Subscribe to Updates
Get the latest creative news from FooBar about art, design and business.
Author: roovari
ಮಿಜಾರು : ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನಂ’ ಕಾರ್ಯಕ್ರಮವು ದಿನಾಂಕ : 24-06-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿ, ನಿವೃತ್ತ ಪ್ರಾಚಾರ್ಯ, ಬೆಂಗಳೂರಿನ ಎಸ್. ವ್ಯಾಸ ಇದರ ನಿವೃತ್ತ ಡೀನ್ ಪ್ರೊ. ಗೋಪಾಲಕೃಷ್ಣ ಎನ್. ಭಟ್ ಇವರು “ನಮ್ಮನ್ನು ನಾವು ಮೊದಲು ಅರಿತುಕೊಳ್ಳಬೇಕು. ಜ್ಞಾನಾಭಿವೃದ್ಧಿಗೆ ಸ್ವಯಂ ಅನಾವರಣ ಮಾಡಬೇಕು. ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗೆ ಗಮನ ಹರಿಸುವ ಬದಲು, ನಮ್ಮ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರಿತಾಗ ಮಾತ್ರ ಹೊರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ. ಓಂ ಉಚ್ಛಾರ, ಧ್ಯಾನ ಹಾಗೂ ಯೋಗದಿಂದ ಹಲವು ರೋಗ ಮುಕ್ತಿ ಸಾಧ್ಯ. ಪುರಾತನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು” ಎಂದು ಹೇಳಿದರು. ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ…
ಉಪ್ಪಳ : ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು (ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಐದನೇ ದಿನದ ಕಾರ್ಯಕ್ರಮ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾಭವನದಲ್ಲಿ ತರುಣ ಕಲಾ ವೃಂದ ಐಲ ಸಂಘಟನೆಯ ಪ್ರಾಯೋಜಕತ್ವದಲ್ಲಿ ದಿನಾಂಕ : 28-06-2023ರಂದು ಜರಗಿತು. ಐಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ದೀಪ ಬೆಳಗಿಸಿ ಹಬ್ಬವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶ್ರೀಯುತರು “ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸುವಲ್ಲಿ ಇಂತಹ ಕನ್ನಡ ಹಬ್ಬಗಳ ಅಗತ್ಯ ಹಿಂದಿನದಕ್ಕಿಂತ ಇಂದು ಅಧಿಕವಾಗಿದೆ. ಕಾಸರಗೋಡಿನ ಕನ್ನಡಿಗರು ತಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ನಿತ್ಯ ಸಮರ್ಪಣಾಭಾವದಿಂದ ಕನ್ನಡದ ಕೆಲಸವನ್ನು ಮಾಡಬೇಕಿದೆ. ಕಾಸರಗೋಡು ಚಿನ್ನಾರ ನೇತೃತ್ವದ ರಂಗಚಿನ್ನಾರಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದಿರುವ ಕನ್ನಡದ ಸೇವೆ ಎಲ್ಲರಿಗೂ ಅನುಕರಣೀಯ” ಎಂದರು. ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ರೋಟರಿ ಕ್ಲಬ್ ಮಣಿಪಾಲ ಹಾಗೂ ಮಣಿಪಾಲ ಮಹಿಳಾ ಸಮಾಜ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಕಾವ್ಯಕನ್ನಿಕಾ’ ಮಹಿಳಾ ಕಾವ್ಯದ ನೃತ್ಯಾಭಿವ್ಯಕ್ತಿ ಕಾರ್ಯಕ್ರಮವನ್ನು ದಿನಾಂಕ 02-06-2023ರ ಭಾನುವಾರ ಬೆಳಗ್ಗೆ 10ರಿಂದ 11.30ರವರೆಗೆ ಉಡುಪಿಯ ಕುಂಜಿಬೆಟ್ಟಿನ ಬುಡ್ನಾರು ರಸ್ತೆಯಲ್ಲಿರುವ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಕೆ.ಎಸ್. ಪವಿತ್ರ ಅವರಿಂದ ಕನ್ನಡ ಕವಯತ್ರಿಯರಾದ ಅಕ್ಕಮಹಾದೇವಿ, ವೈದೇಹಿ, ಕಮಲಾ ಹಂಪನ ಮತ್ತು ಪ್ರತಿಭಾ ನಂದಕುಮಾರ್ ಮೊದಲಾದವರ ಕವಿತೆಗಳನ್ನು ಆಧರಿಸಿದ ಉಪನ್ಯಾಸ ಪ್ರಾತ್ಯಕ್ಷಿಕೆ ಇದಾಗಿದೆ. ಈ ಕಾರ್ಯಕ್ರಮವನ್ನು ಪ್ರಸಿದ್ಧ ಯಕ್ಷಗಾನ ಗುರುಗಳಾದ ಶ್ರೀ ಬನ್ನಂಜೆ ಸಂಜೀವ ಸುವರ್ಣ ಇವರು ಉದ್ಘಾಟಿಸಲಿದ್ದು, ಉಡುಪಿಯ ನೃತ್ಯ ಮತ್ತು ಚಿತ್ರಕಲಾವಿದರಾದ ಶ್ರೀಮತಿ ಪ್ರವೀಣ ಮೋಹನ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಶ್ರೀ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾದ ಪ್ರೊ. ಶಂಕರ್, ಮಣಿಪಾಲ ಮಹಿಳಾ ಸಮಾಜದ ಅದ್ಯಕ್ಷರಾದ ಡಾ. ಸುಲತಾ ಭಂಡಾರಿ ಹಾಗೂ ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷರಾದ ಶ್ರೀಪತಿ…
ಬೆಂಗಳೂರು: ಮಧುರತರಂಗ (ರಿ) ದ.ಕ. ಮಂಗಳೂರು ಪ್ರಸ್ತುತಪಡಿಸುವ ಸಂಗೀತ ಕ್ಷೇತ್ರದ ಗಾಯನ ಜೀವನದ ಐದು ದಶಕಗಳನ್ನು ಪೂರೈಸಿದ ಹೊಸ್ತಿಲಲ್ಲ ‘ಸ್ವರಕಂಠೀರವ’ (ಡಾ. ರಾಜ್ ಸವಿನೆನಪು) ಕಾರ್ಯಕ್ರಮವು ದಿನಾಂಕ : 01-07-2023ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಶ್ರೀ ಜಗದೀಶ್ ಶಿವಪುರ ನಿರ್ವಹಿಸಲಿದ್ದು ಪ್ರಜಾವಾಣಿ ಕಾರ್ಯನಿರ್ವಾಹಕ ಮತ್ತು ಸಂಪಾದಕರಾದ ಶ್ರೀ ರವೀಂದ್ರ ಭಟ್ಟ ಶುಭಾಶಂಸನೆ ಗೈಯ್ಯಲಿದ್ದಾರೆ . ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿಯ ನಗರಸಭಾ ಸದಸ್ಯೆಯಾದ ಶ್ರೀಮತಿ ಮಾನಸ ಚಿದಾನಂದ ಪೈ ನೆರವೇರಿಸಲಿದ್ದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಎಸ್. ಕಲ್ಕೂರ ಕನ್ನಡ ಭುವನೇಶ್ವರಿಗೆ ‘ಪುಷ್ಪಾಂಜಲಿ’ ಸಲ್ಲಿಸಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರುಗಳಾದ ಶ್ರೀ ವಿ. ಮನೋಹರ್ ಹಾಗೂ ಶ್ರೀ ಮಣಿಕಾಂತ್ ಕದ್ರಿ ವರನಟರ ಭಾವಚಿತ್ರಕ್ಕೆ ‘ಪುಷ್ಪಾಂಜಲಿ’ ಸಲ್ಲಿಸಲಿದ್ದಾರೆ ಹಾಗೂ ಹಿರಿಯ ಕಲಾ ಸಾಹಿತಿ ಶ್ರೀ ಹೆಚ್. ಜನಾರ್ದನ ಹಂದೆ ಚಂಪುಕಾವ್ಯ ಪ್ರಸ್ತುತಪಡಿಸಲಿದ್ದಾರೆ. ಗಾಯಕಿಯಾದ ಶ್ರೀಮತಿ ಸುಮ…
ಮಂಗಳೂರು : ವಿಜಯ ಕರ್ನಾಟಕ ಮತ್ತು ಸಂಗೀತ ಭಾರತಿ ಪ್ರತಿಷ್ಠಾನವು ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣವನ್ನು ದಿನಾಂಕ : 01-07-2023ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದೆ. ನಾಲ್ಕು ಆವೃತ್ತಿಯಲ್ಲಿ ಯಶಸ್ವಿಯಾಗಿದ್ದ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮಕ್ಕೆ ಮತ್ತೆ ವೇದಿಕೆ ಸಜ್ಜಾಗಿದೆ. ಸಂಜೆ 5 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಹಾಗೂ ಕರ್ಣಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಪಂಡಿತ್ ಆನಂದ್ ಭಾಟೆ ಮತ್ತು ವಿದುಷಿ ಭಾಗ್ಯಶ್ರೀ ದೇಶಪಾಂಡೆ ಅವರ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ವಿದುಷಿ ಭಾಗ್ಯಶ್ರೀ ದೇಶಪಾಂಡೆ ಪಂಡಿತ್ ಆನಂದ್ ಭಾಟೆ ಬೋಲಾವ ವಿಠಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾಸಕ್ತರು ನಗರದ ಎಂ.ಜಿ. ರಸ್ತೆಯಲ್ಲಿರುವ ಬಲ್ಲಾಳ್ ಬಾಗ್ ನ ಕಾಯರ್ ಮಂಚ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ವಿಜಯ ಕರ್ನಾಟಕ ಅಥವಾ ಕೊಡಿಯಾಲ್ಬೈಲ್ನಲ್ಲಿರುವ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸನ್ನು ಜೂನ್ 28ರಿಂದ ಪಡೆದುಕೊಳ್ಳಬಹುದು. ಪಾಸ್ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.…
ಸುಳ್ಯ : ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ಸುಳ್ಯ ಶಾಖೆಯ ವಾರ್ಷಿಕ ನೃತ್ಯೋತ್ಸವ ‘ಆರೋಹಣ 2023’ ಕಾರ್ಯಕ್ರಮವು ಸುಳ್ಯದ ರಂಗ ಮನೆಯಲ್ಲಿ ಮೇ 27 ಶನಿವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಕಿರಿಯ ಹಿರಿಯ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಿ ಜೊತೆಗೆ ಮಂಗಳೂರು ಶಾಖೆಯ ಮಾಧ್ಯಮಿಕ ಹಂತದ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನವು ನಡೆಯಿತು. ಸುಳ್ಯದಂತಹ ಪ್ರದೇಶದಲ್ಲಿ ಭರತನಾಟ್ಯದಂತಹ ಕಲೆಯನ್ನು ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ವೇದಿಕೆಯೇರಲು ಅವಕಾಶ ನೀಡಿದ್ದು ಶ್ಲಾಘನೀಯ. ಪ್ರಥಮ ಬಾರಿ ವೇದಿಕೆ ಏರಿದ ಪುಟಾಣಿ ಕಲಾವಿದೆಯರ ಜೊತೆಗೆ ಮಾಧ್ಯಮಿಕ ಹಂತದ ಕಲಾವಿದೆಯರ ನೃತ್ಯ ಕಾರ್ಯಕ್ರಮವು ಅತ್ಯಂತ ಮನೋಜ್ಞವಾಗಿ ಮೂಡಿ ಬಂತು. ಜೊತೆಗೆ ಕರ್ನಾಟಕ ಸರಕಾರದಿಂದ ನಡೆಸಲ್ಪಟ್ಟ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು. ನೃತ್ಯ ಗುರುಗಳ ಪೋಷಕರಾದ ಶ್ರೀಮತಿ ಜಯಲಕ್ಷ್ಮಿ ಭಟ್ ಹಾಗೂ ಪದ್ಮನಾಭ ಭಟ್ ದಂಪತಿಗಳ ವತಿಯಿಂದ ದತ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ಜೊತೆಗೆ ಸುಳ್ಯ ಶಾಖೆಯ ಸಹ ಶಿಕ್ಷಕಿಯರಾದ ವಿದುಷಿ ಅಂಕಿತಾ ರೈ,…
ಮಂಗಳೂರು: ನಗರದ ಚಿಲಿಂಬಿಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಯಕ್ಷಕಲಾ ಬಳಗದ ವತಿಯಿಂದ ಸುಮಾರು 60 ವರ್ಷಗಳ ಹಿಂದೆ ನಡೆಯುತ್ತಿದ್ದ ‘ಸೀನು ಸೀನರಿಯ ಯಕ್ಷಗಾನ’ದ ಪ್ರದರ್ಶನ ಜುಲೈ 3ರಂದು ಸಂಜೆ 5ರಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ಆರು ದಶಕಗಳ ಪೂರ್ವದಲ್ಲಿ ಮಂಗಳೂರು ಕೇಂದ್ರ ಮೈದಾನದಲ್ಲಿ ಕರ್ನಾಟಕ ಯಕ್ಷಗಾನ ಸಭಾ ವತಿಯಿಂದ ಟೆಂಟ್ ಹಾಕಿ ವರ್ಷವಿಡೀ ಸೀನು ಸೀನರಿಯ ಯಕ್ಷಗಾನ ನಡೆಯುತ್ತಿತ್ತು. ಬಹಳ ಯಶಸ್ವಿಯಾಗಿ ನಡೆಯುತ್ತಿದ್ದ ಆ ಯಕ್ಷಗಾನ ಪ್ರದರ್ಶನ 60 ವರ್ಷಗಳ ಬಳಿಕ ಹೊಸ ಸ್ವರೂಪದಲ್ಲಿ ಪ್ರದರ್ಶನವಾಗಲಿದೆ. ಸುಮಾರು 15 ನಿಮಿಷಗಳ ಸಭಾ ಕಾರ್ಯಕ್ರಮದ ಬಳಿಕ ‘ಶ್ವೇತಕುಮಾರ ಚರಿತ್ರೆ’ ಯಕ್ಷ ನಾಟಕ ವಿನೂತನ ರೀತಿಯಲ್ಲಿ ಪ್ರದರ್ಶನ ಕಾಣಲಿದೆ. ಸಾಯಿಶಕ್ತಿ ಕಲಾ ಬಳಗದ ಸಂಚಾಲಕ ವಿಶ್ವಾಸ್ ಕುಮಾರ್ದಾಸ್ ದಂಪತಿ ಈ ಅಪೂರ್ವ ಕಾರ್ಯಕ್ರಮ ಸಂಯೋಜಿಸಿದ್ದಾರೆ. ಯಕ್ಷಗಾನದ ವೇಷಭೂಷಣ, ಮಾತು ಮತ್ತು ಅಭಿನಯ ಎಲ್ಲವೂ ಯಕ್ಷಗಾನೀಯ ರೀತಿಯಲ್ಲಿಯೇ ಇರಲಿದೆ. ‘ಸೀನು ಸೀನರಿಯ’ ವಿವಿಧ ದೃಶ್ಯಾವಳಿಗಳನ್ನು ಒಳಗೊಂಡ ರಂಗಸ್ಥಳ ವಿಶೇಷ…
ಖ್ಯಾತ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರನ್ನು ಸುಮಾರು ಮೂರು ದಶಕಗಳ ಹಿಂದೆ ಎರಡು ಬಾರಿ ಕವಿಗೋಷ್ಠಿಗಳಲ್ಲಿ ಮುಖತಃ ಭೇಟಿಯಾದಾಗ ಸ್ವಪರಿಚಯ ಹೇಳಿಕೊಂಡಿದ್ದೆ. ನಾನಾಗ ಅಳುಕಿನ ಕೂಸು, ಕಿರಿಯ ಕವಯತ್ರಿ ಎಂಬ ತುಸು ಕೀಳರಿಮೆಯ ಭಾವ ಹೊಂದಿದವಳು ಆಗಿದ್ದೆ. ಆಗಿನ ಅವರ ವಿಶ್ವಾಸದ, ಪ್ರೋತ್ಸಾಹದ ನುಡಿಗಳಿಂದ ಅಳುಕು ಮಂಗಮಾಯವಾಗಿ ಆತ್ಮವಿಶ್ವಾಸದ ಮಟ್ಟ ಹೆಚ್ಚಿತ್ತಾದರೂ ಮುಂದೆ ಕಥಾ ಮಾಧ್ಯಮ ನನ್ನ ಆಯ್ಕೆಯಾಯಿತು. ಆಗೀಗ ಅವರ ಪ್ರಕಟಿತ ಕವನ, ಲೇಖನಗಳನ್ನು ಓದುತ್ತಾ ಬಂದಂತೆ ಚೊಕ್ಕಾಡಿಯವರ ಮೇಲಿನ ಗೌರವವು ಹೆಚ್ಚುತ್ತಲೇ ಹೋಯಿತು. ಇತ್ತೀಚೆಗೆ ಅವರ ಅಭಿನಂದನಾ ಗ್ರಂಥ ‘ಮುಕ್ತ ಹಂಸ’ (2006)ವನ್ನು ವಿವರವಾಗಿ ಓದತೊಡಗಿದಾಗ ಅದರ ಪುಟ ಪುಟಗಳೂ ಅವರ ಬಹುಮುಖೀ ವ್ಯಕ್ತಿತ್ವಕ್ಕೆ ಪುರಾವೆಗಳನ್ನು ಒದಗಿಸಿದವು. ಅವರು ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ ಎಂಬಂತೆ ಊರು ಪರವೂರುಗಳಲ್ಲಿ ಕನ್ನಡಕ್ಕಾಗಿ ಪರಿಪರಿಯಾಗಿ ಮಿಡಿದು, ದುಡಿದು ಇತರರಿಗೂ ಪ್ರೇರಕ ಶಕ್ತಿಯಾದ ನವಿರಾದ ವಿವರಗಳನ್ನು ಹೊತ್ತ ಹೊತ್ತಗೆಯದು. ಕವಿ ಚೊಕ್ಕಾಡಿಯವರ ಬಾಲ್ಯವೆಂದರೆ ಕಷ್ಟಕಾರ್ಪಣ್ಯಗಳ ಒಡನಾಟವೇ ಆಗಿತ್ತು. ಆದರೂ ಅವರ ಸ್ಪಂದನವು ಸಕಾರಾತ್ಮಕ…
ಮೂಡುಬಿದಿರೆ: ಕಳೆದ ನಲುವತ್ತನಾಲ್ಕು ವರುಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಕಾಂತಾವರ ಕನ್ನಡ ಸಂಘವು 2023ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹದ ಹಸ್ತ-ಪ್ರತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂ.10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿದೆ. ಆಸಕ್ತರು ಕನ್ನಡ ಸಂಘದ ಮೈಲ್ ಐಡಿ [email protected] ಅಥವಾ ಸಂಘದ ಅಧ್ಯಕ್ಷರು (99007 01666), ಪ್ರಧಾನ ಕಾರ್ಯದರ್ಶಿ (90089 78366) ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಸ್ತಪ್ರತಿ ಸ್ವೀಕಾರಕ್ಕೆ ಸೆಪ್ಟೆಂಬರ್ 01 ಕೊನೆಯ ದಿನ. ನವೆಂಬರ್ 01ರಂದು ಪ್ರಶಸ್ತಿ ಘೋಷಣೆ ಹಾಗೂ ಮಾಡಲಾಗುವುದು. ಕವಿ ಮುದ್ದಣ ಕಾವ್ಯ ಪ್ರಶಸ್ತಿ ಸ್ಪರ್ಧೆಯ ನಿಯಮಗಳು 1. ಪ್ರಕಾಶನಕ್ಕೆ ಸಿದ್ಧವಾಗಿರುವ, ಪತ್ರಿಕೆಗಳಲ್ಲಿ ಪ್ರಕಟವಾದ ಅಥವಾ ಆಗದೇ ಇರುವ ಕನಿಷ್ಠ 25 ಕವನಗಳುಳ್ಳ ಕವನ ಸಂಗ್ರಹದ ಹಸ್ತಪ್ರತಿಗೆ ಮಾತ್ರ ಅವಕಾಶ. 2. ಹನಿಗವನಗಳು, ಪ್ರಕಟಿತ ಕವನ ಸಂಗ್ರಹಗಳು, ಶಿಶುಗೀತೆಗಳು, ಖಂಡಕಾವ್ಯ, ಅನುವಾದಿತ ಕವನಗಳು, ಗಜಲ್ ಮತ್ತು ಭಾವಗೀತೆಗಳು ಸ್ಪರ್ಧೆಗೆ ಅರ್ಹವಾಗುವುದಿಲ್ಲ. 3. ಕನ್ನಡದ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ ಹಾಗೂ ಎಂ.ಜಿ.ಎಂ. ಕಾಲೇಜಿನ ಸಹಕಾರದೊಂದಿಗೆ ಉಡುಪಿ ಡಾ. ಉಪ್ಪಂಗಳ ರಾಮಭಟ್ಟ ಮತ್ತು ಶ್ರೀಮತಿ ಶಂಕರಿ ಆರ್. ಭಟ್ಟರ ಅಕಲಂಕ ದತ್ತಿ ಕಾರ್ಯಕ್ರಮ ‘ಅಕಲಂಕ ದತ್ತಿ ಪುರಸ್ಕಾರ 2022’ ಕಾರ್ಯಕ್ರಮವು ದಿನಾಂಕ :02-07-2023ರಂದು ಭಾನುವಾರ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಅಕಲಂಕ ದತ್ತಿ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಸಾಪದ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರು ವಹಿಸಲಿದ್ದು, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಇವರು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿಯವರು ಆಶಯ ಭಾಷಣ ಮಾಡಲಿದ್ದು, ಬೆಂಗಳೂರು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಎಮ್.ಎಲ್. ಸಾಮಗರವರು ಡಾ.ಕೆ.ಎಸ್. ಪವಿತ್ರ ಇವರಿಗೆ ‘ಅಕಲಂಕ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಉಡುಪಿಯ…