Author: roovari

ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಮಿತಿಯು ಆಯೋಜಿಸಿದ ರಾಜ್ಯ ಮಟ್ಟದ ವಿದ್ಯಾರ್ಥಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಮಾರಿ ನಂದಿನಿ ಯು. (ಶಿವಮೊಗ್ಗ) ಪ್ರಥಮ, ಚಿನ್ಮಯ್ ರಮೇಶ್ ಹೆಗಡೆ (ಬೆಂಗಳೂರು) ದ್ವಿತೀಯ, ಯಜ್ಞುಶಾ ಕನ್ನೆಪ್ಪಾಡಿ (ಕಾಸರಗೋಡು) ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಕವಿತೆಗಳು ನೈಸರ್ಗಿಕ ವಿದ್ಯಮಾನ ಮತ್ತು ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುತ್ತದೆ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ರಚನೆಗಳು ವಾಸ್ತವ ಸತ್ಯಗಳನ್ನು ಒಳಗೊಂಡಿವೆ ಎಂದು ತೀರ್ಪುಗಾರರಾಗಿ ಸಹಕರಿಸಿದ ಕುಮಾರಿ ಭವ್ಯ ಭಟ್ ಮಡಿಕೇರಿ ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಬಹುಮಾನ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 82 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.

Read More

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ನಾಟ್ಕದೂರು ಇಲ್ಲಿರುವ ನಮ ತುಳುವೆರ್ ಕಲಾ ಸಂಘಟನೆ (ರಿ.) ವತಿಯಿಂದ ಸುವರ್ಣ ಕರ್ನಾಟಕ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 01-11-2023ರಿಂದ 01-11-2024ರವರೆಗೆ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ದಿನಾಂಕ 01-12-2023ನೇ ಶುಕ್ರವಾರದಂದು ‘ಸುವರ್ಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಮುದ್ರಾಡಿ ನಾಟ್ಕದೂರು ಬಿ.ವಿ. ಕಾರಂತ ಬಯಲು ರಂಗ ಸ್ಥಳದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಇವರು ವಹಿಸಲಿದ್ದು, ಬೆಳಗಾವಿಯ ರಂಗ ನಿರ್ದೇಶಕರಾದ ಶ್ರೀ ಶ್ರೀಪತಿ ಮಂಜನಬೈಲು ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ವಾಸ್ತು ತಜ್ಞರಾದ ಶ್ರೀ ಪ್ರಮಲ್ ಕುಮಾರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆ, ಶಂಕರಪುರ, ಏಕ ಜಾತಿ ಧರ್ಮ ಪೀಠ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ, ಮಂದಾ ರ್ತಿ ದೇವಸ್ಥಾನದ…

Read More

ಶಿವಮೊಗ್ಗ : ಕರ್ನಾಟಕ ಸಂಘದಿಂದ ‘ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮ 2022’ನ್ನು ದಿನಾಂಕ 26-11-2023ರಂದು ಶಿವಮೊಗ್ಗ ಕರ್ನಾಟಕ ಸಂಘ ಭವನದಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ವಿತರಿಸಿದ ಲೇಖಕ ಡಾ.ಗಜಾನನ ಶರ್ಮ ಮಾತನಾಡಿ “ಮೂಲ ಮೂರ್ತಿಯಾಗಬೇಕಿದ್ದ ಕನ್ನಡವನ್ನು ನಾವೆಲ್ಲರೂ ಸೇರಿಕೊಂಡು ಉತ್ಸವ ಮೂರ್ತಿಯನ್ನಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡವನ್ನು ಮೂಲ ಮೂರ್ತಿಯಾಗಿ ಮಾಡುವುದಲ್ಲದೆ, ದಿನವೂ ಪೂಜೆಗೆ ಒಳಪಡಬೇಕಿದೆ. ನಮ್ಮೆಲ್ಲರ ಅಂತರಂಗದಲ್ಲಿಯೂ ಕನ್ನಡ ಅಡಗಿದೆ. ಆದರೆ ಅದನ್ನು ಹೊರಗೆ ತಂದು ಪೂಜಿಸುವಲ್ಲಿ ಎಡವುತ್ತಿದ್ದೇವೆ. ಮಕ್ಕಳಲ್ಲಿ ಜನರೇಷನ್ ಗ್ಯಾಪ್ ಹೆಚ್ಚಾಗಿರುವ ಕಾರಣ ಕನ್ನಡ ಭಾಷೆ ಬಳಕೆ ಕಡಿಮೆ ಆಗುತ್ತಿದೆ. ನಮ್ಮ ನಡತೆ, ಸಂಸ್ಕೃತಿ, ಭಾಷೆ ಯಾವುದೂ ಅವರಿಗೆ ಪೂರ್ಣಮಯವಾಗಿಲ್ಲ. ಇಂದಿನ ಜನರೇಷನ್ ತನ್ಮಯತೆ ಕಳೆದುಕೊಂಡಿದ್ದು ಅದನ್ನು ಉಳಿಸಿಕೊಂಡರೆ ಕನ್ನಡದ ಮೇಲಿನ ಪ್ರೀತಿ ಮತ್ತು ರಾಷ್ಟ್ರ ಪ್ರೀತಿ ಹೆಚ್ಚಾಗುತ್ತದೆ. ನಾವೆಲ್ಲರೂ ಇತಿಹಾಸ, ಸೇವಾಕರ್ತರನ್ನೂ ಮರೆತಿದ್ದೇವೆ. ಅದರ ಪರಿಣಾಮವೇ ಅಜ್ಜ ಮತ್ತು ಮೊಮ್ಮೊಕ್ಕಳು ಬೆಸೆಯುತ್ತಿಲ್ಲ. ಇದು ದುರ್ದೈವದ ಸಂಗತಿ. ಅವರನ್ನು ಬೆಸೆಯುವ ಕೆಲಸವನ್ನು ಮೊದಲು ಮಾಡಬೇಕಿದೆ.…

Read More

ಪುತ್ತೂರು : ಪುತ್ತೂರಿನ ಅರ್ಯಾಪು ಅಕ್ಷಯ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಯುವ, ಅದ್ವಯ ಕನ್ನಡ ಸಂಘ ಮತ್ತು ರೋಟರಾಕ್ಟ್ ಕ್ಲಬ್ ಅಕ್ಷಯ ಕಾಲೇಜ್ ಸಹಯೋಗದೊಂದಿಗೆ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರು ದಿನಾಂಕ 24-11-2023ರಂದು ‘ಅನುವಾದ ಸಾಹಿತ್ಯ’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ನೀಡಿದರು. ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ ಅಬ್ದುಲ್ ಕಲಾಮ್ ಅವರು ರಚಿಸಿದ “ವಿಂಗ್ಸ್ ಆಫ್ ಫೈರ್” ಕೃತಿಯನ್ನು “ಅಗ್ನಿಯ ರೆಕ್ಕೆಗಳು” ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದ ಮಾಡಿದ ರೋಚಕ ಅನುಭವಗಳನ್ನು ಹಾಗೂ ಅನುವಾದ ಮಾಡುವ ಸಂದರ್ಭದಲ್ಲಿ ಅನೇಕ ವಿಚಾರಗಳಲ್ಲಿ ಎಚ್ಚರಿಕೆಯನ್ನು ವಹಿಸಬೇಕಾದ ಬಗ್ಗೆ ಮತ್ತು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆಂಬ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಜಯಪ್ರಕಾಶ್ ಪುತ್ತೂರು ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು. ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ವರದರಾಜ ಚಂದ್ರಗಿರಿ…

Read More

ಉಡುಪಿ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಮಾರ್ಚ್ ತಿಂಗಳಲ್ಲಿ ಉಡುಪಿಯಲ್ಲಿ ಜರಗುವ ಮಹಿಳಾ ಸಮಾವೇಶದ ಪೂರ್ವಭಾವಿಯಾಗಿ ಲಿಂಗ ಸಂವೇದನೆಯ ಜಾಗೃತಿ ಕಾರ್ಯಕ್ರಮ ‘ಅರಿವಿನ ಪಯಣ’ ಉಡುಪಿಯ ಸುತ್ತಾ ಮುತ್ತ ದಿನಾಂಕ 21-11-2023ರಂದು ಜರಗಿತು. ಹಾಡು, ಕಿರುನಾಟಕ, ಕತೆ ಹೇಳುವುದು ಮತ್ತು ಸಂವಾದದ ಮೂಲಕ ಸುಮಾರು ಒಂದೂವರೆ ಗಂಟೆಗಳ ಕಾಲ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಯಿತು. ಈ ಕಾರ್ಯಕ್ರಮದಲ್ಲಿ ಅಖಿಲಾ ವಿದ್ಯಾಸಂದ್ರ, ಗೌರಿ, ಪ್ರಭಾ ಬೆಳವಂಗಲ, ಲಿನೆಟ್, ಮಲ್ಲಿಕಾ ಜ್ಯೋತಿಗುಡ್ಡೆ, ಲಾವಣ್ಯ ಬಂಟ್ವಾಳ, ಶುಭಲಕ್ಷ್ಮೀ ಕಡೆಕಾರ್, ಡಾ. ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಡಿ, ಜಾನಕಿ ಬ್ರಹ್ಮಾವರ, ಮೇರಿ ಡಿ’ಸೋಜಾ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾಗಿ ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಾ ಎಸ್. ಉಡುಪಿ, ಕ್ರಿಶ್ಚಿಯನ್ ಪ್ರೌಢ ಶಾಲೆಯ ಮುಖೋಪಾಧ್ಯಾಯಿನಿ ಶ್ರೀಮತಿ ಜೋಸ್ಲಿನ್ ಮಣಿಪಾಲ ಮತ್ತು ಎಸ್.ಎಸ್.ಎಲ್.ಸಿ. ನಂತರದ ಸರಕಾರಿ ನರ್ಸಿಂಗ್ ವಿದ್ಯಾರ್ಥಿಗಳ ವಸತಿ…

Read More

ಹಾನಗಲ್ಲ : 19ನೆಯ ಶತಮಾನದ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ, ಪ್ರೊ. ಜಿ.ಹೆಚ್. ಹನ್ನೆರಡುಮಠ ವಿರಚಿತ ‘ಯುಗಪುರುಷ’ ನಾಟಕವನ್ನು ಶ್ರೀ ಸಿದ್ದೇಶ್ವರ ಸಾಂಸ್ಕೃತಿಕ ಕಲಾ ಸಂಘ (ರಿ) ಹುಲಗಿನಕಟ್ಟಿ ರಂಗತಂಡವು ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಸೇವಾ ಸಮಿತಿ ನವದೆಹಲಿ ಇವರ ಸಹಯೋಗದಲ್ಲಿ ದಿನಾಂಕ 25-11-2023ರಂದು ಶ್ರೀ ಶಿವಯೋಗ ಮಂದಿರದ ಬಯಲು ಮಂಟಪದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗದಗ ಜಿಲ್ಲೆಯ ಶಿರಹಟ್ಟಿಯ ಹಿಂದು-ಮುಸ್ಲಿಂ ಭಾವೈಕ್ಯತಾ ಮಹಾಸಂಸ್ಥಾನದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ್ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಟಕ ಮಾಧ್ಯಮದ ಪ್ರಾಮುಖ್ಯತೆಯನ್ನು ಮತ್ತು ಅದರ ಪರಿಣಾಮಗಳ ಕುರಿತು ಔಚಿತ್ಯಪೂರ್ಣವಾಗಿ ತಿಳಿಸಿ ನಾಟಕಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರದ ವಟು ಸಾಧಕರು, ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರುಗಳು, ಹಾವೇರಿ, ಅಥಣಿ, ಅಕ್ಕಿಆಲೂರು ಮತ್ತು ಹಲವಾರು ಮಠಗಳ ಶ್ರೀಗಳು, ಸುತ್ತಮುತ್ತ ಗ್ರಾಮಗಳ ಭಕ್ತರು ಮತ್ತು ದೂರದ ಊರುಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.…

Read More

ಅದೊಂದು ‘ರಂಗಪ್ರವೇಶ’ ಎನ್ನುವಂತೆಯೇ ಇರಲಿಲ್ಲ. ನಗುಮೊಗದ ನೃತ್ಯಕಲಾವಿದೆ ಲಿಖಿತಾ ನಾರಾಯಣ ಪಳಗಿದ ನರ್ತಕಿಯಂತೆ ರಂಗದ ಮೇಲೆ ಆತ್ಮವಿಶ್ವಾಸದಿಂದ ಚೈತನ್ಯಪೂರ್ಣವಾಗಿ ನರ್ತಿಸಿದಳು. ‘ಸಾಧನ ನೃತ್ಯಶಾಲೆ’ಯ ಪರಿಣತ ನೃತ್ಯಗುರು ಭಾವನಾ ವೆಂಕಟೇಶ್ವರ ಅವರ ಶಿಸ್ತುಬದ್ಧ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಲಿಖಿತಾ ಇತ್ತೀಚೆಗೆ ಜೆ.ಎಸ್.ಎಸ್. ರಂಗ ಮಂದಿರದಲ್ಲಿ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ಷೋಡಶ ತರುಣಿ, ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಸಪೂರ ಮೈಕಟ್ಟು ಹೊಂದಿದ್ದು, ಕಣ್ಮನ ತುಂಬುವಂತೆ ಅನೇಕ ದೈವೀಕ ಕೃತಿಗಳನ್ನು ರಮ್ಯವಾಗಿ ಸಾಕ್ಷಾತ್ಕರಿಸಿದ್ದು ಕಲಾರಸಿಕರಿಗೆ ಆನಂದ ತಂದಿತು. ಲಿಖಿತಾ, ಹಕ್ಕಿ ಹಗುರಿನ ಹೆಜ್ಜೆಗಳಲ್ಲಿ ರಂಗದ ತುಂಬಾ ನಲಿವಿನ ಗೆಜ್ಜೆಕಾಲ್ಗಳನ್ನು ಝಣಿಸುತ್ತ ಗುರುಗಳ ಹಾಗೂ ವಾದ್ಯಗಾರರ ಪಾದಗಳಿಗೆರಗುತ್ತ ವಿನಯದ ನಮನ ಸಲ್ಲಿಸಿ ‘ಪುಷ್ಪಾಂಜಲಿ’ಯ ಮೂಲಕ ದೇವಾನುದೇವತೆಗಳಿಗೆ ನೃತ್ತನೈವೇದ್ಯ ಸಲ್ಲಿಸಿ ನೃತ್ಯಾರಾಧನೆಗೆ ತೊಡಗಿದ್ದು ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆಯನ್ನು ಪಡೆಯಿತು. ‘ಕಮಲಾಕುಚ ಚೂಚುಕ ಕುಂಕುಮತೋ..’ ಎಂಬ ಶ್ರೀವೆಂಕಟೇಶ ಸುಪ್ರಭಾತದ ಸ್ತುತಿ, ವೆಂಕಟೇಶ್ವರನಿಗೆ ಸಂದ ಪ್ರಥಮ ನೃತ್ಯ ಪೂಜಾರ್ಪಣೆ. ನೃತ್ಯದ ಅಚ್ಚುಕಟ್ಟುತನ ಮನಕ್ಕೆ ಮುದತಂದಿತು. ಗುರು ಭಾವನಾ ನೃತ್ಯ…

Read More

ಉಡುಪಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಹಕ್ಲಾಡಿಯ ಸರಕಾರಿ ಪ್ರೌಢಶಾಲೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿಸ್ತರಣಾ ಉಪನ್ಯಾಸ ಮಾಲಿಕೆಯ 5ನೇ ಉಪನ್ಯಾಸ ಕಾರ್ಯಕ್ರಮವು ಬಾರ್ಕೂರಿನ ನೇಶನಲ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16-11-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ‘ಕನಕದಾಸರ ಕೃತಿಗಳಲ್ಲಿ ಭಕ್ತಿಭಾವದ ಪರಿಕಲ್ಪನೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಪ್ರಜ್ಞಾಮಾರ್ಪಳ್ಳಿ ಮಾತನಾಡಿ “ಕನಕದಾಸರು ಸಾರಸ್ವತ ಲೋಕ ಕಂಡ ಅಪೂರ್ವ ಕವಿ, ಚಿಂತಕ, ದಾರ್ಶನಿಕ ಎಲ್ಲವೂ. ಅವರು ದಾಸಪರಂಪರೆಯಲ್ಲಿ ಭಿನ್ನಸ್ಥಾನವನ್ನು ಪಡೆಯಲು ಪ್ರಮುಖ ಕಾರಣ ಅವರು ಕೇವಲ ಕೀರ್ತನಕಾರರಾಗಿರದೆ ನಾಲ್ಕು ಅಮೂಲ್ಯ ಕೃತಿಗಳನ್ನು ನೀಡಿರುವುದು. ಕಾವ್ಯಪ್ರಭೇದಗಳ ಅರಿವು ಕನಕದಾಸರಿಗಿತ್ತು. ಭಕ್ತಿಯ ಪರಾಕಾಷ್ಠೆಯೇ ಕನಕದಾಸರ ಕೀರ್ತನೆಗಳ ಹೆಗ್ಗುರುತೆನ್ನಬಹುದು. ‘ಮೋಹನ ತರಂಗಿಣಿ’ ಕನಕದಾಸರ ವಿಭಿನ್ನ ಕೃತಿ. ಅದು ವಿಜಯನಗರದ ಸಮಕಾಲೀನ ಚಿಂತನೆಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಭಾವಾಭಿವ್ಯಕ್ತಿಯ ದೃಷ್ಟಿಯಿಂದ ನೋಡಿದಾಗ ಕನಕದಾಸರಿಗೆ ವಿಜಯನಗರದ ವೈಭವದ ಬಗೆಗಿದ್ದ ಅಭಿಮಾನ ಮತ್ತು…

Read More

ಸುರತ್ಕಲ್ : ಹರಿದಾಸ, ಯಕ್ಷಗಾನ ಅರ್ಥಧಾರಿ, ಸಂಘಟಕ ಹಾಗೂ ಶೇಣಿ ಪ್ರತಿಷ್ಠಾನದ ಕಾರ್ಯದರ್ಶಿಯಾದ ಪೇಜಾವರ ಶ್ರೀ ವಿಜಯಾನಂದ ರಾವ್ ದಿನಾಂಕ 19-11-2023 ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ ಮಣಿ ಕೃಷ್ಣಸ್ವಾಮಿ ಅಕಾಡಮಿಯ ವತಿಯಿಂದ ದಿನಾಂಕ 01-12-2023ರ ಶುಕ್ರವಾರ ಸಂಜೆ ಗಂಟೆ 5.00ರಿಂದ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರಸ್ತೆಯಲ್ಲಿರುವ ‘ಅನುಪಲ್ಲವಿ’ಯಲ್ಲಿ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ನ್ಯಾಯವಾದಿ ಕೂಡ್ಲು ಶ್ರೀ ಮಹಾಬಲ ಶೆಟ್ಟಿ ನುಡಿ ನಮನ ಸಲ್ಲಿಸಲಿರುವರು. ಬಳಿಕ ಶ್ರೀಯುತರ ಸ್ಮರಣಾರ್ಥ ‘ಸುಧನ್ವ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಶ್ರೀಮತಿ ಶಾಲಿನಿ ಹೆಬ್ಬಾರ್, ಶ್ರೀ ಪಿ. ನಿತ್ಯಾನಂದ ರಾವ್ ಭಾಗವಹಿಸುವರು. ಮದ್ದಳೆಯಲ್ಲಿ ಶ್ರೀ ಕೆ. ರಾಮ ಹೊಳ್ಳ ಭಾಗವಹಿಸಲಿದ್ದು, ಅರ್ಥದಾರಿಗಳಾಗಿ ಸರ್ವ ಶ್ರೀ ಜಿ.ಕೆ. ಭಟ್, ಸೇರಾಜೆ ಸೀತಾರಾಮ ಭಟ್, ಪೇಜಾವರ ಸತ್ಯಾನಂದ ರಾವ್, ಶ್ರೀ ಚಂದ್ರಶೇಖರ ಕೋಡಿಪ್ಪಾಡಿ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಹಯೋಗದೊಂದಿಗೆ ನಡೆಯುವ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-11-2023 ರಂದು ಕಾರ್ಕಳ ಸರಕಾರಿ.ಪ.ಪೂ.ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಅಕ್ಕಮಹಾದೇವಿಯ ವಚನಗಳು : ಒಂದು ಪ್ರವೇಶ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಹಪ್ರಾಧ್ಯಾಪಕಿಯಾದ ಡಾ.ಜ್ಯೋತಿ ರೈ “ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪತಿ ಕೌಶಿಕನನ್ನು ಮತ್ತು ಸಕಲ ಸೌಭಾಗ್ಯಗಳನ್ನು ತಿರಸ್ಕರಿಸಿ ಏಕಾಂಗಿಯಾಗಿ ಆಧ್ಯಾತ್ಮದ ಹಾದಿಯಲ್ಲಿ ನಡೆದ ಅಕ್ಕಮಹಾದೇವಿಯ ದಿಟ್ಟತನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅಲ್ಲಮಪ್ರಭುಗಳು ಹೇಳುವಂತೆ ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿಯನ್ನು ಅನುಭವ ಮಂಟಪದಲ್ಲಿ ಪರೀಕ್ಷೆಗೆ ಒಡ್ಡಿ ಆಕೆಯ ವ್ಯಕ್ತಿತ್ವ, ಅಸ್ತಿತ್ವವನ್ನು ಅಲ್ಲಮಪ್ರಭುಗಳು ಜಗತ್ತಿಗೆ ಪರಿಚಯಿಸಿದರು. ಲೌಕಿಕ ಪುರುಷನನ್ನು ತಿರಸ್ಕರಿಸಿ ಅಲೌಕಿಕ ಪುರುಷ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿ ಅರಿಷಡ್ವೈರಿಗಳನ್ನೆಲ್ಲ ತೊರೆದು ಮಾನಸಿಕವಾಗಿಯೂ ಬೆತ್ತಲಾಗಿ ಶ್ರೇಷ್ಠ ವಚನಗಳನ್ನೂ ನೀಡಿದ ಆಕೆಯಲ್ಲಿ ದೈಹಿಕ ಭಾವವನ್ನು ಮೀರಿದ ಅಕ್ಕಮಹಾದೇವಿಯನ್ನು ಕಾಣಬಹುದಾಗಿದೆ. ಅಕ್ಕನ ವಚನಗಳಲ್ಲಿ…

Read More