Author: roovari

ಮಂಗಳೂರು : ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲಿ ಮರೆಯಲಾಗದ ಮಾಣಿಕ್ಯಗಳಲ್ಲಿ ಒಬ್ಬರಾದ ಪಂಡಿತ್ ರಾಜನ್ ಮಿಶ್ರಾ ಅವರ ಸ್ಮರಣಾರ್ಥ ಮಂಗಳೂರಿನ ಸ್ವರಾನಂದ ಪ್ರತಿಷ್ಠಾನ ವತಿಯಿಂದ ದಿನಾಂಕ 30-03-2024 ಮತ್ತು 31-03-2024ರಂದು ನಗರದ ಬಿ.ಇ.ಎಂ. ಹೈಸ್ಕೂಲ್ ಸಭಾಂಗಣದಲ್ಲಿ ಬೈಠಕ್ ಶೈಲಿಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾಜನ್ ಮಿಶ್ರಾ ಅವರ ಶಿಷ್ಯ ಪರಂಪರೆಯ ಗಾಯಕರಾದ, ಯುಗಳ ಗಾಯನ ಪ್ರಸ್ತುತಿಯಲ್ಲಿ ಜನಪ್ರಿಯರಾಗಿರುವ ಡಾ. ಪ್ರಭಾಕರ ಕಶ್ಯಪ್, ಡಾ. ದಿವಾಕರ್ ಕಶ್ಯಪ್ (ಕಶ್ಯಪ್ ಬಂಧು) ಕಛೇರಿಯನ್ನು ನಡೆಸಿಕೊಡಲಿದ್ದಾರೆ. ದಿನಾಂಕ 30-03-2024ರಂದು ಸಂಜೆ 5.30ಕ್ಕೆ ಸಂದೀಪನ್ ಮುಖರ್ಜಿ ಮತ್ತು ಸೌರಬ್ ಗುಲವಾನಿ ಅವರ ತಬಲಾವಾದನ ಕಛೇರಿ ಬಳಿಕ ನಿಶಾದ್ ವ್ಯಾಸ್ ಅವರಿಂದ ಗಾಯನ. ಬಳಿಕ ಕಶ್ಯಪ್ ಬಂಧು ಅವರಿಂದ ಗಾಯನ ಪ್ರಸ್ತುತಿ ಹೆಗ್ಡೆ ನಡೆಯಲಿದ್ದು, ಪಂಡಿತ್ ಅರವಿಂದ್ ಕುಮಾರ್ ಆಜಾದ್, ಗುರುಪ್ರಸಾದ್ ಹೆಗಡೆ, ಪ್ರಸಾದ್ ಕಾಮತ್, ಶಶಿಕಿರಣ್ ಮಣಿಪಾಲ ಅವರು ಸಾತ್ ಸಂಗತ್ ನೀಡಲಿದ್ದಾರೆ. ದಿನಾಂಕ 31-03-2024ರಂದು ಮುಂಜಾನೆ ಗಂಟೆ 6.30ರಿಂದ ಕಶ್ಯಪ್ ಬಂಧುಗಳಿಂದ ಮುಂಜಾನೆಯ ರಾಗಗಳ ಪ್ರಸ್ತುತಿಯ…

Read More

ನಾಲ್ಕೂವರೆ ದಶಕಗಳ ಪರಂಪರೆಯ ಹವ್ಯಾಸಿ ರಂಗ ತಂಡ ‘ಲಾವಣ್ಯ ಬೈಂದೂರು’ ಈ ವರ್ಷ ರಂಗೇರಿಸಿಕೊಂಡ ಕೃತಿ ರಾಜೇಂದ್ರ ಕಾರಂತರ ‘ನಾಯಿ ಕಳೆದಿದೆ’. ಅಸಲಿಗೆ ಇಲ್ಲಿ ನಾಯಿ ಸಿಕ್ಕಿದೆ. ಹೌದು ಸಕಾಲಿಕ ವಿದ್ಯಮಾನದ ವಿದ್ಯಾವಂತ ಮಕ್ಕಳು ಅವರ ವೃತ್ತಿ ಆಸೆ ವಿದೇಶಗಳ ಗೊಂದಲ ಗೊಜಲುಗಳನ್ನು ಸಹಿಸಿ ಮೂಲ ಮನೆಯಲ್ಲಿ ದಿನ ಕಳೆವ ವೃದ್ಧ ತಂದೆ ತಾಯಿಯ ಅಳಲು ಆತಂಕ ಕಾಳಜಿಯ ಬಿಂಬಿಸುವ ಸಾಂಸಾರಿಕ  ದೃಶ್ಯ ಮಾಲೆ ಇದು. ಉನ್ನತ ಶಿಕ್ಷಣದಿಂದ ಆಧುನಿಕತೆಯ ಬದುಕಿಗೆ ಒಗ್ಗಿದ ಮಕ್ಕಳು ತಮ್ಮ ಪ್ರೀತಿಯ ನಾಯಿಗೆ ನೀಡೋ ಪ್ರೇಮ ಕಾಳಜಿ ಸ್ವತಃ ಪಾಲಕರಿಗೂ ನೀಡೋ ಮನಸ್ಸಿಲ್ಲದೆ ಸಾಗುವ ಕಥೆಯಲ್ಲಿ ಪ್ರತೀ ಪಾತ್ರವೂ ಸದ್ಯದ ಸಂಸಾರ ಚಿತ್ರ ಪರಿಚಯಿಸುತ್ತಲೇ ಸಾಗುತ್ತದೆ. ಮಗ ಸೊಸೆ ತಮ್ಮ ಸ್ವಂತ ಹಿರಿಯರನ್ನು ಅವರ ವಿಶ್ವಾಸವನ್ನೂ ಅನುಮಾನಿಸಿ ಅವಮಾನಿಸಿ ಅವರೊಂದಿಗಿರುವ ಪರಿಚಿತ ಪ್ರಾಮಾಣಿಕತನವನ್ನೂ ತುಚ್ಛೀಕರಿಸಿ   ಕೊನೆಗೆ ಮಮತೆ ಮನುಷ್ಯತ್ವವೇ ಸತ್ಯ ಎಂದು ಅರಿವಾಗಲು ಈ ನಾಯಿಯ ಪಾತ್ರ ಕಲ್ಪನೆ ಅದ್ಬುತವಾಗಿದೆ. ಬಿಗ್ ಬಾಸ್, ಪ್ರಾಣಿ ದಯಾ…

Read More

ಸುರತ್ಕಲ್: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ನ ಕೇಂದ್ರ ಮಹಿಳಾ ಘಟಕದ ಸಪ್ತಮ ವಾರ್ಷಿಕೋತ್ಸವವು ದಿನಾಂಕ 22-03-2024 ರಂದು ಸಂಜೆ ಘಂಟೆ 6.00ರಿಂದ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಟ್ಲ ಫೌಂಡೇಷನ್‌ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಟ ಸತೀಶ್ ಶೆಟ್ಟಿ, ವಕೀಲ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಷನ್‌ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ, ಪಟ್ಲ ಪೌಂಡೇಷನ್ ಕೋಶಾಧಿಕಾರಿ ಸುದೇಶ್ ಕುಮಾ‌ರ್ ರೈ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ದೇಶಕಿ ಜ್ಯೋತಿ ಟಿ. ಎನ್. ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗದ ನಿರ್ದೇಶಕಿ ಪದ್ಮಾ ಕೆ. ಆರ್. ಆಚಾರ್ಯ ಪುತ್ತೂರು, ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಕೇಂದ್ರೀಯ ಘಟಕದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿ, ಸಾಯಿಸುಮ ನಾವಡ ಕಾರ್ಯಕ್ರಮ…

Read More

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಮತ್ತು ಮಿಲಾಗ್ರಿಸ್ ಕಾಲೇಜಿನ ಸಹಯೋಗದಲ್ಲಿ ‘ಕೊಂಕಣಿ ಜಾನಪದ ಮತ್ತು ಭವಿಷ್ಯ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ದಿನಾಂಕ 26-03-2024ರ ಮಂಗಳವಾರದಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಮಿಲಾಗ್ರಿಸ್ ಕಾಲೇಜಿನ ಸಂಚಾಲಕ ಫಾ. ಬೊನವೆಂಚರ್ ನಝರತ್ “ಜಾನಪದವು ಮೌಖಿಕ ಪರಂಪರೆಯ ವಾಹಕ. ಅದು ಸಂಸ್ಕೃತಿ, ಜಾತಿ, ಧರ್ಮ, ಪಂಥಗಳನ್ನು ಬೆಸೆಯುತ್ತದೆ. ಇಂಥ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕೊಂಕಣಿ ಭಾಷೆಯು ಬಾಂಧವ್ಯ ಬೆಸೆಯುವ ಕಲೆಯನ್ನು ಹೊಂದಿದ್ದು, ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷಾಭಿವೃದ್ಧಿಗೆ ಶ್ರಮಿಸುತ್ತಿದೆ. ಕೊಂಕಣಿ ಭಾಷಿಗರು ತಮ್ಮ ಮಕ್ಕಳಿಗೆ ಕೊಂಕಣಿ ಭಾಷೆಯ ಬಗ್ಗೆ ಅಭಿರುಚಿ ಮೂಡಿಸಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ” ಎಂದರು. ಕಥೋಲಿಕ್ ಬೋರ್ಡ್‌ ನಿಯೋಜಿತ ಕಾರ್ಯದರ್ಶಿ ಲಿಯೋ ಲಾಸ್ರಾದೊ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಆನ್ಸನ್ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಜಯವಂತ ನಾಯಕ್…

Read More

ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಜನ್ಮದಿನಾಚರಣೆಯು ಗೋವಿಂದ ಪೈ ನಿವಾಸ ಗಿಳಿವಿಂಡು ಇಲ್ಲಿ ದಿನಾಂಕ 23-03-2024ರಂದು ನಡೆಯಿತು. ಅಧ್ಯಕ್ಷತೆ ವಹಿಸಿದ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ ಸಾಲಿಯಾನ್ ತಿಂಗಳಿಗೊಂದು ಯಕ್ಷಗಾನ ಪ್ರದರ್ಶನವನ್ನೂ ಯಕ್ಷಗಾನ ಶಿಬಿರಗಳ ಆಯೋಜನೆಯನ್ನೂ ಸಾಧ್ಯವಾಗಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿ ತಿಂಗಳಿಗೊಂದು ತುಳು ಕಾರ್ಯಕ್ರಮ ನಡೆಸುವಂತೆ ಆಸಕ್ತರನ್ನು ಕೇಳಿಕೊಳ್ಳುವುದಾಗಿ ಹೇಳಿದರು. ವಿಶಾಲ ಸಭಾಭವನ ಇದೆ, ವಿದ್ಯುತ್ ವ್ಯವಸ್ಥೆಗೆ 57 ಲಕ್ಷ ಪಾಸಾಗಿದೆ. ಆ ಅನುದಾನ ಸಿಕ್ಕರೆ ವ್ಯವಸ್ಥೆ ಸಸೂತ್ರವಾಗಲಿದೆ ಎಂದು ಹೇಳಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿಷ್ಠಿತ ‘ಗಡಿನಾಡ ಚೇತನ’ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಡಾ. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಗೋವಿಂದ ಪೈಗಳ ಬದುಕು ಬರಹಗಳ ಕುರಿತು ಮಾತನಾಡಿ, ಡಾ. ರಮಾನಂದ ಬನಾರಿ ಅವರ ಅನುಪಸ್ಥಿತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಇಲ್ಲಿ ಎಲ್ಲರೂ ಕಾರ್ಯಕ್ರಮ ನಡೆಸುವ ಅವಕಾಶವನ್ನು ತಮ್ಮದಾಗಿಸಬೇಕೆಂದು ಸಲಹೆ ಕೊಟ್ಟರು. ರವೀಂದ್ರನ್ ಪಾಡಿ ಅವರು ಪೈಗಳ ಗಿಳಿವಿಂಡು ಕವನದ ಸಾಲುಗಳನ್ನು…

Read More

ಉಡುಪಿ : ಬೆಂಗಳೂರಿನಲ್ಲಿ ಸದಾ ಚಟುವಟಿಕೆಯಿಂದಿರುವ ಹಾಗೂ ಕಳೆದ 12 ವರ್ಷದಿಂದ ಕೋಟದ ಹಂದೆ ದೇವಸ್ಥಾನದಲ್ಲಿ ಯಕ್ಷಗಾನ ಬೇಸಿಗೆ ಶಿಬಿರ ಮಾಡುತ್ತಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಉಡುಪಿ ಕುಂದಾಪುರ ತಾಲೂಕಿನ ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಶ್ವೇತಯಾನದ ಅಡಿಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ಉಡುಪಿಯ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ದಿನಾಂಕ 31-03-2024ರಂದು ‘ಕೃಷ್ಣಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಯಕ್ಷಗಾನವು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದ್ದು, ಕಲಾವಿದರಾಗಿ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಮತ್ತು ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ದಿನೇಶ್ ಕನ್ನಾರ್, ಸ್ಪೂರ್ತಿ ಭಟ್, ರಾಘವೇಂದ್ರ ತುಂಗ ಕೆ., ಸತೀಶ ಹಾಲಾಡಿ, ಪ್ರಶಾಂತ್ ಆಚಾರ್ಯ, ರಾಜು ಪೂಜಾರಿ ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ.

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವು ದಿನಾಂಕ 26-03-2024ರ ಮಂಗಳವಾರದಂದು ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ನೆರವೇರಿತು. ಈ ಪ್ರಯುಕ್ತ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ-2024′ ನೀಡಿ ಗೌರವಿಸಲಾಯಿತು. ನಾಟಕ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ. ಆರ್. ಎಲ್. ಭಟ್ ಉಡುಪಿ, ಮುಂಬೈನ ರಂಗ ನಿರ್ದೇಶಕರಾದ ಕೆ. ವಿ. ರಾಘವೇಂದ್ರ ಐತಾಳ್, ರಂಗ ಸಂಘಟಕರಾದ ಕಜೆ ರಾಮಚಂದ್ರ ಭಟ್, ರಂಗ ಸಂಘಟಕರು ಹಾಗೂ ನಿರ್ದೇಶಕರಾದ ಎಸ್. ವಿ. ರಮೇಶ್ ಬೇಗಾರ್ ಹಾಗೂ ರಂಗ ನಟಿಯಾದ ಸುಜಾತ ಶೆಟ್ಟಿ ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಯಾದ ವರದರಾಯ ಪೈ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ‘ಶ್ವೇತಯಾನ’ ಸರಣಿ ಕಾರ್ಯಕ್ರಮದ ‘ಸಿನ್ಸ್ 1999’ ಅಂಗವಾಗಿ 11ನೇ ಕಾರ್ಯಕ್ರಮವು ದಿನಾಂಕ 26-03-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಸಂಘಸಂಸ್ಥೆಗಳ ಧನಸಹಾಯ ಯೋಜನೆಯಡಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ “ಸಾಂಪ್ರದಾಯಿಕವಾಗಿಯೇ ಜನಾನುರಾಗಿಯಾದ ಯಕ್ಷಾಂತರಂಗ ಕೋಟ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಪ್ರಸಿದ್ಧ ಕಲಾವಿದರನ್ನೊಳಗೂಡಿಕೊಂಡು ಯಕ್ಷಗಾನದ ಹಲವು ಚಟುವಟಿಕೆಗಳನ್ನು ಕರಾವಳಿ ಭಾಗದಲ್ಲಿ ಮಾಡುತ್ತಾ ಬಂದಿದೆ. ಪರಿಪೂರ್ಣ ಸಾಂಪ್ರದಾಯಿಕ ಪ್ರದರ್ಶನ ಹಾಗೂ ತರಗತಿಗಳಿಗೆ ಒತ್ತು ಕೊಟ್ಟು ಸಮಾಜಮುಖಿಯಾಗಿ ತೆರೆದುಕೊಂಡಿದೆ. ಇಂತಹ ಸಂಸ್ಥೆಗಳಿಗೆ ಪ್ರಜ್ಞಾವಂತ ಕಲಾಭಿಮಾನಿಗಳು ಮಾನ್ಯತೆ ನೀಡಬೇಕು.” ಎಂದರು. ಉದ್ಯಮಿ ಸುಬ್ರಾಯ ಆಚಾರ್ ಮಾತನಾಡಿ “ಯಕ್ಷಗಾನದ ಕಲೆ ವಿಶ್ವವ್ಯಾಪಿಗೊಳಿಸುವಲ್ಲಿ ಸಾಂಪ್ರದಾಯಿಕವಾಗಿಯೇ ಮುನ್ನಡೆಸಿದ ಸಂಸ್ಥೆ ‘ಯಕ್ಷಾಂತರಂಗ’. ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದೊಳಗೆ ಯಕ್ಷಾಂತರಂಗದ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಗಲಿದ ಹಿರಿಯ ಬರಹಗಾರರ ನೆನಪಿನಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯು ದಿನಾಂಕ 27-03-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ನುಡಿನಮನವನ್ನು ಸಲ್ಲಿಸಿದ ನಾಡೋಜ ಡಾ.ಮಹೇಶ ಜೋಶಿ “ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯದ ಸೀಮೆಯನ್ನು ಗಮನಾರ್ಹವಾಗಿ ವಿಸ್ತರಿಸದವರು. ಮಧುರ ಚೆನ್ನ ಮತ್ತು ಅರವಿಂದರ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಅವರು ಅಧ್ಯಾತ್ಮದ ಹಿರಿಮೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದರು. ಹದಿನೆಂಟನೆಯ ವಯಸ್ಸಿನಲ್ಲಿ ತಮ್ಮೂರಿನಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗುರುಲಿಂಗ ಕಾಪಸೆಯವರು ಸ್ವ-ಅಧ್ಯಯನದಿಂದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಅವರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರು ದೊಡ್ಡ ಪ್ರಮಾಣದ ಸಾಧನೆ ಮಾಡಲು ಕಾರಣರಾದರು. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸಂದರ್ಭದಲ್ಲಿ ಹಲವಾರು ವಿಶಿಷ್ಟ ಯೋಜನೆಗಳನ್ನು ರೂಪಿಸಿದ್ದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದ ಕಾಪಸೆಯವರು ಸಂಪಾದಿಸಿದ ಮಧುರ ಚೆನ್ನರ ಕೃತಿಗಳಲ್ಲಿ ಆ ಕಾಲದ…

Read More

ಸಿದ್ಧಕಟ್ಟೆ : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಏರ್ಪಡಿಸಿದ ‘ಕನಕದಾಸರ ಕಾವ್ಯಗಳು : ಸ್ವರೂಪ ಮತ್ತು ಆಶಯ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 28-03-2024ರಂದು ನಡೆಯಿತು. ಈ ವಿಚಾರ ಸಂಕಿರಣದಲ್ಲಿ ಸಂಸ್ಕೃತಿ ಚಿಂತಕ ಮುನಿರಾಜ ರೆಂಜಾಳ ಇವರು ‘ಹರಿಭಕ್ತಿಸಾರ’ ಕೃತಿಯ ಕುರಿತು ಉಪನ್ಯಾಸ ನೀಡುತ್ತಾ “ಬದುಕಿನಲ್ಲಿ ಮೌಲ್ಯ, ಋಣಪ್ರಜ್ಞೆ, ದೇವರ ಭಯ ಇರಬೇಕು. ತನ್ನ ಧರ್ಮವನ್ನು ಅರಿತು ಆಚರಿಸುವಂತೆ ಇತರೆ ಧರ್ಮಗಳನ್ನೂ ಗೌರವಿಸಬೇಕು. ದೇವರ ವಿಷಯದಲ್ಲಿ ನಾವು ಚಿಕ್ಕವರಾಗುವುದು ಬೇಡ ಎಂಬುದು ಕನಕದಾಸರನ್ನೂ ಒಳಗೊಂಡಂತೆ ಎಲ್ಲ ಸಂತರ ಸಂದೇಶ. ಕನಕದಾಸರು ಮನುಷ್ಯನ ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಭಕ್ತಿಯ ದಾರಿಯಲ್ಲಿ ಸಾಂತ್ವನ ಹೇಳಲು ಹರಿಭಕ್ತಿಸಾರ ಮತ್ತು ಕೆಲವು ಕೀರ್ತನೆಗಳನ್ನು ರಚಿಸಿದರು” ಎಂದು ಹೇಳಿದರು. ‘ರಾಮಧಾನ್ಯ ಚರಿತೆ’ ಕಾವ್ಯದ ಕುರಿತು ಮಾತನಾಡಿದ ವಾಮದಪದವು ಸ.ಪ್ರ. ಕಾಲೇಜಿನ ಪ್ರಾಧ್ಯಾಪಕಿ ಡಾ. ರೇಷ್ಮಾ ಭಟ್ ಮಾತನಾಡಿ “ಹಿಂದಿನ ಕಾವ್ಯಗಳ ಓದಿನಿಂದ ನಿಜ ಭಾರತದ…

Read More