Author: roovari

ಬೆಂಗಳೂರು : ಹಿರಿಯ ಪತ್ರಕರ್ತ, ಸಾಹಿತಿ, ನಾಟಕಕಾರ, ಅನುವಾದಕ ಜಿ.ಎನ್. ರಂಗನಾಥ ರಾವ್ ಅವನು ದಿನಾಂಕ 09-10-2023ರಂದು ನಿಧನ ಹೊಂದಿದ್ದಾರೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ. 1942ರಲ್ಲಿ ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ ಹುಟ್ಟಿದ ಇವರು ಹೊಸಕೋಟೆ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. 1962ರಲ್ಲಿ ತಾಯಿನಾಡು ನಂತರ ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ನಂತರ ಪ್ರಜಾವಾಣಿ ಸೇರಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅವರು ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ವಿಮರ್ಶಾತ್ಮಕ ಪ್ರಬಂಧಗಳನ್ನು ಬರೆದಿದ್ದಾರೆ. ಕವಿಯಾಗಿ ಅವರು ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಾಟಕಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ರಾಜ್ಯದ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ರಂಗನಾಥರಾವ್ ಅವರು 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ತಾಯಿನಾಡು ಪತ್ರಿಕೆಯ ಮೂಲಕ ಮಾಧ್ಯಮ…

Read More

ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ನೀಡುವ 19ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗೆ ಸಂಗೀತ, ನಾಟಕ, ನೃತ್ಯ ಅಥವಾ ಜನಪದ ಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ಮೂಲದ ಓರ್ವ ಕೊಂಕಣಿ ಮಾತೃಭಾಷಿಕ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಪುರಸ್ಕಾರವು ಶಾಲು, ಫಲ-ಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ 50,000 ರೂಪಾಯಿಗಳನ್ನು ಒಳಗೊಂಡಿರುತ್ತದೆ. ಈ ಪುರಸ್ಕಾರವನ್ನು ಕಲಾಂಗಣದಲ್ಲಿ ದಿನಾಂಕ 05-11-2023ರಂದು ನಡೆಯುವ, 263 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುವುದು. ಸಾಧನೆಯ ವಿವರಗಳು, ಇತ್ತೀಚಿನ ಭಾವಚಿತ್ರದೊಡನೆ ಸ್ವತಹ ಕಲಾವಿದರು ಅಥವಾ ಇತರರು ಹೆಸರು ಸಲ್ಲಿಸಬಹುದು. ವಿಳಾಸ : ಮಾಂಡ್ ಸೊಭಾಣ್, ಕಲಾಂಗಣ್, ಶಕ್ತಿನಗರ, ಮಂಗಳೂರು 575 016. Email : [email protected].  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-10-2023

Read More

ಕಾಸರಗೋಡು : ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೇಹರಂಗ ಸಾದರಪಡಿಸಿದ ಕಾರ್ಯಕ್ರಮವು ದಿನಾಂಕ 08-10-2023 ರ  ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಕಲಾವಿದ ಭೋಜರಾಜ ವಾಮಂಜೂರು “ಕಠಿಣ ಪರಿಶ್ರಮ ಮತ್ತು ನಿಷ್ಠೆಯಿಂದ ಮಾತ್ರ ಪರಿಪೂರ್ಣ ಕಲಾವಿದನಾಗಲು ಸಾಧ್ಯ. ಮಕ್ಕಳಿಗೆ ಎಳವೆಯಲ್ಲೇ ಅವಕಾಶ ಹಾಗೂ ವೇದಿಕೆ ಕಲ್ಪಿಸಿಕೊಟ್ಟಾಗ ಅವರು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಲು ಸಾಧ್ಯ. ಕಲಾದೇಗುಲದಂತಿರುವ ರಂಗಚಿನ್ನಾರಿ ಸಂಸ್ಥೆ ಕಲಾವಿದರನ್ನು ಪೋಷಿಸುತ್ತಿರುವ ಕೇಂದ್ರವಾಗಿದೆ” ಎಂದರು. ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಎಸ್.ಜಿ.ಪ್ರಸಾದ್‌ ಮಾತನಾಡಿ “ಪ್ರತಿಯೊಬ್ಬರೂ ಜೀವನದಲ್ಲಿ ಆಗ್ರಹ ಹೊಂದಿರಬೇಕು ಮತ್ತು ಇದನ್ನು ಈಡೇರಿಸಲು ಕಠಿಣ ಪರಿಶ್ರಮಿಗಳಾಗಬೇಕು. ಜೀವನ ಕೇವಲ ಹಣ ಸಂಪಾದನೆಗಾಗಿ ಮೀಸಲಿರಿಸದೆ ಉತ್ತಮ ಜೀವನ ರೂಪಿಸಲು ಮುಡಿಪಾಗಿರಿಸಬೇಕು” ಎಂದರು. ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಎಸ್.ಸುಜಾತಾ ಅಧ್ಯಕ್ಷತೆ ವಹಿಸಿ, ಸ್ನೇಹರಂಗದ  ಮಾರ್ಗದರ್ಶಕಿ ಹಾಗೂ  ಸರಕಾರಿ ಕಾಲೇಜು ಕಾಸರಗೋಡು…

Read More

ಗೋಣಿಕೊಪ್ಪಲು: ಶ್ರೀ ಕಾವೇರಿ ದಸರಾ ಸಮಿತಿಯ 45ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಅ.22ರಂದು ಭಾನುವಾರ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ರಾಜ್ಯಮಟ್ಟದ ದಸರಾ ಬಹುಭಾಷಾ ಕವಿ ಗೋಷ್ಠಿಯನ್ನು ಕಾವೇರಿ ಕಲಾ ವೇದಿಕೆಯಲ್ಲಿ ನಡೆಸಲಾಗುತ್ತದೆ. ಆ ಪ್ರಯುಕ್ತ ಕವನಗಳನ್ನು ಆಹ್ವಾನಿಸಲಾಗಿದೆ. ಯಾವುದೇ ವಯೋಮಾನದವರು ಯಾವುದೇ ವಸ್ತು – ವಿಷಯದ ಕುರಿತು ರಚಿಸಿದ ಸ್ವರಚಿತ ಕವನಗಳು, ಗಜಲ್, ಚುಟುಕುಗಳು, ಕನ್ನಡ, ಅರೆಭಾಷೆ, ಕೊಡವ, ಎರವ, ತುಳು, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಮಾತ್ರವಲ್ಲದೆ ಇನ್ನಿತರ ಯಾವುದೇ ಭಾಷೆಗಳಲ್ಲಿ ರಚಿಸಿದ ಮತ್ತು ಇದುವರೆಗೆ ಎಲ್ಲಿಯೂ ಪ್ರಕಟವಾಗದ ಬರಹಗಳನ್ನು ಕಳುಹಿಸಿಕೊಡಬಹುದಾಗಿದೆ. ಆಯ್ಕೆಯಾದ ಕವಿತೆಗಳನ್ನು ಬರೆದ ಕವಿಗಳಿಗೆ ಅ. 22ರಂದು ನಡೆಯುವ ಕವಿಗೋಷ್ಠಿಯಲ್ಲಿ ಆ ಕವಿತೆಗಳನ್ನು ವಾಚಿಸಲು ಅವಕಾಶವಿದೆ. ಕವಿತೆಗಳನ್ನು ಅ.14ರ ಒಳಗೆ ತಲುಪುವಂತೆ ಕೆಳಗೆ ತಿಳಿಸಿದ ವಿಳಾಸಕ್ಕೆಕಳುಹಿಸಬೇಕಾಗಿದೆ. ಜಗದೀಶ್ ಜೋಡುಬೀಟಿ, ಸಂಚಾಲಕರು, ದಸರಾ ಕವಿಗೋಷ್ಠಿ ಸಮಿತಿ, ಶ್ರೀ ಉಮಾಮಹೇಶ್ವರಿ ಬಡಾವಣೆ, ಒಂದನೇ ವಿಭಾಗ, ಮೂರನೇ ಕ್ರಾಸ್ -571213. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ…

Read More

ಕಾಸರಗೋಡು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಗಡಿನಾಡಿನಲ್ಲಿ ‘ಕನ್ನಡ ಕಲರವ’ ಕಾರ್ಯಕ್ರಮವು ಕವಿಗೋಷ್ಠಿ, ವಿಚಾರಗೋಷ್ಠಿ, ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ 08-10-2022ರ ಆದಿತ್ಯವಾರ ಕಾಸರಗೋಡಿನ ಹೋಟೆಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ವಕೀಲರು ಮತ್ತು ಕಾಂಗ್ರೆಸ್ ಮುಖಂಡರಾದಂತಹ ಎಂ.ಗುರುಪ್ರಸಾದ್ ಮಂಡ್ಯ ಇವರು ಈ ಭವ್ಯ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಗಡಿನಾಡಿನಲ್ಲಿ ಭಾಷಾ ಸಮಸ್ಯೆ ಸಾಮಾಜಿಕ ತಾರತಮ್ಯವಿದೆ.  ಆದರೆ ಪ್ರತಿಯೊಬ್ಬರೂ ಭಾಷಾ ದ್ವೇಷವಿಲ್ಲದೆ ಪರಸ್ಪರ ಗೌರವದಿಂದ ಬದುಕಬೇಕು. ಎಲ್ಲಿಯೂ ಮಾನವ ಹಕ್ಕು ಉಲ್ಲಂಘನೆ ಆಗಬಾರದು” ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜೇಶ್ವರ ಜಿ.ಪಿ.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಶಿವಶಂಕರ್ ಮಾತನಾಡಿ “ಕಾಸರಗೋಡಿನ ಕನ್ನಡಿಗರು ಹೊರ ರಾಜ್ಯಗಳಿಗೆ ಉದ್ಯೋಗಕ್ಕಾಗಿ ತೆರಳುವ ಬದಲು ಜಿಲ್ಲೆಯ ಸರಕಾರಿ ಹುದ್ದೆಗಳಿಸಲು ಪ್ರಯತ್ನಿಸಬೇಕು ಅದಕ್ಕಾಗಿ ಕನ್ನಡಿಗರಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ತೆರೆಯಬೇಕು ಆ ಮೂಲಕ ಕನ್ನಡಿಗರ ಸಂಖ್ಯೆಯನ್ನು ಎಲ್ಲಾ ವಲಯದಲ್ಲೂ ಕಾಣುವಂತಾಗಬೇಕು”  ಎಂದರು. ಬಿ.ಇ.ಎಂ.ಎಸ್ ಸಾರ್ವಜನಿಕ…

Read More

ಸಿದ್ದಾಪುರ : ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣು ಗಜಾನನ ಭಟ್ (65) ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವ ಮಠದಲ್ಲಿ ದಿನಾಂಕ 09-10-2023ರ ಭಾನುವಾರದಂದು ನಿಧನ ಹೊಂದಿದರು. ಶ್ರೀಯುತರ ಅಂತ್ಯ ಸಂಸ್ಕಾರ ಭಾನ್ಕುಳಿ ಮಠದ ಶಂಕರಗಿರಿಯಲ್ಲಿ ನಡೆಯಿತು. ಮೂಲತಃ ಕುಮಟಾ ತಾಲೂಕಿನ ಮೂರೂರಿನವರಾದ ಅವರು ಸದ್ಯ ಸಿದ್ಧಾಪುರದ ಭಾನ್ಕುಳಿಯಲ್ಲಿ ವಾಸವಾಗಿದ್ದರು. ಮೂರೂರು ವಿಷ್ಣುಭಟ್ ಅವರ ಸ್ತ್ರೀ ವೇಶಕ್ಕೆ ಎಲ್ಲಿಲ್ಲದ ಖ್ಯಾತಿ ಇತ್ತು. ಭಾವಪೂರ್ಣ ಅಭಿನಯ ಮತ್ತು ಮಾತುಗಾರಿಕೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ತನ್ನೆಡೆಗೆ ಸೆಳೆದು ಕೊಂಡವರು. ಭೀಷ್ಮ ವಿಜಯದ ಅಂಬೆ, ಜಮದಗ್ನಿಯ ರೇಣುಕಾ, ದುಷ್ಟಬುದ್ಧಿ ಆಖ್ಯಾನಾದ ವಿಷಯೆ, ರಾಮಾಂಜನೇಯದ ಸೀತೆ, ದಕ್ಷಯಜ್ಞದ ದಾಕ್ಷಾಯಿಣಿ, ಹರಿಶ್ಚಂದ್ರನ ಚಂದ್ರಮತಿ, ನಳ ಚರಿತ್ರೆಯ ದಮಯಂತಿ, ಸುಭದ್ರೆ, ಪ್ರಭಾವತಿ ಮೊದಲಾದ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದರು. ಕೇವಲ ಸ್ತ್ರೀ ಪಾತ್ರವಲ್ಲದೆ ಪೋಷಕ ಪಾತ್ರಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಹೆಸರುವಾಸಿಯಾಗಿದ್ದರು. ಗುಂಡುಬಾಳ, ಅಮೃತೇಶ್ವರೀ, ಹಿರೇಮಹಾಲಿಂಗೆಶ್ವರ, ಶಿರಸಿ, ಪೆರ್ಡೂರು, ಮಂದಾರ್ತಿ,…

Read More

ಉಡುಪಿ : ಭಾವನಾ ಪೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈಯವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಕಲಾಕೃತಿಗಳು ‘ಮಾರುತ ಪ್ರಿಯ’ ಎನ್ನುವ ಶೀರ್ಷಿಕೆಯಡಿಯಲ್ಲಿ ದಿನಾಂಕ 15ರಿಂದ 24ನೇ ಸೆಪ್ಟಂಬರ್‌ವರೆಗೆ ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ನಡೆಯಿತು. ಕಲಾಪ್ರದರ್ಶನದಲ್ಲಿ ಕೊಂಕಣ ಕರಾವಳಿಯ ಅಳಿವಿನಂಚಿನಲ್ಲಿರುವ ಕಾವಿ ಕಲೆಯ ಬಗೆಗಿನ ವಿಸ್ತೃತ ಅಧ್ಯಯನವನ್ನು ನಡೆಸಿ ಅದರ ಉಳಿವಿಗಾಗಿ ಶ್ರಮಿಸುತ್ತಲಿರುವ ಜನಾರ್ದನ ಹಾವಂಜೆಯವರ 18ಕಾವಿ ಕಲೆಯ ಕಲಾಕೃತಿಗಳೂ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿ ಕಲಾತ್ಮಕ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಂಡಿರುವ ಸಂತೋಷ್ ಪೈಗಳ 12 ಛಾಯಾಚಿತ್ರಗಳು ಮತ್ತು ಹಲವು ರೇಖಾಚಿತ್ರಗಳು ಇಲ್ಲಿ ಪ್ರದರ್ಶನಕ್ಕಿದ್ದವು. ಹಾವಂಜೆಯವರು ಹೇಳುವಂತೆ “ಕಾವಿ ಕಲೆ ಎಂದರೆ ಸುಣ್ಣ ಹಾಗೂ ಕೆಮ್ಮಣ್ಣಿನ ಬಳಕೆಯೊಂದಿಗೆ ಕೆಂಪು ಹಾಗೂ ಬಿಳಿ ಎರಡೇ ವರ್ಣಗಳನ್ನು ಬಳಸಿ ಗೀರುತ್ತ, ಕೆರೆಸಿ ತೆಗೆದು ಕಲಾಕೃತಿ ನಿರ್ಮಿಸಿಕೊಳ್ಳುವ ಪದ್ಧತಿ. ಈ ಕಲೆಯು ಕೇವಲ ಚಿತ್ರಕಲೆಯೆಂಬುದಾಗಿ ಹಲವರ ಅಭಿಪ್ರಾಯಗಳಿವೆ. ಆದರೆ ಕಾವಿಕಲೆಯು ಗಾರೆಯೊಂದಿಗೆ ಭಿತ್ತಿಚಿತ್ರ ಪದ್ಧತಿಯನ್ನೊಳಗೊಳ್ಳುವ…

Read More

ಉಡುಪಿ : ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪುರಸ್ಕಾರ ಸಮಾರಂಭವು ದಿನಾಂಕ 07-10-2023 ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತ ಶ್ರೀಸೋದೆ ವಾದಿರಾಜ ಮಠಾಧೀಶ ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು “ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ, ನಾವು ಆರಾಧಿಸುವ ದೇವರ ಕಥನಗಳನ್ನು ಅರಿಯುವ ಅವಕಾಶವಾಗುತ್ತದೆ, ಯಕ್ಷಗಾನ ವೀಕ್ಷಿಸುವ ಸಾಮಾಜಿಕರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಇಂಥ ಯಕ್ಷಗಾನಗಳನ್ನು ಸಂಘಟಿಸಿ, ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದು ಪುಣ್ಯಪ್ರದವಾದ ಕಾರ್ಯವಾಗಿದೆ.ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೇ ಮುಖ್ಯ” ಎಂದು ಹೇಳಿದರು. ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್‌ ಪಾತಾಳ ಅವರಿಗೆ ‘ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಯಕ್ಷಗಾನ ಕಲಾಸಾಧಕ ಪ್ರಶಸ್ತಿ’ಯನ್ನು ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ‘ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಸಂಮಾನ ಸ್ವೀಕರಿಸಿ ಮಾತನಾಡಿದ ಅಂಬಾಪ್ರಸಾದ ಪಾತಾಳ ಅವರು ಪ್ರಶಸ್ತಿಯನ್ನು ನೀಡಿದ ಸರ್ಪಂಗಳ ಕುಟುಂಬಕ್ಕೆ ಮತ್ತು ಯಕ್ಷಗಾನ ಕಲಾರಂಗ ಸಂಸ್ಥೆಗೆ ಕೃತಜ್ಞತೆ…

Read More

‘ಕಾರಂತರು ಮತ್ತು ಯಕ್ಷಗಾನ’ ಎಂಬ ವಿಚಾರ ಮಾತಾಡುವಾಗ ನೆನಪಿಡಬೇಕಾದ ಸಂಗತಿ ಎಂದರೆ, ಯಾವುದೇ ಕ್ಷೇತ್ರದಲ್ಲಿ ಡಾ. ಶಿವರಾಮ ಕಾರಂತರು ಮಾಡುವ ಕೆಲಸಗಳು ಬೇರೆ ಯಾರೂ ಮಾಡಿದ ಹಾಗಿಲ್ಲ. ದೃಷ್ಟಿ ಧೋರಣೆ, ವಿವರ, ನಿರ್ವಹಣೆ, ಸಂಘಟನೆಗಳಲ್ಲಿ ಅವರದೊಂದು ವಿಭಿನ್ನ ಮಾರ್ಗ; ಮಾರ್ಗ ಪ್ರವರ್ತಕ ಮಾರ್ಗ, ಯಕ್ಷಗಾನದಲ್ಲಾದರೂ ಹಾಗೆಯೇ. ಈ ವಿಚಾರವನ್ನಿಟ್ಟುಕೊಂಡು, ಇಂದಿನ ಗೋಷ್ಠಿಯಲ್ಲಿ ಪ್ರಸ್ತಾವಿತವಾದ ವಿಚಾರಗಳ ಸುತ್ತ ಒಂದಿಷ್ಟು. (ಇದೇ ವಿಷಯವಾಗಿ, ನಾನು ಈಗಾಗಲೇ ‘ಶತಮಾನದ ಕೊನೆಯಲ್ಲಿ ಕಾರಂತರು’ ಎಂಬ ವಿಷಯದಲ್ಲಿ ಇಸವಿ 2000ದಲ್ಲಿ ನಡೆದ ಗೋಷ್ಠಿಯಲ್ಲಿ ಮಾತಾಡಿರುವುದರಿಂದ ಕೆಲವು ಅಂಶಗಳ ಪುನರಾವರ್ತನೆ ಇಲ್ಲಿ ಅನಿವಾರ್ಯ.) ‘ಕಾರಂತರು ಯಕ್ಷಗಾನಕ್ಕೆ ತಮ್ಮ ವ್ಯಕ್ತಿತ್ವವನ್ನು ಕೊಟ್ಟರು’ ಎಂಬ ಒಂದು ಮಾತಿನಿಂದ, ಯಕ್ಷಗಾನ ಗುರು ಹೊಸ್ತೋಟ ಮಂಜುನಾಥ ಭಾಗವತರು, ಕಾರಂತ-ಯಕ್ಷಗಾನ ಸಂಬಂಧದ ನಿರ್ವಚನ ನೀಡಿದಂತಾಗಿದೆ. ಯಕ್ಷಗಾನದ ಸಾಕಲ್ಯದೃಷ್ಟಿಯ ಗ್ರಹಿಕೆ ಇರುವ ದೇಶಿ ಪದ್ಧತಿಯ ಅಭಿವ್ಯಕ್ತಿಯ ಭಾಗವತರು ಇಲ್ಲಿ ಉದ್ಘಾಟಕರಾದುದು ಅತ್ಯಂತ ಉಚಿತ, ಅಂತೆಯೆ ಯಕ್ಷಗಾನದ ವಿವಿಧ ಅಂಗಗಳಲ್ಲಿ ಆಳವಾದ ಅಭ್ಯಾಸ ನಡೆಸಿ, ಸಂಘಟನಾತ್ಮಕವಾಗಿ, ವಿಶೇಷತಃ ದೀವಟಿಗೆ ಬೆಳಕಿನ…

Read More

ಶಶಿಧರ ಹಾಲಾಡಿಯವರ ಎರಡನೆಯ ಕಾದಂಬರಿ ‘ಅಬ್ಬೆ’. ವರ್ಷದ ಹಿಂದೆ ಪ್ರಕಟವಾದ ಮೊದಲ ಕಾದಂಬರಿ ‘ಕಾಲಕೋಶ’ದಂತೆಯೇ ಬ್ಯಾಂಕ್‌ ನೌಕರನೊಬ್ಬನ ಉತ್ತಮ ಪುರುಷ ನಿರೂಪಣೆಯಲ್ಲಿರುವ ಕಾದಂಬರಿ. ಮೇಲ್ನೋಟಕ್ಕೆ ಇದು ಬ್ಯಾಂಕ್ ನೌಕರರ ಅಸಹಾಯಕತೆಯ, ದುರಿತ ದುಮ್ಮಾನಗಳ ಕಥೆಯೆಂದು ಅನ್ನಿಸಿದರೂ, ಪರಾಂಬರಿಸಿ ನೋಡಿದರೆ, ಪಶು, ಪಕ್ಷಿ, ಪ್ರಾಣಿಗಳ ಮತ್ತು ಮರ, ಗಿಡ, ಬಳ್ಳಿಗಳ ಕುರಿತು ಕುತೂಹಲ ಹುಟ್ಟಿಸುವ ಬರಹವಾಗಿದೆ. ಇಲ್ಲಿನ ಕಥೆ ನಮ್ಮನ್ನು ತೆರೆದಿಡುವುದೇ ಪ್ರಕೃತಿಯನ್ನು ಮತ್ತು ಮನುಷ್ಯೇತರ ಜೀವವೈವಿಧ್ಯವನ್ನು ಕಾಪಿಡಬೇಕಾದ ಅಗತ್ಯಕ್ಕಾಗಿ ಈ ಭೂಮಿ ಇರುವುದು ತನಗೊಬ್ಬನಿಗೆಂದೇ ಬದುಕುತ್ತಿರುವ ಮನುಷ್ಯರ ಸಣ್ಣತನದೆದುರು ಇಲ್ಲಿ ಬರುವ ಔದ್ಯೋಗಿಕ ರಂಗದಲ್ಲಿ ನಡೆವ ಶೋಷಣೆಯ ಕಥೆ ಈ ನಿಟ್ಟಿನ ಒಂದು ಉಪ ಉತ್ಪನ್ನ ಅಷ್ಟೇ. ಬಹುದಿನಗಳ ಬಳಿಕ ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆಯ ಲವಲವಿಕೆಯನ್ನು ಮತ್ತು ಆಶಯವನ್ನು ನೆನಪಿಸುವ ಅಪರೂಪದ ಕಾದಂಬರಿಯಿದು. ಬಯಲು ಸೀಮೆಯ ಕಲ್ಕೆರೆಯಲ್ಲಿ ಹುಟ್ಟಿಬೆಳೆದಿದ್ದ ಅದೇ ಊರಿನ ಶಾಲೆಯಲ್ಲಿ ಓದಿದ್ದ ನರಸಿಂಹಯ್ಯನ ಮಗನಿಗೆ ಆ ಊರಿನ ಕುರಿತು ಆಸಕ್ತಿಯೇ ಇದ್ದಂತಿಲ್ಲ, ‘ಆ ಹಳ್ಳೀಲಿ ಏನಿದೆ ಅಪ್ಪ, ನನಗೆ…

Read More