Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುವ ‘ಜನಪದ’ ದೇಶೀಯ ಕಲೆಗಳ ಕಾರ್ಯಾಗಾರ ಸರಣಿ 11, 12, 13 ಮತ್ತು 14ನ್ನು ದಿನಾಂಕ 18-04-2024ರಿಂದ 21-04-2024ರವರೆಗೆ ಬೆಳಗ್ಗೆ 9-30ರಿಂದ ಸಂಜೆ 5ರ ತನಕ ಉಡುಪಿ ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿ’ಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 18-04-2024ರಂದು ಕೋಹ್ಬಾರ್ ಚಿತ್ರಕಲೆ, ದಿನಾಂಕ 19-04-2024ರಂದು ಟಿಕುಲಿ ಚಿತ್ರಕಲೆ, ದಿನಾಂಕ 20-04-2024ರಂದು ಜಾಲಿ ಫ್ರೇಂ ಮತ್ತು ದಿನಾಂಕ 21-04-2024ರಂದು ಮಂಜೂಷಾ ಚಿತ್ರಕಲೆ ಎಂಬ ಕಲೆಗಳ ಬಗ್ಗೆ ಕಲಾವಿದರಾದ ಶ್ರೀ ಶ್ರವಣ್ ಪಾಸ್ವಾನ್ ಮತ್ತು ಶ್ರೀ ಪವನ್ ಕುಮಾರ್ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ಕಾರ್ಯಾಗಾರದ ನೋಂದಣಿಗಾಗಿ ಡಾ. ಜನಾರ್ದನ ಹಾವಂಜೆ (9845650544)ಯವರನ್ನು ಸಂಪರ್ಕಿಸಬಹುದು. ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಸಂಜೆ ಗಂಟೆ 4-00ರಿಂದ 6-00ರ ತನಕ ನಡೆಯಲಿದೆ.
ಕುಂದಾಪುರ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದವು ಧಮನಿ ಹಾಗೂ ಧಿಮ್ಸಾಲ್ ಸಹಕಾರದೊಂದಿಗೆ ಆಯೋಜಿಸಿದ ‘ಯಕ್ಷ ಗಾನ ವೈಭವ’ ಕಾರ್ಯಕ್ರಮವು ದಿನಾಂಕ 12-04-2024 ರಂದು ಕುಂದಾಪುರ ವಿಶ್ವಕರ್ಮ ಸಭಾಂಗಣದಲ್ಲಿ ನಡೆಯಿತು. ಪವನ್ ಆಚಾರ್ಯ ಇವರ ಉಪನಯನ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಟುವಿಗೆ ಗೌರವಿಸಿ ಮಾತನಾಡಿದ ಪ್ರಸಿದ್ಧ ಹಿರಿಯ ಭಾಗವತ ಹೆಮ್ಮಾಡಿ ಪ್ರಭಾಕರ ಆಚಾರ್ “ಶ್ವೇತಯಾನವು ಅದ್ಭುತವಾಗಿ ನೆರವೇರುತ್ತಿದೆ. ಇದು ವಿಶ್ವವ್ಯಾಪಿಯಾಗಿ ಬೆಳಗಲಿ. ಪುಟಾಣಿಗಳ ತಂಡವೊಂದು ತೆಕ್ಕಟ್ಟೆ ಭಾಗದಲ್ಲಿ ಕೆ. ಪಿ. ಹೆಗಡೆ, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆಯವರ ಗರಡಿಯಲ್ಲಿ ಸಿದ್ಧಗೊಂಡು ಸಮಾಜದ ಮಾನ್ಯತೆ ಪಡೆದಿದೆ. 25ರ ಬೆಳ್ಳಿ ಹಬ್ಬದ ಈ ಯಾನವು ನಿರ್ವಿಘ್ನವಾಗಿ ನೆರವೇರಲಿ. ಹೆಚ್ಚು ಹೆಚ್ಚು ಕಲಾ ಪೋಷಕರ ಬಳಗ ಸಂಸ್ಥೆಗೆ ಲಭಿಸಲಿ.” ಎಂದು ಹಾರೈಸಿದರು. ಗುರುಗಳಾದ ಸೀತಾರಾಮ ಶೆಟ್ಟಿ ಕೊಯಿಕೂರು, ಶ್ರೀಮತಿ ಪೂರ್ಣಿಮಾ ಹಾಗು ಶ್ರೀ ಸುರೇಶ್ ಆಚಾರ್ಯ, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ರಾಹುಲ್ ಕೊಮೆ, ಪೂಜಾ ಆಚಾರ್, ಹರ್ಷಿತಾ ಅಮೀನ್,…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ), ಸುರತ್ಕಲ್ಗಳ ವತಿಯಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉದಯರಾಗ – 52 ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮವು ದಿನಾಂಕ 07-04-2024ರಂದು ಸುರತ್ಕಲ್ ಫ್ಲೈಓವರ್ ಕೆಳಗಡೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುರತ್ಕಲ್ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಯೋಗೀಶ್ ಕುಳಾಯಿ ಮಾತನಾಡಿ “ಸಾಮಾಜಿಕ ಸೇವಾ ಸಂಸ್ಥೆಗಳು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಭಾರತೀಯ ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸಬೇಕು.” ಎಂದರು. ಸುರತ್ಕಲ್ ನಾಗರಿಕ ಸಲಹಾಸಮಿತಿಯ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ರಾವ್, ಸುರತ್ಕಲ್ ರೋಟರಿ ಕ್ಲಬ್ ಇದರ ಕಾರ್ಯದರ್ಶಿ ರಮೇಶ್ ರಾವ್ ಎಂ. ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಸ್ಟರ್ ಆಕಾಶ್ಕೃಷ್ಣ ವೇಣೂರು ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ವಯೋಲಿನ್ನಲ್ಲಿ ಸುನಾದ ಪಿ.ಎಸ್. ಮಾವೆ,…
ತೆಕ್ಕಟ್ಟೆ : ತೆಕ್ಕಟ್ಟೆ ಶಿಶುಮಂದಿರದ ಬಳಿಯ ಪ್ರಕೃತಿ ವಾತಾವರಣದಲ್ಲಿ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ದಿಮ್ಸಾಲ್ ಕ್ರಿಯೇಷನ್ಸ್ ಸಂಸ್ಥೆಗಳ ಆಶ್ರಯದಲ್ಲಿ ‘ರಜಾರಂಗು-24’, ಮೊಬೈಲ್ ಮುಕ್ತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 11-04-2024ರಂದು ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಖ್ಯಾತ ರಂಗ ನಿರ್ದೇಶಕ ಶ್ರೀಪಾದ ಭಟ್ ಮಾತನಾಡಿ “ದೀಪ ಹಚ್ಚುವುದು ಬಹಳ ಕಷ್ಟ. ತಿಂಗಳುಗಟ್ಟಲೆ ಎಲ್ಲವರೂ ಸೇರಿಕೊಂಡು ಯೋಚಿಸಬೇಕು, ಮಕ್ಕಳನ್ನು ಕ್ರೋಡೀಕರಿಸುವುದಕ್ಕೆ ಪಾಲಕರನ್ನು ಒಪ್ಪಿಸಬೇಕು, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿಸಿಕೊಳ್ಳಬೇಕು, ಕಾರ್ಯಕ್ರಮದ ಬಗೆಗಿನ ಆತಂಕಗಳನ್ನು ಎದುರಿಸಬೇಕು, 25ದಿನಗಳು ತೊಂದರೆ ಆಗದ ರೀತಿಯಲ್ಲಿ ಪ್ರತೀ ದಿನವೂ ಕಷ್ಟ ಪಡಬೇಕು, ದೀಪ ಆರದಂತಿರಲು ಭಯ ಪಡಬೇಕು. ಆದರೆ ಬೆಂಕಿ ಹಚ್ಚುವುದು ಬಹಳ ಸುಲಭ. ಯಾವುದೋ ಮೂಲೆಯಲ್ಲಿ ನಿಂತು ಒಂದು ಕಡ್ಡಿ ಕೀರಿದರೆ ಸಾಕಾಗುತ್ತದೆ. ಅದಕ್ಕಾಗಿ ಬೆಂಕಿ ಹಚ್ಚುವುದು ಬಹಳ ಸುಲಭ, ದೀಪ ಹಚ್ಚುವುದು ಬಹಳ ಕಷ್ಟ. ಈ ದೀಪ ಹಚ್ಚುವ ಕಷ್ಟದ ಕಾಯಕವನ್ನು ಅನೇಕ ವರ್ಷಗಳಿಂದ ಸಂಸ್ಥೆ ನಡೆಸಿಕೊಂಡು…
ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಇದರ ಸಹಕಾರದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 06-04-2024ರ ಸಂಜೆ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಂಗೀತ ಗುರುಗಳಾದ ವಿದುಷಿ ಸುಮಾ ಸತೀಶ್ ರಾವ್ ಮಾತನಾಡಿ “ಮಕ್ಕಳು ನಿರ್ದಿಷ್ಟ ಆಸಕ್ತಿಯ ಕಲಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಾಧನೆ ನಡೆಸಬೇಕು.” ಎಂದರು. ಸಭಾ ಕಾರ್ಯಕ್ರಮದ ಬಳಿಕ ಚಿನ್ಮಯಿ ಮನೀಶ್ ಚಾಲಕುಡಿಯವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.ಇವರಿಗೆ ವಯಲಿನ್ ನಲ್ಲಿ ಸುನಾದ ಪಿ ಎಸ್ ಮಾವೆ, ಮೃದಂಗದಲ್ಲಿ ನಿಕ್ಷಿತ್ ಪುತ್ತೂರು ಹಾಗೂ ಖಂಜೀರದಲ್ಲಿ ಕಾರ್ತಿಕ್ ಭಟ್ ಇನ್ನಂಜೆ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ : ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರವು ದಿನಾಂಕ 14-04-2024ರ ಭಾನುವಾರದಂದು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಂಡಿತು. ಇದೇ ಸಂದರ್ಭದಲ್ಲಿ ವೀಣೆ ಹಾಗೂ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ವಿದುಷಿ ಪವನಾ ಬಿ. ಆಚಾರ್ ಇವರಿಗೆ ‘ಕಲಾ ಸಿಂಧು’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು “ಕಲೆಯ ಬಗೆಗಿನ ಪಾರಂಪರಿಕ ಜ್ಞಾನವನ್ನು ಮಕ್ಕಳೆಲ್ಲ ಅರಿತಾಗ ಮಾತ್ರ ನಮ್ಮ ಶರೀರ ಮತ್ತು ಮನಸ್ಸು ನೆಮ್ಮದಿಯಿಂದಿರುತ್ತದೆ. ಕೇಳುವ ಮತ್ತು ನೋಡುವ ಹಸಿವನ್ನು ಚಿಣ್ಣರು ಬೆಳೆಸಿಕೊಳ್ಳಬೇಕು.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಯು. ವಿಶ್ವನಾಥ ಶೆಣೈಯವರು ತಾವು ನಡೆದು ಬಂದ ದಾರಿಯನ್ನು ಮಕ್ಕಳಿಗೆ ವಿವರಿಸುತ್ತ ಚಿಣ್ಣರ ಶಿಬಿರವು ಹೇಗೆ ಮಕ್ಕಳ ಬದುಕನ್ನು ಹಸನಾಗುವಂತೆ ರೂಪಿಸಬಲ್ಲುದು ಎಂಬುದಾಗಿ ವಿವರಿಸಿದರು. ಇನ್ನೋರ್ವ ಅತಿಥಿಗಳಾದ ಆನಂದ ಕಾರ್ನಾಡ್ ಮಾತನಾಡಿ “ಸ್ವಚ್ಚಂದದ…
ಮಂಗಳೂರು : ತುಳುಕೂಟ ಕುಡ್ಲ ಸಂಸ್ಥೆ ಆಯೋಜಿಸಿದ ‘ತುಳುವೆರೆ ಬಿಸು ಪರ್ಬ ಸಂಭ್ರಮೊ’ ಕಾರ್ಯಕ್ರಮವು ದಿನಾಂಕ 14-04-2024ರಂದು ಮಂಗಳೂರಿನ ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕ.ಸಾ.ಪ. ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ತೌಳವರ ಆಚರಣೆಗಳು, ಆಚಾರ- ವಿಚಾರಗಳು, ಪ್ರಾಚೀನವಾದುದು. ಹಬ್ಬಹರಿದಿನ, ಸಂಸ್ಕೃತಿ ಸಂಸ್ಕಾರಗಳು ನಿತ್ಯವೋ ಎಂಬಂತೆ ನಡೆಯುತ್ತಿದೆ. ದಿನ – ವಾರ – ನಕ್ಷತ್ರ ಎಲ್ಲವೂ ತುಳುವರ ಪಾಲಿಗೆ ಶುಭವಾಗಿಯೇ ಇರುತ್ತದೆ. ಅಂತೆಯೇ ಈ ವಿಷು ಹಬ್ಬ ಕೂಡಾ. ಹಬ್ಬಗಳಿಗೆ ಆದಿಯಾಗಿ ಸೌರಮಾನ ಯುಗಾದಿಯನ್ನು ವಿಷುಕಣಿ ಉತ್ಸವವಾಗಿ ಆಚರಿಸುತ್ತೇವೆ. ಇಂದು ನಡೆವ ಶುಭಸಂಗತಿಗಳು ವರ್ಷಪೂರ್ತಿ ನಡೆಯುತ್ತವೆ ಎಂಬ ನಂಬಿಕೆ. ತುಳುಕೂಟ ಈ ಬಿಸು ಪರ್ಬವನ್ನು ಆಚರಿಸಿ ಜನರನ್ನು ಜಾಗ್ರತಗೊಳಿಸುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ. ಕ್ರೋಧಿ ನಾಮ ಸಂವತ್ಸರ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ.” ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮರೋಳಿ ಬಿ. ದಾಮೋದರ ನಿಸರ್ಗ ಮಾತನಾಡಿ “ಕೃಷಿ ಹಾಗೂ ಸಂಸ್ಕೃತಿ ನಮ್ಮ ತುಳುವರ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಮೂರು ಪ್ರಮುಖ ದತ್ತಿಗಳಾದ ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ, ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಮತ್ತು ಪಂಕಜಶ್ರೀ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮವು ದಿನಾಂಕ 13-04-2024ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಭಾಷೆ ಮತ್ತು ಸಂಸ್ಕೃತಿಯ ಅಡಿಪಾಯದ ಮೇಲೆ ಬೆಳೆಯುತ್ತಿರುವ ವಿಶ್ವದಲ್ಲಿಯೇ ವಿರಳವೆನ್ನಿಸ ಬಹುದಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ನೆಲೆಗಳಲ್ಲಿಯೂ ಕನ್ನಡವನ್ನು ಬೆಳೆಸುವ ಮತ್ತು ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರ ಬದ್ದತೆ ಮತ್ತು ನಿಷ್ಟೆಗಳನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಅವರು ಹಾಕಿದ ಭದ್ರ ಬುನಾದಿಯಿಂದಲೇ ಪರಿಷತ್ತು ಇಷ್ಟು ಮಹತ್ವದ್ದಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾದ ಎಚ್. ವಿ. ನಂಜುಂಡಯ್ಯನವರು ಮೊಟ್ಟ ಮೊದಲ…
ಕಾಸರಗೋಡು : ಬೀರಂತಬೈಲು ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಸಂಸ್ಥೆ ಹಾಗು ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿಯಾಗಿ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಆಯೋಜಿಸಿದ ‘ಕೇರಳ – ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕಂತಿಕ ಉತ್ಸವ’ ದಿನಾಂಕ 11-04-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು “ದಿನದಿಂದ ದಿನಕ್ಕೆ ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಅಸ್ತಿತ್ವ ತೆರೆಮರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತೀಯೊಬ್ಬ ಕನ್ನಡಿಗನೂ ಕಂಕಣಬದ್ಧರಾಗಬೇಕು. ಸಾಹಿತ್ಯ ಹಾಗೂ ಕಲೆಗಳಿಂದ ನಮ್ಮ ಸಂಸ್ಕೃತಿಯ ಸಂವರ್ಧನೆ ಮತ್ತು ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕನ್ನಡ ಪರ ಚಟುವಟಿಕೆಗಳು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಹಾಗು ಅನುಕರಣೀಯವಾಗಿದೆ.” ಎಂದು ಹೇಳಿದರು. ಕಾಯಕ್ರಮವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ದೀಪ ಪ್ರಜ್ವಲನಗೈದು ಉದ್ಘಾಟಿಸಿದರು.…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 15-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಿತಿ ವಿ. ರಾವ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅದಿತಿ ವಿ. ರಾವ್ ಇವರು ಕರ್ನಾಟಕ ಕಲಾಶ್ರೀ ಡಾ. ಸುಪರ್ಣಾ ವೆಂಕಟೇಶ್ ಇವರಿಂದ 15 ವರ್ಷಗಳಿಂದ ಭರತನಾಟ್ಯದಲ್ಲಿ ತರಬೇತಿ ಪಡೆಯುತ್ತಿದ್ದು, ಶ್ರೀಮತಿ ಶ್ವೇತಾ ವೆಂಕಟೇಶ್ ಇವರಿಂದ ಕಥಕ್ ತರಬೇತಿ ಪಡೆಯುತ್ತಿದ್ದಾರೆ. ಕಂಸಾಳೆ, ಕೋಲಾಟ, ಕರಗ, ಪಟ್ಟದಕುಣಿತ, ಡೊಳ್ಳು ಕುಣಿತ, ಘೂಮರ್ಮತ್ತು ಇತರ ಹಲವು ಪ್ರಕಾರಗಳ ಜಾನಪದ ನೃತ್ಯದ ಅನುಭವ ಹೊಂದಿರುತ್ತಾರೆ. ಭರತನಾಟ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ಹಾಗೂ ಕಥಕ್ ಜೂನಿಯರ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದು, ಭರತನಾಟ್ಯ ಪ್ರದರ್ಶನ ಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ದಿನಾಂಕ 21-05-2022ರಂದು…