Author: roovari

ಬೆಳಗಾವಿ : ಬೆಳಗಾವಿಯ ಸಮಾಚಾರ ಸೇವಾ ಸಂಘ ಹಾಗೂ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಗೋಕಾಕ ಇದರ ಸಹಯೋಗದಲ್ಲಿ ಸಾಮಾಜಿಕ, ಶಿಕ್ಷಣ. ಸಾಹಿತ್ಯ ಹಾಗೂ ವಿವಿಧ ಕಲೆಗಳನ್ನಾಧರಿಸಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಶಿಕ್ಷಕ ದಿನಾಚರಣೆಯ ನಿಮಿತ್ತ ದಿನಾಂಕ 08 ಸೆಪ್ಟೆಂಬರ್ 2024ರ ಭಾನುವಾರದಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ‘ಜೀವ‌ಮಾನದ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕೊಳಚಪ್ಪೆ ಗೋವಿಂದ ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಈಶ್ವರ ಮಮದಾಪೂರ, ಸಂಯೋಜಕ ಬಸವರಾಜ ಉಪ್ಪಾರಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು. ಡಾ. ಸುರೇಶ ನೆಗಳಗುಳಿ ಇವರು ಬಂಟ್ವಾಳ ತಾಲೂಕಿನ ನೆಗಳಗುಳಿ ಮೂಲದವರಾಗಿದ್ದು, ಮೂವತ್ತೈದು ವರ್ಷಗಳಿಂದ ವೈದ್ಯಕೀಯ ಶಿಕ್ಷಕ, ಪ್ರಾಚಾರ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುಷಾರ ಮಾಸಪತ್ರಿಕೆಯಲ್ಲಿ…

Read More

ಅಡೂರು : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಕೊರತಿಮೂಲೆಯ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ಸ್ವಾತಂತ್ರ್ಯೋತ್ಸವ-2024ರ ಅಂಗವಾಗಿ ಅಂಚೆಯ ಮೂಲಕ ನಡೆಸಲಾದ ಕಾಸರಗೋಡು ಜಿಲ್ಲೆಯ ಕನ್ನಡ ಪ್ರೌಢಶಾಲಾ ವಿಭಾಗದ ‘ಕನ್ನಡ ಕವನ ರಚನಾ ಸ್ಪರ್ಧೆ’ಯಲ್ಲಿ ಮುಳ್ಳೇರಿಯದ ಜಿ.ವಿ.ಎಚ್.ಎಸ್. ಶಾಲೆಯ 10ನೇ ತರಗತಿಯ ಸಿಂಚನ ಎ. ಅವರು ಬರೆದ ‘ದುಃಖದ ಆ ಕ್ಷಣಗಳು’ ಕವನವು ಪ್ರಥಮ ಸ್ಥಾನ ಪಡೆದಿದೆ. ದ್ವಿತೀಯ ಬಹುಮಾನವನ್ನು ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದ 8ನೇ ತರಗತಿಯ ಕವನ ಅವರ ‘ಸ್ವಾತಂತ್ರ್ಯೋತ್ಸವ’ ಕವನ ಪಡೆದಿದೆ. ತೃತೀಯ ಬಹುಮಾನವನ್ನು ಕಾರಡ್ಕ ಜಿ.ವಿ.ಎಚ್.ಎಸ್. ಶಾಲೆಯ 10ನೇ ತರಗತಿಯ ಕೀರ್ತನ ಕೆ. ಅವರ ‘ಬಡಜೀವ’ ಕವನ ಗಳಿಸಿದೆ. ಪ್ರೋತ್ಸಾಹಕ ಬಹುಮಾನವು ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯ 9ನೇ ತರಗತಿಯ ಕೆ. ಕವನ ಅವರು ಬರೆದ ‘ಸ್ವಾತಂತ್ರ್ಯದ ಹರುಷ’ ಪಡೆದುಕೊಂಡಿದೆ. ವಿಜೇತರಿಗೆ ಬಹುಮಾನ ವಿತರಣೆಯು ದಿನಾಂಕ 15 ಸೆಪ್ಟೆಂಬರ್ 2024ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯುವ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ,…

Read More

ಕೋಟ : ಯಕ್ಷಗಾನ ತರಬೇತಿ ಕೇಂದ್ರದ ವತಿಯಿಂದ ಕೋಟದ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಯಕ್ಷಗಾನ ನೃತ್ಯ ತರಬೇತಿಯು ದಿನಾಂಕ 21 ಆಗಸ್ಟ್ 2024ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಉಪೇಂದ್ರ ಸೋಮಯಾಜಿ “ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ನಿರಂತರ ಕಲಿಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದು ನುಡಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಜಾರಾಮ್ ಐತಾಳ್ ವಹಿಸಿದ್ದರು. ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ಎಂ.ಎನ್. ಮಧ್ಯಸ್ಥ, ಯಕ್ಷಗುರು ಕೃಷ್ಣಮೂರ್ತಿ ಉರಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಜೋಗಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದಿವಾಕರ್ ಐತಾಳ್ ಸ್ವಾಗತಿಸಿ, ನಿರೂಪಿಸಿದರು. ನಂತರ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಮಾಯಾಪುರಿ ಮಹಾತ್ಮೆ’ ಎಂಬ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತು.

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಕಲಾವಿದ ದಿ. ವಿ.ಟಿ. ಶ್ರೀನಿವಾಸ್ ನೆನಪು, ಗಾನ ಮತ್ತು ನುಡಿ ನಮನ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದು, ಉದ್ಘಾಟನೆಯನ್ನು ಪೊನ್ನಂಪೇಟೆಯ ನೀನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಚೇಂದಿರ ನಿರ್ಮಲ ಬೋಪಣ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಾನಲ್ ಕೂರ್ಗ್ ಇವರ ಸಂಪಾದಕರಾದ ಶ್ರೀಧರ ನೆಲ್ಲಿತಾಯ, ಆಕಾಶವಾಣಿ ಕಲಾವಿದರಾದ ಬಿ.ಎ. ಗಣೇಶ್, ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ವ್ಯವಸ್ಥಾಪಕರಾದ ವಿದ್ವಾನ್ ದಿಲಿ ಕುಮಾರ್, ಅದ್ಯಾಪಕರು ಮತ್ತು ಕಲಾವಿದರಾದ ಕೆ. ಚಂದ್ರಶೇಖರ್, ತಬಲ ಕಲಾವಿದರಾದ ಮುರ್ನಾಡಿನ ಚಂದ್ರು, ಪೊನ್ನಂಪೇಟೆ ತಾಲೂಕು ಕನ್ನಡ…

Read More

ಆಹ್ಲಾದಕರ ನರ್ತನವೊಂದು ಹೇಗಿರುತ್ತದೆ ಎಂಬುದನ್ನು ಸಾಕ್ಷೀಕರಿಸಿದ ಆರಭಿಯ ಮನಮೋಹಕ ನೃತ್ತ ಲಾಸ್ಯಗಳ – ಶಿಲ್ಪಾತ್ಮಕ ನೃತ್ಯಭಂಗಿಗಳ ಅನನ್ಯತೆ ಕಣ್ಮನ ಸೂರೆಗೊಂಡಿತು. ಇತ್ತೀಚೆಗೆ, ಜಯನಗರದ ಜೆ.ಎಸ್.ಎಸ್. ವೇದಿಕೆಯೆಂಬ ರಂಗೋದ್ಯಾನದಲ್ಲಿ ನಾಟ್ಯಮಯೂರಿಯೊಂದು ಸ್ವಚ್ಚಂದವಾಗಿ ಕುಣಿದಾಡಿ ತನ್ನ ನೃತ್ಯ ಸಾಧನೆಯ ಚೆಂಬೆಳಕನ್ನು ಹೊರಚೆಲ್ಲಿ ಕಲಾರಸಿಕರ ಹೃದಯವನ್ನು ಆಹ್ಲಾದಗೊಳಿಸಿತು. ಉದಯೋನ್ಮುಖ ನೃತ್ಯ ಕಲಾವಿದೆ ಆರಭಿ ಅಂದು ತನ್ನ ರಂಗಾರ್ಪಣೆಯಲ್ಲಿ ನುರಿತ ನರ್ತಕಿಯಂತೆ ಲೀಲಾಜಾಲವಾಗಿ ಪಾದಭೇದಗಳ ಸೌಂದರ್ಯದಲ್ಲಿ, ಭಾವನಿಮಗ್ನತೆಯ ಸುಂದರಾಭಿನಯದಲ್ಲಿ ಎರಡು ಗಂಟೆಗಳ ಕಾಲ ನಿರಾಯಾಸವಾಗಿ ನಗುಮೊಗದಿಂದ ನರ್ತಿಸಿದ್ದು ವಿಶೇಷ. ವಿ. ಪೂರ್ಣಿಮಾ ಗುರುರಾಜರ ಶಿಷ್ಯೆ, ತನ್ನ ಹೆಸರಿಗೆ ಅನ್ವರ್ಥಕವಾದ ಆರಭಿ ರಾಗದ ‘ಶ್ರೀ ಸರಸ್ವತಿ ನಮೋಸ್ತುತೆ’ಯ ನಂತರ, ಗಣಪತಿ ಸ್ತುತಿ- ‘ಆದಿಪೂಜಿತ ಗಣೇಶ ಚರಣಂ’ ನೆನೆಯುತ್ತ ಮೋದಕಪ್ರಿಯನ ವಿವಿಧ ರೂಪ – ಭಂಗಿಗಳನ್ನು ತನ್ನ ಸುಕೋಮಲ ಆಂಗಿಕಾಭಿನಯದಿಂದ ಕಟ್ಟಿಕೊಟ್ಟಳು. ಹದವಾದ ಮೈಕಟ್ಟಿನ ಕಲಾವಿದೆಯ ಸ್ಫುಟವಾದ ಹಸ್ತಮುದ್ರೆ, ಹರಿತ ನೃತ್ತಾವಳಿಗಳು, ‘ಪುಷ್ಪಾಂಜಲಿ’ಯ ಸ್ವರಾವಳಿಗಳ ಖಚಿತ ಹೆಜ್ಜೆಗಳು ನೋಡಲು ಚೆಂದವೆನಿಸಿದವು. ಮೋಹನ ರಾಗದ ‘ಜತಿಸ್ವರ’- ಆಮೋದಪ್ರದವಾಗಿ ಸಾಗುತ್ತ, ಆರಭಿಯ ಅಂಗಶುದ್ದ…

Read More

ಕಟೀಲು : ಕಟೀಲು ಕೇತ್ರದ ಸರಸ್ವತಿ ಸಭಾಭವನದಲ್ಲಿ ಏರ್ಪಡಿಸಲಾದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನವು ದಿನಾಂಕ 05 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯ ಸಮ್ಮೇಳನಗಳು ಒಳ್ಳೆಯ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡಬೇಕು. ಸಾಹಿತ್ಯ ಯಾವುದೇ ಪ್ರಕಾರದಲ್ಲಿದ್ದರೂ ಓದುಗರು ಮೆಚ್ಚುವಂತಿರಬೇಕು. ಶಿಕ್ಷಕರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಒಳ್ಳೆಯ ವಿಚಾರಗಳನ್ನು ಜನರಿಗೆ ನೀಡಬೇಕು” ಎಂದು ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾದ ಹರಿನಾರಾಯಣ ಆಸ್ರಣರು ದೀಪಪ್ರಜ್ವಲನೆ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. “ಶ್ರೀ ಕ್ಷೇತ್ರದಲ್ಲಿ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ವಿಶೇಷ ಪ್ರೋತ್ಯಾಹ ನೀಡಲಾಗುತ್ತದೆ. ಶ್ರೀದೇವಿಯ ಅನುಗ್ರಹದಿಂದ ಕ್ಷೇತ್ರದಲ್ಲಿ ಭಕ್ತಾದಿಗಳ ಇಷ್ಟಾರ್ಥವು ನೆರವೇರುತ್ತವೆ” ಎಂದು ಆಶೀರ್ವಚನ ನೀಡಿದರು. ಹೊಸಕೋಟೆಯ ಹಿರಿಯ ಶಿಕ್ಷಕ ಸಾಹಿತಿ ಶ್ರೀಕಾಂತ್ ಕೆ.ವಿ. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕ.ಚು.ಸಾ.ಪ.ರಾಜ್ಯ ಸಂಚಾಲಕ…

Read More

ಅಂಕೋಲಾ : ಓಂಕಾರ ಪ್ರಕಾಶನ ಕುಮಟಾ ಮತ್ತು ಡಾ. ಎಮ್.ಆರ್. ನಾಯಕ ಯಕ್ಷ ಪ್ರತಿಷ್ಠಾನ ಹಿಚ್ಕಡ ಇವರ ಸಹಯೋಗದಲ್ಲಿ ಡಾ. ಎಮ್.ಆರ್. ನಾಯಕರು ರಚಿಸಿದ ‘ಯಕ್ಷಲೋಕದ ನಾಡವರು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 15-09-2024ರಂದು ಸಂಜೆ 4-00 ಗಂಟೆಗೆ ಅಂಕೋಲಾದ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೊನ್ನಾವರದ ಜಾನಪದ ವಿದ್ವಾಂಸರಾದ ಡಾ. ಎಮ್.ಆರ್. ನಾಯಕ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಂಕೋಲಾದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕೆ.ವಿ. ನಾಯಕ ಇವರು ಉದ್ಘಾಟನೆ ಮಾಡಲಿರುವರು. ಉತ್ತರ ಕನ್ನಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎನ್. ವಾಸರೆ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಆರ್.ಜಿ. ಗುಂದಿ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ‘ವಾಲಿಮೋಕ್ಷ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಮಂಗಳೂರು : ಮಕ್ಕಳ ಸಾಹಿತ್ಯ ಸಂಗಮ (ರಿ.) ಆಯೋಜಿಸುವ ‘ಮಕ್ಕಳಧ್ವನಿ-2024’ ಕಾರ್ಯಕ್ರಮವು 14 ಸೆಪ್ಟಂಬರ್ 2024 ರಂದು ಸುರತ್ಕಲ್ ಇಲ್ಲಿನ ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆ ಇಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಮೂಡಬಿದ್ರಿ ಆಳ್ವಾಸ್ ಕಾಲೇಜಿನ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಆಯ್ಕೆಯಾಗಿದ್ದಾರೆ. ಅಂದು ನಡೆಯಲಿರುವ ಕವಿ ಗೋಷ್ಠಿಯ ಅಧ್ಯಕ್ಷರಾಗಿ ಕುಂದಾಪುರದ ಕೋಟ ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಮಾನಸ. ಜಿ ಹಾಗೂ ಕಥಾಗೋಷ್ಠಿಯ ಅಧ್ಯಕ್ಷರಾಗಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ. ಯು. ಸಿ. ವಿದ್ಯಾರ್ಥಿನಿಯಾಗಿರುವ ತನ್ವಿತಾ ವಿ. ಆಯ್ಕೆಯಾಗಿದ್ದಾರೆ.                                                                        …

Read More

ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ಕರ್ನಾಟಕದಲ್ಲಿ ಬೀದಿ ನಾಟಕ ಪ್ರಾರಂಭಿಸಿದ ಎ.ಎಸ್. ಮೂರ್ತಿ ಇವರ ನೆನಪಿನಲ್ಲಿ ‘ಬೀದಿ ನಾಟಕ ಶಿಬಿರ’ವನ್ನು ದಿನಾಂಕ 23-09-2024ರಿಂದ 08-10-2024ರವರೆಗೆ ಬೆಂಗಳೂರಿನ ಹನುಮಂತ ನಗರ ಬಾಲಾಜಿ ವಿದ್ಯಾ ನಿಕೇತನ್ ಇಲ್ಲಿ ಆಯೋಜಿಸಲಾಗಿದೆ. ಜಯತೀರ್ಥ ಇವರು ಈ ಶಿಬಿರದ ನಿರ್ದೇಶಕರಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9845825217 ಮತ್ತು 6364522760 ಸಂಪರ್ಕಿಸಿರಿ. ಅಭಿನಯ ತರಂಗ ರಂಗಶಾಲೆಯನ್ನು ಪ್ರಸಿದ್ಧ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ, ಆಕಾಶವಾಣಿ ಈರಣ್ಣನೆಂದೇ ಪ್ರಸಿದ್ಧರಾಗಿದ್ದ ಎ.ಎಸ್. ಮೂರ್ತಿಯವರು ಬೆಂಗಳೂರಿನ ಹನುಮಂತನಗರದಲ್ಲಿ 1964ರಲ್ಲಿ ಸ್ಥಾಪಿಸಿದರು. ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕಾಗಿ ಈ ರಂಗಶಾಲೆಯನ್ನು ಪ್ರಾರಂಭಿಸಲಾಗಿದ್ದು, ಈ ಸಂಸ್ಥೆಯಿಂದ ನಾಟಕರಂಗ, ಟಿ.ವಿ.ಗೆ ಹಲವಾರು ಕಲಾವಿದರ ಕೊಡುಗೆ ದೊರೆತಿದೆ.

Read More

ಮಂಗಳೂರು: ಮಂಗಳೂರಿನ ತುಳು ಸಾಹಿತ್ಯ ಅಕಾಡೆಮಿ ಇದರ ಸಿರಿಚಾವಡಿಯಲ್ಲಿ ವಿದ್ವಾಂಸರೊಂದಿಗೆ ಸಮಾಲೋಚನಾ ಗೋಷ್ಠಿ ಕಾರ್ಯಕ್ರಮವು 04 ಸೆಪ್ಟೆಂಬರ್ 2024ರ ಬುಧವಾರದಂದು ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಮಾತನಾಡಿ “ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಿರಂತರವಾಗಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೀದರ್‌ನಿಂದ ಕಾಸರಗೋಡು ವರೆಗೆ 250 ಕಾಲೇಜುಗಳ 50 ಸಾವಿರ ಮಕ್ಕಳಲ್ಲಿ ಕನಕದಾಸರ ಬಗ್ಗೆ ಚಿಂತನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನದ ಭಾಗವಾಗಿ ರಾಜ್ಯಾದ್ಯಂತ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸಂವೇದನೆ ರೂಪಿಸುವ ಭಾಗವಾಗಿ ‘ಕನಕ ಓದು’ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತಿದೆ. ತತ್ವಪದಗಳ ಸಂಗ್ರಹ, ಪ್ರಕಾಶನ ನಡೆಯುತ್ತಿದೆ. 250 ತತ್ವಪದಕಾರರ ಪರಿಚಯ ಗ್ರಂಥ ಹೊರತರುವ ಯೋಜನೆ ಹಾಗೂ ಕನಕ ಸಾಹಿತ್ಯ, ಕೀರ್ತನೆ ಸಾಹಿತ್ಯಗಳ ತೌಲನಿಕ ಅಧ್ಯಯನ ಮಾಡುವುದಕ್ಕೂ ಯೋಜನೆ…

Read More