Author: roovari

ಮೂಲ್ಕಿ: ಕೆ. ಪಿ. ಎಸ್‌. ಕೆ. ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 09-05-2024ರಂದು ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಪಿ. ಎಸ್‌. ಕೆ. ಪ್ರೌಢ ಶಾಲೆಯ ಸಂಚಾಲಕ ಗಂಗಾಧರ್ ಶೆಟ್ಟಿ ಬರ್ಕೆ “ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ ಗುರು ಹಿರಿಯರಲ್ಲಿ ಭಕ್ತಿಯಿಂದ ವ್ಯವಹರಿಸಿ ದೇಶಕ್ಕೆ ಸತ್ಪ್ರಜೆಗಳಾಗುವಲ್ಲಿ ಬೇಸಿಗೆ ಶಿಬಿರಗಳ ಕಾರ್ಯಕ್ರಮಗಳು ಮಹತ್ವ ಪಡೆದಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತ್ ಸೌಟ್ ಆ್ಯಂಡ್ ಗೈಡ್ಸ್‌ ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಎಂ. ಸರ್ವೋತ್ತಮ ಅಂಚನ್ ಅತಿಥಿಗಳಾಗಿ ಭಾಗವಹಿಸಿದರು. ಹೆತ್ತವರ ಪರವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪನ್ಯಾಸಕಿ ಶೈಲಜಾ ಮಾತನಾಡಿ “ಮಕ್ಕಳ ಬೆಳವಣಿಗೆಯಲ್ಲಿ ಬೇಸಿಗೆ ಶಿಬಿರ ಅವರಿಗೆ ಹಿತ ಕೊಡುವ ಜೊತೆಗೆ ಮಕ್ಕಳ ತುಂಟತನದಿಂದ ಹೆತ್ತವರ ಕಷ್ಟ ಹಾಗು ಸಮಸ್ಯೆಗಳಿಗೆ ಉತ್ತಮ ಫಲಿತಾಂಶ ಕೊಟ್ಟಿದೆ.” ಎಂದರು. ವಿದ್ಯಾಪ್ರಚಾರಿಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಮಾತನಾಡಿ…

Read More

ಕುಂದಾಪುರ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆಯ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ’ದ 28ನೇಯ ಕಾರ್ಯಕ್ರಮ ದಿನಾಂಕ 16-05-2024ರಂದು ಕುಂದಾಪುರದ ಹಂಗಳೂರಿನ ಶ್ರೀ ರಾಮಚಂದ್ರ ವರ್ಣರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು “ಯಾತ್ರ ಸ್ಥಳಗಳು ಒಂದೊಕ್ಕೊಂದು ವಿಭಿನ್ನವಾಗಿದೆ. ತೀರ್ಥಕ್ಷೇತ್ರದ ಯಾತ್ರೆಯಿಂದ ಪುರಾಣ ಕಥೆಗಳ ಮೌಲ್ಯವನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಪ್ರಸ್ತುತ ಕಾಲಘಟ್ಟಕ್ಕೆ ಪೂರಕವಾಗಿ ಪುರಾಣ ಕಥೆಗಳು ಹೆಣೆದಿರುತ್ತವೆ. ಈಗಿನ ವಿದ್ಯಾಮಾನಗಳಿಗೂ ಪುರಾಣಗಳಿಗೂ ಹೆಚ್ಚು ಸಂಬಂಧವಿರುವ ಹಲವು ಕಥೆಗಳು ತೀರ್ಥಕ್ಷೇತ್ರದ ಕಥೆಗಳಿಂದ ಲಭ್ಯವಾಗುತ್ತವೆ. ಯಾತ್ರಾ ದಿನದ ಅನುಭವದ ಸವಿಸ್ತಾರವಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೂ ಪುರಾಣ ಕಥನದ ಭಕ್ತಿ ಭಾವಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವೂ ಹೆಚ್ಚು ಸಾಮ್ಯತೆ ಇದೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಾರಂಭದಲ್ಲಿ ಉದ್ಯಮಿ ರಾಮಚಂದ್ರ ವರ್ಣ, ಗುರುಗಳಾದ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ, ದರ್ಶನ್ ಗೌಡ, ಪಂಚಮಿ ವೈದ್ಯ, ಕಿಶನ್ ಕುಂದಾಪುರ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.…

Read More

ಮಂಗಳೂರು : ಕುಮಾರಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರ ಲೇಖನಗಳ ಸಂಗ್ರಹದ ಕೃತಿಯನ್ನು ದಿನಾಂಕ 06-05-2024ರಂದು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು. ರೊನಾಲ್ಡ್ ಫೆರ್ನಾಂಡಿಸ್ ಮತ್ತು ನ್ಯಾನ್ಸಿ ಫೆರ್ನಾಂಡಿಸ್ ಅವರ ಪುತ್ರಿ ರಿಚೆಲ್ ಈಗ ಎಸ್‌ಡಿಎಂ ಕಾನೂನು ಕಾಲೇಜಿನ ಮೊದಲ ವರ್ಷದ ಎಲ್‌.ಎಲ್‌.ಬಿ. ವಿದ್ಯಾರ್ಥಿನಿ. 132 ಪುಟಗಳ ಪುಸ್ತಕವನ್ನು ನವದೆಹಲಿಯ ತನಿಶಾ ಪಬ್ಲಿಕೇಷನ್ ಪ್ರಕಟ ಮಾಡಿದೆ. ಕೃತಿ ಬಿಡುಗಡೆ ಮಾಡಿದ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಮಾತನಾಡಿ “ಶಾಲಾ ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ರಿಚೆಲ್ ಅವರ ಲೇಖನಗಳು ಹಲವು ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ” ಎಂದರು. ಮಂಗಳೂರು ಕ್ಯಾಥಲಿಕ್ ಸಭಾದ ಮಾಜಿ ಸದಸ್ಯ ರಾಲ್ಫಿ ಡಿ’ಕೋಸ್ತಾ, ಗೋಕರ್ಣನಾಥ ಕಾಲೇಜಿನ ಪ್ರಾಂಶುಪಾಲ ರಘುರಾಜ್, ಹಳೆಯಂಗಡಿ ಸರ್ಕಾರಿ ಪಿ.ಯು. ಕಾಲೇಜಿನ ಅಧ್ಯಾಪಕಿ ಅನ್ನಪೂರ್ಣ ಮತ್ತು ಲೇಡಿಹಿಲ್ ವಿಕ್ಟೋರಿಯಾ ಪಿ.ಯು. ಕಾಲೇಜಿನ ಪ್ಲೇವಿ ಬ್ಯಾಪ್ಟಿಸ್ಟ್ ಉಪಸ್ಥಿತರಿದ್ದರು. ಕುಮಾರಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಯುವ ವಾಗ್ಮಿ ಹಾಗೂ ಬರಹಗಾರ್ತಿಯಾಗಿ ಭಾಷಣ, ಆಶು ಭಾಷಣ ಪ್ರಬಂಧ ಇಂತಹ…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 16-05-2024ರ ಗುರುವಾರದಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ. ಸಿ. ಭಂಡಾರಿ ತುಳು ಭಾಷೆಯ ಸಂಶೋಧನೆ ಹಾಗೂ ತುಳು ಭಾಷೆಯ ಉಳಿವಿಗಾಗಿ ಸೇವೆ ಸಲ್ಲಿಸಿದವರು ದಿ. ಪಾಲ್ತಾಡಿಯವರು. ಓರ್ವ ಅಧ್ಯಾಪಕರಾಗಿ ಶಾಲಾ ಪಠ್ಯಕ್ರಮದಲ್ಲಿ ಮಕ್ಕಳ ಕಲಿಕೆಗಾಗಿ ತುಳುವಿನ ಸೇರ್ಪಡೆಯು ಪಾಲ್ತಾಡಿಯವರು ನೀಡಿರುವ ದೊಡ್ಡ ಕೊಡುಗೆ.” ಎಂದರು. ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾ‌ರ್ ಮಾತನಾಡಿ ‘ಪಾಲೆದ ಕೆತ್ತೆ’ ಎನ್ನುವ ಆಯುರ್ವೇದ ಗಿಡ ಮೂಲಿಕೆ ಔಷಧಿಯನ್ನು ಮೊದಲ್ಗೊಂಡು ಮಗುವನ್ನು ಮಲಗಿಸಲು ಬಳಸುತ್ತಿದ್ದ ಹಾಳೆ ಸಹಿತವಾಗಿ ತುಳು ನಾಡಿನ ನಂಬಿಕೆ, ಆಚರಣೆಗಳು, ಸಂಸ್ಕೃತಿ ಹಾಗೂ ಗ್ರಾಮೀಣ ಬದುಕಿನ ಜನಪದ ಒಳಮರ್ಮವನ್ನು ಅಧ್ಯಯನ ಮಾಡಿದ ಓರ್ವ ಅದ್ಭುತ ಸಾಧಕ ಶ್ರೇಷ್ಠರು ಪಾಲ್ತಾಡಿಯವರು. ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ…

Read More

ಉಡುಪಿ : ಗಾಂಧಿ ಆಸ್ಪತ್ರೆಯ 30ರ ಸಂಭ್ರಮದ ಪ್ರಯುಕ್ತ ಖ್ಯಾತ ಬಾಲ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರನ್ ಇವರ ವಯೋಲಿನ್ ವಾದನ ಕಛೇರಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ದಿನಾಂಕ 15-05-2024ರಂದು ನಡೆಯಿತು. ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ, ಗೌರವಿಸಿ ಹರಸಿದರು. ಗುರು ವಿದ್ವಾನ್ ಶ್ರೀ ಅನುರೂಪ್ ಹಾಗೂ ಪಕ್ಕವಾದ್ಯದಲ್ಲಿ ಸಹಕರಿಸಿದರನ್ನು ಪ್ರಸಾದ ನೀಡಿ ಗೌರವಿಸಿದರು. ರಾಜಾಂಗಣದಲ್ಲಿ ನಡೆದ ಕಿಕ್ಕಿರಿದ ಕಲಾಪ್ರಿಯರು ಪಿಟೀಲು ವಾದನದ ಸುಧೆಯನ್ನು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಹರಿಶ್ಚಂದ್ರರವರು ತಮ್ಮ ಆಸ್ಪತ್ರೆಯ 30ನೇ ವರ್ಧಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದರು. ಆಸ್ಪತ್ರೆಯ ವತಿಯಿಂದ ಗುರು ಹಾಗು ಶಿಷ್ಯೆಯನ್ನು ಅದ್ದೂರಿಯಾಗಿ ಅಭಿನಂದಿಸಲಾಯಿತು. ಶ್ರೀ ಮಠದ ವತಿಯಿಂದ ಎಂ. ಹರಿಶ್ಚಂದ್ರ, ಲಕ್ಷ್ಮಿ ದಂಪತಿಗಳನ್ನು ಪರ್ಯಾಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದ ನೀಡಿ ಅಭಿನಂದಿಸಿದರು. ಕುಮಾರಿ ಗಂಗಾಳಿಗೆ ಭಗವದ್ಗೀತೆಯನ್ನು ಬರೆಯುವ…

Read More

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾ ಭವನದಲ್ಲಿ ಕೇಂದ್ರೀಯ ಹಿಂದಿ ನಿರ್ದೇಶನಾಲಯ ಆಗ್ರಾ ಭಾರತ ಶಿಕ್ಷಣ ಸಚಿವಾಲಯ (ಉನ್ನತ ಶಿಕ್ಷಣ ವಿಭಾಗ, ಭಾರತ ಸರ್ಕಾರ), ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಿಂದಿ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಐದು ದಿನಗಳ ವಿಶೇಷವಾದ ‘ಹಿಂದಿ ಯುವ ಬರಹಗಾರರ ಶಿಬಿರ’ವು ದಿನಾಂಕ 13-05-2024ರಂದು ಉದ್ಘಾಟನೆಗೊಂಡಿತು. ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ “ಭಾಷೆ ಸಂವಹನಕ್ಕಿರುವ ಮಾಧ್ಯಮ ಮಾತ್ರವಲ್ಲ; ಅದೊಂದು ಬದುಕು, ಸಂಸ್ಕೃತಿ. ಭಾಷೆ ನಶಿಸಿದರೆ ಸಂಸ್ಕೃತಿಯೇ ನಾಶವಾದಂತೆ. ಹಾಗಾಗಿ ಭಾಷೆ ಬದುಕಿನ ಜೀವಾಳ. ಸೃಜನಾತ್ಮಕ ಬರವಣಿಗೆ ಹೃದಯದಲ್ಲಿ ಹುಟ್ಟುತ್ತದೆ. ಮನಸ್ಸಿನ ಪ್ರಲಾಪ, ಕೋಪ-ತಾಪ, ಪ್ರೀತಿ ಇವೆಲ್ಲವೂ ಮನತಣಿಸುವ ಅಕ್ಷರಗಳ ರೂಪವನ್ನು ತಾಳುತ್ತದೆ. ಅಂತಹ ಬರವಣಿಗೆ ಹೊಸತನದಿಂದ ಕೂಡಿರುತ್ತದೆ. ಅದರ ಜೊತೆಗೆ ನಾವು ನುಡಿಯುವ ಪ್ರತಿ ಮಾತು ಸಂಬಂಧಗಳನ್ನು ಬೆಸೆಯುವಂತಿರಬೇಕೇ ವಿನಃ ಬೇರ್ಪಡಿಸುವಂತಿರಬಾರದು” ಎಂದು…

Read More

ಬೆಂಗಳೂರು : ಜಂಗಮ ಕಲೆಕ್ಟಿವ್ ಇದರ ವತಿಯಿಂದ ಭರತನಾಟ್ಯದ ಇತಿಹಾಸ ಸಂಕಥನಗಳ ಕುರಿತಾದ ಮರು ವ್ಯಾಖ್ಯಾನ ಇದರ ಬಗ್ಗೆ ‘ಮಾತುಕತೆ ಮತ್ತು ಪ್ರಾತ್ಯಕ್ಷಿಕೆ’ ಕಾರ್ಯಕ್ರಮವು ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ಗಾಯಕಿ, ಬರಹಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಚೆನ್ನೈಯ ನೃತ್ಯ ಪಿಳ್ಳೆ ಇವರಿಂದ ದಿನಾಂಕ 25-05-2024ರಂದು ಆರ್.ಆರ್. ನಗರದ ಜಂಗಮ ಕಲೆಕ್ಟಿವ್ ಇಲ್ಲಿ ನಡೆಯಲಿದೆ. ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಸಂಜೆ ಗಂಟೆ 6.45ಕ್ಕೆ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 9743289572 ಮತ್ತು 9731280160 ಸಂಪರ್ಕಿಸಿರಿ.

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಇದರ ಮಂಗಳೂರು ನಗರ ಘಟಕದ ‘ಪಂಚಮ ವಾರ್ಷಿಕ ಸಂಭ್ರಮ’ವು ದಿನಾಂಕ 23-05-2024ರಂದು ಸಂಜೆ ಗಂಟೆ 3-00ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಸಂಜೆ ಗಂಟೆ 3-00ರಿಂದ ‘ಯಕ್ಷ ಹಾಸ್ಯ ವೈಭವ’ದಲ್ಲಿ ಭಾಗವತರಾಗಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಮದ್ದಳೆ – ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಚಂಡೆ – ಶ್ರೀ ಪ್ರಶಾಂತ್ ವಗೆನಾಡು, ಚಕ್ರತಾಳ – ಪೂರ್ಣೇಶ್ ಆಚಾರ್ಯ ಮತ್ತು ಮುಮ್ಮೇಳದಲ್ಲಿ ದಿನೇಶ್ ಶೆಟ್ಟಿಗಾರ್ ಕೋಡಪದವು, ದಿನೇಶ್ ರೈ ಕಡಬ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸುಂದರ್ ಬಂಗಾಡಿ ಇವರುಗಳು ಸಹಕರಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಜೆಪ್ಪು ಅರೆಕೆರೆಬೈಲ್ ಇಲ್ಲಿನ ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸೀತಾರಾಮ್ ಎ. ಇವರು ಜ್ಯೋತಿ ಪ್ರಜ್ವಲನೆ ಮಾಡಲಿದ್ದು, ಬಂಟರ ಸಂಘ ಜೆಪ್ಪು ಇದರ ಅಧ್ಯಕ್ಷರಾದ ಲಯನ್ ವಸಂತ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಇವರಿಗೆ ‘ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.…

Read More

ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ‘ಬಹುಮುಖಿ 2024’ ಸಾಂಸ್ಕೃತಿಕ ಉತ್ಸವವನ್ನು ದಿನಾಂಕ 19-05-2024 ಮತ್ತು 20-05-2024ರಂದು ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ. ದಿನಾಂಕ 19-05-2024ರಂದು ಕೊಂಕಣಿಯ ಖ್ಯಾತ ನಾಟಕಕಾರ ಡೊ. ಫಾದರ್ ಆಲ್ವಿನ್ ಸೆರಾವೊರವರೊಂದಿಗೆ ಮುಖಾಮುಖಿ, ಸಂವಾದ ಹಾಗೂ ಗೌರವಾರ್ಪಣೆಯ ರಂಗ್‌ತರoಗ್ ಕಾರ್ಯಕ್ರಮ ಜರಗಲಿದೆ. ಸಂವಾದದ ಬಳಿಕ ಅಸ್ತಿತ್ವ (ರಿ), ಮಂಗಳೂರು ತಂಡದಿಂದ ಕ್ರಿಸ್ಟೋಫರ್ ನೀನಾಸಮ್ ನಿರ್ದೇಶನದ ಪ್ರಸಿದ್ದ ಕೊಂಕಣಿ ನಾಟಕ ‘ಸಳ್ಗಿ’ ಪ್ರದರ್ಶನಗೊಳ್ಳಲಿದೆ. ದಿನಾಂಕ 20-05-2024ರಂದು ದೇಶವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಯುವಸಂಗೀತಗಾರ ಈಶಾನ್ ಫೆರ್ನಾಂಡಿಸ್ ಮತ್ತು ತಂಡದಿಂದ “Transcending Boundaries-II” ಜಾಗತಿಕ ವಿವಿಧ ಭಾಷೆಗಳ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಅಂತರಾಷ್ಟ್ರೀಯ ಖ್ಯಾತಿಯ ಕುಂಚ ಕಲಾವಿದ ವಿಲ್ಸನ್ ಕಯ್ಯಾರ್‌ರವರು ಎಲ್ಲಾ ಹಾಡುಗಳನ್ನು ತನ್ನ ಕುಂಚ ಕೈಚಳಕದಿಂದ ವಿವಿಧ ವರ್ಣಗಳಲ್ಲಿ ಚಿತ್ರಿಸಲಿದ್ದಾರೆ. ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು, ಕಲಾಸಕ್ತರಿಗೆ ಹಾರ್ದಿಕ ಸ್ವಾಗತ. ಎಲ್ಲಾ ಕಾರ್ಯಕ್ರಮಗಳು ಸಾಯಂಕಾಲ ಗಂಟೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ.

Read More

ಇತ್ತೀಚಿನ ಕಾವ್ಯದಲ್ಲಿ ಕಂಡುಬರುತ್ತಿರುವ ಆತ್ಮ ಮರುಕ, ಅನಾಥ ಪ್ರಜ್ಞೆ ಮತ್ತು ಅಂತರ್ಮುಖಿ ಭಾವಗಳನ್ನು ಕಡೆಗಣಿಸಿ, ಕವಿತೆಯ ಬಂಧವನ್ನು ಆದಷ್ಟು ಬಿಗಿಗೊಳಿಸಿ, ಲಯ ಗತಿ ಪ್ರಾಸಗಳನ್ನು ಉಳಿಸಿ, ಹಲವು ಬಗೆಯ ರೂಪಕ-ಶ್ಲೇಷೆಗಳನ್ನು ಬಳಸಿ ಬರೆಯುತ್ತಿರುವ ಮುದ್ದುಕಂದ (ಗೋಪಾಲಕೃಷ್ಣ ಭಟ್ ಶೇಂತಾರು ಬಯಲು) ತಮ್ಮ ಕಾವ್ಯದ ನಿರೂಪಣೆ ಮತ್ತು ಪರಿಣಾಮಗಳ ಮೂಲಕ ಭಿನ್ನರೆನಿಸಿಕೊಂಡಿದ್ದಾರೆ. ‘ನವಜೀವನ’ ಸಂಕಲನದ ಮೂಲಕ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ ಕವಿಯು ಛಂದಸ್ಸಿನ ಲೀಲಾಜಾಲ ಬಳಕೆಗಳ ಮೂಲಕ ವಿವಿಧ ಭಾವಾನುಭಾವಗಳನ್ನು ಅಭಿವ್ಯಕ್ತಿಸಿರುವುದರಿಂದ ಅವರು ನವೋದಯ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಸಮಾಜವು ರೂಢಿಸಿಕೊಂಡು ಬಂದ ಶಿಷ್ಟಾಚಾರ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ವಿಶಿಷ್ಟ ಸಂಸ್ಕೃತಿಯ ಪ್ರಭಾವ, ಪ್ರಕೃತಿ ಮತ್ತು ಜೀವನದ ಚೆಲುವನ್ನು ಕಂಡು ಹಿಗ್ಗುವ ಪ್ರಸನ್ನ ಭಾವಗಳು ಕವಿಯ ಚೇತನವನ್ನು ಮುನ್ನಡೆಸಿವೆ. ಹಕ್ಕಿಗಳ ಇಂಚರಕ್ಕೆ ದನಿಯಾದ ಕವಿತೆಗಳು, ನದಿಯ ಮಂಜುಳ ನಾದಕ್ಕೆ ಮರುಳಾದ ಕವಿತೆಗಳು, ಮುದ್ದುಕಂದನ ನಗುವಿನಂಥ ಕವಿತೆಗಳು, ದನಿಯೆತ್ತಿ ಹಾಡಬಲ್ಲ ಕವಿತೆಗಳು, ಭಾವಬದ್ಧವಾಗಿ ಓದಬಲ್ಲ ಕವಿತೆಗಳು, ದುರಂತ ಜೀವನವವನ್ನು ಅಭಿವ್ಯಕ್ತಿಸುವ ಕವಿತೆಗಳು, ಸಮಾಜದಲ್ಲಿನ…

Read More