Subscribe to Updates
Get the latest creative news from FooBar about art, design and business.
Author: roovari
23.11.1982ರಂದು ವೆಂಕಟರಮಣ ಆಚಾರ್ಯ ಹಾಗೂ ಗಿರಿಜಾ ಆಚಾರ್ಯ ಇವರ ಮಗನಾಗಿ ಜನಿಸಿದ ಪದ್ಮನಾಭ ಆಚಾರ್ಯರು B.A ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಯಕ್ಷ ಗುರು ಪ್ರಸಾದ್ ಮೊಗೆಬೆಟ್ಟು ಇವರ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿ ಒಬ್ಬ ಒಳ್ಳೆಯ ಕಲಾವಿದರಾಗಿ ರೂಪುಗೊಂಡರು. ಚಿಕ್ಕಂದಿನಿಂದಲೂ ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ. ಸುತ್ತಮುತ್ತ ಎಲ್ಲಿ ಯಕ್ಷಗಾನ ಆದರೂ ಬೆಳಗ್ಗಿನವರೆಗೆ ಯಕ್ಷಗಾನ ನೋಡುವ ಹವ್ಯಾಸ. ಆದರೆ 29ನೇ ವಯಸ್ಸಿನವರೆಗೆ ಒಮ್ಮೆಯೂ ವೇಷ ಮಾಡಿದವವರಲ್ಲ. ಪ್ರಸಾದ್ ಮೊಗೆಬೆಟ್ಟುರವರ ಗುರುತನದಲ್ಲಿ ಶ್ರೀ ಮಹಾಲಿಂಗೇಶ್ವರ ಕಲಾ ರಂಗದಲ್ಲಿ ಮೊದಲು ಗೆಜ್ಜೆ ಕಟ್ಟಿ ವೇಷ ಮಾಡಿದ ಇವರಿಗೆ ನಂತರ ಇದೇ ಸಂಘದಲ್ಲಿ ಹಾಗೂ ಸುತ್ತಮುತ್ತಲಿನ ಅನೇಕ ಸಂಘಗಳಲ್ಲಿ ವೇಷ ಮಾಡುವ ಅವಕಾಶ ಸಿಕ್ಕಿತು. ಯಕ್ಷಗಾನದಲ್ಲಿ ಏನಾದರೂ ಅಲ್ಪಸ್ವಲ್ಪ ಕಲಿತದ್ದಿದ್ದರೆ ಬಡಗಿನ ಮೇರು ಪ್ರಸಂಗಕರ್ತ, ಯಕ್ಷ ಗುರು, ಯಕ್ಷ ಕವಿ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಂದ. ರಂಗಕ್ಕೆ ಹೋಗುವ ಮೊದಲು ಗುರುಗಳ ಹತ್ತಿರ ಪ್ರಸಂಗದ ಬಗ್ಗೆ ತಿಳಿದುಕೊಂಡು, ಪದ್ಯದ ಅರ್ಥವನ್ನು ಗುರುಗಳ ಬಳಿ ತಿಳಿದುಕೊಂಡು,…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಕನ್ನಡ ವಿಭಾಗ ಮತ್ತು ಕನ್ನಡ ಸಂಘ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸುವ ಇಂದಿರಾ ರತ್ನ ದತ್ತಿ ಪ್ರಶಸ್ತಿ ಪ್ರದಾನ, ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ಪತ್ರಿಕೆ ಬಿಡುಗಡೆ ಸಮಾರಂಭವು ದಿನಾಂಕ 24-11-2023 ರಂದು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎನ್. ವೆಂಕಟೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಕಿರುತೆರೆ ಕಲಾವಿದೆ ಮತ್ತು ಕಾರ್ಯಕ್ರಮ ನಿರೂಪಕಿಯಾದ ಶ್ರೀಮತಿ ಅಪರ್ಣಾ ವಸ್ತಾರೆ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯೋತ್ಸವದ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಆಶಯ ನುಡಿಗಳನ್ನಾಡಲಿದ್ದು, ಐಕ್ಯುಎಸಿ ಸಂಚಾಲಕರಾದ ಡಾ. ಎಂ. ಎಲ್. ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಕವಯತ್ರಿಯಾದ ಆರ್. ಹಂಸ ಇವರಿಗೆ 2023ನೇ ಸಾಲಿನ ಇಂದಿರಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.…
ಮಡಿಕೇರಿ : ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಮತ್ತು ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ವಿಚಾರ ಮಂಡನೆ, ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವು ದಿನಾಂಕ 24-11-2023ರ ಬೆಳಿಗ್ಗೆ ಘಂಟೆ 10.00 ಕ್ಕೆ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜ್ ನ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿ ಹಾಗೂ ಎಂ.ಎ.ಕೊಡವ ವಿಭಾಗದ ಉಪನ್ಯಾಸಕ ಬಾಚರಣಿಯಂಡ ಅಪ್ಪಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ, ಎಂ.ಎ.ಕೊಡವ ವಿಭಾಗದ ಉಪನ್ಯಾಸಕಿ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಬರೆದಿರುವ ಕೊಡವ ಮಕ್ಕಡ ಕೂಟದ 76ನೇ ಪುಸ್ತಕ ‘ನಾಡ ಕೊಡಗ್’ ಅನಾವರಣಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ, ಕೊಡವ ಎಂ.ಎ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ, “ನಾಡ ಕೊಡಗ್” ಪುಸ್ತಕ ಬರಹಗಾರ…
ಈ ಭೂಮಿಗೆ ನಾವೆಲ್ಲಾ ಅತಿಥಿಗಳು.ಇಲ್ಲಿಯ ಪ್ರತಿಯೊಂದು ಸಸ್ಯಾದಿ ಸಂಪತ್ತು, ಧಾನ್ಯಾದಿ ಸಂಪತ್ತು ಹಾಗೂ ಹಿರಣ್ಯಾಧಿ ಸಂಪತ್ತು ಎಲ್ಲಾ ಮನುಷ್ಯನಿಗೋಸ್ಕರವೇ ನಿರ್ಮಾಣವಾಗಿದೆಯೇನೋ ಎನ್ನುವ ಮಟ್ಟಿಗೆ ನಾವು ಇದನ್ನು ಅನುಭವಿಸುತ್ತಿರುತ್ತೇವೆ. ಈ ಪ್ರಕೃತಿಯ ವೈಭವದ ವರ್ಣನೆ ಶಬ್ಧಕ್ಕೆ ನಿಲುಕದ್ದು. ಗಿಡಮರಗಳ, ಹೂಬನಗಳ ಹಾಗೂ ಮೇಘಮಾಲೆಗಳ ಲೀಲಾವಿಲಾಸ ಇರಬಹುದು. ಉತ್ತುಂಗದ ಶಿಖರಗಳು, ಹಿಮಾಲಯದಂತಹ ಪರ್ವತ ಶ್ರೇಣಿಗಳು, ಗಂಗೆಯಂತಹ ಪುಣ್ಯವಾಹಿನಿಗಳು, ಪುಣ್ಯ ಕ್ಷೇತ್ರಗಳು, ಭೋರ್ಗರೆಯುತ್ತಾ ದಡಕ್ಕೆ ಅಪ್ಪಳಿಸುವ ಸಮುದ್ರ ತೆರೆಗಳು, ಮಹಾ ಸಾಗರಗಳು, ಜೀವಕ್ಕೆ ತಂಪೆರವ ಮಳೆಗಳು, ಅರುಣೋದಯ, ಚಂದ್ರಮನ ಬೆಳದಿಂಗಳು, ಮೈಮರೆಸುವ ಬಾನಂಗಳದ ನಕ್ಷತ್ರಗಳು, ಪ್ರಕೃತಿಯ ಈ ವಿನೋದ ವಿಹಾರಕ್ಕೆ ಈ ಅದ್ಭುತ ಶಕ್ತಿಗೆ ನಮಿಸಿದರಷ್ಟೇ ಸಾಲದು, ನಮ್ಮ ನಮ್ಮ ಜವಾಬ್ಧಾರಿ ಅರಿತು ಕೆಲಸ ಮಾಡಿದಾಗ ಮಾತ್ರ ಸಾರ್ಥಕತೆ. ಕಲಾವಿದ ಗಣೇಶ ದೊಡ್ಡಮನಿ ಅವರು ಇಂತಹ ಪ್ರಕೃತಿಯ ಸೌಂದರ್ಯ ನೋಡುತ್ತಾ ಧ್ಯಾನಾಸಕ್ತನಾಗಿಯೋ ಯೋಗ ಮಾಡುತ್ತಾ ಕುಳಿತು ಕೊಂಡವರಲ್ಲ. ಬದಲಾಗಿ ಈ ಪ್ರಕೃತಿಯ ಸನ್ನಿವೇಶಗಳನ್ನೇ ಅಮೂರ್ತ ರೂಪದ ಕಲಾಕೃತಿಗಳನ್ನಾಗಿಸಿದ್ದಾರೆ. “Petrichor-smell of nature” ಹೆಸರಿನಲ್ಲಿ ಈ ಕಲಾಪ್ರದರ್ಶನವನ್ನು…
ಬೆಂಗಳೂರು : ಬೆಂಗಳೂರಿನ ಭೈರವಿ ನಾಟ್ಯಶಾಲೆಯು ಪ್ರಸ್ತುತಪಡಿಸುವ “ಭೈರವಿ ನೃತ್ಯೋತ್ಸವ”ವು ದಿನಾಂಕ 26-11-2023ರ ಭಾನುವಾರದಂದು ಬೆಂಗಳೂರಿನ ಗೊಲ್ಲಹಳ್ಳಿಯ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ. ಇದರ ಪ್ರಯುಕ್ತ ಯುವ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರೊಂದಿಗೆ “ನೃತ್ಯದಲ್ಲಿ ತಾಳಾವಧಾನ”ಎಂಬ ವಿಚಾರದ ಸಂವಾದ ನಡೆಯಲಿದೆ. ತದನಂತರ ಯುವ ಭರತನಾಟ್ಯ ಕಲಾವಿದೆ ಕು. ಮೇಘನಾ ಭಟ್ ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಉಡುಪಿ : ರಾಗಧನ (ರಿ) ಉಡುಪಿ ಸಂಸ್ಥೆಯ ರಾಗ ರತ್ನ ಮಾಲಿಕೆ -18 ವಿದುಷಿ ರಂಜನಿ ಹೆಬ್ಬಾರ್ ಸಂಸ್ಮರಣಾ ಸಂಗೀತ ಕಛೇರಿಯು ದಿನಾಂಕ 18-11-2023ರ ಶನಿವಾರದಂದು ಮಣಿಪಾಲದ ಪರ್ಕಳದಲ್ಲಿರುವ ಸಾರಿಗಮ ಭಾರತಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಡಾ ಶ್ರೀ ಕಿರಣ ಹೆಬ್ಬಾರ್ ಅವರು ರಂಜನಿಯವರನ್ನು ನೆನಪಿಸಿಕೊಳ್ಳುತ್ತಾ “ರಂಜಿನಿ ಅವರ ಸಂಗೀತದ ಮಾಧುರ್ಯ, ವೈಭವ ಹಾಗೂ ಸೌಂದರ್ಯ ತರಂಗಗಳು ಇನ್ನೂ ಈ ಮಣ್ಣಿನಲ್ಲಿ ಕಂಪನಗಳನ್ನು ಮೂಡಿಸುತ್ತಿದೆ. ಸಂಗೀತದೊಂದಿಗೆ ಆಕೆಯ ಆಧ್ಯಾತ್ಮಿಕ ಯಾನವೂ ಜೊತೆಯಾಗಿ ಸಾಗುತ್ತಿತ್ತು, ಸಂಗೀತ ಸಾಧನೆಯಲ್ಲಿ ಇಂದಿನ ಯುವ ಪೀಳಿಗೆಯ ಸವಾಲುಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಅವರು ಅದಕ್ಕಾಗಿ ಸಂಕಲ್ಪವನ್ನು ಮಾಡಿಕೊಂಡಿದ್ದರು. ಆಕೆ ಭೌತಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಆಕೆ ಮರೆಯಬಾರದವರು ಹಾಗೂ ಮರೆಯಲಾಗದವರು. ಅವರ ಸಂಕಲ್ಪವನ್ನು ಪೂರೈಸುವ ಹೊಣೆ ನಮ್ಮದಾಗಿದೆ.“ ಎಂದು ಹೇಳಿದರು. ವಿನಯ್ ಎಸ್.ಆರ್. ಅವರು ಸಂಸ್ಮರಣಾ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಅವರಿಗೆ ವಯೊಲಿನ್ ನಲ್ಲಿ ಮಹತೀ ಕೆ. ಕಾರ್ಕಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ…
ಉಡುಪಿ : ಮಂಗಳೂರಿನ ಪಿವಿಎಸ್ ಗ್ರೂಪ್ನ ಚೇರ್ಮೆನ್ ಹಾಗೂ ಮ್ಯಾನೆಜಿಂಗ್ ಡೈರೆಕ್ಟರ್ ಸರೋಜಿನಿ ಎಂ.ಕುಶೆ ಅವರಿಗೆ ರಂಗಭೂಮಿ ಉಡುಪಿ ವತಿಯಿಂದ ‘ರಂಗಭೂಮಿ ಗೌರವ’ ಪ್ರದಾನ ಕಾರ್ಯಕ್ರಮ ದಿನಾಂಕ 18-11-2023ರಂದು ಮಂಗಳೂರಿನ ಅತ್ತಾವರ ಸರೋಜಿನಿ ಮಧುಸೂದನ ಕುಶೆ ಇನ್ಸ್ಟಿಟ್ಯೂಶನ್ನಲ್ಲಿ ನಡೆದ 21ನೇ ‘ಸರೋಜ ಮಧು ಕಲಾ ಉತ್ಸವ’ದ ಸಂದರ್ಭದಲ್ಲಿ ನಡೆಯಿತು. ರಂಗಭೂಮಿ ಉಡುಪಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ರಂಗಭೂಮಿ ಉಡುಪಿಯ ರಂಗ ಚಟುವಟಿಕೆಗಳಿಗೆ ಪಿವಿಎಸ್ ಗ್ರೂಪ್ ಸಂಸ್ಥೆ ನೀಡುತ್ತಿರುವ ನಿರಂತರ ಪ್ರೋತ್ಸಾಹ ಎಂದೂ ಮರೆಯಲಾಗದು. ಈ ನಿಟ್ಟಿನಲ್ಲಿ ಸಂಸ್ಥೆಯ ಚೇರ್ಮೆನ್ ಹಾಗೂ ಎಂ.ಡಿ. ಆಗಿರುವ ಸರೋಜಿನಿ ಮಧುಸೂದನ ಕುಶೆ ಅವರಿಗೆ ಈ ಗೌರವವನ್ನು ಸಲ್ಲಿಸುತ್ತಿರುವುದು ಸಂತೋಷ ತಂದಿದೆ” ಎಂದರು. ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಅವರು ಸನ್ಮಾನ ಪತ್ರವನ್ನು ವಾಚಿಸಿ, ರಂಗಭೂಮಿಗೆ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಶ್ರೀಮತಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಮಂಗಳೂರಿನ…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯದ ಡಾ. ದಯಾನಂದ ಪೈ ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರ ಸಹಯೋಗದಲ್ಲಿ ದಿನಾಂಕ 19-11-2023ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬ ಸಲುವಾಗಿ ದಿನಾಂಕ 20-11-2023 ಸೋಮವಾರ ಯಕ್ಷಗಾನದ ಸೀಮೋಲ್ಲಂಘನ ಸಾಧಕ ದಿ. ಕೆ.ಎಸ್. ಉಪಾಧ್ಯಾಯರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಮಾತನಾಡಿ “ಯಕ್ಷಗಾನ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಮಹೋನ್ನತ ಕಲೆ. ಅದಕ್ಕಾಗಿ ದುಡಿದವರು ಅನೇಕ. ದೇಶವಿದೇಶಗಳಲ್ಲಿ ಯಕ್ಷಗಾನ ಮತ್ತು ಗೊಂಬೆಯಾಟವನ್ನು ಮೆರೆಸಿದ ಕೋಡಿ ಶ್ರೀನಿವಾಸ ಉಪಾಧ್ಯಾಯರು ಅಂತಹ ಸಾಧಕರಲ್ಲೊಬ್ಬರು. ಅವರು…
ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇದರ ನೇತೃತ್ವದಲ್ಲಿ ಅದ್ವಯ-ಕನ್ನಡ ಸಂಘ-ಅಕ್ಷಯ ಕಾಲೇಜು ಪುತ್ತೂರು ಹಾಗೂ ರೋಟರಾಕ್ಟ್ ಕ್ಲಬ್ -ಅಕ್ಷಯ್ ಕಾಲೇಜ್ ಪುತ್ತೂರು ಸಹಕಾರದಲ್ಲಿ ಪುತ್ತೂರು ತಾಲೂಕು ಕ.ಸಾ.ಪ. ದತ್ತಿ ನಿಧಿ-2015 ‘ಉಪನ್ಯಾಸ ಕಾರ್ಯಕ್ರಮ’ವು ದಿನಾಂಕ 24-11-2023 ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪುತ್ತೂರಿನ ಆರ್ಯಾಪು ಅಕ್ಷಯ ಕಾಲೇಜಿನಲ್ಲಿ ನಡೆಯಲಿದೆ. ಪುತ್ತೂರು ತಾಲೂಕು ಕಸಾಪದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ಪುತ್ತೂರು ಇವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ಪುತ್ತೂರಿನ ಅಕ್ಷಯ್ ಕಾಲೇಜಿನ ಆಡಳಿತ ನಿರ್ದೇಶಕರಾದ ಶ್ರೀ ಜಯಂತ್ ನಡುಬೈಲ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಹಿರಿಯ ಲೇಖಕರು, ಡಿ.ಆರ್.ಡಿ.ಓ.ಕೇಂದ್ರ ರಕ್ಷಣೆ ಸಂಶೋಧನಾ ಇಲಾಖೆಯ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಜಯಪ್ರಕಾಶ್ ಪುತ್ತೂರು ಇವರು ‘ಅನುವಾದ ಸಾಹಿತ್ಯ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ…
ಉಡುಪಿ : 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯು.ಎಫ್.ಸಿ. ಮಕ್ಕಳ ಹಬ್ಬ- 2023’ವು ದಿನಾಂಕ 25-1-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಉದ್ಯಾವರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಲಿದೆ. ಬೆಳಗ್ಗೆ ಗಂಟೆ 9.30ಕ್ಕೆ ಜರಗುವ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಹಬ್ಬದ ಉದ್ಘಾಟನೆಯನ್ನು ಝೀ ಟಿವಿ ಸರಿಗಮಪ ಲಿಟಲ್ ಚಾಂಪಿಯನ್ ಶಿಪ್ ಸೀಸನ್ – 19ರ ದ್ವಿತೀಯ ಪ್ರಶಸ್ತಿ ವಿಜೇತೆ ಕು. ಶಿವಾನಿ ನವೀನ್ ನೆರವೇರಿಸಲಿರುವರು. ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಉದಯ ಶೆಟ್ಟಿ ಮುನಿಯಾಲು ಮತ್ತು ಉಡುಪಿ ಜಿಲ್ಲಾ…