Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ದತ್ತಿ ಪ್ರಶಸ್ತಿಯು ವಿಶೇಷ ದೃಷ್ಟಿಚೇತನರಿಗೆ ಮೀಸಲಾಗಿದ್ದು, ಕರ್ನಾಟಕದಲ್ಲಿ ಹೀಗೆ ಸ್ಥಾಪಿತವಾದ ಮೊದಲ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ವಿಶೇಷ ದೃಷ್ಟಿಚೇತನರು ಯಾವುದೇ ಪ್ರಕಾರದಲ್ಲಿ ಬರೆದ ಕೃತಿಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. ಕೃತಿಯು ನಿರ್ದಿಷ್ಟ ವರ್ಷದಲ್ಲಿಯೇ ಪ್ರಕಟವಾಗಿರಬೇಕು ಎನ್ನುವ ನಿಯಮವಿಲ್ಲ. ತಾವು ರಚಿಸಿದ ಅರ್ಹವಾದ ಕನಿಷ್ಟ ಒಂದು ಕೃತಿಯೊಂದಿಗೆ ತಮ್ಮ ಸ್ವವಿವರವನ್ನು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560 018 ಇಲ್ಲಿಗೆ ದಿನಾಂಕ 31-01-2024ರ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕು.
ಉಡುಪಿ : ನಾಡಿನ ಹಿರಿಯ ಕವಿ ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಈ ವರ್ಷ ಅಪ್ರಕಟಿತ ಕನ್ನಡ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಕೊನೆಯ ದಿನಾಂಕ 15-03-2024. ಕಳುಹಿಸಬೇಕಾದ ವಿಳಾಸ – ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ 576102. ಕಾವ್ಯ ಪ್ರಕಟಣೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ 10,000/- ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು. ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಬ್ಲಾಗ್ https://govindapairesearch.blogspot.com ಅಥವಾ ದೂರವಾಣಿ ಸಂಖ್ಯೆ – 9448868868, 9480575783. ಕಛೇರಿ: 0820 -2521159 ಸಂಪರ್ಕಿಸಬಹುದು. ಬಹುಮಾನದ ಉಳಿದ ನಿಯಮಗಳು…
ಮಂಗಳೂರು : ಬಿ.ಜಿ.ಎಂ.ಆರ್ಟ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕಲಾಗುರು ದಿ. ಬಿ.ಜಿ. ಮಹಮ್ಮದ್ರವರ 103ನೇ ಜನ್ಮ ದಿನದ ಸಂಭ್ರಮಾಚರಣೆಯ ಪ್ರಯುಕ್ತ ದಿನಾಂಕ 14-01-2024ರ ರವಿವಾರದಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಮಿನಿ ಟೌನ್ ಹಾಲ್ ನಲ್ಲಿ ‘ಬಿ.ಜಿ.ಎಂ. ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನಡೆಯಲಿದೆ. ಇದೇ ಸಮಾರಂಭದಲ್ಲಿ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಮಾನ್ಯ ಶ್ರೀ ಸುಧೀರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರಿನ ಆರ್ಟಿಸ್ಟ್ಸ್ ಕಂಬೈನ್ (ರಿ.) ಇದರ ಅಧ್ಯಕ್ಷರಾದ ಲ. ಟ್ರೆವರ್ ಪಿಂಟೋ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಹಾಗೂ ಗಲ್ಸ್ ಬಿಸಿನೆಸ್ ಮೆಶಿನ್ಸ್ (ಐ.ಬಿ.ಎಮ್.)ಇದರ ನಿವೃತ್ತ ಹಣಕಾಸು ಪ್ರಬಂಧಕರಾದ ಸಿಎ. ಜೋಸೆಫ್ ರೋಡ್ರಿಗಸ್ ಇವರು ಹೆಸರಾಂತ ಹಿರಿಯ ಚಿತ್ರಕಲಾವಿದರು, ಕಲಾ ಸಂಘಟಕರು ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಶ್ರೀ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ 2023-24ನೇ ಸಾಲಿನ ತಿಂಗಳ ಸರಣಿ ತಾಳಮದ್ದಳೆ ಕೂಟವು ದಿನಾಂಕ 01-01-2024ನೇ ಸೋಮವಾರದಂದು ಪಾರ್ತಿಸುಬ್ಬ ವಿರಚಿತ ‘ಖರಾಸುರ ವಧೆ – ರಾವಣನಿಗೆ ಶೂರ್ಪನಖಿ ದೂರು’ ಎಂಬ ಆಖ್ಯಾನದೊಂದಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷೀನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಜಯರಾಮ ಭಟ್ ದೇವಸ್ಯ (ಶ್ರೀ ರಾಮ), ಭಾಸ್ಕರ ಬಾರ್ಯ ಮತ್ತು ಶ್ರೀಧರ್ ರಾವ್ ಕುಂಬ್ಳೆ (ಶೂರ್ಪನಖಿ), ಗುಡ್ಡಪ್ಪ ಬಲ್ಯ (ರಾವಣ), ದುಗ್ಗಪ್ಪ ನಡುಗಲ್ಲು (ದೂಷಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಖರಾಸುರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗುಡ್ಡಪ್ಪ ಬಲ್ಯ ವಂದಿಸಿದರು.
ಕುಶಾಲನಗರ : ಕಾವಯಿತ್ರಿ ಕೃಪಾ ದೇವರಾಜ್ ಇವರ ಹೊಸ ಕೃತಿ ‘ಕಾರ್ಪಣ್ಯದ ಹೂವು’ ಇದರ ಲೋಕಾರ್ಪಣೆಯು ದಿನಾಂಕ 02-01-2024ರಂದು ಕುಶಾಲನಗರದ ಕಣಿವೆಯ ಸುಂದರ ಪರಿಸರದಲ್ಲಿ ಅನೌಪಚಾರಿಕ ಸಭೆಯೊಂದರಲ್ಲಿ ನಡೆಯಿತು. ಸಾಹಿತಿ ಭಾರದ್ವಾಜ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ “ಸರಳ ವ್ಯಕ್ತಿತ್ವದ ಬರಹಗಾರರಿಂದ ಆಪ್ತ ಬರಹಗಳು ಹೊರ ಹೊಮ್ಮುತ್ತವೆ.” ಎಂದರು. ಬೆಂಗಳೂರಿನ ಲೇಖಕ ಇರ್ಫಾನ್ ಮಾತನಾಡಿ “ಕೊಡಗಿನ ಸುಂದರ ಪರಿಸರ ಲೇಖಕರಿಗೆ ಸುಂದರ ವಿಷಯ ಒದಗಿಸುತ್ತದೆ.” ಎಂದು ತಿಳಿಸಿದರು. ಲೇಖಕಿ ಕೃಪಾದೇವರಾಜ್ ಮಾತನಾಡಿ “ಸರಳತೆ ಬಯಸುವ ತಾನು, ಕಥಾ ಸಂಕಲನವನ್ನೂ ಅದ್ದೂರಿಯಾಗಿ ಬಿಡುಗಡೆ ಮಾಡಲು ಬಯಸಲಿಲ್ಲ.” ಎಂದು ಹೇಳಿದರು. ಬರಹಗಾರ ನೌಶದ್ ಜನ್ನತ್, ಪರ್ತಕರ್ತ ಬಿ.ಜಿ. ಅನಂತಶಯನ, ಚುಟುಕ ಕವಿ ಹಾ.ತಿ. ಜಯಪ್ರಕಾಶ್ ಮಾತನಾಡಿದರು. ಕವನ ಸಂಕಲನದಲ್ಲಿ ಕನ್ನಡದಲ್ಲಿ ಮಂತ್ರ ಪಠಿಸುವ ಏಕೈಕ ಅರ್ಚಕ ವಾಗ್ಮಿ ಹಿರೇಮಗಳೂರು ಕಣ್ಣನ್ ಅವರ ಮುನ್ನುಡಿ, ಖ್ಯಾತ ಬರಹಗಾರ್ತಿ ಮಂಗಳನಾಡಿಗ್ ಅವರ ನುಡಿ ಅಡಕವಾಗಿರುವುದು ವಿಶೇಷ.
ಮಂಗಳೂರು : ಕದ್ರಿಯಲ್ಲಿ ದಿನಾಂಕ 08-12-2023ರಂದು ನಡೆದ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಕಟೀಲು ಮೇಳದ ಕಲಾವಿದ ಅಮ್ಮುಂಜೆ ಮೋಹನ್ ಕುಮಾರ್ ಇವರಿಗೆ ‘ಕದ್ರಿ ವಿಷ್ಟು ಪ್ರಶಸ್ತಿ -2023’ನ್ನು ಪ್ರದಾನ ಮಾಡಲಾಯಿತು. ಕದ್ರಿ ಯಕ್ಷ ಬಳಗದ ಅಧ್ಯಕ್ಷರಾದ ಕದ್ರಿ ನವನೀತ್ ಶೆಟ್ಟಿ ಮಾತನಾಡಿ, “ಕಟೀಲು ಮೇಳದಲ್ಲಿ ಮೂರು ದಶಕಗಳ ತನ್ನ ಯಕ್ಷಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಮ್ಮುಂಜೆ ಮೋಹನ್ ಕುಮಾರ್ ಅವರು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಗುಂಡಿಲ ಗುತ್ತು ಶಂಕರ ಶೆಟ್ಟಿ, ಪಡ್ರೆ ಚಂದು ಹಾಗೂ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಡಾ. ಕೊಳ್ಳೂರು ರಾಮಚಂದ್ರ ರಾವ್ ಅವರಿಂದ ನಾಟ್ಯ ಕಲಿತವರು, ಕುರಿಯ ಗಣಪತಿ ಶಾಸ್ತ್ರಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪಟ್ಲ ಸತೀಶ್ ಶೆಟ್ಟಿ ಭಾಗವತರ ಮಾರ್ಗದರ್ಶನದ ರಂಗದಲ್ಲಿ ಮೆರೆದ ಖ್ಯಾತ ಪುಂಡು ವೇಷಧಾರಿ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ-ಮುಂಡ, ಸುದರ್ಶನ, ಅಶ್ವತ್ಥಾಮ, ಹಿರಣ್ಯಾಕ್ಷ, ಋತುಪರ್ಣ, ಜಾಂಬವ, ರಕ್ತಬೀಜ ಮೊದಲಾದ ಪಾತ್ರಗಳಲ್ಲಿ ತನ್ನದೇ ಶೈಲಿಯಿಂದ ಮೆರೆಯುತ್ತಿರುವ ಸರಳ-ಸಜ್ಜನಿಕೆಯ ನಿಷ್ಠ ರಂಗ ಕಲಾವಿದ”…
ಕಾಸರಗೋಡು: ದುಬಾಯಿಯ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಪತ್ರಕರ್ತ ಹಾಗೂ ಲೇಖಕ ರವಿ ನಾಯ್ಕಾಪು ಆಯ್ಕೆಯಾಗಿದ್ದಾರೆ. ನವದೆಹಲಿಯ ಅಸೋಸಿಯೇಶನ್ ಫಾರ್ ಇಕಾನಾಮಿಕ್ ಪ್ರೋಥ್ ಸಂಘಟನೆಯು ಪತ್ರಿಕಾ ರಂಗದ ಸಮಗ್ರ ಸಾಧನೆಗೆ ಕೊಡಮಾಡುವ ಈ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕಾಸರಗೋಡಿನ ಪತ್ರಕರ್ತ ಹಾಗೂ ಲೇಖಕರಾದ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿ ಝಫರ್ ಶಮೀನ್ ಅವರು ತಿಳಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18-01-2024ರಂದು ದುಬಾಯಿಯ ಬರ್ ದುಬಾಯಿಯಲ್ಲಿರುವ ಹಾಲಿಡೇ ಇನ್ ಹೊಟೇಲ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಳೆದ ಎರಡೂವರೆ ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿರುವ ರವಿ ನಾಯ್ಕಾಪು ಅವರು ವಿವಿಧ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ವರದಿಗಾರ, ಉಪ ಸಂಪಾದಕ, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಎಂಬಿವುಗಳು ಅವರ ಪ್ರಕಟಿತ ಕೃತಿಗಳು. ಅವರ ‘ಸ್ನೇಹಗಂಗೆ’ಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿದೆ. ಅಲ್ಲದೆ ಪಠ್ಯ…
ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು ಇದರ ಅಂಗಸಂಸ್ಥೆಯಾದ ಮಹಿಳಾ ಘಟಕ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’ಯು ದಿನಾಂಕ 31-12-2023ರಂದು ಕರಂದಕ್ಕಾಡಿನ ಪದ್ಮಗಿರಿಯ ಕಲಾಕುಟೀರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ ಹಾಗೂ ಹಿರಿಯ ಸಾಹಿತಿ ಶಕುಂತಳಾ ಆರ್. ಕಿಣಿ ಮಾತನಾಡಿ “ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ತರುವ ಮೂಲಕ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ನಾರಿ ಚಿನ್ನಾರಿ ಒಳಧ್ವನಿಗೊಂದು ರಹದಾರಿ.” ಎಂದು ಹೇಳಿದರು. ನಾರಿ ಚಿನ್ನಾರಿಯ ಉಪಾಧ್ಯಕ್ಷೆ ಸಾಹಿತಿ ಯು. ಮಹೇಶ್ವರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಸನ್ನಾ ವಿ. ಚೆಕ್ಕೆಮನೆ ಅವರನ್ನು ಗೌರವಿಸಲಾಯಿತು. ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ‘ಯೋಗ ಮತ್ತು ನ್ಯಾಚುರೋಪತಿ’ ಎಂಬ ವಿಷಯದಲ್ಲಿ ಡಾ. ಅಂಕಿತಾ ಕಿಣಿ ಮಾಹಿತಿ ನೀಡಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಸಾಹಿತಿ ಶಕುಂತಳಾ ಆರ್. ಕಿಣಿ ಇವರ ಅಧ್ಯಕ್ಷತೆಯಲ್ಲಿ…
ಮಂಗಳೂರು : ಮಂಗಳೂರಿನಲ್ಲಿ ಹೊಸದಾಗಿ ರೂಪುಗೊಂಡ ‘ಸ್ವರಾನಂದ ಪ್ರತಿಷ್ಠಾನ’ವು ಬಿಇಎಮ್ ಹೈಸ್ಕೂಲಿನ ಸಭಾಂಗಣದಲ್ಲಿ ತನ್ನ ಮೊದಲನೆಯ ಕಾರ್ಯಕ್ರಮವನ್ನು ದಿನಾಂಕ 16-12-2023ರಂದು ಆಯೋಜಿಸಿತ್ತು. ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮವಾಗಿ ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 7ರವರೆಗಿನ ಸಂಗೀತ ನೀಡಿದ ರಸಾನುಭವ ಬಹುಕಾಲ ನೆನಪಿನಲ್ಲುಳಿಯುವಂಥದ್ದು. ‘ಬನಮ ಚರಾವತ ಗಯ್ಯಾ’ ಎಂಬ ಸಾಲಿನೊಂದಿಗೆ ರಾಗ ಮಾಲಗುಂಜಿಯ ಸ್ವರಗಳು ಮಧ್ಯರಾತ್ರಿ 12ರ ಸುಮಾರಿನಲ್ಲಿ ಸಭಾಂಗಣವನ್ನು ಆವರಿಸುತ್ತಿದ್ದಂತೆ, ಎದುರಿಗಿದ್ದ ಶ್ರೋತೃಗಳು ನಿದ್ರೆಯ ಆಯಾಸವನ್ನೂ ಮರೆತು ವಿದುಷಿ ಅಪೂರ್ವಾ ಗೋಖಲೆ ಮತ್ತು ಪಲ್ಲವಿ ಜೋಶಿ ಸಹೋದರಿಯರ ಮೋಹಕ ಗಾಯನದಲ್ಲಿ ಲೀನರಾಗಿದ್ದರು. ಹಿಂದೂಸ್ಥಾನಿ ಸಂಗೀತ ಪರಂಪರೆಯಲ್ಲಿ ಹಿಂದೆ ರೂಢಿಯಲ್ಲಿದ್ದು ಈಗ ಕಡಿಮೆಯಾಗುತ್ತಿರುವ ಬೈಠಕ್ ಕಾರ್ಯಕ್ರಮಗಳನ್ನು ಮಂಗಳೂರು ಪ್ರದೇಶದಲ್ಲಿ ಆರಂಭಿಸುವ ಹುಮ್ಮಸ್ಸಿನಿಂದ ಸಮಾನ ಸಂಗೀತಾಸಕ್ತರು ಸೇರಿ ಆರಂಭಿಸಿದ ಸಂಸ್ಥೆಯೇ ‘ಸ್ವರಾನಂದ ಪ್ರತಿಷ್ಠಾನ’. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ ಕಲಾವಿದರ ವಿಭಿನ್ನ ಪ್ರಸ್ತುತಿ ಕೇಳಲು ಲಭ್ಯವಾಯಿತು. ಮಾತ್ರವಲ್ಲದೆ, ರಾಗ-ಸಮಯ ಪದ್ಧತಿಗನುಸಾರವಾಗಿ ರಾತ್ರಿಯಿಂದ ಬೆಳಗಿನವರೆಗಿನ ತುಂಬಾ ವಿರಳವಾಗಿ ಕೇಳ ಸಿಗುವ ರಾಗಗಳನ್ನು ಆಸ್ವಾದಿಸುವ ಅವಕಾಶವಾಯಿತು. ಕಾರ್ಯಕ್ರಮವನ್ನು…
ಕಾರ್ಕಳ : ಭುವನೇಂದ್ರ ಪ್ರೌಢ ಶಾಲೆಯ ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ಕವನಸಂಕಲನ ‘ಸಮರ್ಪಣ’ ಇದರ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 17-12-2023ರಂದು ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಕೆ. ಶಾಂತಾರಾಮ ಕಾಮತ್ ಸಾಂಸ್ಕೃತಿಕ ಕಲಾಮಂಟಪದಲ್ಲಿ ನಡೆಯಿತು. ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುದ್ರಾಡಿಯ ಎನ್. ಎಸ್. ಡಿ. ಎಮ್. ಅನುದಾನಿತ ಪ್ರಾಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ “ಮನಸ್ಸಿಗೆ ಮುದವನ್ನು ನೀಡುವ ಜೀವನಕ್ಕೆ ಹಿತವನ್ನು ಒದಗಿಸುವ ಸಾಧನವೇ ಸಾಹಿತ್ಯಪ್ರಕಾರ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳು ಕೂಡ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಕಲೆ ಸಾಹಿತ್ಯ ಸಂಗೀತದಿಂದ ಅಧ್ಯಾತ್ಮದ ಅನುಸಂಧಾನ ಕೂಡ ಸಾಧ್ಯವಿದೆ.” ಎಂದು ಹೇಳಿದರು. ಮುಖ್ಯಅತಿಥಿಗಳಾಗಿ ಅತ್ತೂರು ಸಂತ ಲಾರೆನ್ಸ್ ಅನುದಾನಿತ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ, ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ಇದರ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕಿ ಲಕ್ಷ್ಮೀ ಹೆಗ್ಡೆ, ವಿಶ್ರಾಂತ ಪತ್ರಕರ್ತ ಕೆ. ಪದ್ಮಾಕರ ಭಟ್, ಉದ್ಯಮಿ ಹರೀಶ…