣ್ಣಿನದ್ದು…! ಪ್ರಜಾಪ್ರಭುತ್ವದಲ್ಲೂ ಮಹಿಳಾ ಸಚಿವೆಯರಿಗೆಷ್ಟು ಸ್ಥಾನವಿದೆ!? ಸಮಾನತೆಯ…

Read More

ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ 39ನೇ ಗೋವಾ ಘಟಕವನ್ನು ಪಣಜಿ ಇನ್ಸಿಟ್ಯೂಟ್ ಮೆನೆಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ದಿನಾಂಕ 02-11-2023ರಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕನ್ನಡದ ಶುದ್ಧ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು, ಸಂಸ್ಕಾರ, ಶ್ರದ್ಧಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ. ಕರಾವಳಿಯ ಗಂಡುಕಲೆಯಲ್ಲಿ ಸಂಘಟನೆಯ ಜೊತೆಗೆ ಭಾಷಾ ಶುದ್ಧತೆಯೂ ಇದೆ. ಇಂದು ಯುವ ಸಮುದಾಯ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದಾರೆ. ಪುರಾಣದ ಕತೆಗಳನ್ನು ತಿಳಿದುಕೊಳ್ಳುವ ಆಸಕ್ತಿಯೂ ಯುವ ಸಮುದಾಯಕ್ಕೆ ಇದೆ. ಯಕ್ಷಗಾನ ಮೇಲ್ಪಂಕ್ತಿಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ. ಯಕ್ಷಗಾನವನ್ನು ಆರಾಧಿಸೋಣ, ಪ್ರೀತಿಸೋಣ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ 40ನೇ ಘಟಕವನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗುವುದು” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟಿನ ಪ್ರಧಾನ ಸಂಚಾಲಕ, ಬರೋಡಾ ತುಳು ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಮಾತನಾಡಿ “ಮುಂದಿನ ವರ್ಷ ಗೋವಾದ ಬೀಚ್ ಬಳಿ ಪಟ್ಲ ಫೌಂಡೇಶನ್ನಿನ…

Read More

ಮಂಗಳೂರು : ಲೇಖಕಿ ಡಾ. ಅರುಣಾ ನಾಗರಾಜ್ ಅವರು ರಚಿಸಿರುವ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಎಂಬ ಚಿಂತನ ಸಂಕಲನವು ದಿನಾಂಕ 04-11-2023ರಂದು ದೀಪಾ ಕಂಫರ್ಟ್ಸ್ ಇಲ್ಲಿನ ಶೆಹನಾಯಿ ಹಾಲ್‌ನಲ್ಲಿ ಬಿಡುಗಡೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಿಕೆ ಡಾ. ಪ್ರಮಿಳಾ ಮಾಧವ್‌ ಮಾತನಾಡಿ, “ಈ ರೀತಿಯ ಕೃತಿಗಳು ಮತ್ತಷ್ಟು ಬೆಳಕಿಗೆ ಬರಬೇಕು” ಎಂದರು. ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕೃಷ್ಣ ಶೇಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಆರ್‌.ಪಿ.ಎಲ್‌ ಇದರ ನಿವೃತ್ತ ಮಹಾ ಪ್ರಬಂಧಕಿ ವೀಣಾ ಟಿ. ಶೆಟ್ಟಿ ಅವರು “ಕೃತಿಯ ಶೀರ್ಷಿಕೆಯೇ ಅದರ ಅಂತರಾಳದ ಮಹತ್ವವನ್ನು ತಿಳಿಸುತ್ತದೆ” ಎಂದರು. ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಮಾಣೂರು ಪ್ರಸ್ತಾವಿಸಿದರು. ಕೆ.ಎಂ.ಸಿ ವೈದ್ಯೆ ಡಾ. ಪ್ರಿಯಾಂಕಾ ಅರುಣ್ ಶಿರಾಲಿ ಅವರು ಪ್ರಚಲಿತ ಸಮಾಜಕ್ಕೆ ಇಂತಹ ಕೃತಿಗಳ ಅವಶ್ಯಕತೆಯನ್ನು ತಿಳಿಸಿದರು. ವಕೀಲೆ ಪುಷ್ಪಲತಾ ಯು.ಕೆ., ಸಿ.ಎ ಕಿರಣ್ ಶೇಟ್, ಪ್ರಶಾಂತ್ ಶೇಟ್ ಮಾತನಾಡಿದರು. ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ…

Read More

ಮನುಷ್ಯ ಎಷ್ಟೇ ಗಂಭೀರವಾಗಿ, ಗಾಂಭೀರ್ಯ ತೋರ್ಪಡಿಸುತ್ತಿದ್ದರೂ ಒಮ್ಮೊಮ್ಮೆ ಆತ್ಮೀಯರೊಂದಿಗೆ, ಮನೆಯವರೊಂದಿಗೆ, ಏಕಾಂತದಲ್ಲಿ ತನ್ನ ವ್ಯಂಗ್ಯ ಮುಖಭಾವವನ್ನು ಪ್ರದರ್ಶನ ಪಡಿಸುತ್ತಿರುತ್ತಾನೆ, ಒಮ್ಮೊಮ್ಮೆ ಕ್ಯಾಂಡಿಡ್ ಛಾಯಾಗ್ರಹಣದಲ್ಲಿ ನಮ್ಮ ವಿಶೇಷ ಹಾವ ಭಾವ ನೋಡಿ ನಾವೇ ಖುಷಿ ಪಡ್ತಾ ಇರ್ತೇವೆ. ವಿಕಟ ಕಲಾವಿದ ಶ್ರೀ ನಂಜುಂಡಸ್ವಾಮಿಯವರು ಭಾವಚಿತ್ರವನ್ನು ವ್ಯಂಗ್ಯಚಿತ್ರವನ್ನಾಗಿ ರಚಿಸುವುದರಲ್ಲಿ ಸಿದ್ಧಹಸ್ತರು. ನಂಜುಂಡಸ್ವಾಮಿಯವರು ನೃತ್ಯ ಗುರು ಅಲ್ಲದೆ ಇರಬಹುದು ಆದರೆ ಮುಖದ ಎಲ್ಲ ಹಾವಭಾವಗಳು ಇವರಿಗೆ ಕರಗತವಾಗಿದೆ. ದಾಳಿಂಬೆಯ ದಂತಪಂಕ್ತಿಯಲ್ಲೂ ಎಲ್ಲೋ ಗೊಗ್ಗಲ್ಲುಗಳು ಇವರಿಗೆ ಕಾಣುತ್ತವೆ. ಕಮಲದ ಕಣ್ಣು ಕೂಡ ಎಲ್ಲೋ ಮೆಳ್ಳೆಗಣ್ಣಿದ್ದ ಹಾಗೆ, ಸಂಪಿಗೆ ನಾಸಿಕ ಕೂಡ ಸ್ವಲ್ಪ ಓರೆಯಾಗಿ, ಲ್ಯಾಕ್ಮಿ ಲೇಪಿತ ಗಾಂಭೀರ್ಯದ ತುಟಿ ಕೂಡ ಬಾಯ್ತೆರೆದು ಎನೋ ಹೇಳುವಂತೆ ಚಿತ್ರಿಸುತ್ತಾರೆ. ಮುಖ, ಜಡೆ, ಕೇಶರಾಶಿ, ಹಸ್ತಾದಿ ವಿನ್ಯಾಸಗಳಿಂದಾಗಿ ನಂಜುಂಡಸ್ವಾಮಿ ಶೈಲಿ ಅನ್ನುವಂತೆ ಗುರುತಿಸಲ್ಪಡುತ್ತದೆ. ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗಷ್ಟೇ ಸೀಮಿತವಾಗಿದ್ದ ವ್ಯಂಗ್ಯಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹಾಸ್ಯದ ದೃಷ್ಟಿಕೋನದಿಂದಾಗಿ ವ್ಯಕ್ತಿಯ ವಿಕಟಚಿತ್ರಗಳಿಗೂ ಬೇಡಿಕೆ ಜಾಸ್ತಿಯಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನಲ್ಲಿ ಸಾಹಿತಿಗಳ…

Read More

ಮಂಗಳೂರು : ಅಶೋಕನಗರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ‘ಬೆಳ್ಳಿಹಬ್ಬದ ಸಂಭ್ರಮ 2023-24’ದ ಪ್ರಯುಕ್ತ ನಡೆಯುವ ಸರಣಿ ಕಾರ್ಯಕ್ರಮವು ದಿನಾಂಕ 05-11-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಇದರ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಡಿ. ಗುರುರಾಜ ತಂತ್ರಿ ಅವರು ‘ಆರೋಗ್ಯದಲ್ಲಿ ಆಯುರ್ವೇದದ ಮಹತ್ವ’ದ ಕುರಿತು ತಿಳಿಸಿದರು. ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ ಮಾತನಾಡಿ, “ಸಮಾಜದಲ್ಲಿ ನಾವು ಹೇಗಿರಬೇಕು ಎಂದರೆ ಇತರರು ನಮ್ಮನ್ನು ಅನುಸರಿಸಿಕೊಂಡು ಇರುವಂತೆ ಇತರರಿಗೆ ಮಾರ್ಗದರ್ಶಕರಾಗಿರಬೇಕು” ಎಂದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, “ಸಂಘ ಸಂಸ್ಥೆಗಳ ಚಟುವಟಿಕೆಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಾವು ಒಂದು ವ್ಯವಸ್ಥೆಯಲ್ಲಿ ಸೇರಿಕೊಂಡಾಗ ವ್ಯವಸ್ಥೆಯ ಭಾಗವಾಗಿ ಹೋದಾಗ ಸಾಧನೆ ಮಾಡುವುದು ಸಾಧ್ಯ” ಎಂದರು. ಕುಡುಪು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಸೇವಾ ಟ್ರಸ್ಟಿನ ಅಧ್ಯಕ್ಷ ಸುರೇಶ್ ರಾವ್ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿ ಕೃಷ್ಣ…

Read More

ಕಾಸರಗೋಡು : ಪೆರಿಯ ಆಲಕ್ಕೋಡು ಪರಂಪರ ವಿದ್ಯಾ ಪೀಠದ ಗೋಕುಲಂ ಗೋಶಾಲೆಯಲ್ಲಿ ಮೂರನೆಯ ದೀಪಾವಳಿ ಸಂಗೀತೋತ್ಸವವನ್ನು ದಿನಾಂಕ 10-11-2023ರಂದು ಎಡನೀರು ಮಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು “ಮಾನವನ ಏಳಿಗೆಗೆ ಕಲೆಯು ಅತ್ಯಂತ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಭಾರತೀಯ ಕಲೆಗಳನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುವ ಗೋಕುಲಂ ಗೋಶಾಲೆ ಪರಂಪರ ವಿದ್ಯಾ ಪೀಠದ ಪ್ರವೃತ್ತಿಗಳು ಅತ್ಯಂತ ಶ್ಲಾಘನೀಯ” ಎಂದು ಮಠಾಧಿಪತಿಗಳು ಅಭಿಪ್ರಾಯಪಟ್ಟರು. ಈ ಸಮಾರಂಭದ ಮುಖ್ಯ ಅತಿಥಿಗಳಾದ ಉದುಮ ಇಲ್ಲಿನ ಎಂ.ಎಲ್.ಎ.ಯಾದ ಸಿ.ಎಚ್.ಕುಂಜ್ಞಂಬು “ಸಂಗೀತವೆನ್ನುವುದನ್ನು ಪ್ರಕೃತಿಯ ಎಲ್ಲಾ ಚರಾಚರಗಳೂ ಆಸ್ವಾದಿಸುವವು ಎನ್ನುವುದರ ಒಂದು ಉದಾಹರಣೆ ಈ ಗೋಕುಲಂ ಗೋಶಾಲೆ” ಎಂದು ಹೇಳಿದರು. ಪರಂಪರ ವಿದ್ಯಾ ಪೀಠದ ಗುರುಗಳಾದ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಮಾಜಿ ಎಂ.ಎಲ್.ಎ ಮತ್ತು ಪರಂಪರ ವಿದ್ಯಾ ಪೀಠದ ರಕ್ಷಾಧಿಕಾರಿಗಳೂ ಆದ ಕೆ. ಕುಂಞ ರಾಮನ್, ಕೇಂದ್ರ ಸರ್ವ ಕಲಾ ಶಾಲೆಯ ಪರೀಕ್ಷಾ ಕಂಟ್ರೋಲರ್ ಆದ…

Read More

ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿಂದಿ ಸಂಘದ ವಾರ್ಷಿಕ ಚಟುವಟಿಕೆ ಕಾರ್ಯಕ್ರಮವು ದಿನಾಂಕ 03-11-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂತ ಅಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಉದಯ್ ಕುಮಾರ್ ಬಿ ಮಾತನಾಡುತ್ತಾ “ಹಿಂದಿ ಭಾಷೆಯು ಸರಳವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶವನ್ನು ಕಲ್ಪಿಸುತ್ತದೆ. ಭಾಷೆಯ ಮಹತ್ವವನ್ನು ತಿಳಿಸುವ ಜೊತೆಗೆ ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಭಾಷೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಎಸ್. ಸುವರ್ಣ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ಶ್ರೀ ಯತಿನ್ ಉಪಸ್ಥಿತರಿದ್ದರು. ಹಿಂದಿ ವಿಭಾಗ ಮುಖ್ಯಸ್ಥರು ಶ್ರೀ ಉಮೇಶ್ ಹೆಗಡೆ ಸ್ವಾಗತಿಸಿ, ಪ್ರಣಮ್ ಎ. ರೈ ವಂದಿಸಿ, ಸುಮಲಕ್ಷ್ಮೀ ನಿರೂಪಿಸಿದರು.

Read More

ಪುತ್ತೂರು: ನಾಟ್ಯರಂಗ ಪುತ್ತೂರು ಕಲಾವಿದೆಯರು ಅರ್ಪಿಸುವ ‘ನೃತ್ಯ ಹರ್ಷ’ ಕಾರ್ಯಕ್ರಮ ದಿನಾಂಕ 19-11-2023ರಂದು ಭಾನುವಾರ ಸಂಜೆ ಗಂಟೆ 6.15ಕ್ಕೆ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯೆ ಡಾ. ಆಶಾ ಇವರ ಗೌರವ ಉಪಸ್ಥಿತಿಯಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿಶೇಖರ್ ಅವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ಮಾಡಲಿರುವರು. ಹಿಮ್ಮೇಳದಲ್ಲಿ ನಟುವಾಂಗ ಮತ್ತು ನಿರ್ದೇಶನವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರ್ವಹಿಸಲಿದ್ದು, ಹಾಡುಗಾರಿಕೆಯಲ್ಲಿ ಪವಿತ್ರಾ ವಿನಯ್‌ ಮಯ್ಯ, ಮೃದಂಗದಲ್ಲಿ ಚಂದ್ರಶೇಖರ ಗುರುವಾಯನಕೆರೆ ಹಾಗೂ ಕೊಳಲು ವಾದನದಲ್ಲಿ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಸಹಕರಿಸಲಿದ್ದಾರೆ. ಪ್ರಸಾಧನ – ಶಿವರಾಮ ಕಲ್ಮಡ್ಕ, ಬೆಳಕಿನ ನಿರ್ವಹಣೆ – ಪೃಥ್ವಿನ್ ಉಡುಪಿ, ಧ್ವನಿ ಮತ್ತು ಬೆಳಕು – ಅಶ್ವತ್ಥ್ ಸೌಂಡ್ಸ್ ಮತ್ತು ಲೈಟ್ಸ್ ಪುತ್ತೂರು ಇವರು ನಿರ್ವಹಿಸಲಿದ್ದಾರೆ. ನಾಟ್ಯರಂಗದ ಕಲಾವಿದೆಯರಾದ ಅವನಿ ಬೆಳ್ಳಾರೆ, ಕೀರ್ತನಾ ವರ್ಮ, ಮೇಧಾ ಭಟ್, ಶರ್ವಿನಾ ಶೆಟ್ಟಿ, ಪ್ರಜ್ಞಶ್ರೀ ‘ನೃತ್ಯ-ಹರ್ಷ’ವನ್ನು…

Read More