Author: roovari

ಐರ್ಲೆಂಡ್‌: ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಐರೀಶ್ ತುಳುನಾಡ ಸಂಘವನ್ನು ದಿನಾಂಕ : 25-06-2023ರಂದು ಸ್ಥಾಪಿಸಲಾಯಿತು. ಡಬ್ಲಿನ್‌ನ ಸುತ್ತಮುತ್ತಲಿರುವ ತುಳುವರು ಜತೆಯಾಗಿ ಈ ನೂತನ ಸಂಘವನ್ನು ಸ್ಥಾಪಿಸಿದ್ದಾರೆ. ನೂತನ ಸಂಘವನ್ನು ಗುಣಶೀಲ ಶೆಟ್ಟಿ, ಸ್ಟೆಲ್ಲಾ ಕಾರ್ಡೋ, ಮೋಹನ್ ಮತ್ತು ಹೇಮಲತಾ ಉದ್ಘಾಟಿಸಿ ಚಾಲನೆ ನೀಡಿದರು. ಐರ್ಲೆಂಡ್‌ನಲ್ಲಿ ನೆಲೆಯಾಗಿರುವ ಕರಾವಳಿಯ ನಿವಾಸಿಗರಿಗೆ ಒಂದು ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿಕೊಡುವುದು, ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿನಿಮಯ ಮಾಡಿಕೊಡುವುದು ಮತ್ತು ಅಲ್ಲಿರುವ ಎಲ್ಲಾ ಭಾರತೀಯರನ್ನು ಒಗ್ಗೂಡಿಸಿ ಏಕತೆಯಿಂದ ಕಾರ್ಯನಿರ್ವಹಿಸುವುದು ಸಂಘದ ಪ್ರಮುಖ ಉದ್ದೇಶಗಳಾಗಿವೆ. ನೂತನ ಸಂಘಕ್ಕೆ ವಿಡಿಯೋ ಸಂದೇಶದ ಮೂಲಕ ಕೋಸ್ಟಲ್‌ವುಡ್‌ನ ನಟ, ನಿರ್ದೇಶಕ ವಿಜಯ್‌ ಕುಮಾರ್ ಕೊಡಿಯಾಲ್ ಬೈಲ್, ಕನ್ನಡದ ಸಂಗೀತ ನಿರ್ದೇಶಕ ಗುರುಕಿರಣ್, ದಾಯ್ಜಿ ವರ್ಲ್ಡ್ ಮೀಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕಲಾವಿದ ವಾಲ್ಟರ್ ನಂದಳಿಕೆ, ನಟ ಪ್ರಕಾಶ್ ತುಮಿನಾಡು, ಶಿವಧ್ವಜ್, ರೂಪಶ್ರೀ ವರ್ಕಾಡಿ, ವಿಜಯ ಶೋಭರಾಜ್ ಪಾವೂರು, ಹಿನ್ನೆಲೆ ಗಾಯಕ ರಮೇಶ್ಚಂದ್ರ ಶುಭ ಕೋರಿದರು. ಕರಾವಳಿಯ ಆಹಾರ ಪದ್ಧತಿ, ತುಳುನಾಡಿನ ಸಿನಿಮಾ, ನಾಟಕ, ಯಕ್ಷಗಾನ…

Read More

ಪುತ್ತೂರು : ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಸಿದ್ಧಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ ‘ಶಂಕರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ. ಅವರ ‘ತಿರಿ’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ : 05-07-2023 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡುತ್ತಾ “ಭಾಷೆಯು ಸಾಹಿತ್ಯದ ಲಿಖಿತ ಮಾಧ್ಯಮವಾಗಿದೆ. ಎಲ್ಲಾ ಭಾಷೆಯು ಒಂದೇ ರೀತಿಯ ಆಯಾಮವನ್ನು ಹೊಂದಿಲ್ಲ. ಇದನ್ನು ಜಗತ್ತಿಗೆ ಪರಿಚಯಿಸುವುದು ಮಹತ್ತರ ತೆರೆಯ ಕೆಲಸವಾಗಿದೆ. ಶ್ರಮಪಟ್ಟು ಮಾಡಿದ ಕೆಲಸಕ್ಕೆ ಜೀವನದುದ್ದಕ್ಕೂ ಯಶಸ್ಸನ್ನು ಪಡೆಯಲು ಅನೇಕ ದಾರಿಗಳು ಸಿಗುತ್ತವೆ ಮತ್ತು ಇವು ನೆನಪುಗಳೊಂದಿಗೆ ಸಮೀಕರಿಸುತ್ತವೆ. ‘ತಿರಿ’ ಎಂಬ ಪುಸ್ತಕದಲ್ಲಿ ಮೋಡಗಳೇ ನಮಗೆ ನೀರಿನ ಆಧಾರವಾಗಿದೆ. ಅದನ್ನು ನೀರು ಮತ್ತು…

Read More

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿರುವ ಮೆಲ್ಬೋರ್ನ್ ನಗರದಲ್ಲಿ ಸ್ಥಾಪಿಸಲಾದ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ದಿನಾಂಕ 08-07-20223 ರಂದು ಲೋಕಾರ್ಪಣೆ ಮಾಡಿದರು. “ಕನ್ನಡದ ಕಾರ್ಯಚಟುವಟಿಕೆಗಳನ್ನು ವಿದೇಶದಲ್ಲಿಯೂ ವಿಸ್ತರಿಸುತ್ತಿರುವ ಅನಿವಾಸಿ ಕನ್ನಡಿಗರ ಭಾಷಾ ಪ್ರೇಮ ಹಾಗೂ ನಾಡು ನುಡಿಯ ಮೇಲಿರುವ ಅಭಿಮಾನ ಈ ಕನ್ನಡ ಭವನವನ್ನು ನೋಡಿದಾಗ ಅರ್ಥವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ವಿದೇಶದಲ್ಲಿ ಇರುವ ಕನ್ನಡ ಸಂಘಗಳನ್ನು ಪರಿಷತ್ತಿನ ಅಂಗ ಸಂಸ್ಥೆಯನ್ನಾಗಿಸಿಕೊಂಡು ವಿದೇಶದಲ್ಲಿಯೂ ಕನ್ನಡ ಕಟ್ಟುವ ಕಾಯಕಲ್ಪದಲ್ಲಿ ತೊಡಗಿಕೊಳ್ಳಲಿದೆ. ರಾಜ್ಯದಲ್ಲಿ ಅನಿವಾಸಿ ಕನ್ನಡಿಗರ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲಿದೆ. ಅನಿವಾಸಿ ಕನ್ನಡಿಗರು ಸೇರಿ ಕಟ್ಟಿಕೊಂಡಿರುವ ಕನ್ನಡದ ಸಂಘಟನೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೂಲಕ ನಾಡು ನುಡಿಯನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಅದರಂತೆ ಇಲ್ಲಿನ ಕನ್ನಡಿಗರು ಪ್ರಪಂಚದಾದ್ಯಂತ ನಮ್ಮ ಭಾಷೆ, ಸಂಸ್ಕೃತಿಯ ಸೊಗಡನ್ನು ಕಾಪಾಡಿಕೊಳ್ಳುವಲ್ಲಿ ಗಣನೀಯ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಕನ್ನಡಿಗರು ತಮ್ಮ ಉಪಜೀವನ ಕಟ್ಟಿಕೊಳ್ಳುವುದರ…

Read More

ಮಂಗಳೂರು: ಕಲಾಕುಲ್ ರೆಪರ್ಟರಿಯ ಹೊಸ ನಾಟಕ ತಂಡಕ್ಕೆ ಚಾಲನೆ ಮತ್ತು ಅಸ್ತಿತ್ವ ತಂಡದಿಂದ ಎಮ್ಮಾವ್ಸ್ ನಾಟಕ ಪ್ರದರ್ಶನವು ದಿನಾಂಕ 02-07-2023 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಕಲಾಕುಲ್ ರೆಪರ್ಟರಿಯ ಹೊಸ ನಾಟಕ ತಂಡಕ್ಕೆ ಚಾಲನೆ ನೀಡಿ ಮಾತನಾಡಿದ ನಾರಾವಿ ಸಂತ ಆಂಟನಿ ಕಾಲೇಜಿನ ಪ್ರಾಂಶುಪಾಲ ವಂ ಡಾ. ಆಲ್ವಿನ್ ಸೆರಾವೊ “ಕಲಾ ವಿಭಾಗಕ್ಕೆ ಮಕ್ಕಳ ಆಸಕ್ತಿ ಕುಂಠಿತವಾಗುತ್ತಿದೆ. ಬಹಳ ಕಾಲೇಜುಗಳಲ್ಲಿ ಕಲಾ ವಿಭಾಗ ಮುಚ್ಚಲ್ಪಟ್ಟಿವೆ. ಎಲ್ಲರೂ ಇಂಜಿನಿಯರಿಂಗ್, ಮೆಡಿಸಿನ್, ವಾಣಿಜ್ಯ, ಆಡಳಿತ ವಿಭಾಗಗಳಿಗೆ ಸೇರುತ್ತಿದ್ದಾರೆ. ಸಮಾಜಶಾಸ್ತ್ರ, ಮನೋಶಾಸ್ತ್ರ, ತತ್ವಶಾಸ್ತ್ರ ಇವೆಲ್ಲಾ ಜೀವಿಸಲು ಅಗತ್ಯವಿರುವ ವಿಷಯಗಳು. ಇವೆಲ್ಲಾ ಕಲಿಯದಿದ್ದರೆ ನಮ್ಮ ಸಮಾಜ ಎಲ್ಲಿ ತಲುಪಬಹುದು? ಇಂತಹ ಸಂದರ್ಭದಲ್ಲಿ ಮಾಂಡ್ ಸೊಭಾಣ್ ಕಲಾಕುಲ್ ರೆಪರ್ಟರಿಯನ್ನು ಪುನರಾರಂಭಿಸಿದ್ದು ಸಂತಸದ ಸಂಗತಿ. ಈ ಎಂಟು ಜನ ವಿದ್ಯಾರ್ಥಿಗಳು ಧೈರ್ಯದಿಂದ ನಾಟಕ ಕಲಿಯಲು ಮುಂದೆ ಬಂದಿದ್ದಾರೆ. ನಿಮಗೆ ಮೂರು ಕಿವಿ ಮಾತು ಹೇಳುತ್ತೇನೆ. ಪ್ರಥಮವಾಗಿ ಜನರನ್ನು ಅವಲೋಕಿಸಿ. ಮುಖ ಚಹರೆಗಳಲ್ಲಿ, ಅವರ ಭಾವನೆಗಳಲ್ಲಿ ಕತೆಗಳಿವೆ, ನಾಟಕಗಳಿವೆ. ಎರಡನೆಯದು ಓದು.…

Read More

ಬದಿಯಡ್ಕ: ಅಡೂರು ಗ್ರಾಮದ ಕೊರತಿಮೂಲೆಯ ಬಾಲಕೃಷ್ಣ ತಂತ್ರಿ ಅವರ ಸ್ಮರಣಾರ್ಥ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆ- 2023ರ ಫಲಿತಾಂಶ ಪ್ರಕಟಗೊಂಡಿದೆ. ಪ್ರಥಮ ಬಹುಮಾನವನ್ನು ಮಂಗಳೂರಿನ ಬಿ.ಸತ್ಯವತಿ ಭಟ್ ಕೊಳಚಪ್ಪು ಅವರು ಬರೆದ ‘ಗೀತಾಮೃತ ಸಾರ’ ಕವನ ಪಡೆದುಕೊಂಡಿದೆ. ದ್ವಿತೀಯ ಬಹುಮಾನವನ್ನು ಸ್ನೇಹಲತಾ ದಿವಾಕರ್ ಕುಂಬ್ಳೆ ಅವರ ‘ಈ ಕ್ಷಣವೂ ಸರಿದುಹೋಯಿತು’ ಕವನ ಹಾಗೂ ತೃತೀಯ ಬಹುಮಾನವನ್ನು ಮಂಗಳೂರಿನ ರಾಜೇಂದ್ರ ಕೇದಿಗೆ ಅವರು ಬರೆದ ‘ಅಮ್ಮ… ಇನ್ನೂ ಧ್ಯಾನಸ್ಥೆ’ ಕವನವು ಪಡೆದುಕೊಂಡಿದೆ.

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ದಿನಾಂಕ : 08-07-2023ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಾಗಮಣಿ ಎಸ್. ರಾವ್ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾ ಹಂಪನಾ ಅವರು ಪತ್ರಕರ್ತೆ ಆರ್. ಪೂರ್ಣಿಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ “ಹಿಂದೆ ದೇವಾಲಯಗಳಲ್ಲಿ ಪಂಚಾಯಿತಿ ತೀರ್ಮಾನ ಹಾಗೂ ನ್ಯಾಯದಾನ ನಡೆಯುತ್ತಿತ್ತು. ಅಲ್ಲಿ ಸರಿ ತಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಅವುಗಳ ಮಹತ್ವ ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮ ನಡೆ ಇತರರಿಗೆ ಮಾದರಿಯಾಗುವಂತಿರಬೇಕು. ಪತ್ರಿಕೆಗಳು ಜನತೆಯನ್ನು ತಿದ್ದುವ ಕಡೆಗೆ, ಸತ್ಯ ಸಂಗತಿ ಪ್ರಚಾರ ಮಾಡುವ ಕಡೆಗೆ ಹೋಗಬೇಕು” ಎಂದು ನುಡಿದರು. ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ, “ನಾಗಮಣಿ ಅವರು ವಿಧಾನಮಂಡಲ ಅಧಿವೇಶನದ ವರದಿ ಮಾಡಿದ ಮೊದಲ ಪತ್ರಕರ್ತೆ, ರಾಜ್ಯದ ಯಾವುದೇ ಭಾಗದಲ್ಲಿ ಪ್ರಧಾನಿ ಭಾಷಣವಿದ್ದರೂ ಅವರು ವರದಿಗೆ ಹೋಗುತ್ತಿದ್ದರು. ಅವರ ಅನುಭವ ರೋಮಾಂಚಕಾರಿಯಾಗಿದೆ” ಎಂದು ಹೇಳಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌.…

Read More

ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ : 09-07-2023ರಂದು ನಡೆದ ‘ಸನಾತನ ಗುರು ಪರಂಪರೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿ ಕುಮೇರು ಗೋವಿಂದ ಭಟ್ ಗುರುನಮನ ಸ್ವೀಕರಿಸಿ ಮಾತನಾಡುತ್ತಾ “ವ್ಯಕ್ತಿಯ ಜೀವನಕ್ಕೊಂದು ಸರಿಯಾದ ಸಂಸ್ಕಾರವು ನೃತ್ಯಕಲೆಯಿಂದ ದೊರಕುತ್ತದೆ. ಹಾಗೆ ನೋಡಿದರೆ ಪ್ರತಿಯೊಂದು ಕಲೆಯೂ ಆತನ ಸಂಸ್ಕಾರದಿಂದಲೇ ಪ್ರಾಪ್ತವಾಗಲು ಸಾಧ್ಯ. ಲಲಿತ ವಿದ್ಯೆಗಳನ್ನು ಸ್ವೀಕರಿಸಲು ಪೂರ್ವ ಸಂಸ್ಕಾರ ಬೇಕು. ಸತ್ಯದ ಸಾಕ್ಷಾತ್ಕಾರವೇ ವಿದ್ಯೆಯ ಪರಮ ಲಕ್ಷ್ಯ. ಕೇಳುಗನಿಗೆ, ನೋಡುಗನಿಗೆ ಏನನ್ನು ಕೊಡಬೇಕು ಎಂಬುದನ್ನು ಕಲಾವಿದನು ತಿಳಿದಿರಬೇಕು. ಅದು ಗುರು ಮುಖೇನ ಲಭ್ಯವಾಗಬೇಕು” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, “ಜೀವಿತದಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಹಿರಿಯರ ಉತ್ತಮ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವಂತಹುದು. ಪ್ರತ್ಯಕ್ಷ ಪೂಜೆಗಿಂತಲೂ ಗುರುವಿನ ತತ್ವ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ಅತ್ಯುತ್ತಮ ಗುರುಪೂಜೆ”…

Read More

ಹೊಸಕೋಟೆ : ಜನಪದರು ಸಾಂಸ್ಕೃತಿಕ ವೇದಿಕೆ (ರಿ) ಹೊಸಕೋಟೆ ಆಯೋಜಿಸುವ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿ ‘ರಂಗಮಾಲೆ’ – 72 ರ ಅಂಗವಾಗಿ ಈ ಬಾರಿ ಜನಪದರು ಅಭಿನಯದ – ಸಿದ್ದೇಶ್ವರ ನನಸು ಮನೆ ರಚನೆ ಮತ್ತು ನಿರ್ದೇಶನದ ‘ಮಾತೆ ಮಹತ್ವ’ ನಾಟಕದ ಪ್ರದರ್ಶನವು ದಿನಾಂಕ 08-07-3023 ರಂದು ನೆರೆದ ಭಾರಿ ಪ್ರೇಕ್ಷಕರ ಭಾವಕೋಶವನ್ನು ಕಲುಕಿತು. ವೇದಿಕೆ ಅಧ್ಯಕ್ಷ ಕೆ. ವಿ. ವೆಂಕಟರಮಣಪ್ಪ ಪಾಪಣ್ಣ ಕಾಟ0 ನಲ್ಲೂರು ಉದ್ಘಾಟನೆ ಮಾಡಿದರು. ಖ್ಯಾತ ಸಾಹಿತಿ, ಸಮಾಜ ಚಿಂತಕ ಡಾII ಬಾಲಗುರುಮೂರ್ತಿ ನಾಟಕ ವಿಮರ್ಶೆ ಮಾಡುತ್ತಾ “ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ತ್ಯಾಗ ಮಯಿ ಆಕೆಯನ್ನು ಗೌರವಿಸಿ ಮತ್ತೆ ಶೋಷಣೆಗೆ ಒಳಪಡಿಸುವುದು ಶೋಚನೀಯ . ವಿಘಟಿತ ಸಮಾಜ ವ್ಯವಸ್ಥೆಯಲ್ಲಿ ಮೊಬೈಲ್ ಎಲ್ಲರ ಮಧ್ಯೆ ಜಗಳ ತಂದಿಡುತ್ತಿರುವುದು ವಿಪರ್ಯಾಸ. ಮೂರು ತಲೆಮಾರುಗಳ ಚಿತ್ರಣ ಸೊಗಸಾಗಿದೆ. ಕೇವಲ ರಂಗಭೂಮಿ ಅನುಭವದ ಮೂಲಕ ವೈಚಾರಿಕ ನಾಟಕ ಕಟ್ಟಿಕೊಡುವಲ್ಲಿ ಸಿದ್ದೇಶ್ವರ ನನಸು ಮನೆ ಯಶಸ್ವಿಯಾಗಿದ್ದಾರೆ” ಎಂದರು. ಇದೇ ಸಂದರ್ಭದಲ್ಲಿ…

Read More

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿಯ ವತಿಯಿಂದ ದಿನಾಂಕ : 08-07-2023ರಂದು ನಡೆದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ 70 ವರ್ಷ ತುಂಬಿದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಿ, ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ “ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ “ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ.ರಾ.ಶಾಸ್ತ್ರಿಗಳು. ಅವರು ನೆಲದ ಸ್ಪರ್ಶವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿರಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ದಿಸಿದೆ” ಎಂದರು. ಶಾಸಕ ಹರೀಶ್ ಪೂಂಜ ಮಾತನಾಡಿ, “ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕನ್ನು…

Read More

ಮೂಡುಬಿದಿರೆ : ಮೂಡುಬಿದಿರೆ ಮಾರೂರು ಸಮೀಪದ ನೂಯಿಯಲ್ಲಿರುವ ಬಲಿಪ ಭವನದಲ್ಲಿ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ 18ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ : 25-06-2023ರಂದು ಭಾನುವಾರ ಸಂಜೆ ಬಲಿಪತ್ರಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಯಕ್ಷರಂಗದ ಮಹಾನ್ ಕಲಾವಿದ ಬಲಿಪ ನಾರಾಯಣ ಭಾಗವತರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವತಿಯಿಂದ ಪ್ರಶಸ್ತಿ ಸ್ಥಾಪಿಸುವುದಾಗಿ ಕೇಂದ್ರದ ಸ್ಥಾಪಕಾಧ್ಯಕ್ಷ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ತಮ್ಮ ನಿರ್ಧಾರ ಪ್ರಕಟಿಸಿದರು. ತಕ್ಷಣ ಮೊದಲ ವರ್ಷದ ಪ್ರಶಸ್ತಿಯನ್ನು ತಾನು ಪ್ರಾಯೋಜಿಸುವುದಾಗಿ ಮುಖ್ಯ ಅತಿಥಿ ಡಾ.ವಿಷ್ಣುಪ್ರಸಾದ್ ಬರಕೆರೆ ತಿಳಿಸಿದರು. ಬಲಿಪ ಭಾಗವತರ ಆಪ್ತ ಹಾಗೂ ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರಿಗೆ ಘೋಷಿಸಲಾದ ‘ಚೇವಾರು ಕಾಮತ್‌ ಪ್ರಶಸ್ತಿ’ಯನ್ನು ಮರಣೋತ್ತರವಾಗಿ ಭಾಗವತರ ಪುತ್ರ ಮಾಧವ ಭಟ್ ರಿಗೆ ನೀಡಲಾಯಿತು, ಬಲಿಪರ ಪುತ್ರ ಪ್ರಸಾದ್‌ ಬಲಿಪ ಭಾಗವತರಿಗೆ ನೀಡಲಾಗುವ ‘ಪಡ್ರೆ ಚಂದು ಪ್ರಶಸ್ತಿ’ಯನ್ನು…

Read More