Author: roovari

ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ (ರಿ.) ಮಣಕಿ ಹಾಗೂ ಸತ್ವಾಧಾರ ಫೌಂಡೇಶನ್ (ರಿ.) ಸಂಕೊಳ್ಳಿ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 11 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಕುಮಟಾದ ದೀವಗಿ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಅಮೃತ ಸೋಮೇಶ್ವರ ವಿರಚಿತ ‘ತ್ರಿಪುರ ಮಥನ’ ಎಂಬ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ಶ್ರೀ ಶಂಕರ ಭಟ್ಟ ಬ್ರಹ್ಮೂರು ಮತ್ತು ಶ್ರೀ ಸರ್ವೇಶ್ವರ ಹೆಗಡೆ ಮೂರೂರು, ಮದ್ದಲೆಯಲ್ಲಿ ಶ್ರೀ ನಾಗರಾಜ ಭಂಡಾರಿ ಹಿರೇಬೈಲು ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ಡಾ. ಜಿ.ಎಲ್ ಹೆಗಡೆ ಕುಮಟಾ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಶ್ರೀ ಈಶ್ವರ ನಾಯ್ಕ ಮಂಕಿ, ಶ್ರೀ ಅಶೋಕ ಭಟ್ಟ ಸಿದ್ಧಾಪುರ, ಶ್ರೀ ಗುರುಪ್ರಸಾದ್ ಭಟ್ಟ ಮಾಡಗೇರಿ, ಶ್ರೀ ನಾಗೇಶ ಕುಳಿಮನೆ, ಶ್ರೀ ಸುಬ್ರಹ್ಮಣ್ಯ ಮೂರೂರು, ಶ್ರೀ ರಮಾಕಾಂತ ಮೂರೂರು ಹಾಗೂ ಸಹ ಕಲಾವಿದರು ಸಹಕರಿಸಲಿರುವರು.

Read More

ಬಂಟ್ವಾಳ : ಯಕ್ಷಗಾನದ  ಹಾಸ್ಯ ಕಲಾವಿದ, ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ ಅಂತರಗುತ್ತು ನಿವಾಸಿ ಮುನಿರಾಜ ಚೌಟ ಅವರ ಪುತ್ರ ವಿಶಾಲ್ ಜೈನ್ (ವಿ.ಕೆ.ಜೈನ್) ವಾಮದಪದವು ಅವರು ಅಲ್ಪ ಕಾಲದ ಅಸೌಖ್ಯದಿಂದ 04 ಆಗಸ್ಟ್ 2024 ರ ಭಾನುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 47ವರ್ಷ ವಯಸ್ಸಾಗಿತ್ತು. ವೃತ್ತಿಯಲ್ಲಿ ಚಾಲಕರಾಗಿದ್ದ ವಿಶಾಲ್‌ ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದರು. ಬಳಿಕ ಯಕ್ಷಗಾನ ಮೇಳದಲ್ಲಿ ವೃತ್ತಿಪರ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಬೆಂಕಿನಾಥೇಶ್ವರ ಮೇಳ, ಸಸಿಹಿತ್ತು ಮೇಳ, ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬಪ್ಪನಾಡು ಮೇಳದ ಕಲಾವಿದರಾಗಿದ್ದರು. ಯಕ್ಷಗಾನದ ಜತೆ ರಂಗಭೂಮಿಯಲ್ಲೂ ತನನ್ನು ತೊಡಗಿಸಿಕೊಂಡಿದ್ದ ಇವರು ‘ಮುಕ್ಕಾಲ್ ಮೂಜಿ ಘಳಿಗೆ’ ‘ಒರಿಯೊರಿ ಒಂಜೊಂಜಿ ತರ’ ಮುತ್ತು ‘ಕಂಬುಲದ ಕೋರಿ ಮೊದಲಾದ ನಾಟಕಗಳಲ್ಲಿ ಹಾಸ್ಯ ಪಾತ್ರ ಮಾಡಿದ್ದರು. ‘ಒರಿಯರ್ದ್ ಒರಿ ಅಸಲ್’ ಸಿನಿಮಾದಲ್ಲಿ ದೈವದ ಪಾತ್ರಿಯ ಪಾತ್ರ ನಿರ್ವಹಿಸಿದ್ದ ಇವರು ‘ಪೂರಾ ಪೊಕ್ಕಡೆ’ ಕಿರು ಚಿತ್ರದಲ್ಲಿ ನಟಿಸಿದ್ದರು. ಶ್ರೀಯುತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರನನ್ನು…

Read More

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ಮತ್ತು ಆರ್ಟ್ ಕೆನರಾ ಟ್ರಸ್ಟ್ ಇದರ ವತಿಯಿಂದ ಬೈಠಕ್ @ ಕೊಡಿಯಾಲ್‌ಗುತ್ತು ಕರ್ನಾಟಕ ಸಂಗೀತ ಪರಂಪರೆಯ ಸರಣಿ 6ಯ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಬಲ್ಲಾಳ್ ಭಾಗ್, ಜಿ.ಜಿ. ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಕೊಳಲು ವಾದಕ ಶ್ರೀ ಕಿರಣ್ ಚಂದ್ರಶೇಖರ್ ಹೆಗಡೆ ಇವರ ಕೊಳಲು ವಾದನಕ್ಕೆ ಭಾರವಿ ದೇರಾಜೆ ಇವರು ತಬಲಾ ಸಾಥ್ ನೀಡಲಿದ್ದಾರೆ.

Read More

ಮಂಗಳೂರು : ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಹಿರಿಯ ಪತ್ರಕರ್ತರು ಮತ್ತು ಲೇಖಕರಾಗಿರುವ ಡಾ. ನಾಗೇಶ್ ಪ್ರಭು ಅವರು ಮಂಗಳೂರಿನ ಕಲ್ಲಚ್ಚು ಪ್ರಕಾಶನದ 15ನೇ ಆವೃತ್ತಿಯ 2024ರ ಪ್ರತಿಷ್ಠಿತ ‘ಕಲ್ಲಚ್ಚು ಪ್ರಶಸ್ತಿ’ಗೆ ಆಯ್ಕೆಯಾಗಿದ್ದು ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಗಣ್ಯ ಆತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದೆಂದು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ತಿಳಿಸಿದ್ದಾರೆ. ಪ್ರಸ್ತುತ ಡಾ. ನಾಗೇಶ್ ಪ್ರಭು ‘ದಿ ಹಿಂದೂ’ ಪತ್ರಿಕೆಯ ಬೆಂಗಳೂರು ಕಛೇರಿಯಲ್ಲಿ ಹಿರಿಯ ಉಪ ಸಂಪಾದಕರಾಗಿದ್ದು ಈವರೆಗೆ ‘ರಿಫ್ಲೆಕ್ಟಿವ್ ಶಾಡೋಸ್: ಪೊಲಿಟಿಕಲ್ ಎಕಾನಮಿ ಆಫ್ ವರ್ಲ್ಡ್ ಬ್ಯಾಂಕ್ ಲೆಂಡಿಂಗ್ ಟು ಇಂಡಿಯಾ’, ‘ಮಧ್ಯಮ ವರ್ಗ, ಮಾಧ್ಯಮ ಮತ್ತು ಮೋದಿ: ದಿ ಮೇಕಿಂಗ್ ಆಫ್ ಎ ನ್ಯೂ ಎಲೆಕ್ಟೋರಲ್ ಪಾಲಿಟಿಕ್ಸ್’ ಮತ್ತು ‘ಧರ್ಮಸ್ಥಳ : ಅಭಿವೃದ್ಧಿಯ ಮಂತ್ರ’ ಎಂಬ ಮೂರು ಪ್ರಮುಖ ಇಂಗ್ಲೀಷ್ ಪುಸ್ತಕಗಳನ್ನು ಬರೆದು ಪ್ರಕಟಿಸಿರುವರು. ಮೂಲತಃ ಮಂಗಳೂರು ಬಳಿಯ ಒಡ್ಡೂರಿನವರಾದ ಡಾ. ಪ್ರಭು, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ…

Read More

ಕಾಸರಗೋಡು : ಯಕ್ಷಗಾನ ಕಲಾವಿದ ಕೀರಿಕ್ಕಾಡು ಮಾಸ್ತರ್ ಇವರ ಶಿಷ್ಯರೂ ಆಗಿದ್ದ ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 18ನೇ ವರ್ಷದ ಸಂಸ್ಮರಣೆಯು ದಿನಾಂಕ 10 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭ ದೇಲಂಪಾಡಿ ಮಹಾಲಿಂಗ ಪಾಟಾಳಿ ಮತ್ತು ಸೀತಮ್ಮನವರ ಸ್ಮರಣಾರ್ಥವಾಗಿ ಕೊಡಮಾಡುವ ದೇಲಂಪಾಡಿ ಮಹಾಲಿಂಗ ಪಾಟಾಳಿ – ಸೀತಮ್ಮ ಸ್ಮೃತಿ ಪುರಸ್ಕಾರವನ್ನು ನಾಡಿನ ಹಿರಿಯ ವೈದ್ಯರೂ, ಕಲಾವಿದರೂ, ಸಾಹಿತಿಗಳೂ ಆಗಿರುವ ಡಾ. ರಮಾನಂದ ಬನಾರಿಯವರಿಗೆ ಪ್ರದಾನ ಮಾಡಲಾಗುವುದು. ಶ್ರೀ ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾವಿದ, ನಿವೃತ್ತ ಮುಖ್ಯೋಪಾಧ್ಯಾಯ ದೇಲಂಪಾಡಿ ರಾಮಣ್ಣ ಮಾಸ್ತರ್‌ ವಹಿಸುವರು. ಲೇಖಕರು, ಕಲಾವಿದರು ಮತ್ತು ಉಪನ್ಯಾಸಕರಾಗಿರುವ ನಾರಾಯಣ ತೋರಣಗಂಡಿ ಸಂಸ್ಮರಣಾ ಭಾಷಣ ಮಾಡುವರು. ಸಭಾ ಕಾರ್ಯಕ್ರಮದ ನಂತರ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಸೀತಾಪಹಾರ – ಜಟಾಯು ಮೋಕ್ಷ’ ಎಂಬ ಯಕ್ಷಗಾನ…

Read More

ಬೆಂಗಳೂರು : ಹಿರಿಯ ಕಥೆಗಾರ ಡಾ. ರಾಜಶೇಖರ ನೀರಮನ್ವಿಯವರು ದಿನಾಂಕ 08 ಆಗಸ್ಟ್ 2024ರಂದು ನಿಧನರಾದರು ಅವರಿಗೆ 83ನೆಯ ವಯಸ್ಸಾಗಿತ್ತು. ನೀರಮಾನ್ವಿಯರು ಬರೆದಿದ್ದು ಕಡಿಮೆಯಾದರೂ ಅದರ ಗುಣಮಟ್ಟ ಬಹಳ ಹೆಚ್ಚಿನದು. ಅವರ ‘ಹಂಗಿನರಮನೆಯೊಳಗೆ’ ಮತ್ತು ‘ಕರ್ಪೂರದ ಕಾಯಕದಲ್ಲಿ’ ಸಂಕಲನದ ಕಥಾ ಸಂಕಲನದ ಕಥೆಗಳನ್ನು ಕನ್ನಡಿಗರು ಸದಾ ಸ್ಮರಿಸುತ್ತಾರೆ. ರಾಯಚೂರು ಜಿಲ್ಲೆಯ ನೀರಮಾನ್ವಿಯಲ್ಲಿ ಜನಿಸಿದ ರಾಜಶೇಖರ ನೀರಮಾನ್ವಿಯವರು ಮೂಲತ: ಭೂವಿಜ್ಞಾನದ ವಿದ್ಯಾರ್ಥಿ. ಈ ಕ್ಷೇತ್ರದಲ್ಲಿ ಕೂಡ ಅವರ ಸಾದನೆ ಮಹತ್ವದ್ದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿಯನ್ನು ಹಾಗೂ ‘ಆರ್ಥಿಕ ಭೂವಿಜ್ಞಾನ’ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದ ಇವರು ನೀರಮಾನ್ವಿ ಮತ್ತು ಬಳ್ಳಾರಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ‘ಪ್ರತೀಕ’ ಎಂಬ ಸಾಹಿತ್ಯ ಪತ್ರಿಕೆಯನ್ನೂ ಕೂಡ ಹೊರ ತಂದಿದ್ದು, ಉತ್ತರ ಕರ್ನಾಟಕದ ಅದರಲ್ಲಿಯೂ ಮುಖ್ಯವಾಗಿ ರಾಯಚೂರು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಿದ್ದರು.

Read More

ಸುರತ್ಕಲ್ : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಯ ಸಹಕಾರದೊಂದಿಗೆ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭ ಮತ್ತು ‘ಮಂಜುನಾದ’ ಯೋಜನೆಗೆ ಎರಡು ವರ್ಷಗಳಾಗುತ್ತಿರುವ ಸಂಭ್ರಮದ ಪ್ರಯುಕ್ತ ‘ಸಂಗೀತ ಕಛೇರಿ’ಯು ದಿನಾಂಕ 14-08-2024ರಂದು ಸಂಜೆ ಗಂಟೆ 5-00ಕ್ಕೆ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ನಡೆಯಲಿದೆ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಬಿ. ಸೀತಾರಾಮ ತೋಳ್ಪಡಿತ್ತಾಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ರಚನೆ, ರಾಗ ಸಂಯೋಜನೆ ಹಾಗೂ ಸಂಗೀತ ಕಚೇರಿಯಲ್ಲಿ ಕಾರ್ಕಳದ ಆತ್ರೇಯೀ ಕೃಷ್ಣ ಇವರ ಹಾಡುಗಾರಿಕೆಗೆ ಕಾರ್ಕಳದ ಮಹಾತೀ ಕೆ. ವಯಲಿನ್, ಮೈಸೂರಿನ ನಂದನ್ ಕಶ್ಯಪ್ ಮೃದಂಗ ಮತ್ತು ಇನ್ನಂಜೆ…

Read More

ತೆಕ್ಕಟ್ಟೆ: ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ‘ಸಿನ್ಸ್ 1999 ಶ್ವೇತಯಾನ-49’ರ ಕಾರ್ಯಕ್ರಮ ಗೋಪಾಡಿಯ ಗ್ರಾಮಸ್ಥರ ನೆರವಿನಿಂದ 7 ಆಗಸ್ಟ್ 2024ರಂದು ಗೋಪಾಡಿಯ ಕಾಂತೇಶ್ವರ ದೇಗುಲದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ಕಲಾವಿದರಾದ ಗೋಪಾಡಿ ಶ್ರೀಪತಿ ಉಪಾಧ್ಯ “ಸಂಸ್ಥೆಯ ಬೆಳ್ಳಿ ಹಬ್ಬದ ಸಲುವಾಗಿ ಹಮ್ಮಿಕೊಂಡ ಶ್ವೇತಯಾನದ 108 ಕಾರ್ಯಕ್ರಮಗಳ ಸಂಕಲ್ಪದ 49ನೇ ಕಾರ್ಯಕ್ರಮವನ್ನು ಗೋಪಾಡಿಯಲ್ಲಿ ಮಿತ್ರರನ್ನೊಡಗೂಡಿಕೊಂಡು ಆಯೋಜಿಸಿದ್ದೇವೆ. ಶರವೇಗದಲ್ಲಿ ಕಾರ್ಯಕ್ರಮ ಸಂಯೋಜಿಸುವ ಮೂಲಕ ಯಶಸ್ವಿ ಕಲಾವೃಂದ ಈಗಾಗಲೇ ಗೆದ್ದಿದೆ. ಒಂದೆರಡು ಕಾರ್ಯಕ್ರಮ ಆಯೋಜನೆ ಮಾಡುವುದೇ ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ಕಿಂಚಿತ್ ಮೊತ್ತವನ್ನು ಪಡೆದು ಅದ್ದೂರಿಯ ಕಾರ್ಯಕ್ರಮ ಕೊಟ್ಟು ನಿರ್ಗಮಿಸುವ ಸಂಸ್ಥೆಯನ್ನು ಮೆಚ್ಚಲೇ ಬೇಕು. ಅಸಾಮಾನ್ಯ ಯಕ್ಷ ಕಲೆಯನ್ನು ಮಕ್ಕಳು ಹಾಗೂ ಅತಿಥಿ ಕಲಾವಿದರನ್ನು ಕೂಡಿಕೊಂಡು ಪ್ರಾಯೋಜಕರ ಪರಿಸರದಲ್ಲೇ ಆಯೋಜಿಸಿ ಸಂಸ್ಥೆ ಸಮಾಜ ಸ್ನೇಹಿಯಾಗಿದೆ. ಇಂತಹ ಕಲೆಯನ್ನು ಹಾಗೂ ಸಂಸ್ಥೆಯನ್ನು ನಮ್ಮಂತಹ ಕಲಾಸಕ್ತರು ಪ್ರೋತ್ಸಾಹಿಸಲೇಬೇಕಾದದ್ದು ಪ್ರಜ್ಞಾವಂತ ಕಲಾಭಿಮಾನಿಗಳ ಕರ್ತವ್ಯ.” ಎಂದರು.  ಐರೋಡಿ ಆರ್. ರವಿರಾಜ್ ಮಾತನಾಡಿ “ಮಕ್ಕಳನ್ನು…

Read More

ವಿಜಯಪುರ : ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ ವತಿಯಿಂದ ಗಮಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು 21 ಜುಲೈ 2024ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷರಾದ  ಶ್ರೀ ಕೆ. ಪಿ. ಪುತ್ತುರಾಯ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಕಬ್ಬಿನಾಲೆ ವಸಂತ ಭಾರಧ್ವಾಜ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕುಮಾರವ್ಯಾಸ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಹೃದಯ ಪ್ರತಿಷ್ಠಾನದ ಶ್ರೀಮತಿ ಕಮಲಮ್ಮ ವಿಠ್ಠಲರಾವ್, ಕುಮಾರವ್ಯಾಸ ಮಂಟಪದ ಉಪಾಧ್ಯಕ್ಷ ಶ್ರೀ ವೆಂಕಟೇಶ್ವರಲು ನಾಯಡು, ಈ ಸಾಲಿನ ‘ಯುವ ಪ್ರಶಸ್ತಿ’ಗೆ ಆಯ್ಕೆಯಾದ ಗಮಕಿ ಕುಮಾರಿ ಆಶ್ರಿತಾ ಎಸ್. ಬೆಂಗಳೂರು, ‘ಉತ್ತಮ ಗಮಕ ಶಿಕ್ಷಕಿ ಪ್ರಶಸ್ತಿ’ಗೆ ಆಯ್ಕೆಯಾದ ಬೇಲೂರಿನ ನವರತ್ನಾ ಎಸ್. ವಟಿ ಹಾಗೂ ‘ಶ್ರೀ ವಾಗ್ದೇವಿ ಪ್ರಶಸ್ತಿ’ಗೆ ಆಯ್ಕೆಯಾದ  ವಿಜಯಪುರದ  ಶ್ರೀ ಕಲ್ಯಾಣರಾವ್ ದೇಶಪಾಂಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ವಿದ್ವಾನ್ ಕಬ್ಬಿನಾಲೆ ವಸಂತ್ ಭಾರಧ್ವಾಜ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ…

Read More

ಕೋಟ : ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಕುಂದಾಪ್ರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಯು-ಚಾನೆಲ್ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಕುಂದಾಪ್ರ ಕನ್ನಡ ಉತ್ಸಾವ ‘ಹೊಸ ಹೂಂಗು ಕೋಲೆ…’ ಕಾರ್ಯಕ್ರಮವು 04 ಆಗಸ್ಟ್ 2024ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ಶ್ರೀ ಜಯರಾಮ್ ಶೆಟ್ಟಿ ಮಾತನಾಡಿ “ಕುಂದಾಪ್ರ ಭಾಷೆ ಕೇವಲ ಮಾತನಾಡುವ ಭಾಷೆಯಾಗಿ ಉಳಿಯದೇ ಜನರ ಭಾವನೆಯ ನಾಡಿಮಿಡಿತವಾಗಿದೆ. ಯಾವುದೇ ಸಂದರ್ಭದಲ್ಲಿ ಹಿಂಜರಿಕೆ ಪಡೆಯದೇ ಕುಂದಾಪ್ರ ಭಾಷೆಯನ್ನು ಬಳಸಬೇಕು. ಇಲ್ಲಿನ ಸಂಸ್ಕೃತಿಯ ವೈವಿಧ್ಯತೆಯ ಅನಾವರಣಕ್ಕೆ ವಿಶ್ವ ಕುಂದಾಪ್ರ ದಿನಚರಣೆ ಸಾಕ್ಷಿಯಾಗುತ್ತಿರುವುದು ಸಂತಸದ ವಿಷಯ.” ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೆ. ಸತೀಶ್ ಕುಂದರ್, ಸಾಂಸ್ಕೃತಿಕ ಚಿಂತಕ ಶ್ರೀ ಪ್ರದೀಪ್ ಬಸ್ರೂರು, ಚಿತ್ರಕಲಾ…

Read More