Author: roovari

ಕಾರ್ಕಳ : ಕಾಂತಾವರ ಕನ್ನಡ ಸಂಘ ಹಾಗೂ ಕಾರ್ಕಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇವುಗಳ ಸಹಯೋಗದೊಂದಿಗೆ ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಂಗಳ ಅರಿವು-ತಿಳಿವು ಉಪನ್ಯಾಸ ಕಾರ್ಯಕ್ರಮವು ದಿನಾಂಕ 23-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಇವರು ‘ಜನ್ನನ ಯಶೋಧರ ಚರಿತೆಯ ಅಮೃತಮತಿ’ ವಿಷಯದ ಕುರಿತು ಉಪನ್ಯಾಸ ನೀಡುತ್ತಾ “ಕನ್ನಡ ಸಾಹಿತ್ಯಲೋಕದಲ್ಲಿ ಬಹುಬಗೆಯ ವಿಮರ್ಶೆಗೆ ಒಳಗಾದ ಜನ್ನನ ಯಶೋಧರ ಚರಿತೆ ಕಾವ್ಯದ ‘ಅಮೃತಮತಿ’ ಪಾತ್ರದ ಮೂಲಕ, ಹೆಣ್ಣೊಬ್ಬಳ ವಿಕೃತ ಪ್ರಣಯವನ್ನು ಚಿತ್ರಿಸಲಾಗಿದೆ. ‘ಜೀವದಯೆ ಜೈನಧರ್ಮ’, ‘ಅಹಿಂಸಾ ಪರಮೋ ಧರ್ಮಃ’ ಎನ್ನುವುದನ್ನು ಸಾರುವುದಕ್ಕೆ ಜನ್ನ ‘ಯಶೋಧರ ಚರಿತೆ’ ರಚಿಸಿದ್ದರೂ ಈ ಕಾವ್ಯದೊಳಗಿನ ಯಶೋಧರನ ಕಥೆ, ಅಮೃತಮತಿ ಹಾಗೂ ಅಷ್ಟಾವಂಕರ ಪ್ರಣಯ ಪ್ರಸಂಗಗಳು ವಿದ್ವತ್ ವಲಯದಲ್ಲಿ ಚರ್ಚೆಯ ಪ್ರಧಾನ ಅಂಶಗಳಾಗಿವೆ. ಸಕಲಗುಣಸಂಪನ್ನನಾದ ಗಂಡನನ್ನು ವಂಚಿಸಿ, ವಿಕಲಾಂಗನಾದ ಮಾವಟಿಗನೊಂದಿಗೆ ಅನೈತಿಕ ಸಂಬಂಧ ಹೊಂದುವ ಅಮೃತಮತಿ, ಗಂಡ ಹಾಗೂ ಅತ್ತೆ ಚಂದ್ರಮತಿಯನ್ನು ಕೊಂದು ತಾನೂ ಕುಷ್ಠರೋಗದ…

Read More

ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕ ಹಾಗೂ ಮಹಿಳಾ ಘಟಕದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಬಂಟ್ವಾಳ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ದಿನಾಂಕ 25-12-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ನ್ಯಾಯಾಧೀಶರಾದ ದಿನೇಶ್‌ ಹೆಗ್ಡೆ ಬದ್ಯಾರು ಅವರು ಮಾತನಾಡಿ “ಯಕ್ಷಗಾನದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿರುವ ಪಟ್ಲ ಸತೀಶ್ ಶೆಟ್ಟಿಯವರು ಕಲಾವಿದರಿಗೊಂದು ಶಕ್ತಿಯಾಗಿದ್ದಾರೆ. ಯಕ್ಷಗಾನದಿಂದ ಜ್ಞಾನದ ವೃದ್ಧಿಯಾಗುತ್ತಿದ್ದು, ಮಕ್ಕಳಲ್ಲು ಯಕ್ಷಗಾನದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹಿಸಬೇಕು” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಯಕ್ಷಗಾನದಲ್ಲು ಸಾಕಷ್ಟು ಪರಿವರ್ತನೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಅವರಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಪಟ್ಲ ಫೌಂಡೇಶನ್‌ನ ಪುಂಜಾಲಕಟ್ಟೆ ಘಟಕ ಯಕ್ಷ ಶಿಕ್ಷಣದ ಮೂಲಕ ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿರುವುದು ಶ್ಲಾಘನೀಯವಾಗಿದೆ. ಸರಕಾರಿ ಮತ್ತು ಖಾಸಗಿ ಸಹಿತ ಒಟ್ಟು 40 ಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷ…

Read More

ಮಂಗಳೂರು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79ನೇ ವಾರ್ಷಿಕೋತ್ಸವವು ದೇಲಂಪಾಡಿಯ ಕೀರಿಕ್ಕಾಡು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 23-12-2023ರಂದು ಜರಗಿತು. ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಎಡನೀರಿನ ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಅವರು ಮಾತನಾಡಿ “ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಗುರುಕುಲವನ್ನು ಸ್ಥಾಪಿಸಿ ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಓರ್ವ ಅನನ್ಯ ಸಾಧಕರು. ಹಳೆಯ ತಲೆಮಾರಿನ ಪ್ರಮುಖ ಅರ್ಥಧಾರಿಯಾಗಿ, ಹಲವು ಪ್ರಸಂಗಗಳ ಕರ್ತೃವಾಗಿ ಅವರ ಕೊಡುಗೆ ಅಪಾರ. ಅವರು ಹುಟ್ಟು ಹಾಕಿದ ಈ ಸಂಘ ಇಷ್ಟು ದೀರ್ಘಕಾಲ ಕಲಾ ಸೇವೆಯಲ್ಲಿ ನಿರತವಾಗುವುದಕ್ಕೆ ಅವರ ಸಂಕಲ್ಪ ಶಕ್ತಿಯೇ ಪ್ರಮುಖ ಕಾರಣ” ಎಂದರು. ಹಿರಿಯ ಕವಯಿತ್ರಿ ಸತ್ಯವತಿ ಯಸ್. ಭಟ್ ಕೊಳಚಪ್ಪು ಸಂಸ್ಮರಣ ಭಾಷಣ ಮಾಡಿ ಕೀರಿಕ್ಕಾಡು ಅವರ ಬದುಕು ಮತ್ತು ಸಾಧನೆಗಳನ್ನು…

Read More

ಕಾಸರಗೋಡು : ಕಾಸರಗೋಡಿನ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಆಯೋಜಿಸಿದ ಐದು ದಿನಗಳ ‘ಯುಕ್ಷ ಪಂಚಕ’ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 23-12-2023ರಂದು ಮಂಗಳೂರಿನ ಪಣಂಬೂರಿನಲ್ಲಿರುವ ಶ್ರೀ ನಂದನೇಶ್ವರ ದೇವಳದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಪಿ. ಅನಂತ ಐತಾಳರು ಮಾತನಾಡಿ “ಯಕ್ಷಗಾನಕ್ಕೆ ಭಾಷೆ ರಾಜ್ಯಗಳ ಬೇಧವಿಲ್ಲ. ಕಾಸರಗೋಡಿನ ಕೊಲ್ಲಂಗಾನವೂ ಮಲೆಯಾಳೀ ಪ್ರದೇಶದಲ್ಲಿದ್ದರೂ ನಮ್ಮ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನವನ್ನು ಶುದ್ಧ ಕನ್ನಡದಲ್ಲಿ ಹಾಗೂ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾ ಜನರಂಜನೆ ಮಾಡುತ್ತಾ ಬರುತ್ತಿದೆ. ನಟನಾಪ್ರಿಯನಾದ ಶ್ರೀ ನಂದನೇಶ್ವರ ದೇವಳದಲ್ಲಿ ಕಳೆದ 7 ವರ್ಷಗಳಿಂದ ‘ಯಕ್ಷ ಪಂಚಕ’ವನ್ನು ನಡೆಯುತ್ತಾ ಬರುತ್ತಿದೆ. ನಾವು ನಮ್ಮ ಕಡೆಯಿಂದ ಪೂರ್ಣ ಬೆಂಬಲ ನೀಡುತ್ತಾ ಬರುತ್ತಿದ್ದೇವೆ. ಕಲೆ ಹಾಗೂ ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ.” ಎಂದು ಹೇಳಿದರು. ಹಿರಿಯ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಯಕ್ಷಗಾನ ಕಲಾವಿದ ಶ್ರೀ ಶ್ರೀಧರ ಐತಾಳರು ದೇವಸ್ಥಾನದ ಪ್ರೋತ್ಸಾಹವನ್ನು ನೆನಪಿಸುತ್ತಾ ಮೇಳಕ್ಕೆ ಶುಭ ಹಾರೈಸಿದರು. ಕಲಾ ಪೋಷಕರಾದ ಶ್ರೀ ಗಣಪತಿ ಐತಾಳ್, ಶ್ರೀ ರಾಜೇಶ್…

Read More

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ ಮುನಿಯಾಲು ಇವರ ಸಹಕಾರದೊಂದಿಗೆ ‘ಕನ್ನಡ ಡಿಂಡಿಮ’ ಸರಣಿಯ 7ನೇ ಕಾರ್ಯಕ್ರಮ ದಿನಾಂಕ 22-12-2023ರಂದು ಕೆ.ಪಿ.ಎಸ್. ಮುನಿಯಾಲು ಇಲ್ಲಿ ನಡೆಯಿತು. ಕನ್ನಡ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ ಅಮೀನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುನಿಯಾಲು ಇಲ್ಲಿ ಉದ್ಯಮಿಗಳಾದ ದಿನೇಶ ಪೈ ಉದ್ಘಾಟಿಸಿ, ಮಾತನಾಡಿ “ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಕನ್ನಡ ಡಿಂಡಿಮದಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಪ್ರೀತಿಯನ್ನು ಬೆಳೆಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸ್ಪರ್ಧೆ ಮಾಡಿ ಗುರುತಿಸಿ ಅಭಿನಂದಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಶ್ಲಾಘನೀಯವಾದದ್ದು.” ಎಂದು ಹೇಳಿದರು. ಗೋಪಿನಾಥ ಭಟ್ ಮಾತನಾಡಿ “ಇದು ವಿದ್ಯಾರ್ಥಿಗಳಿಗೆ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮದ ಮೂಲಕ ಭಾಷೆಯ ಬಗ್ಗೆ ಆಸಕ್ತಿ ಬೆಳೆಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚು ನಡೆಯಬೇಕು. ವಿದ್ಯಾರ್ಥಿಗಳು ಮತ್ತು ನಾವು ಎಲ್ಲೇ…

Read More

ಮಂಗಳೂರು : ಶಕ್ತಿನಗರದ ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯು 20 ವರ್ಷ ಪೂರೈಸಿದ ನೆನಪಿಗಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆ ‘ಟ್ವಿಂಕ್ಲಿಂಗ್ ಸ್ಟಾರ್ -2023′ ಕಾರ್ಯಕ್ರಮವನ್ನು ದಿನಾಂಕ 13-12-2023 ಮತ್ತು 14-12-2023ರಂದು ಅಯೋಜಿಸಲಾಗಿತ್ತು. ಹುಲಿವೇಷ ಧರಿಸಿದ್ದ ಮೂವರು ಭಿನ್ನ ಸಾಮರ್ಥ್ಯದ ಮಕ್ಕಳು ತಾಸೆ ಪೆಟ್ಟಿಗೆ ಲಯಬದ್ಧವಾಗಿ ಹೆಜ್ಜೆ ಹಾಕಿದರೆ, ಶ್ರೀದೇವಿ, ಮಹಿಷಾಸುರ ಮೊದಲಾದ ಪೌರಾಣಿಕ ಯಕ್ಷಗಾನ ವೇಷಧಾರಿಗಳು ಚೆಂಡೆವಾದನ, ಕೊಂಬು ಕಹಳೆಗಳೊಂದಿಗೆ ವೇದಿಕೆ ಏರಿದರು. ಭಿನ್ನ ಸಾಮರ್ಥ್ಯದ ಮಿನುಗು ತಾರೆಗಳು ಇಲ್ಲಿನ ಪುರಭವನದಲ್ಲಿ ಜಾನಪದ ಲೋಕವೇ ಅವತರಿಸುವಂತೆ ಮಾಡಿದರು. ಇದೇ ವೇಳೆ ರಾಜ್ಯ ಮಟ್ಟದ ಸ್ಪರ್ಧೆಯ ಟ್ರೋಫಿಗಳ ಅನಾವರಣ ನಡೆಯಿತು. ಸಾನಿಧ್ಯ ಶಾಲೆಯ ವಿಶೇಷ ವಿದ್ಯಾರ್ಥಿನಿಯರು ದೀಪ ನೃತ್ಯದ ಮೋಹಕ ಪ್ರಸ್ತುತಿಯ ಮೂಲಕ ರಾಜ್ಯದ ನಾನಾ ಭಾಗಗಳಿಂದ ಬಂದ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸ್ವಾಗತ ಕೋರಿದರು. ಝಗಮಗಿಸುವ ಬೆಳಕಿನ ಲೋಕ, ಚೆಂದದ ವಸ್ತ್ರಾಲಂಕಾರ, ಅದಕ್ಕೆ ಪೂರಕ ನೃತ್ಯ ಸಂಯೋಜನೆಯ…

Read More

ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ ಹೊಸಕೋಟೆಯವರು ಆಯೋಜಿಸಿರುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ (ರಿ.) ಕಲಾ ತಂಡದಿಂದ ‘ಶಿವ ಸಂಚಾರ -23’ ಮೂರು ದಿನಗಳ ನಾಟಕೋತ್ಸವವನ್ನು ವೇದಿಕೆ ಅಧ್ಯಕ್ಷರಾದ ಕೆ.ವಿ. ವೆಂಕಟರಮಣಪ್ಪ @ ಪಾಪಣ್ಣ ಕಾಟಂ ನಲ್ಲೂರು ದಿನಾಂಕ 19-12-2023ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಉದ್ಘಾಟಿಸಿದರು. ಮೂರು ದಿನಗಳ ನಾಟಕೋತ್ಸವದಲ್ಲಿ ಈ ಬಾರಿ ವಿಶೇಷ ನಾಟಕಗಳು ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಪಾಲ್ಗೊಳ್ಳಲು ಕೋರಿದರು. ಇದೇ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಮಾಲತೇಶ ಬಡಿಗೇರರನ್ನು ಮತ್ತು ಸಂಚಾರದ ವ್ಯವಸ್ಥಾಪಕರಾದ ಜೀವನ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೃತ್ತಿ ರಂಗಭೂಮಿಯ ಪ್ರಸಿದ್ಧ ನಾಟಕ ಬಿಜಾಪುರದ ಕೆ.ಎನ್. ಸಾಳುಂಕೆ ಕೃತಿ ‘ತಾಳಿಯ ತಕರಾರು’ನ್ನು ಬಿಸ್ಮಿಲ್ಲಾಖಾನ್ ರಾಷ್ಟ್ರೀಯ ಪುರಸ್ಕಾರ ಕನ್ನಡಕ್ಕೆ ಮೊದಲ ಬಾರಿಗೆ ತಂದ ಮಾಲತೇಶ ಬಡಿಗೇರರ ನಿರ್ದೇಶನದಲ್ಲಿ ಪ್ರದರ್ಶನ ಕಂಡು ನೆರೆದ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿತು. ವೇದಿಕೆ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಎಂ.…

Read More

ಮಂಗಳೂರು : ವಿದ್ಯಾಪ್ರಕಾಶನ ಮಂಗಳೂರು ವತಿಯಿಂದ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ’ ಬಿಡುಗಡೆ ಸಮಾರಂಭ ನಗರದ ಪತ್ರಿಕಾಭವನದಲ್ಲಿ ದಿನಾಂಕ 21-12-2023ರಂದು ನಡೆಯಿತು. ‘ಎಲ್ಲವೂ ಬದಲಾಗುತ್ತದೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, “ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಲಕ್ಕೆ ಮಾರ್ಪಾಡನ್ನು ಹೊಂದಿ, ಪ್ರಸ್ತುತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ಎಲ್ಲವೂ ಬದಲಾಗುತ್ತದೆ ಎನ್ನುವ ಕವನ ಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ” ಎಂದರು. ಮುಖ್ಯ ಅತಿಥಿಯಾಗಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, “ರಘು ಇಡ್ಕಿದು ಅವರು ಉಪನ್ಯಾಸಕರಾಗಿ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವವರು ಮತ್ತು ಪ್ರಯೋಗಶೀಲರು ಆಗಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ರಘು ಅವರು ನೀಡಿದ ಕೊಡುಗೆ ಮೆಚ್ಚುವಂತಹುದು” ಎಂದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ…

Read More

ಕಾಸರಗೋಡು : ಕಾಸರಗೋಡು ಜಿಲ್ಲೆಯ ಪುರಾಣ ಪ್ರಸಿದ್ಧ ದೇವಸ್ಥಾನವಾದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿಧಿಯಲ್ಲಿ ದಿನಾಂಕ 18-12-2023ರ ಸೋಮವಾರದಂದು ಷಷ್ಠಿ ಮಹೋತ್ಸವವು ಅತ್ಯಂತ ಭಕ್ತಿ ಶ್ರದ್ಧೆಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಗವದ್ಭಕ್ತರು ಭಾಗವಹಿಸಿ ಶ್ರೀ ದೇವರ ಸೇವೆಗೈದು ಅನ್ನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 12.00 ಘಂಟೆಯ ತನಕ ದೇವಸ್ಥಾನದ ಮಯೂರ ಮಂಟಪದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದೇವಸ್ಥಾನದ ಆಡಳಿತ ವರ್ಗದವರಾದ ಶ್ರೀ ಶ್ರೀಧರ ಮಾಸ್ಟರ್ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ಆರಂಭಗೊಂಡು ಬಹಳ ವಿಜೃಂಭಣೆಯಿಂದ ನಡೆದು ನೆರೆದಿರುವ ಸಾವಿರಾರು ಪ್ರೇಕ್ಷಕರ ಮನ ಸೂರೆಗೊಂಡಿತು. ಡಾ. ವಾಣಿಶ್ರೀ…

Read More

ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ವಿಶೇಷ ಪ್ರೇರಣಾ ಕಾರ್ಯಾಗಾರ’ ನಡೆಯುತ್ತಿದ್ದು, ಡಾ. ಸುರೇಶ ನೆಗಳಗುಳಿಯವರು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ನಡುಹಗಲ ಕಾರ್ಯಾಗಾರವನ್ನು ದಿನಾಂಕ 22-12-2023ರಂದು ನಡೆಸಿಕೊಟ್ಟರು. “ಸ್ನಾತಕೋತ್ತರ ಪದವಿ ಪಡೆಯಬೇಕಾದರೆ ಕೇವಲ ಪ್ರವೇಶ ಗಿಟ್ಟಿಸಿದರೆ ಸಾಲದು. ಪ್ರತ್ಯುತ್ಪನ್ನ ಮತಿ ಸಹಿತವಾದ ಸಾಧನೆ ಅಗತ್ಯ. ಗ್ರಂಥೋಕ್ತ ವಿಚಾರಗಳನ್ನು ದಾಖಲೀಕರಣ ಮಾಡಲು ಸರಿಯಾದ ಅನುಸಂಧಾನದ ಅಗತ್ಯವಿದೆ. ಆದ ಕಾರಣ ಯೋಗ್ಯ ಉಪನಿದೇಶಕನ ಜೊತೆಗೆ ಪೂರ್ಣ ಪ್ರಮಾಣದ ಕ್ರಮಬದ್ಧವಾದ ಅನುಸಂಧಾನ ಪ್ರಕ್ರಿಯೆ ಅಗತ್ಯ. ತೌಲನಾತ್ಮಕ ಅಧ್ಯಯನ, ವೈಜ್ಞಾನಿಕ ಸಲಕರಣೆಗಳಾದ ಸಿ‌.ಟಿ.ಸ್ಕಾನ್, ಕ್ಷ-ಕಿರಣ, ಲ್ಯಾಬೊರೇಟರಿ ಇತ್ಯಾದಿಗಳನ್ನು ಬಳಸಿ ಸತ್ಯಾನ್ವೇಷಣೆ ಮಾಡಬೇಕು. ಎಷ್ಟೋ ಉತ್ತಮ ಅಂಶಗಳು ಅಧ್ಯಯನದ ಕೊರತೆಯಿಂದ ಮಾಸಿ ಹೋಗಿವೆ. ಅಂಥವುಗಳ ಪುನರುಜ್ಜೀವನಕ್ಕೆ ಈ ರೀತಿಯ ಅಧ್ಯಯನ ಅಗತ್ಯ ಎನ್ನುತ್ತಾ ಹಲವಾರು ಪೂರಕ ಉದಾಹರಣೆಗಳನ್ನೂ ಸ್ವರಚಿತ ಮುಕ್ತಕ ಮಾಲೆಯನ್ನೂ ವಾಚಿಸಿದರು. ಕಾಲೇಜು ಪ್ರಾಚಾರ್ಯ ಡಾ. ಸಜೀತ್ ಎಂ. ಹಾಗೂ ಸ್ನಾತಕೋತ್ತರ ಡೀನ್ ಡಾ. ರವಿರಾಜ ಹೆಗ್ಡೆ ಸಹಿತ ಎಪ್ಪತ್ತು ಮಂದಿ…

Read More