Author: roovari

ಸುಳ್ಯ: ಯಶಸ್ವಿ 4 ವರ್ಷಗಳನ್ನು ಪೂರೈಸಿ, 5 ನೇ ವರ್ಷಕ್ಕೆಪಾದಾರ್ಪಣೆ ಮಾಡುತ್ತಿರುವ ಸುಳ್ಯದ ‘ರಂಗಮಯೂರಿ’ ಕಲಾಶಾಲೆಯಲ್ಲಿ ಡ್ಯಾನ್ಸ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ಯಕ್ಷಗಾನ, ನಾಟಕ ಕಲಿಕಾ ತರಗತಿಗಳ ಹೊಸ ಬ್ಯಾಚ್ ಗಳು ಆರಂಭಗೊಂಡಿದ್ದು ಆಸಕ್ತರು ಇದರ ಸದುಪಯೂಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ: ಮಯೂರಿ ಕಲಾಶಾಲೆ, ಶ್ರೀಹರಿ ಕಾಂಪ್ಲೆಕ್ಸ್ , ಮೂರನೇ ಮಹಡಿ, ಮುಖ್ಯ ರಸ್ತೆ ಸುಳ್ಯ 9611355496, 6363783983

Read More

ಬೆಂಗಳೂರು:  2023ರ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ʻಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನʼ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು 2023ರ ಆಗಸ್ಟ್ ತಿಂಗಳ 21ನೆಯ ತಾರೀಕು ಕೊನೆಯ ದಿನವಾಗಿದೆ. 2023ರ ಸೆಪ್ಟೆಂಬರ್ ತಿಂಗಳ 15ರವರೆಗೆ ದಂಡ ಶುಲ್ಕ ರೂಪಾಯಿ 50-೦೦ ಅನ್ನು ಹೆಚ್ಚುವರಿಯಾಗಿ ಪಾವತಿಸಿ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು 25ರೂಪಾಯಿ  ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿರುವ ಮಾರಾಟ ಮಳಿಗೆಯಲ್ಲಿ ದಿನಾಂಕ 01-07-2023ರಿಂದ ಪಡೆಯಬಹುದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ‍್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವ ಸೌಲಭ್ಯವನ್ನು ಪರಿಷತ್ತು ಕಲ್ಪಿಸಿದೆ. ಅರ್ಜಿನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ www.kasapa.in ಮೂಲಕ ಪಡೆದು ಕೊಳ್ಳಬಹುದು. ಅಂತರ್ಜಾಲದ ಮೂಲಕ ಅರ್ಜಿ ನಮೂನೆ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ 25ರೂಪಾಯಿಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ…

Read More

ಬೈಂದೂರು : ‘ಸಮನ್ವಿತ’ ಬೆಂಗಳೂರು, ಲಾವಣ್ಯ (ರಿ.) ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ‘ವಾಚಕ್ನವೀ’ ಮತ್ತು ‘ಜಿತ್ವರೀ – ಇದು ಕಾಶಿ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ : 09-07-2023ರ ಬೆಳಿಗ್ಗೆ 10 ಗಂಟೆಗೆ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ. ಬೈಂದೂರಿನ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಗುರುರಾಜ ಗಂಟೆಹೊಳೆ ಕೃತಿ ಬಿಡುಗಡೆಗೊಳಿಸಲಿದ್ದು, ಬೈಂದೂರಿನ ಲಾವಣ್ಯ (ರಿ.) ಇದರ ಅಧ್ಯಕ್ಷರಾದ ಶ್ರೀ ನರಸಿಂಹ ಬಿ. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯವಾದಿಯೂ ಸಂಸ್ಕೃತಿ ಚಿಂತಕರೂ ಆದ ಶ್ರೀ ಡಾ. ಜಿ.ಬಿ. ಹರೀಶ, ವಿಜ್ಞಾನ ಸಂವಹನಕಾರರಾದ ಶ್ರೀ ರೋಹಿತ್‌ ಚಕ್ರತೀರ್ಥ, ಬೈಂದೂರಿನ ರೋಟರಿ ಕ್ಲಬ್ ಅಧ್ಯಕ್ಷರಾದ ರೋಟೇರಿಯನ್ ಪ್ರಸಾದ್ ಪ್ರಭು ಹಾಗೂ ಕೃತಿಗಳ ಲೇಖಕರಾದ ಶ್ರೀ ಸದ್ಯೋಜಾತ ಉಪಸ್ಥತರಿರುವರು. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಭಿಮಾನಿಗಳಾದ ತಮ್ಮೆಲ್ಲರಿಗೂ ಸಂಘಟಕರು ಆದರದ ಸ್ವಾಗತವನ್ನು ಕೋರಿದ್ದಾರೆ.

Read More

ಕಾಸರಗೋಡು: ರಂಗ ಚಿನ್ನಾರಿ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸುವ ಕನ್ನಡ ಹಬ್ಬವು ದಿನಾಂಕ 29-06-2023 ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ರಂಗ ಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಸತೀಶ್ಚಂದ್ರ ಭಂಡಾರಿ ಕೋಳಾರಿ ಉಪಸ್ಥಿತರಿದ್ದು ಸಂಸ್ಥೆಯ ಆರಂಭ ಮತ್ತು ಮುಂದೆ ನಡೆಸುವ ಅನೇಕ ಕನ್ನಡಪರ ಕಾರ್ಯಕ್ರಮಗಳ ಬೆಳಕು ಚೆಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು. ಕೊಂಡೆಯೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡುತ್ತಾ ಕಾಸರಗೋಡಿನಲ್ಲಿ ಅವನತಿಯ ಅಂಚಿಗೆ ತಲುಪುವಂತಾದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ರಂಗ ಚಿನ್ನಾರಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಹತ್ತು ಹಲವು ಕಾರ್ಯಗಳಲ್ಲಿ ನಾವು ಕೈ ಜೋಡಿಸಿ ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನು ಪಸರಿಸುವ ಕಾಯಕದಲ್ಲಿ ಜೊತೆಯಾಗೋಣ ಎಂದು ನುಡಿದರು. ಮಠದ ಭಕ್ತರಾಗಿರುವ ಮೋಹನ್ ದಾಸರು ಅತಿಥಿಯಾಗಿ…

Read More

ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರವರೆಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಇಂತಹ ಶ್ರೀಮಂತ ಕಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುವ ಕಲಾವಿದ ನವೀನ ಎನ್ ಜೆ. 19.03.1996ರಂದು ಜಡೆ ನಾಗರಾಜ ರಾವ್ ಹಾಗೂ ವೀಣಾ ಅವರ ಮಗನಾಗಿ ಜನನ. M.Com ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಮೂಲ ಪ್ರೇರಣೆ ಇವರ ತಾಯಿ. ಶ್ರೀ ಗಣಪತಿ ಹೆಗಡೆ ಪುರಪ್ಪೆಮನೆ ಹಾಗೂ ಐನಬೈಲು ಪರಮೇಶ್ವರ ಹೆಗಡೆ ಇವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :- ಪೂರ್ಣ…

Read More

ವೇದಿಕೆ ಏರಿದರೆ ಈಕೆ ಜಿಂಕೆಯಂತೆ ಚುರುಕು. ನವಭಾವಗಳ ನವರಸಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕರತಾಡನವೇ ಧ್ವನಿಯಾಗುವುದು. ವೃತ್ತಿಯಲ್ಲಿ ವೈದ್ಯೆಯಾದರೂ ಜನ್ಮತಃ ಕಲಾವಿದೆ ಅಂದರೂ ತಪ್ಪಲ್ಲ. ಡಾ. ರಚನಾ ಸೈಪಂಗಲ್ಲು ಹುಟ್ಟಿ ಬೆಳೆದದ್ದು ಶಾಂತಿಯಡಿ ಎಂಬ ಹಳ್ಳಿ ಮನೆಯಲ್ಲಾದರೂ ಬಾಲ್ಯದಲ್ಲೇ ನೃತ್ಯದಲ್ಲಿ ಒಲವು ಕಂಡವಳು. ರಚನಾಳ ಆಸಕ್ತಿಗೆ ಅಪರಿಮಿತ ಪ್ರೋತ್ಸಾಹದೊಂದಿಗೆ ವೇದಿಕೆ ಕಲ್ಪಿಸಿ ಕೊಟ್ಟವರು ಅವಳ ಹೆತ್ತವರಾದ ಕಾಸರಗೋಡಿನ ಬದಿಯಡ್ಕದ ಪ್ರಸಿದ್ಧ ವ್ಯಾಪಾರಿ ಶ್ರೀನಿವಾಸ್ ರಾವ್ ಹಾಗೂ ನಿವೃತ್ತ ಅಧ್ಯಾಪಿಕೆ ಶ್ರೀಮತಿ ಪುಷ್ಪ ರಾಜೀವಿಯವರು. ಸಹೋದರ ರೋಷನ್ ಕಿರಣ್ ಸೇರಿದಂತೆ ಕುಟುಂಬದ ಎಲ್ಲರ ಪ್ರೋತ್ಸಾಹ ಈ ಕಲಾವಿದೆಗೆ ಉತ್ತಮ ವೇದಿಕೆಗಳನ್ನು ಒದಗಿಸಿ ಕೊಟ್ಟದ್ದು ಸುಳ್ಳಲ್ಲ. ಡಾ. ರಚನಾ ಸೈಪಂಗಲ್ಲು ತನ್ನ ಆರರ ವಯಸ್ಸಿನಲ್ಲೇ ಶಾಲಾ ಕಲೋತ್ಸವಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಿಟ್ಟಿಸಿಕೊಂಡವಳು. ಮುಂದೆ ನೃತ್ಯ ಶಿಕ್ಷಕ ಗೋವಿಂದ ಪೈ ಪುರಸ್ಕೃತ ನಾಟ್ಯ ನಿಲಯಂ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರಲ್ಲಿ ನೃತ್ಯಾಭ್ಯಾಸ ಆರಂಭಿಸಿ ಅವರ ಪ್ರೋತ್ಸಾಹದಿಂದಲೇ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದವಳು.…

Read More

ಜನಮನಕೆ ಹತ್ತಿರವಾಗುವ ವೈದ್ಯ, ಸಾಹಿತಿ, ಸಾಧಕ – ಡಾ. ಮುರಲೀಮೋಹನ್ ಚೂಂತಾರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ‘ಚೂಂತಾರು’ ಇಲ್ಲಿ ಜನಿಸಿದ ಮುರಳಿ ಮೋಹನ ಚೂಂತಾರು ಇವರು ಶ್ರೀಮತಿ ಸರೋಜಿನಿ ಭಟ್ ಮತ್ತು ಲಕ್ಷ್ಮೀನಾರಾಯಣ ಭಟ್ ದಂಪತಿಗಳ ಸುಪುತ್ರ. ಸರಕಾರಿ ಮೆರಿಟ್ ಕೋಟಾದಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ಉಚಿತ ಅರ್ಹತೆ ಪಡೆದು ಬಿ.ಡಿ.ಯಸ್. ಪದವಿ, ಯಮ್.ಡಿ.ಯಸ್. ಸೀಟನ್ನು ಕೂಡ ಸರಕಾರಿ ಕೋಟಾದಲ್ಲಿಯೇ ಪಡೆದ ಇವರು ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ. ಪದವಿಯನ್ನು ಪಡೆದಿದ್ದಾರೆ. ಹೊಸಂಗಡಿ – ಮಂಜೇಶ್ವರ ಹೃದಯಭಾಗದಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯ’ವನ್ನು ತೆರೆದು ತಮ್ಮ ಧರ್ಮಪತ್ನಿ ಡಾ. ರಾಜಶ್ರೀ ಮೋಹನ್ ಇವರ ಜೊತೆಗೂಡಿ ದಂತ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚೂಂತಾರು ತಮ್ಮ ವಿಷಯ ತಜ್ಞತೆ ಮತ್ತು ಅನುಭವಗಳ ಮೂಲಕ ಮೌಲಿಕ ಹಾಗೂ ಜನಸಾಮಾನ್ಯರಿಗೆ ಮುಟ್ಟುವಂತೆ ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯುವುದರ ಜೊತೆಗೆ, ವಿವಿಧ ಮಾಧ್ಯಮಗಳ ಮೂಲಕ ಎಲ್ಲರನ್ನೂ ಅತಿ…

Read More

ಕನ್ನಡ ಮತ್ತು ತುಳು ಚಿತ್ರರಂಗದ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರು. ರಾಘವ ಆಚಾರ್ಯ ಹಾಗೂ ಮೀರಾ ಇವರ ಪುತ್ರರಾಗಿ ಜನಿಸಿದ ಡಾಕ್ಟರ್ ನಿತಿನ್ ಆಚಾರ್ಯ ಅವರು ತಮ್ಮ ದಂತ ವೈದ್ಯಕೀಯ ಪದವಿಯನ್ನು ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇಲ್ಲಿ ಪಡೆದು 2009ನೇ ಇಸವಿಯಿಂದ ಕೆ.ಸಿ.ರೋಡಲ್ಲಿ ತಮ್ಮದೇ ಆದ ಮೀರಾ ಡೆಂಟಲ್ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ತಮ್ಮ ಸಂಗೀತ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಪಡೆದವರಲ್ಲ. ಸಂಗೀತದ ಬಗೆಗಿನ ಅಪಾರವಾದ ಆಸಕ್ತಿ ಗುರುವಿಲ್ಲದೆ ಕಲಿಕೆಯ ಕಡೆಗೆ ಸೆಳೆಯಿತು. ಎ.ಆರ್. ರಹಮಾನ್, ಚಿತ್ರ, ಎಸ್.ಪಿ.ಬಿ.ಯವರು ಇವರ ಮಾನಸ ಗುರುಗಳು ಎಂದರೆ ತಪ್ಪಾಗದು. ಆರಂಭದಲ್ಲಿ ಇವರ ಪ್ರತಿಭೆಗೆ ಇವರೇ ಕಲ್ಪಿಸಿಕೊಂಡ ವೇದಿಕೆ ‘band aid’ ಎನ್ನುವ ಫ್ಯೂಶನ್ ಬ್ಯಾಂಡ್ ನ ಮುಖಾಂತರ ಇಡೀ ಕರ್ನಾಟಕದಾದ್ಯಂತ ಬೇರೆ ಬೇರೆ ವೇದಿಕೆಗಳಲ್ಲಿ ಸಂಗೀತಪ್ರಿಯರ ಮನಗೆದ್ದ ಇವರಿಗೆ ಕನ್ನಡಿಗರ ಜನಮಾನಸವನ್ನು ತಲುಪಲು ಸಿಕ್ಕ ಅದ್ಭುತ ಅವಕಾಶ ಟಿವಿ9…

Read More

ಡಾ. ಲಕ್ಷ್ಮೀ ರೇಖಾ ಅರುಣ್ – ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿರುವ ದಂತವೈದ್ಯೆ ಹಾಗೂ ಭರತನಾಟ್ಯ ಕಲಾವಿದೆ ಲಕ್ಷ್ಮೀ ರೇಖಾ ಅವರು ಮೂಲತಃ ಬೆಂಗಳೂರಿನವರು. ಶ್ರೀ ಜನಾರ್ದನ ಅಯ್ಯಂಗಾರ್ ತಂದೆ, ಶ್ರೀಮತಿ ಅಮೃತ ನಳಿನಿ ತಾಯಿ. ಸಾಮಾನ್ಯ ಶಿಕ್ಷಣ ಹಾಗೂ ಕಲಾಸಕ್ತಿ ತಾಳಿದ್ದು ಚಿಕ್ಕಪ್ಪ ಎ.ಶ್ರೀಕಾಂತ್ ಹಾಗೂ ಚಿಕ್ಕಮ್ಮ ಕಾಂತಿಮತಿಯವರ ಮನೆಯಲ್ಲಿದ್ದು ಬೆಳೆದಾಗ. ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ತುಡಿತವೊಂದು ಹುಟ್ಟಿತೆಂದರೆ ಅದೇ ಮುಂದೆ ನಾವು ಅತಿಯಾಗಿ ಪ್ರೀತಿಸುವ, ನಮಗೆ ಭಾವಸೌಖ್ಯವೊದಗಿಸುವ, ನಮ್ಮನ್ನು ಕಾಡುವ, ಕೆಣಕುವ, ಸವಾಲಾಗುವ, ಹಳತೊಂದನ್ನು ಹುಡುಕುವ, ಹೊಸತೊಂದನ್ನು ಸೃಜಿಸುವ ವಿದ್ಯಮಾನವಾಗಿ ನಿರಂತರವಾಗಿ ಅರಳುತ್ತಾ ಸಾಗುತ್ತದೆ. ಸುಖವೋ ದುಃಖವೋ, ಮೇಲೋ ಕೆಳಗೋ, ಹಿಂದೆಯೋ ಮುಂದೆಯೋ ಎಲ್ಲ ಅನುಭವಗಳನ್ನು ಎದುರಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಅಂಥ ತುಡಿತವೊಂದನ್ನು ಒಪ್ಪಿ ಅಪ್ಪಿ ಪ್ರೀತಿಸಿದವರಿಂದಲೇ ಕಲೆಯ ವಿಕಸನ ಸಾಧ್ಯವಾಗಿದೆ. ಜೀವನದ ಈ ರೀತಿಯ ಆಯಾಮವನ್ನು ಕಾಣಿಸುವ ಕಲಾ ಸಾಧಕರಲ್ಲಿ ಡಾ. ಲಕ್ಷ್ಮೀ ರೇಖಾ ಅರುಣ್ ಒಬ್ಬರು. ಶಾಲೆ ಕಾಲೇಜಿನ ವಿದ್ಯಾರ್ಥಿ ಜೀವನವು ದಂತ ವೈದ್ಯಕೀಯ ಪದವಿಯೆಡೆಗೆ ಕೊಂಡೊಯ್ದರೂ ಕಲೆಯ…

Read More

ಅಗಲ್ಪಾಡಿ: ಕಾಸರಗೋಡಿನ ಪ್ರಖ್ಯಾತ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಅಗಲ್ಪಾಡಿಯಲ್ಲಿ ‘ಕಾಸರಗೋಡು ಕನ್ನಡ ಹಬ್ಬ’ದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ದಿನಾಂಕ 30-06-2023 ರಂದು ಅಗಲ್ಪಾಡಿಯ ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಅಗಲ್ಪಾಡಿಯ ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಎ.ಜಿ.ಶರ್ಮರು ದೀಪ ಬೆಳಗಿಸಿ ಕಾಸರಗೋಡು ಕನ್ನಡ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕವಿ, ಸಾಹಿತಿ, ಜನಪ್ರಿಯ ವೈದ್ಯ ಡಾ. ರಮಾನಂದ ಬನಾರಿಯವರು “ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಹೊಸತನದ ಆಕರ್ಷಣೀಯ ಕಾರ್ಯಕ್ರಮಗಳು ಬೇಕು. ಹಳ್ಳಿ ಹಳ್ಳಿಗಳಲ್ಲಿ ಚಟುವಟಿಕೆಗಳು ವಿಸ್ತರಣೆಯಾಗಬೇಕು. ಕನ್ನಡದ ಪ್ರೀತಿ ಇರುವವರೆಲ್ಲ ಕೈಜೋಡಿಸಬೇಕು. ಹೆಚ್ಚು ಹೆಚ್ಚು ಜನರ ಒಳಗೊಳ್ಳುವಿಕೆಯಿಂದ ಈ ಕನ್ನಡದ ಬೇರುಗಳು ಬಲವಾಗುತ್ತವೆ. ಕಾಸರಗೋಡು ಚಿನ್ನಾ ಅವರು ಕನ್ನಡದ ಜೀವಂತಿಕೆಗೆ ನೀಡಿದ ಕೊಡುಗೆ ಅನುಕರಣೀಯ” ಎಂದು ನುಡಿದರು. ಶ್ರೀ ಕಾಸರಗೋಡು ಚಿನ್ನಾ ಹಾಗೂ…

Read More