Author: roovari

ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ ಮಂಗಳೂರು ವಲಯ ಸದಸ್ಯರ ಸಮಾವೇಶವು ದಿನಾಂಕ 29-06-2023ರಂದು ಕದ್ರಿಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆಯಲಿರುವುದು. ಸಮಾವೇಶದಲ್ಲಿ ಮೊದಲಿಗೆ ಕದ್ರಿ ಕಂಬಳದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ಕಾವೂರು ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಇವರಿಂದ ‘ದಾಸ ಸಂಕೀರ್ತನೆ’ ನಡೆಯಲಿರುವುದು. ಬಳಿಕ ‘ಹರಿಕಥಾ ರಂಗ-ನಿರೀಕ್ಷೆಗಳು ಹಾಗೂ ಸವಾಲುಗಳು’ ಎಂಬ ವಿಷಯದಲ್ಲಿ ಸಂವಾದ ಗೋಷ್ಠಿ ನಡೆಯಲ್ಲಿದ್ದು, ಹರಿದಾಸರು ಹಾಗೂ ವಕೀಲರಾದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಿಷತ್ತಿನ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಶ್ರೀ ಹರಿಕೃಷ್ಣ ಪುನರೂರು ಇವರು ನೆರವೇರಿಸಲಿದ್ದಾರೆ. ಸಂವಾದ ಗೋಷ್ಠಿಯಲ್ಲಿ ಸಂಪನ್ಮೂಲ ಮಹನೀಯರಾದ ಬಹುಶ್ರುತ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಧನಂಜಯ್ ಕುಂಬ್ಳೆ, ನಿವೃತ್ತ ಪ್ರಾಂಶುಪಾಲರು ಹಾಗೂ ಯಕ್ಷಗಾನ ಅರ್ಥಧಾರಿಯಾದ ಶ್ರೀ ಸರ್ಪಂಗಳ ಈಶ್ವರ ಭಟ್, ಅರ್ಥಧಾರಿಗಳು ಹಾಗೂ ವಿಮರ್ಶಕರಾದ ಶ್ರೀ…

Read More

ಬೆಂಗಳೂರು : ಎಸ್.ವಿ. ನಾರಾಯಣಸ್ವಾಮಿ ರಾವ್ ಸಂಸ್ಥಾಪಿಸಿದ ಶ್ರೀ ರಾಮಸೇವಾ ಮಂಡಳಿ ಟ್ರಸ್ಟ್ (ರಿ.) ಇದರ ವತಿಯಿಂದ ಸುಂದರವಾಗಿ ನಿರ್ಮಾಣಗೊಂಡ ನೂತನ ಸಭಾಂಗಣ “ಎಸ್.ವಿ. ನಾರಾಯಣಸ್ವಾಮಿ ರಾವ್ ಮೆಮೊರಿಯಲ್ ಹಾಲ್’ ಮತ್ತು ಶ್ರೀ ಟಿ. ನಾಗರಾಜು ಅವರ ಲೇಖನಿಯಿಂದ ಮೂಡಿ ಬಂದ ‘ನಿಸ್ವಾರ್ಥ ಬದುಕಿನ ಶ್ರೀ ರಾಮಭಕ್ತ’ ಎಂಬ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಕನಕಪುರದ ನೆಟ್ಟಿಗೆರೆ ಗ್ರಾಮದ ಸೋಮನ ಹಳ್ಳಿಯಲ್ಲಿ 30-06-2023ರಂದು ಪೂರ್ವಾಹ್ನ 11-30ಕ್ಕೆ ಸಭಾಂಗಣ ಮತ್ತು ಕೃತಿಯ ಸಮರ್ಪಣಾ ಸಮಾರಂಭವು ಪೇಜಾವರ ಮಠಾದೀಶ ಶ್ರೀ ಶ್ರೀ 1008 ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಪವಿತ್ರ ದೈವಿಕ ಉಪಸ್ಥಿತಿಯಲ್ಲಿ ನಡೆಯಲಿದೆ. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇ ಗೌಡ, ಶ್ರೀ ಕೆ.ಸಿ. ರಾಮಮೂರ್ತಿ (ಐ.ಪಿ.ಎಸ್.), ಮಾಜಿ ಲೋಕ ಸಭಾ ಸದಸ್ಯರು ಹಾಗೂ ಸಿ.ಎಂ.ಆರ್. ಸಮೂಹ ಸಂಸ್ಥೆಗಳ ಅಧ್ಯಕ್ಷರು ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತಪುರದ…

Read More

ಮುಡಿಪು : ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ನೀಡುವ ಅಭಿನವ ವಾಲ್ಮೀಕಿ, ‘ಅಂಬುರುಹ ಯಕ್ಷಸದನ ಪ್ರಶಸ್ತಿ’ಯನ್ನು ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಹಾಸ್ಯ ಕಲಾವಿದ ಹಾಸ್ಯ ಚಕ್ರವರ್ತಿ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ದಿನಾಂಕ 21-06-2023 ಬುಧವಾರ ಪೂಂಜರ ಸ್ವಗೃಹ ಬೊಟ್ಟಿಕೆರೆಯ ಅಂಬುರಹದಲ್ಲಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನವು ಈ ಹಿಂದೆ 2021ರಲ್ಲಿ ಛಂದೋವಾರಿಧಿ ಚಂದ್ರ ಗಣೇಶ ಕೊಲೆಕಾಡಿ, 2022ರಲ್ಲಿ ರಂಗ ನಾಯಕ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಅಂಬುರುಹ ಯಕ್ಷಸದನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಯರಾಮ ಆಚಾರ್ಯ ಅವರು, “ಪುರುಷೋತ್ತಮ ಪೂಂಜರ ಪ್ರಶಸ್ತಿ, ಅವರ ಸ್ನೇಹ ನನಗೆ ದೊರಕಿರುವುದು ನನ್ನ ಭಾಗ್ಯ. ಪೂಂಜರ ಪ್ರಸಂಗದ ಪದ್ಯಗಳಿಗೆ ಅರ್ಥ ಹೇಳಲು ಬೇರೆ ಸಾಹಿತ್ಯ ಅಗತ್ಯವೆನಿಸದು. ಅವರ ಸಾಹಿತ್ಯ ಶ್ರೀಮಂತಿಕೆಯೇ ಓರ್ವ ಕಲಾವಿದನ್ನು ಬೆಳೆಸುತ್ತದೆ. ಯಕ್ಷಗಾನ ಲೋಕದ ಸವ್ಯಸಾಚಿಯಾದ ಪುರುಷೋತ್ತಮ ಪೂಂಜರು ಇನ್ನೂ ಬಾಳಿ ಬೆಳಗಬೇಕಿತ್ತು. ಇನ್ನಷ್ಟು ಅವರ ಪ್ರಸಂಗ ಸಾಹಿತ್ಯ ಯಕ್ಷಗಾನ ಲೋಕವನ್ನು ಅರಳಿಸಬೇಕಿತ್ತು. ‘ಮಾತೆ ಜಾನಕಿಯೆನ್ನ ಕಾವ್ಯ ನಾಯಕಿ’…

Read More

ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಾದ ರಂಗಚ೦ದಿರ ಮತ್ತು ರ೦ಗಮ೦ಡಲ-ಸಿವಗಂಗ ಟ್ರಸ್ಟ್, ಪ್ರಸ್ತುತ ಪಡಿಸುವ ರಂಗ ಜಂಗಮ ಸಿಜಿಕೆ -73 ರ ನೆನಪು ಕಾರ್ಯಕ್ರಮವು ದಿನಾಂಕ : 27-06-2023ರಂದು ಮಂಗಳವಾರ ಸಂಜೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯಯವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ರಂಗ ಪೋಷಕರಾದ ಶ್ರೀಮತಿ ಜಯಲಕ್ಷ್ಮಿ, ರಂಗನಿರ್ದೇಶಕರು /ಸಾಹಿತಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾಮಣೆ, ನಾಟಕಕಾರರು/ ರಂಗನಿರ್ದೇಶಕರಾದ ಡಾ. ಬೇಲೂರು ರಘುನಂದನ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿ, ಕಸಾಪ ಬೆಂಗಳೂರು, ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ಮಾಗಡಿ ಗಿರೀಶ್, ಕೆಂಗೇರಿ ಉಪನಗರ, ಭಗೀರಥ ಬಡಾವಣೆ ಡಾ. ದೀಪಕ್ ಬಿ.ವಿ. ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗನಿರ್ದೇಶಕರಾದ ಶ್ರೀಮತಿ ನಿರ್ಮಲಾ ನಾದನ್ ಮತ್ತು ಬೆಳಕು ವಿನ್ಯಾಸಕರಾದ ಶ್ರೀ ರವಿಶಂಕರ್ ಎಸ್. ಇವರಿಗೆ ಸಿಜಿಕೆ ಯುವ…

Read More

ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಒಂದು ದಿನದ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆ ವ್ಯೋಮ್ -2023 ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ : 17-06-2023ರಂದು ನಡೆಯಿತು. ಡೈಜಿ ವರ್ಲ್ಡ್ ಮೀಡಿಯಾದ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಾಲ್ಟರ್ ಡಿ’ಸೋಜಾ ನಂದಳಿಕೆ ಅಂದಿನ ಮುಖ್ಯ ಅಭ್ಯಾಗತರಾಗಿದ್ದರು. ಅವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಈ ಚಿಂತನೆಗಳು ನಿಸ್ಸಂದೇಹವಾಗಿ ಅವರನ್ನು ಯಶಸ್ಸಿನ ಗುರಿ ತಲುಪುವಂತೆ ಮಾಡುತ್ತದೆ” ಎ೦ದರು. ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಶ್ಯಾಮ್ ಸುಂದರ್ ಕಾಮತ್ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ವಿದ್ಯಾರ್ಥಿಗಳು ದೇಶದ ಆಸ್ತಿ, ಅವರು ಸದ್ಬಳಕೆಯಾದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ” ಎಂಬ ಸಂದೇಶ ಇತ್ತರು. ಪ್ರಾಂಶುಪಾಲ ಡಾ. ಲಕ್ಷ್ಮೀ ನಾರಾಯಣ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಘಟಕ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಗೋಪಾಲ ರಡ್ಡಿರಿತ್ತಿ ಸ್ವಾಗತಿಸಿ, ಸಂಯೋಜಕಿ ಶ್ರೀವಿದ್ಯಾ ವ್ಯೋಮ್ -2023 ಕಾರ್ನಿವಲ್ ಆಫ್ ಕಲ್ಚರ್ ಬಗ್ಗೆ…

Read More

ಮುಂಬೈ: ತ್ರಿರಂಗ ಸಂಗಮ ಮುಂಬೈ ಇವರ ಸಂಚಾಲಕತ್ವದಲ್ಲಿ ಮಂಗಳೂರಿನ ಜೈ ಮಾತಾ ಕಲಾತಂಡ ಅಭಿನಯಿಸುವ ‘ ಗುಸು ಗುಸು ಉಂಡುಗೆ ‘ ತುಳು ನಾಟಕದ ಮುಂಬೈ ಪ್ರವಾಸವು ದಿನಾಂಕ 22-07-2023 ರಿಂದ 30-07-2023ರ ವರೆಗೆ ನಡೆಯಲಿದೆ. ಅರುಣ್ ಶೆಟ್ಟಿ ಕಥೆ ಮತ್ತು ಸಂಚಾಲಕತ್ವದ ಈ ತಂಡದ ಸಾರಥ್ಯ ರಮೇಶ್ ರೈ ಕುಕ್ಕುವಳ್ಳಿ ಅವರದ್ದು. ಈ ನಾಟಕಕ್ಕೆ ದಿನಕರ ಭಂಡಾರಿ ಕಣಂಜಾರು ಸಂಭಾಷಣೆ ಬರೆದಿದ್ದು, ಸಂಗೀತ ಸಂದೀಪ್ ಮಧ್ಯ ಅವರದ್ದು. ಮುಂಬೈ ಕಾರ್ಯಕ್ರಮದ ಮಾಹಿತಿಗಾಗಿ ಕರ್ನೂರು ಮೋಹನ ರೈ-9867304757, ಅಶೋಕ್ ಪಕ್ಕಳ-9323822352, ನವೀನ್ ಶೆಟ್ಟಿ ಇನ್ನ ಬಾಳಿಕೆ-9820411114, ಇವರನ್ನು ಸಂಪರ್ಕಿಸಬಹುದು.

Read More

ಪುತ್ತೂರು: ಡಿಸೆಂಬರ್ 2023ರಲ್ಲಿ ನಡೆಯಲಿರುವ ಶ್ರೀ ಆಂಜನೇಯ 55ರ ಸಂಭ್ರಮಕ್ಕೆ ಪೂರಕವಾಗಿ ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ’ ಎಂಬ ಕಾರ್ಯಕ್ರಮದಡಿಯಲ್ಲಿ, ಜೂನ್ 22ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್ ಬಟ್ಯಮೂಲೆ, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಆದಿತ್ಯ ನಾರಾಯಣ ಪಿ.ಎಸ್. ಸಹಕರಿಸಿದರು. ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್ (ಈಶ್ವರ), ಶುಭಾ ಜೆ.ಸಿ. ಅಡಿಗ (ದಾಕ್ಷಾಯಿಣಿ), ದುಗ್ಗಪ್ಪ ಎನ್. (ಭೀಮಸೇನ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Read More

ಪುತ್ತೂರು : ವಿವೇಕಾನಂದ ಕಾಲೇಜಿನ ಬಳಿ ಇರುವ ಭಾರತಿನಗರದ ಬನ್ನೂರು ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಪ್ರತಿ ತಿಂಗಳ ಮೂರನೇ ಮಂಗಳವಾರ ನಡೆಯಲಿರುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಾಳಮದ್ದಳೆ ದಿನಾಂಕ : 20-06-2023ರಂದು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ‘ಶ್ರೀ ರಾಮ ವನಗಮನ’ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಆದಿತ್ಯ ಹಾಗೂ ಅಮೋಘ ಸಹಕರಿಸಿದರು. ಮುಮ್ಮೇಳದಲ್ಲಿ ದಶರಥನಾಗಿ ಭಾಸ್ಕರ್ ಬಾರ್ಯ, ಕೈಕೇಯೀಯಾಗಿ ಭಾಸ್ಕರ್ ಶೆಟ್ಟಿ ಸಾಲ್ಮರ, ಶ್ರೀರಾಮನಾಗಿ ಪಕಳಕುಂಜ ಶ್ಯಾಮ್ ಭಟ್, ಲಕ್ಷ್ಮಣನಾಗಿ ದುಗ್ಗಪ್ಪ ಎನ್. ಮತ್ತು ಮಂಥರೆಯಾಗಿ ಬಡೆಕ್ಕಿಲ ಚಂದ್ರಶೇಖರ್ ಭಟ್ ಸಹಕರಿಸಿದರು. ಶ್ರೀ ದೇವಳ ಅಧ್ಯಕ್ಷ ಬೊನಂತಾಯ ಶಿವಶಂಕರ ಭಟ್ ಸ್ವಾಗತಿಸಿ, ಸಂಘದ ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ವಂದಿಸಿದರು. ಅರ್ಚಕ ವೃಂದ ಹಾಗೂ ಅನೇಕ ಕಲಾಭಿಮಾನಿಗಳು ಉಪಸ್ಥಿತರಿದ್ದರು.

Read More

ದುಬಾಯಿ: ಯು.ಎ.ಇ ಬ್ರಾಹ್ಮಣ ಸಮಾಜದ ಸಂವತ್ಸರ ಪೂರ್ತಿ ನಡೆಯಲಿರುವ ವಿಂಶತಿ ಉತ್ಸವದ 2ನೇ ಕಾರ್ಯಕ್ರಮ ಯಕ್ಷಗಾನ ಸಾಧಕರ ಸನ್ಮಾನ ಮತ್ತು ತಾಳ ಮದ್ದಳೆಯ ‘ಯಕ್ಷ ಮದ್ದಳೆ’ ಕಾರ್ಯಕ್ರಮ ಜೂನ್ 10 ಶನಿವಾರ ಸಂಜೆ ದುಬೈಯ ಫಾರ್ಚ್ಯೂನ್ ಪ್ಲಾಜಾ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ತಾಯ್ನಾಡಿನಿಂದ ಆಗಮಿಸಿದ ಅಥಿತಿ ಕಲಾವಿದರಾದ ಶ್ರೀ ಪದ್ಮನಾಭ ಉಪಾಧ್ಯಾಯ (ಹಿಮ್ಮೇಳ ಕಲಾವಿದರು ಬಪ್ಪನಾಡು ಮೇಳ) ಹಿರಿಯ ಕಲಾವಿದರಾದ ಶ್ರೀ ಮಧೂರು ರಾಧಾಕೃಷ್ಣ ನಾವಡ (ಪಾವಂಜೆ ಮತ್ತು ಬಪ್ಪನಾಡು ಮೇಳ) ಶ್ರೀ ಚೈತನ್ಯ ಕೃಷ್ಣ ಪದ್ಯಾಣ (ಹಿಮ್ಮೇಳ ಕಲಾವಿದರು ಹನುಮಗಿರಿ ಮೇಳ) ವಿದುಷಿ ಸುಮಂಗಲಾ ರತ್ನಾಕರ್ ರಾವ್ (ಯಕ್ಷಾರಾಧನಾ ಕಲಾಕೇಂದ್ರ ಮಂಗಳೂರು) ಇವರನ್ನು ಸ್ಮರಣಿಕೆ ಶಾಲು ಹಾಗೂ ಚಿನ್ನದ ನಾಣ್ಯದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ವೀನಸ್ ಹೋಟೆಲ್ ನ ಮಾಲೀಕರು ಮತ್ತು ವಿಂಶತಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪುತ್ತಿಗೆ ವಾಸು ಭಟ್, ಭೀಮ ಜ್ಯೂವೆಲ್ಡರ್ಸ್‌ ನ ನಿರ್ದೇಶಕರು ಹಾಗು ವಿಂಶತಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ನಾಗರಾಜ ರಾವ್,…

Read More

ಮೈಸೂರು : ಶ್ರೀ ಗುರು ಕಲಾ ಶಾಲೆ ಅರ್ಪಿಸುವ ಎಚ್. ಎಸ್.ಕವಿತಾ ಧನಂಜಯ ಸಂಗೀತ ಮತ್ತು ನಿರ್ದೇಶನದ ‘ಮಥನ’ ನಾಟಕವು ದಿನಾಂಕ 29-06-2023 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಬಗ್ಗೆ: ಪ್ರಸ್ತುತ ನಾಟಕವು ಎರಡು ಪ್ರಮುಖ ಪಾತ್ರಗಳಾದ ಕುಂತಿ ಮತ್ತು ದ್ರೌಪದಿಯನ್ನು ಕೇಂದ್ರೀಕರಿಸಿ ರಚಿತವಾದ ನಾಟಕವಾಗಿದೆ. ಇಬ್ಬರ ಸಂಭಾಷಣೆಯಲ್ಲಿ ಮಹಾಭಾರತದ ಅನೇಕ ಸಂಗತಿಗಳು ಪ್ರಸ್ತಾಪವಾಗುತ್ತವೆ. ಇಬ್ಬರ ನಡುವಿನ ಮಾನಸಿಕ ಸಂಘರ್ಷವನ್ನು ನಾಟಕ ಸಶಕ್ತವಾಗಿ ತೆರೆದಿಡುತ್ತದೆ. ಕುಂತಿಗೆ ದ್ರೌಪದಿಯ ಮೇಲೆ ಬಹಳ ಪ್ರೀತಿ ಮತ್ತು ವಿಶ್ವಾಸ. ಐವರು ಪಾಂಡವರನ್ನು ಒಂದೇ ಸಮನಾಗಿ ಹಿಡಿದಿಟ್ಟಿದ್ದಾಳೆ ಪಾಂಚಾಲಿ ಎಂಬ ಹೆಮ್ಮೆ ಕುಂತಿಗೆ. ಕುರುಕ್ಷೇತ್ರ ಯುದ್ಧ ಆಗದಂತೆ ತಡೆಯುವ ದೊಡ್ಡ ಜವಾಬ್ದಾರಿ ದ್ರೌಪದಿಯ ಮೇಲಿದೆ. ಅವಳಿಂದ ಆರಂಭವಾದ ಯುದ್ಧದ ಕಾರ್ಮೋಡ ಅವಳಿಂದಲೇ ತಿಳಿಯಾಗಬೇಕು. ಅದಕ್ಕಾಗಿ ಅವಳು ಪಂಚ ಪಾಂಡವರ ಜೊತೆ ಆರನೆಯವನಾದ ಕರ್ಣನನ್ನೂ ಪತಿಯನ್ನಾಗಿ ಸ್ವೀಕರಿಸಬೇಕು ಎಂಬುದು ಕುಂತಿಯ ವಾದ. ಕೃಷ್ಣನಿಗೆ ಅಸಾಧ್ಯವಾದದ್ದು ಕೃಷ್ನೆಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಕುಂತಿಯದು.…

Read More