Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಪ್ರಕಟಣೆಗೊಂಡ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಚಂದ್ರಶೇಖರ ಶೆಟ್ಟಿ ಅವರು ರಚಿಸಿದ ‘ಹುಲಿವೇಷ’ ಕೃತಿಯ ಲೋಕಾರ್ಪಣೆ ಸಮಾರಂಭ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ದಿನಾಂಕ 18-10-2023ರಂದು ನಡೆಯಿತು. ಖ್ಯಾತ ರಂಗಕರ್ಮಿ, ನಾಟಕಗಾರ ಹಾಗೂ ಸಾಹಿತಿ ಡಾ. ನಾ.ದಾಮೋದರ ಶೆಟ್ಟಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ, “ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯದಲ್ಲಿ ಇಂತಹ ಪುಸ್ತಕಗಳು ಅನಿವಾರ್ಯ” ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ಪುಸ್ತಕದ ಕುರಿತಾಗಿ ಮಾತನಾಡಿ, “ಈ ಕೃತಿ ಈಗಿನ ಕಾಲದ ಅನಿವಾರ್ಯತೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳ ವರಿಷ್ಠ ವಂ.ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ತನ್ನ ಬಾಲ್ಯ ಜೀವನವನ್ನು ನೆನಪು ಮಾಡಿಕೊಂಡು ಹುಲಿವೇಷ ಕೊಡುತ್ತಿದ್ದ ಉತ್ಸಾಹವನ್ನು ನೆನಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಇಂತಹ ಕೃತಿಗಳು ಇನ್ನೂ ಮೂಡಿಬರಲಿ ಎಂದು ತಿಳಿಸಿ…
ಮಂಗಳೂರು : ವೆಲೆನ್ಸಿಯಾದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜಿನಲ್ಲಿ ದಿನಾಂಕ 19-10-2023ರಂದು ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಹೊರತಂದ ಡಾ. ರೇಶ್ಮಾ ಉಳ್ಳಾಲ್ ಅವರ ‘ಬಿಂಬದೊಳಗೊಂದು ಬಿಂಬ’ ಸಂಶೋಧನಾ ಕೃತಿಯನ್ನು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿಯವರು ಬಿಡುಗಡೆಗೊಳಿಸಿ ಮಾತನಾಡುತ್ತಾ “ನನಗೆ ದೊರೆತ ಗೌರವ, ಸನ್ಮಾನ ನನ್ನ ಸಮುದಾಯಕ್ಕೆ ದೊರೆತಂತೆ. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ, ಗ್ರಹಿಕೆ ದೂರವಾಗಬೇಕಾದರೆ ಇಂಥ ಕೃತಿ, ಸಿನಿಮಾಗಳು ಹೆಚ್ಚು ಬರಬೇಕು” ಎಂದು ಹೇಳಿದರು. ಈ ಕೃತಿಗೆ ಮುನ್ನುಡಿ ಬರೆದ ರಾಷ್ಟ್ರ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, “ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಂಘರ್ಷ, ಹೋರಾಟವನ್ನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೋಡಬೇಕಾದ ಅನಿವಾರ್ಯತೆ ಇದ್ದು, ರೇಶ್ಮಾ ಅವರ ಕೃತಿಯು ಅದಕ್ಕೆ ಪೂರಕ” ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, “ಮಂಜಮ್ಮ ಜೋಗತಿ ಅವರು ಲಿಂಗತ್ವ ಅಲ್ಪಸಂಖ್ಯಾತರಿಗೆ…
ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರದ ಯಕ್ಷಕೌಸ್ತುಭ ಯಕ್ಷಗಾನ ತರಬೇತಿ ಸಂಸ್ಥೆಯ ಚತುರ್ಥ ವರ್ಷದ ವಾರ್ಷಿಕೋತ್ಸವ ಸಂದರ್ಭ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಬಣ್ಣದ ಮನೆ ಪರಿಕಲ್ಪನೆಯೊಂದಿಗೆ ಸಂಯೋಜಿಸಿದ ಉಚಿತ ತೆಂಕುತಿಟ್ಟು ಯಕ್ಷಗಾನ ಬಣ್ಣಗಾರಿಕೆ ತರಬೇತಿ ಶಿಬಿರವನ್ನು ಯುಗ ಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಇವರು ದಿನಾಂಕ 15-10-2023ರಂದು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಯಕ್ಷಗಾನದ ಮೂಲಚೌಕಟ್ಟಿಗೆ ಧಕ್ಕೆ ಬಾರದಂತೆ ಶಿಷ್ಟ ಪರಂಪರೆಯ ಕಲೆಯಾದ ಯಕ್ಷಗಾನವನ್ನು ಪೋಷಿಸುವಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಇಂತಹ ಕಮ್ಮಟಗಳು ಬಹಳ ಉಪಯುಕ್ತ” ಎಂದು ಹೇಳಿದರು. ಯಕ್ಷಗಾನ ಕಲಾವಿದರು ಹಾಗೂ ಬಣ್ಣಗಾರಿಕೆ ಶಿಬಿರದ ಪ್ರಧಾನ ಸಂಯೋಜಕರಾದ ಶರತ್ ಕೊಡೆತ್ತೂರು ಇವರು “ನಾಲ್ಕು ವರ್ಷದಿಂದ ಯಕ್ಷಕೌಸ್ತುಭ ಸಂಸ್ಥೆಯ ಆಶ್ರಯದಲ್ಲಿ ಯಕ್ಷನಾಟ್ಯ ತರಗತಿ ಯಶಸ್ವಿಯಾಗಿ ನಡೆಯುತ್ತಿದ್ದು, ಬಣ್ಣಗಾರಿಕೆ ತರಗತಿಗಳು ಪ್ರತೀ ಭಾನುವಾರ ಬೆಳಗ್ಗೆ 10ರಿಂದ ಎರಡು ಗಂಟೆಗಳ ಕಾಲ ವೃತ್ತಿಪರ ಪ್ರಸಿದ್ಧ ಕಲಾವಿದರ ಉಪಸ್ಥಿತಿಯಲ್ಲಿ ನಡೆಸಲಾಗುವುದು. ಬಣ್ಣಗಾರಿಕೆಯ ಪೂರ್ಣಪಾಠ ತರಬೇತಿಗೊಳಿಸುವ ಧ್ಯೇಯ ನಮ್ಮದು.” ಎಂದು ಹೇಳಿದರು. ಕಲಾಪೋಷಕ ಪೃಥ್ವಿರಾಜ ಆಚಾರ್ಯ, ಯಕ್ಷಗಾನ ಕಲಾವಿದ…
ವಿಶಾಖಪಟ್ಟಣ : ವಿಶಾಖಪಟ್ಟಣದ ಪ್ರತಿಮಾ ಟ್ರಸ್ಟ್ ಆಯೋಜಿಸಿದ ಶಾಸ್ತ್ರೀಯ ಸಂಗೀತವನ್ನು ಕುರಿತ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಕನ್ನಡತಿ ಕುಮಾರಿ ಭವ್ಯ ಭಟ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. ‘Hindustani Music and Carnatic Music – A Comparative Study’ ಎಂಬ ದೀರ್ಘ ಪ್ರಬಂಧಕ್ಕೆ ಈ ಬಹುಮಾನವು ದೊರೆತಿದೆ. ಈ ಬಹುಮಾನವು ರೂ.25,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನ ಪಡೆದ ಕುಮಾರಿ ತ್ರಿಪುರನೇನಿ ಕೃತಿ ಶರ್ಮ ಗುಂಟೂರಿನವರು. ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ ಗುಂಟೂರಿನಲ್ಲಿ ತಮ್ಮದೇ ಆದ ‘ಸಂಗೀತ ಸರಿತ’ ಎಂಬ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಈ ಬಹುಮಾನವು ರೂ.15,000/- ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ತೃತೀಯ ಬಹುಮಾನ ಗಳಿಸಿದ ಡಾ. ಅಂಜನಾ ಶ್ರೀನಿವಾಸಲು ತೆಲುಗು ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿದ್ದು, ಚಿತ್ತೂರಿನ ಕಾಲೇಜೊಂದರಲ್ಲಿ ತೆಲುಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.…
ಮಂಗಳೂರು : ತೆಂಕುತಿಟ್ಟು ಯಕ್ಷಗಾನದಲ್ಲಿ ಮರೆಯಾಗಿರುವ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವನ್ನು ಅಧ್ಯಯನ ಸಂಶೋಧನೆ ನಡೆಸಿ ದಾಖಲೀಕರಣ ಮಾಡುವ ಹೊಸ ಪ್ರಯತ್ನವನ್ನು ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ನಡೆಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಪಾರಂಪರಿಕ ಪ್ರದರ್ಶನದ ವೀಡಿಯೋ ಚಿತ್ರೀಕರಣ ಮೂಲಕ ದಾಖಲೀಕರಣ ನಡೆಸಲಾಗಿದೆ. ಗೋವಿಂದ ಭಟ್ಟರ ಶಿಷ್ಯ ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಶಿಷ್ಯವೃಂದದವರು ಭಾಗವಹಿಸಿದ್ದಾರೆ. ವಾಲಿ-ಸುಗ್ರೀವರ ಒಡ್ಡೋಲಗ ವಿಡಿಯೋ ಬಿಡುಗಡೆ ಮಂಗಳೂರಿನ ಪತ್ರಿಕಾಭವನದಲ್ಲಿ ದಿನಾಂಕ 19-10-2023ರಂದು ನಡೆಯಿತು. ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಅವರು ಮಾತನಾಡಿ, “ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲವು ಪ್ರಮುಖ ಅಂಶಗಳನ್ನು ಕಳೆದುಕೊಂಡಿದ್ದು ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದಾಗಿದೆ. ಇದನ್ನು ರಾಜಗೋಪಾಲ್ ಕನ್ಯಾನ ಅವರು ದಾಖಲಾತಿ ಮಾಡಿದ್ದಾರೆ” ಎಂದರು. ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ವೀಡಿಯೋ ದಾಖಲೀಕರಣವನ್ನು ಉದ್ಘಾಟಿಸಿ…
ಮಂಗಳೂರು : ನೃತ್ಯಾಂಗಣ ಪ್ರಸ್ತುತ ಪಡಿಸುವ ‘ಮಂಥನ 9ನೇ ಆವೃತ್ತಿ -2023’ ಭರತನಾಟ್ಯ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣದಲ್ಲಿ ದಿನಾಂಕ 03-11-2023ರಂದು ಮಂಗಳ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ. ಸಾಯಿಬೃಂದಾ ರಾಮಚಂದ್ರನ್ ಹೊಸೂರ್, ಪ್ರಿಯಾಂಜಲಿ ರಾವ್ ಮುಂಬೈ ಮತ್ತು ಧನ್ಯಶ್ರೀ ಪ್ರಭು ಉಡುಪಿ ಇವರುಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ‘ಮಂಥನ 2023’ ಭರತನಾಟ್ಯದ ಕಾರ್ಯಾಗಾರವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ದಿನಾಂಕ 04-11-2023 ಮತ್ತು 05-11-2023ರಂದು ನಡೆಸಿಕೊಡಲಿದ್ದಾರೆ. ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಜೀವನವನ್ನು ನೃತ್ಯ ಸೇವೆಗೆಂದೇ ಮುಡಿಪಾಗಿಟ್ಟವರು. ಇವರು ಖ್ಯಾತ ಗುರುಗಳಾದ ಎಸ್.ಕೆ. ರಾಜರತ್ನಂ ಹಾಗೂ ಅಭಿನಯದಲ್ಲಿ ಮೇರು ಸಾಧನೆಗೈದ ಶ್ರೀಮತಿ ಕಲಾನಿಧಿ ನಾರಾಯಣನ್ ಇವರಲ್ಲಿ ಭರತನಾಟ್ಯದ ವಳವೂರ್ ಶೈಲಿಯಲ್ಲಿ ನೃತ್ಯಾಭ್ಯಾಸವನ್ನು ಮಾಡಿದರು. ಇವರು ನರ್ತಿಸಿದ ರಾಧಾ ಮತ್ತು ಕೃಷ್ಣನ ನೃತ್ಯ ಹಾಗೂ ಅವರ ಅಂಗ ಶುದ್ಧಿ ಅಡವುಗಳನ್ನು ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ಟೈಮ್ಸ್ ಆಫ್ ಇಂಡಿಯಾ’…
ಮಂಗಳೂರು : ಕಥಾಬಿಂದು ಪ್ರಕಾಶನ ಇದರ ಹದಿನಾರನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ‘ಕಥಾಬಿಂದು ಸಾಹಿತೋತ್ಸವ 2023’ವು ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ದಿನಾಂಕ 29-10-2023ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕಥಾಬಿಂದು ಸಾಹಿತ್ಯ ಮಾಲೆ’ ಉದಯೋನ್ಮುಖ ಕವಿಗಳ ಕವನ ಸಂಕಲನಗಳ 50 ಕೃತಿಗಳು ಬಿಡುಗಡೆಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ಸುಮಾರು 200 ಲೇಖಕ, ಲೇಖಕಿಯರಿಗೆ ಗೌರವ ಸನ್ಮಾನ ಹಾಗೂ ಅವರ ಕೃತಿಗಳ ಪ್ರದರ್ಶನ, ನಾಡಿನ ವಿವಿಧ ಸಾಧಕರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯಾದ ‘ಚೈತನ್ಯ ಶ್ರೀ’ ಪ್ರಶಸ್ತಿ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಶ್ರೀಧರ್ ಇವರು ಉದ್ಘಾಟಿಸಲಿರುವರು. ಚಲನಚಿತ್ರ ಸಂಗೀತ ನಿರ್ದೇಶಕರಾದ ಕಲಾರತ್ನ ಜಯರಾಮ್ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
ಮಣಿಪಾಲ : ಸಂಗಮ ಕಲಾವಿದೆರ್ ಮಣಿಪಾಲ (ರಿ.) ಸಂಸ್ಥೆಯು ದಿನಾಂಕ 28-10-2023 ಮತ್ತು 29-10-2023ರಂದು ಎರಡು ದಿನಗಳ ಮುಖವರ್ಣಿಕೆ ಕಾರ್ಯಗಾರ ‘ಮೇಕಪ್ ಕಿಟ್’ನ್ನು ಪ್ರಸ್ತುತ ಪಡಿಸುತ್ತದೆ. ಮಣಿಪಾಲದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಐದು ಜನ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ, ರಿಯಾಲಿಸ್ಟಿಕ್, ಮೈಮ್ ಮತ್ತು stylized ಮೇಕಪ್ ಇವುಗಳ ಬಗ್ಗೆ ತರಬೇತಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು : ಭುವನ್ ಮಣಿಪಾಲ್, ಸಂದೀಪ್ ಶೆಟ್ಟಿಗಾರ್, ಉಜ್ವಲ್ ಯು.ವಿ., ಶ್ವೇತ ಅರೆಹೊಳೆ ಮತ್ತು ಪ್ರಜ್ವಲ್ ಶೇರಿಗಾರ್ ಸೂಚನೆಗಳು: 1. ಕಾರ್ಯಗಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರಗೆ ನಡೆಯಲಿದೆ. 2. 10 ವರ್ಷ ಮೇಲ್ಪಟ್ಟ ಆಸಕ್ತರು ಭಾಗವಹಿಸಬಹುದು. 3. ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುವುದು. 4. ಕಾರ್ಯಾಗಾರಕ್ಕೆ 1000/- ಶುಲ್ಕ ನಿಗದಿ ಪಡಿಸಲಾಗಿದೆ. 5. ಹೆಚ್ಚಿನ ಮಾಹಿತಿಗಳನ್ನು ಕಾರ್ಯಾಗಾರದ ಮುಂಚಿತವಾಗಿ ನೀಡಲಾಗುವುದು. ಸಂಗಮ ಕಲಾವಿದೆರ್ ಮಣಿಪಾಲ (ರಿ.), 1997ರಲ್ಲಿ ತುಳು ರಂಗಭೂಮಿಯ ಹವ್ಯಾಸಿ ಕಲಾವಿದರ…
ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಮತ್ತು ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಪುತ್ತೂರು ಸಹಯೋಗದೊಂದಿಗೆ ‘ಬಸವಣ್ಣ ಮತ್ತು ಕನಕದಾಸ ಇಹ-ಪರ ಲೋಕದೃಷ್ಟಿ’ ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ದಿನಾಂಕ 08-11-2023ರ ಬುಧವಾರದಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಪುತ್ತೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಒಂದು ಅವಧಿಯನ್ನು ಪ್ರತಿನಿಧಿಗಳ ಪ್ರಬಂಧ ಮಂಡನೆಗೆ ಮೀಸಲಿರಿಸಲಾಗಿದೆ. ಪ್ರಬಂಧ ಮಂಡಿಸಲು ಇಚ್ಛಿಸುವ ಪ್ರತಿನಿಧಿಗಳು *ಕನಕದಾಸರ ಕೀರ್ತನೆಗಳಲ್ಲಿ ಕಾಯಕ ಜಿಜ್ಞಾಸೆ, *ಕುಲದ ಪ್ರಶ್ನೆ, *ಸಂಸಾರ, *ಆತ್ಮವಿಮರ್ಶೆ, *ಕನಕದಾಸರ ಮುಂಡಿಗೆಗಳ ವೈಶಿಷ್ಟ್ಯ, *ಬಸವಣ್ಣನ ವಚನಗಳಲ್ಲಿ ತಾತ್ವಿಕತೆ, *ಸಮಾಜ, *ಸಾಹಿತ್ಯ ಮೌಲ್ಯ, *ಪ್ರಭುತ್ವ ವಿರೋಧಿ ನೆಲೆಗಳು, *ಕುಟುಂಬ ಪರಿಕಲ್ಪನೆ ಇತ್ಯಾದಿ ವಿಷಯಗಳಲ್ಲಿ ಪ್ರಬಂಧವನ್ನು ಮಂಡಿಸಲು ಅವಕಾಶವಿದೆ. ಪ್ರಬಂಧ ಮಂಡಿಸುವವರು ತಮ್ಮ ಪೂರ್ಣ ಪ್ರಬಂಧವನ್ನು ದಿನಾಂಕ 04-11-2023ರ ಮೊದಲು ಸಂಯೋಜಕರು, ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ 574199 ಅಥವಾ ಇಮೇಲ್ ID: [email protected]…
ಉಡುಪಿ : ಡಾ. ವಿರೂಪಾಕ್ಷ ದೇವರಮನೆಯವರ ‘ಕಣ್ಣಿಗೆ ಕಾಣುವ ದೇವರು’ ಮತ್ತು ‘DID YOU TALK TO YOUR CHILD TODAY’ ಎಂಬ ಎರಡು ಕೃತಿಗಳು ದಿನಾಂಕ 29-10-2023ರಂದು ಸಂಜೆ 5 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಇವರು ‘ಪೋಷಕರು ಆರು ಬಗೆ’ ಮತ್ತು ರೂಬಿಕ್ಸ್ ಕ್ಯೂಬ್ ಗ್ರಾಂಡ್ ಮಾಸ್ಟರ್ ಆಫಾನ್ ಕುಟ್ಟಿ ಇವರು ‘ಅಂತರ್ಜಾಲ ವ್ಯಸನದಿಂದ ರೂಬಿಕ್ಸ್ ಕ್ಯೂಬ್ ನ ಇಂದ್ರಜಾಲದತ್ತ’ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ, ಒನ್ ಗುಡ್ ಸ್ಟೆಪ್ ಇದರ ಸ್ಥಾಪಕರು ಮತ್ತು ಟ್ರಸ್ಟಿಗಳಾದ ಅಮಿತಾ ಪೈ ಮತ್ತು ಸಾವಣ್ಣ ಪ್ರಕಾಶನ ಇದರ ಪ್ರಕಾಶಕರಾದ ಜಮೀಲ್ ಸಾವಣ್ಣ ಇವರುಗಳು ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಡಾ. ವಿರೂಪಾಕ್ಷ ದೇವರಮನೆ ಮತ್ತು ಡಾ. ವೀಣಾ ವಿರೂಪಾಕ್ಷ…