Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು ವತಿಯಿಂದ ‘ಸಂತ ಜ್ಞಾನೇಶ್ವರ -2 ಸಂಜೀವನ ಸಮಾಧಿ’ ಎಂಬ ಕೊಂಕಣಿ ಐತಿಹಾಸಿಕ ನಾಟಕ ದಿನಾಂಕ : 17-06-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರದರ್ಶನಗೊಂಡಿತು. ಸಂತ ಜ್ಞಾನೇಶ್ವರರ ಜೀವನದ ಬಗ್ಗೆ ಸರಣಿ ನಾಟಕ ಪ್ರದರ್ಶನ ಮಾಡುವ ಉದ್ದೇಶವಿಟ್ಟುಕೊಂಡಿರುವ ರಾಮ್ ದಾಸ್ ದತ್ತಾತ್ರೇಯ ಗುಲ್ವಾಡಿ ಇವರ ‘ಜ್ಞಾತಿ ಜನಾಂಗೆಲೊ ರಾಯೋ ಜ್ಞಾನೇಶ್ವರು’ ಎಂಬ ನಾಟಕ 2018ರಲ್ಲಿ ಪುರಭವನದಲ್ಲಿ ಪ್ರದರ್ಶನಗೊಂಡಿತು. ಇದು ಸರಣಿ ಕಾರ್ಯಕ್ರಮದ ಪ್ರಥಮ ಕುಸುಮ. ಸಂತ ಜ್ಞಾನೇಶ್ವರರ 16ನೆಯ ಮಯಸ್ಸಿನವರೆಗಿನ ಜೀವನದ ಸಾರ ಇದರಲ್ಲಿದೆ. ಅವರು ಮಾಡಿದ ಸಮಾಜ ಸುಧಾರಣೆ ಮತ್ತು ಬದುಕಿನ ಬವಣೆಯೊಂದಿಗೆ 4 ವರ್ಷಗಳ ಅವಧಿಯಲ್ಲಿ ‘ಜ್ಞಾನೇಶ್ವರಿ’ ಕೃತಿ ರಚನೆ ಮಾಡಿ ತಮ್ಮ 16ನೆಯ ಮಯಸ್ಸಿನಲ್ಲಿ ಮುಗಿಸಿದ ವಿಚಾರವೂ ಈ ನಾಟಕದಲ್ಲಿದೆ. ಈಗ ಮತ್ತೆ ಪುರಭವನದಲ್ಲಿ ಪ್ರದರ್ಶನಗೊಂಡದ್ದು ಸಂತ ಜ್ಞಾನೇಶ್ವರ ಸರಣಿ ನಾಟಕ ಪ್ರದರ್ಶನ ಕುಸುಮ -2. ಇದರಲ್ಲಿ ಜ್ಞಾನೇಶ್ವರರು ಸಮಾಧಿಯಾಗುವವರೆಗಿನ ಕತೆ ಇದೆ. ಸಮಾಧಿಯಾಗುವಾಗ ಜ್ಞಾನೇಶ್ವರರು ತಾವು ರಚಿಸಿದ ಕೃತಿ…
ಮಂಗಳೂರು: ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ 2022ರ ‘ನಾರಾಯಣಗುರು ಸಂಶೋಧನಾ ಪ್ರಶಸ್ತಿ’ಗೆ ಯುವ ಲೇಖಕಿ ಗಡಿ ನಾಡು ಕಾಸರಗೋಡಿನ ಕಾಟುಕುಕ್ಕೆ ಪೆರ್ಲದ ರಾಜಶ್ರೀ ಟಿ. ರೈ ಪೆರ್ಲ ಆಯ್ಕೆಯಾಗಿದ್ದಾರೆ. ಸಂಶೋಧನಾ ಪ್ರಶಸ್ತಿಯು ರೂ.10 ಸಾವಿರ ನಗದು ಒಳಗೊಂಡಿದೆ. ಪುರಸ್ಕೃತ ಕೃತಿಯು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರದಾನ ಸಮಾರಂಭದಂದು ಬಿಡುಗಡೆಯಾಗಲಿದೆ. ವಿಜ್ಞಾನ ಪದವೀಧರೆಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ಸಂಶೋಧನೆ, ಅಂಕಣ ಬರಹ, ಕಥೆ, ನಾಟಕ, ಕವಿತೆ ಸೇರಿದಂತೆ ಸಾಹಿತ್ಯಕ್ಕೆ ನಾನಾ ಪ್ರಕಾರಗಳ ಕೊಡುಗೆ ನೀಡಿದ್ದಾರೆ. ತುಳುವಿನಲ್ಲಿ ಪನಿಯಾರ, ಬಜಿಲಜ್ಜೆ, ಕೊಂಬು, ಚೌಕಿ ಎಂಬ ನಾಲ್ಕು ಕಾದಂಬರಿಗಳು, ಚವಲೊ ಎನ್ನುವ ಕಥಾ ಸಂಕಲನ, ‘ರಡ್ಡ್ ಕವುಲೆ’ ತುಳು ಅಂಕಣ ಬರಹ ಸಂಕಲನ ಮತ್ತು ಮಮಿನದೊ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ನಾಟಿ ಔಷಧಿಯ ಪರಂಪರೆಯ ಬಗ್ಗೆ ‘ಕಲ್ಪತರು’ ಎನ್ನುವ ಕೃತಿ, ತುಳು ನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ರಚಿಸಿದ್ದಾರೆ. ಒಟ್ಟು 11 ಕೃತಿಗಳನ್ನು…
ಚೆನ್ನೈ : ಶ್ರೀ ಶಂಕರ ಭಟ್ ಮತ್ತು ಶ್ರೀಮತಿ ಸುನೀತಾ ಭಟ್ ಇವರ ಸುಪುತ್ರಿ ಕುಮಾರಿ ಭವ್ಯ ಭಟ್. ಪ್ರಸ್ತುತ ಮಡಿಕೇರಿಯಲ್ಲಿ ವಾಸವಾಗಿರುವ ಇವರು ಮೈಸೂರು ವಿಶ್ವ ವಿದ್ಯಾನಿಲಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕರ್ನಾಟಕ ಸಂಗೀತದ ಕುರಿತು ‘ಚೆನ್ನೈ ಕಲಾನಿಧಿ ಫೌಂಡೇಶನ್’ ಆಯೋಜಿಸಿದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಬಹುಮಾನ ‘Carnatic Music – In Popular Culture’ ಎಂಬ ಪ್ರಬಂಧಕ್ಕೆ ಲಭಿಸಿದೆ. ಕರ್ನಾಟಕ ಮತ್ತು ತಮಿಳುನಾಡಿನಿಂದ ಭಾಗವಹಿಸಿದ 150ಕ್ಕೂ ಮಿಕ್ಕ ಸ್ಪರ್ಧಿಗಳ ಲೇಖನಗಳ ಪೈಕಿ ಭವ್ಯ ಭಟ್ ಅವರ ಪ್ರಬಂಧವು ವಿದ್ವತ್ ಪೂರ್ಣವಾಗಿದ್ದು, ಕರ್ನಾಟಕ ಸಂಗೀತದ ಕುರಿತು ವಿಶೇಷ ಒಳನೋಟಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಭಾಷಾ ಪ್ರೌಢಿಮೆಯನ್ನು ಮೆರೆದಿರುವ ಲೇಖಕಿಗೆ ಉತ್ತಮ ಭವಿಷ್ಯವಿದೆ ಎಂದು ತೀರ್ಪುಗಾರರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಹುಮಾನವು 5000 ರೂಪಾಯಿಗಳ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಜುಲೈ ಕೊನೆಯ ವಾರದಲ್ಲಿ ಚೆನ್ನೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು…
ಡಾ. ಅಕ್ಷತಾ ರಾವ್ ಹುಟ್ಟಿ ಬೆಳೆದದ್ದು ಮಂಗಳೂರು. ಎಳವೆಯಲ್ಲಿಯೇ ಎಲ್ಲಾ ರಂಗದಲ್ಲೂ ಆಸಕ್ತಿ ಬೆಳೆಸಿಕೊಂಡು ಬಂದಿರುವ ಅಕ್ಷತಾ ಹುಟ್ಟು ಕಲಾವಿದೆ ಎಂದರೂ ತಪ್ಪಾಗಲಾರದು. ಇವರು ಕಾವಿನಕಲ್ಲು ಹೊಸಬೆಟ್ಟು ಶ್ರೀನಿವಾಸ್ ಪ್ರಸಾದ್ ಹಾಗೂ ಶ್ರೀಮತಿ ವೀಣಾ ದಂಪತಿಯ ಸುಪುತ್ರಿ. ಕುಟುಂಬದ ಏಕೈಕ ಕಣ್ಮಣಿಯಾದ ಅಕ್ಷತಾರ ಕಲಾಸಕ್ತಿಗೆ ಎಲ್ಲಾ ರೀತಿಯಿಂದ ನೀರೆರೆದು ಪೋಷಿಸಿದವರು ಹೆತ್ತವರು. ತನ್ನ ಬಾಲ್ಯದ ಶಿಕ್ಷಣವನ್ನು ತಿಪಟೂರು ಜಿಲ್ಲೆ ತುರುವೆಕೆರೆ ತಾಲೂಕಿನಲ್ಲಿ ಮತ್ತು ಬಾಗಲಕೋಟೆಯ ಇಲೆಕಲ್ ಗ್ರಾಮದಲ್ಲಿ ಮುಗಿಸಿದ್ದಾರೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮಂಗಳೂರಿನ ಕೆನರಾ ಉರ್ವ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದ ಅಕ್ಷತಾಳ ಪ್ರತಿಭೆಗೆ ಕೆನರಾ ಶಾಲೆ ಉತ್ತಮ ವೇದಿಕೆ ಆಗಿತ್ತು. ನಂತರ ಪದವಿ ಪೂರ್ವ ಅಧ್ಯಯನವನ್ನು ಕೆನರಾ ಕಾಲೇಜಿನಲ್ಲಿ ಮುಗಿಸಿ ತನ್ನ ಎಂ.ಬಿ.ಬಿ.ಎಸ್. ಪದವಿಯನ್ನು ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ (ಕಿಮ್ಸ್ ಬೆಂಗಳೂರು) 3 ಚಿನ್ನದ ಪದಕದೊಂದಿಗೆ ಮುಗಿಸಿ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರ ಬಂದವರು. ವಿದುಷಿ ಸತ್ಯವತಿ ಮೂಡಂಬಡಿತ್ತಾಯ ಹಾಗೂ ವಿದ್ವಾನ್ ಕೃಷ್ಣ ಪವನ್ ಕುಮಾರ…
ಮಂಗಳೂರು : ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಾಯೋಜಕತ್ವದಲ್ಲಿ, ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ, ದೇಶದ ಉದ್ದಗಲಕ್ಕೂ 1500ಕ್ಕೂ ಮಿಕ್ಕಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಕಾರ್ಕಳದ ಖ್ಯಾತ ಸುಮಧುರ ಕಂಠದ ಗಾಯಕಿ ಸುರಮಣಿ ಕುಮಾರಿ ಮಹಾಲಕ್ಷ್ಮೀ ಶೆಣೈರವರಿಂದ ಹರಿದಾಸರ ಕೃತಿ ಕೀರ್ತನೆಗಳ ಗಾಯನ ‘ಹರಿದಾಸ ಗಾನ’ ಕಾರ್ಯಕ್ರಮ ನೀಡಲಿದ್ದಾರೆ. ಈ ಕಾರ್ಯಕ್ರಮವು ದಿನಾಂಕ : 15-07-2023ರಂದು ಶನಿವಾರ ಸಂಜೆ ಗಂಟೆ 5.15ರಿಂದ 7.30ರವರಿಗೆ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆಯಲಿದೆ. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಎಸ್. ಗುರುರಾಜ್ ತಮ್ಮೆಲ್ಲರಿಗೂ ಪ್ರೀತಿ ಪೂರ್ವಕವಾದ ಆಹ್ವಾನ ನೀಡಿದ್ದಾರೆ.
ಮಂಗಳೂರು : ಮಂಗಳೂರಿನ ಹಿಂದಿ ಪ್ರಚಾರ ಸಮಿತಿಯ ಆವರಣದಲ್ಲಿರುವ ‘ನಾದನೃತ್ಯ ಕಲಾ ಶಾಲೆ’ಯಲ್ಲಿ ದಿನಾಂಕ : 30-06-2023ರಂದು ತಿಂಗಳ ಸರಣಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಸುಲೋಚನಾ ವಿ. ಭಟ್ ಇವರು ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ಅನುಭವದ ಮಾತುಗಳನ್ನು ಆಡಿದರು. ನೃತ್ಯ ಶಾಲೆಯ ಗುರುಗಳಾದ ಭ್ರಮರಿ ಶಿವಪ್ರಕಾಶರ ಶಿಷ್ಯೆಯಾದ ಸುಪುತ್ರಿ ಶುಕೀ ರಾವ್ ಇವರು ನೃತ್ಯ ಕಾರ್ಯಕ್ರಮವನ್ನು ನೀಡಿದರು. ಮೊದಲಿಗೆ ತಾಳ ಮಾಲಿಕೆಯ ಅಲರಿಪು, ಗಣಪತಿಯ ಸ್ತುತಿಯಿರುವ ಶಬ್ದಂ, ಗಂಗಾವತರಣದ ಕತೆಯಿರುವ ಮಹಾದೇವ ಶಿವ ಶಂಭೋ ಎಂಬ ಕೀರ್ತನೆ ಹಾಗೂ ಭಾವಯಾಮಿ ರಘುರಾಮಂ ಎಂಬ ಕೀರ್ತನೆಗೆ ನರ್ತಿಸಿದರು. ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ಎಂ.ಎಚ್. ಇವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾತೃಭಾಷೆಯ ಬಗ್ಗೆ ಹೊಂದಬೇಕಾದ ಪ್ರೀತಿಯ ಬಗ್ಗೆ ಅರಿವು ಮೂಡಿಸಿ, ನೃತ್ಯ ಪ್ರದರ್ಶಿಸಿದ ಶುಕೀ ರಾವ್ ಇವರನ್ನು ಅಭಿನಂದಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.…
ಮಂಗಳೂರು : ವಿಜಯ ಕರ್ನಾಟಕ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಆಷಾಢ ಏಕಾದಶಿಯ ‘ಬೋಲಾದ ವಿಠಲ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ : 01-07-2023ರಂದು ನಗರದ ಪುರಭವನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಪಂಡಿತ್ ಆನಂದ್ ಭಾಟೆ ಮತ್ತು ವಿದುಷಿ ಭಾಗ್ಯಶ್ರೀ ದೇಶಪಾಂಡೆ ಅವರ ಅಭಂಗ, ಭಜನಾ ಸಂಕೀರ್ತನೆಗಳು, ದಾಸರ ರಚನೆಗಳು, ಕಲಾವಿದರ ಏರಿಳಿತದ ಆಲಾಪನೆಯೊಂದಿಗೆ ಪ್ರೇಕ್ಷಕರನ್ನು ಭಕ್ತಿಗಾನದಲ್ಲಿ ತೇಲಾಡುವಂತೆ ಮಾಡಿ ಮಂತ್ರಮುಗ್ಧಗೊಳಿಸಿತು. ಭಾಗ್ಯಶ್ರೀ ದೇಶಪಾಂಡೆ ತಮ್ಮ ಅಮೋಘ ಕಂಠಸಿರಿಯಿಂದ ಜನರ ಗಮನ ಸೆಳೆದರು. ತಮ್ಮ ಸ್ವಂತ ರಚನೆಯಾಗಿರುವ ಜ್ಞಾನಾಚೆ ಸಾಗರ್, ಸಖಾ ಮಾಜ್ಹಾ ಜ್ಞಾನೇಶ್ವರ್ … ಗೀತೆಯನ್ನು ಏರಿಳಿತದ ಆಲಾಪನೆಯೊಂದಿಗೆ ಹಾಡಿದಾಗ ಭಜನೆಗೆ ಪ್ರೇಕ್ಷಕರೂ ತಲೆತೂಗಿ ಪ್ರೋತ್ಸಾಹಕರ ಕರತಾಡನದೊಂದಿಗೆ ಮೆಚ್ಚಗೆ ಸೂಚಿಸಿದರು. ಕೊನೆಗೆ ಸಂತ ತುಕಾರಾಮರ ಬೋಲಾವ ವಿಠಲ, ಪಹಾವ ವಿಠಲವನ್ನು ಭಕ್ತಿ ಭಾವ ತುಂಬಿ ಹಾಡಿದರು. ಪಂಡಿತ್ ಆನಂದ್ ಭಾಟೆಯವರ ಸಂತ ತುಕಾರಾಮರ…
ಕಾಸರಗೋಡು: ಕಾಸರಗೋಡಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಮೇಘ ರಂಜನಾ ಚಂದ್ರಗಿರಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸುವ ‘ಭಜಿಸು ಕನ್ನಡ’ ಕಾರ್ಯಕ್ರಮವು ದಿನಾಂಕ 16-7-2023ರ ಭಾನುವಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮಯೂರ ಮಂಟಪದಲ್ಲಿ ನಡೆಯಲಿದೆ. ಕೂಡ್ಲುವಿನ ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ರಂಗಭೂಮಿ, ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಶ್ರೀ ಕಾಸರಗೋಡು ಚಿನ್ನಾ ಉದ್ಘಾಟಿಸಲಿದ್ದಾರೆ. ಕುಮಾರಿ ಸಾಕ್ಷಿ ಕೂಡ್ಲು ಪ್ರಾರ್ಥನೆ ಗೈಯಲಿದ್ದು, ‘ಮೇಘ ರಂಜನಾ’ದ ಆಡಳಿತ ನಿರ್ದೇಶಕರಾದ ಶ್ರೀ ಪುರುಷೋತ್ತಮ ಕೊಪ್ಪಲ್ ಸ್ವಾಗತಿಸಲಿರುವರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ವೇಣುಗೋಪಾಲ್ ಹಾಗೂ ಕವಯತ್ರಿಯಾದ ಶ್ರೀಮತಿ ದಿವ್ಯಾಗಟ್ಟಿ ಪರಕ್ಕಿಲ ಶುಭಾಶಂಸನೆ ಗೈಯಲಿರುವರು.ಇದೇ ಸಂದರ್ಭದಲ್ಲಿ ಕೀರ್ತನಕಾರರಾದ ಶ್ರೀ ನರಸಿ೦ಹ ಹೊಸ ಮನೆ ಮತ್ತು ರಂಗನಟ ಹಾಗೂ ನಿರ್ದೇಶಕರಾದ ಶ್ರೀ ಉದಯಕುಮಾರ್ ಮನ್ನಿಪ್ಪಾಡಿಯವರನ್ನು ಸನ್ಮಾನಿಸಲಾಗುವುದು. ‘ಮೇಘ ರಂಜನಾ’ದ ನಿರ್ದೇಶಕಿ ಕುಮಾರಿ ಮೇಘನಾ ಕೊಪ್ಪಲ್…
ಚೆನ್ನೈ: ನಟನ ತನ್ನ ಚಟುವಟಿಕೆಯ ಭಾಗವಾಗಿ ಇದೇ 13-07-2023ರಂದು ಸಂಜೆ ಚೆನ್ನೈಯ ಮೈಲಾಪೊರೆಯ ‘ಭವನ್ಸ್ ಮೈನ್ ಆಡಿಟೋರಿಯಂ’ನಲ್ಲಿ ನಡೆಯಲಿರುವ ಚೆನ್ನೈಯ ರಾಷ್ಟ್ರೀಯ ಬಹುಭಾಷಾನಾಟಕೋತ್ಸವದಲ್ಲಿ ನಟನ ಪಯಣ ರೆಪರ್ಟರಿ ತಂಡದ ‘ಕಣಿವೆಯ ಹಾಡು’ ನಾಟಕವು ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ ಅವರದ್ದು. ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ಒದಗಿಸಿದ್ದಾರೆ. ನಟನದ ಶ್ರೀ ಮೇಘ ಸಮೀರ ಮತ್ತು ದಿಶಾ ರಮೇಶ್ ಅವರು ಅಭಿನಯಿಸುತ್ತಿದ್ದು, ನಾಡಿನ ಹೆಸರಾಂತ ರಂಗತಜ್ಞ ಡಾ. ಶ್ರೀಪಾದ ಭಟ್ ಅವರು ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. ಚೆನ್ನೈಯ ಭಾರತೀಯ ವಿದ್ಯಾ ಭವನ ಆಯೋಜನೆಯಲ್ಲಿ ನಡೆಯುತ್ತಿರುವ ಈ ನಾಟಕೋತ್ಸವದಲ್ಲಿ ಕನ್ನಡ ನಾಡಿನಿಂದ ಆಯ್ಕೆಯಾದ ಏಕೈಕ ನಾಟಕ ಇದಾಗಿದೆ. ನಾಟಕದ ಕುರಿತು: ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲಾ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ…
ಮಂಗಳೂರು : ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ನೃತ್ಯಾಮೃತಮ್ -2023’ ಕಾರ್ಯಕ್ರಮ ನಗರದ ಪುರಭವನದಲ್ಲಿ ದಿನಾಂಕ :08-07-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ನೃತ್ಯ ಕಲೆಯ ಕಲಿಯುವಿಕೆಯಿಂದ ಮನುಷ್ಯನಲ್ಲಿ ತಾಳ್ಮೆ ಸಹನೆ ಏಕಾಗ್ರತೆ ಬೆಳೆಯಲು ಸಾಧ್ಯ. ಭರತನಾಟ್ಯ ಕಲೆಯು ಆಧ್ಯಾತ್ಮಿಕ ವಿಷಯಗಳ ಅರಿವನ್ನು ನೀಡುತ್ತದೆ. ಭರತನಾಟ್ಯ ಕಲೆಯಲ್ಲಿ ಪ್ರಸಿದ್ದಿ ಪಡೆಯಬೇಕಾದರೆ ಕಠಿಣ ಪರಿಶ್ರಮದೊಂದಿಗೆ ಧ್ಯೇಯ ಅತೀ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 28 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಲಾ ಸೇವೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭರತಾಂಜಲಿಯ ಕಲಾ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ದಂಪತಿಗಳು ಅಭಿನಂದನಾರ್ಹರು” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಪೊಳಲಿ,…