Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 46’ನೇ ಸಂಗೀತ ಕಛೇರಿಯು ಸುರತ್ಕಲ್ ನ ‘ಅನುಪಲ್ಲವಿ’ಯಲ್ಲಿ ದಿನಾಂಕ 05-11-2023 ಭಾನುವಾರ ಪೂರ್ವಾಹ್ನ ಗಂಟೆ 6ಕ್ಕೆ ನಡೆಯಲಿದೆ. ಉಡುಪಿಯ ಗಾರ್ಗಿ ಶಬರಾಯ ಇವರ ಹಾಡುಗಾರಿಕೆಗೆ ಮಂಗಳೂರಿನ ಧನಶ್ರೀ ಶಬರಾಯ ವಯಲಿನ್ ಮತ್ತು ಸುರತ್ಕಲ್ಲಿನ ಸುಮುಖ ಕಾರಂತ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಿರಿಯ ರಂಗ ಕಲಾವಿದೆ ಶ್ರೀಮತಿ ಗೀತಾ ಸುರತ್ಕಲ್ ಇವರು ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕವು ನಿರ್ವಹಿಸುವ ಬಂಟ್ವಾಳ ತಾಲೂಕು 17ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಡೇಶಿವಾಲಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದಿನಾಂಕ 06-12-2023ರಂದು ನಡೆಸಲಾಗುವುದು. ಈ ಸಮ್ಮೇಳನದಲ್ಲಿ ತಾಲೂಕಿನ 18 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸಾನ್ವಿ ಸುವರ್ಣ ಆಯ್ಕೆಯಾಗಿರುತ್ತಾರೆ. ಸಾನ್ವಿ ಸುವರ್ಣ ಇವರು ಸುಂದರ ಪೂಜಾರಿ ಮತ್ತು ವಿಶಾಲಾಕ್ಷಿ ದಂಪತಿಗಳ ಸುಪುತ್ರಿ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಲ ಪ್ರತಿಭೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಇವರು ಭಾರತ ಸರಕಾರದ ಶಿಕ್ಷಣ ಸಚಿವಾಲಯದಿಂದ “ವೀರಗಾಥಾ” ಪ್ರಮಾಣ ಪತ್ರ ಪಡೆದಿರುವರು. ಶಶಸ್ತ್ರ ಪಡೆಗಳ ಶೂರರ ಸ್ಮರಣಾರ್ಥವಾಗಿ ಈ ಪ್ರಮಾಣ ಪತ್ರ ನೀಡಲಾಗಿದೆ. ಭಾರತೀಯ ಜೀವ ವಿಮಾ ನಿಗಮವು ನೀಡುವ ಸಾಧನಾ ಪ್ರಶಸ್ತಿಯನ್ನು ಪಡೆದ ಈಕೆ ಉತ್ತಮ ಮಾತುಗಾರರು. ಸ್ಪರ್ಧಾತ್ಮಕ…

Read More

ಕೊಡಗು : ಏಷ್ಯ ಇಂಟರ್‌ನ್ಯಾಷನಲ್ ಕಲ್ಟರ್ ಅಕಾಡಮಿಯ ವತಿಯಿಂದ ಪಂಚಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಇವರಿಗೆ ದಿನಾಂಕ 28-10-2023 ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪಂಚಭಾಷಾ ಸಾಹಿತಿ, ಬಹು ಭಾಷಾ ಕವಿ, ರಂಗ ಕಲಾವಿದೆ, ಸಮಾಜ ಸೇವಕಿ, ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರಿಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಐ.ಎನ್.ಟಿ.ಯು.ಸಿ ಇದರ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಕೆ.ಎ. ಮನೋಕರನ್, ಮಾಜಿ ಸಹಾಯಕ ನ್ಯಾಯಾಧೀಶರಾದ ಡಾ.ಜೆ. ಹರಿದೋಸ್ಸ್ ಎಂ.ಬಿ.ಎ, ಬಿ.ಎಲ್, ಆರ್.ವಿ ದೇವರಾಜ್ ಸೇವಾ ಪ್ರತಿಷ್ಠಾನ ಇದರ ಸ್ಥಾಪಕರು ಮತ್ತು ಆರ್. ವಿ.ಡಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಇನ್ಫಾರ್ಮೇಷನ್ ಇದರ ಉಪಾಧ್ಯಕ್ಷರಾದ ಶ್ರೀಮತಿ ಡಾ.ಮಮತಾ ದೇವರಾಜ್ ಆರ್. ವಿ, ಶ್ರೀ ಷ. ಬ್ರ. ಚೆನ್ನಬಸವಾರಾಧ್ಯ ಶಿವಾಚಾರ್ಯ ಹಾಗೂ ಶ್ರೀಮತಿ ಮಹದೇವಮ್ಮ ತಾಲ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಲಾಯಿತು. ಡಾ| ಉಳುವಂಗಡ ಕಾವೇರಿ ಉದಯ ಕೊಡಗಿನ ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ ಮಾದಪ್ಪ…

Read More

ನಾಟಕ :  Hang-On ಹ್ಯಾಂಗ್ ಆನ್ ವಿನ್ಯಾಸ, ನಿರ್ದೇಶನ : ಕ್ಲ್ಯಾನ್ವಿನ್ ಫೆರ್ನಾಂಡೀಸ್ ಸಂಗೀತ : ಬಿಂದು, ಜೋಯೆಲ್, ಸುಪ್ರೀತ್, ಕೆವಿನ್ ಮತ್ತು ಮೇಘನ ತಾಂತ್ರಿಕ ಸಹಾಯ : ಅಸ್ತಿತ್ವ (ರಿ.) ಮಂಗಳೂರು ಬೆಳಕು ವಿನ್ಯಾಸ ಹಾಗೂ ನಿರ್ವಹಣೆ : ಕ್ರಿಸ್ಟಿ ಪ್ರಸ್ತುತಿ : ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು Passion & Profession ಪ್ರತಿಯೋಬ್ಬನ ಜೀವನದಲ್ಲಿ ಎದುರಾಗುವ ತುಮಲವಿದು. ತಾನು ಗಾಢವಾಗಿ ಪ್ರೀತಿಸುವ ಹವ್ಯಾಸ ಒಂದೆಡೆ – ಬೇರೆ ಬೇರೆ ಕಾರಣಗಳಿಂದ ಇನ್ನೊಂದು ಕೆಲಸವನ್ನು ವೃತ್ತಿಯಾಗಿ ಸ್ವೀಕರಿಸಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಈ ಸಂಘರ್ಷ ಎಷ್ಟೋ ಸಾರಿ ಮಾನಸಿಕ ಅಸಮತೋಲನಕ್ಕೆ ಕಾರಣವಾಗಿ ಖಿನ್ನತೆ ಉಂಟುಮಾಡುತ್ತೆ. ಖಿನ್ನತೆ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೂ ದಾರಿ ಮಾಡಿಕೊಡುತ್ತೆ. ಯುವಕನೊಬ್ಬನ ಮನಸ್ಸಿನ ತುಮಲವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತೆರೆದಿಟ್ಟ ನಾಟಕ ‘ಹ್ಯಾಂಗ್ ಆನ್’. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರನ್ನೂ ಮೀರಿಸಿ ಅಭಿಯಯಿಸಿದ, ಕನ್ನಡ -…

Read More

ಪುತ್ತೂರು : ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ (96) ದಿನಾಂಕ 31-10-2023ರಂದು ನಿಧನ ಹೊಂದಿದ್ದಾರೆ. ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠವನ್ನು ಕಲಿತಿದ್ದರು. ಪ್ರಸಿದ್ಧ ಪದ್ಯಾಣ ಮನೆತನದವರಾಗಿರುವ ಇವರು ಬಾಲ್ಯದಲ್ಲೇ ತಾಳಮದ್ದಳೆಯಲ್ಲಿ ಆಸಕ್ತಿ ಹೊಂದಿದ್ದರು. ಕುರಿಯ ವಿಠಲ ಶಾಸ್ತ್ರಿಯವರ ವೇಷದ ಅಂದಕ್ಕೆ ಮರುಹೋಗಿ ತಾನೂ ಕಲಾವಿದನಾಗಬೇಕೆಂಬ ಆಶಯ ಹೊಂದಿದ್ದರು. ಅಜ್ಜ ಸುಬ್ರಾಯ ಭಟ್ಟರ ಮೂಲಕ ಕುರಿಯರ ನೇತೃತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಬದುಕು ಆರಂಭಿಸಿದರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು. ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು. ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊಂದಿಗೆ ಒಂದು ದಶಕಕ್ಕಿಂತಲೂ ಅಧಿಕ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ ಸಂಗೀತ ಘಟಕವಾದ ಸ್ವರ ಚಿನ್ನಾರಿ ಏರ್ಪಡಿಸಿದ ಪ್ರಸಿದ್ಧ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಂಡೋಲಿನ್ ವಾದಕ, ಸಂಗೀತ ನಿರ್ದೇಶಕ ಎನ್.ಎಸ್.ಪ್ರಸಾದ್ ನೇತೃತ್ವದ ಸ್ವರ ಸಂಗೀತ ಶಿಬಿರವಾದ ‘ಸ್ವರ ಸಂಚಾರ’ ಕಾರ್ಯಕ್ರಮ ದಿನಾಂಕ 28.10.2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಾನ ಪ್ರವೀಣ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮಾತನಾಡುತ್ತಾ “ಸಂಗೀತವು ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಹಿಂದೆಲ್ಲ ರಾಜಾಶ್ರಯದಲ್ಲಿ ಸಂಗೀತ ಬೆಳೆದು ಬಂದಿತ್ತು. ಇಂದು ರಾಜಾಶ್ರಯವಿಲ್ಲದಿದ್ದರೂ ಸಂಗೀತ ಪ್ರೇಮಿಗಳ ಹಾಗೂ ಕೆಲವು ಸಂಘಟನೆಗಳ ಮೂಲಕ ಸಂಗೀತ ಬೆಳೆದು ಬರುತ್ತಿದೆ. ಅಂತಹ ಕಾರ್ಯದಲ್ಲಿ ರಂಗಚಿನ್ನಾರಿಯ ಅಂಗವಾಗಿರುವ ‘ಸರ ಚಿನ್ನಾರಿ’ ಮಹತ್ವದ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವರ ಚಿನ್ನಾರಿ ಗೌರವಧ್ಯಕ್ಷ ಶ್ರೀ ಕೃಷ್ಣಯ್ಯ ಅನಂತಪುರ ಅವರು ಮಾತನಾಡಿ “ಸಂಗೀತ ಸಾಗರ.…

Read More

ಕಾಸರಗೋಡು : ರಂಗಚಿನ್ನಾರಿಯ ಅಂಗ ಸಂಸ್ಥೆ ನಾರಿಚಿನ್ನಾರಿಯ 10ನೆಯ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ವು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 29-10-2023ರಂದು ಸಾಧಕರಿಗೆ ಸನ್ಮಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಖ್ಯಾತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಇವರು ದೀಪ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತೃ ಋಣವನ್ನು ತೀರಿಸಲು ಅಸಾಧ್ಯ ಎಂದು ಹೇಳಿ ಮಾತೃತ್ವದ ಮಹತ್ವವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದರು. ಮಾಬ೯ಲ್ ವ್ಯಾಪಾರದಲ್ಲಿ ಯಶಸ್ವೀ ಮಹಿಳಾ ಉದ್ಯಮಿಯಾಗಿ ಹೆಸರು ಪಡೆದ ಬಿಂದು ದಾಸ್ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಅವರನ್ನು ಈ ಸಂದರ್ಭದಲ್ಲಿ ಹಾರ, ಫಲಪುಷ್ಪ ಮತ್ತು ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸರ್ವಮಂಗಳಾಜಯ್ ಪುಂಚಿತ್ತಾಯ ಹಾಗೂ ವನಜಾಕ್ಷಿ ಚಂಬ್ರಕಾನ ಇವರು ಸನ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಬಿಂದು ದಾಸ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆಯನ್ನು ಅಪಿ೯ಸಿದರು. ಮೀನಾಕ್ಷಿ ಬೊಡ್ಡೋಡಿಯವರು ಅಮ್ಮನ ಕುರಿತಾದ ಭಾವಪೂರ್ಣ ಕವನವನ್ನು ವಾಚಿಸುವುದರೊಂದಿಗೆ…

Read More

ಮಂಗಳೂರು : ಕುಡ್ಲ ತುಳು ಕೂಟ (ರಿ) ಇದರ ಬಂಗಾರ್ ಪರ್ಬ ಸರಣಿ ವೈಭವ ಕಾರ್ಯಕ್ರಮದ 8ನೇ ಕಾರ್ಯಕ್ರಮ ‘ಮಾರ್ನೆಮಿದ ಮಿನದನ’ ದಿನಾಂಕ 29-10-2023 ರಂದು ಟೆಲಿಕಾಂ ರಸ್ತೆಯಲ್ಲಿರುವ ಶ್ರೀದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಣ್ಣೂರಿನ ಮಾಜಿ ಮ.ನಾ.ಪ. ಸದಸ್ಯ ಮೋಹನ್ ಪಡೀಲ್ ಇವರು “ತುಳು ಕೂಟ ತುಳುವಿಗಾಗಿ ನಡೆಸುವ ಹೋರಾಟಕ್ಕೆ ತುಳುವರಾದ ನಾವು ಬೆಂಬಲ ನೀಡಬೇಕು. ಅದು ನಮ್ಮ ಕರ್ತವ್ಯವೂ ಹೌದು. ತುಳು ಭಾಷಾ ಬೆಳವಣಿಗೆಗೆ ಶ್ರಮಿಸುವವರು ಇರುವವರಿಂದಲೇ ಇಂದು ಭಾಷೆ – ಭಾಷಿಗರು ಎಲ್ಲೆಡೆ ಇದ್ದಾರೆ. ನಾವೆಲ್ಲಾ ಇವರ ಜೊತೆ ಹೆಜ್ಜೆ ಹಾಕೋಣ” ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಡ್ಲ ತುಳು ಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ” ತುಳು ಭಾಷೆಯ ಸೌಂದರ್ಯ ವೃದ್ಧಿಸಲು ಮನೆಯ ಮಾತೆಯರು ಶ್ರಮಿಸಬೇಕು. ಇಂದು ವಿಶ್ವದಲ್ಲೇ ತುಳುವಿಗೆ ಮಾನ್ಯತೆ ಇದೆ. ತುಳುವರು ಎಲ್ಲೆಡೆ ಪಸರಿಸಿಕೊಂಡಿದ್ದಾರೆ. ಆದರೆ ನಾವು ನಮ್ಮ ಮಕ್ಕಳಿಗೆ ಆಂಗ್ಲ ವ್ಯಾಮೋಹವನ್ನೇ ಹಚ್ಚುವ…

Read More

ಮಂಗಳೂರು : ವಿಧಾನ ಪರಿಷತ್ ಮಾಜಿ ಶಾಸಕರಾದ ಐವನ್‌ ಡಿ’ಸೋಜಾ ಅವರ ನೇತೃತ್ವದಲ್ಲಿ 9ನೇ ವರ್ಷದ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಾಚರಣೆ 2023 ಪ್ರಯುಕ್ತ ‘ಭಾವೈಕ್ಯತೆಯ ಸಂಗಮ’ ದಿನಾಂಕ 12-11-2023ರಂದು ಸಂಜೆ 4 ಗಂಟೆಯಿಂದ ಕದ್ರಿ ಪಾರ್ಕ್‌ನ ಸುವರ್ಣ ಕಲಾಮಂಟಪದ ವಠಾರದಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಕುಣಿತ ಭಜನೆ ಸ್ಪರ್ಧೆ ಮತ್ತು ಗೂಡುದೀಪ ಸ್ಪರ್ಧೆಗಳನ್ನು ಸಾರ್ವಜನಿರಿಗೆ ಆಯೋಜಿಸಲಾಗಿದೆ. ಕುಣಿತ ಭಜನೆ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ 10 ಜನರಿಗಿಂತ ಮೇಲಿರಬಾರದು. 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ ‘ದೀಪಾವಳಿ ಹಬ್ಬದ ವೈಶಿಷ್ಟತೆಯ ಬಗ್ಗೆ ಕಲ್ಪನೆ’ ವಿಷಯವಾಗಿದ್ದು, ಸ್ಪರ್ಧೆಯಲ್ಲಿ 3 ವರ್ಗಗಳಿವೆ. ಪ್ರಾಥಮಿಕ – 1ರಿಂದ 7ನೇ ತರಗತಿ, ಹೈಸ್ಕೂಲು – 8ರಿಂದ ಪಿಯುಸಿ – 12ನೇ ತರಗತಿಯವರೆಗೆ ಮತ್ತು ಡಿಗ್ರಿ ಪದವಿ ಹಾಗೂ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಗೂಡುದೀಪ ಸ್ಪರ್ಧೆಯು ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ನಡೆಯಲಿದ್ದು, 5.30 ಗಂಟೆಗೆ ಚಾಲನೆ ನೀಡಲಾಗುವುದು. ಎಲ್ಲಾ…

Read More

ಕುಳಾಯಿ : ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾಸಿಕ ಹುಣ್ಣಿಮೆಯ ಪ್ರಯುಕ್ತ ‘ತುಳುನಾಡ ಬಲಿಯೇಂದ್ರ’ ಎಂಬ ತುಳು ಯಕ್ಷಗಾನ ತಾಳಮದ್ದಳೆ ದಿನಾಂಕ 28-10-2023ರಂದು ಕುಳಾಯಿ ಶ್ರೀ ವಿಷ್ಣುಮೂತಿ೯ ಕೃಪಾಶ್ರಿತ ಸಂಚಾರಿ ತಿರುಗಾಟದ ಚಿಕ್ಕ ಮೇಳದ ಪ್ರಾಯೋಜಕತ್ವದಲ್ಲಿ ಜರಗಿತು. ಹಿಮ್ಮೇಳದಲ್ಲಿ ಬೋಂದೇಲ್ ಸತೀಶ್ ಶೆಟ್ಟಿ, ಅಡೂರು ಆನಂದ, ಮೋಹನ್ ಶೆಟ್ಟಿಗಾರ್, ಜಗದೀಶ್ ಶೆಟ್ಟಿಗಾರ್, ಭರತ್ ಶೆಟ್ಟಿಗಾರ್ ಮತ್ತು ಜನಾರ್ದನ ಖಾರ್ವಿ ಹಾಗೂ ಮುಮ್ಮೇಳದಲ್ಲಿ ಬಲಿ ಚಕ್ರವರ್ತಿ (2)- ಜಬ್ಬಾರ್ ಸಮೋ ಸಂಪಾಜೆ, ವಾಮನ – ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶುಕ್ರಾಚಾರ್ಯರು – ವಾದಿರಾಜ ಕಲ್ಲೂರಾಯ, ಕಲಿಪುರುಷ – ಕೃಷ್ಣ ಪ್ರಸಾದ್ ಕಾಟಿಪಳ್ಳ, ಬಲಿ ಚಕ್ರವರ್ತಿ (1) – ರವಿ ಮುಂಡಾಜೆ, ವಿಂದ್ಯಾವಳಿ – ರಾಜೇಶ್ ಬೆಳ್ಳಾರೆ ಸಹಕರಿಸಿದರು. ಕುಳಾಯಿ ಚಿಕ್ಕ ಮೇಳದ ಸಂಚಾಲಕರಾದ ಜನಾರ್ದನ ಖಾರ್ವಿ ಮತ್ತು ಭರತ್ ಶೆಟ್ಟಿಗಾರ್ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶಾಲು ಹಾಕಿ ಗೌರವಿಸಿದರೆ, ಬಾಯಾರು ಎಸ್.ಎನ್. ಭಟ್ ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ಪಾತ್ರ ಪರಿಚಯ ಮಾಡಿದರು.…

Read More