Author: roovari

ಮಂಗಳೂರು : ಯಕ್ಷಾಂಗ‌ಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬದಲ್ಲಿ ದಿನಾಂಕ 22-11-2023ರಂದು ಯಕ್ಷಗಾನದ ಪ್ರಸಿದ್ಧ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ಸಂಸ್ಮರಣಾ ಸಮಾರಂಭ ನಡೆಯಿತು. ಈ ಸಮಾರಂಭವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಕೋ-ಆಪರೇಟಿವ್ ಸೊಸೈಟಿ (ಲಿ.) ಇದರ ಅಧ್ಯಕ್ಷರಾದ ಶ್ರೀ ಜೈರಾಜ್ ಬಿ.ರೈ ಇವರು ಮಾತನಾಡಿ “ಸಾಧನಾಶೀಲ ಕಲಾವಿದರ ಹೆಸರಿನೊಂದಿಗೆ ಅವರ ಮನೆತನದ ಅಥವಾ ಊರಿನ ಹೆಸರು ಸೇರಿಕೊಂಡಿರುತ್ತದೆ. ಇದು ಅಂಥವರ ಸಮಗ್ರ ಕುಟುಂಬಕ್ಕೆ ಸಲ್ಲುವ ಗೌರವ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಈ ನಿಟ್ಟಿನಲ್ಲಿ ಮಾದರಿಯಾಗಿ ನಿಲ್ಲುತ್ತಾರೆ. ಅವರ ಸುಪುತ್ರ ಯಕ್ಷಾಂಗಣದೊಂದಿಗೆ ಕೈಜೋಡಿಸಿ ಬಾಳಪ್ಪ ಶೆಟ್ಟರ ಸಂಸ್ಮರಣೆ ನಡೆಸುತ್ತಿರುವುದು ಅಭಿನಂದನೀಯ” ಎಂದು ಹೇಳಿದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ದಿವಂಗತ ಬಾಳಪ್ಪ ಶೆಟ್ಟರ…

Read More

ಮಂಗಳೂರು : ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ಯೂನಿಯನ್ ಬ್ಯಾಂಕ್ ಸಹಯೋಗದೊಂದಿಗೆ ರಾಗತರಂಗ ಸಂಸ್ಥೆಯು ಭಾರತೀಯ ವಿದ್ಯಾಭವನದಲ್ಲಿ ದಿನಾಂಕ 17-11-2023ರಿಂದ 19-11-2023ರವರೆಗೆ ಶಾಲಾ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ದಿನಾಂಕ 17-11-2023ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ನಗರಪಾಲಿಕೆಯ ಸದಸ್ಯ ಶ್ರೀ ದಿವಾಕರ್ ಪಾಂಡೇಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾರತೀಯ ವಿದ್ಯಾಭವನ ಗೌರವ ಕಾರ್ಯದರ್ಶಿ ಶ್ರೀ ಸುಧೀರ್ ಕುಮಾರ್ ಶೆಟ್ಟಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುದೇಶ್ ಶೆಟ್ಟಿ ಕೊಡಿಯಾಲಬೈಲ್, ಮಾನವ ಹಕ್ಕುಗಳ ಜಿಲ್ಲಾ ಯುವ ಘಟಕದ ಉಸ್ತುವಾರಿ ಶಮ್ಮಿ ಆತ್ಮಚರಣ್, ಭಾರತೀಯ ವಿದ್ಯಾಭವನ ನಿರ್ದೇಶಕರು, ರಾಗತರಂಗದ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ಡಾ. ದೇವರಾಜ್, ರಾಗತರಂಗದ ಅಧ್ಯಕ್ಷರಾದ ಆಶಾ ಹೆಗ್ಡೆ, ಕಾರ್ಯದರ್ಶಿ ಪಿ.ಸಿ.ರಾವ್, ಕೋಶಾಧ್ಯಕ್ಷರಾದ ಸೌಮ್ಯ ರಾವ್‌ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಪೂರ್ಣಿಮಾ ರಾವ್ ಮತ್ತು ಮಮತಾ ರಾಜೀವ್‌ ಸ್ಪರ್ಧೆಗಳನ್ನು…

Read More

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾ‌ರ್ ದತ್ತಿನಿಧಿ ಸಮಿತಿ ಮಂಗಳೂರು ಇದರ ಸಹಯೋಗದಲ್ಲಿ ಹಾಗೂ 20ನೇ ವರ್ಷದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26-11-2023 ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಶಿವರಾಜ್ ತಂಗಡಗಿ ಇವರು ವಿಶುಕುಮಾ‌ರ್ ಅವರ ಹೆಸರಿನಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಪ್ರಾಧ್ಯಾಪಕಿ ಅಕ್ಷಯ ಆರ್. ಶೆಟ್ಟಿ ಅವರಿಗೆ ವಿಶುಕುಮಾ‌ರ್ ಸಾಹಿತ್ಯ ಪುರಸ್ಕಾರ, ಪತ್ರಕರ್ತ ಭರತ್ ರಾಜ್ ಸನಿಲ್ ಅವರಿಗೆ ವಿಶುಕುಮಾರ್ ಪತ್ರಿಕೋದ್ಯಮ ಪುರಸ್ಕಾರ, ನಾಟಕ ಕಲಾವಿದ ರಕ್ಷಿತ್ ಗಾಣಿಗ ಅವರಿಗೆ ವಿಶುಕುಮಾ‌ರ್ ನಾಟಕ ಪುರಸ್ಕಾರ, ಬಂಟ್ವಾಳ ತುಡ‌ರ್ ಸೇವಾ ಟ್ರಸ್ಟ್ ಗೆ ವಿಶುಕುಮಾರ್ ಸಂಘಟನಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಈ ವೇಳೆ ಕನ್ನಡ…

Read More

ಮೈಸೂರು : ಅಭ್ಯಾಸಿ ಟ್ರಸ್ಟ್, ಚಾಮರಾಜನಗರ ಪ್ರಸ್ತುತ ಪಡಿಸುವ ಚಾಮರಾಜನಗರ ಗ್ರಾಮೀಣ ಭಾಷೆ ಮತ್ತು ಬದುಕಿನ ರಂಗಪ್ರಸ್ತುತಿ ‘ಕಂಡಾಯದ ಕೋಳಿ’ ದಿನಾಂಕ 26-11-2023ರ ಭಾನುವಾರ ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಶ್ರೀ ಮಂಜು ಕೋಡಿಉಗನೆ ರಚಿಸಿರುವ ಈ ರಂಗ ಪ್ರಸ್ತುತಿಯ ಸಂಗೀತ ಮತ್ತು ನಿರ್ದೇಶನ ಕಿರಣ್ ಗಿರ್ಗಿ ಅವರದ್ದು, ಶಿವಮಲ್ಲು ದೇಶಳ್ಳಿ ಮತ್ತು ಮಧು ಸೋಹನ್ ಸಂಗೀತದಲ್ಲಿ ಸಹಕರಿಸಲಿದ್ದು, ಎಸ್.ಜಿ. ಮಹಾಲಿಂಗ ಗಿರ್ಗಿ ಹಾಗೂ ಕೆ.ಪಿ. ರೇವತಿ ಶರ್ಮ ಗಾಯನದಲ್ಲಿ ಸಹಕರಿಸಲಿದ್ದಾರೆ. ರಂಗ ಪರಿಕರಗಳನ್ನು ಹರೀಶ್ ಸ್ಪಾಟ್ ಡಿಸೈನ‌ರ್ ಸಂಯೋಜಿಸಲಿದ್ದು, ಪ್ರಸಾಧನದಲ್ಲಿ ರಂಗನಾಥ ವಿ. ಮತ್ತು ಬೆಳಕಿನಲ್ಲಿ ಶಿವು ಗುಂಡ್ಲುಪೇಟೆ ಸಹಕರಿಸಲಿದ್ದಾರೆ. ರಂಗದ ಮೇಲೆ ಕಾಳೀರನಾಗಿ ಕಿರಣ್ ಗಿರ್ಗಿ, ಕುಂಟಗಿರಿಯಾಗಿ ಮಹೇಶಪ್ಪ ಕಟ್ನವಾಡಿ, ಚಾಮಿಯಾಗಿ ವಿಜಿ, ಕೆಂಪಿಯಾಗಿ ನಂದಿನಿ ರವಿಕುಮಾ‌ರ್, ಸುಟ್ಟಣ್ಣ, ತಮಡಿ ಮತ್ತು ಮುರುಗೇಶನಾಗಿ ರಿದಂ ರಾಮಣ್ಣ, ಪೊಲೀಸ್‌ ಇನ್ಸ್ ಪೆಕ್ಟರ್ ಆಗಿ ಕಲೆ ನಟರಾಜ್, ಪುಟ್ಟಣ್ಣ ಮತ್ತು ಪೊಲೀಸ್ ಪೇದೆ ಪಾತ್ರದಲ್ಲಿ ಸುರೇಶ್…

Read More

ಮಂಗಳೂರು : ಲಲಿತ ಕಲೆಗಳ ಸಂವರ್ಧನೆಗಾಗಿ ಸಮರ್ಪಿತವಾದ ಅಖಿಲ ಭಾರತಿಯ ಸಂಘಟನೆಯಾದ ಸಂಸ್ಕಾರ ಭಾರತೀ ವತಿಯಿಂದ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವು ದಿನಾಂಕ 25-11-2023 ಶನಿವಾರದಂದು ಸಂಜೆ ಗಂಟೆ 4ಕ್ಕೆ ಶರವು ದೇವಸ್ಥಾನದ ಬಳಿಯಿರುವ ಬಾಳಂಭಟ್ ಹಾಲ್ ಇಲ್ಲಿ ನಡೆಯಲಿದೆ. ಸಂಜೆ ಗಂಟೆ 4ರಿಂದ ಸರಯೂ ಯಕ್ಷ ಬಳಗ, ಕೋಡಿಕಲ್ ಇವರಿಂದ ವರ್ಕಾಡಿ ರವಿ ಅಲೆವೂರಾಯ ಇವರ ನಿರ್ದೇಶನದಲ್ಲಿ ‘ಮಹರ್ಷಿ ವಾಲ್ಮೀಕಿ’ ಯಕ್ಷಗಾನ ಬಯಲಾಟ ಮತ್ತು ಶ್ರೀ ಬಾಲಕೃಷ್ಣ ಕತ್ತಲ್ಸಾರ್ ಮತ್ತು ಬಳಗದವರಿಂದ ‘ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು’ ಪ್ರದರ್ಶನ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್ ಇವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಆರ್.ಕೆ. ಟ್ರಾವೆಲ್ಸ್ ಇದರ ಮಾಲಕರಾದ ಅಡ್ಯಾರ್ ಮಾಧವ ನಾಯ್ಕ್ ಭಾಗವಹಿಸಲಿರುವರು. ಬಾಳಂಭಟ್ ಮನೆತನದ ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ಇವರು ಮುಖ್ಯ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಸಂಸ್ಕಾರ ಭಾರತೀ…

Read More

ಅರಿಜೋನಾ : ಅಮೆರಿಕದ ಟೆಂಪಿ ಅರಿಜೋನಾ ನಗರದಲ್ಲಿ ನವೆಂಬರ್ 5ನ್ನು ವಿಠ್ಠಲ ರಾಮಮೂರ್ತಿ ದಿನ’ ಎಂದು ಘೋಷಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರಾಗಿ ಹಾಗೂ ಗುರುವಾಗಿ ವಿಠ್ಠಲ ರಾಮಮೂರ್ತಿ ಅವರು ನೀಡಿರುವ ಜೀವಮಾನದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಟೆಂಪಿ ಅರಿಜೋನಾ ನಗರದ ಮೇಯರ್ ಕೋರಿ ವುಡ್ಸ್ ಅವರು ಈ ಗೌರವವನ್ನು ನೀಡಿ ಅಭಿನಂದಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕನ್ನಡಿಗ, ಅಂತರರಾಷ್ಟ್ರೀಯ ಖ್ಯಾತಿಯ ಈ ವಯಲಿನ್ ಸಾಧಕ ಮೂಲತಃ ಧರ್ಮಸ್ಥಳ ಸಮೀಪದ ನಿಡ್ಲೆಯವರು. ಚೆನ್ನೈಯ ನಿವಾಸಿಯಾಗಿರುವ ಅವರು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರು. ವಯಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಅವರ ಪಟ್ಟ ಶಿಷ್ಯ. ಭಾರತ ಹಾಗೂ ವಿದೇಶಗಳಲ್ಲಿ 6,000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿರುವ ವಿಠ್ಠಲ ರಾಮಮೂರ್ತಿ ಶ್ರೇಷ್ಠ ಸಂಗೀತ ಗುರುಗಳೂ ಹೌದು. ಅವರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯರು ವಿಶ್ವದಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಪಸರಿಸುತ್ತಿದ್ದಾರೆ. ನಿಡ್ಲೆಯಲ್ಲಿರುವ ಅವರ ಮೂಲ ಮನೆಯಲ್ಲಿ ‘ಕರುಂಬಿತ್ತಿಲ್ ಶಿಬಿರ’…

Read More

ಬೆಳಗಾವಿ : ಕೆ.ಎಲ್‌.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸರ್ ಸಿ.ವಿ. ರಾಮನ್ ಸಭಾಂಗಣದಲ್ಲಿ ಐಕ್ಯೂಎಸಿ ಕನ್ನಡ ವಿಭಾಗ ಮತ್ತು ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಸಹಯೋಗದೊಂದಿಗೆ ಡಾ. ಡಿ.ಎಸ್‌. ಕರ್ಕಿ ಅವರ 116ನೇ ಜಯಂತ್ಯುತ್ಸವ ಪ್ರಯುಕ್ತ ‘ಕನ್ನಡದ ದೀಪ ಡಾ. ಡಿ.ಎಸ್. ಕರ್ಕಿ’ ಎಂಬ ವಿಷಯದ ಕುರಿತು ದಿನಾಂಕ 22-11-2023ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿ.ವಿ. ಮಾಲ್ಯಮಾಪನ ಕುಲಸಚಿವೆ ಹಾಗೂ ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮೀ ತಿರ್ಲಾಪೂರ ಅವರು “ವಿದ್ಯಾ ಸಂಪತ್ತಿನಿಂದ ದೊಡ್ಡ ಹುದ್ದೆಗೆ ಏರಿದರೂ ಸಾಹಿತಿ ಡಾ. ಡಿ.ಎಸ್. ಕರ್ಕಿ ಅವರಿಗೆ ಹಮ್ಮು ಬಿಮ್ಮು ಇದ್ದಿರಲಿಲ್ಲ. ಪ್ರಾಚಾರ್ಯರು, ಉಪನ್ಯಾಸಕರಾದವರು ಹೇಗಿರಬೇಕು ಎನ್ನುವುದನ್ನು ಸರಳತೆಯಿಂದ ತೋರಿಸಿಕೊಟ್ಟಿದ್ದರು. ಅಂತಹ ಮಹಾನ್ ವ್ಯಕ್ತಿಗಳ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿ ಎತ್ತರಕ್ಕೆ ಬೆಳೆಯಬೇಕು” ಎಂದು ಡಾ. ಡಿ.ಎಸ್. ಕರ್ಕಿ ಅವರ ಜೀವನ ಮೌಲ್ಯಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ…

Read More

ನಾಟಕದ ಶೀರ್ಷಿಕೆಯೇ ಅತ್ಯಂತ ಮನಮೋಹಕ. ಮನಸೂರೆಗೊಂಡ ಕಾವ್ಯಾತ್ಮಕ ಪ್ರಸ್ತುತಿ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಹು ಲವಲವಿಕೆಯಿಂದ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ಸುಮನೋಹರ ರಂಗಪ್ರಸ್ತುತಿ ನೋಡುಗರನ್ನು ಬಹು ಆಸಕ್ತಿಯಿಂದ ಸೆಳೆದೊಯ್ದ ಕುತೂಹಲಭರಿತ ನಾಟಕ. ನಾಡೋಜ ಡಾ. ಹಂಪನಾ ವಿರಚಿತ ಈಗಾಗಲೇ 16 ಭಾಷೆಗಳಿಗೆ ಅನುವಾದಗೊಂಡಿರುವ ‘ಚಾರುವಸಂತ’ ವಿಶಿಷ್ಟ ದೇಸೀಕಾವ್ಯವನ್ನು ಆಧರಿಸಿದ ರಂಗರೂಪವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದವರು ಡಾ.ನಾ. ದಾಮೋದರ ಶೆಟ್ಟಿ. ಕುತೂಹಲ ಕೆರಳಿಸುವ ಆಸಕ್ತಿಕರ ಘಟನೆಗಳಿಂದ ಕೂಡಿದ ನಾಟಕದ ದೃಶ್ಯಗಳಿಗೆ ಜೀವಸ್ಪರ್ಶ ನೀಡಿ ರಮ್ಯ ವಿನ್ಯಾಸದೊಂದಿಗೆ ಹರಿತವಾಗಿ ನಿರ್ದೇಶಿಸಿದವರು ಡಾ. ಜೀವನ್ ರಾಮ್ ಸುಳ್ಯ. ತಮ್ಮ ಕಾರ್ಯಕ್ಷಮತೆಗಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಇವರು ತಮ್ಮ ಸಿರಿಕಂಠದ ಇಂಪಾದ ಗಾಯನದಿಂದ ನಾಟಕದ ನಡೆಯನ್ನು ಮಧುರವಾಗಿಸಿದರು. ಇಂದಿನ ಸಮಾಜಕ್ಕೂ ಪ್ರಸ್ತುತವಾದ ಹಲವಾರು ಸಮಸ್ಯೆಗಳಿಗೆ ದನಿಯಾದ ನಾಟಕದಲ್ಲಿ ಗೌರವಸ್ಥ ಸಿರಿವಂತ ವೈಶ್ಯ ಮನೆತನದ ಚಾರುದತ್ತ, ಸುರಸುಂದರಿ ವೇಶ್ಯೆ ವಸಂತ ತಿಲಕೆಯಲ್ಲಿ ಅನುರಕ್ತನಾಗಿ ತಂದೆ-ತಾಯಿ, ಹೆಂಡತಿಯನ್ನು ಮರೆತು ಮನೆತನದ ಕೀರ್ತಿಯನ್ನು ಹಾಳುಮಾಡಿದ್ದಲ್ಲದೆ ನಿರ್ಗತಿಕನಾಗುತ್ತಾನೆ. ಸಾಧ್ವಿ ಪತ್ನಿಯ…

Read More

ನಾಟಕ: ಹೂವು ಅಭಿನಯ: ಚಂದ್ರಶೇಖರ ಶಾಸ್ತ್ರಿ ನಿರ್ದೇಶನ: ಸಾಸ್ವೆಹಳ್ಳಿ ಸತೀಶ್‌ ತಂಡ: ಹೊಂಗಿರಣ, ಶಿವಮೊಗ್ಗ ಪ್ರದರ್ಶನ: ಹತ್ತನೆಯ ಪ್ರದರ್ಶನ, ಸಮುದಾಯ ಬೆಂಗಳೂರು ʼ ಕಾರ್ನಾಡ್‌ ನೆನಪುʼ. ಕಾರ್ಯಕ್ರಮದಲ್ಲಿ ಹೂವುʼ ಗಿರೀಶ್‌ ಕಾರ್ನಾಡ್‌ ರ ಏಕವ್ಯಕ್ತಿ ನಾಟ್ಕ. ಅವರು ಮೊದಲು ಇಂಗ್ಲಿಷ್ ನಲ್ಲಿ ಬರೆದು ಮತ್ತೆ ಕನ್ನಡಕ್ಕೆ ತಂದ ಮೊದಲ ನಾಟ್ಕ ಕೂಡ. ಇಂಥದೊಂದು ಕೃತಿಯನ್ನು ಶಿವಮೊಗ್ಗದ ʼಹೊಂಗಿರಣʼ ತಂಡದವರು ರಂಗಕ್ಕೆ ತಂದಿದ್ದಾರೆ. ನಾಟ್ಕದ ನಿರ್ದೇಶಕರು ಸಾಸ್ವೆಹಳ್ಳಿ ಸತೀಶ್.‌ ಅಭಿನಯ: ಚಂದ್ರಶೇಖರ ಶಾಸ್ತ್ರಿ. ಚಿತ್ರದುರ್ಗದ ಗ್ರಾಮೀಣ ಭಾಗದ ಕಥೆಯನ್ನೆತ್ತಿಕೊಂಡು ಕಾರ್ನಾಡ್‌ ಈ ನಾಟ್ಕ ರಚಿಸಿದ್ದಾರೆ. ಇದು, ದೈವ ಭಕ್ತಿ ಮತ್ತು ವೇಶ್ಯೆಯೊಬ್ಬಳ ಪ್ರೀತಿಯ ನಡುವೆ ಸಿಕ್ಕುಹಾಕಿಕೊಂಡ ಪೂಜಾರಿಯೊಬ್ಬನ ಕಥೆ. ಆತ ಹಳ್ಳಿಯ ಶಿವದೇವಾಲಯದ ಪೂಜಾರಿ. ಊರ ಗುಡಿಯಲ್ಲಿ ನಿಂತ ಲಿಂಗವನ್ನ ಪ್ರತಿದಿನವೂ ವಿಶಿಷ್ಟ ವಿನ್ಯಾಸಗಳಲ್ಲಿ ಹೂಗಳಿಂದ ಸಿಂಗರಿಸೋದ್ರಲ್ಲಿ ನಿಷ್ಣಾತ. ಪಾಳೇಗಾರರಿಂದಲೂ ಊರ ಜನರಿಂದಲೂ ತನ್ನ ಕಲಾವಂತಿಕೆಗಾಗಿ ಹೊಗಳಿಸಿಕೊಳ್ತಿದ್ದ ಈ ಪೂಜಾರಿ, ಒಂದು ಸಂಜೆ ಪ್ರಸಾದ ವಿತರಿಸೋ ಹೊತ್ತಿಗೆ ಅಚಾನಕ್ಕಾಗಿ ಚಂದ್ರಾವತಿಯೆಂಬ ವೇಶ್ಯೆಯೊಬ್ಬಳ ಎದೆಯ…

Read More

ಹೊನ್ನಾವರ : ‘ಪ್ರತಿಮಾ ಕೊಂಕಣಿ ಸಾಂಸ್ಕೃತಿಕ್ ಕಲಾ ವೇದಿ’ ಸಂಸ್ಥೆಯ ವತಿಯಿಂದ ಪ್ರತಿಭೋದಯದ ಶರಾವತಿ ಕಲಾ ಮಂದಿರದಲ್ಲಿ ದಿನಾಂಕ 19-11-2023 ರವಿವಾರದಂದು ಹೊನ್ನಾವರ, ಭಟ್ಕಳ ಕುಮಟಾ ಡಿನರಿ ಮಟ್ಟದಲ್ಲಿ ಕೊಂಕಣಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಹೊನ್ನಾವರ ಚರ್ಚಿನ ಮುಖ್ಯ ಗುರುಗಳಾದ ವಂದನೀಯ ಪಾದರ್ ಸಾಲ್ವಾದೋರ್ ಗೊನ್ಸಾಲ್ವಿಸ್ ಹಾಗೂ ಸಭಾಧ್ಯಕ್ಷರಾಗಿ ಹೊನ್ನಾವರ ಡಿನರಿಯ ಡೀನ್ ವಂದನೀಯ ಪಾಧರ್ ಥೊಮಸ್ ಫರ್ನಾಂಡಿಸ್ ಹಾಗೂ ಮುಖ್ಯ ಅತಿಥಿಗಳಾಗಿ ನಾಗರಿಕ ವಾರ ಪತ್ರಿಕೆಯ ಸಂಪಾದಕರಾದ ಶ್ರೀಯುತ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ಅತಿಥಿಗಳಾಗಿ ಸಾನಾಮೋಟಾ ಚರ್ಚಿನ ವಂದನೀಯ ಫಾದರ್ ಜೊನ್ಸನ್ ಫರ್ನಾಂಡಿಸ್, ರೊಜ್‌ಮೇರಿ ಕ್ರೆಡಿಟ್ ಸೌಹಾರ್ದದ ಕಾರ್ಯನಿರ್ವಾಹಕರಾದ ಶ್ರೀಮತಿ ಸವಿತಾ ರೇಷ್ಮಾ ಫರ್ನಾಂಡಿಸ್, ಹೊನ್ನಾವರ ಪ್ರತಿಷ್ಠಿತ ಹೋಟೇಲ್ ಗ್ರೀನ್ ಪಾರ್ಕಿನ ಮಾಲೀಕರಾದ ಶ್ರೀ ಗಣೇಶ ಅರವಾರೆ ಹಾಗೂ ಸನ್ಮಾನಿತರಾದ ಶ್ರೀ ಸ್ಯಾಮ್ಸನ್ ಡಿಸೋಜಾ ಸಮಾಜ ಸೇವಕ ಕಾರವಾರ, ಶ್ರೀ ನಿತ್ಯಾನಂದ ನಾಯಕ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾನಾಮೋಟಾ, ಶ್ರೀಮತಿ ಗ್ಲೋರಿಯಾ…

Read More