Author: roovari

ಮಂಗಳೂರು : ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 20-12-2023ರಂದು ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಾಡು-ನುಡಿ-ವೈಭವದ ರತ್ನೋತ್ಸವವು ವೈಭವಪೂರ್ಣವಾಗಿ ನಡೆಯಿತು. ಸಮಾರಂಭದ ಸರ್ವಾಧ್ಯಕ್ಷ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡರು ಸರ್ವಾಧ್ಯಕ್ಷರಾಗಿ ಸಾಹಿತ್ಯದ ಒಳಗು ಹೊರಗುಗಳ ವಿವರವಾದ ವಿಶ್ಲೇಷಣೆ ಮಾಡಿದರು. ಪ್ರಧಾನ ಉಪನ್ಯಾಸ ಮಾಲಿಕೆಯಲ್ಲಿ ಡಾ. ಧನಂಜಯ ಕುಂಬಳೆಯವರ ಅಧ್ಯಕ್ಷತೆಯಲ್ಲಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಶ್ರೀ ಮುನಿರಾಜ ರೆಂಜಾಳರು ಕ್ರಮವಾಗಿ ದಾಸ ಸಾಹಿತ್ಯ ಹಾಗೂ ಇಂದಿನ ಸಾಹಿತ್ಯಗಳ ಕುರಿತಾಗಿ ಸೋದಾಹರಣ ಸಹಿತ ಮಾತನಾಡಿದರು. ನಂತರ ನಡೆದ ಕವಿ ಕಾವ್ಯ ಚಿತ್ರ ಗಾಯನದಲ್ಲಿ ಊರಿನ ಪ್ರಸಿದ್ಧ ಕವಿಗಳಾದ ಕರುಣಾಕರ ಬಳ್ಕೂರು, ಸಂಶೀರ್ ಬುಡೋಳಿ, ಜೋಯ್ಸ್ ಪಿಂಟೋ, ಚಂದ್ರಹಾಸ್ ಕೋಟೆಕಾರ್, ಶಾಂತಪ್ಪ ಬಾಬು, ನಾರಾಯಣ ಕುಂಬ್ರ ಮತ್ತು ವಸಂತಿ ನಿಡ್ಕೆಯವರು ಸ್ವರಚಿತ ಗೇಯ ಕವನಗಳನ್ನು ವಾಚನ ಮಾಡಿ, ಅದೇ ಕವನವನ್ನು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಗಾಯಕಿ ಸೌಮ್ಯಾ ಕಟೀಲ್ ಸಂಗೀತ ಸಹಿತವಾಗಿ ಹಾಡಿದರು.…

Read More

ಕಾಸರಗೋಡು : ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ) ಇದರ 79ನೇ ವಾರ್ಷಿಕೋತ್ಸವದಲ್ಲಿ ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈವಿಧ್ಯ, ಭಜನೆ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟವು ದಿನಾಂಕ 23-12-2023 ಶನಿವಾರ ದೇಲಂಪಾಡಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬನಾರಿ ಇಲ್ಲಿ ನಡೆಯಲಿದೆ. ಪೂರ್ವಾಹ್ನ ಗಂಟೆ 9:30ರಿಂದ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ದೇವಿ ಭಜನಾ ಮಂಡಳಿ ಕಾವು ಇವರಿ೦ದ ಭಜನಾ ಕಾರ್ಯಕ್ರಮ, ಪೂರ್ವಾಹ್ನ ಗಂಟೆ 11:15ಕ್ಕೆ ಸಂಘದ ಮಹಿಳಾ ಕಲಾವಿದರಿಂದ ‘ಸಮರ ಸನ್ನಾಹ’ ಯಕ್ಷಗಾನ ತಾಳಮದ್ದಳೆ, ಅಪರಾಹ್ನ ಗಂಟೆ 12:15ರಿಂದ ದೇಲಂಪಾಡಿ ಶಾಲಾ ಮಕ್ಕಳಿಂದ ‘ನೃತ್ಯ ವೈವಿಧ್ಯ’, ಅಪರಾಹ್ನ ಗಂಟೆ 12: 45ರಿಂದ ‘ಚಿಣ್ಣರ ಚಿಲಿಪಿಲಿ’ ಐನಾರಿ ಅಂಗನವಾಡಿಯ ಪುಟಾಣಿಗಳಿಂದ, 2 ಗಂಟೆಗೆ ಹಿರಿಯ ಕವಯತ್ರಿ ಶ್ರೀಮತಿ ಸತ್ಯವತಿ ಎಸ್. ಕೊಳಚೆಪ್ಪು ಇವರಿಂದ ಕೀರಿಕ್ಕಾಡು ಸಂಸ್ಮರಣೆ ಮತ್ತು ಖ್ಯಾತ ಹಿರಿಯ…

Read More

ಉಡುಪಿ : ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ಆಯೋಜಿಸುವ ಕರಾವಳಿ ಭರತನಾಟ್ಯ ಕಲಾವಿದರ ನೃತ್ಯ ಸಮ್ಮೇಳನ ‘ನೃತ್ಯೋತ್ಕರ್ಷ 2023’ ಭರತನಾಟ್ಯ ಪ್ರದರ್ಶನ-ವಿಚಾರ ಸಂಕಿರಣ-ಪರಿಪ್ರಶ್ನೆ ಚಿಂತನ ಮಂಥನ ಕಾರ್ಯಕ್ರಮವು ದಿನಾಂಕ 24-12-2023 ಮತ್ತು 25-12-2023ರಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ. ದಿನಾಂಕ 24-12-2023ರಂದು ಬೆಳಿಗ್ಗೆ ಸಮ್ಮೇಳನದ ಅಧ್ಯಕ್ಷರು ಮತ್ತು ಅತಿಥಿಗಳನ್ನು ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಹಾಗೂ ಕಲಾವಿದರು ವೈಭವೋಪೇತ ಮೆರವಣಿಗೆಯೊಂದಿಗೆ ಸಭಾಂಗಣಕ್ಕೆ ಕರೆದುಕೊಂಡು ಬರುವುದು. ನಂತರ ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟಿನ ನಿರ್ದೇಶಕರಾದ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಇವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನೆಯನ್ನು ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬಿ. ವಿಜಯ ಬಲ್ಲಾಳ್ ಇವರು ಮಾಡಲಿದ್ದಾರೆ. ಗಂಟೆ 11.35ಕ್ಕೆ ವಿದ್ವಾನ್ ಸುಧೀರ್ ರಾವ್ ಕೊಡವೂರು – ವಿದುಷಿ ಮಾನಸಿ ಸುಧೀರ್ ನೃತ್ಯ ನಿಕೇತನ ಕೊಡವೂರು…

Read More

ಬೆಂಗಳೂರು : ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಇವರ ಸಹಯೋಗದಲ್ಲಿ ದಿನಾಂಕ 23-12-2023ರಂದು ಬೆಳಿಗ್ಗೆ ಗಂಟೆ 11ಕ್ಕೆ ಮೂರು ಕಾದಂಬರಿಗಳ ಬಿಡುಗಡೆ ಕಾರ್ಯಕ್ರಮ ಆನ್ಲೈನ್ ನಲ್ಲಿ ನಡೆಯಲಿದೆ. ಶ್ರೀ ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’, ಶ್ರೀ ಡಿ.ಎನ್. ಶ್ರೀನಾಥ್ ಅವರ ಅನುವಾದಿತ ‘ಒಂದು ಮಸಾಜ್ ಪಾರ್ಲರ್ ಕಥೆ’ ಮತ್ತು ಶ್ರೀಮತಿ ಪಾರ್ವತಿ ಜಿ. ಐತಾಳ್ ಅವರ ಅನುವಾದಿತ ‘ಬೌದಿ’ ಕಾದಂಬರಿಗಳನ್ನು ಭಾಷಾಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಎಸ್.ಎನ್. ಶ್ರೀಧರ್ ಇವರು ಲೋಕಾರ್ಪಣೆ ಮಾಡಲಿದ್ದು, ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿ ಮತ್ತು ಪ್ರಸಿದ್ಧ ಅನುವಾದಕರಾದ ಡಾ. ಗೀತಾ ಶೆಣೈ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಉಡುಪಿ : ಜಿಲ್ಲಾ ಪಂಚಾಯತಿ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಲಯನ್ಸ್ ಕ್ಲಬ್ ಮಣಿಪಾಲ ಇವರ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಇದರ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ ಅಭಿಯಾನ ಕಾರ್ಯಕ್ರಮವು ದಿನಾಂಕ 16-12-2023ರಂದು ಆದಿಉಡುಪಿ ಕನ್ನಡ ಹಾಗೂ ಇಂಗ್ಲೀಷ್ ಮೀಡಿಯಂ ಶಾಲೆಯ ವಠಾರದಲ್ಲಿ ಚಾಲನೆಗೊಂಡಿತು. ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿಯ ಕಾರ್ಯದರ್ಶಿ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಇದರ ಅಧ್ಯಕ್ಷರಾದ ಡಾ.ಅರ್ಚನ ಭಕ್ತ ಮತ್ತು ಐ.ಎಮ್.ಎ. ಇದರ ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಇಂದಿರಾ ಶಾನುಭಾಗ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾನಸಿಕ ಖಿನ್ನತೆ, ಆತ್ಮಹತ್ಯೆ ತಡೆ, ಹೆಣ್ಣು ಮಕ್ಕಳ ಆರೋಗ್ಯ ಮತ್ತು ಭ್ರೂಣಹತ್ಯೆ ತಡೆ, ಕ್ಷಯರೋಗದ ಜಾಗೃತಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಾಲಕಾರ್ಮಿಕ ತಡೆ ಇವುಗಳ ಕುರಿತಾದ ಮಾಹಿತಿ…

Read More

ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ಇದರ ಆಶ್ರಯದಲ್ಲಿ ಟೆಂಪಲ್ ಸ್ಕ್ವಾಯರ್ ನಲ್ಲಿರುವ ಪ್ರೇಮ ಪ್ಲಾಝದ 2ನೇ ಮಹಡಿಯಲ್ಲಿರುವ ವಿಶ್ವಂ ಸ್ಕೂಲ್ ಅಫ್ ಆರ್ಟ್ ಇದರ ಕಚೇರಿಯ ಉದ್ಘಾಟನೆಯನ್ನು ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಇವರು ಸೃಷ್ಟಿಕರ್ತ ಭಗವಾನ್ ಶ್ರೀ ವಿಶ್ವಕರ್ಮ ದೇವರ ಕಲಾಕೃತಿಯನ್ನು ಅನಾವರಣ ಮಾಡುವ ಮೂಲಕ ದಿನಾಂಕ 17-12-2023ರಂದು ನೆರವೇರಿಸಿದರು. “ವಿಶ್ವಕರ್ಮ ಕಲಾ ಪರಿಷತ್ತಿನ ‘ವಿಶ್ವಂ ಸ್ಕೂಲ್ ಅಫ್ ಆರ್ಟ್’ನ ಮೂಲಕ ಮಹತ್ತರ ಕೊಡುಗೆಯನ್ನು ಕಲಾವಿದರಿಗೆ ಕೊಡುವ ಪ್ರಯತ್ನ ಮಾಡುತಿದ್ದಾರೆ. ಪುರಾತನ ಪ್ರಾಚೀನ ದೇಶ ಭಾರತ. ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪುನರ್ ನಿರ್ಮಾಣ ಸಂದರ್ಭದಲ್ಲಿ ಗತ ಕಾಲದ ಹಿಂದೆ ಮಂದಿರ ಇರುವ ಬಗ್ಗೆ ಸಾಕ್ಷ್ಯ ವಿಶ್ವಕರ್ಮರ ಅತ್ಯದ್ಭುತವಾದ ಕೈಚಳಕದಿಂದ ಕೆತ್ತನೆ ಕಾರ್ಯ ತಜ್ಞರ ಪರಿಶೀಲನೆ ಸಂದರ್ಭದಲ್ಲಿ ಲಭ್ಯವಾಗಿದ್ದು, ವಿಶ್ವಕರ್ಮರ ಕೊಡುಗೆ ಅಪಾರವಾದುದು ಎಂದು ನಮಗೆ ಕಾಣುತ್ತಿದೆ. ವಿಶ್ವಂ ಸ್ಕೂಲ್ ಅಫ್ ಆರ್ಟ್ ನ ಸದುಪಯೋಗ ವಿದ್ಯಾರ್ಥಿಗಳು ಪಡಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತಾಳ್ಮೆ ಮುಖ್ಯ. ಕಲಿಕೆಯಲ್ಲಿ ನಿರಂತರ…

Read More

ಗಂಗೊಳ್ಳಿ : ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ‘ಕೊಗ್ಗ ದೇವಣ್ಣ ಕಾಮತ್‌’ ಅವರ ಹೆಸರಿನಲ್ಲಿ ನೀಡುವ 2023-24ರ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಳೆ ಕಲಾವಿದ ಏಳ್ ಜಿತ್ ಸದಾನಂದ ಪ್ರಭು ಅವರನ್ನು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ. ದಿನಾಂಕ 28-01-2024ರಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 9ನೇ ವಾರ್ಷಿಕೋತ್ಸವದಲ್ಲಿ ಗಣ್ಯರಿಂದ ಈ ಪ್ರಶಸ್ತಿ ಪ್ರದಾನವಾಗಲಿದೆ. ತೆಕ್ಕಟ್ಟೆ ರಾಮಚಂದ್ರ ಪ್ರಭು ಸರಸ್ವತಿ ದಂಪತಿಯ ಪುತ್ರರಾಗಿ 1935ರಲ್ಲಿ ಜನಿಸಿದ ಇವರು ಏಳ್ ಜಿತ್‌ನಲ್ಲಿ 5ನೇ ತರಗತಿಯವರೆಗೆ ಹಾಗೂ ಬೈಂದೂರು ಹೈಸ್ಕೂಲಿನಲ್ಲಿ 8ನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಬಾಲ್ಯದಿಂದಲೇ ಯಕ್ಷಗಾನದ ಒಲವು ಹೊಂದಿದ್ದ ಅವರು ತಮ್ಮ ದೊಡ್ಡಪ್ಪನವರಾದ ದಾಸಪ್ಪ ಪ್ರಭುಗಳಲ್ಲಿ ಮದ್ದಳೆಯ ಪ್ರಾಥಮಿಕ ಅಭ್ಯಾಸ ಪಡೆದರು. ನಂತರ ಗುರು ವೀರಭದ್ರ ನಾಯ್ಕರ ಯಜಮಾನಿಕೆಯ ಪ್ರಸಿದ್ಧ ಮೃದಂಗ ವಾದಕ ಬೇಳಂಜೆ ತಿಮ್ಮಪ್ಪ ನಾಯ್ಕರ ಒಡನಾಟ ಮಾಡಿ ಮದ್ದಲೆ ಹಾಗೂ ಚಂಡೆ ಎರಡನ್ನೂ ಕಲಿತುಕೊಂಡರು. ಈ ನಡುವೆ ಇವರು…

Read More

ಮಂಗಳೂರು : ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ವಿಶೇಷ ವಿಕಲಚೇತನ ವಿದ್ಯಾರ್ಥಿಗಳಿಗಾಗಿರುವ ಸೇವಾ ಭಾರತಿ (ರಿ.)ಯ ವತಿಯಿಂದ ನಡೆಸಲ್ಪಡುವ ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಮಂಗಳೂರಿನ ಪುರಭವನದಲ್ಲಿ ದಿನಾಂಕ 15-12-2023ರಂದು ವಾರ್ಷಿಕೋತ್ಸವದ ಪ್ರಯುಕ್ತ ‘ಜಾಂಬವತಿ ಕಲ್ಯಾಣ’ವು ಪ್ರೇಕ್ಷಕರ ಮನ ಗೆದ್ದು ವಿಜೃಂಭಣೆಯಿಂದ ಜರಗಿತು. ವಿಕಲ ಚೇತನ ಮಕ್ಕಳಾದರೂ ಪರಾವಲಂಬನೆ ಇಲ್ಲದೇ ಸ್ವತಂತ್ರರಾಗಿ ನಟಿಸಿ ಪುರಭವನದಲ್ಲಿ ತುಂಬಿ ತುಳುಕಿದ ಕಲಾಪ್ರೇಮಿಗಳನ್ನು ನಿಬ್ಬೆರಗುಗೊಳಿಸಿದರು. ನೃತ್ಯ, ಹಾಡು, ಕುಣಿತ… ಹೀಗೆ ಬೇರೆ ಬೇರೆ ಕಾರ್ಯಕ್ರಮಗಳ ಮಧ್ಯೆಯೂ ಯಕ್ಷಗಾನ ರಂಜಿಸಿತು. ನೃತ್ಯ, ಅಭಿನಯ, ಕಲಾವಿದರ ಹೊಂದಾಣಿಕೆ ಎಲ್ಲೂ ರಾಜಿ ಮಾಡಿಕೊಳ್ಳದೇ ಸಶಕ್ತರಾಗಿ ; ಆತ್ಮಾಭಿಮಾನದಿಂದ ಪಾತ್ರಗಳೇ ಆಗಿ ಮೆರೆದು .. ಸಮಾಜದಲ್ಲಿ ತಮಗೆ ಯಾರದೇ ಅನುಕಂಪ ಬೇಡ; ಪ್ರೋತ್ಸಾಹ ನೀಡಿ ಸಾಕು… ಎನ್ನುವ ಹಾಗೆ ಯಕ್ಷಗಾನವನ್ನು ಕಳೆಗಟ್ಟಿಸಿದರು. ಜಾಂಬವಂತನಾಗಿ – ದೇವೇಶ, ಶ್ರೀಕೃಷ್ಣನಾಗಿ – ಶೀತಲ್, ಬಲರಾಮನಾಗಿ – ಕಿರಣ್, ನಾರದನಾಗಿ – ದಿವ್ಯಜ್ಯೋತಿ ಮತ್ತು ಜಾಂಬವತಿಯಾಗಿ – ಅನುಷಾ ಪಾತ್ರ ನಿರ್ವಹಣೆ ಮಾಡಿದರು. ಈ ಸಂಸ್ಥೆಯ ವಿಶ್ವಸ್ಥರಾದ…

Read More

ಬೆಂಗಳೂರು : ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕ ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’, ಲೇಖಕ ಮೌನೇಶ ಬಡಿಗೇರ ಅವರ ಕಥಾಸಂಕಲನ ‘ಶ್ರೀಗಳ ಅರಣ್ಯಕಾಂಡ’, ಲೇಖಕ ಸಂತೆಕಸಲಗೆರೆ ಪ್ರಕಾಶ್ ಅವರ ಕಥಾಸಂಕಲನ ‘ಪ್ರತಿಮೆ ಇಲ್ಲದ ಊರು’ ಹಾಗೂ ಲೇಖಕ ವಿವೇಕಾನಂದ ಕಾಮತ್ ಅವರ ಕಾದಂಬರಿ ‘ಪದರುಗಳು’ ಕೃತಿಗಳ ಲೋಕಾರ್ಪಣಾ ಸಮಾರಂಭವು ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ದಿನಾಂಕ 17-12-2023ರಂದು ನಡೆಯಿತು. ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬಿ.ಆರ್. ಲಕ್ಷ್ಮಣರಾವ್ “ನಾಟಕಗಳನ್ನು ಓದಿದರೆ ನಮಗೆ ಅದರ ಸ್ವಾರಸ್ಯ ತಿಳಿಯಲಾರದು, ಆದರೆ ರಂಗದಲ್ಲಿ ನೋಡಿದರೆ ಮಾತ್ರ ನಾವು ಅದನ್ನು ಆಸ್ವಾದಿಸಬಹುದು. ಅಂತಹ ರಂಗದ ಗುಣಗಳನ್ನು ಕಟ್ಟಿಕೊಡುವ ಕೃತಿ ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’. ಈ ಕೃತಿಯಲ್ಲಿ ಮೂರು ನಾಟಕಗಳು ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಪಾತ್ರಗಳು ಹಾಸ್ಯದ ಜೊತೆ ಜೊತೆಗೆ ಗಂಭೀರವಾದ ಸಮಸ್ಯೆಗಳಿಗೆ ಪರಿಹಾರವನ್ನು…

Read More

ಬೆಂಗಳೂರಿನ ರಂಗಪಯಣ (ರಿ.) ತಂಡವು ನಿರ್ಮಿಸಿದ ನಾಟಕ ‘ಚಂದ್ರಗಿರಿಯ ತೀರದಲ್ಲಿ’ (ನಿರ್ದೇಶನ: ನಯನಾ ಜೆ. ಸೂಡ. ಮೂಲ ಕಥೆ : ಸಾರಾ ಅಬೂಬಕ್ಕರ್). ಉಡುಪಿಯ ರಂಗಭೂಮಿಯು ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಹನ್ನೊಂದನೇ ನಾಟಕವಾಗಿ ರಂಗೇರಿದೆ ನಾಟಕವಿದು. ಮುಸ್ಲಿಂ ಸಮುದಾಯದಲ್ಲಿ ಹೆಣ್ಣಿನ ಬದುಕಿನ ದುರಂತ ಕಥೆಯಿರುವ ಈ ನಾಟಕವು ನೋಡಿದವರ ಕರುಳು ಹಿಂಡುವಂತಿದೆ. ಪುರುಷ ಪ್ರಧಾನ ಸಮಾಜದ ವಿರುದ್ಧ ಆಕ್ರೋಶ ಹುಟ್ಟಿಸುವಂತಿದೆ. ಎಳೆಯ ವಯಸ್ಸಿನಲ್ಲಿಯೇ ತನ್ನ ದುಪ್ಪಟ್ಟು ವಯಸ್ಸಿಗಿಂತಲೂ ದೊಡ್ಡ ಗಂಡಸನ್ನು ಮದುವೆಯಾಗಬೇಕಾಗಿ ಬಂದ ಫಾತಿಮಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಲಿಂಗ ತಾರತಮ್ಯ ತುಂಬಿದ ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೂ ಅನುಭವಿಸುವ ನರಕ ಯಾತನೆ ವರ್ಣನಾತೀತ. ಅಹಂಕಾರ, ದರ್ಪ, ಕೋಪಗಳ ಪ್ರತಿರೂಪವಾದ ಮನೆಯ ಯಜಮಾನನ ಮುಂದೆ ನಿಲ್ಲಲು ಗಡಗಡ ನಡುಗುವ ಹೆಂಡತಿ ಮಕ್ಕಳು.‌ ಸ್ವಾತಂತ್ರ್ಯವೆಂದರೆ ಏನೆಂದೇ ತಿಳಿಯದ ಮುಗ್ಧ ಜೀವಿಗಳು. ಹಿರಿಯ ಮಗಳು ನಾದಿರಾಗೆ ಅತ್ಯಂತ ಪ್ರಾಮಾಣಿಕವಾಗಿ ಪ್ರೀತಿಸುವ ಒಳ್ಳೆಯ ಹುಡುಗ ರಷೀದ್ ಗಂಡನಾಗಿ ಸಿಕ್ಕಿ ಬದುಕು ಸುಂದರವಾದರೂ, ಕ್ಷುಲ್ಲಕ…

Read More